ಸೋಮವಾರ, ಜನವರಿ 1, 2018

ವೈಕುಂಠ ಏಕಾದಶಿ

ಏಕಾದಶ ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ ಎಂದು ನಮ್ಮ ಹಿಂದೂ ಧರ್ಮದಲ್ಲಿ ಪ್ರತೀತಿ ಇದೆ.
ಏಕಾದಶ ಈ ಸಂಸ್ಕೃತ ಪದದ ಅರ್ಥ ಹನ್ನೊಂದು(11).ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದಹನ್ನೊಂದನೆಯ ದಿನವನ್ನು ಏಕಾದಶಿಎನ್ನಲಾಗುತ್ತದೆ.
ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ.ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ.ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ,ನಿರಾಹಾರ ವ್ರತವನ್ನು ಆಚರಿಸುತ್ತಾರೆ.
ಏಕಾದಶಿಯ ದಿನ ಉಪವಾಸವಿದ್ದು,ಮಾರನೆಯ ದಿನ ಅಂದರೆ ದ್ವಾದಶಿಯಂದು ಬೆಳಿಗ್ಗೆ 9 ಘಂಟೆಯೊಳಗಾಗಿಪಾರಣೆ(ಊಟ)ಮಾಡುವ ಸಂಪ್ರದಾಯವಿದೆ. ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ.
ವೈಕುಂಠ ಏಕಾದಶಿ
ಏಕಾದಶಿಗಳಲ್ಲಿ ವಿಶೇಷ ದಿನ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ರಂಗನಾಥ/ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವಸ್ಥಾನಗಳಲ್ಲಿ, ಈ ದಿನ ದೇವಸ್ಥಾನಗಳಲ್ಲಿ ನಿರ್ಮಿಸಿರುವ ವೈಕುಂಠದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ಹಿಂದೂ ಧರ್ಮದಲ್ಲಿ ಪ್ರತೀತಿಯಿದೆ..
ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ ಹೆಸರು "ಶಯನೀ" (ಅಥವಾ ಪ್ರಥಮಾ ಎಂದೂ ಇನ್ನೊಂದು ಹೆಸರಿದೆ). ಅದಿನ ಮಹಾವಿಷ್ಣುವು ನಿದ್ರಿಸಲು ತೆರಳುವನೆಂದೂ, ಮುಂದೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿ "ಪ್ರಬೋಧಿನೀ"ಯ ನಂತರ ಬರುವ’ಉತ್ಥಾನ’ದ್ವಾದಶಿಯಂದು. ಅವನು ನಿದ್ರೆ ಮುಗಿಸಿ ಎಚ್ಚರಗೊಳ್ಳುತಾನೆಂದು ಆಸ್ತಿಕರ ನಂಬಿಕೆ. ಈ ಎರಡೂ ಏಕಾದಶಿಗಳ. ನಡುವಿನ ನಾಲ್ಕು ತಿಂಗಳ ಅವಧಿಯನ್ನು .ಚಾತುರ್ಮಾಸ್ಯ ಎನ್ನಲಾಗುತ್ತ  29/12/2017 ಶುಕ್ರವಾರ, ಏಕಾದಶಿ- ವಿಶೇಷ
ಹುಣ್ಣಿಮೆ ಮತ್ತು ಅಮಾವಾಸ್ಯೆಯಾದ ನಂತರ ಬರುವ ಹನ್ನೋಂದನೇಯ ದಿನ.
ಈ ದಿನವು ಶ್ರೀ ಹರಿಗೆ ಬಹಳ ಪ್ರಿಯ. ಮೂರು ಲೋಕಗಳಲ್ಲಿ ಏಕಾದಶಿ ವ್ರತಕ್ಕಿಂತ ಮಿಗಿಲಾದ ವ್ರತವು ಮತ್ತೋಂದು ಇಲ್ಲ. ಈ ವ್ರತವನ್ನು ಪಾಲಿಸುವುದರಲ್ಲಿ ದೋಷ ಗಳಿದ್ದರೂ ಸಹ ,ಇದು ನಮಗೆ ಪರಮಧಾಮವಾದ ವೈಕುಂಠಕ್ಕೆ ದಾರಿಯನ್ನು ನೀಡುತ್ತದೆ.
ಏಕಾದಶಿಯ ಮತ್ತೋಂದು ಹೆಸರು ಹರಿವಾಸ. ಏಕಾದಶಿ ವ್ರತ ಮುಖ್ಯ ಉದ್ದೇಶವು, ಶ್ರೀ ಹರಿಯನ್ನು ನಮ್ಮ ಎಲ್ಲಾ ಇಂದ್ರಿಯಗಳಿಂದ ತೃಪ್ತಿಪಡಿಸುವುದೇ ಆಗಿದೆ. "ಉಪವಾಸ" ಎಂದರೆ ಸಮೀಪದಲ್ಲಿ ನಿವಾಸಿಸುವುದು ಎಂದು ಅರ್ಥ. ಹರಿ ಭಕ್ತ ವಿಲಾಸದಲ್ಲಿ ಹೀಗೆ ಹೇಳಲಾಗಿದೆ.
ಏಕಾದಶಿ ಯನ್ನು ನಾವು ಎಲ್ಲಾ ಪಾಪಕಾರ್ಯಗಳಿಂದ ದೂರವಿದ್ದು,ಇಂದ್ರಿಯ ತೃಪ್ತಿಯ ಕೆಲಸಗಳನ್ನು ತ್ಯಜಿಸಿ, ಭಗವಂತನ ಸಮೀಪದಲ್ಲಿ ಇರಬೇಕು. ಏಕಾದಶಿಯ ದಿನದಂದು ಉಪವಾಸ ವನ್ನು ಆಚರಿಸುವವನು ತನ್ನ ಎಲ್ಲಾ ಪಾಪಕರ್ಮಗಳ ಫಲವನ್ನು  ಕಳೆದುಕೊಂಡವನಾಗಿ ,ಭಕ್ತಿಸೇವೆಯಲ್ಲಿ ಮುಂದುವರೆಯುತ್ತಾನೆ ಎಂದು ಬ್ರಹ್ಮವೈವರ್ತ ಪುರಾಣವು ತಿಳಿಸುತ್ತದೆ. ಉಪವಾಸ ಮಾಡುವ ಮುಖ್ಯ ಉದ್ದೇಶವು,ದೈಹಿಕ ಅವಶ್ಯಕತೆಯನ್ನು ಕಡಿಮೆ ಮಾಡಿಕೊಂಡು,ನಮ್ಮ ಹೆಚ್ಚಿನ ಸಮಯವನ್ನು  ಶ್ರೀ ಕೃಷ್ಣನ ಸೇವೆಯಲ್ಲಿ ತೊಡಗಿಸುವುದೆ ಆಗಿದೆ.
ವೈಕುಂಠ ಏಕಾದಶಿಯು, ಮಾರ್ಗಶಿರ ಮಾಸದಲ್ಲಿ ಅಮಾವಾಸ್ಯದ  ನಂತರ ಬರುವ ಹನ್ನೋಂದನೇಯ ದಿನ. ಶ್ರೀ ವೈಕುಂಠ, ಅಲ್ಲಿ ಆ ಪರಮ ಪ್ರಭುವಿನ ಸಾಹಚರ್ಯ ದಲ್ಲಿ ಪರಿಪೂರ್ಣ ಆನಂದವನ್ನು ಮತ್ತು ಜ್ಞಾನವನ್ನು ಪಡೆದು ಸನಾತನವಾಗಿ ಅವನ ಸೇವೆಯಲ್ಲಿ ನಿರತರಾಗಿರುವುದೇ ನಮ್ಮ ಗುರಿಯೂ,ಆಸೆಯೂ ಆಗಿರಬೇಕು.ನಾವು ಈಗ ಈ ಪವಿತ್ರ ದಿನದ ಕಥೆಯನ್ನು ಕೇಳೊಣ.
ಒಮ್ಮೆ ಮಹಾಪ್ರಳಯದ ನಂತರ ಭಗವಂತನು ಚಿಕ್ಕ ಶಿಶುವಿನ ರೂಪದಲ್ಲಿ ಒಂದು ಆಲದ ಎಲೆಯ ಮೇಲೆ ಪ್ರಳಯ ಕಾಲದ  ಜಲದಲ್ಲಿ ತೇಲಾಡುತ್ತಿದ್ದನು. ಅವನು ಚತುರ್ಮುಖ ಬ್ರಹ್ಮ ನನ್ನು ಸೃಷ್ಠಿಸಿ,ಸೃಷ್ಠಿ ಕಾರ್ಯ ವನ್ನು ಪ್ರಾರಂಭಿಸಲು ಆದೇಶಿಸಿದನು. ಆದರೆ ಸ್ವಲ್ಪ ಸಮಯದಲ್ಲೇ ಬ್ರಹ್ಮ ದೇವನು ತನ್ನ ಶಕ್ತಿಗಳ ಮೂಲನಾದ ಭಗವಂತನನ್ನು ಮರೆತು,ಅಹಂಕಾರದಿಂದ ಸೃಷ್ಠಿಕಾರ್ಯವನ್ನು ಮಾಡಲಾರಂಭಿಸಿದನು. ಆ ಸಮಯದಲ್ಲಿ ಲೋಕ ಮತ್ತು ಕಂಠ ಎಂಬ ಇಬ್ಬರು ರಾಕ್ಷಸರು ಭಗವಂತ ನ ಕಿವಿಗಳಿಂದ ಉದ್ಭವಿಸಿದರು.  ಆ ರಾಕ್ಷಸರು ಅಹಂಕಾರ ಮತ್ತು ಅಪರಾದ ಭಾವಗಳಿಂದ ತುಂಬಿದ್ದ ಬ್ರಹ್ಮದೇವನನ್ನು ಸಂಹರಿಸಲು ಹೊರಟರು. ಆಗ ಬ್ರಹ್ಮದೇವನು ಕೂಡಲೇ ತನ್ನ ಅಪರಾದವನ್ನು ಅರಿತು ರಕ್ಷಣೆಗಾಗಿ ತನ್ನ ತಂದೆಯಾದ ಭಗವಾನ್ ವಿಷ್ಣು ವನ್ನು ಕುರಿತು ಪ್ರಾರ್ಥಿಸಿದನು. ಆಗ ಭಗವಂತನು ಬ್ರಹ್ಮನನ್ನು ಕ್ಷಮಿಸಿ, ಆ ಇಬ್ಬರು ರಾಷಸರಿಗೆ ವರಗಳನ್ನು ನಿಡಲು ಬಯಸಿದನು. ಆಗ ಬ್ರಹ್ಮದೇವನು, ಈ ರಾಕ್ಷಸರು, ಒಂದು ಮಾಸದವರೆಗೆ ನಿನ್ನೋಂದಿಗೆ ಯುದ್ದ ಮಾಡಿ,ಮರಣಾನಂತರ ನಿನ್ನ ಪವಿತ್ರವಾದ ಪಾದ ಪದ್ಮಗಳ ಆಶ್ರಯವನ್ನು ಪಡೆಯುವಂತೆ ವರವನ್ನು ಅನುಗ್ರಹಿಸು ಸ್ವಾಮಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದನು.
ಬ್ರಹ್ಮದೇವನು ಕೋರಿದಂತೆಯೇ ಭಗವಂತನು ಆಶೀರ್ವದಿಸಿದನು. ಭಗವಂತನು ಅವರಿಬ್ಬರನ್ನು ಶಂಕ ಮತ್ತು ಚಕ್ರಗಳಾಗಿ ಬದಲಾಯಿಸಿ ಶ್ರೀ ವೈಕಂಠ ದಲ್ಲಿ ತನ್ನ ಶಾಶ್ವತ ಸೇವಕರಾಗುವಂತೆ ಅವಕಾಶ ನೀಡಿದನು.
ಆ ಸಮಯದಲ್ಲಿ ಲೋಕ ಮತ್ತು ಕಂಠರಿಬ್ಬರೂ ಭಗವಂತನಿಗೆ ಈ ರೀತಿಯಲ್ಲಿ ಹೇಳಿದರು, ಓ ಶ್ರೀಮನ್ನಾರಯಣನೇ! ಸ್ವತಃ ನಿನ್ನ ಕೈಗಳಿಂದ ನಮ್ಮನ್ನು ಸಂಹರಿಸುವ ಮೂಲಕ ನಮಗೆ ಮುಕ್ತಿಯನ್ನು ನೀಡಿದ್ದೀಯೇ. ನಮಗೆ ಶ್ರೀ ವೈಕುಂಠದಲ್ಲಿ ನಿವಾಸವನ್ನು ನೀಡಿ,ನಿನ್ನ ಶಾಶ್ವತ ಸೇವೆಯನ್ನು ಮಾಡುವಂತಹ ಭಾಗ್ಯವನ್ನು ಕರುಣಿಸಿದ್ದೀಯೆ.
ಈ ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷ ದಿವಸದಂದು ಶ್ರೀ ವೈಕುಂಠ ಧಾಮದ ಉತ್ತರ ದ್ವಾರವನ್ನು ತೆರೆದಿಡುವ ಮೂಲಕ ನಮ್ಮನ್ನು ವೈಕುಂಠಕ್ಕೆ ಆಹ್ವಾನಿಸಿದ್ದೀಯೆ. ಆದರೆ ನೀನು ನಮಗೆ ಮತೋಂದು  ವರವನ್ನು ಅನುಗ್ರಹಿಸಬೇಕು. ಎಲ್ಲಾ ಪ್ರಜೆಗಳು ನಮ್ಮನ್ನು ಮತ್ತು ಈ ದಿನವನ್ನು ಶ್ರೀ ವೈಕುಂಠ ಏಕಾದಶಿಯೆಂದು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.
ಭೂಲೋಕದಲ್ಲಿ ಯಾವ ಮನುಷ್ಯರು ವೈಕುಂಠ ಏಕಾದಶಿಯಂದು ಉತ್ತರ ದ್ವಾರದಿಂದ ಅತಿ ಪವಿತ್ರವಾದ ನಿನ್ನ ಆಲಯವನ್ನು ಪ್ರವೇಶಿಸುತ್ತಾರೋ, ಅವರಿಗೆ ಮರಣದ ನಂತರ ವೈಕುಂಠ ಪ್ರಾಪ್ತಿಯು ಲಭಿಸಲಿ ಮತ್ತು ವೈಕುಂಠದಲ್ಲಿ ಎಲ್ಲ ಶಾಶ್ವತ ಸೇವಕರಂತೆ, ಅವರಿಗೂ ನಿನ್ನ ಶಾಶ್ವತ ಸೇವೆ ದೊರಕಲಿ.
ಆಗ   ನಾರಾಯಣನು ಲೋಕ ಮತ್ತು ಕಂಠರು ಕೋರಿದ ವರವನ್ನು ಅನುಗ್ರಹಿಸಿದನು. ಆ ದಿನದಂದು ನಾರಾಯಣನು ಅತಿಪವಿತ್ರವಾದ ವೈಕುಂಠ ಏಕಾದಶಿಯಂದು ಉತ್ತರ ದ್ವಾರದಿಂದ ತನ್ನ ಆಲಯವನ್ನು  ಪ್ರವೇಶಿಸುವ ಮನುಷ್ಯರಿಗೆ, ಅವರ ಮರಣದ ನಂತರ ಮೋಷವನ್ನು ನೀಡಿ ವೈಕುಂಠ ಪ್ರಾಪ್ತಿಯನ್ನು ಪ್ರಸಾದಿಸುತ್ತಾರೆ. ಈ ರೀತಿಯಲ್ಲಿ ಏಕಾದಶಿಯು ಮೋಕ್ಷಕ್ಕೆ ಸಂಬಂಧಿಸಿರುವುದರಿಂದ, ಈ ಏಕಾದಶಿಯನ್ನು "ಮೋಕ್ಷೋತ್ಸವ" ಎಂದೂ ಕರೆಯಲಾಗಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ