ಶುಕ್ರವಾರ, ಜನವರಿ 19, 2018

ಶಾಸ್ತ್ರೋಕ್ತ "ಶಿವನ" ದೇವಾಲಯದ ದರ್ಶನ ಹೇಗೆ ಮಾಡಬೇಕು..?

ಶಾಸ್ತ್ರೋಕ್ತ "ಶಿವನ" ದೇವಾಲಯದ ದರ್ಶನ ಹೇಗೆ ಮಾಡಬೇಕು..?
೧. ಭಕ್ತಾದಿಗಳು ಮೊದಲು ಕೈ, ಕಾಲು, ಬಾಯಿ, ಕಣ್ಣು,  ತೊಳೆದುಕೊಂಡು , ತಲೆಯ ಮೇಲೆ ನೀರನ್ನು ಪ್ರೋಕ್ಷಿಸಿಕೊಳ್ಳಬೇಕು...
ಕಣ್ಣಲ್ಲಿ ಕೆಟ್ಟದ್ದನ್ನು ನೋಡಿರುತ್ತೇವೆ.., ಬಾಯಿಯಲ್ಲಿ ಕೆಟ್ಟದ್ದು ಮಾತಾಡಿರುತ್ತೇವೆ, ... ಹೀಗೆ..
ತಲೆಯ ಮೇಲೆ "ಗಂಗಾದೇವಿ" ಆಶೀರ್ವಾದ ಇದ್ದರೆ ಎಲ್ಲವೂ ಸುಗಮವಾಗಿ ನಡೆದು, ಶುಭವಾಗುತ್ತದೆ..
೨. ಮೊದಲು ದೇವಾಲಯದ ಮುಂಭಾಗದಲ್ಲಿನ "ರಾಜಗೋಪುರ"ಕ್ಕೆ ನಮಸ್ಕಾರ..
೩. ದೇವಾಲಯದ ಗಣಪತಿ ದರ್ಶನ ಮತ್ತು ಪ್ರಾರ್ಥನೆ..
೪. ದೇವಾಲಯದಲ್ಲಿರುವ ಸುಬ್ರಹ್ಮಣ್ಯ ಮತ್ತು ಪ್ರಾರ್ಥನೆ..
(ಸುಬ್ರಹ್ಮಣ್ಯ ಇರುತ್ತೆ, ಇಲ್ಲದಿದ್ದರೆ ಮನಸ್ಸಲ್ಲೇ ಪ್ರಾರ್ಥಿಸಿ)
೫. ಪ್ರಾಕಾರದಲ್ಲಿರುವ ಎಲ್ಲಾ ದೇವರುಗಳ ದರ್ಶನ..
೬. ಧ್ವಜಸ್ತಂಭಕ್ಕೆ ನಮಸ್ಕಾರ ಮಾಡಬೇಕು..
೭. ಮಹಾಭಕ್ತ ಮತ್ತು ಶಿವನಭಕ್ತನಾದ "ನಂದಿಕೇಶ್ಬರನ ದರ್ಶನ" ಮತ್ತು ನಮಸ್ಕಾರ..
ನಂದಿಕೇಶ್ವರನಿಗೆ "ಬೆಲ್ಲ ಅಥವಾ ಕಡಲೆಹಿಟ್ಟು " ನೈವೇದ್ಯ ಮಾಡಿಸಿ, ..
"ಸ್ವಾಮಿ, "ಶಿವನ" ದರ್ಶನಕ್ಕೆ" ಅನುವು ಮಾಡಿಕೊಡಿ ಎಂದು ಪ್ರಾರ್ಥಿಸಿ, ನಮಸ್ಕಾರ ಮಾಡಬೇಕು..
ನಂತರ ತಲೆ ತಗ್ಗಿಸಿಕೊಂಡು ಆಲಯ ದರ್ಶನ ಮಾಡಬೇಕು..
೫. ನಂತರ ನಂದಿಯ ಹಿಂದೆ ಬಂದು "ನಂದೀಶ್ವರನ" ಶೃಂಗಗಳ ಮಧ್ಯದಿಂದ , ಶಿವನ ವಿಗ್ರಹದ ಭೂಭಾಗ ದರ್ಶಿಸಿ, ನಂತರ ಮಧ್ಯಮ ಭಾಗವನ್ನು , ನಂತರ ಮುಖಭಾಗ ಅಂದರೆ " ಶಿವಲಿಂಗ" ಅಥವಾ.ಶಿವನ ದರ್ಶನ ಮಾಡಬೇಕು..
೭. ತಾನು ತಂದಿರುವ ಪೂಜಾಸಾಮಗ್ರಿಗಳನ್ನು ಅರ್ಚಕರಿಗೆ ಕೊಟ್ಟು ಮನೆಯ ಹಿರಿಯರ ಹೆಸರಿನಿಂದ ಅರ್ಚನೆ ಪ್ರಾರಂಭಿಸಿ, ಎಲ್ಲರ ಹೆಸರಲ್ಲೂ ಅರ್ಚನೆ ಮಾಡಿಸಬೇಕು..
ಆರು ವರ್ಷದ ಒಳಗಿನ ಮಕ್ಕಳ ಹೆಸರಲ್ಲಿ ಮತ್ತು ಮರಣ ಹೊಂದಿದ ವ್ಯಕ್ತಿಗಳ ಹೆಸರಲ್ಲಿ "ಅರ್ಚನೆ" ಬೇಡ..
ಮಕ್ಕಳು ದೇವರೇ, ಆರು ವರ್ಷದ ತನಕವೂ ಮಕ್ಕಳು ದೇವರೇನೇ, ಅವರನ್ನು ದೇವರು ಕಾಯುತ್ತಿರುತ್ತಾನೆ..,
ಆದ್ದರಿಂದ ಬೇರೆ ಅರ್ಚನೆ ಬೇಡ, ದೇವರ ಪ್ರಸಾದ ಇಟ್ಟರೆ ಸಾಕು..
೮. ನಂತರ ಮಂಗಳಾರತಿ ತಟ್ಟೆಗೆ ದಕ್ಷಿಣೆ ಹಾಕಿ, ತೀರ್ಥ ಪ್ರಸಾದ ಸ್ವೀಕರಿಸಬೇಕು..
ಮನಸಲ್ಲೇ ಪ್ರಾರ್ಥಿಸಿ ನಮಸ್ಕಾರ ಮಾಡಬೇಕು..
೯. ನಂತರ ಅಮ್ಮನವರ ಗುಡಿಯಲ್ಲಿ ಸಿಂಹಕ್ಕೆ ನಮಸ್ಕರಿಸಿ, ಅಮ್ಮನವರ ಪಾದ ದರ್ಶಿಸಿ, ಮುಖ ದರ್ಶನ ಮಾಡಬೇಕು..
(ಸಿಂಹಿವಿಲ್ಲದಿದ್ದರೆ ದೇವಿ ಪಾದ ದರ್ಶನ ಮಾಡಿ)
ಹೂವು ಕೊಟ್ಟು ಅರ್ಚನೆ ಮಾಡಿಸಿ, ನಮಸ್ಕರಿಸಬೇಕು..
೧೦. ನಂತರ ಎರಡು ನಿಮಿಷ ದೇವಾಲಯದಲ್ಲಿ ಕುಳಿತು ಕಷ್ಟವನ್ನು ಪರಿಹರಿಸು ಎಂದು"ದೇವರ ಧ್ಯಾನವನ್ನು ಮನಸ್ಸಿನಲ್ಲಿ  ಮಾಡಿಕೊಳ್ಳಬೇಕು..
೧೧. ನಂತರ "ದಕ್ಷಿಣಾಮೂರ್ತಿಗೆ" ನಮಸ್ಕಾರ ಮಾಡಬೇಕು..
(ಇದ್ದರೆ)
೧೨. ನಂತರ ಚಂಡಿಕೇಶ್ವರನ ದರ್ಶನ ಮಾಡಿ ವರದಿ ಒಪ್ಪಿಸಬೇಕು..
ವಿಗ್ರಹ ಇಲ್ಲದಿದ್ದರೆ ಮನದಲ್ಲಿಯೇ ಪ್ರಾರ್ಥಿಸಿ, ಎರಡು ಸಲ "ಚಪ್ಪಾಳೆ" ಹೊಡೆಯಬೇಕು..
ಹೀಗೆ ಮಾಡಿದರೆ ಇದು "ಕಾಶೀ ವಿಶ್ವನಾಥನ" ದರ್ಶನಕ್ಕೆ ಸಮನಾಗುತ್ತದೆ.., ಮತ್ತು ಕಾಶೀ ಕ್ಷೇತ್ರ ದರ್ಶನಕ್ಕೂ ಸುಗಮ ದಾರಿಯಾಗುತ್ತದೆ...
ನಂದೀಶ್ವರನ ಪ್ರಾರ್ಥನಾ ಸ್ತೋತ್ರ..
" ನಂದೀಶ್ವರ ನಮಸ್ತೇಸ್ತು ಸಾಂದ್ರಾನಂದ ಪ್ರದಾಯಕ |
ಮಹಾದೇವಸ್ಯ ಸೇವಾರ್ಥಂ ಅನುಜ್ಞಾಂ ದಾತುಮರ್ಹಸಿ ||"
(ಸರ್ವ ಕಷ್ಟನಿವಾರಣೆ ಮಾಡೋ ನಂದೀ ಸ್ತೋತ್ರ)
"ಶಿವನ ದರ್ಶನ ಮಾಡುವಾಗ ಸ್ತೋತ್ರ.."
"ವೃಷಸ್ಯ ವೃಷಣಂ ದೃಷ್ಟ್ವಾ ಈಶ್ವರಸ್ಯಾವಲೋಕನಂ |
ಶೃಂಗಮಧ್ಯೆ ಶಿವಂದೃಷ್ಟ್ವಾ ಕೈಲಾಸಂ ಭವತಿಧೃವಂ ||"
"ಶಿವನನ್ನು ಯಾವಾಗಲೂ ನಂದೀಶ್ವರನ ಕೊಂಬುಗಳ ಮಧ್ಯದಲ್ಲೇ ನೋಡಬೇಕು." ಹೀಗೆ ಪ್ರತಿ ಮಾಸ ಶಿವರಾತ್ರಿ, ಮಾಸ ಶಿವರಾತ್ರಿ, ಮಹಾ ಶಿವರಾತ್ರಿ, ದಕ್ಷಿಣಾಯನ ಪುಣ್ಯ ಕಾಲದಲ್ಲಿ, ಪ್ರತೀ ಸೊಕಮವಾರ ದರ್ಶನ ಮಾಡಿದರೆ..
"ಶಿವಸಾಯುಜ್ಯ " ದೊರಕುತ್ತದೆ..
ಪ್ರತಿದಿನ ಶಿವದರ್ಶನ ಮಾಡಿದರೆ "ಶನಿಕಾಟ" ಇರುವುದಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ