*ಭಗವಂತನಿಗೆ ಭಗವದ್ಭಕ್ತರು ವಿವಿಧ ರೀತಿಯ ಆರತಿಯಿಂದ ಸಂತುಷ್ಟನಾಗುತ್ತಾನೆಂದು ಹಿಂದಿನಿಂದಲೂ ನಡೆದು ಬಂದ ಪಧ್ಧತಿ ಎಲ್ಲಕ್ಕಿಂತ ಮಿಗಿಲಾಗಿ ಪರಿಶುದ್ದ ಮನಸ್ಸು ಶ್ರದ್ದಾ ಭಕ್ತಿ ಬಹು ಮುಖ್ಯ ಬನ್ನಿ ಸಂಖ್ಯೆಯ ದೃಷ್ಟಿಯಲ್ಲಿ ಆರತಿಯಲ್ಲಿ ಯಾವ ಫಲ ತಿಳಿಯೋಣ.*
1. *ಏಕಾರತಿ* ( ಒಂದು) - ಮಾಡುವುದರಿಂದ ಪೂಜೆಯ ಪೂರ್ಣ ಫಲ ದೊರೆಯುತ್ತದೆ.
2. *ದ್ವಿ ಆರತಿ*( ಎರಡು) - ಮಾಡುವುದರಿಂದ ದಾಂಪತ್ಯ ಸಖ್ಯ ಫಲ ದೊರೆಯುತ್ತದೆ.
3. *ತ್ರಯ ಆರತಿ*( ಮೂರು) - ಮಾಡುವುದರಿಂದ ಕುಟುಂಬ ಅಭಿವೃದ್ಧಿಯುಂಟಾಗುತ್ತದೆ.
4. *ಪಂಚ ಆರತಿ*( ಐದು) - ಮಾಡುವುದರಿಂದ ಪರಿಸರದಲ್ಲಿ ಸಸ್ಯವೃದ್ದಿ ಆಗುತ್ತದೆ.
5. *ನವ ಆರತಿ* ( ಒಂಬತ್ತು) - ಮಾಡುವುದರಿಂದ ಇಡೀ ವರ್ಷ ವೃದ್ದಿ ಫಲ ದೊರೆಯುತ್ತದೆ.
6. *ಏಕಾದಶ ಆರತಿ*( ಹನ್ನೊಂದು) - ಮಾಡುವುದರಿಂದ ಮಹಾಲಕ್ಷ್ಮಿ ಸುಪ್ರೀತಳಾಗುತ್ತಾಳೆ.
7. *ದ್ವಾದಶ ಆರತಿ*( ಹನ್ನೆರಡು) - ಮಾಡುವುದರಿಂದ ಸುಖ ನೆಮ್ಮದಿಯುಂಟಾಗುತ್ತದೆ.
8. *ಷೋಡಶ ಆರತಿ*( ಹದಿನಾರು) - ಮಾಡುವುದರಿಂದ ವಿಶೇಷ ಧನಲಾಭವುಂಟಾಗುತ್ತದೆ.
9. *ಏಕವಿಂಶತಿ*( ಇಪ್ಪತ್ತೊಂದು) ಮಾಡುವುದರಿಂದ ರಾಜ್ಯಲಾಭ ದೊರೆಯುತ್ತದೆ.
10. *ಚತುರ್ವಿಂಶತಿ ಆರತಿ*( ಇಪ್ಪತ್ನಾಲ್ಕು) - ಉತ್ತಮ ಮಳೆ ಬೆಳೆ ಉಂಟಾಗುತ್ತದೆ.
11. *ನಕ್ಷತ್ರ ಆರತಿ*( ಇಪ್ಪತ್ತೇಳು)- ಸಕಲ ದೇವತೆಗಳು ಅನುಗ್ರಹಿಸುತ್ತಾರೆ.
12. *ನಾಗ ಆರತಿ* ಮಾಡುವುದರಿಂದ ಉತ್ತಮ ಸಂತಾನ ವೃದ್ಧಿಯಾಗುತ್ತದೆ.
13. *ಕೂರ್ಮ ಆರತಿ*- ಮಾಡುವುದರಿಂದ ಧೈರ್ಯ ಸ್ತೈರ್ಯ ಧೃಡತೆವುಂಟಾಗಿ ಭಗವಂತನ ಪೂರ್ಣಾನುಗ್ರಹವಾಗುತ್ತದೆ.
14. (ನೂರೆಂಟು) *ಅಷ್ಟೋತ್ತರ ಶತದೀಪ* - ಲಕ್ಷ್ಮೀ ನಾರಾಯಣ ರ ಸಂಪೂರ್ಣ ಕೃಪಾಕಟಾಕ್ಷವುಂಟಾಗುತ್ತದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ