ಭಾನುವಾರ, ಅಕ್ಟೋಬರ್ 29, 2017

ಬದರೀ ಕ್ಷೇತ್ರ ಮಹಾತ್ಮೆ-

ಬದರೀ ಕ್ಷೇತ್ರ ಮಹಾತ್ಮೆ-
ಬದರಿಯು ಭರತಖಂಡದ ಸರ್ವಶ್ರೇಷ್ಠ ಪುಣ್ಯಕ್ಷೇತ್ರ. ಇದರ ವರ್ಣನೆಯು ಮಹಾಭಾರತ, ಹರಿವಂಶ, ಭಾಗವತ ಮೊದಲಾದ ಇತಿಹಾಸ ಪುರಾಣಗಳಲ್ಲಿ ವಿಫುಲವಾಗಿ ಬಂದಿದೆ. ಭರತಖಂಡದ ಆಧ್ಯಾತ್ಮಿಕ ರಾಜಧಾನಿ ಎಂಬುದಾಗಿ ಭಾಗವತವು ವರ್ಣಿಸಿದೆ. ಆದ್ದರಿಂದಲೇ ಬದರಿ ಯಾತ್ರೆಗೆ ಭಾರತದ ಧಾರ್ಮಿಕ ಜನತೆಯಲ್ಲಿ ಅತ್ಯುನ್ನತ ಸ್ಥಾನ ಲಭಿಸಿದೆ.
ಬದರಿಯು ಅತ್ಯುನ್ನತ ಕ್ಷೇತ್ರವಾದುದರಿಂದಲೇ ಇದರ ಸ್ವಾಮಿಯಾದ ನಾರಾಯಣನೇ ಸರ್ವೋತ್ತಮ ದೇವತೆಯಾಗಿರುವನು ಎಂಬುದು ಸಿದ್ಧವಾಗುವುದು. ಇಲ್ಲಿ ಹರಿಯುವ ಗಂಗಾ(ಅಲಕಾನಂದಾ) ನದಿಯು ಜಗತ್ತಿನ ಸರ್ವಶ್ರೇಷ್ಠ ನದಿಯಾಗಿದೆ. ಇದು ಮೂಲತಃ ನಾರಾಯಣನ ಪಾದೋದಕ ಎಂಬುದೂ ಗಮನಾರ್ಹ. ಪ್ರಾಚೀನ ಯುಗಗಳ ಧ್ರುವ, ಪೃಥು, ಪ್ರಿಯವ್ರತ ಮೊದಲಾದ ಸಕಲ ರಾಜರುಗಳೂ, ನಾರದಾದಿಮುನಿಗಳೂ, ಬ್ರಹ್ಮಾದಿದೇವತೆಗಳೂ ಬಹಳವಾಗಿ ಸೇವಿಸಿದ ಕ್ಷೇತ್ರ ಎಂಬುದು ಇದರ ಅಸಾಧಾರಣ ವೈಶಿಷ್ಟ್ಯ.
ಧರ್ಮಪುತ್ರತ್ವೇನ ಅವತರಿಸಿದ ಶ್ರೀಮನ್ನಾರಾಯಣನು ನರನೊಂದಿಗೆ ಲೋಕಶಿಕ್ಷಣಕ್ಕಾಗಿ ತಪಸ್ಸು ಮಾಡಿದ ಸ್ಥಳ.
ಇಂದ್ರಪ್ರೇಷಿತರಾದ ಕಾಮಾದಿಗಳು ಪರಾಜಿತರಾದ ಸ್ಥಳ.
ಉರ್ವಶಿಯು ಶ್ರೀಮನ್ನಾರಾಯಣನಿಂದ ಜನ್ಮ ತಳೆದ ಸ್ಥಳ.
ಶ್ರೀಕೃಷ್ಣರೂಪದಿಂದ ಶ್ರೀಹರಿಯು ಘಂಟಾಕರ್ಣರಿಗೆ ಮೋಕ್ಷವಿತ್ತ ಸ್ಥಳ.
ಪಾಂಡವರು ಅವತರಿಸಿದ ಸ್ಥಳ.
ಪಾಂಡವರು ಬಾಲ್ಯವನ್ನು ಕಳೆದದ್ದಲ್ಲದೇ ತಮ್ಮ ತೀರ್ಥಯಾತ್ರೆಯ ಕಾಲದಲ್ಲೂ ಮಹಾಪ್ರಸ್ಥಾನದ ಸಮಯದಲ್ಲೂ ಸಂದರ್ಶಿಸಿದ ಸ್ಥಳ.
ಶ್ರೀಮದಾಚಾರ್ಯರು ತಮ್ಮ ಪ್ರಥಮ ಬದರೀ ಸಂದರ್ಶನ ಸಮಯದಲ್ಲಿ ಗೀತಾಭಾಷ್ಯವನ್ನು ಸಮರ್ಪಿಸಿದ್ದು,  ಪಾಠ ಹೇಳಿದ್ದು, ೪೮ ದಿನಗಳ ಕಾಲ ಕಾಷ್ಠಮೌನವ್ರತವನ್ನು, ಉಪವಾಸವನ್ನು ಆಚರಿಸಿದ್ದು, ಶಿಷ್ಯರಿಗೆ ಸಂದೇಶವಿತ್ತು ತೆರಳಿದ್ದು, ಶ್ರೀವೇದವ್ಯಾಸದೇವರನ್ನು ಸಂದರ್ಶಿಸಿ ಉತ್ತರಬದರಿಯಿಂದ ಮರಳುತ್ತಲೇ ಬ್ರಹ್ಮಸೂತ್ರಭಾಷ್ಯವನ್ನು ರಚಿಸಿದ್ದು, ಶ್ರೀಸತ್ಯತೀರ್ಥರು ಬ್ರಹ್ಮಸೂತ್ರಭಾಷ್ಯದ ಪ್ರಥಮ ಪ್ರತಿಯನ್ನು ಲೇಖನ ಮಾಡಿದ್ದು ಈ ಪವಿತ್ರ ಸ್ಥಳದಲ್ಲಿ ಎಂದು ಮಧ್ವವಿಜಯವು ವರ್ಣಿಸುವುದು.
ಬದರಿಯಲ್ಲಿ ಪರಸ್ಪರ  ಎದುರಿನಲ್ಲಿ ನಾರಾಯಣಪರ್ವತ ಮತ್ತು ನರಪರ್ವತಗಳು ಇವೆ. ಬದರಿನಾರಾಯಣನ ಗುಡಿ ಇರುವ ಪರ್ವತವೇ ನಾರಾಯಣ ಪರ್ವತ. ಎದುರಿನದು ನರಪರ್ವತ. ನಾರಾಯಣಪರ್ವತದ ಬುಡದಲ್ಲೇ ಅಲಕಾನಂದಾ ನದಿಯು ಭೋರ್ಗರೆಯುತ್ತಾ ಹರಿಯುತ್ತದೆ. ಅದರ ತೀರದಲ್ಲೇ ಶ್ರೀಮನ್ನಾರಾಯಣ ದೇವರ ಧ್ಯಾನಮಗ್ನ ಮೂರ್ತಿ ಇದೆ‌. ದೇವತಾಪರಿವಾರವೂ ಇದೆ.
ಅಲಕಾನಂದೆಯು ಇಲ್ಲಿ ಸ್ಪರ್ಶಿಸಲೂ ಅಸಾಧವೆನ್ನುವಷ್ಟು ತಂಪಾಗಿದೆ. ಅದರ ತೀರದಲ್ಲೇ ತಪ್ತಕುಂಡ ಇರುವುದು ವಿಶೇಷ. ಆಳ, ವೇಗ, ಶೀತದಿಂದಾಗಿ ಅಲಕಾನಂದೆಯ ಸ್ನಾನ ಇಲ್ಲಿ ಸಾಮಾನ್ಯರಿಗೆ ಎಂದೂ ಸಾಧ್ಯವಾಗುವಂತದ್ದಲ್ಲ.
ದೇವಾಲಯದ ಒಳಾಂಗಣವೇ ಅನಂತಮಠ ಎಂದು ಪ್ರಸಿದ್ಧವಾದ ಸ್ಥಳವು. ಶ್ರೀಮದಾಚಾರ್ಯರು ಇಲಿಯೇ ತಂಗಿದ್ದು ಗೀತಾಭಾಷ್ಯವನ್ನು ರಚಿಸಿದರು.
ಬದರಿಯಿಂದ ಸುಮಾರು ಮೂರು ಕಿಮೀ ದೂರದಲ್ಲಿ ಸರಸ್ವತೀ ಮತ್ತು ಅಲಕಾನಂದಾ ನದಿಗಳ ಸಂಗಮಸ್ಥಳವಾದ ಕೇಶವಪ್ರಯಾಗ ಎಂಬ ಅಪೂರ್ವ ಸ್ಥಳ ಇದೆ. ಅದರ ಬಳಿಯಲ್ಲೇ ಬೆಟ್ಟದಲ್ಲಿ ಗಣೇಶ ಗುಹಾ ಎಂಬ  ಸ್ಥಳವಿದ್ದು, ಅದು ಮಹಾಭಾರತವನ್ನು ಗಣೇಶನು ಬರೆದ ಸ್ಥಳ ಎನ್ನುವರು. ಇಲ್ಲಿಂದ ಕೆಲವು ಅಡಿಗಳಷ್ಟು ಎತ್ತರದಲ್ಲಿ ವ್ಯಾಸಗುಹೆ ಇದೆ. ಇದನ್ನು ವ್ಯಾಸಾಶ್ರಮ ಎನ್ನುವರು. ಅಲ್ಲಿಂದ ಮೇಲೆ ಸುಮಾರು ಹತ್ತು ಕಿಮೀಗಳಷ್ಟು ದೂರದಲ್ಲಿ ಮುಚುಕುಂದ ಮಲಗಿದ್ದ, ಕಾಲಯವನ ಭಸ್ಮವಾದ, ಮುಚುಕುಂದನಿಗೆ ಶ್ರೀಕೃಷ್ಣನ ದರ್ಶನವಾದ ಮುಚುಕುಂದಗುಹೆ ಇದೆ.
ಕೇಶವಪ್ರಯಾಗದಲ್ಲಿ ಅಲಕಾನಂದೆಯನ್ನು ಸೇರುವ ಸರಸ್ವತಿಯು ಒಂದು ಕಿಮೀ ಮೊದಲು ಪರ್ವತದಿಂದ ನೂರಾರು ಅಡಿಗಳಷ್ಟು ಕೆಳಕ್ಕೆ ಧುಮುಕುವ ರುದ್ರರಮಣೀಯ ದೃಶ್ಯ ಕಾಣಬಹುದು. ಅದು ಧುಮುಕುವ ಸ್ಥಳದಲ್ಲೇ ಭೀಮಸೇನ ದೇವರು ಮಹಾಪ್ರಸ್ಥಾನಕಾಲದಲ್ಲಿ ಒಂದು ಪರ್ವತಶಿಖರವನ್ನು ಮುರಿದಿಟ್ಟು ಸೇತುವೆಯಾಗಿ ನಿರ್ಮಿಸಿದ ಭೀಮಸೇತು ಎಂಬ ಸೇತುವೆ ಇದೆ. ಜಗತ್ತಿನ ಯಾವ ಪ್ರಸಿದ್ಧ ಜಲಪಾತಕ್ಕೂ ಇಂತಹಾ ಏಕಶಿಲೆಯ ಸೇತುವೆ ಇಲ್ಲ. ಇದು ಭೀಮಸೇನ ದೇವರ ಅಗಾಧ ಬಲ ಮತ್ತು ಜ್ಞಾನಗಳಿಗೆ ಪ್ರತ್ಯಕ್ಷ ಸಾಕ್ಷಿ.
ಈ ಸರಸ್ವತೀ ನದಿಯ ತೀರದ ಸ್ಥಳವೇ ಭಾಗವತದಲ್ಲಿ ಉಲ್ಲೇಖಿಸಲ್ಪಟ್ಟಿರುವ ಶಮ್ಯಾಪ್ರಾಸ ಎಂಬ ಭಾಗವತ ರಚನೆಯ ಪುಣ್ಯಸ್ಥಳ.
ಬದರಿಗಿಂತ ೨೦ ಕಿಮೀ ಮುಂಚಿತವಾಗಿ ಪಾಂಡುಕೇಶ್ವರ ಎಂಬ ಸ್ಥಳವಿದೆ. ಅಲಕಾನಂದಾ ತೀರದ ಈ ಸ್ಥಳದಲ್ಲಿಯೇ, ಪಾಂಡುರಾಜನು ತನಗೆ ಕಿಂದಮೃಷಿಗಳಿಂದ ಶಾಪ ಬಂದ ನಂತರದ ಕಾಲದಲ್ಲಿ ವಾಸಿಸಿದ್ದನು.
ಅಲಕಾನಂದಾ ಸ್ನಾನಘಟ್ಟದ ಬಳಿ ಬ್ರಹ್ಮಕಪಾಲ, ಗರುಡಶಿಲಾ, ನಾರದಶಿಲಾ ಮೊದಲಾದ ಸ್ಥಳಗಳಿವೆ. ಬ್ರಹ್ಮಕಪಾಲದಲ್ಲಿ ಸಮರ್ಪಿಸಲ್ಪಡುವ ಪಿಂಡದಿಂದ ಪಿತೃಗಳಿಗೆ ಸದ್ಗತಿಯು ಪ್ರಾಪ್ತವಾಗುವುದೆಂಬ ಕಾರಣದಿಂದಾಗಿ ಗಯಾಕ್ಷೇತ್ರದ ವಿಷ್ಣುಪಾದ ಶ್ರಾದ್ಧದಂತೆ ಇಲ್ಲಿಯ ಶ್ರಾದ್ಧಕ್ಕೂ ತುಂಬಾ ಮಹತ್ತ್ವವನ್ನು ಶಾಸ್ತ್ರಗಳು ವಿಧಿಸಿವೆ.
ಪ್ರಸಿದ್ಧವಾದ ಎರಡು ಬದರಿಗಳಲ್ಲಿ ವಿಶಾಲಬದರಿಯೇ ನಾರಾಯಣಾಶ್ರಮದ ಬದರಿಯಾಗಿದೆ. ಭಾಗವತಾದಿಗಳಲ್ಲಿ ಇದನ್ನು ವಿಶಾಲಬದರಿ ಎಂದೇ ಕರೆಯಲಾಗಿದೆ. ಶ್ರೀವೇದವ್ಯಾಸದೇವರು ಸಾಕ್ಷಾತ್ತಾಗಿ ನೆಲೆಸಿರುವ ಉತ್ತರಬದರೀ ಎಂಬ ಇನ್ನೂ ಶ್ರೇಷ್ಠವಾದ ಮತ್ತೊಂದು ಬದರಿಯ ಪ್ರಸ್ತಾಪ ಮಹಾಭಾರತದಲ್ಲೂ ಮಹಾಭಾರತತಾತ್ಪರ್ಯನಿರ್ಣಯದಲ್ಲೂ  ಬಂದಿದೆ. ನರಾಗಮ್ಯವಾದ ಆ ಬದರಿಯನ್ನು ಶ್ರೀಮದಾಚಾರ್ಯರು ಎರಡು ಬಾರಿ ಸಂದರ್ಶಿಸಿ ಅಲ್ಲಿ ಶ್ರೀಮನ್ನಾರಾಯಣ ದೇವರಿಂದಲೂ ಅದರ ಸಮೀಪದ ನಾರಾಯಣಾಶ್ರಮದಲ್ಲಿ ಶ್ರೀವೇದವ್ಯಾಸರಿಂದಲೂ ವಿಶೇಷವಾಗಿ ಅನುಗ್ರಹೀತರಾದ ವಿವರವು ಮಧ್ವವಿಜಯದಲ್ಲಿ ಇದೆ. ಅಲ್ಲದೇ ಅವರು ಅದ್ಯಾಪಿ ಈ ಬದರಿಯಲ್ಲಿ ನೆಲೆಸಿರುವರೆಂದೂ ದೇವಮಾನದ ನೂರು ವರ್ಷಗಳ ನಂತರ ತಮ್ಮ ಮೂಲರೂಪದೊಂದಿಗೆ ಐಕ್ಯ ಹೊಂದುವರೆಂದೂ ಶ್ರೀರಾಜರು ತಮ್ಮ ಸರಸಭಾರತೀವಿಲಾಸದಲ್ಲಿ ತಿಳಿಸಿರುವರು.
ಇಷ್ಟೆಲ್ಲಾ ಮಹತ್ತ್ವದ ಪುಣ್ಯಭೂಮಿಯಾದ ಈ ದೇವಭೂಮಿಯಲ್ಲಿ ಕಾಲಿಟ್ಟರೂ ಪುಣ್ಯವೆನ್ನುತ್ತಾರೆ ಬಲ್ಲವರು.

ಗಣಪತಿ ಅಥರ್ವ ಶೀರ್ಷ- ಉಪನಿಷತ್

ಗಣಪತಿ ಅಥರ್ವ ಶೀರ್ಷ- ಉಪನಿಷತ್
ಭಾವಾರ್ಥ ಸಂಗ್ರಹ
(  ಸಂಗ್ರಹಿಸಿದ್ದು  )
ಒ೦ ಭದ್ರ೦ ಕರ್ಣೇಭಿಃ ಶೃಣುಯಾಮ ದೇವಾಃ| ಭದ್ರ೦ ಪಶ್ಯೇಮಾಕ್ಷಭಿರ್ಯಜತ್ರಾಃ|
ಸ್ಥಿರೈರ೦ಗೈರ್ಸ್ತುಷ್ಟುವಾಗ್೦ ಸಸ್ತನೂಭಿಃ
ವ್ಯಶೇಮ ದೇವಹಿತ೦ ಯದಾಯುಃ||
ಓ೦ ಶಾ೦ತಿಃ ಶಾ೦ತಿಃ ಶಾ೦ತಿಃ||
ಓ ದೇವತೆಗಳೇ, ನಾವು ನಮ್ಮ ಕಿವಿಗಳಿ೦ದ ಶುಭವಾದುದನ್ನು ಕೇಳುವ೦ತಾಗಲಿ. ನಮ್ಮ ಕಣ್ಣುಗಳಿ೦ದ ಶುಭವಾದುದನ್ನು ನೋಡುವ೦ತಾಗಲಿ. ಸ್ಥಿರವಾದ ಅ೦ಗಗಳನ್ನು ಹೊ೦ದಿದವರಾಗಿ ನಿನ್ನನ್ನು ಸ್ತುತಿಸುತ್ತ ದೇವನಿ೦ದ ಅನುಗ್ರಹಿಸಲ್ಪಟ್ಟ ಜೀವನಾವಧಿಯನ್ನು ಆನ೦ದಿಸುವ೦ತಾಗಲಿ.
ಓ೦ ಶಾ೦ತಿಃ ಶಾ೦ತಿಃ ಶಾ೦ತಿಃ.
1. ಓ೦ ನಮಸ್ತೇ ಗಣಪತೆಯೇ|
ಓ ಗಣಪತಿ ನಿನಗೆ ನಮಸ್ಕಾರ.
2. ತ್ವಮೇವ ಪ್ರತ್ಯಕ್ಷ೦ ತತ್ವಮಸಿ| ತ್ವಮೇವ ಕೇವಲ೦ ಕರ್ತಾಸಿ| ತ್ವಮೇವ ಕೇವಲ೦
ಧರ್ತಾಸಿ|ತ್ವಮೇವ ಕೇವಲ೦ ಹರ್ತಾಸಿ| ತ್ವಮೇವ ಸರ್ವ೦ ಖಲ್ವಿದ೦ ಬ್ರಹ್ಮಾಸಿ|
ತ್ವ೦ ಸಾಕ್ಷಾದಾತ್ಮಾಸಿ ನಿತ್ಯಮ್||
ನೀನು ಸರ್ವಾತೀತವಾಗಿರುವ ಸತ್ಯವಾಗಿರುವೆ. ಸೃಷ್ಟಿಕರ್ತನೂ ನೀನಾಗಿರುವೆ. ಸಕಲವನ್ನುಸಲಹುವವವನೂ ನೀನೇ. ಸಕಲವನ್ನು ಸ೦ಹರಿಸುವವನೂ ನೀನೇ. ನೀನೇ ಬ್ರಹ್ಮ, ಸಕಲ ವಿಶ್ವವೂ ನೀನೇ. ನೀನೇ ನಿತ್ಯ,ಸತ್ಯವಾದ ಆತ್ಮ. (ಅ೦ತರಾತ್ಮ)
3. ಋತ೦ ವಚ್ಮಿ ಸಾಕ್ಷಾದಾತ್ಮಾಸಿ ನಿತ್ಯ೦| ಸತ್ಯ೦ ವಚ್ಮಿ|-ನಾನು ಋಜುವಾದ್ದನ್ನೇ
ಸತ್ಯವನ್ನೇ ನುಡಿಯುವೆ. (ಋತ೦-ಚಲನಶೀಲ ಸತ್ಯ. (ಸರಿಯಾದದ್ದು), ಸತ್ಯ೦-ಸ್ಥಿರವಾದದ್ದು)
4. ಅವ ತ್ವ೦ ಮಾಮ್| ಅವ ವಕ್ತಾರಮ್| ಅವ ಶ್ರೋತಾರಮ್| ಅವ ಧಾತಾರಮ್|ಅವ ಧಾತಾರಮ್
ನನ್ನನ್ನು ರಕ್ಷಿಸು, ಈ ಮ೦ತ್ರವನ್ನು ಪಠಿಸುವವನನ್ನು ರಕ್ಷಿಸು. ಈ ಮ೦ತ್ರವನ್ನು ಕೇಳುವವನನ್ನು ರಕ್ಷಿಸು. ಜ್ಞಾನ ದಾತಾನನನ್ನುರಕ್ಷಿಸು. ಮ೦ತ್ರವನ್ನು ಧರಿಸುವವನನ್ನು ರಕ್ಷಿಸು.
ಅವಾನೂಚಾನಮವಶಿಷ್ಯಮ್| ಅವ ಪಶ್ಚಾತ್ತಾತ್| ಅವ
ಪುರಸ್ತಾತ್|ಅವೋತ್ತರಾತ್ತಾತ್| ಅವ ದಕ್ಷಿಣಾತ್ತಾತ್| ಅವ ಚೋರ್ಧ್ವಾತ್ತಾತ್| ಅವ
ಧರಾತ್ತಾತ್| ಸರ್ವತೋಮಾ೦ ಪಾಹಿ ಪಾಹಿ ಸಮ೦ತಾತ್||-
ಮ೦ತ್ರ ರಕ್ಷಕನನ್ನು ಸ೦ರಕ್ಷಿಸು. ಪಠಣ ಕ್ರಮ ಅನುಸರಿಸುವವನ್ನು ಕಾಪಾಡು. ಶಿಷ್ಯನನ್ನು ಕಾಪಾಡು. (ನನ್ನ ಪೂಜೆಗೆ, ಕಾರ್ಯಗಳಿಗೆ ಅಡ್ಡಿ ತರುವ ವಿಘ್ನಗಳನ್ನು ನಿವಾರಿಸಿ) ಪಶ್ಚಿಮ ದಿಕ್ಕಿನಲ್ಲಿ ಕಾಪಾಡು. ಪೂರ್ವ ದಿಕ್ಕಿನಲ್ಲಿ ಕಾಪಾಡು. ಉತ್ತರದಿಕ್ಕಿನಲ್ಲಿ ಕಾಪಾಡು. ದಕ್ಷಿಣ ದಿಕ್ಕಿನಲ್ಲಿ ಕಾಪಾಡು. ಮೇಲಿನಿ೦ದ ಕಾಪಾಡು. ಕೆಳಗಿನಿ೦ದ ಕಾಪಾಡು. ನನ್ನನ್ನು ಎಲ್ಲಾ ದಿಕ್ಕುಗಳಿ೦ದಲೂ ಕಾಪಾಡು. ಸಕಲ ಅನಾಹುತಗಳಿ೦ದಲೂ ಕಾಪಾಡು.
5. ತ್ವ೦ ವಾ‍‍ಙ್ಮಯಸ್ತ್ವ೦ ಚಿನ್ಮಯಃ| ತ್ವಮಾನ೦ದಮಯಸ್ತ್ವ೦ ಬ್ರಹ್ಮಮಯಃ|
ತ್ವ೦ಸಚ್ಚಿದಾನ೦ದಾದ್ವಿತೀಯೋಸಿ| ತ್ವ೦ಪ್ರತ್ಯಕ್ಷ೦ಬ್ರಹ್ಮಾಸಿ|
ತ್ವ೦ಜ್ಞಾನಮಯೋವಿಜ್ಞಾನಮಯೋಸಿ|
ನೀನು ವಾಕ್ಸ್ವರೂಪದ ಶುದ್ಧ ಚೇತನನಾಗಿರುವೆ. ನೀನು ಸರ್ವಾತೀತ ಆನ೦ದನಾಗಿರುವೆ. ಬ್ರಹ್ಮನಾಗಿರುವೆ. ಅಸ್ತಿತ್ವವೂ, ಜ್ಞಾನವೂ, ಆನ೦ದವೂ ನೀನೇ ಆಗಿರುವೆ, ನೀನು ಅದ್ವಿತೀಯನು. ನೀನು ಪ್ರತ್ಯಕ್ಷ ಬ್ರಹ್ಮನಾಗಿರುವೆ, ನೀನು ಜ್ಞಾನಮಯನೂ (ಮಾನಸಿಕ ಮಟ್ಟದ) ವಿಜ್ಞಾನಮಯನೂ ಆಗಿದ್ದೀಯ.
6. ಸರ್ವ೦ ಜಗದಿ೦ದ೦ ತ್ವತ್ತೋಜಾಯತೇ| ಸರ್ವ೦ಜಗದಿದ೦ ತ್ವತ್ತಸ್ತಿಷ್ಠತಿ| ಸರ್ವ೦
ಜಗದಿದ೦ ತ್ವಯಿಲಯಮೇಷ್ಯತಿ| ಸರ್ವ೦ ಜಗದಿದ೦ ತ್ವಯಿ ಪ್ರತ್ಯೇತಿ|
ಈ ಸಮಸ್ತ ಜಗತ್ತು ನಿನ್ನಿ೦ದ ಉದ್ಭವವಾಗುತ್ತದೆ. ಈ ಸಮಸ್ತ ಜಗತ್ತು ನಿನ್ನಿ೦ದ ಪೋಷಿಸಲ್ಪಡುತ್ತದೆ. ಈ ಸಮಸ್ತ ಜಗತ್ತು ನಿನ್ನೊಳಗೇ ಲಯವಾಗುತ್ತದೆ. ಈ ಸಮಸ್ತ ಜಗತ್ತುನಿನ್ನೊಳಗೆ ಸಾಯುಜ್ಯವಾಗುವುದು.
ತ್ವ೦ ಭೂಮಿರಾಪೋನಲೋನಿಲೋನಲಃ| ತ್ವ೦ ಚತ್ವಾರಿ ವಾಕ್ಪದಾನಿ|
ನೀನು ಭೂಮಿ, ನೀರು, ಬೆ೦ಕಿ, ಗಾಳಿ, ಆಕಾಶ ಆಗಿದ್ದೀಯ, ನೀನು ನಾಲ್ಕು ಬಗೆಯ ವಾಕ್-ರೂಪನಾಗಿದ್ದೆಯ (ಪರಾ, ಪಶ್ಯ೦ತೀ, ಮಧ್ಯಮಾ, ವೈಖರೀ)
ತ್ವ೦ ಗುಣತ್ರಯಾತೀತಃ| ತ್ವ೦ ದೇಹತ್ರಯಾತೀತಃ| ತ್ವ೦ ಕಾಲತ್ರಯಾತೀತಃ| ತ್ವ೦
ಮೂಲಾಧಾರೇಸ್ಥಿತೋಸಿ ನಿತ್ಯ೦| ತ್ವ೦ ಶಕ್ತಿತ್ರಯಾತ್ಮಕಃ|
ನೀನು ಮೊರು ಗುಣಗಳನ್ನು ಮೀರಿದವನಾಗಿರುವೆ ( ಸತ್ವ, ರಜ, ತಮ). ನೀನು ಮೊರೊ ದೇಹಗಳನ್ನು ಮೀರಿದವನಾಗಿರುವೆ (ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳು). ನೀನು ಮೂರೂ ಕಾಲಗಳನ್ನು ಮೀರಿದವನಾಗಿರುವೆ. ನೀನು ಮೊಲಾಧಾರ ಚಕ್ರದಲ್ಲಿ ನೆಲೆಸಿರುವೆ. ನೀನು ಮೊರು ಶಕ್ತಿಗಳ (ಜ್ಞಾನ, ಸ೦ಕಲ್ಪ, ಕ್ರಿಯೆ) ಸ್ವರೂಪನಾಗಿರುವೆ.
ತ್ವಾ೦ ಯೋಗಿನೋ ಧ್ಯಾಯ೦ತಿ ನಿತ್ಯ೦| -ಯೋಗಿಗಳು ನಿರ೦ತರವಾಗಿ ನಿನ್ನ ಧ್ಯಾನದಲ್ಲಿರುವರು
ತ್ವ೦ ಬ್ರಹ್ಮಾತ್ವ೦ ವಿಷ್ಣುಸ್ತ್ವ೦ ರುದ್ರಸ್ತ್ವ೦ ಇ೦ದ್ರಸ್ತ್ವ೦ ಅಗ್ನಿಸ್ತ್ವ೦
ವಾಯುಸ್ತ್ವ೦ ಸೂರ್ಯಸ್ತ್ವ೦ ಚ೦ದ್ರಮಾಸ್ತ್ವ೦ ಬ್ರಹ್ಮಭೂರ್ಭುವಸ್ವರೋ೦|
ನೀನೇ ಬ್ರಹ್ಮ, ನೀನೇ ವಿಷ್ಣು. ನೀನೇ ರುದ್ರ. ನೀನೇ ಇ೦ದ್ರ (ದೈವೀ ಮನಸ್ಸಿನ ಅಧಿಪತಿ) ನೀನೇ ಅಗ್ನಿ (ಸ೦ಕಲ್ಪ ಶಕ್ತಿಯ ಅಧಿಪತಿ). ನೀನೇ ವಾಯು (ಪ್ರಾಣ ಶಕ್ತಿಯ ಅಧಿಪತಿ). ನೀನೇ ಸೂರ್ಯ ಹಾಗೂ ಚ೦ದ್ರ. ನೀನೇ ಬ್ರಹ್ಮ ಮತ್ತು ಭೂಃ, ಭುವಃ, ಸುವಃ ಈ ಮೊರು ಲೋಕಗಳು.
7. ಗಣಾದಿ೦ ಪೂರ್ವಮುಚ್ಚಾರ್ಯ| ವರ್ಣಾದಿ೦ ತದನ೦ತರ೦| ಅನುಸ್ವಾರಃ ಪರತರಃ|
ಅರ್ಧೇ೦ದುಲಸಿತ೦| ತಾರೇಣ ರುದ್ದಮ್| ಏತತ್ತವ ಮನುಸ್ವರೂಪ೦|
(ಗಣಪತಿ) ಗಣ ಶಬ್ದದ ಮೊದಲಿಗೆ ಬರುವ “ಗ್” ವನ್ನು ಮೊದಲಿಗೆ ಉಚ್ಚರಿಸಿ. ನ೦ತರ “ಅ” ಕಾರವನ್ನು ಉಚ್ಚರಿಸುವುದು. ಕೊನೆಯಲ್ಲಿ ಅರ್ಧ ಚ೦ದ್ರಾಕೃತಿಯಿ೦ದ ಕೂಡಿದ ಅನುಸ್ವಾರವನ್ನು(ಮ್) ಉಚ್ಚರಿಸುವುದು.ಇದು ಓ೦ಕಾರ ಭೂಷಿತವಾಗಿದೆ. “ಗ೦” ಇದು ನಿನ್ನ ಮ೦ತ್ರ ಸ್ವರೂಪ.
8.  ಗಕಾರಃ ಪೂರ್ವರೂಪ೦| ಅಕಾರೋ ಮಧ್ಯಮರೂಪ೦| ಅನುಸ್ವಾರಶ್ಚಾ೦ತ್ಯ ರೂಪ೦|
ಬಿ೦ದುರುತ್ತರ ರೂಪ೦| ನಾದಃ ಸ೦ಧಾನ೦| ಸ೦ಹಿತಾ ಸ೦ಧಿಃ| ಸೈಷಾ ಗಣೇಶ ವಿದ್ಯಾ|
ಗಕಾರವು ಆದಿರೂಪ. ಅಕಾರವು ಮಧ್ಯಮರೂಪ. ಅನುಸ್ವಾರವು ಅ೦ತ್ಯರೂಪ. ಬಿ೦ದು (ಅರ್ಧ ಚ೦ದ್ರಾಕೃತಿಯೊಳಗಿರುವ ಚಿಹ್ನೆ). ಅ೦ತಿಮ ರೂಪವಾಗಿದೆ. ಗ೦ ಮ೦ತ್ರದಿ೦ದ ಹೊರ ಹೊಮ್ಮುವ ಶಬ್ದವು ಧ್ಯಾನಸ್ಥ ಹಾಗೂ ಧ್ಯಾನಿಯನ್ನು ಸಾಯುಜ್ಯಗೊಳಿಸುವ ಶಕ್ತಿಯಾಗಿದೆ. ಓ೦ ಗಮ್ ಮ೦ತ್ರವನ್ನು ಸ೦ಯುಕ್ತಗೊಳಿಸಿ ಪಠಿಸುವುದರಿ೦ದ ಕ೦ಪನ ಉ೦ಟಾಗುವುದು. ಇದು ಗಣೇಶ ವಿದ್ಯೆ.
9.  ಗಣಕ ಋಷಿಃ| ನಿಚೃದ್ಗಾಯತ್ರಿ ಛ೦ದಃ| ಗಣಪತಿರ್ದೇವತಾ| ಓ೦ ಗ೦ ಗಣಪತಯೇ ನಮಃ|
ಈ ಮ೦ತ್ರಕ್ಕೆ, ಗಣಕನು ಋಷಿಯು. ಇದು ನಿಚೃದ್ ಗಾಯತ್ರಿ ಛ೦ದಸ್ಸಿನಲ್ಲಿದೆ. ಶ್ರೀ ಮಹಾಗಣಪತಿಯು ದೇವತೆಯಾಗಿದ್ದಾನೆ. ಓ೦ ಗ೦ ಗಣಪತೆಯೇ ನಮಃ ಎ೦ಬುದು ಮ೦ತ್ರವಾಗಿದೆ.
10.  ಏಕದ೦ತಾಯ ವಿದ್ಮಹೇ| ವಕ್ರತು೦ಡಾಯ ಧೀಮಹಿ| ತನ್ನೋ ದ೦ತೀ ಪ್ರಚೋದಯಾತ್|
ಏಕದ೦ತನನ್ನು ಅರ್ಥ ಮಾಡಿಕೊಳ್ಳೋಣ. ವಕ್ರತು೦ಡನನ್ನು ಧ್ಯಾನಿಸೋಣ. ದ೦ತಿಯು ನಮ್ಮನ್ನು ಪ್ರೇರೇಪಿಸಲಿ.
11. ಏಕದ೦ತ೦ ಚತುರ್ಹಸ್ತ೦ ಪಾಶಮ೦ಕುಶ ಧಾರಿಣ೦| ರದ೦ ಚ ವರದ೦ | ಹಸ್ತೈರ್ಭಿಭ್ರಾಣ೦ ಮೂಷಕಧ್ವಜಮ್|
ಗಣಪತಿಗೆ ಒ೦ದೇ ದ೦ತವಿದೆ. ನಾಲ್ಕುಕೈಗಳಿವೆ. ಬಲಮೇಲುಗೈಯಲ್ಲಿ ಪಾಶವನ್ನೂ, ಎಡಮೇಲುಗೈಯಲ್ಲಿ ಅ೦ಕುಶವನ್ನೂ ಧರಿಸಿರುವನು. ಎಡಕೆಳಗೈಯನ್ನು ವರದ ಹಸ್ತವಾಗಿಯೂ, ಬಲಕೆಳಗೈಯನ್ನು ಅಭಯ ಹಸ್ತವನ್ನಾಗಿಯೂ ಹೊ೦ದಿರುವನು. ಇಲಿಯು ಅವನ ವಾಹನವಾಗಿದೆ.
12.  ರಕ್ತ೦ ಲ೦ಬೋದರ೦ ಶೂರ್ಪಕರ್ಣಕ೦ ರಕ್ತವಾಸಸ೦| ರಕ್ತಗ೦ಧಾನುಲಿಪ್ತಾ೦ಗ೦ ರಕ್ತ
ಪುಷ್ಪೈಃ ಸುಪೂಜಿತ೦|
ಅವನು ರಕ್ತ ವರ್ಣದವನು. ದೊಡ್ಡ ಹೊಟ್ಟೆ ಹೊ೦ದಿರುವವನು. ಮೊರದ೦ತಹ ಕಿವಿಗಳನ್ನು ಹೊ೦ದಿರುವವನು. ಅವನು ಕೆ೦ಪು ವಸ್ತ್ರಧಾರಿ. ಕೆ೦ಪು ಗ೦ಧ ಧರಿಸಿರುವವನು. ಕೆ೦ಪು ಹೂವುಗಳಿ೦ದ ಸುಪೂಜಿತನು.
13.  ಭಕ್ತಾನುಕ೦ಪಿನ೦ ದೇವ೦ ಜಗತ್ಕಾರಣಮಚ್ಯುತ೦| ಆವಿರ್ಭೂತ೦ ಚ ಸೃಷ್ಟ್ಯಾದೌ
ಪ್ರಕೃತೇಃ ಪುರುಷಾತ್ಪರ೦||
ಅವನು ಭಕ್ತರಿಗೆ ಕೃಪಾಳು ಆಗಿರುವನು. ಅವನು ಸೃಷ್ಟಿಕರ್ತನಾಗಿದ್ದು ಅವಿನಾಶಿಯಾಗಿರುವನು. ಸೃಷ್ಟಿಯ ಆದಿಯಲ್ಲಿ ಪ್ರಕಟನಾಗಿರುವನು. ಪ್ರಕೃತಿ, ಪುರುಷರಿಗಿ೦ತ ಅತೀತನಾಗಿರುವನು.
14.  ಏವ೦ ಧ್ಯಾಯತಿ ಯೋ ನಿತ್ಯ೦ ಸ ಯೋಗೀ ಯೋಗಿನಾ೦ ವರಃ|
ಅವನನ್ನುಈ ಬಗೆಯಲ್ಲಿ ನಿತ್ಯವೂ ಧ್ಯಾನಿಸುವ ಯೋಗಿಯೇ ಶ್ರೇಷ್ಠನಾದ ಯೋಗಿ.
15. ನಮೋ ವ್ರಾತಪತೆಯೇ ನಮೋ ಗಣಪತೆಯೇ ನಮಃಪ್ರಮಥಪತೆಯೇ ನಮಸ್ತೇ ಅಸ್ತು
ಲ೦ಬೋದರಾಯೈಕದ೦ತಾಯ ವಿಘ್ನ ನಾಶಿನೇ ಶಿವಸುತಾಯ ಶ್ರೀ ವರದಮೂರ್ತಯೇ ನಮಃ||
ದೈವೀಜೀವಿಗಳ ಒಡೆಯನಿಗೆ ನಮನಗಳು. ಗಣಗಳ ಒಡೆಯನಿಗೆ ನಮನಗಳು. ಶಿವನ ಸೇವಕರ ಅಧಿಪತಿಗೆ ನಮನಗಳು. ಏಕದ೦ತನೂ, ಲ೦ಬೋದರನೂ ಆದ ನಿನಗೆ ನಮನಗಳು. ವಿಘ್ನ ನಾಶಕನಾದ ಶಿವಸುತನಿಗೆ ವರಗಳನ್ನು ನೀಡುವವನಿಗೆ ನಾನು ನಮಿಸುವೆ.

ಶ್ರಿ ಶಂಕರಾಚಾರ್ಯರ ಸಾಧನೆಗಳ ಕಿರು ಮಾಹಿತಿ

ಶ್ರಿ ಶಂಕರಾಚಾರ್ಯರ ಸಾಧನೆಗಳ ಕಿರು ಮಾಹಿತಿ
ವೈಶಾಖ ಶುದ್ಧ ಪಂಚಮಿಯಂದು "ಶ್ರೀ ಶಂಕರ ಜಯಂತಿ" ಈ ದಿನವನ್ನು ಭಾರತ ಸರ್ಕಾರ ದಾರ್ಶನಿಕರ ದಿನ ಎಂದು ಘೋಷಿಸಿದೆ
1.ಶ್ರೀ ಶಂಕರ ಜಯಂತಿ :
ವೈಶಾಖ ಶುದ್ಧ ಪಂಚಮಿ
2.ಕಾಲ : ಕ್ರಿ.ಶ.788-820
3.ತಾಯಿ-ತಂದೆ
ಆರ್ಯಾಂಬಾ ಶಿವಗುರು
4.ಜನ್ಮಸ್ಥಳ : ಕೇರಳದ ಪೂರ್ಣ ನದಿ ತೀರದ ಕಾಲಡಿ
5.ಸನ್ಯಾಸ ಸ್ವೀಕಾರ : ಎಂಟನೆಯ ವರ್ಷ
6.ಗುರುಗಳು : ಶ್ರೀ ಗೋವಿಂದ ಭಗವತ್ಪಾದರು
7. ಪ್ರತಿಪಾದಿಸಿದ ದರ್ಶನ : ಅದ್ವೈತ ಸಿದ್ಧಾಂತ
8.ಪಂಥಗಳು : ಶಿವ,ವೈಷ್ಣವ,ಶಾಕ್ತ,ಸೌರ ಗಾಣಪತ್ಯ,ಕೌಮಾರ.
9.ಪಂಚಾಯತನ ದೇವತೆಗಳು :
ಸೂರ್ಯ,ಗಣಪತಿ,ದುರ್ಗೆ,ಶಿವ,ವಿಷ್ಣು.
10.ಶಂಕರರ ಮಾತೃಭಾಷೆ : ಮಲಯಾಳಂ
11. ಶಂಕರರ ಸಂಪರ್ಕ ಭಾಷೆ : ಸಂಸ್ಕೃತ
12.ಚಿನ್ನದ ನೆಲ್ಲಿಕಾಯಿ ಮಳೆ ಸುರಿಸಿದ ಸ್ತೋತ್ರ : ಕನಕಧಾರ ಸ್ತೋತ್ರ
13.ನೆಲ್ಲಿಕಾಯಿ ಭಿಕ್ಷೆಯಿತ್ತ ಮನೆಯ ಇಂದಿನ ಹೆಸರು : ಸ್ವರ್ಣತ್ತಿಲ್ಲಂ
14.ಗುರುದ್ರೋಹ : ತುಷಾಗ್ನಿಯಲ್ಲಿ ಆತ್ಮ ಸಮರ್ಪಿಸಿಕೊಂಡವರು,ಕುಮಾರಿಲ ಭಟ್ಟರು ( ಕುಮಾರ್ಲ ಭಾಟ್ )
15.ಶಂಕರರ ಶಿಷ್ಯಂದಿರು ಮತ್ತು ಪೀಠಗಳ ಪ್ರಥಮಾಚಾರ್ಯರು : ಪದ್ಮಪಾದಚಾರ್ಯ,ಹಸ್ತಾಮಲಕಾಚಾರ್ಯ,ತೋಟಕಾಚಾರ್ಯ,ಸುರೇಶ್ವರಾಚಾರ್ಯ
16. ಪದ್ಮಪಾದಾಚಾರ್ಯರ ಪೂರ್ವನಾಮ : ಸನಂದನ
17.ಸುರೇಶ್ವರಾಚಾರ್ಯರ ಪೂರ್ವನಾಮ : ಮಂಡನ ಮಿಶ್ರ
18.ರಚಿಸಿದ ಗ್ರಂಥಗಳು : 54
19.ರಚಿಸಿದ ಕೊನೆಯ ಗ್ರಂಥ : ವಿವೇಕ ಚೂಡಾಮಣಿ
20.ಪ್ರಸ್ಥಾನತ್ರಯಗಳು : ಬ್ರಹ್ಮಸೂತ್ರ,ಭಗವದ್ಗೀತೆ,ಉಪನಿಷತ್ತುಗಳು
21.ಬ್ರಹ್ಮ ಸೂತ್ರ : 555 ಸೂತ್ರಗಳು
22.ಭಗವದ್ಗೀತೆ : 18 ಅಧ್ಯಾಯ ( ವ್ಯಾಖ್ಯಾನ ) 700 ಶ್ಲೋಕಗಳು
23.ಉಪನಿಷತ್ತುಗಳು  :  10
24.ರಚಿಸಿದ ಸ್ತೋತ್ರಗಳು : 72
25.ಕಾಶ್ಮೀರದಲ್ಲಿ ಕುಷ್ಠರೋಗಿಯ ಮೋಕ್ಷಕ್ಕಾಗಿ ಹೇಳಿದ ಸ್ತೋತ್ರ : ಏಕಶ್ಲೋಕಿ ( ಕಿಂ ಜ್ಯೋತಿಸ್ತವ )
26.ಕಾಶಿಯಲ್ಲಿ ರಚಿಸಿದ ಸ್ತೋತ್ರಗಳು : 1.ಕಾಲಭೈರವಾಷ್ಟಕ, 2.ಮನೀಷಾ ಪಂಚಕ
3.ಅನ್ನಪೂರ್ಣ ಸ್ತೋತ್ರ 4.ಕಾಶಿ ಸ್ತೋತ್ರ
27.ಚತುರಾಮ್ನಾಯ ಪೀಠಗಳು :
ಮತ್ತು ಪೀಠಗಳ ಪ್ರಥಮಾಚಾರ್ಯರು :
ಶೃಂಗೇರಿ ಪೀಠ  - ಸುರೇಶ್ವರಾಚಾರ್ಯರು - ದಕ್ಷಿಣ
ಜಗನ್ನಾಥ ಪೀಠ - ಪದ್ಮಪಾದಾಚಾರ್ಯರು - ಪೂರ್ವ
ದ್ವಾರಕಾ ಪೀಠ - ಹಸ್ತಾಮಲಕಾಚಾರ್ಯರು - 292
ಪಶ್ಚಿಮ
ಜ್ಯೋತಿಷ್ಮತಿ ಪೀಠ - ತೋಟಕಾಚಾರ್ಯರು - ಉತ್ತರ
29.ಪೀಠಗಳ ದೇವದೇವಿಯರು 1.ಚಂದ್ರಮೌಳೇಶ್ವರ - ಶಾರದ ದೇವಿ
2.ಜಗನ್ನಾಥ - ವಿಮಲಾದೇವಿ
3.ಸಿದ್ದೇಶ್ವರ - ಭದ್ರಕಾಳಿ
4.ನಾರಾಯಣ - ಪೂರ್ಣದೇವಿ
30.ಪವಿತ್ರ ತೀರ್ಥಗಳು - ತುಂಗಾ,ಗೋಮತಿ,ಅಲಕಾನಂದ,ಪೂರ್ವಸಮುದ್
31.ಸರ್ವಜ್ಞ ಪೀಠಾರೋಹಣ : ಕಾಶ್ಮೀರದ ಶಂಕರ ಗಿರಿಯಲ್ಲಿರುವ ಶಾರದ ಮಂದಿರ
32.ಶಂಕರರ ಮಹಾ ಸಿದ್ಧಾಂತ : ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ
ಅರ್ಥ : ಬ್ರಹ್ಮವು ಸತ್ಯ,ಜಗತ್ತು ಮಿಥ್ಯಾ ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ
33.ಶಂಕರರ ಸಾಧನೆ ; 1.ಅಷ್ಟವರ್ಷೇ ಚತುರ್ವೇದಿ - 8 ನೇ ವರ್ಷಕ್ಕೆ 4 ವೇದಗಳ ಅಧ್ಯಯನ
2.ದ್ವಾದಶೇ ಸರ್ವಶಾಸ್ತೃಸರ್ವಶಾಸ್ತವಿ ತ್ - 12 ನೇ ವರ್ಷಕ್ಕೆ ಸಕಲ ಶಾಸ್ತೃಗಳ ಪಾಂಡಿತ್ಯ
3.ಷೋಡಶೇ ಕೃತವಾನ್ ಭಾಷ್ಯಂ - 16 ನೇ ವರ್ಷಕ್ಕೆ ಭಾಷ್ಯ ರಚನೆ
4.ಮುವತ್ತೆರಡನೆ ವರ್ಷಕ್ಕೆ ದೇಹತ್ಯಾಗ
34.ದೇಹತ್ಯಾಗ - ಕೇದಾರನಾಥ - ವೈಶಾಖ ಶುದ್ಧ ದ್ವಾದಶಿ

ಉಪನಯನ - ಏಕೆ?

ಉಪನಯನ - ಏಕೆ?
ಮಾಡದಿದ್ದರೆ ಏನಾಗುತ್ತದೆ ?
ಉಪ = ಸಮೀಪಕ್ಕೆ,
ನಯನ=ಕರೆದುಕೊಂಡು ಹೋಗುವುದು. ವೇದದ ಮತ್ತು ವೇದ ಪ್ರತಿ ಪಾದ್ಯನಾದ ಭಗವಂತನ ಸಮೀಪಕ್ಕೆ ನಮ್ಮ ಮಗುವನ್ನು ಕರೆದುಕೊಂಡು ಹೋಗುವ ಕ್ರಿಯೆಯೇ ಉಪನಯನ.
ಇದನ್ನು ಮೌಂಜೀ ಬಂಧನ (ದರ್ಭೆಯ ಹುರಿಯನ್ನು ಮಂತ್ರ ಪೂರ್ವಕವಾಗಿ ಉಡುದಾರದಂತೆ ಕಟ್ಟುವ) ಸಂಸ್ಕಾರ ಅಥವಾ ಮುಂಜಿ / ಮುಂಜಿವಿ ಎಂಬ ಪದಗಳಿಂದ ಕರೆಯುವುದು ರೂಢಿಯಲ್ಲಿದೆ.
ಸಾಮಾನ್ಯವಾಗಿ ಬ್ರಾಹ್ಮಣ ವಟುವಿಗೆ ಗರ್ಭಾಷ್ಟಮದಲ್ಲಿ ಅಂದರೆ ಏಳನೆಯ ವರ್ಷ ಅಥವಾ ಎಂಟನೆಯ ವರ್ಷದಲ್ಲಿ ಈ ಉಪನಯನ ಮಹೋತ್ಸವನ್ನು ನಡೆಸಲಾಗುತ್ತದೆ .
ಆದರೆ ವಟುವಿಗೆ ಉಚ್ಚಾರಣಾಸಾಮರ್ಥ್ಯ ಚೆನ್ನಾಗಿದ್ದರೆ ಐದು ವರ್ಷದಲ್ಲೂ ಸಹ ಉಪನಯನ ಮಾಡಿದ ನಿದರ್ಶನಗಳಿವೆ.
ಶ್ರೀವ್ಯಾಸರಾಯರ ಚರಿತ್ರೆಯಲ್ಲಿ ಶ್ರೀವಿದ್ಯಾರತ್ನಾಕರ ತೀರ್ಥರು "
"ಅಬ್ದೇ ಪಂಚಮರಾಯತೇ ವಟುರಭೂತ್" ಎಂದು ಹೇಳಿದ್ದಾರೆ. ಅಂದರೆ ಐದನೆಯ ವರ್ಷಕ್ಕೇ ಶ್ರೀ ವ್ಯಾಸರಾಯರಿಗೆ ಉಪನಯನ ಸಂಸ್ಕಾರ ನೆರವೇರಿತು ಎಂಬುದು ತಿಳಿದು ಬರುತ್ತದೆ.
ಉಪನಯನದ ಮುಖ್ಯ ಅಂಗಗಳು:
೧. ವೇದಾಧ್ಯಯನ ಅಧಿಕಾರ ಸಿದ್ಧಿಗಾಗಿ ಚೌಲ ಎಂದರೆ ಶಿಖೆಯನ್ನು ಬಿಡುವುದು.
೨.ಮಾತ್ರಾ ಸಹ ಭೋಜನ ಎಂದರೆ ಕೊನೆಯದಾಗಿ ತಾಯಿಯ ಜೊತೆಗೆ
ಊಟ ಮಾಡುವುದು. ಅಲ್ಲಿಂದ ಮುಂದೆ ಆ ವಟು ತಾಯಿಯಿಂದ ದೂರ ಕುಳಿತು ಊಟ ಮಾಡಬೇಕು . ಯಾರ ಎಂಜಲನ್ನೂ ತಿನ್ನುವಂತಿಲ್ಲ.
೩. ಯಜ್ಞೋಪವೀತ ಧಾರಣೆ: ಯಜ್ಞೋಪವೀತ ಅಂದರೆ ಜನಿವಾರ.
ಒಂಬತ್ತು ಎಳೆಗಳಲ್ಲಿ ಅನುಕ್ರಮವಾಗಿ ಓಂಕಾರ ವಿಷ್ಣು ಬ್ರಹ್ಮ ರುದ್ರ ವಾಯು ಸೂರ್ಯ ಚಂದ್ರ ನಾಗರು ಹಾಗೂ ವಿಶ್ವೇದೇವತೆಗಳನ್
ನು ವೇದ ಮಂತ್ರಗಳಿಂದ ಆವಾಹನೆ ಮಾಡಿ ,
ಮೂರು ದಾರಗಳಲ್ಲಿ ಕ್ರಮವಾಗಿ ಋಗ್ವೇದ ಯಜುರ್ವೇದ ಸಾಮವೇದ ಮತ್ತು ಜನಿವಾರದ ಬ್ರಹ್ಮಗಂಟಿನಲ್ಲಿ ಅಥರ್ವಣ ವೇದವನ್ನು ಆವಾಹನೆ ಮಾಡಿ ಜೀವನ ಪರ್ಯಂತ ಮಂತ್ರ ಪೂರ್ವಕವಾಗಿ ಧರಿಸುವ ಕ್ರಿಯೆಯೇ ಯಜ್ಞೋಪವೀತ ಧಾರಣೆ. ಇದರಿಂದಲೇ ದೇಹ ಸದಾ ಶುಚಿ ಮತ್ತು ವೇದಾಧಿಕಾರ. ಇಂತಹ ಪರಮ ಪವಿತ್ರ ಯಜ್ಞೋಪವೀತ ವನ್ನು ಮೊದಲ ಬಾರಿಗೆ ಧರಿಸುವ ಸಮಾರಂಭವೇ ಉಪನಯನ.
೪. ಉಪದೇಶಿಸುವುದು ತಂದೆಯ ಹಕ್ಕು ಉಪದೇಶ ಪಡೆಯುವುದು ಮಗನ ಹಕ್ಕು :
ತನ್ನ ವಂಶ ಪಾರಂಪರ್ಯವಾಗಿ ಬಂದ ಗಾಯತ್ರಿ ಮಂತ್ರವನ್ನು ಉಪದೇಶಿಸುವ ಮೊದಲ ಅಧಿಕಾರ ಇರುವುದು (ಸನ್ಯಾಸಿಗಳಲ್ಲ ವಿದ್ವಾಂಸರಿಗಲ್ಲ. ಪುರೋಹಿತರಿಗಲ್ಲ) ಜನ್ಮ ಕೊಟ್ಟ ತಂದೆಗೆ ಮಾತ್ರ ತನ್ನ ಮಗನಿಗೆ ಗಾಯತ್ರಿ ಮಂತ್ರದ ಉಪದೇಶ ಮಾಡುವ ಅಧಿಕಾರವಿದೆ.
ತಂದೆಯು ದಡ್ಡನಾದರೂ ಅನಾಚಾರಿಯಾದರೂ ಮಗನಿಗೆ ತಂದೆಯೇ ಉಪದೇಶ ಮಾಡಬೇಕು.
ಅ ಕಾರಣಕ್ಕಾದರೂ ತಂದೆಯು ಸದಾಚಾರವನ್ನು ಸಂಪಾದಿಸಿ ಉಪನಯನಕ್ಕೆ ಮೊದಲು ಒಂದು ಲಕ್ಷ ಅಥವಾ ಕನಿಷ್ಠ ಒಂದು ಸಾವಿರ ಸಲ ಗಾಯತ್ರಿ ಮಂತ್ರ ಜಪ ಮಾಡಿ ಅನಂತರ ಮಗನಿಗೆ ಉಪದೇಶ ಮಾಡಬೇಕು .
೫. ವಟುವು ತನ್ನ ಗುರುವಾದ ತಂದೆಯ ಪಾದಪೂಜೆಯನ್ನು ಮಾಡುವುದು.ಆಗ ತಂದೆಯು ತನ್ನ ಗೋತ್ರ ಪ್ರವರ್ತಕರಾದ ಋಷಿಗಳ ಮೂಲಕ ವಂಶಪಾರಂಪರ್ಯವಾಗಿ ಬಂದ ಗಾಯತ್ರಿ ಮಂತ್ರವನ್ನು ತನ್ನ ಪ್ರೀತಿಯ ಮಗುವಿಗೆ ಉಪದೇಶ ಮಾಡುತ್ತಾನೆ.
೬. ತಂದೆ - ಮಗುವಿನ ಅತೀಂದ್ರಿಯ ಸಂಬಂಧ ಸ್ಥಾಪನೆಯೇ ಉಪನಯನ:
ತಂದೆಯು ಮಗನ ಹೃದಯದ ಮೇಲೆ ತನ್ನ ಕೈಯನ್ನಿಟ್ಟು
" ಮಮ ವ್ರತಂ ಹೃದಯಂ ತೇ ದಧಾಮಿ। ಮಮ ಚಿತ್ತಂ ಅನುಚಿತ್ತಂ ತೇ ಅಸ್ತು॥
(ಮಗುವೇ! ನನ್ನ ಹೃದಯದಲ್ಲಿರುವ ವ್ರತಗಳನ್ನು ನಿನ್ನ ಹೃದಯಕ್ಕೆ ವರ್ಗಾಯಿ ಸುತ್ತಿದ್ದೇನೆ . ನನ್ನ ಮನಸ್ಸು ನಿನ್ನ ಮನಸ್ಸಿಗೆ ಹೊಂದಿ ನಡೆಯಲಿ : ನಿನ್ನ ಮನಸ್ಸು ನನ್ನ ಮನಸ್ಸಿಗೆ ಹೊಂದಿ ನಡೆಯಲಿ) ಎಂಬ ವೇದ ಮಂತ್ರವನ್ನು ಪಠಿಸುತ್ತಾನೆ.
ಹೀಗೆ ಉಪನಯನವು ತಂದೆ ಮಕ್ಕಳ ಮನಸ್ಸನ್ನು ಉತ್ತಮ ಉದ್ದೇಶಕ್ಕಾಗಿ ಒಂದಾಗಿ ಬೆಸೆಯುವ ಪುಣ್ಯ ಕ್ರಿಯೆ.
೬. ಉಪನಯನ ವನ್ನು ಏಕೆ ಮಾಡಬೇಕು? ಗಾಯತ್ರೀ ಮಂತ್ರವು ಪ್ರತಿಭೆಯನ್ನು ಉದ್ದೀಪಿಸುವ ಮೇಧಾ ಶಕ್ತಿಯನ್ನು ವೃದ್ಧಿಸುತ್ತದೆ ತಂದೆ ತಾಯಿಗಳು ಕೇವಲ ಮಗುವನ್ನು ಹಡೆದರೆ-ಹೊಡೆದರೆ ಅವರ ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳಿಗೆ ಸಕಾಲದಲ್ಲಿ ಉಪನಯನ ಸಂಸ್ಕಾರವನ್ನು ನೆರವೇರಿಸುವ ಮೂಲಕ ಮಕ್ಕಳನ್ನು ವಂಶದ ಉತ್ತಮ ವಿಚಾರಗಳಿಗೆ ಸದಾಚಾರಕ್ಕೆ ನಿಜವಾದ ವಾರಸುದಾರರನ್ನಾಗಿ ಮಾಡಬೇಕು. ಕೇವಲ ಹಣ ಆಸ್ತಿಗಳನ್ನು ಕೊಟ್ಟರೆ ಸಾಲದು. ಉತ್ತಮ ಸಂಸ್ಕಾರವನ್ನು ಸಹ ನೀಡಬೇಕು. ಆಗ ಮಾತ್ರ ಆ ತಂದೆ ತಾಯಿಗಳು ಹಿರಿಯರು ತಮಗೆ ನೀಡಿದ ಶಕ್ತಿ ಸೌಕರ್ಯಗಳನ್ನು ಸದುಪಯೋಗ ಪಡಿಸಿದಂತೆ ಆಗುತ್ತದೆ .
ದೇವಋಣ- ಋಷಿಋಣ- ಪಿತೃಋಣಗಳನ್ನು ತೀರಿಸಿದಂತೆ ಆಗುತ್ತದೆ.
೭. ಉಪನಯನ ವನ್ನು ಮಾಡದಿದ್ದರೆ ಏನಾಗುತ್ತದೆ ?
ಯಾವ ತಂದೆ ತಾಯಿಗಳು ತಮ್ಮ ಮಗುವಿಗೆ ಉಪನಯನ ವನ್ನು ಮಾಡುವುದಿಲ್ಲವೋ ಅವರು ಆ ಮಗುವನ್ನು ತಮ್ಮ ವಂಶದ ಸದಾಚಾರಗಳಿಂದ ದೂರ ಬಿಟ್ಟಂತೆ ಗಡಿಪಾರು ಮಾಡಿದಂತೆ. ತಮ್ಮ ವಂಶದಿಂದ ಹೊರ ಹಾಕಿದಂತೆ . ಮಾತ್ರವಲ್ಲ ಆ ಮಗುವನ್ನು ಶಾರೀರಿಕವಾಗಿ ಮಾತ್ರ ಉಳಿಸಿ ಆಧ್ಯಾತ್ಮಿಕವಾಗಿ ನಾಶ ಮಾಡಿದಂತೆ. ಅಲ್ಲವೇ?
ಸಕಾಲದಲ್ಲಿ ಉಪನಯನ ಮಾಡದಿದ್ದರೆ ಸಮಾಜವು ನಿಂದಿಸುತ್ತದೆ. ಬಂಧು ಬಳಗದವರು ಆಡಿಕೊಳ್ಳುತ್ತಾರೆ .
ಮಾತ್ರವಲ್ಲ ಆ ವಟುವು ಎಷ್ಟೇ ಬೆಳೆದರೂ, ಎಂತಹ ಉತ್ತಮ ಕೋರ್ಸ್ ಓದಿದರೂ, ಒಳ್ಳೆಯ ಉದ್ಯೋಗ ಗಳಿಸಿದ್ದರೂ, ಎಷ್ಟೇ ಹಣ ಚಿನ್ನ ಆಸ್ತಿ ಸಂಪಾದಿಸಿದರೂ ಧರ್ಮದ ದೃಷ್ಟಿಯಿಂದ ಅವನ ಸ್ಥಾನಮಾನವು
ಚಿಕ್ಕ ಮಗುವಿನಷ್ಟೇ ಉಳಿದು ಬಿಡುತ್ತದೆ .
ಮಂತ್ರ ಯಾಗ ವಿವಾಹ ಸಂತಾನ ಮಾತ್ರವಲ್ಲದೆ ಮುಂದಿನ ಅನೇಕ ಮುಖ್ಯ ಕೌಟುಂಬಿಕ ಕಾರ್ಯಗಳನ್ನು ನೆರವೇರಿಸಲು ಅವಕಾಶವನ್ನು ತಪ್ಪಿಸಿದಂತೆ ನಿರಾಕರಿಸಿದಂತೆ ಆಗುತ್ತದೆ. ಒಟ್ಟಾರೆ ಅವರನ್ನು ಸಮಾಜದಿಂದ ಹೊರ ಹಾಕಿದಂತೆಯೇ ಸರಿ . ಯಾರಿಗೂ ಹೀಗಾಗುವುದು ಬೇಡ .
೮.ತನ್ನ ಮಗುವಿನ ರಕ್ಷಣೆಯ ಹೊಣೆಯನ್ನು ದೇವತೆಗಳಿಗೆ ಅರ್ಪಿಸುವ ಕ್ರಿಯೆ:
ತನ್ನ ಮಗುವನ್ನು ವೇದಾಧ್ಯಯನಕ್ಕಾಗಿ ಗುರುಗಳ ಬಳಿಗೆ ಕಳುಹಿಸುವ ಮೊದಲು ಸೂರ್ಯದೇವನಿಗೆ ಮತ್ತು ಚತುರ್ಮುಖ ಬ್ರಹ್ಮದೇವನಿಗೆ ತನ್ನ ಮಗನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಪ್ರಾರ್ಥಿಸಿ ಸೂರ್ಯದೇವನಿಗೆ ಮತ್ತು ಚತುರ್ಮುಖ ಬ್ರಹ್ಮದೇವನಿಗೆ ತನ್ನ ಮಗನನ್ನು ಶಿಷ್ಯನನ್ನಾಗಿ ಅರ್ಪಿಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ.
ಅಂದಿನಿಂದ ಆ ವಟುವಿನ ರಕ್ಷಣೆಯ ಜವಾಬ್ದಾರಿಯನ್ನು ಸೂರ್ಯದೇವ ಮತ್ತು ಚತುರ್ಮುಖ ಬ್ರಹ್ಮ ದೇವರು ವಹಿಸಿಕೊಳ್ಳುತ್ತಾರೆ. ಅಂದರೆ ಮಗುವಿಗೆ ಉತ್ತಮ ಆರೋಗ್ಯ ಹಾಗೂ ಮೇಧಾ ಶಕ್ತಿಗಳು ಲಭಿಸುತ್ತದೆ ಎಂಬುದು ಉಪನಯನ ಸಂಸ್ಕಾರದ ಬಹುಮುಖ್ಯ ಅಂಗ.
ಗಾಯತ್ರಿ ಮಂತ್ರದ ಉಪಾಸನೆ, ಪ್ರಾಣಾಯಾಮ, ಸೂರ್ಯ ನಮಸ್ಕಾರ ದಿಗ್ ದೇವತೆಗಳ ನಮಸ್ಕಾರ, ಬ್ರಹ್ಮಚರ್ಯ, ವೇದಾಧ್ಯಯನ ಅಗ್ನಿಕಾರ್ಯ ಹಾಗೂ ವಿದ್ಯಾರ್ಜನೆ ಮುಂತಾದ ಕ್ರಿಯೆಗಳ ಮೂಲಕ ಮುಂದಿನ ಜೀವನಕ್ಕೆ ಬೇಕಾದ ಎಲ್ಲ ಶಿಸ್ತುಗಳನ್ನು ಅಳವಡಿಸಿ ಕೊಳ್ಳಲು ಆರಂಭಿಸುವ ಘಟ್ಟವೇ ಉಪನಯನ.
ಆದ್ದರಿಂದ ನಮ್ಮ ಮಕ್ಕಳಿಗೆ ಸಕಾಲಕ್ಕೆ ಉಪನಯನ ವನ್ನು ಮಾಡಲೇಬೇಕು . ಹಾಗೆ ಮಾಡದಿದ್ದರೆ ನಾವಾಗಿ ಅವರ ಶ್ರೇಯಸ್ಸಿಗೆ ತೊಡಕು ಹಾಗೂ ಅಡ್ಡಿಯಾಗದಂತೆ.
ನಾಲ್ಕು ವರ್ಷ ತುಂಬಿದ ತಕ್ಷಣ ಹೇಗೆ ಮಗುವನ್ನು ಎಲ್ ಕೆಜಿ ಕ್ಲಾಸ್ ಗೆ ಸೇರಿಸುತ್ತೇವೆಯೋ ಹಾಗೆಯೇ ಸಕಾಲಕ್ಕೆ ಉಪನಯನವನ್ನು ಮಾಡಬೇಕು.

ದೇವಟ್ಟಿಪರಂಬು ಹತ್ಯಾಕಾಂಡ

ದೇವಟ್ಟಿಪರಂಬು ಹತ್ಯಾಕಾಂಡ
ಮಡಿಕೇರಿ ತಾಲೂಕು ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ವಿಶಾಲ ಮೈದಾನ ಈ ದೇವಟ್ಟಿಪರಂಬು. ಮೈದಾನದಂಚಿನಲ್ಲಿ ಕಾವೇರಿ ತಣ್ಣಗೆ ಹರಿಯುತ್ತಾಳೆ. ಸುತ್ತಲೂ ಬೆಟ್ಟಸಾಲುಗಳು. ಟಿಪ್ಪುವಿನ ವಿರುದ್ಧ ಹೋರಾಟ ಮಾಡುತ್ತಿದ್ದ ಆಗಿನ ಕೊಡಗಿನ ನಾಲ್ಕುನಾಡು ಮತ್ತು ಬೇಂಗುನಾಡುಗಳ ಕೊಡವರು ಆ ಬೆಟ್ಟಸಾಲುಗಳಲ್ಲಿ, ಅದರ ತಪ್ಪಲಿನ ಊರುಗಳಲ್ಲಿ ಅವಿತು ಆಕ್ರಮಣ ಮಾಡುತ್ತಿದ್ದರು. 1786ರ ಒಂದು ದಿನ ಟಿಪ್ಪು ಆ ಸೀಮೆಗಳಲ್ಲಿ ಡಂಗುರ ಹೊಡೆಸಿ ತಾನು ಯುದ್ಧದಿಂದ ಬೇಸತ್ತಿದ್ದೇನೆ. ತನಗೆ ಕೊಡವರ ಭೂಮಿ ಬೇಡ, ಅವರ ಸ್ನೇಹಕ್ಕೆ ಹಾತೊರೆಯುತ್ತಿzನೆ. ಅಯ್ಯಂಗೇರಿಯ ದೇವಟ್ಟಿಪರಂಬು ಮೈದಾನದಲ್ಲಿ ತಾನೊಂದು ಔತಣಕೂಟವನ್ನು ಏರ್ಪಡಿಸುತ್ತಿತ್ತೇನೆ. ತನ್ನಂತೆ ತಾವೂ ಕೂಡಾ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಬನ್ನಿ ಗೆಳೆತನದಿಂದ ಬಾಳೋಣ ಎಂದು ಪ್ರಚಾರ ಮಾಡಿದ. ಸತತ ಯುದ್ಧದಿಂದ ಹೈರಾಣಾಗಿದ್ದ ಸ್ನೇಹಜೀವಿ ಕೊಡವರು ಟಿಪ್ಪುವಿನ ಬಣ್ಣದ ಮಾತುಗಳಿಗೆ ಮರುಳಾದರು. ಅಯ್ಯಂಗೇರಿ ಗ್ರಾಮದ ದೇವಟ್ಟಿಪರಂಬು ಮೈದಾನಕ್ಕೆ ಬಂದು ಸೇರಿದರು. ಎರಡು ನಾಡುಗಳ ಗ್ರಾಮಸ್ಥರ ಜೊತೆಗೆ ದಕ್ಷಿಣ ಕೊಡಗಿನಿಂದ ಹೋರಾಟಕ್ಕೆ ಬಂದಿದ್ದ ಯೋಧರೆಲ್ಲರೂ ಸೇರಿ ಸುಮಾರು 70 ಸಾವಿರ ಕೊಡವರು ದೇವಟ್ಟಿಪರಂಬು ಮೈದಾನಕ್ಕೆ ಬಂದು ಸೇರಿದರು.
ಮೈದಾನದ ಮುಕ್ಕಾಲು ಭಾಗ ಕಾಡುಗಳಿಂದಾವೃತವಾಗಿತ್ತು. ಆ ಕಾಡುಗಳಲ್ಲಿ ಮುಸಲ್ಮಾನ ಮತ್ತು ಫ್ರೆಂಚ್ ಸೈನಿಕರು ಅವಿತು ಕುಳಿತಿದ್ದರು. ಬರಿಗೈಯಲ್ಲಿ ಬಂದಿದ್ದ ಕೊಡವರ ಮೇಲೆ ಟಿಪ್ಪು ಸೇನೆ ಎರಗಿತು. ಅದು ಕರ್ನಾಟಕ ಹಿಂದೆಂದೂ ಕಾಣದ ಭೀಕರ ನರಮೇಧ. ಹೆಂಗಸರು ಮಕ್ಕಳನ್ನು ನಿರ್ದಯವಾಗಿ ತರಿಯಲಾಯಿತು. ಅಂದು ಸ್ಥಳದ ಸತ್ತ ಕೊಡವರ ಸಂಖ್ಯೆ 35 ಸಾವಿರಕ್ಕೂ ಹೆಚ್ಚು!
ಆಕರ – ಗೆಝೆಟಿಯರ್ ಆಫ್ ಕೂರ್ಗ್, ಜಿ. ರಿಜ್ಟೆರ್, 18702. ದೇವಟ್ಟಿಪರಂಬು ಹತ್ಯಾಕಾಂಡದ ನಂತರ
ಟಿಪ್ಪುವು ಕೊಡವ ಜನರ ಭೂಮಿ ಮನೆಗಳನ್ನು ಮುಸಲ್ಮಾನರಿಗೆ ಜಹಗೀರಾಗಿ ಕೊಟ್ಟು ಈ ರೀತಿ ಆಜ್ಞೆಯನ್ನು (ಇಸ್ತಿಹಾರ್) ಹೊರಡಿಸಿದನು ಈ ಪ್ರದೇಶವನ್ನು ನಿಮಗೆ ಜಹಗೀರಾಗಿ ಕೊಡಲ್ಪಟ್ಟಿದೆ. ಈ ಪ್ರದೇಶದ ಬೆಟ್ಟಗಳಲ್ಲಿರುವ ಜನರನ್ನು (ಅಳಿದುಳಿದ ಕೊಡವರನ್ನು) ನೀವು ನಿರ್ಮೂಲಪಡಿಸಬೇಕೆಂಬುದು ನಮ್ಮ ರಾಜಾಜ್ಞೆಯಾಗಿರುವುದರಿಂದ ನಮ್ಮ ದೃಷ್ಟಿಯಿಂದ ತಪ್ಪಿಸಿಕೊಂಡು ಹೋಗಿರುವವರನ್ನು ಹುಡುಕಿ ಹಿಡಿದು ಕೊಲ್ಲುವುದು ನಿಮಗೆ ದೊಡ್ಡ ಬಹುಮಾನದ ಕೆಲಸವೆಂದು ತಿಳಿದಿರತಕ್ಕದ್ದು. ಅವರ ಕುಟುಂಬ ಮಕ್ಕಳೆಲ್ಲವೂ ನಿಮಗೆ ಗುಲಾಮರಾಗಿರತಕ್ಕದ್ದು.
– ’ಪಟ್ಟೋಲೆ ಪಳಮೆ’ 1924ರ ಐತಿಹಾಸಿಕ ದಾಖಲೆ
ಹತ್ಯಾಕಾಂಡದ ನಂತರ ಕೊಡಗಿನ ಸಾಮಾಜಿಕ ವ್ಯವಸ್ಥೆಯೇ ಬುಡಮೇಲಾಯಿತು. 1786ರ ಹೊತ್ತಲ್ಲಿ 1500ದಷ್ಟಿದ್ದ ಕೊಡವ ಕುಟುಂಬಗಳ ಸಂಖ್ಯೆ 840ಕ್ಕೆ ಇಳಿಯಿತು. ಭಾಗಮಂಡಲ, ಬೇಂಗೂರು, ಕೋಪಟ್ಟಿ ಮೊದಲಾದ ಊರುಗಳಲ್ಲಿ ಜನರೇ ಖಾಲಿಯಾದರು.
ಮುಂದೆ ಬ್ರಿಟಿಷರು ಟಿಪ್ಪುವನ್ನು ಕೊಂದು ಕೊಡಗಿನಲ್ಲಿ ಆಡಳಿತ ವ್ಯವಸ್ಥೆ ರೂಪಿಸುವ ಹೊತ್ತಿನಲ್ಲಿ ಹತ್ಯಾಕಾಂಡದ ಪರಿಣಾಮವನ್ನೂ ಅವರು ಎದುರಿಸಬೇಕಾಯಿತು. ಜನಸಂಖ್ಯೆ ಕೊರತೆಯನ್ನು ನೀಗಿಸಲು ಸುಳ್ಯದಿಂದ ಜನರನ್ನು ಕರೆತಂದು ಕೊಡಗಿನಲ್ಲಿ ಜಮೆ ಮಾಡಲಾಯಿತು.
ಲೂಟಿಯಾದ ದೇವಸ್ಥಾನಗಳು ಪೂಜಾ ಕೈಂಕರ್ಯಗಳಿಲ್ಲದೇ ಹಾಳುಬಿದ್ದವು.
ಭೂಮಾಲಿಕರಿಲ್ಲದ ಕೃಷಿ ಭೂಮಿಯ ಸುಧಾರಣೆಗೆ ಬ್ರಿಟಿಷರು ಕೊಡಗಿನ ಕಂದಾಯ ಪದ್ದತಿಯನ್ನು ಮರುಪರಿಶೀಲನೆ ಮಾಡಬೇಕಾಯಿತು.
ಲೂಟಿಯಾದ ದೇವಸ್ಥಾನಗಳು ಪೂಜಾ ಕೈಂಕರ್ಯಗಳಿಲ್ಲದೇ ಹಾಳುಬಿದ್ದವು.
ಭೂಮಾಲಿಕರಿಲ್ಲದ ಕೃಷಿ ಭೂಮಿಯ ಸುಧಾರಣೆಗೆ ಬ್ರಿಟಿಷರು ಕೊಡಗಿನ ಕಂದಾಯ ಪದ್ದತಿಯನ್ನು ಮರುಪರಿಶೀಲನೆ ಮಾಡಬೇಕಾಯಿತು.
ಆಕರ – ಗೆಝೆಟಿಯರ್ ಆಫ್ ಕೂರ್ಗ್, ಜಿ. ರಿಜ್ಟೆರ್, 1870
3. ಗಂಜಾಂ ಮತಾಂತರ ಪ್ರಕರಣ
ದೇವಟ್ಟಿಪರಂಬುವಿನ ಹತ್ಯಾಕಾಂಡದ ನಂತರ ಸೆರೆ ಹಿಡಿದ ಸಾವಿರಾರು ಹಿಂದೂ ಸ್ತ್ರೀಯರನ್ನು ಟಿಪ್ಪುವು ಮುಸಲ್ಮಾನರಿಗೆ ಕೊಡುಗೆಯಾಗಿ ಕೊಟ್ಟನು. ಬಹುಸಂಖ್ಯೆಯಲ್ಲಿದ್ದ ಮಕ್ಕಳನ್ನು ನಪುಂಸಕರನ್ನಾಗಿಸಿದ ಅಥವಾ ಸುನ್ನತ್ ಮಾಡಿ ಮತಾಂತರಿಸಿದ.
80 ಸಾವಿರ ಕೊಡವರನ್ನು ಟಿಪ್ಪು ಸೈನ್ಯ ಬಂಧಿಸಿ ವೀರಾಜಪೇಟೆ-ಬಿಳುಗುಂದ-ಅಮ್ಮತ್ತಿ-ಹುಣಸೂರು ಮಾರ್ಗವಾಗಿ ಶ್ರೀರಂಗಪಟ್ಟಣದ ಗಂಜಾಂಗೆ ಎಳೆದೊಯ್ಯಿತು. ಈ ಮಹಾ ಕ್ರೌರ್ಯದ ಯಾತ್ರೆ ನಡುವಿನಲ್ಲೇ ಅನೇಕರು ಹೆಣವಾದರು. ಹೆಂಗಸರು ಮಕ್ಕಳೆನ್ನದೇ ಪ್ರಾಣಿಗಳಂತೆ ಹಿಂಡು ಮಾಡಿ ಕರೆದೊಯ್ಯಲಾಯಿತು. ಏಳುಬೀಳಿನ ಮುಳ್ಳು ದಾರಿಯಲ್ಲೇ ಗರ್ಭಿಣಿಯರಾದ ಕೊಡವ ಹೆಂಗಸರು ಮಕ್ಕಳನ್ನು ಹೆತ್ತರು. ಕೊಡವ ಯೋಧರನ್ನು ಸರಪಳಿಗಳಿಂದ ಬಂಧಿಸಲಾಗಿತ್ತು. ತಪ್ಪಿಸಿಕೊಳ್ಳಲೆತ್ನಿಸುವವರನ್ನು ಪ್ರಪಾತಕ್ಕೆ ದೂಡಲಾಯಿತು.
ಗಂಜಾಂನಲ್ಲಿ ಪ್ರಾಣಬೀತಿಯನ್ನೊಡ್ಡಿ ಕೊಡವ ಕೈದಿಗಳನ್ನು ಮತಾಂತರಿಸಲಾಯಿತು. ಬಲತ್ಕಾರವಾಗಿ ಸುನ್ನತಿ ಮಾಡಲಾಯಿತು. ಒಪ್ಪದವರನ್ನು ಎಲ್ಲರೆದುರೇ ಆನೆಯ ಕಾಲಿಗೆ ಕಟ್ಟಿ ಎಳೆಸಲಾಯಿತು, ಚಿತ್ರಹಿಂಸೆ ಮಾಡಿ ಕೊಲ್ಲಲಾಯಿತು. ಹಲವರನ್ನು ಹುಲಿಯ ಬೋನಿಗೆ, ಕೊಳದ ಮೊಸಳೆಗಳಿಗೆ ಹಾಕಿ ಕೊಲ್ಲಲಾಯಿತು.
ಹೀಗೆ ಮತಾಂತರಗೊಂಡ ಯೋಧರ ಒಂದು ಸೈನ್ಯದ ತುಕಡಿಯನ್ನು ರಚಿಸಲಾಯಿತು. ಇದಕ್ಕೆ ’ಅಹಮದೀಯ ಸೈನ್ಯ’ ಎಂದು ಹೆಸರಿಟ್ಟು ಯುದ್ಧಗಳಲ್ಲಿ ಬಳಸಿಕೊಳ್ಳಲಾಯಿತು.
ಆಕರ – ಹಿಸ್ಟರಿ ಆಫ್ ಮೈಸೂರು, ಮಾರ್ಕ್ಸ್ ವಿಲ್ಕ್ಸ್
4. ಐನ್‌ಮನೆಗೆ ಬೆಂಕಿ
ಕೊಳಕೇರಿ ಮಡಿಕೇರಿ ತಾಲೂಕಿನ ಒಂದು ಸಣ್ಣ ಊರು. ಬಿzಟಂಡ ಎಂಬ ಕೊಡವ ಕುಟುಂಬದ ಐನ್ ಮನೆ ಈ ಕೊಳಕೇರಿಯಲ್ಲಿದೆ. ಟಿಪ್ಪು ವಿರುದ್ಧ ಹೋರಾಡಿದ ಸೇನೆಯಲ್ಲಿ ಈ ಬಿzಟಂಡ ಮನೆಯ ೪೦ ಜನ ಯೋಧರಿದ್ದರು. ಒಂದು ದಿನ ರಾತ್ರಿ ಕೊಳಕೇರಿಗೆ ದಾಳಿ ಇಟ್ಟ ಟಿಪ್ಪು ಬಿದ್ದಾಟಂಡ ಐನ್‌ಮನೆಗೆ ಬೆಂಕಿ ಇಟ್ಟ. ಹುಲ್ಲಿನ ಮನೆ ಬೆಂದು, ಮನೆಯಲ್ಲಿದ್ದವರೆಲ್ಲರೂ ಸತ್ತರು. ಹೆರಿಗೆಗೆಂದು ತವರಿಗೆ ತೆರಳಿದ್ದ ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಹೊರತುಪಡಿಸಿ ಸಂಪೂರ್ಣ ಬಿzಟಂಡ ಕುಟುಂಬ ಮತಾಂಧನ ಉರಿಗೆ ಬಲಿಯಾಯಿತು. ಇಂದಿಗೂ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದಲ್ಲಿ ಸುಟ್ಟುಹೋದ ಬಿದ್ದಾಟಂಡ ಐನ್ ಮನೆಯ ಪಳಯುಳಿಕೆಗಳನ್ನು ಕಾಣಬಹುದು. ಹೊಸದಾಗಿ ನಿರ್ಮಿಸಲಾದ ಬಿದ್ದಾಟಂಡ ಐನ್‌ಮನೆ ಪಳಯುಳಿಕೆಗಳನ್ನು ಕಾಣಬಹುದು.
5. ಕೊಡಗಿನ ಆಕ್ರಮಣ
1770ರ ದಶಕದ ಆರಂಭದ ಕಾಲದ ಹೈದರಾಲಿ ಕೊಡಗನ್ನು ಆಕ್ರಮಣ ಮಾಡಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದ. ಒಮ್ಮೆ ಪಿರಿಯಾಪಟ್ಟಣ ಮೂಲಕ ಮುಳ್ಳುಸೋಗೆಯ ಮೇಲೆ ಆಕ್ರಮಣ ಮಾಡಿದ ಹೈದರಾಲಿ ಪೆಟ್ಟು ತಿಂದು ಶ್ರೀರಂಗಪಟ್ಟಣಕ್ಕೆ ಮರಳಿದ್ದ. ಮತ್ತೊಮ್ಮೆ ದಕ್ಷಿಣ ಕೊಡಗಿನ ಮೂಲಕ ನುಗ್ಗಲು ಪ್ರಯತ್ನ ಪಟ್ಟು ಅಲ್ಲೂ ಮಾರಣಾಂತಿಕವಾಗಿ ಪೆಟ್ಟು ತಿಂದು ಪಲಾಯನ ಮಾಡಿದ್ದ. ಈ ಯುದ್ಧದಲ್ಲಿ ಹೈದರ ತನ್ನ ಇಬ್ಬರು ಸರದಾರರನ್ನು ಕೂಡ ಕಳೆದುಕೊಂಡಿದ್ದ. ಕೊನೆಗೆ ಕೊಡಗಿನ ಆಸೆಯನ್ನು ಹೊತ್ತುಕೊಂಡೇ ಹೈದರ್ ಸತ್ತ.
1782ರಲ್ಲಿ ಹೈದರಾಲಿ ಸತ್ತ ನಂತರ ಉತ್ತರಾಧಿಕಾರಿಯಾಗಿ ಬಂದ ಟಿಪ್ಪು ಕೊಡಗನ್ನು ವಶಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ಕೊಡಗಿನತ್ತ ಧಾವಿಸಿದ. ಆತ ಕೂಡಾ ತನ್ನ ತಂದೆಯಂತೆಯೇ ಹಲವು ಬಾರಿ ಪೆಟ್ಟು ತಿಂದು ಮೈಸೂರಿಗೆ ಹಿಂದಿರುಗಿದ. ಮಡಿಕೇರಿ ಮತ್ತು ಮುಳ್ಳುಸೋಗೆ (ಕುಶಾಲನಗರ) ಬಿಟ್ಟರೆ ಟಿಪ್ಪುವಿನ ಸಂಪೂರ್ಣ ಕೊಡಗಿನ ಆಸೆ ಈಡೇರಲೇ ಇಲ್ಲ. ಮಡಿಕೇರಿ ಕೋಟೆಗೆ ತನ್ನ ಸೇನಾನಿ ಜಾಫರ್ ಕೂಲಿ ಬೇಗನನ್ನು ಕಿದಾರನನ್ನಾಗಿ ನೇಮಕ ಮಾಡಿದ ಟಿಪ್ಪು ಮಡಿಕೇರಿಯನ್ನು ಜಾಫರಾಬಾದ್ ಎಂದು ನಾಮಕರಣ ಮಾಡಿದ.
ಭಾಗಮಂಡಲಕ್ಕೆ ತನ್ನ ಸೈನ್ಯದೊಡನೆ ಧಾವಿಸಿ ಅರ್ಚಕರನ್ನು ಕೊಂದು ಭಗಂಡೇಶ್ವರ ದೇವಸ್ಥಾನದ ಎರಡು ಕಲ್ಲಿನ ಆನೆಗಳನ್ನು ಮುರಿಸಿದ (ಅದು ಇಂದಿಗೂ ಮುರಿದ ಸ್ಥಿತಿಯಲ್ಲಿದೆ). ಟಿಪ್ಪು ಭಾಗಮಂಡಲದ ಠಿಕಾಣಿ ಹೂಡಿದ. ಭಗಂಡೇಶ್ವರನ ದೇವಸ್ಥಾನದಲ್ಲಿ ಸೇನೆಯನ್ನು ಜಮೆ ಮಾಡಿದ. ಕೊಡಗಿನ ಜನರು ಭಗಂಡೇಶ್ವರನನ್ನು ಆರಾಧಿಸುತ್ತಾರೆಂದೇ ಭಾಗಮಂಡಲವನ್ನು ‘ಅಬ್ಜಲಾಬಾದ್’ ಎಂದು ಮರುನಾಮಕರಣ ಮಾಡಿದ.
ಆಕರ – ಹಿಸ್ಟರಿ ಆಫ್ ಮೈಸೂರು ಅಂಡ್ ಕೂರ್ಗ್, ಲೂಯಿಸ್ ರೈಸ್, 1878
6. ಅವಿನಾಶಿ ಭಗಂಡೇಶ್ವರ
ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಗೆ ದಾಳಿಯಿಟ್ಟ ಟಿಪ್ಪು ಕಲ್ಲಿನ ಆನೆಗಳನ್ನು ಮುರಿಸಿದ ಗರ್ಭಗುಡಿಗೆ ನುಗ್ಗಿದರೆ ಒಳಗೆ ಭಗಂಡೇಶ್ವರನೇ ಇಲ್ಲ. ಪಾನಿಪೀಠವೂ ಇಲ್ಲ, ಲಿಂಗವೂ ನಾಪತ್ತೆ! ಏಕೆಂದರೆ ಟಿಪ್ಪು ಭಾಗಮಂಡಲಕ್ಕೆ ಧಾವಿಸುತಿದ್ದಾನೆ ಎಂದು ಸುದ್ದಿ ತಿಳಿದಾಗ ಅಲ್ಲಿನ ಅರ್ಚಕ ಸಮಯಪ್ರಜ್ಞೆಯನ್ನು ಮೆರೆದ. ಲಿಂಗವನ್ನು ಪಾನಿಪೀಠ ಸಮೇತ ಕಾಡಿಗೆ ಹೊತ್ತೊಯ್ದು ಬಿದಿರ ಮೇಳೆಗಳ ನಡುವೆ ಅವಿತಿರಿಸಿ ಕರಾವಳಿಗೆ ಓಡಿಹೋದ. ಹೋಗುವ ಮುನ್ನ ಆತ ಪಕ್ಕದ ಊರಿನ ವ್ಯಕ್ತಿಯೊಬ್ಬನಲ್ಲಿ ಈ ವಿಷಯ ತಿಳಿಸಿದ್ದ.
ಇತ್ತ ದೇವಸ್ಥಾನದಲ್ಲಿ ದೇವರಿಲ್ಲ, ನಿತ್ಯಪೂಜೆಯಿಲ್ಲ. ಅಂಥ ಹೊತ್ತಲ್ಲಿ ಚೇರಂಬಾಣೆ ಸಮೀಪದ ಬೇಂಗೂರು ಎಂಬ ಗ್ರಾಮದ ಪಟ್ಟಮಾಡ ಉತ್ತಯ್ಯನೆಂಬ ವ್ಯಕ್ತಿ ಧರ್ಮರಕ್ಷಣೆಯ ಹೊಣೆಯನ್ನು ಹೊತ್ತ. ತನ್ನೂರಿನ ಬ್ರಾಹ್ಮಣ ಬಾಲಕನೊಬ್ಬನನ್ನು ಹೆಗಲಮೇಲೆ ಹೊತ್ತು ದಿನಾ ಮುಂಜಾನೆ ಕಾಡಿಗೆ ಹೋಗುತ್ತಿದ್ದ ಉತ್ತಯ್ಯ.
ಆ ಬಾಲಕನಿಂದ ಬಿದಿರ ಮೇಳೆಯೊಳಗೆ ಭಗಂಡೇಶ್ವರನಿಗೆ ಪೂಜೆ ಮಾಡಿಸುತ್ತಿದ್ದ. ದೇವಸ್ಥಾನ ಹಾಳಾದರೂ ಭಗಂಡೇಶ್ವರನ ಪೂಜೆ ತಪ್ಪದಂತೆ ನೋಡಿಕೊಂಡ.
ಧರ್ಮರಕ್ಷಣೆಗಾಗಿ ಬ್ರಾಹ್ಮಣ ಹುಡುಗನನ್ನು ಹೊರುತ್ತಿದ್ದ ಉತ್ತಯ್ಯ ನಂತರ ತಾನೂ ಮದ್ಯಮಾಂಸಗಳನ್ನು ತ್ಯಜಿಸಿದ ಬದುಕಿದ. ಇಂದಿಗೂ ಭಾಗಮಂಡಲದಲ್ಲಿ ಪೂಜೆಯ ಮೊದಲ ಪ್ರಸಾದ ಆ ಪುಣ್ಯಾತ್ಮ ಪಟ್ಟಮಾಡ ವಂಶಸ್ಥರಿಗೆ.
ಆಕರ – ಹಿಸ್ಟರಿ ಆಫ್ ಮೈಸೂರು ಅಂಡ್ ಕೂರ್ಗ್, ಲೂಯಿಸ್ ರೈಸ್, 1878
————————————————————————–
7. ಟಿಪ್ಪುವಿನಿಂದ ಧ್ವಂಸವಾದ ದೇವಾಲಯಗಳು
ಕೊಡಗಿನ ಕುಶಾಲನಗರದಿಂದ ಪೊನ್ನಂಪೇಟೆಯವರೆಗೆ ಟಿಪ್ಪು ನಾಶಮಾಡಿದ ದೇವಸ್ಥಾನಗಳ ಕುರುಹುಗಳು ಇಂದಿಗೂ ಕಾಣುತ್ತವೆ. ಆತನ ಕ್ರೂರತೆಯ ಕಥೆಯನ್ನು ಹೇಳುತ್ತವೆ.
ಕೊಳಕೇರಿ ಗ್ರಾಮದ ಉಮಾಮಹೇಶ್ವರ ದೇವಸ್ಥಾನ (1956ರಲ್ಲಿ ಜೀರ್ಣೋದ್ದಾರವಾಯಿತು)
ಕೊಳಕೇರಿ ಮಹಾದೇವರ ದೇವಸ್ಥಾನ (2005ರಲ್ಲಿ ಜೀರ್ಣೋದ್ದಾರವಾಯಿತು)
ಪೊನ್ನಂಪೇಟೆ ಸಮೀಪ ನಡಿಕೇರಿ ಗೋವಿಂದ ಸ್ವಾಮಿ ದೇವಸ್ಥಾನ (ಹೈದರ್ ದಾಳಿ)
ಪೊನ್ನಂಪೇಟೆ ಸಮೀಪ ಬೇಗೂರು ಓಣಿಲಯ್ಯಪ್ಪ ದೇವಸ್ಥಾನ (ಹೈದರ್ ದಾಳಿ)
ಅಪ್ಪಂಗಳ ಮಾದೂರಪ್ಪ ದೇವಸ್ಥಾನ (2014ರಲ್ಲಿ ಜೀರ್ಣೋದ್ದಾರವಾಗಿದೆ)
ಅರಮೇರಿಯ ಭಗವತಿ ದೇವಸ್ಥಾನ (ಈಗಲೂ ಪಾಳುಬಿದ್ದಿದೆ)
ಅರ್ವತ್ತೋಕ್ಲು ಈಶ್ವರ ದೇವಸ್ಥಾನ
ಕದನೂರು ಭಗವತಿ ದೇವಸ್ಥಾನ
ಮಲೆತಿರಿಕೆ ದೇವಸ್ಥಾನ
ಬೊಳ್ಳುಮಾಡು ಈಶ್ವರ ದೇವಸ್ಥಾನ
ಐಮಂಗಲ ಈಶ್ವರ ದೇವಸ್ಥಾನ
ಕುಶಾಲನಗರ ಮತ್ತು ಶುಂಠಿಕೊಪ್ಪದ ಎಲ್ಲ ದೇವಸ್ಥಾನಗಳು
ವಿರಾಜಪೇಟೆ ಸಮೀಪದ ಅರಮೇರಿಯ ಭಗವತಿ ದೇವಸ್ಥಾನ
8. ಫ್ರೆಂಚರ ಗುಂಡುಗಳು
ಕರ್ನಾಟಕ ಕಂಡ ಮಹಾನ್ ಕ್ರೂರಿ ದೊರೆಗಳಲ್ಲೊಬ್ಬನಾದ ಟಿಪ್ಪು ಹೆಗಲಿಗೆ ಕೋವಿ ಇಟ್ಟು ಫ್ರೆಂಚರು ಮಲಬಾರ್ ಮತ್ತು ಮಂಗಳೂರನ್ನು ಗೆಲ್ಲುವ ಕನಸನ್ನು ಕಾಣುತ್ತಿದ್ದರು. ಅದಕ್ಕೆ ಪ್ರಬಲ ಅಡ್ಡಿಯಾಗಿದ್ದವರು ಕೊಡವರು. ಫ್ರೆಂಚ್ ಮಿಲಿಟರಿ ಜನರಲ್ ಎಂ. ಲಾಲಿ ಕೊಡವರ ಗೆರಿ ಯುದ್ಧಗಳ ಬಗ್ಗೆ ಚಿಂತಿತನಾಗಿದ್ದ. ಫ್ರಾನ್ಸಿನಿಂದ ಹೆಚ್ಚಿನ ಮದ್ದುಗುಂಡುಗಳನ್ನು ತರಿಸುವುದಾಗಿ ಟಿಪ್ಪುವಿಗೆ ಮಾತು ಕೊಟ್ಟ ಲಾಲಿ ಹಡಗಿನಿಂದ ಪುದುಚೇರಿಗೆ ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನು ತರಿಸಿದ.
ಈ ಪ್ರಸಂಗ 1780ರಿಂದ 85ರ ನಡುವೆ ನಡೆದಿರಬಹುದು ಎಂದು ಕೊಡಗಿನ ಖ್ಯಾತ ಇತಿಹಾಸಜ್ಞ ಬಾಚರಣಿಯಂಡ ಅಪ್ಪಣ್ಣನವರು ಹೇಳುತ್ತಾರೆ. ಹೀಗೆ ಪುದುಚೇರಿಯಿಂದ ಎತ್ತುಗಳ ಬೆನ್ನ ಮೇಲೆ ಹೇರಿಕೊಂಡು ಬಂದ ಈ ಉಂಡೆಗಳನ್ನು ಕೊಡವರು ತಡಿಯಂಡಮೋಳ್ ಬೆಟ್ಟದಿಂದ ಇಳಿಸಲು ಬಿಡಲೇ ಇಲ್ಲ. ಆಗ ಕಾಡುಪಾಲಾದ ಕಬ್ಬಿಣದ ಗುಂಡುಗಳೇ ಇವು.
ಗುಂಡುಗಳು ಕೈತಪ್ಪಿದ ಆಕ್ರೋಶ ಟಿಪ್ಪು ಮತ್ತು ಫ್ರೆಂಚರಿಗೆ ಕೊಡವರ ಮೇಲಿನ ದ್ವೇಷವನ್ನು ಇಮ್ಮಡಿ ಮಾಡಿತು. ಅದರ ಪರಿಣಾಮವೇ ದೇವಟ್ಟಿಪರಂಬು ಹತ್ಯಾಕಾಂಡ
ಆಕರ – ಹೊಸದಿಗಂತ ಪತ್ರಿಕೆಯಲ್ಲಿನ ಲೇಖನ, ಸಂತೋಷ್ ತಮ್ಮಯ್ಯ
9. ಟಿಪ್ಪು ವಿರುದ್ಧ ಹೋರಾಡಿದ ಕೊಡವ ವೀರರು
ಕೊಡಗಿಗೆ ದಾಳಿ ಮಾಡುತ್ತಿದ್ದ ಹೈದರ್ ಮತ್ತು ಟಿಪ್ಪು ದಾಳಿಯನ್ನು ಸಮರ್ಥವಾಗಿ ಎದುರಿಸಿ ಬಲಿದಾನಿಗಳಾದ ಕೊಡವ ವೀರಪುರುಷರನ್ನು ಇಂದಿಗೂ ಆಯಾಯ ಕೊಡವ ಮನೆತನಗಳು ಮಹಾಪುರುಷರು ಎಂದು ಆರಾಧಿಸುತ್ತಿವೆ. ವರ್ಷಂಪ್ರತಿ ಅವರ ಸಮಾಧಿಗಳಲ್ಲಿ ಉತ್ಸವಗಳು ನಡೆಯುತ್ತವೆ. ಇಂಥಲ್ಲಿ ಸರ್ಕಾರ ಟಿಪ್ಪು ಜಯಂತಿ ಆಚರಿಸಿದರೆ ಆ ಕುಟುಂಬಗಳಿಗೆ ಹೇಗಾಗಬಹುದು? ಅವರ ಮನಸ್ಥಿತಿ ಹೇಗಿರಬಹುದು? ಈ ಮಹಾಪುರುಷರು ಸ್ವಧರ್ಮ ಮತ್ತು ಸ್ವರಾಜ್ಯಕ್ಕಾಗಿ ಟಿಪ್ಪು ಮತ್ತು ಹೈದರ್ ವಿರುದ್ಧ ಹೋರಾಟ ನಡೆಸಿದ್ದರು. ಈಗ ಸರ್ಕಾರ ಟಿಪ್ಪುವನ್ನೇ ಸ್ವಾತಂತ್ರ್ಯ ಹೋರಾಟಗಾರ ಎಂದರೆ ಸರ್ಕಾರ ಕೊಡವರನ್ನೇನು ಸ್ವಾತಂತ್ರ್ಯ ವಿರೋಧಿಗಳೆಂದು ಭಾವಿಸುತ್ತದೆಯೇ? ಅವರ ಹೋರಾಟಕ್ಕೆ, ಬಲಿದಾನಕ್ಕೆ ಬೆಲೆಯೇ ಇಲ್ಲವೇ?
10. ಟಿಪ್ಪು ವಿರುದ್ಧ ಹೋರಾಡಿದ ಕೊಡವ ವೀರರು
ಕುಟಿರ ಪೊನ್ನಣ್ಣ ಮತ್ತು ಮಾಣಿಚ್ಚ ಸೋದರರು
ಒಮ್ಮೆ ಹೈದರ್ ತನ್ನ ಇಬ್ಬರು ಪಠಾಣ್ ಸರದಾರನ್ನು ಕುಶಾಲನಗರ ಮೂಲಕ ಕೊಡಗಿಗೆ ಕಳುಹಿಸಿದ್ದ. ಕುಟಿ ಪೊನ್ನಣ್ಣ ಮತ್ತು ಮಾಣಿಚ್ಚ ಸೋದರರು ನೇರವಾಗಿ ಹೈದರ್ ಸರದಾರರ ಮೇಲೆ ಏರಿಹೋಗಿ ಅವರ ರುಂಡ ಹಾರಿಸಿದರು. ಕುಶಾಲನಗರದ ಬೈಚನಹಳ್ಳಿಯಲ್ಲಿದ್ದ ವೀರ ಪೊನ್ನಣ್ಣನ ಸಮಾಧಿ ಈಗ ಬೆಂಗಳೂರು-ಬಂಟ್ವಾಳ ಹೆದ್ದಾರಿಯಲ್ಲಿ ಸಮಾಧಿ ಸಮಾಧಿಯಾಗಿದೆ
ಅಪ್ಪಚ್ಚೀರ ಮಂದಣ್ಣ
ಮಡಿಕೇರಿ-ಭಾಗಮಂಡಲ ರಸ್ತೆಯ ಅಪ್ಪಂಗಳ ಊರಿನ ಅಪ್ಪಚ್ಚಿರ ಮನೆತನದ ಮಹಾಪ್ರರಾಕ್ರಮಿ ಮಂದಣ್ಣ. ಮುಳ್ಳುಸೋಗೆ ಯುದ್ಧದಲ್ಲಿ ಈತ ನೇರ ಹೈದರಾಲಿಯ ಬಿಡಾರಕ್ಕೇ ಓಡಿದ್ದ. ಮಂದಣ್ಣನ ಕೈಯಲ್ಲಿದ್ದ ಒಡಿಕತ್ತಿ, ಆತನ ದೇಹದಾಢ್ಯತೆಗಳನ್ನು ಕಂಡ ಹೈದರಾಲಿ ಓಟಕಿತ್ತಿದ್ದ. ಹೈದರಾಲಿಯ ಮೂರನೆಯ ಮುತ್ತಿಗೆಗಿಂತ ಕೆಲವೇ ದಿನಗಳ ಮುನ್ನ ಮಂದಣ್ಣ ನಿಗೂಢವಾಗಿ ಸಾವನ್ನಪ್ಪಿದ. ಬಲೆಯಲ್ಲಿ ಬಂಧಿಸಿ ಆತನನ್ನು ಕೊಲ್ಲಲಾಯಿತು ಎಂದು ಕೊಡವರು ಇಂದಿಗೂ ಹೇಳುತ್ತಾರೆ.
ಕನ್ನಂಡ ದೊಡ್ಡಯ್ಯ
ಎರಡು ಬಾರಿ ಮುಸಲ್ಮಾನ ಸೈನ್ಯವನ್ನು ಹಿಂದಕ್ಕಟ್ಟಿದ ಮಹಾಪರಾಕ್ರಮಿ ಕನ್ನಂಡ ದೊಡ್ಡಯ್ಯ. 1776ರಲ್ಲಿ ಹೈದರಾಲಿ ಮತ್ತೆ ದಾಳಿ ನಡೆಸಿದಾಗ ಈ ಬಾರಿ ಆತನನ್ನು ಕೊಂದೇ ಮರಳುವುದಾಗಿ ಕೊಡಗಿನ ರಾಜ ಲಿಂಗರಾಜೇಂದ್ರನಿಗೆ ಹೇಳಿ ಕಾಜೂರು ಯುದ್ಧಕ್ಕೆ ಹೋಗಿದ್ದ. ಆದರೆ ಕಾಜೂರು ಯುದ್ಧದಲ್ಲಿ ಕೊಡಗಿನ ಸೇನೆಯೇನೋ ಗೆದ್ದಿತು. ಆದರೆ ದೊಡ್ಡಯ್ಯನನ್ನು ಹೈದರನ ಸರದಾರನಾಗಿದ್ದ ಬೊಳ್ಳಯ್ಯನಾಜಿ ಎಂಬವನು ಹಿಂಬದಿಯಿಂದ ಬಂದು ಕತ್ತರಿಸಿ ಹಾಕಿದ್ದ. ತನ್ನ ತಲೆ ಕತ್ತರಿಸಿದ್ದರೂ ಈ ದೊಡ್ಡಯ್ಯ ಬೊಳ್ಳಯ್ಯನಾಜಿಯನ್ನು ಅ ಉರುಳಿಸಿದ್ದ. ಅದೇ ಸ್ಥಿತಿಯ ದೊಡ್ಡಯ್ಯ ಮಡಿಕೇರಿ ಕೋಟೆಗೆ ಬಂದು ರಾಜನೆದುರು ಕುಸಿದು ಸತ್ತ. ಇಂದಿಗೂ ಕೊಡಗಿನಲ್ಲಿ ಜನ ದೊಡ್ಡಯ್ಯನನ್ನು ಕಾಜೂರಿನಿಂದ ಭದ್ರಕಾಳಿಯೇ ಹೊತ್ತುಕೊಂಡು ಮಡಿಕೇರಿ ಬಂತು ಎಂದು ನಂಬುತ್ತಾರೆ. ಮಡಿಕೇರಿಯಲ್ಲಿ ಪ್ರತೀ ವರ್ಷ ಮಾರ್ಚ್ ತಿಂಗಳಲ್ಲಿ ಈ ದೊಡ್ಡಯ್ಯನ ಸಮಾಧಿಯಲ್ಲಿ ಕೋಲ-ನೇಮಗಳು ವಿಜೃಂಭಣೆಯಿಂದ ಜರುಗುತ್ತವೆ.
11. ಕೊಡುಗು ಜಿಲ್ಲೆಯ ಮುಸ್ಲಿಂ ಜನಸಂಖ್ಯೆ
ಕೊಡಗಿನಲ್ಲಿ ಟಿಪ್ಪುವಿನಿಂದ ಆರಂಭಗೊಂಡ ಮುಸ್ಲಿಮರ ಸಂಖ್ಯಾಬಾಹುಳ್ಯ ಹೆಚ್ಚಳದ ಪ್ರಯತ್ನಗಳು ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಜಾರಿಯಲ್ಲಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಲ್ಲಿ ಇದು ಸ್ಪಷ್ಟವಾಗಿ ಕಾಣುತ್ತಿದೆ. ಮುಸ್ಲಿಂ ಜನಸಂಖ್ಯೆಯ ಏರಿಕೆಯ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ.
2011ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇಕಡಾ 14.23 ಆದರೆ ಕೊಡಗಿನ ಎರಡು ತಾಲ್ಲೂಕುಗಳು ಈ ಪ್ರಮಾಣವನ್ನೂ ಮೀರಿ ಮುಸ್ಲಿಂ ಬಾಹುಳ್ಯವನ್ನು ಹೊಂದಿವೆ. ಮತ್ತು ಸೋಮವಾರಪೇಟೆ ತಾಲ್ಲೂಕು ಸಹ ಇದೇ ಹಾದಿಯಲ್ಲಿದೆ. ಇಡೀ ಜಿಲ್ಲೆಯ ಒಟ್ಟು ಮುಸಲ್ಮಾನರರ ಸಂಖ್ಯೆಯು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಮುಸಲ್ಮಾನರನ್ನು ಹೊಂದಿರುವುದರಲ್ಲಿ ಸಂಶಯವಿಲ್ಲ.
data
ಹಾಗೆಯೇ ಮೈಸೂರು ತಾಲ್ಲೂಕು ಸಹ ಮುಸಲ್ಮಾನರ ಸಂಖ್ಯೆಯಲ್ಲಿ (ಶೇ. 16.25) ರಾಷ್ಟ್ರೀಯ ಸರಾಸರಿಗಿಂತ ಮುಂದಿರುವುದನ್ನು ಗಮನಿಸ ಬೇಕಾದ ಸಂಗತಿಯೇ ಆಗಿದೆ.
ಮಾಹಿತಿ – ಫೌಂಡೇಷನ್ ಫಾರ್ ಇಂಡಿಕ್ ರಿಸರ್ಚ್ ಸ್ಟಡೀಸ್, ಬೆಂಗಳೂರು ಮತ್ತು ಕೇಂದ್ರ ಸರ್ಕಾರದ ಸೆನ್ಸಸ್ ಇಲಾಖೆಯ ವರದಿಗಳು
12. ಕನ್ನಡ ವಿರೋಧಿ – ಕರುನಾಡ ದ್ರೋಹಿ ಟಿಪ್ಪು
ಮಲಬಾರಿನ ಮುಸಲ್ಮಾನರು ಮಲೆಯಾಳಂ ಭಾಷೆಯನ್ನು, ತಮಿಳು ಮುಸ್ಲಿಮರು ತಮಿಳನ್ನು ಇಂದಿಗೂ ಮಾತನಾಡುತ್ತಾರೆ ಓದಿ ಬರೆಯುತ್ತಾರೆ. ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಬರೇ ಉರ್ದುವಿನಲ್ಲಿ ಮಾತನಾಡುವುದು, ಕನ್ನಡ ವಿರೋಧಿ ಮನೋಭಾವ ಪ್ರದರ್ಶಿಸುವುದು ಟಿಪ್ಪು ಆರಂಭಿಸಿದ ಫಾರ್ಸಿ ಮತ್ತು ಉರ್ದು ವಿದ್ಯಾಭ್ಯಾಸ ಪದ್ಧತಿಯಿಂದ.
ಟಿಪ್ಪುವು 1796ರಲ್ಲಿ ಮೈಸೂರಿನ ರಾಜರ ಅರಮನೆಯನ್ನು ಲೂಟಿ ಮಾಡಿದಾಗ ಅರಮನೆಯ ಗ್ರಂಥಾಲಯದಲ್ಲಿದ್ದ ಅಮೂಲ್ಯ ಗ್ರಂಥಗಳು, ತಾಳೆಯೋಲೆಯ ಹಸ್ತಪ್ರತಿಗಳು ಮತ್ತು ಕಡತಗಳನ್ನು ಕುದುರೆಗಳಿಗೆ ಹುರಳಿ ಬೇಯಿಸಲು ಇಂಧನವಾಗಿ ಉಪಯೋಗಿಸುವಂತೆ ಅಪ್ಪಣೆ ಮಾಡಿದ.
ಕರ್ನಾಟಕದ ಹೆಮ್ಮೆಯ ವಿಜಯನಗರದ ಸಾಮ್ರಾಜ್ಯದ ಪರಂಪರೆಯಂತೆ ಮೈಸೂರಿನಲ್ಲು ನಡೆಯುತ್ತಿದ್ದ ವೈಭವದ ದಸರೆಯ ಮೆರವಣಿಗೆ, ನಾಡ ಹಬ್ಬಕ್ಕೆ ತಡೆ ಬಿದ್ದದ್ದು ಸಹ ಜಿಹಾದಿ ಮಾನಸಿಕತೆಯ ಟಿಪ್ಪುವಿನ ಕಾಲದಲ್ಲೇ ಎಂಬುದನ್ನು ಗಮನಿಸಬೇಕಾದ ಸಂಗತಿ.
ಇದು ಟಿಪ್ಪುವಿನ ಕನ್ನಡ ಪ್ರೇಮ ಮತ್ತು ನಾಡ ಸಂಸ್ಕೃತಿಗೆ ತೋರಿಸುತ್ತಿದ್ದ ಗೌರವ.
13. ಕನ್ನಡಕ್ಕೆ ತಿರಸ್ಕಾರ ಪರ್ಶಿಯನ್‌ಗೆ ಪುರಸ್ಕಾರ
ಟಿಪ್ಪುವನ್ನು ’ಕನ್ನಡದ ಕುವರ’ ಎಂದು ಬಿಂಬಿಸಲಾಗುತ್ತಿದೆ. ಆದರೆ ಮೈಸೂರು ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಟಿಪ್ಪು ಬದಲಿಸಿ ಫಾರ್ಸಿ ಭಾಷೆಯನ್ನು ತಂದ. ಸೈನ್ಯದ ಎಲ್ಲ ಯೋಜನೆಗಳಿಗೂ, ವಿಭಾಗಗಳಲ್ಲೂ ಇಸ್ಲಾಂ ಮತಾಧಾರಿತ ಹೆಸರುಗಳನ್ನಿಡುತ್ತಿದ್ದ.
ಮೈಸೂರಿನ ವಿವಿಧ ಇಲಾಖೆಗಳಲ್ಲಿ ಬಳಸುವ ಆಡಳಿತಾತ್ಮಕ ಶಬ್ದಗಳನ್ನು ಇಲ್ಲಿನ ಜನಕ್ಕೆ ಅತಿ ಅಪರಿಚಿತವಾಗಿದ್ದ ಫಾರ್ಸಿ ಭಾಷೆಯಲ್ಲಿ ಬಳಸುವಂತೆ ಮಾಡಿದ.
ಅಹ್ಮದಿ, ಸಾದಿಕ್, ಝೆಹ್ರಾ, ಔತ್ಮಾನೀ, ಫಾರೂಕ್, ಜಾಫರ್ ಇತ್ಯಾದಿ ಪಕ್ಕಾ ಅರೇಬಿಕ್ ಹೆಸರುಗಳುಳ್ಳ ನಾಣ್ಯಗಳನ್ನು ತಂದು ತನ್ನದು ಇಸ್ಲಾಮೀ ಆಡಳಿತ ಎಂದು ತೋರ್ಪಡಿಸಿದ.
ಖಾತೆ, ಖಿರ್ದಿ, ಪಹಣಿ, ಖಾನೀಸುಮಾರಿ, ಗುದಸ್ತಾ, ತಖ್ತೆ, ತರಿ, ಖುಷ್ಕಿ, ಬಾಗಾಯ್ತು, ಬಂಜರು, ಜಮಾಬಂದಿ, ಅಹವಾಲು ಇತ್ಯಾದಿ ಫಾರ್ಸಿ ಶಬ್ದಗಳು ಕಂದಾಯ ಇಲಾಖೆಯಲ್ಲಿ ನುಸುಳಿದ್ದು ಟಿಪ್ಪುವಿನಿಂದಲೇ. ದೂರದ ಅಳತೆ, ಸಮಯ ಇತ್ಯಾದಿ ಮಾಪನಗಳನ್ನೂ ಚಿತ್ರ ವಿಚಿತ್ರಗೊಳಿಸಿ ಗೊಂದಲದ ಗೂಡಾಗಿಸಿದ. ತಾನೇ ಅರವತ್ತು ವರ್ಷಗಳ ಕ್ಯಾಲೆಂಡರ್ ಒಂದನ್ನು ರೂಪಿಸಿ ತಿಂಗಳು, ದಿನಗಳಿಗೆ ಹೊಸ ಹೆಸರುಗಳನ್ನು ನೀಡಿ ಅದನ್ನೇ ತನ್ನ ಅಧಿಕೃತ ಪತ್ರಗಳಲ್ಲಿ ನಮೂದಿಸತೊಡಗಿದ.
ಇದಲ್ಲದೇ ಖಾವಂದ್, ಅಮಲ್ದಾರ, ಶಿರಸ್ತೇದಾರ ಹೀಗೆ ಪ್ರತಿಯೊಂದು ಅಧಿಕಾರ ಪದವಿಗಳನ್ನೂ ಫಾರ್ಸಿಯನ್ನಾಗಿಸಿ ತಾವು ವಿದೇಶಿ ಆಡಳಿತದಲ್ಲಿದ್ದೇವೇನೋ ಎಂಬ ಭ್ರಮೆ ಜನಸಾನ್ಯರಿಗೆ ಬರುವಂತೆ ಮಾಡಿದ.
ಕರಾವಳಿ ಪ್ರದೇಶಕ್ಕೆ ಯಾಮ್ ಸುಬಾ, ಮಲೆನಾಡಿಗೆ ತರನ್ ಸುಬಾ ಮತ್ತು ಬಯಲುಸೀಮೆಗೆ ಘಬ್ರಾ ಸುಬಾ ಎಂದು ಕರೆದ. ಸರಕಾರೀ ಕಡತ, ದಾಖಲೆಗಳಲ್ಲಿ ಆಡಳಿತ ವ್ಯವಹಾರಗಳಲ್ಲಿ ಇವೇ ಹೆಸರನ್ನು ಟಿಪ್ಪು ಚಾಲ್ತಿಗೆ ತಂದ.
14. ಬದಲಾದ ಊರಿನ ಹೆಸರುಗಳು
ಸ್ಥಳೀಯ ಸಂಸ್ಕೃತಿಯನ್ನು ನಾಶಗೊಳಿಸಿ ಬಲವಂತವಾಗಿ ಇಸ್ಲಾಮಿ ಸಂಸ್ಕೃತಿಯನ್ನು ಹೇರುವ ತನ್ನ ಕಾರ್ಯವನ್ನು ಊರುಗಳ ಮೂಲ ಹೆಸರುಗಳನ್ನು ಬದಲಿಸುವುದರ ಮೂಲಕವೂ ಟಿಪ್ಪು ಕೈಗೊಂಡಿದ್ದ. ಇಂತಹ ಬದಲಾವಣೆಗಳ ಪಟ್ಟಿ (ಕೆಲವು ಮಾತ್ರ) ಇಲ್ಲಿದೆ ನೋಡಿ.
ಬ್ರಹ್ಮಪುರಿ – ಸುಲ್ತಾನ್ ಪೇಟ್ ಮೊಳಕಾಲ್ಮೂರು – ಮುಹಮ್ಮದಾಬಾದ್
ಕಾಳೀಕೋಟೆ (ಕೇರಳ) – ಫರೂಕಾಬಾದ್ ಚಿತ್ರದುರ್ಗ – ಫಾರ್ರುಕ್ ಯಾಬ್ ಹಿಸ್ಸಾರ್
ಮಡಿಕೇರಿ – ಜಫರಾಬಾದ್ ಸತ್ಯಮಂಗಲ – ಸಲಾಮಾಬಾದ್
ದೇವನಹಳ್ಳಿ – ಯೂಸುಫಾಬಾದ್ ಬೇಕಲ್ – ರುಮುಟಾಬಾದ್
ದಿಂಡಿಗಲ್ – ಖಲೀಲಾಬಾದ್ ಗುತ್ತಿ – ಫೈಜ್ ಹಿಸ್ಸಾರ್
ಕೃಷ್ಣಗಿರಿ – ಫಲ್ಕ್ ಇಲ್ ಅಜಮ್ ಸಿರಾ – ರುಸ್ತುಮಾಬಾದ್
ಪೆನುಗೊಂಡ – ಫಕ್ತಾಬಾದ್ ಸಂಕ್ರಿದುರ್ಗ – ಮುಜ್ಜಿಫರಾಬಾದ್
ಸಕಲೇಶಪುರ – ಮಂಜ್ರಾಬಾದ್ ಸದಾಶಿವಗಢ – ಮಜೀದಾಬಾದ್
ಮಂಗಳೂರು – ಜಮಾಲಾಬಾದ್ ಧಾರವಾಡ – ಖುರ್ಷಿದ್ -ಸವಾದ್
ಹಾಸನ – ಖಯೀಮಾಬಾದ್ ಹೊನ್ನಾವರ – ಸದ್ದೈಹಾಸ್ ಗಢ
ಕುಂದಾಪುರ – ನಸ್ರುಲ್ಲಾಬಾದ್ ಬಸ್ರೂರು – ವಝೀರಾಬಾದ್
ಮೈಸೂರು – ನಜರಾಬಾದ್ (ಈಗ ನಜರಾಬಾದ್ ಎನ್ನುವುದು ಮೈಸೂರಿನ ಒಂದು ಮೊಹಲ್ಲಾ ಆಗಿದೆ).
ಈತನ ಅಪ್ಪ ಹೈದರಾಲಿಯೂ ಬಿದನೂರನ್ನು ವಶಪಡಿಸಿಕೊಂಡು ಅದನ್ನು ಹೈದರ್ ನಗರ್ ಎಂದು ಕರೆದಿದ್ದನಾದರೂ ಈ ಚಟವನ್ನಾತ ಮುಂದುವರೆಸಲಿಲ್ಲ. ಆದರೆ ತಲೆತುಂಬಾ ಇಸ್ಲಾಮೀಕರಣವನ್ನೇ ತುಂಬಿಕೊಂಡಿದ್ದ ಟಿಪ್ಪು ಮಾತ್ರ ಪ್ರತಿಯೊಂದು ಊರನ್ನೂ ಇಸ್ಲಾಂನ ಪ್ರತೀಕವೆನಿಸುವಂತೆ ಮರುನಾಮಕರಣ ಮಾಡುತ್ತಿದ್ದನು.
15. ಮಂಡಯಂ ಅಯ್ಯಂಗಾರರ ಹತ್ಯಾಕಾಂಡ
ಮೇಲುಕೋಟೆಯ ಮಂಡಯಂ ಅಯ್ಯಂಗಾರರ ಪಂಗಡಕ್ಕೆ ಸೇರಿದ ತಿರುಮಲ ರಾವ್ ಮತ್ತು ನಾರಾಯಣ ರಾವ್ ಎಂಬ ಸೋದರರು ಮಹಾರಾಣಿ ಲಕ್ಶ್ಮಮ್ಮಣಿಯ ನಿಷ್ಠಾವಂತ ಪ್ರಧಾನರಾಗಿದ್ದರು. ಇದೇ ಕಾರಣಕ್ಕೆ ಇವರನ್ನು ಬಗ್ಗು ಬಡಿಯಲು ಕ್ರೂರಿಯೂ ಮತಾಂಧನೂ ಆಗಿದ್ದ ಟಿಪ್ಪು ಸಮಯ ಕಾಯುತ್ತಲೇ ಇದ್ದ.
1783ರ ನರಕ ಚತುರ್ಥಿಯ ದಿನದಂದು ಟಿಪ್ಪು ಮೇಲುಕೋಟೆಗೆ ಮೇಲೆ ಎರಗಿದ. ಆತನ ಮುಸಲ್ಮಾನ ಸೈನ್ಯ ಹಬ್ಬಕ್ಕೆ ನೆರೆದಿದ್ದ ಅಯ್ಯಂಗಾರರನ್ನು ಸುತ್ತುವರಿತು. ಟಿಪ್ಪು ಕುದುರೆ ಮೇಲಿಂದಲೇ ಕತ್ತಿ ಬೀಸಿದ. ಬ್ರಾಹ್ಮಣನೊಬ್ಬನ ತಲೆ ಬಿತ್ತು. ಅದು ಉದ್ಘಾಟನೆ. ಮುಂದೆ ನಡೆದಿದ್ದು ಮಹಾ ಮಾರಣ ಹೋಮ. ಸುಮಾರು 800 ಮಂದಿ ಅಯ್ಯಂಗಾರರನ್ನು ಅಟ್ಟಾಡಿಸಿ ಕತ್ತರಿಸಲಾಯಿತು.
ಹೆಂಗಸರು-ಮಕ್ಕಳನ್ನೂ ತರಿದುಹಾಕಲಾಯಿತು. ಹೆಂಗಸರ ಮಾನ ಸೂರೆ ಮಾಡಲಾಯಿತು. ದೇವಸ್ಥಾನಗಳ ಊರು ಮೇಲುಕೋಟೆ ಮುಸ್ಲಿಮರ ಕ್ರೌರ್ಯದಿಂದ ಸಂಪೂರ್ಣ ಬದಲಾಯಿತು. ಊರಿನ 29 ಕಲ್ಯಾಣಿಗಳೂ ರಕ್ತದಿಂದ ಕೆಂಪಾದವು, ಅವುಗಳಲ್ಲಿ ಹೆಣಗಳು ತೇಲಿದವು. ಮಂಡಯಂ ಅಯ್ಯಂಗಾರರು ಹಬ್ಬಕ್ಕೆ ಸಜ್ಜಾಗಿದ್ದು ಅದೇ ಕೊನೆ.
ಅಂದಿನ ಆ ನೋವು ಇನ್ನೂ ಮಂಡಯಂ ಅಯ್ಯಂಗಾರರಲ್ಲಿ ಮಾಸಿಲ್ಲ. ಇಂದಿಗೂ ಅವರು ದೀಪಾವಳಿ ಆಚರಿಸುತ್ತಿಲ್ಲ.
ಪ್ರತೀ ದೀಪಾವಳಿಯೂ ಅವರಿಗೆ ಸೂತಕವೇ.
ಆಕರ – ’ದ ಮೈಸೂರು ಪ್ರಧಾನ್ಸ್’, ಎಂ ಎ ನಾರಾಯಣ ಅಯ್ಯಂಗಾರ್
16. ದುರ್ಗದ ಕೋಟೆಯೊಳಗೆ ಪಿತೂರಿ
ಟಿಪ್ಪು ಇನ್ನೂ ಅಧಿಕಾರಕ್ಕೆ ಬರುವ ಮುಂಚಿನಿಂದಲೂ ಹೈದರಾಲಿಗೂ ವೀರ ಮದಕರಿಗೂ ಅನೇಕ ವರ್ಷಗಳಿಂದ ಕಾಳಗ ನಡೆಯುತ್ತಲೇ ಇತ್ತು. ಆ ಎಲ್ಲಾ ಕಾಳಗಗಳಲ್ಲಿ ಟಿಪ್ಪು ಭಾಗವಹಿಸುತ್ತಿದ್ದ ಮತ್ತು ಪ್ರಮುಖ ಪಾತ್ರ ವಹಿಸುತ್ತಿದ್ದ. ಆದರೆ ಚಿತ್ರದುರ್ಗದ ಉಕ್ಕಿನ ಕೋಟೆ ಹೈದರನ ಕೈಗೆ ದಕ್ಕಲೇ ಇಲ್ಲ.
ಅದು 1780 ನೇ ಇಸವಿ. ಚಿತ್ರದುರ್ಗದ ಸೂನ್ಯದಲ್ಲಿದ್ದ ಮೂರು ಸಾವಿರ ಮುಸಲ್ಮಾನ ಸೈನಿಕರನ್ನು ಇಸ್ಲಾಮಿನ ಹೆಸರಲ್ಲಿ ತಲೆತಿರುಗಿಸಿ ಹೈದರಾಲಿ ತನ್ನ ಪರ ಮಾಡಿಕೊಂಡಿದ್ದ. ಅದುವರೆಗೆ ತಮ್ಮ ಒಡೆಯನ ಉಪ್ಪು ತಿಂದು ಸಂಸ್ಥಾನಕ್ಕೆ ವಿಧೇಯರಾಗಿದ್ದ ಸೈನ್ಯದ ಸರದಾರ ಕುತುಬುದ್ದೀನ್ ಖಾನ್, ಅವನ ಖಾಜಿ ಅಷಫ್ ಖಾನ್, ಖಾಜಿ ಜಮಾಲ್ ಸಾಹೇಬ್ ಜೆಹಾದ್‌ನ ಹೆಸರಿನಲ್ಲಿ ದುರ್ಗದ ಕೋಟೆಗೆ ಎರಡು ಬಗೆಯಲು ಒಪ್ಪಿಕೊಂಡರು.
ಇವರೆಲ್ಲರೂ ನಂತರ ದುರ್ಗದ ಕೋಟೆಯೊಳಗೆ ಪಿತೂರಿ ನಡೆಸಿ ಹೈದರಾಲಿಯ ಲಗ್ಗೆಗೆ ಸಹಕಾರ ನೀಡಿದರು. ಮುಸಲ್ಮಾನರ ಮೊಹರಂ ಹಬ್ಬ ಸಮೀಪಿಸುತ್ತಿದ್ದಂತೆ ಇವರೆಲ್ಲರೂ ಮದ್ದಿನ ಮನೆಯನ್ನು ಎಣ್ಣೆಯಿಂದ ನೆನೆಸಿದರು, ಫಿರಂಗಿ ಗುಂಡುಗಳು ಹಾರದಂತೆ ಮಾಡಿದರು. ಕೋವಿಗಳನ್ನು ಕೆಡಿಸಿಬಿಟ್ಟರು. ತೋಪುಗಳನ್ನು, ಉಕ್ಕಿನ ಬಾಣಗಳನ್ನೂ ಮುರಿದುಹಾಕಿದರು. ಹೈದರ್ ಸೇನೆ ಬಂದಾಗ ಇವರೆಲ್ಲರೂ ಕೋಟೆ ಇಳಿದು ಹೊರಗೆ ಹೋದವರು ಮರಳಿ ಬರಲೇ ಇಲ್ಲ.
ಕೆಚ್ಚೆದೆಯ ಹೋರಾಟ ಮಾಡಿದ ಮದಕರಿ ನಾಯಕ ಮತ್ತು ಆತನ ಬೇಡರ ಸೈನ್ಯ ಅಸಹಾಯಕತೆಯಿಂದ ಸೋಲನ್ನನುಭವಿಸಬೇಕಾಯಿತು
ಆಕರ – ಶ್ರೀನಿವಾಸ ಜೋಯಿಸರ “ಐತಿಹಾಸಿಕ ಲೇಖನಗಳು
17. ಮದಕರಿಯನ್ನು ಕಾಡಿದ ಸೈತಾನ
ಒಮ್ಮೆ ಮರಾಠ ಸೈನ್ಯದ ಕೈಲಿ ಸಿಕ್ಕು ಅಸಹಾಯಕನಾಗಿದ್ದ ಹೈದರಾಲಿಯನ್ನು ಅನುಕಂಪದಿಂದ ಬಿಡಿಸಿದವನೇ ಮದಕರಿ ನಾಯಕ. ಆದರೆ ಇದನ್ನು ಮರೆತು ಮೋಸ, ಕುಟಿಲ, ವಂಚನೆಗಳಿಂದ ಚಿತ್ರದುರ್ಗವನ್ನು ಗೆದ್ದ ಹೈದರಾಲಿ ಮುಂದೆ ನಡೆಸಿದ್ದು ಮಾತ್ರ ಘೋರ ಅತ್ಯಾಚಾರ. ಲೂಟಿ, ಕಗ್ಗೊಲೆಗಳ ಸರಮಾಲೆ.
ದುರ್ಗದ ವೀರರಾದ ಪರಶುರಾಮನಾಯಕ, ಕುಮಾರ ಭರಮಪ್ಪ ನಾಯಕ, ಅಳಿಯ ಹುಚ್ಚಪ್ಪನಾಯಕ, ಮಡದಿ ಕಡೂರಿ, ಗೌಡಿ ನಾಗಿಯನ್ನು ಮೋಸದಿಂದ ಸೆರೆಹಿಡಿದು ಚೌಕಿ ಪಹರೆಯಿಂದ ಶ್ರೀರಂಗಪಟ್ಟಣಕ್ಕೆ ಸಾಗಿಸಿ ಸೆರೆಯಲ್ಲಿರಿಸಿದನು.
ಮದಕರಿ ನಾಯಕನ ನೆಚ್ಚಿನ ಬಂಟರಾದ ಇಪ್ಪತ್ತು ಸಾವಿರ ಬೇಡರನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸಿ ಮತಾಂತರ ಮಾಡಿದನು.
ವಯಸ್ಕರಾದ ಯುವಕರನ್ನು ಇಸ್ಲಾಮಿಗೆ ಮತಾಂತರಿಸಿ ಪ್ರತ್ಯೇಕವಾದ ’ಸರ್ಕಾರಿ ಚೇಲೆ’ ಎಂಬ ಸೈನ್ಯವನ್ನು ಕಟ್ಟಿದನು.
ಮದಕರಿ ನಾಯಕನನ್ನು ಸೆರೆಮನೆಯಲ್ಲಿಟ್ಟು ವಿಷವಿಕ್ಕಿ ಕೊಂದನೆಂತಲೂ ಕೆಲವರು ಹೇಳಿದರೆ ಸ್ವಾಭಿಮಾನಿಯಾಗಿದ್ದ ಮದಕರಿ ನಾಯಕನೇ ಕಠಾರಿಯಿಂದ ತಾನೇ ತಿವಿದುಕೊಂಡು ಪ್ರಾಣ ಬಿಟ್ಟನೆಂದೂ ಉಲ್ಲೇಖಗಳಿವೆ.
ಇಂಥ ಮೋಸವನ್ನು ದುರ್ಗ ಎಂದಾದರೂ ಮರೆತೀತೇ? ಹೈದರಾಲಿಯ ಈ ಎಲ್ಲಾ ಕಪಟಕ್ಕೆ ಸಾಕ್ಷಿಯಾಗಿದ್ದ, ಕ್ರೂರತೆಗೆ ಜೊತೆಯಾಗಿದ್ದ ಟಿಪ್ಪು ಜಯಂತಿ ಬೇಕೇ?
ಆಕರ – ಶ್ರೀನಿವಾಸ ಜೋಯಿಸರ “ಐತಿಹಾಸಿಕ ಲೇಖನಗಳು
18. ಹೆಣ್ಣುಬಾಕ ಟಿಪ್ಪು
ಇಸ್ಲಾಂನ ಅನುಯಾಯಿಯಾಗಿದ್ದ ಟಿಪ್ಪು ಕುರಾನ್ ನೀಡಿರುವ ಬಹುಪತ್ನಿತ್ವದ ಅವಕಾಶವನ್ನು ಸಂಪೂರ್ನವಾಗಿ ಪಡೆದು ಕೊಂಡಿದ್ದ. ಭಾರತದಲ್ಲಿ ಆಡಳಿತ ನಡೆಸಿದ ಬಹುತೇಕ ಮುಸ್ಲಿಂ ರಾಜರು ಹೆಣ್ಣುಬಾಕರೇ ಆಗಿದ್ದರೆಂಬುದು ಇತಿಹಾಸದಲ್ಲಿ ದಾಖಲಾದ ಸಂಗತಿ. ೧೭೭೪ರಲ್ಲಿ ತನ್ನ ೨೪ನೇ ವಯಸ್ಸಿನಲ್ಲಿ ಮೊದಲಬಾರಿಗೆ ಮದುವೆಯಾದ ಟಿಪ್ಪು ನಂತರ ಆದ ಮದುವೆಗಳಿಗೆ ಲೆಕ್ಕವೇ ಇಲ್ಲ. ತಾನು ಸೋಲಿಸಿದ ಪ್ರದೇಶಗಳ ರಾಜಮನೆತನಗಳ ಸ್ತ್ರೀಯರಿಂದ ಹಿಡಿದು ಬೇಕೆನಿಸಿದ ಪ್ರತಿಯೊಬ್ಬ ಸ್ತ್ರೀಯನ್ನೂ ಶ್ರೀರಂಗ ಪಟ್ಟಣಕ್ಕೆ ಹೊತ್ತೊಯ್ಯುತ್ತಿದ್ದ. ದಿವಾನ್ ಪೂರ್ಣಯ್ಯನ ತಮ್ಮನ ಮಗಳನ್ನೇ ಟಿಪ್ಪು ಬಲಾತ್ಕಾರದಿಂದ ಅಂತಃಪುರಕ್ಕೆಳೆದು ಕೊಂಡಿದ್ದ.
ದುರಾಚಾರಿ ಟಿಪ್ಪುವಿನ ದೃಷ್ಟಿಯಿಂದ ಕೊಡಗಿನ ರಾಜನ ಇಬ್ಬರು ಸೋದರಿಯರಾದ ದೇವಮ್ಮಾಜಿ ಮತ್ತು ನೀಲಮ್ಮಾಜಿ ಸಹ ಹೊರಗುಳಿಯಲಾಗಲಿಲ್ಲ ಇವರ ಜೊತೆಗೆ ಮೈಸೂರು ಒಡೆಯರ್ ಮನೆತನಕ್ಕೆ ಸೇರಿದ ಮೂವರು ಹೆಣ್ಣು ಮಕ್ಕಳು ಟಿಪ್ಪುವಿನ ಅಂತಃಪುರಕ್ಕೆ ದೂಡಲ್ಪಟ್ಟಿದ್ದರು. ತಾನು ಗೆದ್ದ, ಹಾಳು ಮಾಡಿದ ಅಥವಾ ತನ್ನ ಅಧೀನದಲ್ಲಿದ್ದ ಊರುಗಳ ಪಾಳೇಗಾರರು, ಮಾಂಡಲೀಕರು, ಸರದಾರರ ಹೆಣ್ಣುಮಕ್ಕಳು ಸಹ ಆತನ ಜನಾನದಲ್ಲಿದ್ದರು.
ಭಾರತದ ಅರ್ಕಾಟ್, ತಂಜಾವೂರು ಇತ್ಯಾದಿ ಪ್ರದೇಶಗಳ ಹೆಣ್ಣುಗಳ ಜೊತೆಗೆ ದೂರದ ಟರ್ಕಿ, ಪರ್ಶಿಯಾ, ಜಾರ್ಜಿಯಾದಂತಹ ದೇಶಗಳಿಂದ ಹೊತ್ತು ತಂದ ಅಥವಾ ಕೊಂಡು ತಂದ ಹೆಂಗಸರೂ ಇದ್ದರು.
ಟಿಪ್ಪುವಿನ ಸಹೋದರ ಅಬ್ದುಲ್ ಕರೀಮನ ಹೆಂಡತಿ ಸವಣೂರಿನ ನವಾಬನ ಮಗಳು ಮೊದಲು ಹೈದರನ ಜನಾನಾದಲ್ಲಿದ್ದಳಂತೆ. ಹೈದರ ಸತ್ತ ನಂತರ ಅವಳು ಟಿಪ್ಪುವಿನ ಜನಾನಾಕ್ಕೆ ಸೇರಿಸಲ್ಪಟ್ಟಳು. ನಂತರ ಕರೀಮನ ಜನಾನಕ್ಕೆ ಸೇರಿಸಲಾಯಿತು.
1799ರಲ್ಲಿ ಟಿಪ್ಪು ಸತ್ತ ನಂತರ ಕ್ಯಾಪ್ಟನ್ ಥಾಮಸ್ ಮ್ಯಾರಿಯೇಟ್ ನೀಡಿದ ಟಿಪ್ಪುವಿನ ಜನಾನದ (ರಾಣಿವಾಸ) ವರದಿಯು ಈ ಬಗ್ಗೆ ಬೆಳಕು ಚೆಲ್ಲುತ್ತದೆ. ಆತನ ಪತ್ತಿ, ಉಪಪತ್ನಿಯರೂ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಸ್ತ್ರೀಯರನ್ನು ಜನಾನದಲ್ಲಿ ಸೇರಿಸಲಾಗಿತ್ತು. ಪ್ರತಿಯೊಬ್ಬ ಪತ್ನಿಯ ಕೋಣೆಯನ್ನು ಕಾಯಲು ಖೋಜಾಗಳನ್ನು ನೇಮಿಸಲಾಗಿತ್ತು ಎಂದು ಅದರಲ್ಲಿ ತಿಳಿಸಲಾಗಿದೆ
ಆಧಾರ – ತಾರೀಖ್-ಎ-ಟಿಪ್ಪು, ಕಿರ್ಮಾನಿ
ಮಾಹಿತಿ: ಫೌಂಡೇಷನ್ ಫಾರ್ ಇಂಡಿಕ್ ರಿಸರ್ಚ್ ಸ್ಟಡೀಸ್, ಹತ್ಯಾಕಾಂಡ

ಸಿನಿಮಾ ಹಾಲ್‌ನಲ್ಲಿ ರಾಷ್ಟ್ರಗೀತೆ ಹಾಕಿದಾಗ ಅದಕ್ಕೆ ನಿಂತುಕೊಳ್ಳಬೇಕೋ ಬೇಡವೋ

             *_– ಚಿರಂಜೀವಿ ಭಟ್‌_*
                   (Editor Postcard) 
*ಕಾ*ರ್ಯಕ್ರಮವೊಂದರಲ್ಲಿ ಚರ್ಚೆ ನಡೆಯುತ್ತಿತ್ತು. ಸಿನಿಮಾ ಹಾಲ್‌ನಲ್ಲಿ ರಾಷ್ಟ್ರಗೀತೆ ಹಾಕಿದಾಗ ಅದಕ್ಕೆ ನಿಂತುಕೊಳ್ಳಬೇಕೋ ಬೇಡವೋ ಎಂದು. ಒಬ್ಬರು ರಾಷ್ಟ್ರಗೀತೆಗೆ ನಿಂತುಕೊಳ್ಳಬೇಕು ವಾದ ಮಾಡುತ್ತಿದ್ದರೆ ಮತ್ತೊಬ್ಬರು ಇಲ್ಲವೇ ಇಲ್ಲ… ಮುದ್ಧಾಂ ನಿಲ್ಲಬಾರದು.. ಯಾಕ್‌ ನಿಲ್ಬೇಕು ಹೇಳ್ರೀ..? ರಾಷ್ಟ್ರಗೀತೆ ಹಾಕ್ಬುಟ್ರೆ ನಾವ್‌ ನಿಲ್ಬೇಕಾ? ನಾವ್‌ ಸಿನಿಮಾಗೆ ಮಜಾ ಮಾಡಕ್ಕೆ ಬಂದಿರ‍್ತೀವಿ, ಇಲ್ಲಿ ದೇಶಭಕ್ತಿ ತೋರಿಸ್ಬೇಕಾ?
ಇದು ಮೊದಲಿಗೆ ಯಾವುದೋ ಪಾಕಿಸ್ತಾನಿ ರಾಷ್ಟ್ರಗೀತೆಯ ಬಗ್ಗೆ ಇರಬೇಕು ಎಂದುಕೊಂಡೆ. ಆದರೆ, ಇಲ್ಲ. ಇದು ನಮ್ಮ ದೇಶದ್ದೇ ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕೋ ಬೇಡವೋ ಎನ್ನುವುದಕ್ಕೆ ಚರ್ಚೆಯಂತೆ. ಚರ್ಚೆಯಲ್ಲಿ ರಾಷ್ಟ್ರಗೀತೆಗೆ ನಿಲ್ಲಬಾರದು ಎನ್ನುತ್ತಿರುವವರಾದರೂ ಯಾರು? ಪಾಕಿಸ್ತಾನಿಯರಲ್ಲ, ಭಾರತೀಯರು ಸ್ವತಃ ಭಾರತೀಯರೇ, ರಾಷ್ಟ್ರಗೀತೆಗೆ ನಿಲ್ಲುವುದಿಲ್ಲ ಎಂದು ಹೇಳುವುದನ್ನು ಕಂಡಾಗ, ನಮಗಿನ್ನೂ ಸ್ವಾತಂತ್ರ‍್ಯ ಸಿಕ್ಕಿಲ್ಲ ಎಂದು ಅನಿಸಿದ್ದು ಸುಳ್ಳಲ್ಲ. ಇಂಥ ಹರಾಮಿಗಳಿಂದ ನಮಗಿನ್ನೂ ಸ್ವಾತಂತ್ರ‍್ಯ ಸಿಕ್ಕಿಲ್ಲ ಎಂದೆನಿಸಿತ್ತು. ಸಿನಿಮಾ ಹಾಲ್‌ನಲ್ಲಿ ರಾಷ್ಟ್ರಗೀತೆ ಹಾಕಿದಾಗ ಎದ್ದು ನಿಲ್ಲಬೇಕೋ ಬೇಡವೋ ಎಂಬ ಚರ್ಚೆ ದೊಡ್ಡದಾಗಿ ಅದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದಾಗ, ಸಿನಿಮಾದಲ್ಲಿ ಹಾಕುವ ರಾಷ್ಟ್ರಗೀತೆಗೆ ನಿಲ್ಲಬೇಕಿಲ್ಲ ಎಂದು ಅಭಿಪ್ರಾಯಪಟ್ಟಿತು. ನೆನಪಿರಲಿ ಇದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ಅಷ್ಟೇ ಹೊರತು, ಆದೇಶವಲ್ಲ. ಆದರೆ ಇಷ್ಟಕ್ಕೇ ರಾಹುಲ್‌ ಗಾಂಧಿ ರೊಚ್ಚಿಗೆದ್ದಿದ್ದಾರೆ. ಸಿನಿಮಾದಲ್ಲಿ ಹಾಕುವ ರಾಷ್ಟ್ರಗೀತೆಗೆ ಯಾಕೆ ಎದ್ದು ನಿಲ್ಲಬೇಕು ಎಂದಿದ್ದಾರೆ.ಆದರೆ, ಇದೇ ರಾಹುಲ್‌ ಗಾಂಧಿಯ ಅಪ್ಪ ರಾಜೀವ್‌ ಗಾಂಧಿ, ಸುಪ್ರೀಂ ಕೋರ್ಟ್‌ ವಿರುದ್ಧವೇ ಹೋಗಿ ರಾಷ್ಟ್ರಗೀತೆಗೆ ಎಲ್ಲರೂ ನಿಂತು ಗೌರವ ನೀಡಲೇ ಬೇಕುಎಂಬುದನ್ನು ಕಡ್ಡಾಯ ಮಾಡಲು ಹೊರಟಿದ್ದರು. ಆದರೆ ಅವರಿಗೇ ಹುಟ್ಟಿದ ರಾಹುಲ್‌ ಗಾಂಧಿ ಹೇಳುತ್ತಾರೆ “ರಾಷ್ಟ್ರಗೀತೆಗೆ ನಿಂತುಕೊಳ್ಳಲೇಬೇಕು ಎಂದೇನು ಇಲ್ಲ… ನಿಮಗೆ ಇಷ್ಟವಿಲ್ಲದಿದ್ದರೆ ಕುಳಿತುಕೊಂಡೇ ಇರಬಹುದು.” ಎಂದಿದ್ದಾರೆ! ಎಂಥ ಅಪ್ಪನಿಗೆ, ಎಂಥ ಮಗ? ರಾಜೀವ್‌ ಗಾಂಧಿಯ ಬಗ್ಗೆ ನೂರು ಆರೋಪಗಳಿರಬಹುದು, ಆದರೆ ಅವರು ದೇಶಕ್ಕೆ, ದೇಶದ ಗೀತೆಗಾಗಿ ತೆಗೆದುಕೊಳ್ಳಲು ಹೊರಟಿದ್ದ ನಿರ್ಧಾರವನ್ನು ನಾವೆಲ್ಲರೂ ತಲೆ ಬಾಗಲೇಬೇಕು.
ರಾಜೀವ್‌ ಗಾಂಧಿಯವರು ಏನು ಮಾಡುವುದಕ್ಕೆ ಹೊರಟಿದ್ದರು, ಈಗ ಕಾಂಗ್ರೆಸ್‌ ಏನು ಹೇಳುತ್ತಿದೆ ಎನ್ನುವುದೆಲ್ಲ ಪಕ್ಕಕ್ಕೆ ಇಡೋಣ. ಅದರ ಹೊರತಾಗಿ ನೋಡಿದರೂ ಕಾಂಗ್ರೆಸ್‌ ಮತ್ತೆ ಎಡಬಿಡಂಗಿಯ ಹಾಗೇ ಕಾಣಿಸುತ್ತದೆ. ಕಾಂಗ್ರೆಸಿಗರು ಯಾಕೆ ಎಡಬಿಡಂಗಿಗಳು ಎನ್ನುವುದಕ್ಕೆ ಮತ್ತೊಂದು ಇನ್ನೊಂದು ಉದಾಹರಣೆ ಕೊಡುತ್ತೇನೆ ಕೇಳಿ. ಸಿನಿಮಾ ಹಾಲ್‌ನಲ್ಲಿ ರಾಷ್ಟ್ರಗೀತೆ ಹಾಕಬೇಕು ಎಂದು ಮೊದಲು ಆರ್ಡರ್‌ ಪಾಸ್‌ ಮಾಡಿದ್ದು ಬಿಜೆಪಿಯೋ ಅಥವಾ ಇನ್ಯಾವುದೋ ಹಿಂದೂ ಸಂಘಟನೆಗಳಲ್ಲ. ಬದಲಿಗೆ ಇದೇ ಕಾಂಗ್ರೆಸ್‌ ಸರಕಾರ. 2003ರಲ್ಲಿ ಮಹಾರಾಷ್ಟ್ರದಲ್ಲಿದ್ದ ಕಾಂಗ್ರೆಸ್‌ ಸರಕಾರ ಇದನ್ನು ಅನುಷ್ಠಾನಕ್ಕೆ ತಂದಿದ್ದು. ಆಗಿನಿಂದಲೇ ಸಿನಿಮಾ ಹಾಲ್‌ನಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತಿತ್ತು. ಆದರೆ, ಹಿಂದೆ ತಾವೇನು ಆದೇಶ ನೀಡಿದ್ದೇವೆ ಎಂಬುದನ್ನೇ ಅರಿಯದೇ, ಈಗ ಒಂದು ನಿರ್ದಿಷ್ಟ ಧರ್ಮವನ್ನು ಮೆಚ್ಚಿಸುವುದಕ್ಕೆ, ಮುಂದಿನ ಚುನಾವಣೆಯಲ್ಲಾದರೂ ಗೆಲ್ಲುವುದಕ್ಕೆ ತನ್ನ ದೇಶದ ರಾಷ್ಟ್ರಗೀತೆಗೇ ನಿಲ್ಲಬೇಕಿಲ್ಲ ಎನ್ನುವ ಕಾಂಗ್ರೆಸ್‌ ನಿಜಕ್ಕೂ ಭಾರತದಲ್ಲೇ ರಾಜಕಾರಣ ಮಾಡುತ್ತಿದೆಯೋ ಅಥವಾ ಪಾಕಿಸ್ತಾನದಲ್ಲೋ?
ಈ ರಾಹುಲ್‌ ಗಾಂಧಿಗೆ ಮತ್ತೊಬ್ಬ ಬಾಲಂಗೋಚಿ ಇದ್ದಾನೆ. “ಸಿನಿಮಾ ಹಾಲ್‌ನಲ್ಲಿ ರಾಷ್ಟ್ರಭಕ್ತಿಯನ್ನೇಕೆ ತೋರಿಸಬೇಕು? ಸಿನಿಮಾಗೆ ಹೋಗೋದು ಮನರಂಜನೆಗಾಗಿ… ರಾಷ್ಟ್ರಭಕ್ತಿಯ ಪ್ರದರ್ಶನಕ್ಕಲ್ಲವಲ್ಲ? ರಾಷ್ಟ್ರಪ್ರೇಮವನ್ನು ತೋರಿಸುವುದಕ್ಕೆ ಬೇರೆ ಬೇರೆ ಮಾರ್ಗಗಳಿವೆ” ಎಂದು ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ದೇಶದ ಗಡಿಯಲ್ಲಿ ನಮ್ಮನ್ನು ಕಾಯುವವರಿದ್ದಾರೆ ಎಂದು ಅರಿವಿರುವವನ್ಯಾರಾದರೂ ಇಂಥ ಮಾತಾಡುವುದಕ್ಕೆ ಸಾಧ್ಯವಾ? “ಹದಿನೈದು ನಿಮಿಷ ದೇಶದಲ್ಲಿ ಪೊಲೀಸ್‌ ಪಡೆಯನ್ನು ನಿಷ್ಕ್ರೀಯಗೊಳಿಸಿ, ಆಗ ತೋರಿಸ್ತೀವಿ ನಮ್‌ ತಾಕತ್ತೇನು ಅಂತ” ಎಂದು ಹೇಳಿದ ಅಕ್ಬರುದ್ದೀನ್‌ ಓವೈಸಿಯಂಥವರ ಕುಟುಂಬದಿಂದ ಇನ್ಯಾವ ದೇಶಭಕ್ತಿ ತಾನೆ ನಿರೀಕ್ಷಿಸಲು ಸಾಧ್ಯ ಹೇಳಿ? ಪಾಕಿಸ್ತಾನ ಅಂತ ಮುಸ್ಲಿಮರ ರಾಷ್ಟ್ರವಾದಾಗಲೂ ಇವರೆಲ್ಲ ಭಾರತದಲ್ಲಿರುವುದೇ ನಮ್ಮ ಪುಣ್ಯ ಎಂದುಕೊಳ್ಳಬೇಕಷ್ಟೇ ನಾವು.
ನೀವೇ ಆಲೋಚನೆ ಮಾಡಿ ಸ್ನೇಹಿತರೇ, -50 ಡಿಗ್ರಿ ಸೆಲ್ಶಿಯಸ್‌ ಇರುವ ಸಿಯಾಚಿನ್‌ ಗಡಿಯಲ್ಲಿ ನಿತ್ಯವೂ ರಾಷ್ಟ್ರಗೀತೆಗೆ ಸೈನಿಕರು ಎದ್ದು ನಿಲ್ಲುತ್ತಾರೆ. ಆದರೆ
ವಾರಕ್ಕೊಮ್ಮೆ ಮಲ್ಟಿಪ್ಲೆಕ್ಸ್‌ನಲ್ಲಿ ಎಸಿ ಹಾಲ್‌ನಲ್ಲಿ ಕೇವಲ ೫೨ ಸೆಕೆಂಡ್‌ ರಾಷ್ಟ್ರಗೀತೆ ಹಾಕಿದರೆ ಎದ್ದು ನಿಲ್ಲಬೇಕೋ ಬೇಡವೋ ಎಂಬುದಕ್ಕೂ ಚರ್ಚೆ ಮಾಡುತ್ತಾರೆ
ಎಂದರೆ ಎಲ್ಲಿಗೆ ಬಂದು ನಿಂತಿದೆ ನಮ್ಮ ದೇಶದ ಸ್ಥಿತಿ? ಮಾತೆತ್ತಿದರೆ ಸ್ವಾತಂತ್ರ‍್ಯ ಹೋರಾಟದಲ್ಲಿ ನಾವಿದ್ದೆವು, ನಿಮ್ಮ ಪಾಲೇನು? ಎಂದು ಅದೇ ಗಾಂಧೀಜಿಯ
ಕೋಲನ್ನೇ ಹಿಡಿದು ಎಲ್ಲರಿಗೂ ಬೀಸುವ ಕಾಂಗ್ರೆಸ್‌ಗೆ 52 ಸೆಕೆಂಡ್‌ ನಿಲ್ಲುವುದಕ್ಕೆ ನರ ಬಿದ್ದು ಹೋಗಿದೆಯಾ?
ಅಮೆರಿಕದಲ್ಲಿ ಅವರ ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಎದೆಯ ಮೇಲೆ ಕೈ ಇಟ್ಟುಕೊಂಡು ಹಾಡುತ್ತಾರೆ. ಇಲ್ಲ ಭಾರತದಲ್ಲಿ ರಾಷ್ಟ್ರಗೀತೆಯ ಟೇಪ್‌
ಹಚ್ತೀವಪ್ಪ, ನಿಮ್‌ ಯೋಗ್ಯತೆಗೆ ಹಾಡುವುದು ಬೇಡ, ಬಾಯಿ ಮುಚ್ಚಿಕೊಂಡು ನಿಂತುಕೊಳ್ಳಿ ಎಂದರೂ ಅದು ಯಾವ ಕೋನದಿಂದ ಇವರಿಗೆಲ್ಲ ಹೇರಿಕೆಯಾಗಿ ಕಾಣುತ್ತದೆ.
ಇದೇ ಕಾಂಗ್ರೆಸ್‌ ನಾಯಕನೊಬ್ಬ ಹೇಳುತ್ತಾನೆ, ನಾವು ರಾಷ್ಟ್ರಗೀತೆಯನ್ನು ಯಾರ ಮೇಲೂ ಹೇರಿಕೆ ಮಾಡಬಾರದಂತೆ. ಇದೇ ಕಾಂಗ್ರೆಸ್‌ ನಾಯಕನಿಗೆ ಕೇಳಬೇಕಿದೆ, ಸೋನಿಯಾ ಗಾಂಧಿ ನಿಮ್ಮ ಎದುರಿಗೆ ಬಂದರೆ “ಸೋನಿಯಾ, ನೀವು ಬಂದರೆ ನಾವೇನು ನಿಂತುಕೊಳ್ಳಬೇಕಿಲ್ಲ” ಎಂದು ಹೇಳುವ ತಾಕತ್ತಿದೆಯೇ? ಸೋನಿಯಾ ಎದುರಿಗೆ ಬರುವುದಿರಲಿ, ಇನ್ನೂ ಹೆಲಿಕಾಪ್ಟರ್‌ನಲ್ಲಿದ್ದಾಗಲೇ ಇವತ್ತು ಅರಚಾಡುತ್ತಿರುವ ನಾಯಕರೆಲ್ಲ ತಮ್ಮ ಬಾಲವನ್ನು ಕಾಲುಗಳ ಮಧ್ಯೆ ಅಡಗಿಸಿಟ್ಟುಕೊಂಡು ನಿಲ್ಲುತ್ತಾರೆ. ಅಂದರೆ ಯಾವುದೋ ದೇಶದಿಂದ ಬಂದು ಇಲ್ಲೇ ಟಿಕಾಣಿ ಹೂಡಿರುವ ಸೋನಿಯಾ ಮೇಲಿರುಷ್ಟು ಮರ್ಯಾದೆಯೂ ನಮ್ಮ ರಾಷ್ಟ್ರಗೀತೆಯ ಮೇಲಿಲ್ಲ ಈ ಕಾಂಗ್ರೆಸ್‌ ನಾಯಕರಿಗೆ ಎಂದಾಯಿತಲ್ಲ? ಹೇಳಿ ಕಾಂಗ್ರೆಸ್‌ ನಾಯಕರೇ? “ಮಮ್ಮಿ ಸೋನಿಯಾ ಬಂದರೆ ಎದ್ದು ನಿಲ್ಲಬೇಕೆಂಬು‌ದೂ ಹೇರಿಕೆಯೇ” ಎಂದು ಹೇಳುವ ಗಂಡಸು ಕಾಂಗ್ರೆಸ್‌ನಲ್ಲಿ ಒಬ್ಬನೂ ಇಲ್ಲವೇ?
ದುರಂತ ಏನು ಗೊತ್ತಾ? ರಾಷ್ಟ್ರಗೀತೆಗೆ ಯಾಕ್ರೀ ಎದ್ದು ನಿಲ್ಲಬೇಕು ಎಂದು ಹೇಳುವವರೇ, “ನಮ್ಮ ದೇಶಭಕ್ತಿಯನ್ನು ಪ್ರಶ್ನೆ ಮಾಡಬೇಡಿ” ಎನ್ನುತ್ತಿದ್ದಾರೆ. ೫೨ವ ಸೆಕೆಂಡ್‌ ನಿಲ್ಲುವುದಕ್ಕೂ ನರದೌರ್ಬಲ್ಯ ಇರುವ ಷಂಡರು ಭಕ್ತಿಯ ಬಗ್ಗೆ ಮಾತಾಡುತ್ತಾರೆ ಎನ್ನುವುದಕ್ಕಿಂತ ಮತ್ತೊಂದು ದುರಂತ ಎಲ್ಲಾದರೂ ನೋಡಿದ್ದೀರಾ?
ಕಾಂಗ್ರೆಸಿಗರದ್ದಷ್ಟೇ ಅಲ್ಲ, ಕಮ್ಯೂನಿಸ್ಟ್‌ ಎಂಬ ಕಮ್ಮಿನಿಷ್ಟರದ್ದೂ ಇದೇ ತಾಳ. ಒಂದಿಲ್ಲೊಂದು ಕಾಮಿಡಿ ಮಾಡಿಕೊಂಡಿರುವ ರಾಹುಲ್‌ ಗಾಂಧಿಗೇ ಇವರೆಲ್ಲರೂ
ಜೋತುಬಿದ್ದಿದ್ದಾರೆ. ರಾಹುಲ್‌ ಗಾಂಧಿ ಹೇರಿಕೆ ಅಂದರೆ ಹೇರಿಕೆ, ರಾಷ್ಟ್ರಪ್ರೇಮ ಅಂದರೆ ರಾಷ್ಟ್ರಪ್ರೇಮ. ಸಿಪಿಐನ ಸಂಸದ ಡಿ ರಾಜಾ ಹಚ್ಚುವುದೇ ಮತ್ತದೇ ರಾಹುಲ್‌ ಭಾಷಣವನ್ನೇ. ಆದರೆ ಈ ಮನುಷ್ಯ ಹೇಳುತ್ತಾರೆ, “ನಾನು ಒಬ್ಬ ಕಮ್ಯುನಿಸ್ಟ್‌ ಆಗಿ ಹೇಳುತ್ತೇನೆ, ನನಗೆ ಯಾರಿಂದಲೂ ದೇಶಭಕ್ತಿಯ ಪಾಠ ಬೇಕಿಲ್ಲ ಅಥವಾ ದೇಶಪ್ರೇಮದ ಸರ್ಟಿಫಿಕೇಟ್‌ನ ಅವಶ್ಯಕತೆ ಇಲ್ಲ” ಎಂದು. ಆದರೆ ಇದೇ ಈ ಮನುಷ್ಯನ ಪಕ್ಷದವರೇ ಆದ ಸುನೀತ್‌ ಚೋಪ್ರಾ ಅವರು ಇತ್ತೀಚೆಗೆ ಕೊರಿಯಾಗೆ ಹೋದಾಗ, ಕೊರಿಯನ್‌ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ಈ ಕಮ್ಯುನಿಷ್ಟರಿಗೆ ತಲೆ ಬುಡ ಅರ್ಥವಾಗದ ಕೊರಿಯನ್‌ ರಾಷ್ಟ್ರಗೀತೆ ನರಗಳು ನೆಟ್ಟಾನೇರ ನಿಲ್ಲುತ್ತವೆ ಆದರೆ ಜನ ಗಣ ಮನಕ್ಕೆ ಇವರ ಮನ ಮಿಡಿಯುವುದಿಲ್ಲ ಎಂದರೆ ಇಂಥ ಕಮ್ಯುನಿಷ್ಟರ ಅವಶ್ಯಕತೆಯಾದರೂ ದೇಶಕ್ಕೆ ಏನಿದೆ ಹೇಳಿ?
ಯಾರು ಏನೇ ಹೇಳಲಿ, ಈ ದೇಶ ನನ್ನದು ಎಂದುಕೊಂಡವನಿಗೆ, ಸಿನಿಮಾ ಹಾಲ್‌ನಲ್ಲಿ ಒಂದೇ ಅಲ್ಲ, ಮಧ್ಯ ರಸ್ತೆಯಲ್ಲಿ ಜನ ಗಣ ಮನ ಕೇಳಿದರೂ 52 ನಿಂತು ತನ್ನ ಗೌರವ ಸಮರ್ಪಣೆ ಮಾಡುತ್ತಾನೆ. ಇನ್ನುಳಿದವರು ಬಾರ್‌ನಲ್ಲಿ ಸೊಂಟ ತೋರಿಸಿಕೊಂಡಿದ್ದವಳು ಬಂದರೆ ಮಾತ್ರ ಎದ್ದು ನಿಲ್ಲುತ್ತಾರೆ. ದೇಶಪ್ರೇಮಿಗಳು ರಾಷ್ಟ್ರಗೀತೆಗೆ ನಿಲ್ಲುವವರೋ, ಅರೆಬರೆ ಬಟ್ಟೆಯಲ್ಲಿ ಅಂಗಾಗ ಕುಣಿಸುತ್ತಿದ್ದವಳಿಗೆ ಎದ್ದು ನಿಲ್ಲುವವರೋ ನೀವೇ ನಿರ್ಧರಿಸಿ.

"ದೇವತಾರ್ಚನೆ ಮತ್ತು ವಿಚಾರಗಳು..!"

"ದೇವತಾರ್ಚನೆ ಮತ್ತು ವಿಚಾರಗಳು..!"
ದೇವತಾರ್ಚನೆಯಿಂದ ಮಾನವನು ಸಂಸಾರ ಪಾಶಗಳಿಂದ ಮುಕ್ತಿ ಹೊಂದಿ, ದೇವರಸಾನಿಧ್ಯವನ್ನು ಸೇರುತ್ತಾರೆ.
ದೇವರ ಆರಾಧನೆಯಲ್ಲಿ ಅನೇಕ ಪದ್ಧತಿಗಳಿವೆ, ಅವುಗಳಲ್ಲಿ ಮುಖ್ಯವಾದ 16 ರೀತಿಯಲ್ಲಿನ ಉಪಚಾರಗಳ ಪೂಜೆ "ಷೋಡಶೋಪಚಾರ" ಪೂಜೆ ಬಹಳ ಮುಖ್ಯವಾಗಿದೆ..
ಷೋಡಶೋಪಚಾರ ಮತ್ತು ವಿಶೇಷತೆಗಳು..!
೧. ಆಸನ
೨. ಪಾದ್ಯ
೩. ಅರ್ಘ್ಯ
೪. ಆಚಮನ
೫. ಸ್ನಾನ
೬. ವಸ್ತ್ರ
೭. ಯಜ್ಞೋಪವೀತ
೮. ಗಂಧ
೯. ಅಕ್ಷತೆ
೧೦. ಆಭರಣ
೧೧. ಪುಷ್ಪಮಾಲಿಕೆ
೧೨. ಧೂಪ
೧೩. ದೀಪ
೧೪. ಮಧುಪರ್ಕ
೧೫. ನೈವೇದ್ಯ
೧೬. ವಿಸರ್ಜನೆ ಅಥವಾ ಪುಷ್ಪಾಂಜಲಿ
ಷೋಡಶೋಪಚಾರ ಎಂದರೆ ಹದಿನಾರು ಉಪಚಾರಗಳು..
"ಉಪ" ಎಂದರೆ ಹತ್ತಿರ ಎಂದು ಚಾರ ಎಂದರೆ ಸಂಚರಿಸು ಎಂದರ್ಥ..
"ದೇವರಿಗೆ ಹತ್ತಿರವಾಗುವುದು ಎಂದರ್ಥ..!
೧. ಆಸನ : ದೇವರೆಂಬ ಅತಿಥಿಯನ್ನು ಮನೆಗೆ ಆಮಂತ್ರಿಸಿ ಕುಳಿತುಕೊಳ್ಳಲು ಆಸನಗಳನ್ನು ಏರ್ಪಡಿಸುವುದು..
೨. ಪಾದ್ಯ : ಕಾಲುಗಳನ್ನು ತೊಳೆಯಲು ನೀರು ಕೊಡುವುದು..
೩. ಅರ್ಘ್ಯ : ಕೈಗಳನ್ನು ಶುಧ್ದಿಪಡಿಸಿಕೊಳ್ಳಲು ನೀರನ್ನು ಕೊಡುವುದು..
೪. ಆಚಮನ : ಬಾಯಾರಿಕೆ ತೀರಲು ನೀರನ್ನು ಕೊಡುವುದು..
೫. ಸ್ನಾನ : ಪ್ರಯಾಣದ ಆಯಾಸ ಪರಿಹರಿಸಲು ಸ್ನಾನಕ್ಕೆ ನೀರನ್ನು ಕೊಡುವುದು..!
೬. ವಸ್ತ್ರ : ಸ್ನಾನಾನಂತರ ಧರಿಸಲು ಮಡಿಬಟ್ಟೆಗಳನ್ನು ಕೊಡುವುದು..
೭. ಯಜ್ಞೋಪವೀತ : ಮಾರ್ಗಮಧ್ಯದಲ್ಲಿ ಮೈಲಿಗೆಯಾದ ಯಜ್ಞೋಪವೀತ ಬದಲಾವಣೆ..
(ಪ್ರತಿದಿನ ಷೋಡಶೋಪಚಾರ ಮಾಡುವವರಿಗೆ ಬದಲಾಯಿಸೋ ಅವಶ್ಯಕತೆ ಇರುವುದಿಲ್ಲ)
೮. ಗಂಧ : ಶರೀರವು ಸುವಾಸನೆಯಿಂದ ಕೂಡಿರಲು ಶ್ರೀ ಗಂಧವನ್ನು ತೇಯ್ದು ಕೊಡಯವುದು..
೯. ಅಕ್ಷತೆ : ಶುಭವನ್ನುಂಟು ಮಾಡುವುದಕ್ಕೆ ಅಲಂಕಾರಾರ್ಥವಾಗಿ ಧರಿಸುವುದು..
೧೦. ಆಭರಣ : ದೇವರಿಗೆ ಧರಿಸಲಿಕ್ಕೆ ಆಭರಣ ಕೊಡುವುದು..
ಇಲ್ಲಿ ಆಭರಣವೆಂದರೆ ಅರಿಸಿನ, ಕುಂಕುಮ, ಗಂಧ, ಅಕ್ಷತೆ, .. ದೇವರ ಆಭರಣಗಳು ಎಲ್ಲವೂ ಸೇರುತ್ತವೆ..
೧೧. ಪುಷ್ಪಮಾಲಿಕೆ : ಬಂದ ಅತಿಥಿ ಗೆ ಹೂವಿನ ಹಾರ ಅಥವಾ ಹೂವು ಹಾಕಿ ಪೂಜಿಸುವುದು..
೧೨. ಧೂಪ : ಸುಗಂಧ ಪರಿಮಳಯುಕ್ತ ವಾತಾವರಣ ನಿರ್ಮಾಣ ಮಾಡುವುದು..
೧೩. ದೀಪ : ಪರಸ್ಪರ ವೀಕ್ಷಣೆಗಾಗಿ (ದೇವರು - ಭಕ್ತ) ಅನುಕೂಲ ಮಾಡಿಕೊಡುವುದು..
ಇಲ್ಲಿ ಅಷ್ಟೋತ್ತರ , _ಅರ್ಚನೆ ಅಷ್ಟಾವಧಾನ ಸೇವೆ, ಮಾಡಿ ದೇವರು ಮಾಡಿದ ಸಾಹಸಗಳನ್ನು ಹಾಡಿ ಹೊಗಳುವುದು..
೧೪. ಮಧುಪರ್ಕ : (ಹಾಲು ಮೊಸರು ತುಪ್ಪ ಜೇನುತುಪ್ಪ ಸಕ್ಕರೆ) ಯನ್ನು ಅರ್ಪಿಸುವುದು..
೧೫. ನೈವೇದ್ಯ : ನಿಮ್ಮ ಶಕ್ತಿಗೆ ತಕ್ಕಂತೆ ದೇವರಿಗೆ ಊಟ ಮಾಡಿಸುವುದು ( ನೀವು ಕಷ್ಟಪಟ್ಟು ದುಡಿದ ಹಣದಿಂದ ಮಾಡಿದ ನೈವೇದ್ಯವಾಗಿರಬೇಕು)
ಇಲ್ಲಿ ಆಡಂಬರದ ಅವಶ್ಯಕತೆ ಇರುವುದಿಲ್ಲ, ಭಕ್ತಿಯಿಂದ ಅರ್ಪಿಸಬೇಕಷ್ಟೆ..!
ದೇವರಿಗೆ ತುಪ್ಪದನ್ನ, ಮೊಸರನ್ನ, ಚಿತ್ರಾನ್ನ, ಶಾಲ್ತಾಹ್ನ, ಬೆಲ್ಲದನ್ನ , ಸಿಹಿಪೊಂಗಲ್, ಹುಳಿ ಅವಲಕ್ಕಿ, ಪುಳಿಯೊಗರೆ, ಸಜ್ಜಿಗೆ .. ಇತ್ಯಾದಿ ನೈವೇದ್ಯ ಮಾಡಬಹುದು..
"ಮಡಿಯಿಂದ ಮಾಡಿದರೆ ತುಂಬಾ ಶುಭವಾಗುವುದು..
ಇಲ್ಲಿ ತಾಂಬೂಲ ಇಡುವುದು ಅತ್ಯಂತ ಮುಖ್ಯವಾಗಿರುತ್ತದೆ, ದೇವರ ನೈವೇದ್ಯ ದ ನಂತರ ತಾಂಬೂಲ ಹಾಕಿಕೊಂಡು, ಅಡಿಗೆಯಲ್ಲಿನ ಗುಣಾವಗುಣಗಳನ್ನು ತೊಲಗಿಸುವರು..!
ನಂತರ
" ನೈವೇದ್ಯ ಮಾಡಿದ ತಕ್ಷಣ ಮಂಗಳಾರತಿ ಮಾಡಬಾರದು..!
(ಊಟ ಹಾಕಿ ತಕ್ಷಣ ಕೈ ತೊಳೆದುಕೊಳ್ಳಲು ನೀರು ಕೊಟ್ಟರೆ ಹೇಗಾಗುತ್ತೆ ಅಲ್ವಾ..? ಯೋಚಿಸಿ )
ನೈವೇದ್ಯ ಮಾಡಿ "ಸಾವಿತ್ರೀ ದೇವಿ ಸ್ತೋತ್ರ, ಅಥವಾ ಅನ್ನಪೂರ್ಣೇಶ್ವರಿ ಸ್ತೋತ್ರ ಅಥವಾ ದೇವರ ಸ್ತೋತ್ರ ಪಠಿಸಿ, ನಂತರ ಮಂಗಳಾರತಿ ಮಾಡಬೇಕು..!
ತುಪ್ಪದ ಬತ್ತಿಗಳಿಂದ ಆರತಿ ಬೆಳಗಬೇಕು..
ನಂತರ ನಮಸ್ಕಾರ ಮಾಡಬೇಕು..
೧೬. ವಿಸರ್ಜನೆ : ದೇವರನ್ನು ಆ ಸ್ಥಳದಿಂದ ವಿಸರ್ಜಿಸುವುದು, ಕಳುಹಿಸಿಕೊಡುವುದು..
ಇಲ್ಲಿ ಪೂರ್ಣಫಲ ಸಮೇತ ತಾಂಬೂಲ ಕೊಟ್ಟರೆ ಅಥವಾ ಫಲದಾನ ಮಾಡಿ , ಮತ್ತೆ ಬರುವಂತೆ ಆಮಂತ್ರಣದ ಪ್ರಾರ್ಥನೆ ಕೊಟ್ಟು ವಿಸರ್ಜಿಸುವುದು..;!
ಬೇರಯ ಭಕ್ತರ ಮನೆಗೂ ಹೋಗಿ ಬರುವಂತೆ ಕಳುಹಿಸುತ್ತೇವೆ..!
ಬೇರೆ ಬೇರೆ ತರಹ ಉಪಚಾರಗಳೂ ಇವೆ, ಸಾಧ್ಯವಾದಷ್ಟು ತಿಳಿಸೋ ಪ್ರಯತ್ನ ಮಾಡಿರುತ್ತೇವೆ..!
" ಗೊತ್ತಿಲ್ಲದೇ ಮಾಡುವುದಕ್ಕಿಂತ ಸ್ವಲ್ಪವಾದರೂ ತಿಳಿದಿದ್ದರೆ ಒಳ್ಳೆಯದಲ್ಕವೇ..!
ಶುಭವಾಗಲಿ..

ಕೊಲೆಸ್ಟ್ರಾಲ್: ಔಷಧ ಮಾಫಿಯಾದ ಭೂತ!

' ಹ್ರದಯವಂತ ಹ್ರದಯತಜ್ಞ' ಎಂದು  ಕರೆಯಲ್ಪಡುವ  ಡಾ. ಬಿ.ಎಮ್ ಹೆಗ್ಡೆಯವರು ಉಡುಪಿಯ ಬೆಳ್ಳೆಯವರು. ಪೂರ್ಣ  ಹೆಸರು  ಡಾ. ಬೆಳ್ಳೆ ಮೋನಪ್ಪ  ಹೆಗ್ಡೆ. . ಇವರು  ಮಣಿಪಾಲ ವೈದ್ಯಕೀಯ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಯವರು.ಇವರು  ಪ್ರತಿಷ್ಠಿತ  ರಾಷ್ಟ್ರೀಯ  ' ಪದ್ಮ ಭೂಷಣ  'ಪ್ರಶಸ್ತಿ  ಪುರಸ್ಕೃತ ರು..ಇವರು  ರಾಷ್ಟ್ರೀಯ ಕನ್ನಡ  ರತ್ನ ಪ್ರಶಸ್ತಿ  ಪುರಸ್ಕೃತ ರು ಕೂಡಾ. ಇನ್ನೂ  ಹಲವು  ಪ್ರಶಸ್ತಿ ಇವರಿಗೆ ಲಭಿಸಿದೆ.
  ರಾಷ್ಟ್ರೀಯ  ಮತ್ತು  ಅಂತರರಾಷ್ಟ್ರೀಯ ಮಟ್ಟದ  ವೈದ್ಯರ   ಸಾಲಿನಲ್ಲಿ  ನಿಲ್ಲುವ  ವಿರಳ   ವೈದ್ಯರಲ್ಲಿ ಅಗ್ರಗಣ್ಯರು.  ಉತ್ತಮ  ಬರಹಗಾರ, ನಿಷ್ಠೂರವಾದಿ  ,ಅತ್ಯದ್ಭುತ  ಭಾಷಣಕಾರ , ಕನ್ನಡ  ಪ್ರೇಮಿ. ಇವರು ಏಳು ಭಾಷೆಯಲ್ಲಿ  ಸುಲಲಿತವಾಗಿ  ಮಾತನಾಡುತ್ತಾರೆ. ಕನ್ನಡ  ಮತ್ತು ಇಂಗ್ಲಿಷ್ ಭಾಷೆಯಲ್ಲಿ  ಮೂವತ್ತಕ್ಕೂ ಹೆಚ್ಚು  ಪುಸ್ತಕ  ಬರೆದಿದ್ದಾರೆ. ಇವರ  ಭಾಷಣ ಕೇಳಿದವರಿಗೆ ಅಥವಾ ಲೇಖನ ಓದಿದವರಿಗೆ  ಅದನ್ನು ಅನುಸರಿಸಿದರೆ ಕಾಯಿಲೆ ದೂರವಾಗುವುದು ಖಚಿತ. ಡಾ.ಬಿ.ಎಮ್.ಹೆಗ್ಡೆ ಅವರು  ಬರೆದ ಲೇಖನವೊಂದು ಇಲ್ಲಿದೆ.ತಪ್ಪದೆ ಓದಿ.
ಕಳುಹಿಸಿದವರು: ಶ್ರೀಮತಿ ಗೀತಾದೇವಿ
ಚಿತ್ರ  :ಕ್ರಪೆ
ಕೊಲೆಸ್ಟ್ರಾಲ್: ಔಷಧ ಮಾಫಿಯಾದ ಭೂತ!
ಕೊಲೆಸ್ಟ್ರಾಲ್ ಅಂದರೆ ಫ್ಯಾಟ್. ಇದು ದೇಹದ ಮೂಲಭೂತ ಅಗತ್ಯ. ನಾವು ತಿನ್ನುವ ಆಹಾರದಲ್ಲಿ ಶೇಕಡ ಹತ್ತರಷ್ಟು ಆಹಾರ ಕೊಲೆಸ್ಟ್ರಾಲ್ ಆಗುತ್ತದೆ. ಉಳಿದಂತೆ ನಮ್ಮ ದೇಹ ತನಗೆ ಬೇಕಾದಷ್ಟು ಕೊಲೆಸ್ಟ್ರಾಲನ್ನು ತಾನೇ ಉತ್ಪಾದಿಸಿಕೊಳ್ಳುತ್ತದೆ. ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಆಹಾರ ನೀರಿಗಿಂತ ಹೆಚ್ಚು ಅಗತ್ಯ. ಇದು ಇಲ್ಲವಾದರೆ ಮನುಷ್ಯ ಸತ್ತೇ ಹೋಗುತ್ತಾನೆ. ದೇಹದಲ್ಲಿ ೧೨೦ ಟ್ರಿಲಿಯನ್ ಕಣಗಳಿವೆ. ಕೆಲವು ಮಿಲಿಯ ಕಣಗಳು ಆಯುಷ್ಯ ಮುಗಿದು ಪ್ರತಿದಿನ ಸಾಯುತ್ತವೆ. ಪ್ರತಿ ಕಣ ಹುಟ್ಟಬೇಕಾದರೆ, ಆ ಕಣದ ಆರೋಗ್ಯ ರಕ್ಷಣೆ ಆಗಬೇಕಾದರೆ ಕೊಲೆಸ್ಟ್ರಾಲ್ ಬೇಕು. ಲಿವರ್ ನಲ್ಲಿ ಕೊಲೆಸ್ಟ್ರಾಲ್ ಸೃಷ್ಟಿಯಾಗುತ್ತದೆ. ಒತ್ತಡ ಹೆಚ್ಚಿದಾಗ ಅದರ ನಿವಾರಣೆಗೆ ಕೊಲೆಸ್ಟ್ರಾಲ್ ಬೇಕು. ದೇಹದ ಹಾರ್ಮೋನುಗಳು ಸರಿಯಾಗಿ ಕೆಲಸ ಮಾಡಬೇಕೆಂದರೂ ಕೊಲೆಸ್ಟ್ರಾಲ್ ಬೇಕೇ ಬೇಕು.
ಒಳ್ಳೆಯ ಕೊಲೆಸ್ಟ್ರಾಲ್, ಕೆಟ್ಟ ಕೊಲೆಸ್ಟ್ರಾಲ್ ಎಂಬುದಿಲ್ಲ. ಮನುಷ್ಯ ಹುಟ್ಟಿಸಿದ ಜಾತಿಯಂತೆ ಇದು ಕೂಡ ಕೃತಕ. ಔಷಧ ಕಂಪನಿಗಳು ಹಣ ಮಾಡಲು ಹುಟ್ಟಿಸಿದ ನಂಬಿಕೆಯಿದು. ರಕ್ತದಲ್ಲಿರುವ ಕೊಲೆಸ್ಟ್ರಾಲ್ ನಾವು ತಿಂದು ಬಂದಿರುವುದಿಲ್ಲ. ಶೇ ೧೦ ರಷ್ಟು ಮಾತ್ರ ತಿಂದ ಆಹಾರದಿಂದ ಬರುತ್ತದೆ. ೩೦೦ ಮಿ.ಗ್ರಾಂ ಕೊಲೆಸ್ಟ್ರಾಲ್ ಇದ್ದರೆ ಅದನ್ನು ಕಡಿಮೆ ಮಾಡಬೇಕೆಂದು ನೀವು ಹುಲ್ಲು ತಿಂದರೂ ೨೭೫ ಕ್ಕಿಂತ ಕಡಿಮೆಯಾಗುವುದಿಲ್ಲ. ಕೊಲೆಸ್ಟ್ರಾಲ್ ಶತ್ರುವಲ್ಲ ಮಿತ್ರ. ಇದು ಕಾಯಿಲೆಯೂ ಅಲ್ಲ. ನಾನಿದನ್ನು ೪೫ ವರುಷಗಳಿಂದ ಹೇಳುತ್ತಲೇ ಬಂದಿದ್ದೇನೆ. ಈಗ ಆಮೇರಿಕಾದವರು ಇದನ್ನು ಒಪ್ಪಿಕೊಂಡಿದ್ದಾರೆ.
ಸಿಟ್ಟು, ಆಕ್ರೋಶ, ದ್ವೇಷ ಹೆಚ್ಚಿದ್ದಾಗ ಸ್ಟಿರಾಯ್ಡ್ ಲೆವೆಲ್ ಹೆಚ್ಚಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಸರೀ ತಿನ್ನಬೇಕು. ಧರ್ಮಕ್ಕೆ ಸಿಕ್ಕಿದರೆ ಮತ್ತೂ ತಿನ್ನಬೇಕು ಎಂಬ ವಾಂಛೆಯಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ದ್ವೇಷಿಸದೇ ಇರುವುದನ್ನು ರೂಢಿ ಮಾಡಿಕೊಳ್ಳಬೇಕು. ವ್ಯಾಯಾಮ ಮಾಡಬೇಕು. ಪ್ರತಿ ದಿನ ವಾಕ್ ಮಾಡಬೇಕು.
ಕೊಲೆಸ್ಟ್ರಾಲ್ ಗೆ ಮದ್ದು ತೆಗೆದುಕೊಂಡರೆ ಲಿವರ್ ನಲ್ಲಿ ಆಗುವ ಯಾವ ಕೆಲಸವೂ ನಡೆಯುವುದಿಲ್ಲ. ಇಡೀ ದೇಹದ ವ್ಯವಸ್ಥೆ ಹಾಳಾಗುತ್ತದೆ. ಇದಕ್ಕೆ ಔಷಧ ಪಡೆಯುವುದು ಮೂರ್ಖತನ. ಆದರೆ ವೈದ್ಯರು ಕೊಲೆಸ್ಟ್ರಾಲ್ ಇದೆ ಎಂದಾಕ್ಷಣ ಮದ್ದು ಬರೆದು ಕೊಡುತ್ತಾರೆ. ಇದಕ್ಕೆ ಕಾರಣ ಔಷಧ ಕಂಪನಿಗಳು. ರೋಗಿಗೆ ಇದೇ ಮದ್ದು ನೀಡಬೇಕು ಎಂದು ಬರೆಸುವುದು ಕೂಡಾ ಇದೇ ಔಷಧ ಕಂಪನಿಗಳ ಮಾಫಿಯಾ. ಇತ್ತೀಚೆಗೆ ಪ್ಯಾರೀಸ್ ನಲ್ಲಿ ಒಂದು ಸಮೀಕ್ಷೆ ನಡೆಯಿತು. ವೃದ್ಧಾಶ್ರಮವೊಂದರ ೮೦, ೯೦ ವಯಸ್ಸಿನ ವೃದ್ಧರಲ್ಲಿದ್ದ ಕೊಲೆಸ್ಟ್ರಾಲ್ ಪರಿಶೀಲನೆ ಮಾಡಿದಾಗ ೮೦೦, ೯೦೦ ಮಿ.ಗ್ರಾಂ ಇತ್ತು. ಸತ್ಯವೇನೆಂದರೆ ಅಷ್ಟು ಕೊಲೆಸ್ಟ್ರಾಲ್ ಇದ್ದ ಕಾರಣಕ್ಕೇ ಅವರು ಅಷ್ಟು ವರ್ಷ ಬದುಕಿದ್ದರು.
ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ೧೫೦ ರಿಂದ ೨೦೦ ಮಿ.ಗ್ರಾಂ ಇರಬೇಕು. ಆದರೆ ಈಗ ಮಿತಿಯನ್ನು ೧೮೦ ಕ್ಕೆ ವೈದ್ಯರೇ ಇಳಿಸಿದ್ದಾರೆ. ಇದರಿಂದಾಗಿ ವಿಶ್ವದಲ್ಲಿ ಕೋಟ್ಯಾಂತರ ಮಂದಿ ರೋಗಿಗಳ ಪಟ್ಟಿಗೆ ಸೇರುತ್ತಾರೆ. ಇದರಿಂದ ಮದ್ದು ಮಾರಾಟ ಹೆಚ್ಚಾಗುತ್ತದೆ. ಇದರ ಲಾಭ ಔಷಧ ಕಂಪನಿಗಳಿಗೇ. ಇದರಿಂದಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧ ತಯಾರಿಸುವ ಕಂಪನಿಗಳಿಗೆ ವಾರ್ಷಿಕ ಲಾಭ ೧೩ ಬಿಲಿಯ ಡಾಲರ್ ಬಂದಿದೆ.
ಹಾರ್ಟ್ ಅಟ್ಯಾಕ್ ಗೂ ಕೊಲೆಸ್ಟ್ರಾಲ್ ಗೂ ಯಾವ ಬಾದರಾಯಣ ಸಂಬಂಧವೂ ಇಲ್ಲ. ಕೊಲೆಸ್ಟ್ರಾಲ್ ಕಡಿಮೆಯಾದರೆ ಕ್ಯಾನ್ಸರ್, ಮಾನಸಿಕ ರೋಗ, ಆತ್ಮಹತ್ಯೆಗಳ ಸಾಧ್ಯತೆ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಕಡಿಮೆಯಾದರೆ ಆರೋಗ್ಯ ಹಾಳು.
ಮಾತ್ರೆಗಳಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಿದರೆ ಲಿವರ್ ಗೆ ಹಾನಿಯಾಗುತ್ತದೆ. ಹಾರ್ಮೋನ್ ಗಳ ಉತ್ಪಾದನೆ ನಿಲ್ಲುತ್ತದೆ. ದೇಹದ ಕಣಗಳ ರಕ್ಷಾ ಕವಚ ಹಾಳಾಗುತ್ತದೆ. ಇದು ಡಯಾಬಿಟಿಸ್ ಗೆ ಕಾರಣವಾಗುತ್ತದೆ. ಇದಕ್ಕಾಗಿಯೇ ಕೊಲೆಸ್ಟ್ರಾಲ್ ಔಷಧ ನೀಡಿದ ಬಳಿಕ ಆಗಾಗ ಲಿವರ್ ಪರೀಕ್ಷೆ ಮಾಡಿಸುತ್ತಾರೆ.
ಕೆಲಸ ಮಾಡಲು ಲವಲವಿಕೆ ಇದ್ದರೆ ಅದುವೇ ಆರೋಗ್ಯ. ಲವಲವಿಕೆ ಇಲ್ಲದಿದ್ದರೆ ಅನಾರೋಗ್ಯ. ಆರೋಗ್ಯಕ್ಕೆ ದೇಸಿ ಹಾಲು ಶ್ರೇಷ್ಟ, ಹಾಲಿಗಿಂತಲೂ ತುಪ್ಪ ಶ್ರೇಷ್ಟ.
ಅಂತಿಮವಾಗಿ ನೀವು ತಿಂದದ್ದು ನಿಮ್ಮನ್ನು ಕೊಲ್ಲುವುದಿಲ್ಲ. ನಿಮ್ಮ ತಲೆಯನ್ನು ತಿನ್ನುವುದೇ ನಿಮ್ಮನ್ನು ಕೊಲ್ಲುತ್ತದೆ. ನಮ್ಮಲ್ಲಿ ಹುಟ್ಟುವ ದ್ವೇಷ, ಕ್ರೋಧ ಮೊದಲಾದ ಕೆಟ್ಟ ಚಿಂತನೆಗಳು ನಮ್ಮನ್ನು ಕೊಲ್ಲುತ್ತವೆ. ಪ್ರಪಂಚದಲ್ಲಿ ಅತೀ ಹೆಚ್ಚು ಸಾವು ಉಂಟಾಗುತ್ತಿರುವುದು ಔಷಧಗಳ ಅಡ್ಡಪರಿಣಾಮದಿಂದ

ಬದರೀ ಕ್ಷೇತ್ರ ಮಹಾತ್ಮೆ-

ಬದರೀ ಕ್ಷೇತ್ರ ಮಹಾತ್ಮೆ-
ಬದರಿಯು ಭರತಖಂಡದ ಸರ್ವಶ್ರೇಷ್ಠ ಪುಣ್ಯಕ್ಷೇತ್ರ. ಇದರ ವರ್ಣನೆಯು ಮಹಾಭಾರತ, ಹರಿವಂಶ, ಭಾಗವತ ಮೊದಲಾದ ಇತಿಹಾಸ ಪುರಾಣಗಳಲ್ಲಿ ವಿಫುಲವಾಗಿ ಬಂದಿದೆ. ಭರತಖಂಡದ ಆಧ್ಯಾತ್ಮಿಕ ರಾಜಧಾನಿ ಎಂಬುದಾಗಿ ಭಾಗವತವು ವರ್ಣಿಸಿದೆ. ಆದ್ದರಿಂದಲೇ ಬದರಿ ಯಾತ್ರೆಗೆ ಭಾರತದ ಧಾರ್ಮಿಕ ಜನತೆಯಲ್ಲಿ ಅತ್ಯುನ್ನತ ಸ್ಥಾನ ಲಭಿಸಿದೆ.
ಬದರಿಯು ಅತ್ಯುನ್ನತ ಕ್ಷೇತ್ರವಾದುದರಿಂದಲೇ ಇದರ ಸ್ವಾಮಿಯಾದ ನಾರಾಯಣನೇ ಸರ್ವೋತ್ತಮ ದೇವತೆಯಾಗಿರುವನು ಎಂಬುದು ಸಿದ್ಧವಾಗುವುದು. ಇಲ್ಲಿ ಹರಿಯುವ ಗಂಗಾ(ಅಲಕಾನಂದಾ) ನದಿಯು ಜಗತ್ತಿನ ಸರ್ವಶ್ರೇಷ್ಠ ನದಿಯಾಗಿದೆ. ಇದು ಮೂಲತಃ ನಾರಾಯಣನ ಪಾದೋದಕ ಎಂಬುದೂ ಗಮನಾರ್ಹ. ಪ್ರಾಚೀನ ಯುಗಗಳ ಧ್ರುವ, ಪೃಥು, ಪ್ರಿಯವ್ರತ ಮೊದಲಾದ ಸಕಲ ರಾಜರುಗಳೂ, ನಾರದಾದಿಮುನಿಗಳೂ, ಬ್ರಹ್ಮಾದಿದೇವತೆಗಳೂ ಬಹಳವಾಗಿ ಸೇವಿಸಿದ ಕ್ಷೇತ್ರ ಎಂಬುದು ಇದರ ಅಸಾಧಾರಣ ವೈಶಿಷ್ಟ್ಯ.
ಧರ್ಮಪುತ್ರತ್ವೇನ ಅವತರಿಸಿದ ಶ್ರೀಮನ್ನಾರಾಯಣನು ನರನೊಂದಿಗೆ ಲೋಕಶಿಕ್ಷಣಕ್ಕಾಗಿ ತಪಸ್ಸು ಮಾಡಿದ ಸ್ಥಳ.
ಇಂದ್ರಪ್ರೇಷಿತರಾದ ಕಾಮಾದಿಗಳು ಪರಾಜಿತರಾದ ಸ್ಥಳ.
ಉರ್ವಶಿಯು ಶ್ರೀಮನ್ನಾರಾಯಣನಿಂದ ಜನ್ಮ ತಳೆದ ಸ್ಥಳ.
ಶ್ರೀಕೃಷ್ಣರೂಪದಿಂದ ಶ್ರೀಹರಿಯು ಘಂಟಾಕರ್ಣರಿಗೆ ಮೋಕ್ಷವಿತ್ತ ಸ್ಥಳ.
ಪಾಂಡವರು ಅವತರಿಸಿದ ಸ್ಥಳ.
ಪಾಂಡವರು ಬಾಲ್ಯವನ್ನು ಕಳೆದದ್ದಲ್ಲದೇ ತಮ್ಮ ತೀರ್ಥಯಾತ್ರೆಯ ಕಾಲದಲ್ಲೂ ಮಹಾಪ್ರಸ್ಥಾನದ ಸಮಯದಲ್ಲೂ ಸಂದರ್ಶಿಸಿದ ಸ್ಥಳ.
ಶ್ರೀಮದಾಚಾರ್ಯರು ತಮ್ಮ ಪ್ರಥಮ ಬದರೀ ಸಂದರ್ಶನ ಸಮಯದಲ್ಲಿ ಗೀತಾಭಾಷ್ಯವನ್ನು ಸಮರ್ಪಿಸಿದ್ದು,  ಪಾಠ ಹೇಳಿದ್ದು, ೪೮ ದಿನಗಳ ಕಾಲ ಕಾಷ್ಠಮೌನವ್ರತವನ್ನು, ಉಪವಾಸವನ್ನು ಆಚರಿಸಿದ್ದು, ಶಿಷ್ಯರಿಗೆ ಸಂದೇಶವಿತ್ತು ತೆರಳಿದ್ದು, ಶ್ರೀವೇದವ್ಯಾಸದೇವರನ್ನು ಸಂದರ್ಶಿಸಿ ಉತ್ತರಬದರಿಯಿಂದ ಮರಳುತ್ತಲೇ ಬ್ರಹ್ಮಸೂತ್ರಭಾಷ್ಯವನ್ನು ರಚಿಸಿದ್ದು, ಶ್ರೀಸತ್ಯತೀರ್ಥರು ಬ್ರಹ್ಮಸೂತ್ರಭಾಷ್ಯದ ಪ್ರಥಮ ಪ್ರತಿಯನ್ನು ಲೇಖನ ಮಾಡಿದ್ದು ಈ ಪವಿತ್ರ ಸ್ಥಳದಲ್ಲಿ ಎಂದು ಮಧ್ವವಿಜಯವು ವರ್ಣಿಸುವುದು.
ಬದರಿಯಲ್ಲಿ ಪರಸ್ಪರ  ಎದುರಿನಲ್ಲಿ ನಾರಾಯಣಪರ್ವತ ಮತ್ತು ನರಪರ್ವತಗಳು ಇವೆ. ಬದರಿನಾರಾಯಣನ ಗುಡಿ ಇರುವ ಪರ್ವತವೇ ನಾರಾಯಣ ಪರ್ವತ. ಎದುರಿನದು ನರಪರ್ವತ. ನಾರಾಯಣಪರ್ವತದ ಬುಡದಲ್ಲೇ ಅಲಕಾನಂದಾ ನದಿಯು ಭೋರ್ಗರೆಯುತ್ತಾ ಹರಿಯುತ್ತದೆ. ಅದರ ತೀರದಲ್ಲೇ ಶ್ರೀಮನ್ನಾರಾಯಣ ದೇವರ ಧ್ಯಾನಮಗ್ನ ಮೂರ್ತಿ ಇದೆ‌. ದೇವತಾಪರಿವಾರವೂ ಇದೆ.
ಅಲಕಾನಂದೆಯು ಇಲ್ಲಿ ಸ್ಪರ್ಶಿಸಲೂ ಅಸಾಧವೆನ್ನುವಷ್ಟು ತಂಪಾಗಿದೆ. ಅದರ ತೀರದಲ್ಲೇ ತಪ್ತಕುಂಡ ಇರುವುದು ವಿಶೇಷ. ಆಳ, ವೇಗ, ಶೀತದಿಂದಾಗಿ ಅಲಕಾನಂದೆಯ ಸ್ನಾನ ಇಲ್ಲಿ ಸಾಮಾನ್ಯರಿಗೆ ಎಂದೂ ಸಾಧ್ಯವಾಗುವಂತದ್ದಲ್ಲ.
ದೇವಾಲಯದ ಒಳಾಂಗಣವೇ ಅನಂತಮಠ ಎಂದು ಪ್ರಸಿದ್ಧವಾದ ಸ್ಥಳವು. ಶ್ರೀಮದಾಚಾರ್ಯರು ಇಲಿಯೇ ತಂಗಿದ್ದು ಗೀತಾಭಾಷ್ಯವನ್ನು ರಚಿಸಿದರು.
ಬದರಿಯಿಂದ ಸುಮಾರು ಮೂರು ಕಿಮೀ ದೂರದಲ್ಲಿ ಸರಸ್ವತೀ ಮತ್ತು ಅಲಕಾನಂದಾ ನದಿಗಳ ಸಂಗಮಸ್ಥಳವಾದ ಕೇಶವಪ್ರಯಾಗ ಎಂಬ ಅಪೂರ್ವ ಸ್ಥಳ ಇದೆ. ಅದರ ಬಳಿಯಲ್ಲೇ ಬೆಟ್ಟದಲ್ಲಿ ಗಣೇಶ ಗುಹಾ ಎಂಬ  ಸ್ಥಳವಿದ್ದು, ಅದು ಮಹಾಭಾರತವನ್ನು ಗಣೇಶನು ಬರೆದ ಸ್ಥಳ ಎನ್ನುವರು. ಇಲ್ಲಿಂದ ಕೆಲವು ಅಡಿಗಳಷ್ಟು ಎತ್ತರದಲ್ಲಿ ವ್ಯಾಸಗುಹೆ ಇದೆ. ಇದನ್ನು ವ್ಯಾಸಾಶ್ರಮ ಎನ್ನುವರು. ಅಲ್ಲಿಂದ ಮೇಲೆ ಸುಮಾರು ಹತ್ತು ಕಿಮೀಗಳಷ್ಟು ದೂರದಲ್ಲಿ ಮುಚುಕುಂದ ಮಲಗಿದ್ದ, ಕಾಲಯವನ ಭಸ್ಮವಾದ, ಮುಚುಕುಂದನಿಗೆ ಶ್ರೀಕೃಷ್ಣನ ದರ್ಶನವಾದ ಮುಚುಕುಂದಗುಹೆ ಇದೆ.
ಕೇಶವಪ್ರಯಾಗದಲ್ಲಿ ಅಲಕಾನಂದೆಯನ್ನು ಸೇರುವ ಸರಸ್ವತಿಯು ಒಂದು ಕಿಮೀ ಮೊದಲು ಪರ್ವತದಿಂದ ನೂರಾರು ಅಡಿಗಳಷ್ಟು ಕೆಳಕ್ಕೆ ಧುಮುಕುವ ರುದ್ರರಮಣೀಯ ದೃಶ್ಯ ಕಾಣಬಹುದು. ಅದು ಧುಮುಕುವ ಸ್ಥಳದಲ್ಲೇ ಭೀಮಸೇನ ದೇವರು ಮಹಾಪ್ರಸ್ಥಾನಕಾಲದಲ್ಲಿ ಒಂದು ಪರ್ವತಶಿಖರವನ್ನು ಮುರಿದಿಟ್ಟು ಸೇತುವೆಯಾಗಿ ನಿರ್ಮಿಸಿದ ಭೀಮಸೇತು ಎಂಬ ಸೇತುವೆ ಇದೆ. ಜಗತ್ತಿನ ಯಾವ ಪ್ರಸಿದ್ಧ ಜಲಪಾತಕ್ಕೂ ಇಂತಹಾ ಏಕಶಿಲೆಯ ಸೇತುವೆ ಇಲ್ಲ. ಇದು ಭೀಮಸೇನ ದೇವರ ಅಗಾಧ ಬಲ ಮತ್ತು ಜ್ಞಾನಗಳಿಗೆ ಪ್ರತ್ಯಕ್ಷ ಸಾಕ್ಷಿ.
ಈ ಸರಸ್ವತೀ ನದಿಯ ತೀರದ ಸ್ಥಳವೇ ಭಾಗವತದಲ್ಲಿ ಉಲ್ಲೇಖಿಸಲ್ಪಟ್ಟಿರುವ ಶಮ್ಯಾಪ್ರಾಸ ಎಂಬ ಭಾಗವತ ರಚನೆಯ ಪುಣ್ಯಸ್ಥಳ.
ಬದರಿಗಿಂತ ೨೦ ಕಿಮೀ ಮುಂಚಿತವಾಗಿ ಪಾಂಡುಕೇಶ್ವರ ಎಂಬ ಸ್ಥಳವಿದೆ. ಅಲಕಾನಂದಾ ತೀರದ ಈ ಸ್ಥಳದಲ್ಲಿಯೇ, ಪಾಂಡುರಾಜನು ತನಗೆ ಕಿಂದಮೃಷಿಗಳಿಂದ ಶಾಪ ಬಂದ ನಂತರದ ಕಾಲದಲ್ಲಿ ವಾಸಿಸಿದ್ದನು.
ಅಲಕಾನಂದಾ ಸ್ನಾನಘಟ್ಟದ ಬಳಿ ಬ್ರಹ್ಮಕಪಾಲ, ಗರುಡಶಿಲಾ, ನಾರದಶಿಲಾ ಮೊದಲಾದ ಸ್ಥಳಗಳಿವೆ. ಬ್ರಹ್ಮಕಪಾಲದಲ್ಲಿ ಸಮರ್ಪಿಸಲ್ಪಡುವ ಪಿಂಡದಿಂದ ಪಿತೃಗಳಿಗೆ ಸದ್ಗತಿಯು ಪ್ರಾಪ್ತವಾಗುವುದೆಂಬ ಕಾರಣದಿಂದಾಗಿ ಗಯಾಕ್ಷೇತ್ರದ ವಿಷ್ಣುಪಾದ ಶ್ರಾದ್ಧದಂತೆ ಇಲ್ಲಿಯ ಶ್ರಾದ್ಧಕ್ಕೂ ತುಂಬಾ ಮಹತ್ತ್ವವನ್ನು ಶಾಸ್ತ್ರಗಳು ವಿಧಿಸಿವೆ.
ಪ್ರಸಿದ್ಧವಾದ ಎರಡು ಬದರಿಗಳಲ್ಲಿ ವಿಶಾಲಬದರಿಯೇ ನಾರಾಯಣಾಶ್ರಮದ ಬದರಿಯಾಗಿದೆ. ಭಾಗವತಾದಿಗಳಲ್ಲಿ ಇದನ್ನು ವಿಶಾಲಬದರಿ ಎಂದೇ ಕರೆಯಲಾಗಿದೆ. ಶ್ರೀವೇದವ್ಯಾಸದೇವರು ಸಾಕ್ಷಾತ್ತಾಗಿ ನೆಲೆಸಿರುವ ಉತ್ತರಬದರೀ ಎಂಬ ಇನ್ನೂ ಶ್ರೇಷ್ಠವಾದ ಮತ್ತೊಂದು ಬದರಿಯ ಪ್ರಸ್ತಾಪ ಮಹಾಭಾರತದಲ್ಲೂ ಮಹಾಭಾರತತಾತ್ಪರ್ಯನಿರ್ಣಯದಲ್ಲೂ  ಬಂದಿದೆ. ನರಾಗಮ್ಯವಾದ ಆ ಬದರಿಯನ್ನು ಶ್ರೀಮದಾಚಾರ್ಯರು ಎರಡು ಬಾರಿ ಸಂದರ್ಶಿಸಿ ಅಲ್ಲಿ ಶ್ರೀಮನ್ನಾರಾಯಣ ದೇವರಿಂದಲೂ ಅದರ ಸಮೀಪದ ನಾರಾಯಣಾಶ್ರಮದಲ್ಲಿ ಶ್ರೀವೇದವ್ಯಾಸರಿಂದಲೂ ವಿಶೇಷವಾಗಿ ಅನುಗ್ರಹೀತರಾದ ವಿವರವು ಮಧ್ವವಿಜಯದಲ್ಲಿ ಇದೆ. ಅಲ್ಲದೇ ಅವರು ಅದ್ಯಾಪಿ ಈ ಬದರಿಯಲ್ಲಿ ನೆಲೆಸಿರುವರೆಂದೂ ದೇವಮಾನದ ನೂರು ವರ್ಷಗಳ ನಂತರ ತಮ್ಮ ಮೂಲರೂಪದೊಂದಿಗೆ ಐಕ್ಯ ಹೊಂದುವರೆಂದೂ ಶ್ರೀರಾಜರು ತಮ್ಮ ಸರಸಭಾರತೀವಿಲಾಸದಲ್ಲಿ ತಿಳಿಸಿರುವರು.
ಇಷ್ಟೆಲ್ಲಾ ಮಹತ್ತ್ವದ ಪುಣ್ಯಭೂಮಿಯಾದ ಈ ದೇವಭೂಮಿಯಲ್ಲಿ ಕಾಲಿಟ್ಟರೂ ಪುಣ್ಯವೆನ್ನುತ್ತಾರೆ ಬಲ್ಲವರು.

ಒಣಕೆಮ್ಮು ಸಮಸ್ಯೆ:

ಒಣಕೆಮ್ಮು ಸಮಸ್ಯೆ: ಅಜ್ಜ–ಅಜ್ಜಿಯ ಕಾಲದ ಪವರ್‌ಫುಲ್ ಮನೆಮದ್ದು 
ಮಳೆಗಾಲ ಬರುತ್ತಿದ್ದಂತೆಯೇ ಆವರಿಸುವ ಶೀತ ಮತ್ತು ಕಫ ಕೆಮ್ಮನ್ನೂ ಜೊತೆಯಲ್ಲಿಯೇ ತರುತ್ತದೆ. ನಮ್ಮ ಗಂಟಲಲ್ಲಿ ಧಾಳಿಯಿಡುವ ವೈರಸ್ಸುಗಳನ್ನು ಕೊಂದು ತಾವೂ ಸಾಯುವ ಬಿಳಿರಕ್ತಕಣಗಳೂ ಕಫದ ರೂಪದಲ್ಲಿ ಗಂಟಲ ಒಳಭಾಗದಲ್ಲಿ ಅಂಟಿಕೊಂಡಿರುತ್ತವೆ. ಇದನ್ನು ಬಲವಂತವಾಗಿ ಹೊರದಬ್ಬುವ ಕ್ರಿಯೆಯೇ ಕೆಮ್ಮು. ಕೆಮ್ಮಿನ ಕೊನೆಯಲ್ಲಿ ಕಫ ಹೊರಬಂದರೆ ಇದರ ಉದ್ದೇಶ ಪೂರ್ಣವಾದಂತೆ. ಒಂದು ವೇಳೆ ಕಫ ಗಟ್ಟಿಯಾಗಿದ್ದು ಎಷ್ಟು ಬಲವಾಗಿ ಕೆಮ್ಮಿದರೂ ಹೊರಬರದೇ ಇದ್ದರೆ? ಇದೇ ಒಣಕೆಮ್ಮು. ಎಡೆಬಿಡದೆ ಕಾಡುವ ಕೆಮ್ಮಿನ ನಿಯಂತ್ರಣಕ್ಕೆ-ಅನಾನಸ್ ಸಿರಪ್ ಸಡಿಲ ಬಿಡದ ಒಣಕಫವನ್ನು ಸೋಲಿಸದೇ ಬಿಡಲಾರೆ ಎಂದು ಕೆಮ್ಮು ಬಾರಿ ಬಾರಿ ಪುನರಾವರ್ತಿಸುತ್ತಾ ದೇಹವನ್ನು ಹೈರಾಣಾಗಿಸುತ್ತದೆ. ಇದನ್ನು ಸಡಿಲಿಸಲು ಆಂಟಿ ಬಯಾಟಿಕ್ ಗುಳಿಗೆಗಳನ್ನು ವೈದ್ಯರು ಸೂಚಿಸುತ್ತಾರಾದರೂ ಇದು ನಿಜವಾದ ಕ್ರಮವಲ್ಲ, ಏಕೆಂದರೆ ಆಂಟಿ ಬಯಾಟಿಕ್ ಗುಳಿಗೆಗಳ ಅಡ್ಡಪರಿಣಾಮವಾಗಿ ಮಧುಮೇಹವೂ ಬೇಗನೇ ಆವರಿಸಬಹುದು. ಆದ್ದರಿಂದ ಒಣ ಕೆಮ್ಮು ಬಂದರೆ ಗುಳಿಗೆಗಳ ಮೊರೆ ಹೋಗುವ ಬದಲು ತಲತಲಾಂತರದಿಂದ ಪ್ರಯೋಗಿಸಿ ಪ್ರಮಾಣಿಸಲ್ಪಟ್ಟಿರುವ ಮನೆಮದ್ದಿನ ಮೊರೆ ಹೋಗುವುದೇ ಲೇಸು. ಗಂಟಲ ಸೋಂಕು, ಬೇನೆ ಮತ್ತು ಒಣಕೆಮ್ಮಿಗೆ ಈ ಮದ್ದು ಸಿದ್ಧೌಷಧವಾಗಿದ್ದು ಹೆಚ್ಚಿನ ಶ್ರಮವಿಲ್ಲದೇ ತಯಾರಿಸಬಹುದು. ಬನ್ನಿ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ: ಒಣ ಕೆಮ್ಮಿನ ನಿವಾರಣೆಗೆ ಉತ್ತಮ ಮನೆಮದ್ದು   ಮನೆಯಲ್ಲಿಯೇ ತಯಾರಿಸಬಹುದಾದ ಕೆಮ್ಮಿನ ಸಿರಪ್: ಅಗತ್ಯವಿರುವ ಸಾಮಾಗ್ರಿಗಳು: *4 ದೊಡ್ಡಚಮಚ ಜೇನು *6 ಲವಂಗ *1 ಇಂಚಿನಷ್ಟು ಚೆಕ್ಕೆ, ಚಿಕ್ಕದಾಗಿ ತುಂಡರಿಸಿದ್ದು. ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು * ಮೊದಲು ಬಾಣಲೆಯೊಂದರಲ್ಲಿ ಚಿಕ್ಕ ಉರಿಯಲ್ಲಿ ಲವಂಗ ಮತ್ತು ಚೆಕ್ಕೆಗಳನ್ನು ಸುಮಾರು ಎರಡರಿಂದ ಮೂರು ನಿಮಿಷ ಹುರಿಯಿರಿ. ಅಂದರೆ ಇದರಿಂದ ಕೊಂಚ ವಾಸನೆ ಸೂಸಲು ಪ್ರಾರಂಭವಾಗುವಷ್ಟು ಮಾತ್ರ. ಬಳಿಕ ತಕ್ಷಣವೇ ಗ್ರೈಂಡರಿನ ಚಿಕ್ಕ ಜಾರ್‌ನಲ್ಲಿ ಒಣದಾಗಿಯೇ ನುಣ್ಣನೆಯ ಪುಡಿಮಾಡಿ. * ಈ ಪುಡಿಯನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಜೇನಿನೊಂದಿಗೆ ಬೆರೆಸಿ ಚಿಕ್ಕ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. * ಒಣ ಕೆಮ್ಮಿದ್ದಾಗ ರಾತ್ರಿ ಮಲಗುವ ಮುನ್ನ ಮೂರು ಚಿಕ್ಕ ಚಮಚದಷ್ಟು ಸೇವಿಸಿ ಮಲಗಿ. ಕೆಮ್ಮು ಹೆಚ್ಚಿದ್ದರೆ ಬೆಳಗ್ಗಿನ ಉಪಾಹಾರದ ಬಳಿಕವೂ ಇಷ್ಟೇ ಪ್ರಮಾಣದಲ್ಲಿ ಸೇವಿಸಿ. * ಕೆಮ್ಮು ಗುಣವಾಗಲು ಸುಮಾರು ಎರಡರಿಂದ ಮೂರು ದಿನ ಬೇಕಾಗಬಹುದು. ಆದರೂ ಇದರ ಬಳಿಕವೂ ಒಂದೆರಡು ದಿನ ಸೇವಿಸಿ. * ಈ ಸಿರಪ್ ಒಣಕೆಮ್ಮಿಗೆ ಮಾತ್ರವಲ್ಲ, ಕಫದ ಕೆಮ್ಮಿಗೂ ಸೂಕ್ತವಾಗಿದೆ. * ಸಾಧ್ಯವಾದರೆ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ ಬಾಟಲಿಯಲ್ಲಿ ಸಂಗ್ರಹಿಸಿ ಕೆಮ್ಮು ಆಗುವ ಅನುಮಾನ ಬಂದ ತಕ್ಷಣ ಕೊಂಚ ಸೇವಿಸಿದರೆ ಇದು ಉಲ್ಬಣಿಸುವುದರಿಂದ ತಡೆಗಟ್ಟಬಹುದು. ಎರಡೇ ದಿನದಲ್ಲಿ ಕೆಮ್ಮನ್ನು ನಿಯಂತ್ರಿಸುವ ಪವರ್ ಫುಲ್ ಮನೆಮದ್ದು ಇದು ಕೆಲಸ ಹೇಗೆ ಮಾಡುತ್ತದೆ? *ಜೇನು ಒಂದು ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕ ಹಾಗೂ ವೈರಸ್ ನಿವಾರಕವಾಗಿದೆ. ಇದು ವಿಶೇಷವಾಗಿ ಗಂಟಲ ಒಳಭಾಗದಲ್ಲಿ ತೇವವನ್ನು ಹೆಚ್ಚಿಸಿ ಕಫವನ್ನು ಸಡಿಲಿಸುವಂತೆ ಮಾಡುತ್ತದೆ. ಲವಂಗದಲ್ಲಿಯೂ ಬ್ಯಾಕ್ಟೀರಿಯಾ ನಿವಾರಕ ಗುಣವಿದ್ದು ಕೆಮ್ಮಿನಿಂದಾಗಿ ದಣಿದಿದ್ದ ಗಂಟಲ ಒಣಗಣ ಅಂಗಾಂಶಗಳಿಗೆ ಮುದ ನೀಡುತ್ತದೆ. ಅಲ್ಲದೇ ಗಂಟಲಿನ ಒಳಗಿನ ಕೆರೆತವನ್ನೂ ನಿವಾರಿಸುತ್ತವೆ. *ಚೆಕ್ಕೆ ಗಂಟಲ ಒಳಭಾಗದಲ್ಲಿ ಪ್ರಚೋದನೆಯುಂಟು ಮಾಡಿ ರಕ್ತ ಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ. ಇವೆಲ್ಲವೂ ಒಟ್ಟುಗೂಡಿ ಕೆಮ್ಮಿಗೆ ಕಾರಣವಾದ ವೈರಸ್ಸುಗಳನ್ನು ಹೊಡೆದೋಡಿಸಲು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

ಇಲ್ಲಿನ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕೂ ಕ್ಷೇತ್ರಾಧಿದೇವತೆಗಳ ಅನುಮತಿ ಬೇಕು

ಇಲ್ಲಿನ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕೂ ಕ್ಷೇತ್ರಾಧಿದೇವತೆಗಳ ಅನುಮತಿ ಬೇಕು
-------------------------------------------------------------------------------
ಇಲ್ಲಿ ಒಂದು ವಿಚಾರವನ್ನು ನಾವು ಗಮನಿಸಬೇಕು. ಮೊದಲೇ ಹೇಳಿದಂತೆ ವೇಂಕಟೇಶನ ಅವತಾರದ ಮುಖ್ಯ ಉದ್ದೇಶ ಪಾಪ ನಿವಾರಣೆ, ಹಾಗಾಗಿ ಈ ಕ್ಷೇತ್ರದಲ್ಲಿ ಕೋಟ್ಯಾನುಕೋಟಿ ತೀರ್ಥಗಳಿವೆ, ಎಂದು ಪ್ರರಾಣಗಳಲ್ಲಿ ಹೇಳಿದೆ. ಅವುಗಳಲ್ಲಿ ದೃಶ್ಯ ರೂಪದಲ್ಲಿ ಕೆಲವು ಗೋಚರಿಸಿದರೆ ಇನ್ನೂ ಕೆಲವು ಅದೃಶ್ಯವಾಗಿರುವುದೆಂದೂ ಈ ಕ್ಷೇತ್ರದಲ್ಲಿ ತಪಸ್ಸನ್ನಾಚರಿಸುವವರ ಯೋಗ್ಯತಾನುಸಾರವಾಗಿ ಅವು ಪ್ರಕಟಗೊಳ್ಳುತ್ತದೆಂದೂ ಹೇಳಿದೆ. ಸೂತ ಪುರಾಣಿಕರೇ ಹೇಳುವಂತೆ, ಈ ಕ್ಷೇತ್ರದಲ್ಲಿ ಕಾಯರಸಾಯನ ತೀರ್ಥವೆಂಬುದೊಂದಿದೆಯಂತೆ. ಈ ತೀರ್ಥದಲ್ಲಿ ಸ್ನಾನ ಮಾಡುವವನ ದೇಹ ವಜ್ರ ಸದೃಶವಾಗುವುದಂತೆ. ಪರೀಕ್ಷಾರ್ಥವಾಗಿ ಯಾರಾದರೂ ಈ ತೀರ್ಥ ಜಲದಲ್ಲಿ ಒಣಗಿದ ಎಲೆಯನ್ನು ಹಾಕಿದರೆ ಅದು ಹಸಿರೆಲೆಯಾಗಿ ಮಾರ್ಪಡುವುದೆಂದೂ, ಈ ಜಲದ ದುರ್ಬಳಕೆಯಾಗದಿರಲೆಂದು ಸನಕ ಸನಂದನಾದಿ ಯೋಗಿಗಳು ಈ ತೀರ್ಥವನ್ನು ಕಾವಲು ಕಾಯುತ್ತಿರುವರೆಂದೂ, ಹುಲ್ಲು ಮರ ಮುಂತಾದವುಗಳಿಂದ ಅದನ್ನು ಮುಚ್ಚಿ ಪ್ರಾಮಾಣಿಕರಾದ ಸಾಧಕರಿಗೆೆ ಮಾತ್ರ ಅದರ ದರ್ಶನ, ಸ್ಪರ್ಶನ ಪ್ರಾಶನಾದಿಗಳನ್ನು ಅವರವರ ಯೋಗ್ಯತಾನುಸಾರವಾಗಿ ಮಾಡಿಸುತ್ತಾರೆಂದು ಹೇಳಲ್ಪಟ್ಟಿದೆ.
ಹೀಗಾಗಿ ಇಲ್ಲಿನ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕೂ ಇಲ್ಲಿನ ಕ್ಷೇತ್ರಾಧಿದೇವತೆಗಳ ಅನುಗ್ರಹವೆಂಬುದು ಬೇಕೇ ಬೇಕು. ಇಲ್ಲದಿದ್ದರೆ ಯಾವ ತೀರ್ಥಕ್ಕೂ ಹೋಗುವುದಕ್ಕಾಗುವುದಿಲ್ಲ. ವೇಂಕಟೇಶನದ್ದು ಪಾಪ ನಿವಾರಕ ಶಕ್ತಿ, ಕರ್ಮವಿಮೋಚನಾ ಶಕ್ತಿ. ಆದ್ದರಿಂದಲೇ ಈ ಕ್ಷೇತ್ರದಲ್ಲಿ ಪಾಪ ನಿವಾರಣೆ ಮಾಡುವ ಅನೇಕಾನೇಕ ತೀರ್ಥಗಳ ಪ್ರಾಬಲ್ಯ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ವೇಂಕಟೇಶನದ್ದು ತೀರ್ಥ ಸಾಮ್ರಾಜ್ಯ. ಆತನ ಶಕ್ತಿಯೆಲ್ಲವೂ ಈ ಕ್ಷೇತ್ರದಲ್ಲಿರುವ ಪರಮ ಪವಿತ್ರಗಳಾದ ತೀರ್ಥಗಳು. ಈ ತೀರ್ಥಗಳ ನಡುವೆ ತಾನೂ ನಿಂತು ಆ ತೀರ್ಥಗಳ ಪಾಪವನ್ನು ತಾನು ಹೋಗಲಾಡಿಸುತ್ತಾನೆ. ಗಂಗಾದಿ ಸಕಲ ತೀರ್ಥಗಳೂ, ಪಾಪಿಗಳು ತಮ್ಮಲ್ಲಿ ಬಿಟ್ಟು ಹೋದ ಪಾಪಗಳ ನಿವಾರಣೆಗಾಗಿ ಈ ವೇಂಕಟಾಚಲಕ್ಕೆ ಬರುತ್ತವೆ. ಭೂ ಲೋಕದಲ್ಲಿರುವ ತೀರ್ಥಗಳಷ್ಟೇ ಅಲ್ಲದೆ ಬ್ರಹ್ಮಾಂಡದಲ್ಲಿರುವ ಸಕಲ ತೀರ್ಥಗಳೂ ತಮ್ಮ ಪಾಪ ನಿವಾರಣೆಗಾಗಿ ಈ ಕ್ಷೇತ್ರಕ್ಕೆ ಅದೃಶ್ಯ ರೂಪದಲ್ಲೋ ಕಾಮ ರೂಪದಲ್ಲೋ, ಮನುಷ್ಯ, ಪಶು ಇತ್ಯಾದಿ ರೂಪಗಳಲ್ಲಿ ಬಂದು ಈ ಕ್ಷೇತ್ರವನ್ನು ಸೇವಿಸಿ ತಮ್ಮ ಕರ್ಮಗಳನ್ನು ವಿಮೋಚನೆ ಮಾಡಿಕೊಂಡು ಹೋಗುತ್ತದೆಯಂತೆ.
ಬೆಟ್ಟದ ಮೇಲಿರುವ ತೀರ್ಥಗಳು ಕೋಟ್ಯಾನುಕೋಟಿ, ಅದರಲ್ಲಿ ಎಷ್ಟೋ ಅದೃಶ್ಯವಾಗಿದ್ದು ಸಾಧಕನ ಯೋಗ್ಯತಾನುಸಾರವಾಗಿ ಅಲ್ಲಲ್ಲಿ ಪ್ರಕಟಗೊಂಡು ಗುಪ್ತವಾಗಿ ಬಿಡುತ್ತವೆ. ಪ್ರಕಟವಾಗಿ ಪ್ರತ್ಯಕ್ಷವಾಗಿ ಗೋಚರಿಸುವ ತೀರ್ಥಗಳಲ್ಲಿ ಪ್ರಮುಖವಾದದ್ದಿದೆ.
ಸ್ವಾಮಿತೀರ್ಥ, ಅಥವಾ ಸ್ವಾಮಿಪುಷ್ಕರಿಣಿ (ದೇವಾಲಯದ ಪಕ್ಕದಲ್ಲಿರುವ ಕೊಳ) ಪಾಪ ವಿನಾಶನ ತೀರ್ಥ, ಆಕಾಶ ಗಂಗಾ ತೀರ್ಥ, ಜಾಬಾಲಿ ತೀರ್ಥ, ರಾಮಕೃಷ್ಣ ತೀರ್ಥ, ದೇವಾಲಯದ ಹಿಂಭಾಗದ ಬೆಟ್ಟದಲ್ಲಿರುವ ಚಕ್ರ ತೀರ್ಥ, ಶಂಖ ತೀರ್ಥ, ತುಂಬುರು ತೀರ್ಥ, ಪಂಚ ಪಾಂಡವ ತೀರ್ಥ, ಕಪಿಲ ತೀರ್ಥ, ಇದರ ಆಸುಪಾಸಿನಲ್ಲೇ ಕಾಡಿನ ಮಧ್ಯದಲ್ಲಿರುವ ಪಂಚ ತೀರ್ಥ, ಘೋಣಾ ತೀರ್ಥ, ಕಾಯರಸಾಯನ ತೀರ್ಥ, ಅಸ್ಥಿ ತೀರ್ಥ, ಸನಕ ಸನಂದನ ತೀರ್ಥ, ಅಗಸ್ತ್ಯ ತೀರ್ಥ, ಗೋಗರ್ಭ ತೀರ್ಥ, ಕಟಾಹ ತೀರ್ಥ ಹೀಗೆ ಹೇಳುತ್ತಾ ಹೋದರೆ ಅನೇಕವು ಇವೆ. ಇವುಗಳಲ್ಲಿ ಕೆಲವು ಪ್ರಾಕೃತಿಕ ವೈಪರೀತ್ಯಗÀಳಿಂದ ದಿಕ್ಕು ಬದಲಿಸಿ ಗುಪ್ತವಾಗಿವೆ. ಕೆಲವು ಅರಣ್ಯ ಮಧ್ಯದಲ್ಲಿರುವುದರಿಂದ ಹೋಗಲು ಕಷ್ಟ. ಇನ್ನು ಕೆಲವು ದೇವತಾ ಶಕ್ತಿಗಳಿಂದ ಪರಿವೃತವಾಗಿರುವುದರಿಂದ ಕ್ರೂರಮೃಗಗಳಿಂದ ನಿಬಿಡವಾಗಿದ್ದು ಕೆಲವೇ ಕೆಲವು ಯೋಗ್ಯರಿಗೆ ಮಾತ್ರ ದರ್ಶನ ಕೊಡುತ್ತವೆ.
ಹೆಚ್ಚಿನ ಮಾಹಿತಿಗೆ 'ಶ್ರೀ ವೆಂಕಟೇಶ ರಹಸ್ಯ' ಕೃತಿಯನ್ನು ಪರಾಂಬರಿಸುವುದು.ನಿಮ್ಮ ವಿಳಾಸವನ್ನು ಹಾಗೂ ಮೊಬೈಲ್ ಸಂಖ್ಯೆಯನ್ನು 9986272266 ಈ ನಂಬರಿಗೆ ಕಳುಹಿಸಿದಲ್ಲಿ ನಿಮ್ಮ ಮನೆಗೆ ಅಂಚೆಯ ಮೂಲಕ ಪುಸ್ತಕವನ್ನು ಕಳುಹಿಸಲಾಗುವುದು. ಹಣ ಕೊಟ್ಟು ನೀವು ಪುಸ್ತಕವನ್ನು ಬಿಡಿಸಿಕೊಳ್ಳಬಹುದು. ಅಂಚೆಯ ಮೂಲಕ ಪುಸ್ತಕದ ಬೆಲೆ :411
ನಮ್ಮ ಕೇಂದ್ರಗಳಲ್ಲಿ ಈ ಪುಸ್ತಕವು 300 ರೂಪಾಯಿಗೆ ವಿನಾಯಿತಿ ದರದಲ್ಲಿ ದೊರೆಯುತ್ತದೆ.

ಹುಟ್ಟಿದ ಸಂವತ್ಸರದ ಹೆಸರು

ನಾವೆಲ್ಲರೂ ನಮ್ಮ ಹುಟ್ಟಿದ ವರ್ಷವನ್ನು ಥಟ್ಟನೆ ಹೇಳುತ್ತೇವೆ. ಆದರೆ ಭಾರತೀಯ ಪಂಚಾಂಗ ರೀತ್ಯಾ ಹುಟ್ಟಿದ ಸಂವತ್ಸರದ ಹೆಸರು ಹೇಳಲು ಮಾತ್ರ ತಡಕಾಡುತ್ತೇವೆ . ಇಗೋ ಇಲ್ಲಿದೆ ನೋಡಿ ನಿಮ್ಮ ಹುಟ್ಟಿದ ವರ್ಷ ಯಾವ ಸಂವತ್ಸರದಲ್ಲಿದೆಯೆಂಬ ವಿವರ.ಯಾರೋ ಪುಣ್ಯಾತ್ಮರು ತಯಾರಿಸಿ ಕೊಟ್ಟಿರುವ ಈ ಮಾಹಿತಿ ರಕ್ಷಿಸಿಡಿ.

*( 1867, 1927,1987,)*: ಪ್ರಭವ
*(1868,1928,1988)*: ವಿಭವ 
*(1869,1929,1989)*: ಶುಕ್ಲ 
*(1870,1930,1990)*: ಪ್ರಮೋದೂತ
*(1871,1931, 1991)*: ಪ್ರಜೋತ್ಪತ್ತಿ 
*(1872,1932,1992)*: ಅಂಗೀರಸ
*(1873,1933,1993)*: ಶ್ರೀಮುಖ 
*(1874,1934,1994)*: ಭಾವ 
*(1875,1935,1995)*:ಯುವ 
*(1876,1936,1996)*: ధాత
*(1877,1937,1997)*:  ಈಶ್ವರ 
*(1878,1938,1998)*: ಬಹುಧಾನ್ಯ
*(1879,1939,1999)*: ಪ್ರಮಾದಿ 
*(1880,1940,2000)*: ವಿಕ್ರಮ
*(1881,1941,2001)*: ವೃಷ
*(1882,1942,2002)*: ಚಿತ್ರಭಾನು 
*(1883,1943,2003)*: ಸ್ವಭಾನು 
*(1884,1944,2004)*: ತಾರಣ 
*(1885,1945,2005)*: ಪಾರ್ಥಿವ 
*(1886,1946,2006)*: ವ್ಯಯ 
*(1887,1947,2007)*: ಸರ್ವಜಿತ್
*(1888,1948,2008)*:ಸರ್ವಧಾರಿ 
*(1889,1949,2009)*: ವಿರೋಧಿ 
*(1890,1950,2010)*: ವಿಕೃತಿ 
*(1891,1951,2011)*: ಖರ
*(1892,1952,2012)*:  ನಂದನ 
*(1893,1953,2013)*: ವಿಜಯ
*(1894,1954,2014)*: ಜಯ
*(1895,1955,2015)*: ಮನ್ಮಥ
*(1896,1956,2016)*: ದುರ್ಮುಖಿ
*(1897,1957,2017)*: ಹೇವಿಳಂಬಿ
*(1898,1958,2018)*: ವಿಳಂಬಿ 
*(1899,1959,2019)*: ವಿಕಾರಿ
*(1900,1960,2020)*: ಶಾರ್ವರಿ 
*(1901,1961,2021)*: ಪ್ಲವ 
*(1902,1962,2022)*: ಶುಭಕೃತ 
*(1903,1963,2023)*: ಶೋಭಕೃತ 
*(1904,1964,2024)*: ಕ್ರೋಧಿ 
*(1905,1965,2025)*: ವಿಶ್ವಾವಸು 
*(1906,1966,2026)*: ಪರಾಭವ
*(1907,1967,2027)*: ಪ್ಲವಂಗ 
*(1908,1968,2028)*: ಕೀಲಕ 
*(1909,1969,2029)*: ಸೌಮ್ಯ 
*(1910,1970,2030)*:  ಸಾಧಾರಣ 
*(1911,1971,2031)*: ವಿರೋಧಿಕೃತ 
*(1912,1972,2032)*: ಪರಿಧಾವಿ
*(1913,1973,2033)*: ಪ್ರಮಾದ
*(1914,1974,2034)*: ಆನಂದ
*(1915,1975,2035)*: ರಾಕ್ಷಸ
*(1916,1976,2036)*: ನಳ
*(1917,1977,2037)*: ಪಿಂಗಳ
*(1918,1978,2038)*: ಕಾಳಯುಕ್ತಿ
*(1919,1979,2039)*: ಸಿದ್ಧಾರ್ಥಿ
*(1920,1980,2040)*: ರೌದ್ರಿ 
*(1921,1981,2041)*: ದುರ್ಮತಿ 
*(1922,1982,2042)*: ದುಂದುಭಿ
*(1923,1983,2043)*: ರುಧಿರೋದ್ಗಾರಿ 
*(1924,1984,2044)*: ರಕ್ತಾಕ್ಷಿ 
*(1925,1985,2045)*: ಕ್ರೋಧನ
*(1926,1986,2046)*: ಅಕ್ಷಯ

*ಸ್ನಾನದ ಮಹತ್ವ*

*ಸ್ನಾನದ ಮಹತ್ವ*
ಬೇಗ ಏಳು- ಬೇಗ ಮಲಗು ಪದ್ಧತಿ ಈಗಿಲ್ಲ. ರಾತ್ರಿ 12ರ ಮೇಲೆ ನಿದ್ರೆ ಮಾಡುವವರ ಸಂಖ್ಯೆಯೇ ಹೆಚ್ಚು. ಇದರಿಂದಾಗಿ ಬೆಳಿಗ್ಗೆ ಏಳುವುದು ತಡವಾಗುತ್ತದೆ. ಸೂರ್ಯೋದಯಕ್ಕಿಂತ ಮೊದಲ ಸ್ನಾನ ಮಾಡುವವರ ಸಂಖ್ಯೆ ಅತೀ ಕಡಿಮೆ. ಸೂರ್ಯ ನೆತ್ತಿ ಮೇಲೆ ಬಂದರೂ ಕೆಲವರಿಗೆ ಸ್ನಾನ ಆಗಿರುವುದಿಲ್ಲ. ನೀವು ಇಂತವರಲ್ಲಿ ಒಬ್ಬರಾಗಿದ್ದರೆ ಎಚ್ಚರ. ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕ ವ್ಯವಸ್ಥೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಧರ್ಮಶಾಸ್ತ್ರದಲ್ಲಿ ನಾಲ್ಕು ರೀತಿಯ ಸ್ನಾನವನ್ನು ಹೇಳಲಾಗಿದೆ.
ಬೆಳಗಿನ ಜಾವ 4 ಗಂಟೆಯಿಂದ ಐದು ಗಂಟೆಯೊಳಗೆ ಮಾಡುವ ಸ್ನಾನವನ್ನು *ಮುನಿ ಸ್ನಾನ* ಎಂದು ಕರೆಯಲಾಗುತ್ತದೆ. ಇದು ಸ್ನಾನ ಮಾಡಲು ಅತ್ಯುತ್ತಮವಾದ ಸಮಯ. ಮುನಿ ಸ್ನಾನ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ, ಸಮೃದ್ಧಿ ನೆಲೆಸುತ್ತದೆಂದು ನಂಬಲಾಗಿದೆ.
ಬೆಳಿಗ್ಗೆ ಐದು ಗಂಟೆಯಿಂದ ಆರು ಗಂಟೆಯೊಳಗೆ ಸ್ನಾನ ಮಾಡಿದರೆ ಮಾಡಿದರೆ ಆಯಸ್ಸು, ಕೀರ್ತಿ, ಧನ, ಸಂತೋಷ ಲಭಿಸುತ್ತದೆ. ಇದನ್ನು *ದೇವಿ ಸ್ನಾನ* ಎಂದು ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಈ ಸ್ನಾನ ಕೂಡ ಉತ್ತಮವಾದದ್ದು.
ಮೂರನೇ ಸ್ನಾನವನ್ನು *ಮನುಷ್ಯ ಸ್ನಾನ* ಎಂದು ಕರೆಯಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯ ಒಳಗೆ ಮಾಡುವ ಸ್ನಾನ ಇದಾಗಿದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.
ಕೊನೆಯ ಸ್ನಾನ *ರಾಕ್ಷಸಿ ಸ್ನಾನ*. ಇದೀಗ ಸಾಮಾನ್ಯವಾಗಿದೆ. 8 ಗಂಟೆ ನಂತರ ಮಾಡುವ ಸ್ನಾನ ಈ ಶ್ರೇಣಿಯಲ್ಲಿ ಬರುತ್ತದೆ. ಇದನ್ನು ಧರ್ಮ ನಿಷೇಧವೆಂದು ಪರಿಗಣಿಸಲಾಗಿದೆ. ಈ ಸ್ನಾನ ಮಾಡುವುದರಿಂದ ಮನೆಯಲ್ಲಿ ಬಡತನ, ಕಲಹ, ಅಶಾಂತಿ, ಅನಾರೋಗ್ಯ ಕಾಡುತ್ತದೆ.