*ಶ್ರೀಹತ್ಯ ಸಂಕರಿಯ ಸಲ್ಪ*
ಓಂದಾನೊಂದು ಕಾಲದಲ್ಲಿ ನರಕಲೋಕಾಧಿಪತಿಯಾದ ಯಮಧರ್ಮರಾಜ ಶ್ರೀಹರಿಯ ದರ್ಶನಾರ್ಥವಾಗಿ ವೈಕುಂಟಕ್ಕೆ ಹೊರಟನು.
ವೈಕುಂಟದ ಮುಖದ್ವಾರದ ಮುಂದೆ ದ್ವಾರಪಾಲಕನು ಯಮಧರ್ಮರಾಜ ಬಂದ ವಿಚಾರವನ್ನು ಗರುಡದೇವರಿಗೆ ತಿಳಿಸಿದ. ಗರುಡದೇವರು ವೈಕುಂಟದೊಳಗೆ ಪ್ರವೇಶಮಾಡಿ ಯಮಧರ್ಮರಾಜನ ಆಗಮನವನ್ನು ತಿಳಿಸಿದ.
ಶ್ರೀಹರಿಯು ದರ್ಶನವು ಕೊಡಲು ಅಪ್ಪಣೆ ಕೊಟ್ಟ. ಗರುಡದೇವರು ಹಿಂತಿರುಗಿ ಬರುವಾಗ ಒಂದು ವಿಶೇಷವಾದ ಸನ್ನಿವೇಶವನ್ನು ಗುರ್ತಿಸಿದ. ಅದೇನಂದರೇ ನರಕಲೋಕಾಧಿಪತಿಯಾದ ಯಮಧರ್ಮರಾಯ ತದೇಕವಾಗಿ ವೈಕುಂಟದ ಮುಖದ್ವಾರಮೇಲೆ ಕುಳಿತಿದ್ದ ಒಂದು ಪಕ್ಷಿಯನ್ನು ನೋಡುತ್ತಿದ್ದ.
ಗರುಡದೇವರು ಶ್ರೀಹರಿಯನ್ನು ಭೇಟಿಯಾಗಲು ಶ್ರೀಹರಿಯ ಸಮ್ಮತಿಯನ್ನು ಯಮಧರ್ಮರಾಯನಿಗೆ ತಿಳಿಸಿದ. ಯಮಧರ್ಮರಾಯ ವೈಕುಂಟುದ್ವಾರದಿಂದ ಶ್ರೀಹರಿಯನ್ನು ದರ್ಶಿಸಲು ಒಳಗೆ ಪ್ರವೇಶಮಾಡಿದ.
ಗರುಡದೇವರು ಶ್ರೀಹರಿಯನ್ನು ಭೇಟಿಯಾಗಲು ಶ್ರೀಹರಿಯ ಸಮ್ಮತಿಯನ್ನು ಯಮಧರ್ಮರಾಯನಿಗೆ ತಿಳಿಸಿದ. ಯಮಧರ್ಮರಾಯ ವೈಕುಂಟುದ್ವಾರದಿಂದ ಶ್ರೀಹರಿಯನ್ನು ದರ್ಶಿಸಲು ಒಳಗೆ ಪ್ರವೇಶಮಾಡಿದ.
ಗರುಡದೇವರು ಕ್ಷಣಕಾಲ ತಾನು ನೋಡಿದ ಸನ್ನಿವೇಶದಬಗ್ಗೆ ಆಲೋಚನೆ ಮಾಡಿದ.
“ಯಮಧರ್ಮರಾಯ ಏಕೆ ಆ ಪಕ್ಷಿಯನ್ನು ತದೇಕ ದೃಷ್ಠಿಯಿಂದ ನೋಡುತ್ತಿದ್ದ?”
ಅಂದರೇ ಅದರ ಪ್ರಾಣವನ್ನು ತೆಗೆದು ಕೊಂಡೊಯ್ಯಲು ಆಲೋಚನೆ ಮಾಡುತ್ತಿದ್ದಾನೆಂದು ಗ್ರಹಿಸಿದ.
ಗರುಡದೇವರು
“ಹೇಗಾದರೂ ಈ ಪಕ್ಷಿಯುನ್ನು ರಕ್ಷಣೆ ಮಾಡಬೇಕೆಂದು ಸಂಕಲ್ಪಿಸಿದ. ವೇಗವಾಗಿ ಆ ಪಕ್ಷಿಯನ್ನು ಹಿಡಿದು ಸಪ್ತ ಸಮುದ್ರಗಳನ್ನು ದಾಟಿ, ಒಂದು ವೃಕ್ಷದಮೇಲೆ ಇಟ್ಟ. ವೇಗವಾಗಿ ಯಾಥಾಸ್ಥಾನಕ್ಕೆ ಸೇರಿದ.
ಯಮಧರ್ಮರಾಯ ಶ್ರೀಹರಿಯಜೊತೆ ಸಂಭಾಷಣೆ ಮಾಡಿ ಹಿಂತಿರುಗಿ ನರಕಲೋಕಕ್ಕೆ ಪ್ರಯಾಣವಾದ. ವೈಕುಂಠದ ಮುಖ ದ್ವಾರಕ್ಕೆ ಬಂದು ಮುಖದ್ವಾರದಮೇಲಿನ ಭಾಗವನ್ನು ನೋಡಲಾರಂಭಿಸಿದ.
ಗರುಡದೇವರು
“ಏನು ನೋಡುತ್ತಿರುವಿರಿ?” ಅಂತ ಪ್ರಶ್ನೆಮಾಡಿದ.
“ಯಮಧರ್ಮರಾಯ ಏಕೆ ಆ ಪಕ್ಷಿಯನ್ನು ತದೇಕ ದೃಷ್ಠಿಯಿಂದ ನೋಡುತ್ತಿದ್ದ?”
ಅಂದರೇ ಅದರ ಪ್ರಾಣವನ್ನು ತೆಗೆದು ಕೊಂಡೊಯ್ಯಲು ಆಲೋಚನೆ ಮಾಡುತ್ತಿದ್ದಾನೆಂದು ಗ್ರಹಿಸಿದ.
ಗರುಡದೇವರು
“ಹೇಗಾದರೂ ಈ ಪಕ್ಷಿಯುನ್ನು ರಕ್ಷಣೆ ಮಾಡಬೇಕೆಂದು ಸಂಕಲ್ಪಿಸಿದ. ವೇಗವಾಗಿ ಆ ಪಕ್ಷಿಯನ್ನು ಹಿಡಿದು ಸಪ್ತ ಸಮುದ್ರಗಳನ್ನು ದಾಟಿ, ಒಂದು ವೃಕ್ಷದಮೇಲೆ ಇಟ್ಟ. ವೇಗವಾಗಿ ಯಾಥಾಸ್ಥಾನಕ್ಕೆ ಸೇರಿದ.
ಯಮಧರ್ಮರಾಯ ಶ್ರೀಹರಿಯಜೊತೆ ಸಂಭಾಷಣೆ ಮಾಡಿ ಹಿಂತಿರುಗಿ ನರಕಲೋಕಕ್ಕೆ ಪ್ರಯಾಣವಾದ. ವೈಕುಂಠದ ಮುಖ ದ್ವಾರಕ್ಕೆ ಬಂದು ಮುಖದ್ವಾರದಮೇಲಿನ ಭಾಗವನ್ನು ನೋಡಲಾರಂಭಿಸಿದ.
ಗರುಡದೇವರು
“ಏನು ನೋಡುತ್ತಿರುವಿರಿ?” ಅಂತ ಪ್ರಶ್ನೆಮಾಡಿದ.
ಯಮಧರ್ಮರಾಯ ಕ್ಷಣಕಾಲ ಆಲೋಚನೆ ಮಾಡಿ ನಗುನಗುತ್ತಾ ಹೊರಟ. ಗರುಡದೇವರು ಯಮಧರ್ಮರಾಯನ ನಗುತ್ತಿರುವುದು ಅರ್ಥವಾಗದೇ ಮತ್ತೆ ಪ್ರಶ್ನೆ ಮಾಡಿದ.
“ನಿಮ್ಮ ಈ ನಗುವಿಗೆ ಅರ್ಥವೇನು?"
“ನಿಮ್ಮ ಈ ನಗುವಿಗೆ ಅರ್ಥವೇನು?"
ಆಗ ಯಮಧರ್ಮರಾಯ ವಿಷಯವನ್ನು ವಿವರಿಸಿದ.
“ಜಗದೊಡೆಯನಾದ ಶ್ರೀಹರಿ ಮುಖದ್ವಾರದ ಮೇಲೆ ಕುಳಿತಿದ್ದ ಪಕ್ಷಿ ಸಪ್ತಸಮುದ್ರಗಳ ಆಚೆ ಒಂದು ವೃಕ್ಷದಮೇಲೆ ಕುಳಿತಿದ್ದ ಬೆಕ್ಕಿಗೆ ಆಹಾರವಾಗಬೇಕೆಂದು ಸಂಕಲ್ಪಿಸಿದ್ದ”, ಆದರೆ
ಅದು ಹೇಗೆ ನಡಯುತ್ತೆ ಅಂತ ಆಲೋಚನೆ ಮಾಡಿದ್ದೆ. ಭಗವಂತ ಆ ಕೆಲಸವನ್ನು ನಿನ್ನ ಮುಖಾಂತರವಾಗಿ ಮಾಡಿಸಿದ್ದಾನೆ ಅಂತ ನಗುನಗುತ್ತಾ ಹೇಳಿದ.
“ಜಗದೊಡೆಯನಾದ ಶ್ರೀಹರಿ ಮುಖದ್ವಾರದ ಮೇಲೆ ಕುಳಿತಿದ್ದ ಪಕ್ಷಿ ಸಪ್ತಸಮುದ್ರಗಳ ಆಚೆ ಒಂದು ವೃಕ್ಷದಮೇಲೆ ಕುಳಿತಿದ್ದ ಬೆಕ್ಕಿಗೆ ಆಹಾರವಾಗಬೇಕೆಂದು ಸಂಕಲ್ಪಿಸಿದ್ದ”, ಆದರೆ
ಅದು ಹೇಗೆ ನಡಯುತ್ತೆ ಅಂತ ಆಲೋಚನೆ ಮಾಡಿದ್ದೆ. ಭಗವಂತ ಆ ಕೆಲಸವನ್ನು ನಿನ್ನ ಮುಖಾಂತರವಾಗಿ ಮಾಡಿಸಿದ್ದಾನೆ ಅಂತ ನಗುನಗುತ್ತಾ ಹೇಳಿದ.
ಗರುಡದೇವರು ಭಗವಂತನ ಸಂಕಲ್ಪ ಅರಿಯದೇ ತಾನು ರಕ್ಷಣೆ ಮಾಡಬೇಕೆಂದು ಮಾಡಿದ ಕಾರ್ಯವನ್ನು ಯಮಧರ್ಮರಾಯನಿಗೆ ವಿವರಿಸಿದ.
ಯಮಧರ್ಮರಾಯ: *"ಭಗವಂತನದು ಸತ್ಯ ಸಂಕಲ್ಪ, ನಾವೆಲ್ಲರೂ ನಿಮಿತ್ತ ಮಾತ್ರರು.* *ಕಾಲಧರ್ಮವನ್ನು-ಸೃಷ್ಠಿಧರ್ಮವನ್ನು ನಿಯಂತ್ರಣಮಾಡುವಶಕ್ತಿ ಭಗವಂತನಿಗೆ ಮಾತ್ರ ಇದೆ. ಇದು ತಿಳಿದು ನಮಗೆ ನಿರ್ದೇಶಿಸಿದ ಕಾರ್ಯವನ್ನು ಮಾಡಬೇಕೆಂದು”*
ಗರುಡದೇವರಿಗೆ ಹಿತೋಪದೇಶ ಮಾಡಿ ಹೊರಟ.
ನಮ್ಮ ನಿತ್ಯಜೀವನದಲ್ಲಿ ಕೂಡಾ ನಮ್ಮ ಪ್ರಾರಭ್ದಕ್ಕೆ ತಕ್ಕಂತೆ ಭಗವಂತ ಫಲವನ್ನು ಕೊಡುತ್ತಾನೆ. ಅದನ್ನು ನಿಯಂತ್ರಣೆ ಮಾಡುವಶಕ್ತಿ ಭಗವಂತನಿಗೆ ಮಾತ್ರ ಇದೆ ಬೇರೆ ಯಾರಿಗೂ ಇದು ಸಾಧ್ಯವಿಲ್ಲ. ಆದಕಾರಣ ನಡಯುವದೆಲ್ಲಾ ನಮ್ಮ ಕರ್ಮಕ್ಕೆ ತಕ್ಕಂತೆ ಕಾಲಾನುಗುಣವಾಗಿ ಭಗವಂತ ಫಲಕೊಡುತ್ತಾನೆ.
ಭಗವಂತನಿಗೆ ವ್ಯತಿರೇಕವಾಗಿ ಮನಸ್ಸಿನಲ್ಲಿ ಸಂಕಲ್ಪ ಮಾಡುವುದರಿಂದ ಮನಃ ಶಾಂತಿಗೆ ದೂರವಾಗುತ್ತೇವೆ.
ಗರುಡದೇವರಿಗೆ ಹಿತೋಪದೇಶ ಮಾಡಿ ಹೊರಟ.
ನಮ್ಮ ನಿತ್ಯಜೀವನದಲ್ಲಿ ಕೂಡಾ ನಮ್ಮ ಪ್ರಾರಭ್ದಕ್ಕೆ ತಕ್ಕಂತೆ ಭಗವಂತ ಫಲವನ್ನು ಕೊಡುತ್ತಾನೆ. ಅದನ್ನು ನಿಯಂತ್ರಣೆ ಮಾಡುವಶಕ್ತಿ ಭಗವಂತನಿಗೆ ಮಾತ್ರ ಇದೆ ಬೇರೆ ಯಾರಿಗೂ ಇದು ಸಾಧ್ಯವಿಲ್ಲ. ಆದಕಾರಣ ನಡಯುವದೆಲ್ಲಾ ನಮ್ಮ ಕರ್ಮಕ್ಕೆ ತಕ್ಕಂತೆ ಕಾಲಾನುಗುಣವಾಗಿ ಭಗವಂತ ಫಲಕೊಡುತ್ತಾನೆ.
ಭಗವಂತನಿಗೆ ವ್ಯತಿರೇಕವಾಗಿ ಮನಸ್ಸಿನಲ್ಲಿ ಸಂಕಲ್ಪ ಮಾಡುವುದರಿಂದ ಮನಃ ಶಾಂತಿಗೆ ದೂರವಾಗುತ್ತೇವೆ.
*ಹರಿಯಸಂಕಲ್ಪವೇ ಸತ್ಯಸಂಕಲ್ಪ.*
*ಯತೋಧರ್ಮಃ ತತೋಜಯಃ
*ಯತೋಧರ್ಮಃ ತತೋಜಯಃ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ