ಬ್ರಾಹ್ಮಣ ಎಂದರೆ ಯಾರು? ವಜ್ರಸೂಚಿಕಾ ಉಪನಿಷತ್
ಉಪನಿಷತ್ :- ಮಂಗಲಮ್-- ಓಂ ಆಪ್ಯಾಯಯಂತು ಮಮಾಂಗಾನಿ | ವಾಕ್ ಪ್ರಾಣಃ ಚಕ್ಷುಃ ಶ್ರೋತ್ರಮ್ | ಅಥೋ ಬಲಮ್ ಇಂದ್ರಿಯಾಣಿ ಚ ಸರ್ವಾಣಿ | ಸರ್ವಮ್ ಬ್ರಹ್ಮ ಉಪನಿಷದಮ್ | ಮಾ ಅಹಮ್ ಬ್ರಹ್ಮ ನಿರಾಕುರ್ಯಾಮ್ |ಮಾ ಮಾ ಬ್ರಹ್ಮ ನಿರಾಕರೋತ್| ಅನಿರಾಕರಣಮಸ್ತು ಅನಿರಾಕರಣಮ್ ಮೇ ಅಸ್ತು | ತತ್ ಆತ್ಮನಿ ನಿರತೇ ಯ ಉಪನಿಷತ್ಸು ಧರ್ಮಾಃ ತೇ ಮಯಿ ಸಂತು ತೇ ಮಯಿ ಸಂತು | ಓಂ ಶಾಂತಿಃ ಶಾಂತಿಃ ಶಾಂತಿಃ ||
ಅರ್ಥ:- ನನ್ನ ಎಲ್ಲ ಬಾಯಿ ಮೊದಲಾದ ಕರ್ಮೇಂದ್ರಿಯಗಳು, ಕಣ್ಣು ಮೊದಲಾದ ಜ್ಞಾನೇಂದ್ರಿಯಗಳು,ಪಂಚಪ್ರಾಣಗಳು, ಬಲವನ್ನು ಹೊಂದಲಿ. ಇವೆಲ್ಲವೂ ಉಪನಿಷತ್ತಿನಲ್ಲಿ ನಿರೂಪಿಸಿದ ಬ್ರಹ್ಮವೇ ಆಗಿದೆ. ನಾನು ಬ್ರಹ್ಮವನ್ನು ನಿರಾಕರಿಸುವುದಿಲ್ಲ. ಆ ಬ್ರಹ್ಮವೂ ನನ್ನನ್ನು ನಿರಾಕರಿಸದಿರಲಿ. ನನ್ನಿಂದ ಬ್ರಹ್ಮ, ಬ್ರಹ್ಮದಿಂದ ನಾನು ಪರಸ್ಪರ ತಿರಸ್ಕೃತವಾಗದಿರಲಿ. ತತ್ವಜ್ಞಾನಿಯಲ್ಲಿ ಕಾಣುವುದೆಂದು , ಉಪನಿಷತ್ತುಗಳಲ್ಲಿ ನಿರೂಪಿಸಿರುವ ಧರ್ಮವು, ನನ್ನಲ್ಲೂ ಉಂಟಾಗಲಿ . ತಾಪತ್ರಯಗಳು ಶಾಂತವಾಗಲಿ.
ಉಪನಿಷತ್ :- ಓಂ ವಜ್ರಸೂಚೀಮ್ ಪ್ರವಕ್ಷ್ಯಾಮಿ ಶಾಸ್ತ್ರಮ್ ಅಜ್ಞಾನಭೇದನಮ್ | ದೂಷಣಮ್ ಜ್ಞಾನಹೀನಾನಾಮ್ ಭೂಷಣಮ್ ಜ್ಞಾನಚಕ್ಷುಷಾಮ್ |೧|
ಅರ್ಥ:- ಓಮ್ ಕಾರವು ಆದಿಯಲ್ಲಿ ಹೇಳಲ್ಪಟ್ಟಿದೆ. ಅಜ್ಞಾನವನ್ನು ನಾಶಗೊಳಿಸುವ ಅಜ್ಞಾನಿಗಳನ್ನು ತಿರಸ್ಕರಿಸುವ ,ಜ್ಞಾನವೇ ಕಣ್ಣಗಿರುವವರಿಗೆ ಭೂಷಣವಾದ ವಜ್ರಸೂಚಿ ಎನ್ನುವ ವಿದ್ಯೆಯನ್ನು ಹೇಳುತ್ತೇನೆ
ಉಪನಿಷತ್ :- ಬ್ರಹ್ಮಕ್ಷತ್ರಿಯವೈಶ್ಯಶೂದ್ರಾಃ ಇತಿ ಚತ್ವಾರಃ ವರ್ಣಾಃ ತೇಷಾಮ್ ವರ್ಣಾನಾಮ್ ಬ್ರಾಹ್ಮಣ ಏವ ಪ್ರಧಾನಃ ಇತಿ ವೇದವಚನಾನುರೂಪಮ್ ಸ್ಮೃತಿಭಿಃ ಅಪಿ ಉಕ್ತಮ್ | ತತ್ರ ಚೋದ್ಯಮ್ ಅಸ್ತಿ ಕಃ ವಾ ಬ್ರಾಹ್ಮಣಃ ನಾಮ ಕಿಮ್ ಜೀವಃ ಕಿಮ್ ದೇಹಃ ಕಿಮ್ ಜಾತಿಃ ಕಿಮ್ ಜ್ಞಾನಮ್ ಕಿಮ್ ಕರ್ಮ ಕಿಮ್ ಧಾರ್ಮಿಕಃ ಇತಿ |
ಅರ್ಥ:- ಈ ಲೋಕದಲ್ಲಿ ಬ್ರಾಹ್ಮಣ , ಕ್ಷತ್ರಿಯ, ವೈಶ್ಯ, ಶೂದ್ರ ಎನ್ನುವ ನಾಲ್ಕು ವರ್ಣಗಳು ಪ್ರಸಿದ್ಧವಾಗಿವೆ. ಅವುಗಳಲ್ಲಿ ಬ್ರಾಹ್ಮಣ ವರ್ಣವು ಶ್ರೇಷ್ಠವೆಂದು ವೇದಗಳು ಮತ್ತು ಸ್ಮೃತಿಗಳು ಹೇಳುತ್ತಿವೆ. ಇಲ್ಲಿ ವಿಚಾರಕ್ಕೆ ಯೋಗ್ಯವಾದ ವಿಷಯವಿದೆ.ಬ್ರಾಹ್ಮಣ ಎಂದರೆ ಯಾರು? ಜೀವ ಚೈತನ್ಯವು ಬ್ರಾಹ್ಮಣನೇ? ಶರೀರವು ಬ್ರಾಹ್ಮಣನೇ? ಜಾತಿಯು (ಹುಟ್ಟುವುದು ) ಬ್ರಾಹ್ಮಣನೇ? ಜ್ಞಾನವು ಬ್ರಾಹ್ಮಣನೇ? ಕರ್ಮವು ಬ್ರಾಹ್ಮಣನೇ? ದಾನ ಮಾಡುವವನು ಬ್ರಾಹ್ಮಣನೇ?
ಉಪನಿಷತ್ :- ತತ್ರ ಪ್ರಥಮಃ ಜೀವಃ ಬ್ರಾಹ್ಮಣಃ ಇತಿ ಚೇತ್ ತತ್ ನ | ಅತೀತಾನಾಗತಾನೇಕದೇಹಾನಾಮ್ ಜೀವಸ್ಯ ಏಕರೂಪತ್ವಾತ್ ಏಕಸ್ಯ ಅಪಿ ಕರ್ಮ ವಶಾತ್ ಅನೇಕದೇಹಸಂಭವಾತ್ ಸರ್ವ ಶರೀರಾಣಾಮ್ ಜೀವಸ್ಯ ಏಕರೂಪತ್ವಾತ್ | ತಸ್ಮಾತ್ ನ ಜೀವಃ ಬ್ರಾಹ್ಮಣಃ ಇತಿ |
ಅರ್ಥ:- ಜೀವ ಚೈತನ್ಯವು ಬ್ರಾಹ್ಮಣ ಎನ್ನುವುದು ಸರಿಯಲ್ಲ . ಏಕೆಂದರೆ, ಹಿಂದೆ ಕಳೆದಿರುವ ಮತ್ತು ಮುಂದೆ ಬರಲಿರುವ ಅನೇಕ ದೇಹಗಳಲ್ಲಿ ಚೈತನ್ಯವು ಒಂದೇ ರೀತಿಯಾಗಿರುತ್ತದೆ. ಆದ್ದರಿಂದ ಚೈತನ್ಯವು ಬ್ರಾಹ್ಮಣನಲ್ಲ.
ಉಪನಿಷತ್ :- ತರ್ಹಿ ದೇಹಃ ಬ್ರಾಹ್ಮಣಃ ಇತಿ ಚೇತ್ ತತ್ ನ | ಆಚಾಂಡಾಲಾದಿ ಪರ್ಯಂತಾನಾಮ್ ಮನುಷ್ಯಾಣಾಮ್ ಪಾಂಚಭೌತಿಕತ್ವೇನ ದೇಹಸ್ಯ ಏಕರೂಪತ್ವಾತ್ ಜರಾಮರಣಧರ್ಮಾಧರ್ಮಾದಿ ಸಾಮ್ಯದರ್ಶನಾತ್ ಬ್ರಾಹ್ಮಣಃ ಶ್ವೇತವರ್ಣಃ ಕ್ಷತ್ರಿಯಃ ರಕ್ತವರ್ಣಃ ವೈಷ್ಯಃ ಪೀತವರ್ಣಃ ಶೂದ್ರಃ ಕೃಷ್ಣ ವರ್ಣಃ ಇತಿ ನಿಯಮ ಅಭಾವಾತ್ | ಪಿತ್ರಾದಿ ಶರೀರದಹನೆ ಪುತ್ರಾದೀನಾಮ್ ಬ್ರಹ್ಮಹತ್ಯಾದೋಷ ಪ್ರಸಂಗಾತ್ | ತಸ್ಮಾತ್ ನ ದೇಹಃ ಬ್ರಾಹ್ಮಣಃ ಇತಿ |
ಅರ್ಥ:- ಈ ಶರೀರವು ಬ್ರಾಹ್ಮಣ ಎನ್ನುವುದು ಸರಿಯಲ್ಲ . ಏಕೆಂದರೆ, ಚಾಂಡಾಲನ ವರೆಗೆ ಎಲ್ಲ ಮನುಷ್ಯರ ಶರೀರವು ಭೂಮಿ ಮೊದಲಾದ ಐದುಭೂತಗಳಿಂದ ಉಂಟಾಗಿದೆ. ಅಲ್ಲದೆ ಎಲ್ಲ ಶರೀರದಲ್ಲಿ , ಮುಪ್ಪು, ಮರಣ, ಪಾಪಮತ್ತು ಪಣ್ಯಗಳ ಫಲಗಳು ಒಂದೇ ರೀತಿಯಾಗಿರುತ್ತದೆ. ಬೆಳ್ಳಗಿರುವವನು ಬ್ರಾಹ್ಮಣ , ಕೆಂಪು ಬಣ್ಣವನ್ನು ಹೊಂದಿದವನು ಕ್ಷತ್ರಿಯ, ಅರಿಷಿಣ ಬಣ್ಣವನ್ನು ಹೊಂದಿದವನು ವೈಶ್ಯ , ಕಪ್ಪು ಬಣ್ಣವನ್ನು ಹೊಂದಿದವನು ಶೂದ್ರ ಎನ್ನುವ ನಿಯಮ ಕಾಣಿಸುವುದಿಲ್ಲ. ಹೀಗೆ ಒಪ್ಪಿದರೆ ತಂದೆ ಮೊದಲಾದವರ ಶರೀರವನ್ನು ಸುಟ್ಟಾಗ ಮಗ ಮೊದಲಾದವರಿಗೆ ಬ್ರಹ್ಮಹತ್ಯೆ ದೋಷವು ಬರುತ್ತದೆ. ಆದ್ದರಿಂದ ದೇಹವು ಬ್ರಾಹ್ಮಣನಲ್ಲ.
ಉಪನಿಷತ್ :- ತರ್ಹಿ ಜಾತಿಃ ಬ್ರಾಹ್ಮಣಃ ಇತಿ ಚೇತ್ ತತ್ ನ | ತತ್ರ ಜಾತ್ಯಂತರಜಂತುಷು ಅನೇಕಜಾತಿಸಂಭವಾಃ ಮಹರ್ಷಯಃ ಬಹವಃ ಸಂತಿ | ಋಷ್ಯಶೃಂಗಃ ಮೃಗ್ಯಾಃ ಕೌಶಿಕಃ ಕುಶಾತ್ ಜಾಂಬೂಕಃ ಜಂಬೂಕಾತ್ ವಾಲ್ಮೀಕಃ ವಲ್ಮೀಕಾತ್ ವ್ಯಾಸಃ ಕೈವರ್ತಕಕನ್ಯಾಯಾಮ್ ಶಶಪೃಷ್ಠಾತ್ ಗೌತಮಃ ವಸಿಷ್ಠಃ ಉರ್ವಶ್ಯಾಮ್ ಅಗಸ್ತ್ಯಃ ಕಲಶೆ ಜಾತಃ ಇತಿ ಶ್ರುತತ್ವಾತ್ | ಏತೇಷಾಮ್ ಜಾತಿಮ್ ವಿನಾ ಅಪಿ ಅಗ್ರೆ ಜ್ಞಾನಪ್ರತಿಪಾದಿತಾಃ ಋಷಯಃ ಬಹವಃ ಸಂತಿ | ತಸ್ಮಾತ್ ನ ಜಾತಿಃ ಬ್ರಾಹ್ಮಣಃ ಇತಿ |
ಅರ್ಥ:- ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವನು ಬ್ರಾಹ್ಮಣ ಎನ್ನುವುದು ಸರಿಯಲ್ಲ. ಬೇರೆ ಬೇರೆ ಜಾತಿ ಪ್ರಾಣಿಗಳಲ್ಲಿ ಅನೇಕ ಮಹರ್ಷಿಗಳು ಹುಟ್ಟಿರುವುದು ತಿಳಿದು ಬರುತ್ತದೆ. ಋಷ್ಯಶೃಂಗ ಮಹರ್ಷಿಗಳು ಹೆಣ್ಣು ಜಿಂಕೆಯಲ್ಲಿ , ಕೌಶಿಕ ಮಹರ್ಷಿಗಳು ದರ್ಭೆ ಹುಲ್ಲಿನಲ್ಲಿ, ಜಾಂಬೂಕ ಮಹರ್ಷಿಗಳು ನರಿಯಲ್ಲಿ ,ವಾಲ್ಮೀಕಿ ಮಹರ್ಷಿಗಳು ಹುತ್ತದಲ್ಲಿ, ವ್ಯಾಸ ಮಹರ್ಷಿಗಳು ಬೆಸ್ತರ ಕನ್ಯೆಯಲ್ಲಿ,ಗೌತಮ ಮಹರ್ಷಿಗಳು ಮೊಲದ ಅಂಡಿನಲ್ಲಿ , ವಸಿಷ್ಠ ಮಹರ್ಷಿಗಳು ಉರ್ವಶಿಯಲ್ಲಿ, ಅಗಸ್ತ್ಯ ಮಹರ್ಷಿಗಳು ಕಲಶದಲ್ಲಿ ಹುಟ್ಟಿದ್ದಾರೆಂದು ವೇದವು ಪ್ರತಿಪಾದಿಸುತ್ತದೆ. ಹೀಗೆ ಜಾತಿಯಲ್ಲಿ ಹುಟ್ಟದಿದ್ದರೂ,ಮೊಂದೆ ಜ್ಞಾನವನ್ನು ನಿರೂಪಿಸಿದ ಋಷಿಗಳು ಅನೇಕರು ಇದ್ದಾರೆ. ಆದ್ದರಿಂದ ಒಂದು ವರ್ಣದಲ್ಲಿ ಹುಟ್ಟುವವನು ಬ್ರಾಹ್ಮಣನಲ್ಲ.
ಉಪನಿಷತ್ :- ತರ್ಹಿ ಜ್ಞಾನಮ್ ಬ್ರಾಹ್ಮಣಃ ಇತಿ ಚೇತ್ ತತ್ ನ | ಕ್ಷತ್ರಿಯಾದಯಃ ಅಪಿ ಪರಮಾರ್ಥದರ್ಶಿನಃ ಅಭಿಜ್ಞಾಃ ಬಹವಃ ಸಂತಿ | ತಸ್ಮಾತ್ ನ ಜ್ಞಾನಮ್ ಬ್ರಾಹ್ಮಣಃ ಇತಿ |
ಅರ್ಥ:- ಜ್ಞಾನವು ಬ್ರಾಹ್ಮಣ ಎನ್ನುವುದು ಸರಿಯಲ್ಲ. ಕ್ಷತ್ರಿಯ ಮೊದಲಾದ ವರ್ಣದವರು ತತ್ವ ಜಾನಿಗಳದವರು ಬಹಳ ಇದ್ದಾರೆ. ಜ್ಞಾನವು ಬ್ರಾಹ್ಮಣ ಅಲ್ಲ.
ಉಪನಿಷತ್ :- ತರ್ಹಿ ಕರ್ಮ ಬ್ರಾಹ್ಮಣಃ ಇತಿ ಚೇತ್ ತತ್ ನ | ಸರ್ವೇಷಾಮ್ ಪ್ರಾಣಿನಾಮ್ ಪ್ರಾರಬ್ಧಸಂಚಿತಾಗಾಮಿಕರ್ಮಸಾಧರ್ಮ್ ಯದರ್ಶನಾತ್ ಕರ್ಮಾಭಿಪ್ರೇರಿತಾಃ ಸಂತಃ ಜನಾಃ ಕ್ರಿಯಾಮ್ ಕುರ್ವಂತಿ ಇತಿ | ತಸ್ಮಾತ್ ನ ಕರ್ಮ ಬ್ರಾಹ್ಮಣಃ ಇತಿ |
ಅರ್ಥ:- ಕರ್ಮವು ಬ್ರಾಹ್ಮಣ ಎನ್ನುವುದು ಸರಿಯಲ್ಲ, ಎಲ್ಲ ಪ್ರಾಣಿಗಳಿಗೆ ಪ್ರಾರಬ್ಧ,ಸಂಚಿತ,ಆಗಾಮಿ ಕರ್ಮಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಕರ್ಮವು ಬ್ರಾಹ್ಮಣ ಅಲ್ಲ.
ಉಪನಿಷತ್ :- ತರ್ಹಿ ಧಾರ್ಮಿಕಃ ಬ್ರಾಹ್ಮಣಃ ಇತಿ ಚೇತ್ ತತ್ ನ | ಕ್ಷತ್ರಿಯಾದಯಃ ಹಿರಣ್ಯದಾತಾರಃ ಬಹವಃ ಸಂತಿ | ತಸ್ಮಾತ್ ನ ಧಾರ್ಮಿಕಃ ಬ್ರಾಹ್ಮಣಃ ಇತಿ |
ಅರ್ಥ:- ದಾನ ಮಾಡುವವನು ಬ್ರಾಹ್ಮಣ ಎನ್ನುವುದು ಸರಿಯಲ್ಲ. ಕ್ಷತ್ರಿಯ ಮೊದಲಾದ ವರ್ಣದವರು , ಸುವರ್ಣ ಮೊದಲಾದವ್ಯ್ಗಳನ್ನು ದಾನಮಾಡಿದವರು ಅನೇಕರು ಇದ್ದಾರೆ.ದಾನವು ಬ್ರಾಹ್ಮಣ ಅಲ್ಲ.
ಉಪನಿಷತ್ :- ತರ್ಹಿ ಕಃ ವಾ ಬ್ರಾಹ್ಮಣಃ ನಾಮ | ಯಃ ಕಶ್ಚಿತ್ ಆತ್ಮಾನಮ್ ಅದ್ವಿತೀಯಮ್ಜಾತಿಗುಣಕ್ರಿಯಾಹೀನಮ್ ಷಡೂರ್ಮಿಷಡ್ಭಾವ ಇತಿ ಆದಿ ಸರ್ವ ದೋಷರಹಿತಮ್ ಸತ್ಯಜ್ಞಾನಾನಂದಾನಂತಸ್ವರೂಪಮ್ ಸ್ವಯಮ್ ನಿರ್ವಿಕಲ್ಪಮ್ ಅಶೇಷಕಲ್ಪಾಧಾರಮ್ ಅಶೇಷಭೂತಾಂತರ್ಯಾಮಿತ್ವೇನ ವರ್ತಮಾನಮ್ ಅಂತಃ ಬಹಿಃ ಚ ಆಕಾಶವತ್ ಅನುಸ್ಯೂತಮ್ ಅಖಂಡಾನಂದಸ್ವಭಾವಮ್ ಅಪ್ರಮೇಯಮ್ ಅನುಭವೈಕವೇದ್ಯಮ್ ಅಪರೋಕ್ಷತಯಾ ಭಾಸಮಾನಮ್ ಕರತಲಾಮಲಕವತ್ ಸಾಕ್ಷಾತ್ ಅಪರೋಕ್ಷೀಕೃತ್ಯ ಕೃತಾರ್ಥತಯಾ ಕಾಮರಾಗಾದಿ ದೋಷರಹಿತಃ ದಂಬಾಹಂಕಾರಾದಿಭಿಃ ಅಸಂಸ್ಪೃಷ್ಟಚೇತಾ ವರ್ತತೆ ಏವಮ್ ಉಕ್ತಲಕ್ಷಣಃ ಯಃ ಸಃ ಏವ ಬ್ರಾಹ್ಮಣಃ ಇತಿ ಶ್ರುತಿಸ್ಮೃತಿಪುರಾಣೇತಿಹಾಸಾನಾಮ್ ಅಭಿಪ್ರಾಯಃ | ಅನ್ಯಥಾ ಹಿ ಬ್ರಾಹ್ಮಣತ್ವಸಿದ್ಧಿಃ ನಾಸ್ತಿ ಏವ | ಸಚ್ಚಿದಾನಂದಾತ್ಮಾನಮ್ ಅದ್ವಿತೀಯಮ್ಬ್ರಹ್ಮ ಭಾವಯೇತ್ ಆತ್ಮಾನಮ್ ಸಚ್ಚಿದಾನಂದಮ್ ಬ್ರಹ್ಮ ಭಾವಯೇತ್ ಇತಿ ಉಪನಿಷತ್ ||
ಅರ್ಥ:- ಹಾಗಾದರೆ ಬ್ರಾಹ್ಮಣನೆಂದಯಾರು? ಯಾರು ,ತನ್ನ ಆತ್ಮವನ್ನು, ಒಬ್ಬನೇ ಆದ, ಜಾತಿ, ಗುಣ , ಕ್ರಿಯೆ ಇವುಗಳಿಂದ ರಹಿತವಾದ, ಹಸಿವು , ನೀರಡಿಕೆ, ಶೋಕ, ಮೋಹ, ಮುಪ್ಪು, ಮರಣ ಈ ಆರರಿಂದ ಮತ್ತು ಹುಟ್ಟುವದು,ಇರುವದು,ಬೆಳೆಯುವದು,ಪರಿ ಣಾಮವನ್ನು ಹೊಂದುವದು, ಸಡಿಲಗೊಳ್ಳುವದು , ನಾಶವಾಗುವದು ಎನ್ನುವ ವಿಕಾರಗಳಿಲ್ಲದ, ಎಲ್ಲ ದೋಷಗಳಿಂದ ಮುಕ್ತವಾದ, ಸತ್ಯ,ಜ್ಞಾನ,ಆನಂದ,ಅನಂತ,ಸ್ವರೂಪವಾ ದ, ಸ್ವತಃ ವಿಕಲ್ಪವಿಲ್ಲದ, ಎಲ್ಲ ಕಾರ್ಯಗಳಿಗೆ ಆಧಾರವಾದ,ಎಲ್ಲ ಜೀವಿಗಳಲ್ಲಿ ಅಂತರ್ಯಾಮಿಯಾದ, ಒಳಗೆ ಹೊರಗೆ, ಆಕಾಶದಂತೆ ವ್ಯಾಪಿಸಿರುವ , ಅಖಂಡಾನಂದಸ್ವಭಾವದ, ತಿಳಿದುಕೊಳ್ಳಲು ಸಾದ್ಯವಿಲ್ಲದ, ಕೇವಲ ಅನುಭವ ಮಾತ್ರದಿಂದ ತಿಳಿಯಲು ಸಾಧ್ಯವಾದ,ಪ್ರತ್ಯಕ್ಷವಾಗಿ ಗೋಚರಿಸುವ, ಅಂಗೈ ಮೇಲಿರುವ ನೆಲ್ಲಿ ಕಾಯಿಯಂತೆ, ಪ್ರತ್ಯಕ್ಷವಾಗಿ ತಿಳಿದು, ಧನ್ಯತೆಯನ್ನು ಹೊಂದಿ, ಕಾಮವೇ ಮೊದಲಾದ ದೋಷಗಳಿಲ್ಲದೆ, ಆಡಂಬರ, ಅಹಂಕಾರ ಮೊದಲಾದ ದೋಷಗಳಿಲ್ಲದೆ ಶುದ್ಧ ಮನಸ್ಸಿನವನಾಗಿ,ಇರುತ್ತಾನೋ ಅವನು ಬ್ರಾಹ್ಮಣನು. ಹೀಗೆ ವೇದಗಳಲ್ಲಿ, ಸ್ಮಿತಿಗಳಲ್ಲಿ, ಇತಿಹಾಸಗಳಲ್ಲಿ, ಪ್ರತಿಪಾದಿಸಲ್ಪಟ್ಟಿದೆ. ಮತ್ತೊಂದು ರೀತಿಯಲ್ಲಿ ಬ್ರಾಹ್ಮಣ್ಯದ ಸಿದ್ಧಿಯು ಆಗುವದಿಲ್ಲ. ಇಲ್ಲಿಗೆ ಉಪನಿಷತ್ತು ಮುಗಿದಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ