ಭಾನುವಾರ, ಜನವರಿ 28, 2018

ಅಂಗಾರ ಅಕ್ಷಂತಿಗಳು ಯಾಕೆ ಹಚ್ಚಿಕೋಬೇಕು?*

ಅಂಗಾರ ಅಕ್ಷಂತಿಗಳು ಯಾಕೆ ಹಚ್ಚಿಕೋಬೇಕು?*
ಇದು ಯಾವಾಗನಿಂತ ಬಂದ ಪದ್ಧತಿ?
*ವಿಷ್ಣೋರಂಗಾರಶೇಷೇಣ ಯೋsಂಗಾನಿ ಪರಿಮಾರ್ಜಯೇತ್|*
*ದುರಿತಾನಿ ವಿನಷ್ಯಂತಿ ವ್ಯಾಧಯೋ ಯಾಂತಿ ಖಂಡಶಃ ||*
ಎಂಬ ಉಕ್ತಿಯಂತೆ ಭಗವಂತನಿಗೆ ಮಾಡಿದ ಧೂಪಾರತಿಯ ಅಂಗಾರವನ್ನು ಹಚ್ಚಿಕೊಳ್ಳುವದರಿಂದ ನಮ್ಮ ಸಮಸ್ತ ದುರಿತಗಳು , ವ್ಯಾಧಿಗಳು ,  ಎಷ್ಟೋ ಕಡಿಮೆ ಆಗುತ್ತವೆ
ಅಕ್ಷತೆ ಊಟವಾಗಿದೆಯೆಂಬ ಸಂಕೇತ ಎಂದು ರಾಘವೇಂದ್ರ ವಿಜಯದಲ್ಲಿ ಉಲ್ಲೇಖವಿದೆ
: ನನಗೆ ತಿಳಿದ ಮಟ್ಟಿಗೆ. . ಪರಮಾತ್ಮನಿಗೆ ಮಾಡಿದ ಧೂಪಾರತಿಯ ಶೇಷವನ್ನು ದೇಹಕ್ಕೆ ಹಚ್ಚಿಕಳ್ಳುವುದರಿಂದ ಪಾಪಗಳ ವಿನಾಶವಾಗುತ್ತದೆ... ಹಾಗೂ...ಹಣೆಯಮೇಲೆ ಗದಾ ರೂಪದಲ್ಲಿ ಹಚ್ಚಿಕಳ್ಳುವುದರಿಂದ ಯಮ ಭಟರು ಸಹಾ ಸಮೀಪ ಬರಲು ಅಂಜುತ್ತಾರೆ ಅಂತ.. ಇನ್ನೂ
ಹಾಗಾಗಿ ಏಕಾದಶಿಯ ದಿವಸ ಕೇವಲ ಅಂಗಾರ ಧಾರಣೆ
ಅದು ಗುರ್ತು.. ಮಾತ್ರ. ಆದರೇ ಇದು ಅನಾದಿಕಾಲದಿಂದ ಬಂದ ಪದ್ಧತಿ.. ಶ್ರೀ ವೆಂಕಟೇಶ್ವರ ಕಲ್ಯಾಣದಲ್ಲಿ ವೆಂಕಪ್ಪ ಈ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಭೇಟೆಗೆ ಹೋದರು ಅಂತ ಕೇಳ್ತೇವೆ
Madhwavijaya da vyakhyana dalli angara akshategala ulleka ide
ಇದಲ್ಲದೇ *ರಾ ರಕ್ಷಾಣೋ ಅಗ್ನೆ ತವ ರಕ್ಷಣೇಭಿಃ* ಎಂಬ ವೇದದ ಉಕ್ತಿಯಂತೆ ಭಗವಂತನಿಗೆ ಅರ್ಪಿಸಿದ ಅಂಗಾರವನ್ನು ನಮ್ಮ ದೇಹದಲ್ಲಿ ಹಚ್ಚಿಕೊಳ್ಳುವದರಿಂದ ತಾವು ಹೇಳಿದಂತೆ ಸಮಸ್ತ ಭಯಗಳಿಂದಲೂ ರಕ್ಷಣೆ ದೊರಕುತ್ತದೆ ,  ಗದಾರೂಪದಲ್ಲಿರೋ ಅಂಗಾರ ಅಕ್ಷತೆಯನ್ನು ನೋಡಿದ ಯಮಭಟರು ನಮ್ಮ ಸಮೀಪ ಬರಲೂ ಸಹ ಅಂಜುತ್ತಾರೆ , ಆದರೆ ಯಾವನ ಹಣೆಯಲ್ಲಿ ಅಂಗಾರ ಅಕ್ಷತೆ ಇಲ್ಲವೋ ಅಂತಹವನ ಹಣೆ ಸ್ಮಶಾನ ದರ್ಶನಕ್ಕೆ ಸಮನಾದುದರಿಂದ ಅಂತಹವನ ಬರಿ ಹಣೆಯನ್ನು ನೋಡಿದಾಕ್ಷಣವೇ ಸಚೇಲ ಸ್ನಾನ ಮಾಡಬೇಕು ಅಂತ ಶಾಸ್ತ್ರದಲ್ಲಿ ತಿಳಿಸಲಾಗಿದೆ
ಅಂಗಾರ ಅಕ್ಷಂತೆ...ಹಚ್ಚಿದರೆ ಊಟಾಯ್ತು ಅಂದುಕೊಳ್ತಾರೆ...ಅದು ಹಾಗಲ್ಲ....
ಅಂ+ ಗಾರ = ಅಂಗಾರ ,
    *ಅಂ ಅನಂತಾಯ ನಮಃ* ಎಂಬ ಉಕ್ತಿಯಂತೆ ಅನಂತ ಶಬ್ದವಾಚ್ಯನಾದ ಭಗವಂತನಿಗೆ ಅರ್ಪಿಸಿದ *ಗಾರ* - ಧೂಪಾರತಿಯ ಶೇಷ ಇದನ್ನು ಊರ್ಧ್ವಮುಖವಾಗಿ  ಹಚ್ಚಿಕೊಳ್ಳುವದರಿಂದ  , ನಮ್ಮ ನಾಭಿಪ್ರದೇಶದಿಂದ ಹೊರಟ ಸುಶುಮ್ನಾ ನಾಡಿ ಬ್ರಹ್ಮ ರಂಧ್ರದವರೆಗೂ ಬಂದು ಸೇರುತ್ತದೆ ಅದು ಊರ್ಧ್ವಮುಖವಾಗಿಯೇ ಚಲನೆ ಆಗ್ತಾಯಿರಬೇಕು ಅಂದರೆ ನಮ್ಮ ಪ್ರಾಣ ಬ್ರಹ್ಮರಂಧ್ರದ ಮೂಲಕ ಹೋಗಲು ಸಾಧ್ಯ , ಭಗವಂತನಿಗೆ ಅರ್ಪಿಸಿದ ಈ ಶೇಷವನ್ನು ಊರ್ಧ್ವಮುಖವಾಗಿ ಹೊಟ್ಟೆಮೇಲೆ ಮೂರು ಕಡೆ ಎದೆಯ ಮೇಲೆ ಎರಡು ಕಡೆ , ಕುತ್ತಿಗೆ , ಹಾಗೂ ಹಣೆಯಿಂದ ಬ್ರಹ್ಮರಂಧ್ರ ಇರುವ ಸ್ಥಳದವರೆಗೂ ಹಚ್ಚಿಕೊಳ್ಳುವದರಿಂದ ಆ ಸುಷುಮ್ನಾ ನಾಡಿಯ ಚಲನೆಯು ಸರಿಯಾದ ಕ್ರಮದಲ್ಲಿ ಇರತ್ತೆ . ಅಕ್ಷತೆಯನ್ನು ಭ್ರೂಮಧ್ಯದಲ್ಲಿ ಹಚ್ಚಿಕೊಳ್ಳುವದರಿಂದ ಅಲ್ಲಿ ನಮ್ಮ ಧೀಶಕ್ತಿಯು ಕೇಂದ್ರೀಕರಣಗೊಂಡು ಮೇಧಾ ಶಕ್ತಿಯು ವೃದ್ಧಿ ಆಗುತ್ತದೆ . ಈ ಕಾರಣದಿಂದ  ಅಂಗಾರ ಅಕ್ಷತೆ ಹಚ್ಚಿಕೊಳ್ಳುವ ಸತ್ಸಂಪ್ರದಾಯ ಇದೆ
ಮಧ್ವವಿಜಯದ 10ನೇಸರ್ಗ
ದ 17ನೇ ಶ್ಲೋಕಕ್ಕೆ ಮಧ್ವವಿಜಯದ ವ್ಯಾಖ್ಯಾನ ಭಾವಪ್ರಕಶಿಕದ ಈ ರೀತಿ ವ್ಯಾಖ್ಯಾನ ಇದೆ .
ಶ್ರೀಮದಾಚಾರ್ಯರು ಗಂಗಾನದಿಯನ್ನು ದಾಟಿಬರುವುದನ್ನು ನೋಡಿ ತುರುಷ್ಕ ರಾಜ ಶ್ರೀಮದಾಚಾರ್ಯ ಜೋತೆ ಸಂಭಾಷಣೆ ಮಾಡುವಾಗ ಅವರ ಹಣೆಯಲ್ಲಿರುವ  ಅಂಗಾರ ಅಕ್ಷತೆಗಳನ್ನು ನೋಡಿ ತಮ್ಮ ಹಣೆಯಲ್ಲಿ ಇರುವುದೇನು. ಎಂದು ಕೇಳಲು ಶ್ರೀಮದಾಚಾರ್ಯರು ನೀವು ಕೈಯಲ್ಲಿ ಗದೆ ಹಿಡಿದರೆ ನಾವು ಅದನ್ನು ಹಣೆಯಲ್ಲಿ ಧರಿಸಿರುವೇವು ಎಂದು ಉತ್ತರಿಸಿದರು .
*ಕಿo ಲಲಾಟೇ ಇತಿ  ಪೃಷ್ಟೋ ರಾಜ್ಞಾಕರೇಣ ಗದಾo ಭವo* *ತೋ ಭಿಭ್ರoತಿ ವಯಂ ಲಲಾಟೇ ಇತ್ಯೂಚೇ ಇತ್ಯಾದ್ಯಶಬ್ದಾರ್ಥಃ*
ಶಸ್ತ್ರಪಾಣಿಗಳು ಕೈಯಲ್ಲಿ ಗದೆ ಹಿಡಿದರೆ ಶಾಸ್ತ್ರಪಾಣಿಗಳು ಹಣೆಯಲ್ಲಿ ಗದೆ (ಅಂಗಾರ ಅಕ್ಷತೆ)
ಧರಿಸಬೇಕು ಎಂಬುದು ಇಲ್ಲಿಯ ಮರ್ಮ   ಅಂಗಾರ ಅಕ್ಷತೆಗಳ ಧಾರಣೆಗೆ ಒಂದು ಅಪೂರ್ವ ಆಧಾರವಾಗಿದೆ ಎಂಬುದನ್ನು ಗಮಿನಿಸಬೇಕು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ