ಭಾನುವಾರ, ಜನವರಿ 28, 2018

ಅಶ್ವಗಂಧಾ ಎಂಬುದು ಒಂದು ಔಷಧಿಗಿಡ

ಅಶ್ವಗಂಧಾ ಎಂಬುದು ಒಂದು ಔಷಧಿಗಿಡ. ಹಿರಿಯರಿಂದ 'ಹಿರೇಮದ್ದು' ಎಂದೇ ಕರೆಸಿಕೊಳ್ಳುವ ಈ ಸಸ್ಯ, ನರಸಂಬಂಧಿ, ಕಫ ವಾತ ಸಂಬಂಧಿ ದೋಷಗಳನ್ನು ಕಿತ್ತು ಕಳೆಯಬಲ್ಲ ಗುಣವಿದೆ. ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸುವ ಅದ್ಬುತ ಸಾಮರ್ಥ್ಯವಿದೆ. ಹಾವು, ಚೇಳು ಕಚ್ಚಿದಾಗ ಇದರ ಬೇರನ್ನು ನಿಂಬೇ ರಸದೊಂದಿಗೆ ಹಚ್ಚಲು ಉಪಯೋಗಿಸುತ್ತಾರೆ. ಆಯುರ್ವೇದ ಪಂಡಿತರು ಸಂಸ್ಕೃತದಲ್ಲಿ ಇದಕ್ಕೆ ನೀಡಿದ ಹೆಸರು ವಾಜೀಗಂಧಾ, ಹಯಗಂಧಾ, ವರಾಹಕರ್ಣೀ ಇತ್ಯಾದಿ. ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದಂತಹ ವಾಸನೆ ಹೊರಡುತ್ತದೆಯಾದ್ದರಿಂದ ಅಲ್ಲದೆ ಇದರ ಬೇರನ್ನು ಸ್ವಚ್ಚಗೊಳಿಸಿ ಪುಡಿ ಮಾಡಿ ಸೇವಿಸಿದರೆ ಅಶ್ವದಂತೆ ಶಕ್ತಿಬಲ-ಉತ್ಸಾಹ ಬರುತ್ತದೆಯಾದ್ದರಿಂದ ಇದಕ್ಕೆ ಅಶ್ವಗಂಧಾ ಎಂಬ ನಾಮವು ಬಂದಿದೆ. ಇಂಗ್ಲೀಷ್ ನಲ್ಲಿ ಇದಕ್ಕೆ ವಿಂಟರ್ ಚೆರ್ರಿ ಎನ್ನುತ್ತಾರೆ. ಗುಜರಾತ್, ರಾಜಾಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ, ವಾಯವ್ಯ ಭಾರತ, ಕರ್ನಾಟಕ ಮುಂತಾದೆಡೆಯಲ್ಲಿ ಈ ಗಿಡವನ್ನು ಕಾಣಬಹುದು. ಸೊಲನೇಸೀ ಕುಟುಂಬಕ್ಕೆ ಸೇರಿದ, ಔಷಧೀಯ ಮಹತ್ತ್ವವುಳ್ಳ ಸಸ್ಯ (ಪಿಂಟರ್ ಚೆರ್ರಿ). ಕನ್ನಡದಲ್ಲಿ ಹಿರೇಮದ್ದಿನ ಗಿಡ ಎಂಬ ಹೆಸರೂ ಇದಕ್ಕಿದೆ. ಇದರ ವೈಜ್ಞಾನಿಕ ಹೆಸರು ವಿತಾಸಿಯ ಸಾಮ್ನಿಫೆರ. ಸು. 1 ಮೀ ಎತ್ತರಕ್ಕೆ ಬೆಳೆಯುವ ಮೂಲಿಕೆ. ಆಫ್ರಿಕ, ಮೆಡಿಟರೇನಿಯನ್ ಪ್ರದೇಶ ಹಾಗೂ ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಅಶ್ವಗಂಧ ಬೆಳೆಯಿಂದ ದೊರೆಯುವ ಆಲ್ಕಲಾಯ್ಡ್‌ಗಳಲ್ಲಿ ಮಿಥಾನಿನ್ ಮತ್ತು ಸಾಮ್ನಿಫೆರಿನ್ ಸಸ್ಯಕ್ಷಾರ ಮುಖ್ಯವಾದುವು. ಆಯುರ್ವೇದ ಹಾಗೂ ಯುನಾನಿ ಔಷಧಿಗಳ ತಯಾರಿಕೆಯಲ್ಲಿ ಇದರ ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳು ಅನೇಕ ರೋಗಗಳ ನಿವಾರಣೆಗೆ ಉಪಯುಕ್ತವಾಗಿವೆ.
ಇದು ಒಂದರಿಂದ ಮೂರು ಅಡಿ ಎತ್ತರಕ್ಕೆ ಬೆಳೆಯುವ ಸುಂದರ ಪೊದೆ. ಇದರ ಎಲೆಗಳು ಆಡುಸೋಗೆಯ ಎಲೆಗಳನ್ನು ಹೋಲುವವು. ಆದರೆ ಅದಕ್ಕಿಂತ ಚಿಕ್ಕವು ಮತ್ತು ಅಷ್ಟು ಉದ್ದವಿರುವುದಿಲ್ಲ. ಎಲೆಗಳನ್ನು ಕೈಗಳಲ್ಲಿ ಉಜ್ಜಿದರೆ ಕುದುರೆಯ ಮೂತ್ರದ ವಾಸನೆ ಬರುವುದು. ಆದುದರಿಂದ ಈ ಮೂಲಿಕೆಗೆ ಅಶ್ವಗಂಧ ಎನ್ನುವರು. ರುಚಿಯಲ್ಲಿ ಕಹಿ. ಎಲೆಗಳು ಬೂದು ಬಣ್ಣದ ರೋಮಗಳಿಂದ ಕೂಡಿರುವವು. ಹೂಗಳು ಹಸಿರು, ಹಳದಿ ಬಣ್ಣದ ಗೊಂಚಲುಗಳು, ಹಣ್ಣು ಕೆಂಪಾಗಿರುವುದು ಮತ್ತು ಹೊದಿಕೆಯಿಂದ ಕೂಡಿರುವುದು. ಈ ಹೊದಿಕೆಯೊಳಗಡೆಯಿಂದ ಇದರ ಹಣ್ಣು ನೋಡಲು ಮನ ಮೋಹಕವಾಗಿರುವುದು. ಬೇರುಗಳು ಬಿಳಿ ಮತ್ತು ನಸುಹಳದಿ ಬಣ್ಣದಿಂದ ಕೂಡಿರುವುವು.
ಅಶ್ವಗಂಧ
೧)ಇದು ನರ ಮಾಂಸ ಖಂಡಗಳಿಗೆ ಶಕ್ತಿಯನ್ನು ನೀಡುವಂತಹ ದಿವ್ಯ ಔಷಧಿಯಾಗಿದೆ. ಇದರ ಬೇರುಗಳು ಕುದುರೆಯ ವಾಸನೆಯಂತಿರುವುದಕ್ಕೆ ಇದನ್ನು ಅಶ್ವಗಂಧಿಯೆಂದು ಕರೆಯುತ್ತಾರೆ.
೨) ನಪುಂಸಕತೆ ಹಾಗೂ ನಿಶಕ್ತಿಯನ್ನು ಹೋಗಲಾಡಿಸಲು 5 ಗ್ರಾಂ. ಅಶ್ವಗಂಧಿ ಚೂರ್ಣವನ್ನು ದಿನಾಲು ಎರಡು ಬಾರಿ ಬೆಳ್ಳೆಗೆ ,ರಾತ್ರಿ ಹಾಲು ಸಕ್ಕರೆಯೊಡನೆ ತೆಗೆದುಕೊಳ್ಳುಬೇಕು.
೩) ಗರ್ಭಾಶಯ ಬೆಳೆಯದ ಕುಮಾರಿಯರಿಗೆ 3 ತಿಂಗಳಗಳ ಕಾಲ ದಿನಾಲು ಚೂರ್ಣ ಕೊಡಲು ಉಪಯುಕ್ತ.
೪) ಅಶಕ್ತ ಮಕ್ಕಳಿಗೆ ಅಶ್ವಗಂಧಿ ರಸಾಯನ ರಾಮಬಾಣ.
೫) ಗ್ರಾಮ ಭಾಷೆಯಲ್ಲಿ ಇದಕ್ಕೆ ಹಿರೇಮದ್ದಿನ ಬೇರು ಎಂದು ಕರೆಯುತ್ತಾರೆ, ಇದರ ಎಲೆ, ಬೇರು, ಬೀಜ, ಎಲ್ಲದೂ ಔಷಧಿಯ ಗುಣಗಳನ್ನು ಹೊಂದಿದೆ.
೬) ವೀರ್ಯವೃದ್ದಿಗೆ ಅಶ್ವಗಂಧಿ ಚೂರ್ಣವನ್ನು ಹಾಲಿನಲ್ಲಿ ಕಲ್ಲುಸಕ್ಕರೆ ಕಲೆಸಿ ತೆಗೆದುಕೊಳ್ಳುಬೇಕು.
೭) ತಾಯಂದಿರಿಗೆ ಎದೆಯ ಹಾಲು ಬರದಿದ್ದರೆ ಅಶ್ವಗಂಧಿ ಚೂರ್ಣ ಸೇವಿಸಲು ಉಪಯುಕ್ತ.
೮) ನರಗಳ ದೌರ್ಬಲ್ಯವಿರುವವರು ಹಾಲಿನಲ್ಲಿ ಇದರ ಚೂರ್ಣ ಕುದಿಸಿ, ಕಲ್ಲುಸಕ್ಕರೆ ಹಾಗೂ ತುಪ್ಪದೊಡನೆ ಸೇವಿಸಬೇಕು.
೯) ಜ್ಞಾಪಕ ಶಕ್ತಿಯ ವೃದ್ದಿಗೂ ಇದರ ಚೂರ್ಣವನ್ನು ಉಪಯೋಗಿಸುತ್ತಾರೆ.
೧೦) ಅಶ್ವಗಂಧಿ ಬೀಜಗಳಿಗೆ ವಿಷ ನಿರೋಧಕ ಶಕ್ತಿಯಿದೆ ಎಂದು ದೃಢಪಟ್ಟಿದೆ.
೧೧) ಕಣ್ಣುಗಳಿಗೆ ಕತ್ತಲೆ ಆವರಿಸಿದಂತಾಗಿ ಮೇಲಿಂದ ಮೇಲೆ ಕುಸಿದು ಬೀಳುವವರು ಇದರ ಚೂರ್ಣ ಸೇವಿಸಲು ಗುಣಮುಖರಾಗುವರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ