ಪ್ರಾಚೀನ ಭಾರತೀಯರ ಕಾಲಗಣನಾ ಪದ್ಧತಿ ಅತ್ಯಂತ ಅದ್ಭುತವಾದದ್ದು. ಆರ್ಯಭಟ, ವರಹಾಮಿಹಿರ, ಭಾಸ್ಕರಾಚಾರ್ಯರೇ ಮುಂತಾದ ಹಲವಾರು ಮಂದಿ ಪ್ರಸಿದ್ಧ ಖಗೋಳ ಶಾಸ್ತ್ರಜ್ಞರು ಆಗಿ ಹೋಗಿದ್ದಾರೆ. ಈಗಿನಂತೆ ಅತ್ಯಾಧುನಿಕ ಉಪಕರಣಗಳಿರದಿದ್ದ ಕಾಲದಲ್ಲಿ ಅವರು ಸೂರ್ಯ, ಚಂದ್ರ, ಗ್ರಹ-ತಾರೆಗಳು ಹಾಗೂ ಭೂಮಿಯ ಚಲನೆಗಳನ್ನು ಹಾಗೂ ಪ್ರಕೃತಿಯಲ್ಲಿ, ಆಗುವ ಬದಲಾವಣೆಗಳನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಿದ್ದನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಸೂರ್ಯ ಹಾಗೂ ಭೂಮಿಯ ಚಲನೆಗಳಲ್ಲಿ ಆಗುತ್ತಿರುವ ಸೂಕ್ಷ್ಮಾತಿಸೂಕ್ಷ್ಮ ಬದಲಾವಣೆಗಳನ್ನೂ ಅವರು ಗಮನಿಸಿದ್ದರು.ಅವುಗಳಲ್ಲಿ ವಿಷುವ ಹಾಗೂ ಅಯನ ಬಿಂದುಗಳಲ್ಲಾಗುತ್ತಿರುವ ವ್ಯತ್ಯಾಸವೂ ಒಂದು.
ಭೂಮಿಗೆ ಮೂರು ತರದ ಚಲನೆಗಳಿವೆ. ಒಂದು ದೈನಂದಿನ ಅಕ್ಷ ಚಲನೆ. ಇದರಿಂದ ಹಗಲು -ರಾತ್ರಿಗಳಾಗುತ್ತವೆ. ಕಾಲಮಾನದ ಮೂಲಘಟಕವಾದ ಅಹೋರಾತ್ರಿ ಅಥವಾ ದಿನವನ್ನು ಇದರಿಂದ ಅಳೆಯಲಾಗುತ್ತದೆ. ಎರಡನೇಯದು ವಾರ್ಷಿಕ ಕಕ್ಷಾಚಲನೆ. ಭೂಮಿ ತನ್ನ ಅಕ್ಷದ ಸುತ್ತ ದಿನಕ್ಕೊಂದು ಸುತ್ತಿನಂತೆ ಉರುಳುತ್ತಾ, ೩೬೫.೨೫ ದಿನಗಳಲ್ಲಿ ಸೂರ್ಯನ ಸುತ್ತ ದೀರ್ಘ ವೃತ್ತಾಕಾರ ಕಕ್ಷೆಯಲ್ಲಿ ಒಂದು ಪ್ರದಕ್ಷಿಣೆ ಹಾಕುತ್ತದೆ. ಈ ಅವಧಿ ವರ್ಷ ಎಂದಾಗುತ್ತದೆ. ಇನ್ನು, ಮೂರನೇ ರೀತಿಯ ಚಲನೆಯೇ ಅಯನ ಚಲನೆ. ಸೂರ್ಯ ಅಂತರಿಕ್ಷದಲ್ಲಿ ಚಲಿಸುವಂತೆ ಕಾಣುವ ಕಾಲ್ಪನಿಕ ವೃತ್ತವೇ ಕ್ರಾಂತಿವೃತ್ತ. ಕ್ರಾಂತಿವೃತ್ತದ ಸಮತಲವು, ವಿಷುವದ್ ವೃತ್ತದ ಸಮತಲಕ್ಕೆ ಸಮನಾಗಿಲ್ಲ. ಬದಲಾಗಿ ೨೩.೫ಂ ವಾಲಿಕೊಂಡಿದೆ. ಹೀಗೆ ಭೂಮಿ ಓಲಾಡುತ್ತಾ ಸೂರ್ಯನಿಗೆ ಪ್ರದಕ್ಷಿಣೆ ಹಾಕುವಾಗ ಸೂರ್ಯನಿಗೆ ವಿಷುವದ್ ವೃತ್ತದ ಉತ್ತರಕ್ಕೂ, ದಕ್ಷಿಣಕ್ಕೂ ಚಲಿಸಿದಂತೆ ಕಾಣುತ್ತದೆ. ಕ್ರಾಂತಿವೃತ್ತ ಹಾಗೂ ವಿಷುವದ್ ವೃತ್ತಗಳು ಒಂದನ್ನೊಂದು ಛೇದಿಸುವ ಬಿಂದುಗಳೇ ವಿಷುವದ್ ಬಿಂದುಗಳು. ಸೂರ್ಯನು ಕ್ರಾಂತಿವೃತ್ತದಲ್ಲಿನ ತನ್ನ ವಾರ್ಷಿಕ ಚಲನೆಯಲ್ಲಿ ಮಾರ್ಚ್ ೨೨ರ ಸುಮಾರಿಗೆ ವಸಂತ ವಿಷುವದಲ್ಲೂ ಸೆಪ್ಟೆಂಬರ್೨೩ರಂದು ಶರದ್ ವಿಷುವದಲ್ಲೂ ಇರುತ್ತಾನೆ. ವಾಸ್ತವದಲ್ಲಿ ಮಾರ್ಚ್ ೨೨ರಂದೇ ಯುಗಾದಿ. ಏಕೆಂದರೆ ಈ ವಸಂತ ವಿಷುವ ಬಿಂದು ಮೇಷರಾಶಿಯ ಮೊದಲ ಬಿಂದುವಾಗಿರುವುದರಿಂದ. ಅದೇ ರೀತಿ ಈಗ ಸೂರ್ಯನು ಡಿಸೆಂಬರ್ ೨೨ರಂದು ಅತ್ಯಂತ ದಕ್ಷಿಣದ ರೇಖಾಂಶದಲ್ಲಿರುತ್ತಾನೆ. ಇದು ಧನು ರಾಶಿಯಲ್ಲಿದೆ. ಈಗ ಆಕಾಶವನ್ನು ದುರ್ಬೀನಿನಿಂದ ವೀಕ್ಷಿಸಿದರೆ ಈ ವಿದ್ಯಮಾನ ಗೋಚರವಾಗುತ್ತದೆ. ಹಾಗಾಗಿ ವಾಸ್ತವದಲ್ಲಿ ದೃಗ್ಗಣಿತ ಪಂಚಾಂಗದ ಪ್ರಕಾರ ಉತ್ತರಾಯಣ ಪರ್ವಕಾಲ ಡಿಸೆಂಬರ್ ೨೨ರಂದೇ ಪ್ರಾರಂಭವಾಗಿದೆ. ಹೀಗೆ ಮಕರ
ಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲದ ಸಂಬಂಧ ಕಳಚಿಹೋಗಿದೆ.
ಭೂಮಿಯ ಮೂರನೇ ಚಲನೆಯ ಕಾರಣದಿಂದ ಅಯನಗಳ ಆರಂಭ - ಅಂತ್ಯಗಳ ಕಾಲ ಶಾಶ್ವತವಾಗಿ ನಿಶ್ಚಿತವಲ್ಲ. ಈ ಮೂರನೇ ಚಲನೆಯ ಕಾರಣದಿಂದ ಕ್ರಾಂತಿವೃತ್ತದ ಮೇಷ ಬಿಂದುವು (ವಸಂತ ವಿಷುವ - ಯುಗಾದಿ) ೭೧.೬ ವರ್ಷಗಳಿಗೆ ಒಂದು ದಿನದಷ್ಟು ಹಿಂದಕ್ಕೆ ಸರಿಯುತ್ತದೆ. ಆದ್ದರಿಂದಲೇ ಋತುಗಳಿಗೆ ಸೂರ್ಯನು ಕಾರಣನಾಗಿದ್ದರೂ, ಸೌರಮಾನಕ್ಕೂ ಋತುಗಳ ಆವರ್ತನ ಕಾಲಕ್ಕೂ ಈ ವ್ಯತ್ಯಾಸ ಬರುತ್ತದೆ. ಅಂದರೆ ಒಂದು ದಿನಕ್ಕೆ ಸುಮಾರು ೫೧ ಸೆಕೆಂಡುಗಳಷ್ಟು ವ್ಯತ್ಯಾಸ ಬರುತ್ತದೆ. ಇದನ್ನು ಅಯನಾಂಶ ಎನ್ನುತ್ತಾರೆ. ಜಾತಕ ತಯಾರಿಸುವಾಗ ಈ ಅಯನಾಂಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಪಂಚಾಂಗದಲ್ಲೂ ಸಾಯನ ಮತ್ತು ನಿರಯನ ಎಂಬ ಎರಡು ವಿಧಗಳಿವೆ. ಭೂಮಿಯ ನಿಧಾನ ಗತಿಯ, ನಮ್ಮ ಗಮನಕ್ಕೆ ಬಾರದ, ಈ ಚಲನೆಯ ಒಂದು ಆವರ್ತಕ್ಕೆ, ಅಂದರೆ ಈ ಹಿಮ್ಮುಖ ಚಲನೆ ವಿಷುವದ್ ವೃತ್ತದ ಮೇಲೆ ಪೂರ್ತಿ ಒಂದು ಸುತ್ತು ಬರಲು, ೨೬ ಸಾವಿರ ವರ್ಷಗಳು ಬೇಕಾಗುತ್ತವೆ!
ಸಾವಿರ ವರ್ಷಗಳ ಹಿಂದೆ ಇದ್ದ ವರಹಾ ಮಿಹಿರ, ಭಾಸ್ಕರಾಚಾರ್ಯ ಮುಂತಾದವರು ಅಯನಾಂಶವನ್ನು ಸ್ಪಷ್ಟವಾಗಿ ಗುರ್ತಿಸಿ, ೭೧ ವರ್ಷಕ್ಕೊಮ್ಮೆ ಪಂಚಾಂಗದಲ್ಲಿ ಒಂದು ದಿನ ಹಿಂದಕ್ಕೆ ಹಾಕಿ ‘ಬೀಜ ಸಂಸ್ಕಾರ’ ಮಾಡುತ್ತಿರಬೇಕೆಂದು ವಿಧಿಸಿದ್ದರು. ಆದರೆ ಅವರ ಕಾಲಾನಂತರ ಇಂದಿನವರೆಗೂ ಈ ಪ್ರಾಕೃತಿಕ ಬದಲಾವಣೆಯನ್ನು ಕಾಲಗಣನೆಯಲ್ಲಿ ಪರಿಷ್ಕಾರ ಮಾಡದೇ ಇದ್ದುದರಿಂದ ಪಂಚಾಂಗ ರಚನೆಯಲ್ಲಿ ಈ ಗೊಂದಲ ಕಂಡುಬರುತ್ತದೆ. ಆರ್ಯಭಟೀಯ ಪಂಚಾಂಗದಲ್ಲಿ ಪ್ರತಿವರ್ಷ ಜನವರಿ ೧೪ರಂದು ಅಂದರೆ ಮಕರ ಸಂಕ್ರಾಂತಿಯಂದೇ ಉತ್ತರಾಯಣರಂಭ ಎಂದು ನಮೂದಿಸಿದ್ದರೆ, ದೃಗ್ಗಣಿತ ರೀತ್ಯಾ ರಚಿತವಾದ ಪಂಚಾಂಗಗಳಲ್ಲಿ ಡಿಸೆಂಬರ್೨೨ರಂದು ಉತ್ತರಾಯಣಾರಂಭ ಎಂದಿದೆ. ಗ್ರಹಣಗಳ ಕರಾರುವಾಕ್ಕಾದ ಕಾಲನಿರ್ಣಯ ಮಾಡಿ ಮುಂಚಿತವಾಗಿ ಹೇಳಬೇಕಾದರೆ ಪ್ರಸ್ತುತ ಆಕಾಶದಲ್ಲಿ ದೃಷ್ಟಿಗೋಚರವಾಗುವ ವಿದ್ಯಮಾನಗಳ ಆಧಾರದ ಮೇಲೆ ಅಂದರೆ ದೃಗ್ಗಣಿತ ರೀತ್ಯಾ ಲೆಕ್ಕಾಚಾರ ಮಾಡಬೇಕಾಗುತ್ತದೆ. ಮಿಕ್ಕಂತೆ ಮಕರ ಸಂಕ್ರಾಂತಿ ಮುಂತಾದ ಧಾರ್ಮಿಕ ಆಚರಣೆಗಳನ್ನು ಆರ್ಯಭಟೀಯ ಪಂಚಾಂಗ ರೀತ್ಯಾ ಆಚರಿಸಿದರೆ ತಪ್ಪೇನೂ ಇಲ್ಲ ಎಂದು ಸಂಪ್ರದಾಯಸ್ಥರ ಅಭಿಪ್ರಾಯ.
ಭಾರತೀಯ ಈ ಆಚರಣೆ, ಸಂಪ್ರದಾಯಗಳು ಪ್ರಕೃತಿಯಲ್ಲಿ ನಡೆಯುವ ವಿದ್ಯಮಾನಗಳನ್ನಾಧರಿಸಿಯೇ ರಚಿತವಾಗಿವೆ. ಆದ್ದರಿಂದ ಪ್ರಕೃತಿಯಲ್ಲಿ ಬದಲಾವಣೆ ಉಂಟಾಗುವಾಗ ಪಂಚಾಂಗಗಳೂ ಅದೇ ರೀತಿ ಪರಿಷ್ಕರಿಸಲ್ಪಡಬೇಕಾದುದು ವೈಜ್ಞಾನಿಕ ಮನೋಧರ್ಮ. ಆಚಾರ್ಯರು, ಮಠಾಧೀಶರುಗಳು, ಸಾಧು-ಸಂತರು ಮುಂತಾದ ಧಾರ್ಮಿಕ ಮುಖಂಡರು, ಖಗೋಳ ಶಾಸ್ತ್ರಜ್ಞರು, ಪಂಚಾಂಗಕರ್ತರು, ಪುರೋಹಿತರು, ಜ್ಯೋತಿಷಿಗಳು, ಆಧುನಿಕ ಖಗೋಳ ವಿಜ್ಞಾನಿಗಳು ಒತ್ತಟ್ಟಿಗೆ ಸೇರಿ ಈ ಪರಿಷ್ಕರಣೆ ಮಾಡಬೇಕಾದುದು ಅಗತ್ಯ. ಇಲ್ಲವಾದಲ್ಲಿ ಈ ಗೊಂದಲ ಮುಂದುವರಿದು ವೈಜ್ಞಾನಿಕವಾದ ಭಾರತೀಯರ ಪಂಚಾಂಗ, ಸಂಪ್ರದಾಯಗಳು ಅಪಹಾಸ್ಯಕ್ಕೆ ಒಳಗಾಗುವುದರಲ್ಲಿ ಆಶ್ಚರ್ಯವೇನಿಲ್ಲ.
ಹಿಂದಿನವರು ವೈಜ್ಞಾನಿಕ ಸಂಶೋಧನೆ, ಸಾಧನೆಗಳೊಂದಿಗೆ, ಆಚರಣೆ, ಸಂಪ್ರದಾಯ, ನಂಬಿಕೆಗಳನ್ನು ಜೋಡಿಸಿದರು. ಸಾಮಾನ್ಯ ಜನರಿಗೂ ರಹಸ್ಯ ಹಾಗೂ ಕ್ಲಿಷ್ಟವಾದ ವೈಜ್ಞಾನಿಕ ಸತ್ಯಗಳನ್ನು ಮನದಟ್ಟು ಮಾಡಲು, ಕಥೆಗಳು, ಉದಾಹರಣೆಗಳನ್ನು ಜೋಡಿಸಿದರು. ಆದರೆ ಇಂದು ಬಾಹ್ಯಾಚರಣೆ, ಆಡಂಬರಗಳ ಗೌಜಿಯಲ್ಲಿ ಅವುಗಳ ಮೂಲ ಹಿನ್ನೆಲೆ, ಚಿಂತನೆಗಳು ಮರೆಯಾಗಿವೆ. ಹಾಗಾಗಿ ಆಧುನಿಕ ಪೀಳಿಗೆಯವರಿಗೆ ಅವುಗಳೆಲ್ಲ ಕಂದಾಚಾರಗಳೆಂಬ ಭಾವನೆ ನಿರ್ಮಾಣವಾಗಿದೆ. ಮತ್ತೆ ಮಂತ್ರಗಳ ಮೂಲ ಕಲ್ಪನೆಗಳನ್ನು ಪ್ರಚುರ ಪಡಿಸುವ ಅಗತ್ಯವಿದೆ. ಒಟ್ಟು ೯ ಬಗೆಯ ಕಾಲಮಾನಗಳನ್ನು ಪೂರ್ವಿಕರು ರಚಿಸಿದ್ದಾರೆ. ಕೆಲವು ವಿಶಾಲ ವಿಶ್ವದ ಅಥವಾ ಬ್ರಹ್ಮಾಂಡದ ಅಳತೆ ಮಾಡಲು ಉಪಯುಕ್ತವಾದರೆ ಕೆಲವು ವರ್ತಮಾನ ಜೀವನದಲ್ಲಿ ಉಪಯೋಗಿಸಲ್ಪಡಲು ಯೋಗ್ಯವಾದವುಗಳು. ಅವುಗಳಲ್ಲಿ ಸೌರಮಾನ, ಚಾಂದ್ರಮಾನಗಳು ಮುಖ್ಯವಾದವುಗಳು. ಅಯನವೂ ಕಾಲಾಂಗವೇ. ವರ್ಷದಲ್ಲಿ ಎರಡು ಅಯನಗಳು. ಒಂದೊಂದು ಅಯನದಲ್ಲಿ ಮೂರು ಋತುಗಳು. ಎರಡು ಚಾಂದ್ರಮಾಸಗಳಿಗೆ ಒಂದು ಋತು. ಋತುಮಾನ ಬದಲಾವಣೆಗೆ ಸೂರ್ಯ ಕಾರಣನಾದರೂ ಚಾಂದ್ರಮಾನದೊಂದಿಗೆ ಋತುಗಳನ್ನು ಜೋಡಿಸಿರುವುದು ಅಚ್ಚರಿಯ ವಿಷಯ. ಅಧಿಕ ಮಾಸ ಜೋಡಣೆಯಿಂದ ಈ ವ್ಯತ್ಯಾಸ ಸರಿಹೋಗುತ್ತದೆ.
ದೇವಮಾನದೊಂದಿಗೆ ಅಯನಗಳನ್ನು ಜೋಡಿಸಲಾಗಿದೆ. ದೇವತೆಗಳ ನಿವಾಸ ಉತ್ತರಧ್ರುವಗಳಾಚೆ ಎಂದು ನಂಬಿಕೆ. ಉತ್ತರ ಧ್ರುವದಲ್ಲಿ ೬ ತಿಂಗಳು ಅಂದರೆ ಉತ್ತರಾಯಣ ಪೂರ್ತಿ ಹಗಲು ಮತ್ತು ೬ ತಿಂಗಳು ಅಂದರೆ ದಕ್ಷಿಣಾಯನ ಪೂರ್ತಿ ರಾತ್ರಿ. ಆಂದರೆ ಮಾನವರ ೬ ಸೌರಮಾಸಗಳು ದೇವತೆಗಳ ಒಂದು ಹಗಲು, ಹಾಗೂ ದಕ್ಷಿಣಾಯನದ ೬ ಮಾಸಗಳು ದೇವತೆಗಳ ಒಂದು ರಾತ್ರಿ. ಮಾನವರ ಎರಡು ಅಯನಗಳ ಒಂದು ವರ್ಷ ದೇವತೆಗಳ ಒಂದು ಅಹೋರಾತ್ರಿ ಅಥವಾ ದಿನ. ಮಾನವರ ೩೬೦ ಸೌರ ವರ್ಷಗಳಿಗೆ ಒಂದು ದಿವ್ಯ ವರ್ಷ ಇಂಥ ೧೨೦೦ ದಿವ್ಯ ವರ್ಷಗಳು ಒಂದು ಕಲಿಯುಗದ ಅವಧಿ )೧೨೦೦೩೬೦ = ೪,೩೨,೦೦೦ ಸೌರ ವರ್ಷಗಳು). ಅದೇ ರೀತಿ ೧೨,೦೦೦ ದೇವ ವರ್ಷಗಳು. ಒಂದು ಮಹಾಯುಗದ ಅವಧಿ (೧೨,೦೦೦೩೬೦ = ೪೩,೨೦,೦೦೦ ಸೌರ ವರ್ಷಗಳು). ಹೀಗೆ ಸೌರವರ್ಷ , ಅಯನ, ಯುಗಮಾನಗಳೊಳಗೆ ಹೇಗೆ ಸಂಬಂಧ ಜೋಡಿಸಲ್ಪ್ಪಟ್ಟಿದೆ ನೋಡಿ. ನಿಜಕ್ಕೂ ಅದ್ಭುತ!
ನಿತ್ಯ ಊಜೆ, ಸಂಧ್ಯೆ, ಸ್ನಾನ, ಹೋಮ ಯಾವುದೇ ಕಾರ್ಯ ಮಾಡುವ ಮುನ್ನ ಸಂಕಲ್ಪ ಅಥವಾ ದೇಶ - ಕಾಲ (ಟೈಮ್ ಎಂಡ್ ಸ್ಪೇಸ್) ಸಂಕೀರ್ತನೆ ಮಾಡುವ ರೂಢಿ ಇಂದಿಗೂ ನಡೆದುಕೊಂಡು ಬಂದಿದೆ. ಇದರಲ್ಲಿ ಅಡಗಿರುವ ಬ್ರಹ್ಮಾಂಡದ ವಿಸ್ತಾರ, ಕಾಲದ ವಿಸ್ತಾರ ಅದ್ಭುತವಾದದ್ದು. ಆದರೆ ಅದನ್ನು ಜಪಿಸುವ ಅನೇಕರೀಗೆ ಈ ಗಣಿತ, ಅಗಾಧವಾದ ಕಾಲಮಾನ, ಬ್ರಹ್ಮಾಂಡದ ವಿಸ್ತಾರ, ಖಗೋಳ ವಿಜ್ಞಾನದ ಅರಿವೇ ಇರುವುದಿಲ್ಲ. ಯಾಂತ್ರಿಕವಾಗಿ ಜಪಿಸಲ್ಪಡುತ್ತಿದೆ.
ಹಿಂದಿನದೆಲ್ಲವೂ ಸರಿ, ಒಳ್ಳೆಯದು ಎಂದು ಹಾಡಿ, ಹೊಗಳಿ, ವೈಭವೀಕರಿಸುವುದಾಗಲೀ ಇಂದಿನ ಆಧುನಿಕ ವಿಜ್ಞಾನದಲ್ಲಿ ದೋಷಗಳಿವೆ ಎಂದು ತರ್ಕಿಸುವುದಾಗಲಿ ಈ ಲೇಖನದ ಉದ್ದೇಶವಲ್ಲ. ಆದರೆ ನಶಿಸಿ ಹೋಗುತ್ತಿರುವ ಅದ್ಭುತವಾದ ಪ್ರಾಚೀನ ಭಾರತೀಯ ಪರಂಪರೆ, ವಿಜ್ಞಾನಗಳ ಅರಿವು ಇಂದಿನ ಎಳೆ ಪೀಳಿಗೆಯವರಿಗೆ ಆಗಬೇಕು ಎಂಬುದೇ ಇಲ್ಲಿನ ಉದ್ದೇಶ. ಹಿಂದು ಚಿಂತನೆ ವಿಜ್ಞಾನಕ್ಕೆ ಎಂದೂ ವಿರೋಧಿಯಾಗಿರಲಿಲ್ಲ
ಭೂಮಿಗೆ ಮೂರು ತರದ ಚಲನೆಗಳಿವೆ. ಒಂದು ದೈನಂದಿನ ಅಕ್ಷ ಚಲನೆ. ಇದರಿಂದ ಹಗಲು -ರಾತ್ರಿಗಳಾಗುತ್ತವೆ. ಕಾಲಮಾನದ ಮೂಲಘಟಕವಾದ ಅಹೋರಾತ್ರಿ ಅಥವಾ ದಿನವನ್ನು ಇದರಿಂದ ಅಳೆಯಲಾಗುತ್ತದೆ. ಎರಡನೇಯದು ವಾರ್ಷಿಕ ಕಕ್ಷಾಚಲನೆ. ಭೂಮಿ ತನ್ನ ಅಕ್ಷದ ಸುತ್ತ ದಿನಕ್ಕೊಂದು ಸುತ್ತಿನಂತೆ ಉರುಳುತ್ತಾ, ೩೬೫.೨೫ ದಿನಗಳಲ್ಲಿ ಸೂರ್ಯನ ಸುತ್ತ ದೀರ್ಘ ವೃತ್ತಾಕಾರ ಕಕ್ಷೆಯಲ್ಲಿ ಒಂದು ಪ್ರದಕ್ಷಿಣೆ ಹಾಕುತ್ತದೆ. ಈ ಅವಧಿ ವರ್ಷ ಎಂದಾಗುತ್ತದೆ. ಇನ್ನು, ಮೂರನೇ ರೀತಿಯ ಚಲನೆಯೇ ಅಯನ ಚಲನೆ. ಸೂರ್ಯ ಅಂತರಿಕ್ಷದಲ್ಲಿ ಚಲಿಸುವಂತೆ ಕಾಣುವ ಕಾಲ್ಪನಿಕ ವೃತ್ತವೇ ಕ್ರಾಂತಿವೃತ್ತ. ಕ್ರಾಂತಿವೃತ್ತದ ಸಮತಲವು, ವಿಷುವದ್ ವೃತ್ತದ ಸಮತಲಕ್ಕೆ ಸಮನಾಗಿಲ್ಲ. ಬದಲಾಗಿ ೨೩.೫ಂ ವಾಲಿಕೊಂಡಿದೆ. ಹೀಗೆ ಭೂಮಿ ಓಲಾಡುತ್ತಾ ಸೂರ್ಯನಿಗೆ ಪ್ರದಕ್ಷಿಣೆ ಹಾಕುವಾಗ ಸೂರ್ಯನಿಗೆ ವಿಷುವದ್ ವೃತ್ತದ ಉತ್ತರಕ್ಕೂ, ದಕ್ಷಿಣಕ್ಕೂ ಚಲಿಸಿದಂತೆ ಕಾಣುತ್ತದೆ. ಕ್ರಾಂತಿವೃತ್ತ ಹಾಗೂ ವಿಷುವದ್ ವೃತ್ತಗಳು ಒಂದನ್ನೊಂದು ಛೇದಿಸುವ ಬಿಂದುಗಳೇ ವಿಷುವದ್ ಬಿಂದುಗಳು. ಸೂರ್ಯನು ಕ್ರಾಂತಿವೃತ್ತದಲ್ಲಿನ ತನ್ನ ವಾರ್ಷಿಕ ಚಲನೆಯಲ್ಲಿ ಮಾರ್ಚ್ ೨೨ರ ಸುಮಾರಿಗೆ ವಸಂತ ವಿಷುವದಲ್ಲೂ ಸೆಪ್ಟೆಂಬರ್೨೩ರಂದು ಶರದ್ ವಿಷುವದಲ್ಲೂ ಇರುತ್ತಾನೆ. ವಾಸ್ತವದಲ್ಲಿ ಮಾರ್ಚ್ ೨೨ರಂದೇ ಯುಗಾದಿ. ಏಕೆಂದರೆ ಈ ವಸಂತ ವಿಷುವ ಬಿಂದು ಮೇಷರಾಶಿಯ ಮೊದಲ ಬಿಂದುವಾಗಿರುವುದರಿಂದ. ಅದೇ ರೀತಿ ಈಗ ಸೂರ್ಯನು ಡಿಸೆಂಬರ್ ೨೨ರಂದು ಅತ್ಯಂತ ದಕ್ಷಿಣದ ರೇಖಾಂಶದಲ್ಲಿರುತ್ತಾನೆ. ಇದು ಧನು ರಾಶಿಯಲ್ಲಿದೆ. ಈಗ ಆಕಾಶವನ್ನು ದುರ್ಬೀನಿನಿಂದ ವೀಕ್ಷಿಸಿದರೆ ಈ ವಿದ್ಯಮಾನ ಗೋಚರವಾಗುತ್ತದೆ. ಹಾಗಾಗಿ ವಾಸ್ತವದಲ್ಲಿ ದೃಗ್ಗಣಿತ ಪಂಚಾಂಗದ ಪ್ರಕಾರ ಉತ್ತರಾಯಣ ಪರ್ವಕಾಲ ಡಿಸೆಂಬರ್ ೨೨ರಂದೇ ಪ್ರಾರಂಭವಾಗಿದೆ. ಹೀಗೆ ಮಕರ
ಸಂಕ್ರಾಂತಿ ಮತ್ತು ಉತ್ತರಾಯಣ ಪುಣ್ಯಕಾಲದ ಸಂಬಂಧ ಕಳಚಿಹೋಗಿದೆ.
ಭೂಮಿಯ ಮೂರನೇ ಚಲನೆಯ ಕಾರಣದಿಂದ ಅಯನಗಳ ಆರಂಭ - ಅಂತ್ಯಗಳ ಕಾಲ ಶಾಶ್ವತವಾಗಿ ನಿಶ್ಚಿತವಲ್ಲ. ಈ ಮೂರನೇ ಚಲನೆಯ ಕಾರಣದಿಂದ ಕ್ರಾಂತಿವೃತ್ತದ ಮೇಷ ಬಿಂದುವು (ವಸಂತ ವಿಷುವ - ಯುಗಾದಿ) ೭೧.೬ ವರ್ಷಗಳಿಗೆ ಒಂದು ದಿನದಷ್ಟು ಹಿಂದಕ್ಕೆ ಸರಿಯುತ್ತದೆ. ಆದ್ದರಿಂದಲೇ ಋತುಗಳಿಗೆ ಸೂರ್ಯನು ಕಾರಣನಾಗಿದ್ದರೂ, ಸೌರಮಾನಕ್ಕೂ ಋತುಗಳ ಆವರ್ತನ ಕಾಲಕ್ಕೂ ಈ ವ್ಯತ್ಯಾಸ ಬರುತ್ತದೆ. ಅಂದರೆ ಒಂದು ದಿನಕ್ಕೆ ಸುಮಾರು ೫೧ ಸೆಕೆಂಡುಗಳಷ್ಟು ವ್ಯತ್ಯಾಸ ಬರುತ್ತದೆ. ಇದನ್ನು ಅಯನಾಂಶ ಎನ್ನುತ್ತಾರೆ. ಜಾತಕ ತಯಾರಿಸುವಾಗ ಈ ಅಯನಾಂಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಪಂಚಾಂಗದಲ್ಲೂ ಸಾಯನ ಮತ್ತು ನಿರಯನ ಎಂಬ ಎರಡು ವಿಧಗಳಿವೆ. ಭೂಮಿಯ ನಿಧಾನ ಗತಿಯ, ನಮ್ಮ ಗಮನಕ್ಕೆ ಬಾರದ, ಈ ಚಲನೆಯ ಒಂದು ಆವರ್ತಕ್ಕೆ, ಅಂದರೆ ಈ ಹಿಮ್ಮುಖ ಚಲನೆ ವಿಷುವದ್ ವೃತ್ತದ ಮೇಲೆ ಪೂರ್ತಿ ಒಂದು ಸುತ್ತು ಬರಲು, ೨೬ ಸಾವಿರ ವರ್ಷಗಳು ಬೇಕಾಗುತ್ತವೆ!
ಸಾವಿರ ವರ್ಷಗಳ ಹಿಂದೆ ಇದ್ದ ವರಹಾ ಮಿಹಿರ, ಭಾಸ್ಕರಾಚಾರ್ಯ ಮುಂತಾದವರು ಅಯನಾಂಶವನ್ನು ಸ್ಪಷ್ಟವಾಗಿ ಗುರ್ತಿಸಿ, ೭೧ ವರ್ಷಕ್ಕೊಮ್ಮೆ ಪಂಚಾಂಗದಲ್ಲಿ ಒಂದು ದಿನ ಹಿಂದಕ್ಕೆ ಹಾಕಿ ‘ಬೀಜ ಸಂಸ್ಕಾರ’ ಮಾಡುತ್ತಿರಬೇಕೆಂದು ವಿಧಿಸಿದ್ದರು. ಆದರೆ ಅವರ ಕಾಲಾನಂತರ ಇಂದಿನವರೆಗೂ ಈ ಪ್ರಾಕೃತಿಕ ಬದಲಾವಣೆಯನ್ನು ಕಾಲಗಣನೆಯಲ್ಲಿ ಪರಿಷ್ಕಾರ ಮಾಡದೇ ಇದ್ದುದರಿಂದ ಪಂಚಾಂಗ ರಚನೆಯಲ್ಲಿ ಈ ಗೊಂದಲ ಕಂಡುಬರುತ್ತದೆ. ಆರ್ಯಭಟೀಯ ಪಂಚಾಂಗದಲ್ಲಿ ಪ್ರತಿವರ್ಷ ಜನವರಿ ೧೪ರಂದು ಅಂದರೆ ಮಕರ ಸಂಕ್ರಾಂತಿಯಂದೇ ಉತ್ತರಾಯಣರಂಭ ಎಂದು ನಮೂದಿಸಿದ್ದರೆ, ದೃಗ್ಗಣಿತ ರೀತ್ಯಾ ರಚಿತವಾದ ಪಂಚಾಂಗಗಳಲ್ಲಿ ಡಿಸೆಂಬರ್೨೨ರಂದು ಉತ್ತರಾಯಣಾರಂಭ ಎಂದಿದೆ. ಗ್ರಹಣಗಳ ಕರಾರುವಾಕ್ಕಾದ ಕಾಲನಿರ್ಣಯ ಮಾಡಿ ಮುಂಚಿತವಾಗಿ ಹೇಳಬೇಕಾದರೆ ಪ್ರಸ್ತುತ ಆಕಾಶದಲ್ಲಿ ದೃಷ್ಟಿಗೋಚರವಾಗುವ ವಿದ್ಯಮಾನಗಳ ಆಧಾರದ ಮೇಲೆ ಅಂದರೆ ದೃಗ್ಗಣಿತ ರೀತ್ಯಾ ಲೆಕ್ಕಾಚಾರ ಮಾಡಬೇಕಾಗುತ್ತದೆ. ಮಿಕ್ಕಂತೆ ಮಕರ ಸಂಕ್ರಾಂತಿ ಮುಂತಾದ ಧಾರ್ಮಿಕ ಆಚರಣೆಗಳನ್ನು ಆರ್ಯಭಟೀಯ ಪಂಚಾಂಗ ರೀತ್ಯಾ ಆಚರಿಸಿದರೆ ತಪ್ಪೇನೂ ಇಲ್ಲ ಎಂದು ಸಂಪ್ರದಾಯಸ್ಥರ ಅಭಿಪ್ರಾಯ.
ಭಾರತೀಯ ಈ ಆಚರಣೆ, ಸಂಪ್ರದಾಯಗಳು ಪ್ರಕೃತಿಯಲ್ಲಿ ನಡೆಯುವ ವಿದ್ಯಮಾನಗಳನ್ನಾಧರಿಸಿಯೇ ರಚಿತವಾಗಿವೆ. ಆದ್ದರಿಂದ ಪ್ರಕೃತಿಯಲ್ಲಿ ಬದಲಾವಣೆ ಉಂಟಾಗುವಾಗ ಪಂಚಾಂಗಗಳೂ ಅದೇ ರೀತಿ ಪರಿಷ್ಕರಿಸಲ್ಪಡಬೇಕಾದುದು ವೈಜ್ಞಾನಿಕ ಮನೋಧರ್ಮ. ಆಚಾರ್ಯರು, ಮಠಾಧೀಶರುಗಳು, ಸಾಧು-ಸಂತರು ಮುಂತಾದ ಧಾರ್ಮಿಕ ಮುಖಂಡರು, ಖಗೋಳ ಶಾಸ್ತ್ರಜ್ಞರು, ಪಂಚಾಂಗಕರ್ತರು, ಪುರೋಹಿತರು, ಜ್ಯೋತಿಷಿಗಳು, ಆಧುನಿಕ ಖಗೋಳ ವಿಜ್ಞಾನಿಗಳು ಒತ್ತಟ್ಟಿಗೆ ಸೇರಿ ಈ ಪರಿಷ್ಕರಣೆ ಮಾಡಬೇಕಾದುದು ಅಗತ್ಯ. ಇಲ್ಲವಾದಲ್ಲಿ ಈ ಗೊಂದಲ ಮುಂದುವರಿದು ವೈಜ್ಞಾನಿಕವಾದ ಭಾರತೀಯರ ಪಂಚಾಂಗ, ಸಂಪ್ರದಾಯಗಳು ಅಪಹಾಸ್ಯಕ್ಕೆ ಒಳಗಾಗುವುದರಲ್ಲಿ ಆಶ್ಚರ್ಯವೇನಿಲ್ಲ.
ಹಿಂದಿನವರು ವೈಜ್ಞಾನಿಕ ಸಂಶೋಧನೆ, ಸಾಧನೆಗಳೊಂದಿಗೆ, ಆಚರಣೆ, ಸಂಪ್ರದಾಯ, ನಂಬಿಕೆಗಳನ್ನು ಜೋಡಿಸಿದರು. ಸಾಮಾನ್ಯ ಜನರಿಗೂ ರಹಸ್ಯ ಹಾಗೂ ಕ್ಲಿಷ್ಟವಾದ ವೈಜ್ಞಾನಿಕ ಸತ್ಯಗಳನ್ನು ಮನದಟ್ಟು ಮಾಡಲು, ಕಥೆಗಳು, ಉದಾಹರಣೆಗಳನ್ನು ಜೋಡಿಸಿದರು. ಆದರೆ ಇಂದು ಬಾಹ್ಯಾಚರಣೆ, ಆಡಂಬರಗಳ ಗೌಜಿಯಲ್ಲಿ ಅವುಗಳ ಮೂಲ ಹಿನ್ನೆಲೆ, ಚಿಂತನೆಗಳು ಮರೆಯಾಗಿವೆ. ಹಾಗಾಗಿ ಆಧುನಿಕ ಪೀಳಿಗೆಯವರಿಗೆ ಅವುಗಳೆಲ್ಲ ಕಂದಾಚಾರಗಳೆಂಬ ಭಾವನೆ ನಿರ್ಮಾಣವಾಗಿದೆ. ಮತ್ತೆ ಮಂತ್ರಗಳ ಮೂಲ ಕಲ್ಪನೆಗಳನ್ನು ಪ್ರಚುರ ಪಡಿಸುವ ಅಗತ್ಯವಿದೆ. ಒಟ್ಟು ೯ ಬಗೆಯ ಕಾಲಮಾನಗಳನ್ನು ಪೂರ್ವಿಕರು ರಚಿಸಿದ್ದಾರೆ. ಕೆಲವು ವಿಶಾಲ ವಿಶ್ವದ ಅಥವಾ ಬ್ರಹ್ಮಾಂಡದ ಅಳತೆ ಮಾಡಲು ಉಪಯುಕ್ತವಾದರೆ ಕೆಲವು ವರ್ತಮಾನ ಜೀವನದಲ್ಲಿ ಉಪಯೋಗಿಸಲ್ಪಡಲು ಯೋಗ್ಯವಾದವುಗಳು. ಅವುಗಳಲ್ಲಿ ಸೌರಮಾನ, ಚಾಂದ್ರಮಾನಗಳು ಮುಖ್ಯವಾದವುಗಳು. ಅಯನವೂ ಕಾಲಾಂಗವೇ. ವರ್ಷದಲ್ಲಿ ಎರಡು ಅಯನಗಳು. ಒಂದೊಂದು ಅಯನದಲ್ಲಿ ಮೂರು ಋತುಗಳು. ಎರಡು ಚಾಂದ್ರಮಾಸಗಳಿಗೆ ಒಂದು ಋತು. ಋತುಮಾನ ಬದಲಾವಣೆಗೆ ಸೂರ್ಯ ಕಾರಣನಾದರೂ ಚಾಂದ್ರಮಾನದೊಂದಿಗೆ ಋತುಗಳನ್ನು ಜೋಡಿಸಿರುವುದು ಅಚ್ಚರಿಯ ವಿಷಯ. ಅಧಿಕ ಮಾಸ ಜೋಡಣೆಯಿಂದ ಈ ವ್ಯತ್ಯಾಸ ಸರಿಹೋಗುತ್ತದೆ.
ದೇವಮಾನದೊಂದಿಗೆ ಅಯನಗಳನ್ನು ಜೋಡಿಸಲಾಗಿದೆ. ದೇವತೆಗಳ ನಿವಾಸ ಉತ್ತರಧ್ರುವಗಳಾಚೆ ಎಂದು ನಂಬಿಕೆ. ಉತ್ತರ ಧ್ರುವದಲ್ಲಿ ೬ ತಿಂಗಳು ಅಂದರೆ ಉತ್ತರಾಯಣ ಪೂರ್ತಿ ಹಗಲು ಮತ್ತು ೬ ತಿಂಗಳು ಅಂದರೆ ದಕ್ಷಿಣಾಯನ ಪೂರ್ತಿ ರಾತ್ರಿ. ಆಂದರೆ ಮಾನವರ ೬ ಸೌರಮಾಸಗಳು ದೇವತೆಗಳ ಒಂದು ಹಗಲು, ಹಾಗೂ ದಕ್ಷಿಣಾಯನದ ೬ ಮಾಸಗಳು ದೇವತೆಗಳ ಒಂದು ರಾತ್ರಿ. ಮಾನವರ ಎರಡು ಅಯನಗಳ ಒಂದು ವರ್ಷ ದೇವತೆಗಳ ಒಂದು ಅಹೋರಾತ್ರಿ ಅಥವಾ ದಿನ. ಮಾನವರ ೩೬೦ ಸೌರ ವರ್ಷಗಳಿಗೆ ಒಂದು ದಿವ್ಯ ವರ್ಷ ಇಂಥ ೧೨೦೦ ದಿವ್ಯ ವರ್ಷಗಳು ಒಂದು ಕಲಿಯುಗದ ಅವಧಿ )೧೨೦೦೩೬೦ = ೪,೩೨,೦೦೦ ಸೌರ ವರ್ಷಗಳು). ಅದೇ ರೀತಿ ೧೨,೦೦೦ ದೇವ ವರ್ಷಗಳು. ಒಂದು ಮಹಾಯುಗದ ಅವಧಿ (೧೨,೦೦೦೩೬೦ = ೪೩,೨೦,೦೦೦ ಸೌರ ವರ್ಷಗಳು). ಹೀಗೆ ಸೌರವರ್ಷ , ಅಯನ, ಯುಗಮಾನಗಳೊಳಗೆ ಹೇಗೆ ಸಂಬಂಧ ಜೋಡಿಸಲ್ಪ್ಪಟ್ಟಿದೆ ನೋಡಿ. ನಿಜಕ್ಕೂ ಅದ್ಭುತ!
ನಿತ್ಯ ಊಜೆ, ಸಂಧ್ಯೆ, ಸ್ನಾನ, ಹೋಮ ಯಾವುದೇ ಕಾರ್ಯ ಮಾಡುವ ಮುನ್ನ ಸಂಕಲ್ಪ ಅಥವಾ ದೇಶ - ಕಾಲ (ಟೈಮ್ ಎಂಡ್ ಸ್ಪೇಸ್) ಸಂಕೀರ್ತನೆ ಮಾಡುವ ರೂಢಿ ಇಂದಿಗೂ ನಡೆದುಕೊಂಡು ಬಂದಿದೆ. ಇದರಲ್ಲಿ ಅಡಗಿರುವ ಬ್ರಹ್ಮಾಂಡದ ವಿಸ್ತಾರ, ಕಾಲದ ವಿಸ್ತಾರ ಅದ್ಭುತವಾದದ್ದು. ಆದರೆ ಅದನ್ನು ಜಪಿಸುವ ಅನೇಕರೀಗೆ ಈ ಗಣಿತ, ಅಗಾಧವಾದ ಕಾಲಮಾನ, ಬ್ರಹ್ಮಾಂಡದ ವಿಸ್ತಾರ, ಖಗೋಳ ವಿಜ್ಞಾನದ ಅರಿವೇ ಇರುವುದಿಲ್ಲ. ಯಾಂತ್ರಿಕವಾಗಿ ಜಪಿಸಲ್ಪಡುತ್ತಿದೆ.
ಹಿಂದಿನದೆಲ್ಲವೂ ಸರಿ, ಒಳ್ಳೆಯದು ಎಂದು ಹಾಡಿ, ಹೊಗಳಿ, ವೈಭವೀಕರಿಸುವುದಾಗಲೀ ಇಂದಿನ ಆಧುನಿಕ ವಿಜ್ಞಾನದಲ್ಲಿ ದೋಷಗಳಿವೆ ಎಂದು ತರ್ಕಿಸುವುದಾಗಲಿ ಈ ಲೇಖನದ ಉದ್ದೇಶವಲ್ಲ. ಆದರೆ ನಶಿಸಿ ಹೋಗುತ್ತಿರುವ ಅದ್ಭುತವಾದ ಪ್ರಾಚೀನ ಭಾರತೀಯ ಪರಂಪರೆ, ವಿಜ್ಞಾನಗಳ ಅರಿವು ಇಂದಿನ ಎಳೆ ಪೀಳಿಗೆಯವರಿಗೆ ಆಗಬೇಕು ಎಂಬುದೇ ಇಲ್ಲಿನ ಉದ್ದೇಶ. ಹಿಂದು ಚಿಂತನೆ ವಿಜ್ಞಾನಕ್ಕೆ ಎಂದೂ ವಿರೋಧಿಯಾಗಿರಲಿಲ್ಲ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ