ಇಲ್ಲಿನ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕೂ ಕ್ಷೇತ್ರಾಧಿದೇವತೆಗಳ ಅನುಮತಿ ಬೇಕು
------------------------------ ------------------------------ -------------------
ಇಲ್ಲಿ ಒಂದು ವಿಚಾರವನ್ನು ನಾವು ಗಮನಿಸಬೇಕು. ಮೊದಲೇ ಹೇಳಿದಂತೆ ವೇಂಕಟೇಶನ ಅವತಾರದ ಮುಖ್ಯ ಉದ್ದೇಶ ಪಾಪ ನಿವಾರಣೆ, ಹಾಗಾಗಿ ಈ ಕ್ಷೇತ್ರದಲ್ಲಿ ಕೋಟ್ಯಾನುಕೋಟಿ ತೀರ್ಥಗಳಿವೆ, ಎಂದು ಪ್ರರಾಣಗಳಲ್ಲಿ ಹೇಳಿದೆ. ಅವುಗಳಲ್ಲಿ ದೃಶ್ಯ ರೂಪದಲ್ಲಿ ಕೆಲವು ಗೋಚರಿಸಿದರೆ ಇನ್ನೂ ಕೆಲವು ಅದೃಶ್ಯವಾಗಿರುವುದೆಂದೂ ಈ ಕ್ಷೇತ್ರದಲ್ಲಿ ತಪಸ್ಸನ್ನಾಚರಿಸುವವರ ಯೋಗ್ಯತಾನುಸಾರವಾಗಿ ಅವು ಪ್ರಕಟಗೊಳ್ಳುತ್ತದೆಂದೂ ಹೇಳಿದೆ. ಸೂತ ಪುರಾಣಿಕರೇ ಹೇಳುವಂತೆ, ಈ ಕ್ಷೇತ್ರದಲ್ಲಿ ಕಾಯರಸಾಯನ ತೀರ್ಥವೆಂಬುದೊಂದಿದೆಯಂತೆ. ಈ ತೀರ್ಥದಲ್ಲಿ ಸ್ನಾನ ಮಾಡುವವನ ದೇಹ ವಜ್ರ ಸದೃಶವಾಗುವುದಂತೆ. ಪರೀಕ್ಷಾರ್ಥವಾಗಿ ಯಾರಾದರೂ ಈ ತೀರ್ಥ ಜಲದಲ್ಲಿ ಒಣಗಿದ ಎಲೆಯನ್ನು ಹಾಕಿದರೆ ಅದು ಹಸಿರೆಲೆಯಾಗಿ ಮಾರ್ಪಡುವುದೆಂದೂ, ಈ ಜಲದ ದುರ್ಬಳಕೆಯಾಗದಿರಲೆಂದು ಸನಕ ಸನಂದನಾದಿ ಯೋಗಿಗಳು ಈ ತೀರ್ಥವನ್ನು ಕಾವಲು ಕಾಯುತ್ತಿರುವರೆಂದೂ, ಹುಲ್ಲು ಮರ ಮುಂತಾದವುಗಳಿಂದ ಅದನ್ನು ಮುಚ್ಚಿ ಪ್ರಾಮಾಣಿಕರಾದ ಸಾಧಕರಿಗೆೆ ಮಾತ್ರ ಅದರ ದರ್ಶನ, ಸ್ಪರ್ಶನ ಪ್ರಾಶನಾದಿಗಳನ್ನು ಅವರವರ ಯೋಗ್ಯತಾನುಸಾರವಾಗಿ ಮಾಡಿಸುತ್ತಾರೆಂದು ಹೇಳಲ್ಪಟ್ಟಿದೆ.
------------------------------
ಇಲ್ಲಿ ಒಂದು ವಿಚಾರವನ್ನು ನಾವು ಗಮನಿಸಬೇಕು. ಮೊದಲೇ ಹೇಳಿದಂತೆ ವೇಂಕಟೇಶನ ಅವತಾರದ ಮುಖ್ಯ ಉದ್ದೇಶ ಪಾಪ ನಿವಾರಣೆ, ಹಾಗಾಗಿ ಈ ಕ್ಷೇತ್ರದಲ್ಲಿ ಕೋಟ್ಯಾನುಕೋಟಿ ತೀರ್ಥಗಳಿವೆ, ಎಂದು ಪ್ರರಾಣಗಳಲ್ಲಿ ಹೇಳಿದೆ. ಅವುಗಳಲ್ಲಿ ದೃಶ್ಯ ರೂಪದಲ್ಲಿ ಕೆಲವು ಗೋಚರಿಸಿದರೆ ಇನ್ನೂ ಕೆಲವು ಅದೃಶ್ಯವಾಗಿರುವುದೆಂದೂ ಈ ಕ್ಷೇತ್ರದಲ್ಲಿ ತಪಸ್ಸನ್ನಾಚರಿಸುವವರ ಯೋಗ್ಯತಾನುಸಾರವಾಗಿ ಅವು ಪ್ರಕಟಗೊಳ್ಳುತ್ತದೆಂದೂ ಹೇಳಿದೆ. ಸೂತ ಪುರಾಣಿಕರೇ ಹೇಳುವಂತೆ, ಈ ಕ್ಷೇತ್ರದಲ್ಲಿ ಕಾಯರಸಾಯನ ತೀರ್ಥವೆಂಬುದೊಂದಿದೆಯಂತೆ. ಈ ತೀರ್ಥದಲ್ಲಿ ಸ್ನಾನ ಮಾಡುವವನ ದೇಹ ವಜ್ರ ಸದೃಶವಾಗುವುದಂತೆ. ಪರೀಕ್ಷಾರ್ಥವಾಗಿ ಯಾರಾದರೂ ಈ ತೀರ್ಥ ಜಲದಲ್ಲಿ ಒಣಗಿದ ಎಲೆಯನ್ನು ಹಾಕಿದರೆ ಅದು ಹಸಿರೆಲೆಯಾಗಿ ಮಾರ್ಪಡುವುದೆಂದೂ, ಈ ಜಲದ ದುರ್ಬಳಕೆಯಾಗದಿರಲೆಂದು ಸನಕ ಸನಂದನಾದಿ ಯೋಗಿಗಳು ಈ ತೀರ್ಥವನ್ನು ಕಾವಲು ಕಾಯುತ್ತಿರುವರೆಂದೂ, ಹುಲ್ಲು ಮರ ಮುಂತಾದವುಗಳಿಂದ ಅದನ್ನು ಮುಚ್ಚಿ ಪ್ರಾಮಾಣಿಕರಾದ ಸಾಧಕರಿಗೆೆ ಮಾತ್ರ ಅದರ ದರ್ಶನ, ಸ್ಪರ್ಶನ ಪ್ರಾಶನಾದಿಗಳನ್ನು ಅವರವರ ಯೋಗ್ಯತಾನುಸಾರವಾಗಿ ಮಾಡಿಸುತ್ತಾರೆಂದು ಹೇಳಲ್ಪಟ್ಟಿದೆ.
ಹೀಗಾಗಿ ಇಲ್ಲಿನ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕೂ ಇಲ್ಲಿನ ಕ್ಷೇತ್ರಾಧಿದೇವತೆಗಳ ಅನುಗ್ರಹವೆಂಬುದು ಬೇಕೇ ಬೇಕು. ಇಲ್ಲದಿದ್ದರೆ ಯಾವ ತೀರ್ಥಕ್ಕೂ ಹೋಗುವುದಕ್ಕಾಗುವುದಿಲ್ಲ. ವೇಂಕಟೇಶನದ್ದು ಪಾಪ ನಿವಾರಕ ಶಕ್ತಿ, ಕರ್ಮವಿಮೋಚನಾ ಶಕ್ತಿ. ಆದ್ದರಿಂದಲೇ ಈ ಕ್ಷೇತ್ರದಲ್ಲಿ ಪಾಪ ನಿವಾರಣೆ ಮಾಡುವ ಅನೇಕಾನೇಕ ತೀರ್ಥಗಳ ಪ್ರಾಬಲ್ಯ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ವೇಂಕಟೇಶನದ್ದು ತೀರ್ಥ ಸಾಮ್ರಾಜ್ಯ. ಆತನ ಶಕ್ತಿಯೆಲ್ಲವೂ ಈ ಕ್ಷೇತ್ರದಲ್ಲಿರುವ ಪರಮ ಪವಿತ್ರಗಳಾದ ತೀರ್ಥಗಳು. ಈ ತೀರ್ಥಗಳ ನಡುವೆ ತಾನೂ ನಿಂತು ಆ ತೀರ್ಥಗಳ ಪಾಪವನ್ನು ತಾನು ಹೋಗಲಾಡಿಸುತ್ತಾನೆ. ಗಂಗಾದಿ ಸಕಲ ತೀರ್ಥಗಳೂ, ಪಾಪಿಗಳು ತಮ್ಮಲ್ಲಿ ಬಿಟ್ಟು ಹೋದ ಪಾಪಗಳ ನಿವಾರಣೆಗಾಗಿ ಈ ವೇಂಕಟಾಚಲಕ್ಕೆ ಬರುತ್ತವೆ. ಭೂ ಲೋಕದಲ್ಲಿರುವ ತೀರ್ಥಗಳಷ್ಟೇ ಅಲ್ಲದೆ ಬ್ರಹ್ಮಾಂಡದಲ್ಲಿರುವ ಸಕಲ ತೀರ್ಥಗಳೂ ತಮ್ಮ ಪಾಪ ನಿವಾರಣೆಗಾಗಿ ಈ ಕ್ಷೇತ್ರಕ್ಕೆ ಅದೃಶ್ಯ ರೂಪದಲ್ಲೋ ಕಾಮ ರೂಪದಲ್ಲೋ, ಮನುಷ್ಯ, ಪಶು ಇತ್ಯಾದಿ ರೂಪಗಳಲ್ಲಿ ಬಂದು ಈ ಕ್ಷೇತ್ರವನ್ನು ಸೇವಿಸಿ ತಮ್ಮ ಕರ್ಮಗಳನ್ನು ವಿಮೋಚನೆ ಮಾಡಿಕೊಂಡು ಹೋಗುತ್ತದೆಯಂತೆ.
ಬೆಟ್ಟದ ಮೇಲಿರುವ ತೀರ್ಥಗಳು ಕೋಟ್ಯಾನುಕೋಟಿ, ಅದರಲ್ಲಿ ಎಷ್ಟೋ ಅದೃಶ್ಯವಾಗಿದ್ದು ಸಾಧಕನ ಯೋಗ್ಯತಾನುಸಾರವಾಗಿ ಅಲ್ಲಲ್ಲಿ ಪ್ರಕಟಗೊಂಡು ಗುಪ್ತವಾಗಿ ಬಿಡುತ್ತವೆ. ಪ್ರಕಟವಾಗಿ ಪ್ರತ್ಯಕ್ಷವಾಗಿ ಗೋಚರಿಸುವ ತೀರ್ಥಗಳಲ್ಲಿ ಪ್ರಮುಖವಾದದ್ದಿದೆ.
ಬೆಟ್ಟದ ಮೇಲಿರುವ ತೀರ್ಥಗಳು ಕೋಟ್ಯಾನುಕೋಟಿ, ಅದರಲ್ಲಿ ಎಷ್ಟೋ ಅದೃಶ್ಯವಾಗಿದ್ದು ಸಾಧಕನ ಯೋಗ್ಯತಾನುಸಾರವಾಗಿ ಅಲ್ಲಲ್ಲಿ ಪ್ರಕಟಗೊಂಡು ಗುಪ್ತವಾಗಿ ಬಿಡುತ್ತವೆ. ಪ್ರಕಟವಾಗಿ ಪ್ರತ್ಯಕ್ಷವಾಗಿ ಗೋಚರಿಸುವ ತೀರ್ಥಗಳಲ್ಲಿ ಪ್ರಮುಖವಾದದ್ದಿದೆ.
ಸ್ವಾಮಿತೀರ್ಥ, ಅಥವಾ ಸ್ವಾಮಿಪುಷ್ಕರಿಣಿ (ದೇವಾಲಯದ ಪಕ್ಕದಲ್ಲಿರುವ ಕೊಳ) ಪಾಪ ವಿನಾಶನ ತೀರ್ಥ, ಆಕಾಶ ಗಂಗಾ ತೀರ್ಥ, ಜಾಬಾಲಿ ತೀರ್ಥ, ರಾಮಕೃಷ್ಣ ತೀರ್ಥ, ದೇವಾಲಯದ ಹಿಂಭಾಗದ ಬೆಟ್ಟದಲ್ಲಿರುವ ಚಕ್ರ ತೀರ್ಥ, ಶಂಖ ತೀರ್ಥ, ತುಂಬುರು ತೀರ್ಥ, ಪಂಚ ಪಾಂಡವ ತೀರ್ಥ, ಕಪಿಲ ತೀರ್ಥ, ಇದರ ಆಸುಪಾಸಿನಲ್ಲೇ ಕಾಡಿನ ಮಧ್ಯದಲ್ಲಿರುವ ಪಂಚ ತೀರ್ಥ, ಘೋಣಾ ತೀರ್ಥ, ಕಾಯರಸಾಯನ ತೀರ್ಥ, ಅಸ್ಥಿ ತೀರ್ಥ, ಸನಕ ಸನಂದನ ತೀರ್ಥ, ಅಗಸ್ತ್ಯ ತೀರ್ಥ, ಗೋಗರ್ಭ ತೀರ್ಥ, ಕಟಾಹ ತೀರ್ಥ ಹೀಗೆ ಹೇಳುತ್ತಾ ಹೋದರೆ ಅನೇಕವು ಇವೆ. ಇವುಗಳಲ್ಲಿ ಕೆಲವು ಪ್ರಾಕೃತಿಕ ವೈಪರೀತ್ಯಗÀಳಿಂದ ದಿಕ್ಕು ಬದಲಿಸಿ ಗುಪ್ತವಾಗಿವೆ. ಕೆಲವು ಅರಣ್ಯ ಮಧ್ಯದಲ್ಲಿರುವುದರಿಂದ ಹೋಗಲು ಕಷ್ಟ. ಇನ್ನು ಕೆಲವು ದೇವತಾ ಶಕ್ತಿಗಳಿಂದ ಪರಿವೃತವಾಗಿರುವುದರಿಂದ ಕ್ರೂರಮೃಗಗಳಿಂದ ನಿಬಿಡವಾಗಿದ್ದು ಕೆಲವೇ ಕೆಲವು ಯೋಗ್ಯರಿಗೆ ಮಾತ್ರ ದರ್ಶನ ಕೊಡುತ್ತವೆ.
ಹೆಚ್ಚಿನ ಮಾಹಿತಿಗೆ 'ಶ್ರೀ ವೆಂಕಟೇಶ ರಹಸ್ಯ' ಕೃತಿಯನ್ನು ಪರಾಂಬರಿಸುವುದು.ನಿಮ್ಮ ವಿಳಾಸವನ್ನು ಹಾಗೂ ಮೊಬೈಲ್ ಸಂಖ್ಯೆಯನ್ನು 9986272266 ಈ ನಂಬರಿಗೆ ಕಳುಹಿಸಿದಲ್ಲಿ ನಿಮ್ಮ ಮನೆಗೆ ಅಂಚೆಯ ಮೂಲಕ ಪುಸ್ತಕವನ್ನು ಕಳುಹಿಸಲಾಗುವುದು. ಹಣ ಕೊಟ್ಟು ನೀವು ಪುಸ್ತಕವನ್ನು ಬಿಡಿಸಿಕೊಳ್ಳಬಹುದು. ಅಂಚೆಯ ಮೂಲಕ ಪುಸ್ತಕದ ಬೆಲೆ :411
ನಮ್ಮ ಕೇಂದ್ರಗಳಲ್ಲಿ ಈ ಪುಸ್ತಕವು 300 ರೂಪಾಯಿಗೆ ವಿನಾಯಿತಿ ದರದಲ್ಲಿ ದೊರೆಯುತ್ತದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ