*ಪ್ರದೋಷ ವ್ರತ*
ಪ್ರದೋಷ ವ್ರತ ಎನ್ನುವುದು ಶಿವನ ಹೆಸರಿನಲ್ಲಿ ಮಾಡುವ ವ್ರತ ಹಾಗು ಹಿಂದೂ ಪಂಚಾಂಗದ ಪ್ರಕಾರ ತಿಂಗಳಲ್ಲಿ ಎರಡು ಬಾರಿ ಸಂಭವಿಸುವ ವ್ರತ. ಈ ವ್ರತವನ್ನು ಕೃಷ್ಣ ಪಕ್ಷ ಹಾಗು ಶುಕ್ಲ ಪಕ್ಷದ (ಹದಿಮೂರನೆಯ ದಿನ) ಸಂಧ್ಯಾಕಾಲದಲ್ಲಿ ಸಂಭವಿಸುತ್ತದೆ. ಪ್ರದೋಷ ವ್ರತದ ದಿನ ಶಿವನನ್ನು ಪೂಜಿಸುವುದು ವಿಶೇಷ. ನಂಬಿಕೆಗಳ ಪ್ರಕಾರ ಪ್ರದೋಷದ ಸಮಯದಲ್ಲಿ ಶಿವ ಹಾಗು ಪಾರ್ವತಿ ಅತಿ ಪ್ರಸನ್ನರಾಗಿರುತ್ತಾರೆ.
*ಪ್ರದೋಷದ ಅರ್ಥ*
ಪ್ರದೋಷ ಎಂದರೆ ಮುಸ್ಸಂಜೆ ಸಮಯ ಹಾಗು 3 ಘಂಟೆಗಳ ಮಂಗಳಕರವಾದ ಸಮಯ. ಈ ಮೂರು ಘಂಟೆಗಳ ಕಾಲವನ್ನು ಸೂರ್ಯದಯದ ಮುನ್ನ 1.5 ಘಂಟೆ ಹಾಗು ಸೂರ್ಯೋದಯದ ನಂತರದ 1.5 ಘಂಟೆ ಕಾಲ ಎಂದು ವಿಂಗಡಿಸಲಾಗಿದೆ. ಪ್ರದೋಷ ವ್ರತದಲ್ಲಿ ಭಕ್ತರು ದಿನವಿಡೀ ಉಪವಾಸವನ್ನು ಮಾಡುತ್ತಾರೆ.
*ವಿವಿಧ ಬಗೆಯ ಪ್ರದೋಷ ವ್ರತಗಳು*
ಪ್ರದೋಷ ವ್ರತಗಳಿಗೆ ದಿನದ ಮೇರೆಗೆ ಹೆಸರುಗಳಿರುತ್ತವೆ. ಈ ರೀತಿಯ ವಿವಿಧ ಬಗೆಯ ಪ್ರದೋಷಗಳೆಂದರೆ: ಸೋಮ ಪ್ರದೋಷ, ಭೌಮ ಪ್ರದೋಷ, ಸೌಮ್ಯ ವಾರ ಪ್ರದೋಷ, ಗುರುವಾರ ಪ್ರದೋಷ, ಭೃಗು ವಾರ ಪ್ರದೋಷ, ಶನಿ ಪ್ರದೋಷ ಹಾಗು ಭಾನುವಾರ ಪ್ರದೋಷ.
*ಪ್ರದೋಷ ಹಿಂದಿನ ಕಥೆ*
ಸಮುದ್ರ ಮಂಥನ ಸಮಯದಲ್ಲಿ, ಸಮುದ್ರ ಕಡೆದಾಗ ಬಂದಾಗ ಹಾಲಾಹಲ (ವಿಷವನ್ನು), ಶಿವನು ಸೇವಿಸುತ್ತಾನೆ. ದಣಿವಾಗಿ, ಇರಿಸುಮುರುಸಿನಿಂದ ಶಿವನು ವಿಶ್ರಮಿಸಲು ಮಲಗುತ್ತಾನೆ. ದೇವಾನು ದೇವತೆಗಳು ಶಿವನ ಬಗ್ಗೆ ಕಳವಳ ಪಟ್ಟು, ಅವನ ದರ್ಶನಕ್ಕೆಂದು ಸೇರುತ್ತಾರೆ. ಶಿವನು ಸಂಜೆ ವೇಳೆಗೆ ಗುಣಮುಖನಾಗಿ, ’ಆನಂದ ತಾಂಡವ’ ನೃತ್ಯವನ್ನು ಮಾಡುತ್ತಾನೆ. ಈ ಸುಂದರವಾದ ನೃತ್ಯವನ್ನು ನೋಡಿ ನಂದಿ ಸಂತೋಷಗೊಂಡು, ದೊಡ್ಡದಾಗಿ ಬೆಳೆದು, ವೀಕ್ಷಣೆಗೆ ಅಡ್ಡಿಯಾಗುತ್ತಾನೆ. ಅಲ್ಲಿ ಸೇರಿದ್ದ ದೇವಾನು ದೇವತೆಗಳು, ನಂದಿಯ ಕೊಂಬುಗಳ ಸಂದಿಯಲ್ಲಿ ನೃತ್ಯವನ್ನು ವೀಕ್ಷಿಸುವ ಹಾಗಾಗುತ್ತದೆ. ಇವತ್ತಿಗೂ ಹಿರಿಯರು, ಶಿವನ ದರುಶನವನ್ನು ನಂದಿಯ ಕೊಂಬುಗಳ ಮಧ್ಯದಿಂದ ವೀಕ್ಷಿಸುವ ಹಾಗೆ ಸಲಹೆ ನೀಡುತ್ತಾರೆ. ಅಂದು, ಶಿವನು ನೃತ್ಯವನ್ನು ಮಾಡಿದ ಸಮಯವನ್ನು ಪ್ರದೋಷ ಕಾಲ ಎನ್ನುತ್ತಾರೆ.
---------------------------------------------------------------
---------------------------------------------------------------
ಭೂತರಾಜರು ಯಾರು ? ಆವರ ಪರಿಚಯ ಏನು ?
ದಕ್ಷಿಣ ಕನ್ನಡ ಜಿಲ್ಲೆಯ ನಾರಳ ಗ್ರಾಮದಲ್ಲಿ ಜನಿಸಿದ ನಾರಾಯಣಾಚಾರ್ಯ ಎಂಬುವರು ಶ್ರೀವಾದಿರಾಜರ ಜೊತೆಗೆ ಆವರ ಮಠದಲ್ಲಿ ಇದ್ದರು. ಒಮ್ಮೆ ಪ್ರಸಂಗವಶಾತ್ ಆಚಾರದ ವಿಷಯದಲ್ಲಿ ಗುರುಗಳನ್ನು ಹಿಂಬಾಲಿಸಿ ಪರೀಕ್ಷಿಸಲು ಹೋರಟ ನಾರಾಯನಾಚಾರ್ಯರ ಜಿಜ್ಞಾಸೆ , ಗುರುಗಳಾದ ಶ್ರೀ ವಾದಿರಾಜರಿಗೆ ಗೊತ್ತಾಯಿತು. ಆ ಪ್ರಸಂಗ ಯಾವುದು ಅಂದರೆ. ಒಮ್ಮೆ ಸಾಧನ ದ್ವಾದಸಿ ದಿವಸ ವ್ಯಾಸರಾಜರು ಮತ್ತು ಇತರರು ವಾದಿರಾಜರಿಗಾಗಿ ಕಾದಿದ್ದರೆ. ಅಂದು ರಾಜರು ಧ್ಯಾನಾಸಕ್ತರಾಗಿ ಇರುವದರಿಂದ ಸ್ವಲ್ಪ ತಡವಾಯಿತು. ಅವರು ಮರುಕ್ಷಣದಲ್ಲಿ ಸ್ನಾನಮಾಡಿ ಪೂಜೆಯನ್ನು ಮಾಡಲು ಕಾಲಾವಕಾಶ ಇಲ್ಲಿದ್ದರಿಂದ ಪಾರಣಿ ಮುಗಿಸಿದರು. ಆದಮೇಲೆ, ಅವರು ಕಾಡಿನಲ್ಲಿ ದೂರ ಯಾರು ಇಲ್ಲದ ಪ್ರದೇಶದಲ್ಲಿ ಹೋಗಿ ತಮ್ಮ ಯೋಗಶಕ್ತಿಯಿನ್ದ ಎಲ್ಲ ಆಹಾರವನ್ನು ಹೊರಗೆ ತೆಗೆದು, ಬಾಲೆದೆಲೆಯ ಮೇಲೆ ಇಟ್ಟರು. ಆದಮೇಲೆ ಸ್ನಾನ ದೇವರಪೂಜೆ ನದಿಯಲ್ಲಿ ಆಚರಿಸಿದರು. ಇದನ್ನು ದೂರದಿಂದ ನಾರಾಯಣಾಚಾರ್ಯರು ಗಿಡದ ಹಿಂದಿನಿಂದ ನೋಡುತ್ತಿದ್ದರು. ಪರೀಕ್ಷಾರ್ಥವಾಗಿ ಬಂದ ನಾರಾಯಣಾಚರ್ಯರಿಗೆ ಬ್ರಹ್ಮರಾಕ್ಷಸ ಆಗಬೇಕೆಂದು ಶಾಪಪ್ರದಾನ ಮಾಡಿದರು. ತಮ್ಮ ಅಕೃತ್ಯಕ್ಕಾಗಿ ಪರಿತಪಿಸಿ ಪ್ರಾರ್ಥಿಸಿದಾಗ ಯಾರು "ಆ ಕಾ ಮ ವೈ ಕೋ ನ ಸ್ನಾಥಹ" ಎನ್ನುವ ಪ್ರಶ್ನಕ್ಕೆ ಉತ್ತರ ಹೇಳುತ್ತಾರೋ ಅವರೇ ಶಾಪವಿಮೋಚನ ಮಾಡುತ್ತಾರೆಂದು ಹೇಳಿದರು.
ಕೆಲ ಸಮಯ ಬ್ರಹ್ಮರಾಕ್ಷಸ ಜನ್ಮದಲ್ಲಿದ್ದ ನಾರಾಯಣಾಚಾರ್ಯರಿಗೆ, ಒಂದು ದಿನ ತಾನು ಇದ್ದ ಅರಣ್ಯದಲ್ಲಿಯೇ ರಾಜರು ಹಾದಿ ಹೋಗುತ್ತಿದ್ದರು. ಆಗ ಅವರನ್ನು ತಡೆದು ಯಥಾ ಪ್ರಕಾರ ಆ ಪ್ರಶ್ನೆಯನ್ನು ಕೇಳಿತು. ರಾಜರಿಗೆ ಈ ರಾಕ್ಷಸ ವಿಷಯ ಸ್ಮರಣೆಗೆ ಬಂತು. ಆಗ ರಾಜರು ಮುಗುಳ್ನಗೆಯಿಂದ 'ಯಾರು ಆಷಾಡ ಕಾರ್ತೀಕ ಮಾಘ ಮತ್ತು ವೈಶಾಖ ಮಾಸಗಳಲ್ಲಿ ಉದಯಕಾಲದಲ್ಲಿ ಸ್ನಾನ ಮಾಡುತ್ತಾನೆಯೋ ಅವನಿಗೆ ಬ್ರಹ್ಮರಾಕ್ಷಸ ಜನ್ಮ ಬರುವುದಿಲ್ಲ' ಎಂದು ಹೇಳಿದ ತಕ್ಷಣ ಗುರುಗಳಿಂದಲೇ ಶಾಪವಿಮೋಚನ ಆಯಿತು. ಅವರು ಶಾಪ ವಿಮೋಚನ ಆದೊಡನೆ ದಿವ್ಯ ರೂಪ ಧರಿಸಿ ಮುಂದೆ ನಿಂತರು. ಆವರ ಸ್ವರೂಪದ ಬಗ್ಗೆ ಶ್ರೀ ವಾದಿರಾಜರಿಗೆ ಪೂರ್ಣ ಅರಿವಿತ್ತು. ಶ್ರೀವಾದಿರಾಜರು ದಿವ್ಯರೂಪದಲ್ಲಿದ್ದ ನಾರಾಯಣಾಚರ್ಯರಿಗೆ ಹೀಗೆ ನುಡಿದರು. ಮುಂದಿನ ಕಲ್ಪದಲ್ಲಿ ರುದ್ರದೇವರ ಪದವಿಗೆ ಹೋಗುವವರೆಗೂ ಭೂತರಾಜ ಎಂಬ ಹೆಸರಿನಿಂದ ಗುರುಗಳ ಸೇವೆಯನ್ನು ಅದೃಶ್ಯರಾಗಿ ಮಾಡಬೇಕೆಂದು ಆಜ್ಞ ಮಾಡಿದರು. ಮುಂದೆ ಶ್ರೀರಾಜರು ಬೃಂದಾವನ ಪ್ರವೇಶ ಮಾಡುವವರೆಗೂ ಅದೃಶ್ಯರಾಗಿ ಸೇವೆ ಮಾಡಿದರು. ತದನಂತರ ಕ್ಷೇತ್ರ ಪಾಲಕರಾಗಿ ಶ್ರೀಸೋದಾಕ್ಷೆತ್ರದಲ್ಲಿ ಇದ್ದು, ಇಂದಿಗೂ ಅದೃಶ್ಯರಾಗಿ ಗುರುಗಳ ನಿರಂತರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಂದ ಭಕ್ತರ ಭೂತಪ್ರೇತಗಳ ಭಾಧೆಯನ್ನು ನಿವಾರಿಸುತ್ತ ವಿರಾಜಮಾನರಾಗಿದ್ದಾರೆ.
ಭೂತಪ್ರೇತಗಳು ತಾವಾಗಿಯೇ ವಿದಾಯ ಹೇಳುವ ಕ್ಷೇತ್ರ ಶ್ರೀಸೋದಕ್ಷೇತ್ರ.
ತೀರ್ಥಪ್ರಬಂಧ ಸಂಗ್ರಹ :
ಸೋದೆಯಲ್ಲಿ ಇರುವ ತ್ರಿವಿಕ್ರಮ ದೇವರು ತಂತ್ರ ಸಾರೋಕ್ತ ಲಕ್ಷಣಉಳ್ಳ ಸುಂದರ ವಿಗ್ರಹ. ಇದು ಗಂಗಾತೀರದ ಕಾಶಿ ಇಂದ ಬಂದ ವಿಗ್ರಹ ಎಂದು ಶಿಲಾ ಶಾಶನ ಇದೆ ಮತ್ತು ರಥಾ ರೂಢವಾಗಿರುವುದು ಮತ್ತೊಂದು ವೈಶಿಷ್ಟ. ಇದನ್ನು ವಾದಿರಾಜರು ತಮ್ಮ ಶಿಷ್ಯರಾದ ಭೂತರಾಜರಿಂದ ತರಿಸಿದರೆಂದು ಇತಿಹ್ಯಇದೆ.
ರಥಾ ಸಮೇತರಾಗಿ ವಿಗ್ರಹವನ್ನು ಭೂತರಾಜರು ತರುವ ಕಾಲದಲ್ಲಿ ಒಬ್ಬ ದೈತ್ಯಬಂದು ಅಡ್ಡಿಮಾಡಿದನೆಂದು , ಪ್ರತಿಷ್ಠಾಪನೆಯ ಮುಹೂರ್ತವು ಅತಿಕ್ರಮೆಸಿತೆಂಬ ಯೋಚನಇಂದ ಭೂತರಾಜರು ಅ ರಥದ ಒಂದು ಗಾಲಿಯಿಂದ ಆ ದೈತ್ಯನನ್ನು ಸಂಹರಿಸಿದರೆಂದು , ಆದಕಾರಣ ಈ ರಥಕ್ಕೆ ಮೂರು ಚಕ್ರಗಳು ಇರುವು ದೇoದು ಹೇಳುತ್ತಾರೆ.
ಗುರ್ವನ್ತರ್ಗತ ಕೃಷ್ಣಾರ್ಪಣಮಸ್ತು
------------------------------------------------------------------------
------------------------------------------------------------------------
ಪ್ರತಿದಿನ ಒಂದು ಉಪದೇಶ :
ಇಂದು ನಾವು ನಮ್ಮನ್ನು ನಾಲ್ಕು ಮದಗಳಿಂದ ಹೊದ್ದುಕೊಂಡು ಬದುಕುತ್ತಿದ್ದೇವೆ. ಅವುಗಳೆಂದರೆ-
೧. ಕುಲದ ಮದ,
೨. ಐಶ್ವರ್ಯ(ಅಧಿಕಾರ)ದ ಮದ,
೩. ವಿದ್ಯೆಯ ಮದ,
೪. ಧನದ ಮದ.
ನಮ್ಮ ಮನೆತನ, ಪರಂಪರೆ, ಅದರ ಬಗ್ಗೆ ಹೆಗ್ಗಳಿಕೆ, ಇವು ಅಹಂಕಾರವಾಗಿ ಬೆಳೆದಾಗ ಅದು ನಮ್ಮನ್ನು ದೇವರಿಂದ ದೂರ ಮಾಡಿಸುತ್ತದೆ.
ಅಧಿಕಾರದ ಮದ, ನನ್ನಂತಹ ವಿದ್ವಾಂಸ ಯಾರಿದ್ದಾರೆ ಎನ್ನುವ ವಿದ್ಯೆಯ ಮದ, ಸಂಪತ್ತಿನ ಮದ-ಇವು ಅಹಂಕಾರವಾಗಿ ಯಾರನ್ನು ಕಾಡುತ್ತದೋ “ಅಂತವನ ಬಾಯಿಯಲ್ಲಿ ಭಗವಂತನ ಹೆಸರೇ ಬಾರದು” . ಈ ಮದದ ಹೊದಿಕೆಯನ್ನು ಕಳಚಿ ಹೊರಬಂದಾಗ ಮಾತ್ರ ಭಗವಂತನ ದರ್ಶನ ಸಾಧ್ಯ.
ಅಹಂಕಾರಶೂನ್ಯನಾಗಿ ಪೂರ್ಣ ಶರಣಾಗತಿಯಾಗುವುದೊಂದೇ ಭಗವಂತನ ಅನುಗ್ರಹಕ್ಕೆ ದಾರಿ. ನಮ್ಮ ಯಾವ ಮದವೂ ನಮ್ಮನ್ನು ಭಗವಂತನತ್ತ ಒಯ್ಯುವುದಿಲ್ಲ. ಹಾಗಾಗಿ ಮೊತ್ತಮೊದಲು ನಾವು ಈ ಮದದಿಂದ ಕಳಚಿಕೊಳ್ಳಬೇಕು.
ಭಗವಂತ ಅ-ಕಿಂಚನ-ಗೋಚರ. ಅಂದರೆ ಕಷ್ಟದಲ್ಲಿರುವವರಿಗೆ ಗೋಚರನಾಗುವವ ಎಂದರ್ಥ. ಇದರರ್ಥ ಶ್ರೀಮಂತರಿಗೆ ಭಗವಂತ ಗೋಚರನಾಗುವುದಿಲ್ಲ ಎಂದರ್ಥವಲ್ಲ. ಶ್ರೀಮಂತಿಕೆ ಇದ್ದು ಶರಣಾಗಿತಿ ಇದ್ದಾಗ ಕೂಡಾ ಭಗವಂತ ಗೋಚರನಾಗುತ್ತಾನೆ.
ನಮಗೆ ಅ-ಕಾರವಾಚ್ಯ ಭಗವಂತನೇ ಸರ್ವಸ್ವವಾದಾಗ ಆತನ ದರ್ಶನ ಸಾಧ್ಯವಾಗುತ್ತದೆ.
ಕಠೋಪನಿಷತ್ತಿನಲ್ಲಿ ಹೇಳುವಂತೆ: “ನ ಸಾಂಪರಾಯಃ ಪ್ರತಿಭಾತಿ ಬಾಲಂ ಪ್ರಮಾದ್ಯಂತಂ ವಿತ್ತಮೋಹೇನ ಮೂಢಮ್ . : ವಿತ್ತದ ಮೋಹದಿಂದ
ಶ್ರೀಕೃಷ್ಣನ ದ್ವಾರಕಾ ನಗರ ನಿಜವಾಗಿಯೂ ಇದೆಯಂತೆ…ಇಲ್ಲಿದೆ ನೋಡಿ ಸಾಕ್ಷಿ!!
ದ್ವಾಪರ ಯುಗದಲ್ಲಿ ಶ್ರೀಕೃಷ್ಣನು ದ್ವಾರಕಾ ನಗರವನ್ನು ಪರಿಪಾಲಿಸುತ್ತಿದ್ದ ಎಂಬುದು ಎಲ್ಲರಿಗೂ ಗೊತ್ತೇ ಇರುತ್ತದೆ. ಆದರೆ ಕಾಲಗರ್ಭದಲ್ಲಿ ಅದು ಸಮುದ್ರದಲ್ಲಿ ಮುಳುಗಿಹೋಯಿತು. ಸದ್ಯಕ್ಕೆ ಈ ಪ್ರದೇಶ ಗುಜರಾತ್ನ ಜಾಮ್ ನಗರದ ಅರೇಬಿಯಾ ಮಹಾಸಮುದ್ರದಲ್ಲಿ ಇರುವುದಾಗಿ ಪುರಾತತ್ವ ಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ಗೊತ್ತಾಗಿದ್ದೇನೆಂದರೆ… ಶ್ರೀಕೃಷ್ಣನ ದ್ವಾರಕಾನಗರ ನಿಜವಾಗಿಯೂ ಇದೆಯಂತೆ. ಕೆಲವು ಸಾವಿರ ವರ್ಷಗಳ ಹಿಂದೆ ದ್ವಾರಕಾ ನಗರ ಇತ್ತು. ಆದರೆ ಶ್ರೀಕೃಷ್ಣನ ಬಳಿಕ ಅದು ಕೆಲವು ವರ್ಷಗಳಿಗೆ ಮುಳುಗಿತೆಂದು, ಆಗಿನ ಶಿಲೆಗಳು, ನಿರ್ಮಾಣಗಳು ಕೆಲವು ಈಗಲೂ ಸಮುದ್ರಗರ್ಭದಲ್ಲಿ ಇವೆ ಎಂದು ಪುರಾತತ್ವ ತಜ್ಞರು ಹೇಳುತ್ತಿದ್ದಾರೆ.
ಜಾಮ್ ನಗರದ ಬಳಿ ಇರುವ ಅರೇಬಿಯಾ ಸಮುದ್ರದಲ್ಲಿ ಸುಮಾರು 150 ಅಡಿ ಒಳಗೆ ಶ್ರೀಕೃಷ್ಣನ ದ್ವಾರಕಾ ನಗರ ಪತ್ತೆಯಾಗಿದೆ. ಅದರಲ್ಲಿ ಬಹಳಷ್ಟು ಹಳೆಕಾಲದ ನಿರ್ಮಾಣಗಳು, ಶಿಲೆಗಳು ಸಹ ಹೊರಬಿದ್ದಿವೆ. ಅವುಗಳನ್ನು ಸಂಶೋಧಿಸಿದಾಗ ಅವು ಸುಮರು 9 ಸಾವಿರ ವರ್ಷಗಳ ಹಿಂದಿನದು ಎಂದು ಗೊತ್ತಾಗಿದೆ. ಇದರಿಂದ ಅದು ನಿಜವಾಗಿ ದ್ವಾರಕಾ ನಗರ ಎಂದು ಪುರಾತತ್ವ ಶಾಸ್ತ್ರಜ್ಞರು ಹೇಳುತ್ತಿದ್ದಾರೆ.
ಮೇಲೆ ನೀವು ನೋಡಿದ ಚಿತ್ರದಲ್ಲಿರುವುದು ಶ್ರೀಕೃಷ್ಣನ ದ್ವಾರಕಾ ನಗರದಲ್ಲಿನ ಒಂದು ಮಂಟಪ.
ಮಂಟಪದ ಒಳಗೆ ಹೋಗುವ ದಾರಿ.
ಆಗಿನ ಕಾಲದಲ್ಲಿದ್ದ ಹಡಗುಗಳಿಗೆ ಕಲ್ಲಿನ ಲಂಗರು (ಆಂಕರ್) ಬಳಸುತ್ತಿದ್ದರು. ಅದಕ್ಕೆ ಎರಡು ಕಡೆಗಳಲ್ಲಿ ರಂಧ್ರಗಳು, ಇನ್ನೊಂದು ಕಡೆ ಒಂದು ರಂಧ್ರವನ್ನು ಗಮನಿಸಬಹುದು.
ದ್ವಾರಕಾ ನಗರದಲ್ಲಿನ ಶಿಲೆಗಳು.
ಮಂಟಪವನ್ನು ಹೋಲುವ ನಿರ್ಮಾಣ.
ಸುರಂಗ ಮಾರ್ಗ.
ಹಲವು ನಿರ್ಮಾಣಗಳು.
ಸಮುದ್ರದಲ್ಲಿ ಸಿಕ್ಕಿದ ಆಯಾ ನಿರ್ಮಾಣಗಳ ಆಧಾರದ ಮೇಲೆ ಕೆಲವರು ದ್ವಾರಕಾ ನಗರದ ಊಹಾ ಚಿತ್ರಗಳನ್ನು ವಿನ್ಯಾಸ ಮಾಡಿದರು. ಮೇಲೆ ನೀವು ನೋಡುತ್ತಿರುವುದು ಅದನ್ನೇ.
------------------------------------------------------------------------
------------------------------------------------------------------------
ಅರಶಿನವನ್ನು ಹೀಗೆ ಉಪಯೋಗಿಸಿ…ಪೈಲ್ಸ್, ದೂರವಾಗುತ್ತೆ!!
ಪ್ರಕೃತಿ ನಮಗೆ ಕರುಣಿಸಿದ ದಿವ್ಯೌಷದ ಅರಶಿನ. ಅಂದ ಆರೋಗ್ಯ ಎರಡನ್ನೂ ನೀಡುವಲ್ಲಿ ಅರಶಿನ ಮುಖ್ಯ ಪಾತ್ರವಹಿಸುತ್ತದೆ. ಸಾವಿರಾರು ವರ್ಷಗಳಿಂದ ಅರಶಿನವನ್ನು ಔಷದಿಯಾಗಿ, ಸೌಂದರ್ಯ ವರ್ಧಕವಾಗಿ ಹಾಗೂ ಅಡುಗೆಯಲ್ಲಿ ಉಪಯೋಗಿಸುತ್ತಿದ್ದೇವೆ. ಅರಶಿನದಲ್ಲಿ ಆಂಟಿ ಇನ್ ಫ್ಲಮೇಟರಿ, ಆಂಟೀ ಬ್ಯಾಕ್ಟೀರಿಯಲ್, ಆಂಟಿ ಆಕ್ಸಿಡೆಂಟ್ ಗುಣಗಳು ಹೇರಳವಾಗಿವೆ. ಅಡುಗೆ ಮನೆಯಲ್ಲೇ ಸುಲಭವಾಗಿ ಸಿಗುವ ಅರಶಿನವನ್ನು ಕಡೆಗೆಣಿಸ ನಾವಿಂದು ವಿವಿಧ ಔಷದಿಗಳ ಮೊರೆಹೋಗುತ್ತಿದ್ದೇವೆ. ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಗಾದೆಯಂತೆ ನಾವು ಅರಶಿನದ ಉಪಯೋಗಗಳನ್ನು ಕಡೆಗಾಣಿಸಿದರೂ ವಿದೇಶೀಯರು ಇದರ ಗುಣಗಳನ್ನು ಗುರುತಿಸಿ ಪೇಟೆಂಟ್ ಮಾಡಿದ್ದಾರೆ. ಇದರರ್ಥ ಮುಂಬರುವ ದಿನಗಳಲ್ಲಿ ನಮ್ಮ ಪೂರ್ವೀಕರು ಹೇಳಿರುವ ರೀತಿಯಲ್ಲಿ ಅರಶಿನವನ್ನು ಉಪಯೋಗಿಸಬೇಕಾದರೆ, ನಾವು ತೆರಿಗೆ ಕಟ್ಟಬೇಕು. ಬದಲಾದ ಜೀವನ ಶೈಲಿ ಹಾಗು ಆಹಾರ ಶೈಲಿಯಿಂದಾಗಿ ಹಲವಾರು ಜನರು ಮೂಲವ್ಯಾದಿ ಸಮಸ್ಯೆಯಿಂದ ನರಳುತ್ತಿದ್ದಾರೆ. ಅರಶಿನವನ್ನು ಯಾವರೀತಿ ಉಪಯೋಗಿಸಿದರೆ ಈ ಸಮಸ್ಯೆಯನ್ನು ನಿವಾರಿಸಬಹುದೆಂದುದನ್ನು ನೋಡೋಣ.
ಬೇಕಾಗುವ ಪದಾರ್ಥಗಳು :
ಅರಶಿನ, ಸಾಸಿವೆ ಎಣ್ಣೆ, ಈರುಳ್ಳಿ.
ಮೊದಲಿಗೆ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಅರಶಿನ ಹಾಗೂ ಸಾಸಿವೆ ಎಣ್ಣೆ ಹಾಕಿ ಕಲೆಸಬೇಕು. ಈ ಪೇಸ್ಟನ್ನು ಪೈಲ್ಸ್ ಇರುವ ಜಾಗದಲ್ಲಿ ಹಚ್ಚಬೇಕು. ಹೀಗೆ ಮಾಡುವುದರಿಂದ ನೋವಿನಿಂದ ಉಪಶಮನ ದೊರೆಯುತ್ತದೆ. ಅದೇ ರೀತಿ ಫೈಲ್ಸ್ ಸಹ ಕಡಿಮೆಯಾಗುತ್ತವೆ.
ಅರಶಿನದ ಮತ್ತಷ್ಟು ಉಪಯೋಗಗಳು:
* ಮದ್ಯಪಾನ ಸೇವಿಸುವ ಅಭ್ಯಾಸವಿರುವವರು, ಬೆಳಿಗ್ಗೆ ಒಂದು ಲೋಟ ಮಜ್ಜಿಗೆಯಲ್ಲಿ ಸ್ವಲ್ಪ ಅರಶಿನ ಹಾಕಿ ಕುಡಿಯುವುದರಿಂದ ‘ಯಕೃತ್ತ್’ (ಲಿವರ್) ಹಾಳಾಗದಂತೆ ರಕ್ಷಿಸುತ್ತದೆ.
* ಕ್ಯಾನ್ಸರ್ ರೋಗವನ್ನು ಗುಣಪಡಿಸುವ ಶಕ್ತಿ ಅರಶಿನ ದಲ್ಲಿದೆ.
* ಹರಳೆಣ್ಣೆಗೆ ಸ್ವಲ್ಪ ಅರಶಿನ ಹಾಕಿ, ಈ ಮಿಶ್ರಣವನ್ನು ಶರೀರಕ್ಕೆ ಹಚ್ಚಿ ಅರ್ಧ ಗಂಟೆಯನಂತರ ಸ್ನಾನ ಮಾಡುವುದರಿಂದ ತುರಿಕೆ, ಚರ್ಮ ರೋಗಗಳು, ಮಚ್ಚೆಗಳು ಗುಣವಾಗುತ್ತವೆ.
* ರಾತ್ರಿ ಒಂದು ಲೋಟ ‘ರೋಸ್ ವಾಟರ್’ ಗೆ ಒಂದು ಚಮಚ ಅರಶಿನ ಬೆರೆಸಿ ಇಡಬೇಕು. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕರಗುತ್ತದೆ.
------------------------------------------------------------------------
------------------------------------------------------------------------
ಒಂದು ಊರಿನಲ್ಲಿ ಒಂದು ನದಿ. ಆ ನದಿಯ ದಡದಲ್ಲಿ ಎರಡು ಮರಗಳಿರುತ್ತವೆ.
ಅದೇ ದಾರಿಯಲ್ಲಿ ಹೋಗುತ್ತಿದ್ದ ಒಂದು ಗುಬ್ಬಿ, ತನಗೂ ತನ್ನ ಮರಿಗಳಿಗೂ ಒಂದು ಗೂಡು ಕಟ್ಟಿಕೊಳ್ಳ ಬೇಕೆಂದುಕೊಳ್ಳುತ್ತದೆ.
ಮೊದಲನೇ ಮರದ ಬಳಿ ಹೋಗಿ ” ಮಳೆಗಾಲ ಬರುತ್ತಿದೆ, ನಾನು ನನ್ನ ಮರಿಗಳು ವಾಸಿಸಲು ನಿನ್ನ ಕೊಂಬೆಯ ಮೇಲೆ ಒಂದು ಗೂಡು ಕಟ್ಟಿಕೊಳ್ಳಲೇ?’ ಎಂದು ಕೇಳುತ್ತದೆ.
” ಬೇಡ” ಎನ್ನಿತು ಮೊದಲ ಮರ.
ಆ ಚಿಕ್ಕ ಗುಬ್ಬಿಗೆ ಬೇಸರವಾಯಿತು.ನಿರಾಶೆಯಿಂದ ಎರಡನೇ ಮರದ ಬಳಿ ಹೋಗಿ ಸಹಾಯ ಮಾಡೆಂದು ಕೇಳಿಕೊಳ್ಳುತ್ತದೆ.
” ಸರಿ” ಎನ್ನುತ್ತದೆ ಎರಡನೇ ಮರ.
ಗುಬ್ಬಿ ಮಹದಾನಂದದಿಂದ ಕುಣಿದು ಕುಪ್ಪಳಿಸುತ್ತಾ…ಗೂಡು ಕಟ್ಟಲು ಪ್ರಾರಂಭಿಸಿತು. ಮಳೆಗಾಲ ಪ್ರಾರಂಭವಾಗುವುದಕ್ಕೆ ಮುನ್ನವೇ ಎರಡನೇ ಮರದ ಮೇಲೆ ಗೂಡು ಕಟ್ಟಿತು.
ಗುಬ್ಬಿ ತನ್ನ ಮರಿಗಳೊಂದಿಗೆ ಆನಂದದಿಂದ ಕಾಲ ಕಳೆಯತೊಡಗಿತು. ಅಷ್ಟರಲ್ಲೇ ಮಳೆಗಾಲ ಪ್ರಾರಂಭವಾಯಿತು.
ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಪ್ರವಾಹ ಪ್ರಾರಂಭವಾಯಿತು. ಆ ಪ್ರವಾಹದಲ್ಲಿ… ಮೊದಲ ಮರ ಬೇರು ಸಮೇತ ಕೊಚ್ಚಿಕೊಂಡು ಹೋಯಿತು. ಎರಡನೇ ಮರದ ಮೇಲೆ ಕುಳಿತಿದ್ದ ಗುಬ್ಬಿ ಆದೃಶ್ಯವನ್ನು ನೋಡಿ…
” ದೇವರು ನಿನಗೆ ಶಿಕ್ಷೆ ನೀಡಿದ್ದಾನೆ, ನನಗೆ ಸಹಾಯ ಮಾಡಲು ನಿರಾಕರಿಸಿದೆ ಯಲ್ಲವೇ?” ಎಂದು ನಗುತ್ತಾ ಹೇಳಿತು.
ನಾನು ಬಲಹೀನಳೆಂದು ನನಗೆ ಗೊತ್ತು. ಪ್ರವಾಹ ಬಂದರೆ, ಕೊಚ್ಚಿಕೊಂಡು ಹೋಗುತ್ತೇನೆಂದೂ ಸಹ ಗೊತ್ತು. ನನ್ನೊಂದಿಗೆ ನಿನ್ನ ಗೂಡು ಕೊಚ್ಚಿಕೊಂಡು ಹೋಗಬಾರದೆಂದು ಗೂಡು ಕಟ್ಟಲು ನಿನಗೆ ಅನುಮತಿ ನೀಡಲಿಲ್ಲ. ನನ್ನನ್ನು ಕ್ಷಮಿಸು. ನೀನು ನಿನ್ನ ಮರಿಗಳೊಂದಿಗೆ ಹಲವು ವರ್ಷ ಸುಖವಾಗಿ ಬಾಳು” ಎಂದು ಮೊದಲನೇ ಮರ ಹೇಳಿತು.
ಈ ಮಾತುಗಳನ್ನು ಕೇಳಿದ ಪುಟ್ಟ ಗುಬ್ಬಿಗೆ ಅತೀವ ವೇದನೆಯಾಯಿತು.
ನೀತಿ : * ಯಾರಾದರೂ ನಮಗೆ ಸಹಾಯ ಮಾಡಲು ನಿರಾಕರಿಸಿದರೆ ತಪ್ಪಾಗಿ ಭಾವಿಸಬಾರದು. ಅವರ ಪರಿಸ್ಥಿತಿಯ ಬಗ್ಗೆ ಅವರಿಗೆ ಮಾತ್ರ ಅರಿವಿರುತ್ತದೆ *
*ತಾಳ್ಮೆಯೊಂದೇ ಸಂಬಂಧಗಳನ್ನು ಹೆಚ್ಚು ಸಮಯ ಮುಂದುವರೆಯುವಂತೆ ಮಾಡುತ್ತದೆ.
------------------------------------------------------------------------
------------------------------------------------------------------------
ಪಂಚ ಎಂದರೆ ಐದು , ಇದರ ವಿಶೇಷತೆಗಳು..
ಪಂಚ ಜ್ಞಾನ ಇಂದ್ರಿಯ : ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ,
ಪಂಚ ಇಂದ್ರಿಯಗಳು : ವಾಕ್, ಕೈಗಳು, ಪಾದ, ಗುದಸ್ಥಾನ, ಮೂತ್ರಸ್ಥಾನ..
ಪಂಚವಾಯು : ಪ್ರಾಣ, ಅಪಾನ, ವ್ಯಾನ, ಸಮಾನ, ಉದಾನ..
ಪಂಚ ಭಕ್ಷ್ಯಗಳು : ಲಾಡು, ಚಿರೋಟಿ, ಮಂಡಿಗೆ, ಪೇಣಿ, ಗೂಳೂರಿಗೆ(ಪಾಯಸ)
ಪಂಚ ಪಾಂಡವರು : ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ..
ಉಪಪಾಂಡವರು : ಪ್ರತಿವಿಂದ್ಯ, ಶೃತಸೋಮ, ಶೃತಕರ್ಮ, ಶಾತಾನಿಕ, ಶೃತಸೇನಾ..
ಪಂಚಕನ್ಯೆಯರು : ಅಹಲ್ಯಾ, ದ್ರೌಪದೀ, ತಾರಾ, ಸೀತಾ , ಮಂಡೋದರಿ..
ಪಂಚಲವಣಿ: ಸೈಂದವ, ಸೌವರ್ಣ, ಬಿಡಾಲ, ಗಾಜು, ಸಮುದ್ರದ ಉಪ್ಪು,
ಪಂಚಲೋಹಗಳು : ಚಿನ್ನ, ಬೆಳ್ಲಿ, ತಾಮ್ರ, ಕಬ್ಬಿಣ, ಸೀಸ..
ಪಂಚಮಾತೃಗಳು : ಹೆತ್ತತಾಯಿ, ಅತ್ತಿಗೆ, ಅತ್ತೆ, ಗುರುಪತ್ನಿ, ರಾಜಪತ್ನಿ..
ಪಂಚಪಿತೃಗಳು : ತಂದೆ, ಮುಂಜಿ ಮಾಡಿಸಿದವರು, ವಿದ್ಯಾಗುರು, ಅನ್ನ ಕೊಟ್ಟವರು, ಕಷ್ಟದಲ್ಲಿ ರಕ್ಷಿಸುವವರು..
ಪಂಚಗವ್ಯ : ಹಾಲು, ಮೊಸರು, ತುಪ್ಪ, ಸಗಣಿ, ಗಂಜಲ..
ಪಂಚಮಹಾಪಾತಕ : ಚಿನ್ನ ಕದಿಯುವುದು, ಸುರಾಪಾನ, ಬ್ರಹ್ಮ ಹತ್ಯೆ, ಗುರುಪತ್ನಿಗಮನ, ದುಷ್ಟರ ಸಹವಾಸ..
ಪಂಚವೃಕ್ಷಗಳು : ಮಂದಾರ, ಕಲ್ಪವೃಕ್ಷ, ಪಾರಿಜಾತ, ಹರಿಚೆಂದನ, ಸಂತಾನ ವೃಕ್ಷ..
ಪಂಚಯಜ್ಞಗಳು : ದೇವಯಜ್ಞ, ಪಿತೃಯಜ್ಞ, ಭೂತಯಜ್ಞ, ಮನುಷ್ಯ ಯಜ್ಞ, ಬ್ರಹ್ಮಯಜ್ಞ..
ಪಂಚದೇಹಗಳು : ಸ್ಥೂಲ, ಸೂಕ್ಷ್ಮ, ಕಾರಣ, ತುರ್ಯ, ಮಹಾಕಾರಣ..
ಪಂಚಕೋಶಗಳು : ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ..
ಪಂಚಾಮೃತಗಳು : ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ..
ಪಂಚದೇವತೆಗಳು : ಗೋವಿಂದ, ವಿಷ್ಣು, ವಾಮನ, ಅಚ್ಯುತ, ಮಧುಸೂದನ
ಪಂಚಶೀ ದೇವತೆಗಳು : ಬ್ರಹ್ಮ, ವಿಷ್ಣು, ಶಿವ, ಈಶ್ವರ, ಸದಾಶಿವ..
ಪಂಚಾಂಗ : ತಿಥಿ, ವಾರ, ನಕ್ಷತ್ರ , ಯೋಗ , ಕರಣ..
ಪಂಚವಾದ್ಯಗಳು : ಕೊಂಬು, ತಮಟೆ, ಶಂಖ, ಬೇರಿ, ಘಂಟೆ..
ಪಂಚಾಯತನ : ಆದಿತ್ಯ, ಅಂಬಿಕ, ವಿಷ್ಣು, ಗಣೇಶ, ಮಹೇಶ್ವರ..
ಪಂಚ ಉಪಚಾರ : ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ..
೫ ರ ವಿಶೇಷತೆ ತುಂಬಾ ಇದೆ..
------------------------------------------------------------------------
------------------------------------------------------------------------
ರತ್ನಾಕರನು ವಾಲ್ಮೀಕಿ ಆಗಿ ರೂಪಾಂತರಗೊಂಡ ಕಥೆ
ಪವಿತ್ರ ಮಹಾಕಾವ್ಯವಾದ ರಾಮಾಯಣದ ಲೇಖಕ, ವಾಲ್ಮೀಕಿ. ಇವರು ಮಹರ್ಷಿಯಾದ ಕಥೆ, ಇವರೇ ರಚಿಸಿದ ಮಹಾಕಾವ್ಯದಷ್ಟೆ ಕುತೂಹಲಕಾರಿ ಆಗಿದೆ.
ವಾಲ್ಮೀಕಿ, ಪ್ರಚೇತಸ ಎಂಬ ಋಷಿಯ ಮಗನಾಗಿ ಜನಿಸಿದರು. ಆಗ ಆ ಬಾಲಕನ ಹೆಸರು ರತ್ನಾಕರ ಎಂದಾಗಿತ್ತು. ಈ ಚಿಕ್ಕ ಹುಡುಗನಾದ ರತ್ನಾಕರ ಒಮ್ಮೆ ದಟ್ಟ ಅರಣ್ಯದಲ್ಲಿ ಹೊಕ್ಕಿ ದಾರಿ ತಪ್ಪಿದನು. ಒಬ್ಬ ಬೇಟೆಗಾರ ಈ ಬಾಲಕನನ್ನು ಕಂಡು ತನ್ನಡಿ ಆಶ್ರಯ ನೀಡಿದನು. ಸಾಕು ತಂದೆ-ತಾಯಿಯ ಪ್ರೀತಿ ಮತ್ತು ವಾತ್ಸಲ್ಯದಲ್ಲಿ, ರತ್ನಾಕರ ಶೀಘ್ರದಲ್ಲೇ ತನ್ನ ಹೆತ್ತವರನ್ನು ಮರೆತುಹೋದ. ನಂತರ ರತ್ನಾಕರನು ಅತ್ಯುತ್ತಮ ಬೇಟೆಗಾರನಾಗಿ ಬೆಳೆದನು. ಮದುವೆಯಾಗಬಲ್ಲ ವಯಸ್ಸು ಸಮೀಪಿಸುತ್ತಿದ್ದಂತೆ, ಅಲ್ಲೇ ಒಂದು ಬೇಟೆಗಾರರ ಕುಟುಂಬದ ಸುಂದರ ಯುವತಿಯೊಂದಿಗೆ ವಿವಾಹವಾದನು.
ರತ್ನಾಕರನ ಕುಟುಂಬ ದೊಡ್ಡದಾಗಿ ಬೆಳೆಯುತ್ತಾ ಹೋದಂತೆ ಎಲ್ಲರಿಗೂ ಆಹಾರ ಒದಗಿಸುವುದು ಆತನಿಗೆ ಕಷ್ಟವಾಯಿತು. ಬೇಸತ್ತು ಆತನು ಅಂತಿಮವಾಗಿ ಕಾಡಿನಲ್ಲಿ ಹಾದುಹೋಗುವ ಜನರನ್ನು ಲೂಟಿ ಮಾಡಿ, ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲು ಆರಂಭಿಸಿದ.
ಒಂದು ದಿನ, ನಾರದ ಮುನಿ ಈ ಕಾಡಿನಲ್ಲಿ ಹಾದು ಹೋಗುವಾಗ ರತ್ನಾಕರನ ದಾಳಿಗೆ ಒಳಪಟ್ಟರು. ನಾರದ ಭಯ ಪಡದೆ, ತನ್ನ ವೀಣೆ ಹಿಡಿದು ದೇವರ ಗುಣಗಾನ ಮಾಡಿ ಹಾಡುತ್ತಿರುವುದನ್ನು ಕಂಡು ಒಂದು ಗೋಚರವಾದ ಪರಿವರ್ತನೆ ರತ್ನಾಕರನಲ್ಲಿ ಆಗ ತೊಡಗಿತು. ನಾರದ ಅವರಿಗೆ ‘ರಾಮ’ ನಾಮದ ಪವಿತ್ರ ಹೆಸರು ಕಲಿಸಿದರು. ಅವರು ಮರಳಿ ಬರುವ ತನಕ ಆ ಹೆಸರನ್ನು ಪಠಣ ಮಾಡುತ್ತ ಧ್ಯಾನ ಮಾಡುವಂತೆ ಕೇಳಿಕೊಂಡರು. ರತ್ನಾಕರ ಇದನ್ನು ಪಾಲಿಸಿದರು. ತನ್ನ ಇಡೀ ದೇಹ ಹುತ್ತದೊಳಗೆ ಮುಳುಗಿದರೂ ರತ್ನಾಕರ ಧ್ಯಾನದಲ್ಲಿ ತಲ್ಲೀನನಾಗಿದ್ದ. ವರ್ಷಗಳು ಕಳೆದ ನಂತರ ನಾರದ ಮುನಿ ಮರಳಿದರು. ಆತನ ದೇಹದ ಸುತ್ತಾ ಇದ್ದ ಹುತ್ತ ತೆಗೆದುಹಾಕಿದರು. ಆತನ ತಪಸ್ಸನ್ನು ಮೆಚ್ಚಿದ ಬ್ರಹ್ಮರ್ಷಿ, ಗೌರವಾರ್ಥವಾಗಿ ದಯಪಾಲಿಸಲ್ಪಟ್ಟ ಹೆಸರೇ, ವಾಲ್ಮೀಕಿ. ಇದರ ಮೂಲ ‘ವಾಲ್ಮೀಕ’ವಾಗಿದ್ದು, ಅದರ ಅರ್ಥ ಹುತ್ತ ಎಂದಾಗಿದೆ.
ಬ್ರಹ್ಮರ್ಷಿ ವಾಲ್ಮೀಕಿ ನಂತರ ಗಂಗಾ ನದಿಯ ತೀರದಲ್ಲಿ ತಮ್ಮ ಆಶ್ರಮವನ್ನು ನಿರ್ಮಿಸಿದರು. ಹಾಗೆ ಒಂದು ದಿನ ನಾರದ ಮುನಿಗಳು ಅವರ ಆಶ್ರಮಕ್ಕೆ ಭೇಟಿ ನೀಡಿ ಅವರಿಗೆ ಶ್ರೀ ರಾಮನ ಕಥೆಯನ್ನು ತಿಳಿಸಿದರು. ನಂತರ, ವಾಲ್ಮೀಕಿ ಬ್ರಹ್ಮ ದೇವನಿಂದ ದಿವ್ಯ ದೃಷ್ಟಿ ಪಡೆದು, ರಾಮಾಯಣದ ಕಥೆಯನ್ನು ತಿಳಿಸತೊಡಗಿದರು, ಇದನ್ನು ಪರಿಪಾಲಿಸುತ್ತ ವಾಲ್ಮೀಕಿ ಪ್ರೇರಣೆ ಪಡೆದು ಸುಲಭವಾಗಿ ಶ್ಲೋಕಗಳನ್ನು ರಚಿಸುತ್ತ, ನಮಗೆಲ್ಲಾ ರಾಮಾಯಣವನ್ನು ನೀಡಿದರು.
------------------------------------------------------------------------
------------------------------------------------------------------------
*
ರಾಮಾಯಣ ರಚನೆಗೆ ಪ್ರೇರಣೆಸಂಪಾದಿಸಿ
*
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||
ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕರೂಪದಲ್ಲಿ ವಾಲ್ಮೀಕಿಯವರ ಮುಖದಿಂದ ಹೊರಹೊಮ್ಮಿದ ಮಾತುಗಳು.
ಈ ಶ್ಲೋಕದ ಅರ್ಥ ಹೀಗಿದೆ :
ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||
ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ. ಅದರ ಸಂಗಾತಿ ಹೆಣ್ಣುಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಮೇಲ್ಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ. ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ,ಲಯ-ಛಂದಸ್ಸುಗಳಿಂದ ಕೂಡಿತ್ತು.
ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ. ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಗ್ರಂಥವಾಗಿ ಬರೆದರು.
ಉತ್ತರ ರಾಮಾಯಣದೊಳಗೊಂದು ಪಾತ್ರವಾಗಿಸಂಪಾದಿಸಿ
ರಾಮನು ಅಯೋಧ್ಯೆಯ ಕೆಲವು ಸಾಮಾನ್ಯ ಜನರುಸೀತೆಯ ಬಗೆಗೆ ಅರೋಪ ಮಾಡುತ್ತಿರುವುದನ್ನು ಗೂಢಚಾರರ ಮೂಲಕ ತೀಳಿದು (ಅಗಸನ ಆರೋಪಣೆಗೆ ಎಂದು ಕನ್ನಡ ಜೈಮಿನಿ ಭಾರತದಲ್ಲಿ ಲಕ್ಷೀಶ ಕವಿಯು (ಮೂಲವನ್ನು ಬದಲಾಯಿಸಿ ಸೇರಿಸಿದ್ದಾನೆ-ಅಥವಾ ಜೈಮಿನಿ ಋಷಿಯು ತನ್ನ ಸಂಸ್ಕೃತದ ಜೈಮಿನಿ ಭಾರತದಲ್ಲಿ ಮೂಲವನ್ನು ಬದಲಾಯಿಸಿದ್ದಾನೆ) ನೊಂದು ತುಂಬು ಗರ್ಭಿಣಿ ಸೀತೆಯನ್ನು ಪರಿತ್ಯಾಗ ಮಾಡುತ್ತಾನೆ. ರಾಮನ ಆಜ್ಞೆಯಂತೆ ಲಕ್ಷಣನು ಸೀತೆಯನ್ನು (ಲಕ್ಷ್ಮಣ ತನ್ನ ವಿವೇಕವನ್ನು ಉಪಯೋಗಿಸಿ ವಾಲ್ಮೀಕಿ ಮುನಿಯ ಆಶ್ರಮದ ಹತ್ತಿರ) ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ. ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ. ಅಲ್ಲೇ ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ. ವಾಲ್ಮೀಕಿ ಮಹರ್ಷಿಗಳು ಲವ-ಕುಶರ ಸಂಗಡ ರಾಮನಲ್ಲಿಗೆ ಬಂದು ರಾಮಾಯಣವನ್ನು ಗಾನ ಮಾಡುತ್ತಾರೆ. ರಾಮನಲ್ಲಿಗೆ ಸೀತೆಯನ್ನೂ ವಾಲ್ಮೀಕಿ ಮಹರ್ಷಿಗಳೇ ಕರೆತರುತ್ತಾರೆ.
ಮಹಾಕವಿ ಆದಿಕವಿ ವಾಲ್ಮೀಕಿಗೆ ನಮನಸಂಪಾದಿಸಿ
ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ ||ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ ||ಈ ಸುಂದರವಾದ ರೂಪಕಾಲಂಕಾರದಿಂದ ಕೂಡಿದ ವಾಲ್ಮೀಕಿ ಮುನಿಯನ್ನು ವಂದಿಸುವ , ನಮಸ್ಕರಿಸುವ ಶ್ಲೋಕವು, ಬುಧಕೌಶಿಕ ಮುನಿಯು ರಚಿಸಿರುವ ಶ್ರೀರಾಮರಕ್ಷಾ ಸ್ತೋತ್ರದಲ್ಲಿದೆ .'ಕಾವ್ಯವೆಂಬ ಮರದ ಮೇಲೆ ಕುಳಿತು, 'ರಾಮ ರಾಮಾ' ಎಂದು (ಕೂಜಂತಮ್ ಹಕ್ಕಿಯ ಇಂಪಾದ ಧ್ವನಿ) ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದೇ-ನಮಸ್ಕಾರ. !
ಕೃಪೆ :ಸಿರಿ ನುಡಿ ಕನ್ನಡ ಬಳಗ.
------------------------------------------------------------------------
ಕೃಪೆ :ಸಿರಿ ನುಡಿ ಕನ್ನಡ ಬಳಗ.
------------------------------------------------------------------------
ಕೇರಳದ ಹೆಣ್ಣು ಮಕ್ಕಳು ಬಿಳಿ ಸೀರೆ ಯಾಕೆ ಉಡುತ್ತಾರೆ. ?? ಕೇರಳದ ಜನರಿಗೆ ಕೊಲ್ಲೂರ ಮೂಕಾಂಬಿಕೆ ಕುಲದೇವರು ಯಾಕೆ?
ಅದು ಕಾಲಡಿ ಅಂದಿನ ಕೇರಳದ ಒಂದು ಪುಟ್ಟ ಊರು.ತಂದೆ ಇಲ್ಲದ ತಬ್ಬಲಿಯಾದ ಬಾಲ ಶಂಕರ ತನ್ನ ಎಳವೆಯ ಬಾಲ್ಯದಲ್ಲೇ ಸನ್ಯಾಸ ದೀಕ್ಷೆಯನ್ನು ತೊಡುತ್ತಾನೆ. ಇದ್ದ ಒಬ್ಬನೇ ಮಗ ಸನ್ಯಾಸಿಯಾಗುತ್ತಾನೆ ಅಂದಾಗ ವಿಧವೆಯಾದ ತಾಯಿ ಆರ್ಯಂಬೆ ದಿಕ್ಕು ತೋಚದೆ ಮಗನನ್ನು ಅಪ್ಪಿ ಹಿಡಿದು ಅತ್ತು ಕೇಳುತ್ತಾಳೆ ' ನಾನು ಸಾಯುವಾಗ ಒಂದು ತೊಟ್ಟು ನೀರು ಬಿಟ್ಟು ನನ್ನ ಚಿತೆಗೆ ಕೊಳ್ಳಿ ಇಡುವವರು ಯಾರಿದ್ದಾರೆ ? ನನಗೆ ಕಡೆಗಾಲ ಬಂದಾಗ ನಿನ್ನನ್ನು ಎಲ್ಲಿ ಹುಡುಕಲಿ ?" ಎನ್ನುತ್ತಾ ಕರುಳು ಕಿತ್ತು ಬರುವ ಹಾಗೆ ಅಳುತ್ತಾಳೆ
" ಅಮ್ಮ ನಿನ್ನ ಕಡೆಗಾಲ ಬಂದಾಗ ಏಕ ಮನಸಿನಿಂದ ನನ್ನನ್ನು ಜ್ಞಾನಿಸು, ನೀನು ಜ್ಞಾನ ಮಾಡಿ ಕರೆದ ಅರೆ ಕ್ಷಣದಲ್ಲಿ ನಿನ್ನ ಕಣ್ಣ ಮುಂದೆ ನಿಂತು ನಿನ್ನ ಕಾರ್ಯಗಳನ್ನೆಲ್ಲಾ ನಡೆಸಿಕೊದುತ್ತೇನೆ" ಎಂದು ತಾಯಿಗೆ ಸಮಾಧಾನದ ಮಾತುಗಳನ್ನು ಹೇಳಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ದೇಶ ಪರ್ಯಟನೆಗೆ ಹೊರಡುತ್ತಾನೆ
ಅದೊಂದು ದಿನ ತಾಯಿ ಆರ್ಯಂಬೆ ತಾನು ಸಾಯುವ ಕಾಲ ಸಮಿಸುತ್ತಿದೆ ಅನ್ನುವಾಗ ಮಗ ಶಂಕರ ಹೇಳಿದಂತೆ ಮನಸೀನಲ್ಲೆ ಸಾವಿನ ಮಂಚದಿಂದ ಮಗನನ್ನು ಕೂಗಿ ಕರೆಯುತ್ತಾಳೆ. ತಾಯಿಯ ಕರುಳಿನ ಕೂಗು ಶಂಕರಾಚಾರ್ಯರಿಗೆ ಮುಟ್ಟುತ್ತದೆ. ತಡ ಮಾಡದೆ ತಾಯಿಯ ಮುಂದೆ ನಿಲ್ಲುತ್ತಾರೆ ಶಂಕರಾಚಾರ್ಯರು!!. ತನ್ನ ಮಗನನ್ನು ಕಣ್ಣು ತುಂಬಾ ನೋಡಿದ ತಾಯಿ ಮಗ ಬಿಟ್ಟ ತುಳಸಿ ನೀರಿನೊಂದಿಗೆ ನೆಮ್ಮದಿಯಿಂದ ಪ್ರಾಣ ಬಿಡುತ್ತಾಳೆ.
ಶಂಕರಾಚಾರ್ಯರಿಗೆ ಅಗ್ನಿ ಪರೀಕ್ಷೆಯಾಗುತ್ತದೆ ತಾಯಿಯ ಸಾವು. ತಾನು ಸನ್ಯಾಸಿಯಾಗಿ ತಾಯಿಯ ಹೆಣವನ್ನು ಸಂಸ್ಕಾರ ಮಾಡುವ ಹಾಗಿಲ್ಲ. ತನ್ನ ತಾಯಿ ವಿಧವೆ ಅನ್ನುವ ಕಾರಣಕ್ಕೆ ಊರ ಮಂದಿ ಯಾರೂ ಸಹಾಯ ಮಾಡುವುದಿಲ್ಲ. ಇನ್ನು ಕೆಲವರು ಸಹಾಯ ಮಾಡಲು ಬಂದವರನ್ನು ಸಹಾಯ ಮಾಡಲು ಬಿಡುವುದಿಲ್ಲ. ನಿಸಾಹಯಕರಾಗಿ ತಾಯಿ ಕೊಲ್ಲೂರ ಮೂಕಾಂಬಿಕೆಯನ್ನು ನೆನೆದು ಬಿಡುತ್ತಾರೆ. ಪವಾಡ ನಡೆದೇ ಹೋಗುತ್ತದೆ. ತಾಯಿ ದೇಹ ಯೋಗ ಮಾಯೆಯ ಅಗ್ನಿಯಿಂದ ಸುಡುತ್ತಾರೆ.
ಇಂತಹ ಕ್ಲಿಷ್ಟ ಸಮಯದಲ್ಲೂ ಸಹಾಯ ಮಾಡದ ಊರ ಜನರ ಮೇಲೆ ಕೋಪ ತಾನಾಗಿಯೇ ಮೂಡುತ್ತದೆ. ವಿಧವೆ ಎಂದು ತಾತ್ಸಾರದಿಂದ ನೋಡಿದ ಈ ಊರಲ್ಲಿ ಎಲ್ಲರೂ ವಿಧವೆಯರಾಗಿ ಇರಲಿ ಎಂದು ಶಪಿಸಿ ಹೊರಟು ಹೋಗುತ್ತಾರೆ. ದಿನ ಕಳೆದಂತೆ ಶಾಪ ಫಲಿಸುತ್ತದೆ. ಅನೇಕ ಮಾಂಗಲ್ಯಗಳು ಕಳಚಿ ಬೀಳುತ್ತವೆ. ಮೂಢ ನಂಬಿಕೆಗಳ ಗೋಡೆ ನಶಿಸಿ ಹೋಗಿ ತಮ್ಮ ತಪ್ಪಿನ ಅರಿವಾಗುತ್ತದೆ. ಓಡೋಡಿ ಬಂದು ಶಂಕರಾಚರ್ಯರಲ್ಲಿ ಕ್ಷಮೆಯನ್ನು ಕೇಳಿ ತಪ್ಪನ್ನು ಮನ್ನಿಸುವಂತೆ ಬೇಡಿಕೊಳ್ಳುತ್ತಾರೆ.
ಕರುಣೆಗೊಂಡ ಶಂಕರಾಚಾರ್ಯರು ಕನಿಕರದಿಂದ ' ಮಂಗಳ ಪ್ರದಾಯಿನಿಯಾದ ಕೊಲ್ಲೂರ ಮೂಕಾಂಬಿಕೆಯ ದರ್ಶನವನ್ನು ಮಾಡಿದರೆ ನಿಮ್ಮ ಸಕಲ ವಿಘ್ನಗಳೂ ದೂರವಾಗಿ, ನಿಮ್ಮ ಮಾಂಗಲ್ಯಗಳು ಗಟ್ಟಿಯಾಗುತ್ತವೆ ಎಂದು ಪರಿಮಾರ್ಜನೆಯ ದಾರಿ ತೋರಿಸುತ್ತಾರೆ. ವಿಧವೆಯರು ಅಮಂಗಳೆಯರಲ್ಲ ಅನ್ನುವುದಕ್ಕೆ ಬಿಳಿಯ ಸೀರೆ ಉಡುವ ಸಂಪ್ರದಾಯ ಅಂದಿನಿಂದ ಕೇರಳದಲ್ಲಿ ಶುರುವಾಗುತ್ತದೆ.
(ಸಂಗ್ರಹ)
------------------------------------------------------------------------
------------------------------------------------------------------------
ಮೊಣಕಾಲು ನೋವು ಕೀಲು ನೋವಿನ ಒಂದು ವಿಧವಾಗಿದೆ. ಪ್ರತಿಯೊಬ್ಬರಲ್ಲೂ ಮೊಣಕಾಲು ನೋವು ಸರ್ವೇಸಾಮಾನ್ಯ. ಗಾಯಗಳು, ಆಪಘಾತಗಳು ಮತ್ತು ಸಂಧಿವಾತದಿಂದ ಮೊಣಕಾಲು ನೋವು ಕಂಡುಬರುತ್ತದೆ. ಮೂಳೆಗಳಲ್ಲಿ ಕಡಿಮೆ ಪ್ರಮಾಣದ ಕ್ಯಾಲ್ಶಿಯಮ್ ಅಂಶಗಳಿದ್ದರೆ ಮತ್ತು ಮೂಳೆಗಳ ಮೇಲೆ ಒತ್ತಡ ಬೀಳುವುದರಿಂದ ಇದು ಸಂಭವಿಸಬಹುದು. ಮೂಳೆನೋವಿನ ವ್ಯತಿರಿಕ್ತ ಲಕ್ಷಣಗಳೆಂದರೆ ಊತ, ನೋವು ಮತ್ತು ಹಟಮಾರಿ ಧೋರಣೆಯಾಗಿದೆ.
ಮೂಳೆ ನೋವು ಕೆಲವೊಂದು ಸಂದರ್ಭಗಳಲ್ಲಿ ತುಂಬಾ ತೀವ್ರವಾಗಿರುತ್ತದೆ. ದೀರ್ಘ ಸಮಯದವರೆಗೆ ಇದು ಕಾಡುತ್ತಿದ್ದರೆ ನೀವು ವೈದ್ಯರನ್ನು ಸಂಪರ್ಕಿಸಬೇಕು. ಒತ್ತಡ ಅಥವಾ ಗಾಯದಿಂದಾಗಿ ಬರುವ ತಾತ್ಕಾಲಿಕ ಮೂಳೆ ನೋವಿಗೆ ವಿವಿಧ ಬೇನೆಗಳಿವೆ. ಇಂತಹ ನೋವುಗಳಿಗಾಗಿ ನೋವು ನಿವಾರಕಗಳು ಅಥವಾ ಜೆಲ್ಗಳನ್ನು ಬಳಸಲಾಗುತ್ತದೆ. ಮೂಳೆ ನೋವಿಗಾಗಿ ಮನೆಯಲ್ಲೇ ಮಾಡಬಹುದಾದ ಸರಳ ಮದ್ದುಗಳು ಹಲವಾರಿವೆ. ಕೆಲವು ವ್ಯಾಯಾಮಗಳು, ಮಸಾಜ್ಗಳು ಮತ್ತು ಮನೆಯಲ್ಲೇ ತಯಾರಿಸಿದ ನೈಸರ್ಗಿಕ ಮದ್ದುಗಳ ಹಚ್ಚುವಿಕೆಗಳನ್ನು ಇದು ಒಳಗೊಂಡಿರುತ್ತದೆ.
ಇಂತಹ ಮದ್ದುಗಳು ನೋವಿನಿಂದ ಉಪಶಮನವನ್ನು ನೀಡುತ್ತವೆ. ಮೂಳೆ ನೋವಿನ ಜಡಕ್ಕೆ ಹೋಗಿ ಬುಡದಿಂದಲೇ ಅದನ್ನು ನಿವಾರಿಸುತ್ತದೆ.
ಮೂಳೆ ನೋವಿನಿಂದ ಉಪಶಮನ ನೀಡುವ ಕೆಲವೊಂದು ಮುಖ್ಯವಾದ ಸರಳ ಮನೆಮದ್ದುಗಳು ಇಲ್ಲಿವೆ.
1. ಯೋಗ - ಹಲವಾರು ಆರೋಗ್ಯ ಸಮಸ್ಯೆಗಳಿಗೆ ಯೋಗ ಉತ್ತಮ ಪರಿಹಾರ. ಪ್ರತಿಯೊಂದು ಬಗೆಯ ನೋವನ್ನು ನಿವಾರಿಸಿ ಹೃದಯ ಮತ್ತು ಮಿದುಳನ್ನು ಸುಸ್ಥಿತಿಯಲ್ಲಿಡುತ್ತದೆ. ಸಾಮಾನ್ಯವಾಗಿ ಯೋಗ ಕೂಡ ಮೂಳೆ ನೋವಿಗೆ ಉತ್ತಮವಾದುದು. ಮೂಳೆಯ ಮಾಂಸಖಂಡಗಳನ್ನು ಬಲಗೊಳಿಸುವ ಕೆಲವೊಂದು ಯೋಗ ಶೈಲಿಗಳಿದ್ದು, ಇವುಗಳು ಮೂಳೆಯ ಮಾಂಸಖಂಡಗಳ ಸದೃಢತೆಯನ್ನು ಹೆಚ್ಚಿಸುತ್ತದೆ. ನೋವುಗಳ ಉಪಶಮನಕ್ಕಾಗಿ ಕೂಡ ಯೋಗ ಅತ್ಯುತ್ತಮವಾದುದು.
2. ಕ್ಯಾಲ್ಶಿಯಂ ಅಂಶ -
ಕೀಲು ನೋವುಗಳು ಸಾಮಾನ್ಯವಾಗಿ ಕ್ಯಾಲ್ಶಿಯಂ ಕೊರತೆಯಿಂದ ಉಂಟಾಗುತ್ತದೆ. ಮೂಳೆಗಳಲ್ಲಿ ಕ್ಯಾಲ್ಶಿಯಂ ಕೊರತೆ ಉಂಟಾದಾಗ ಅವುಗಳ ಬಲ ಕುಗ್ಗುತ್ತದೆ. ಕ್ಯಾಲ್ಶಿಯಂ ಮತ್ತು ಇತರ ಪೋಷಕಾಂಶಗಳು ಹೆಚ್ಚಿರುವ ಆಹಾರವನ್ನು ತೆಗೆದುಕೊಳ್ಳಿ. ಹಾಲು, ಮೀನು, ಮೊಟ್ಟೆ ಮೊದಲಾದ ಪೋಷಕಾಂಶಗಳಿರುವ ಆಹಾರವನ್ನು ನಿತ್ಯವೂ ತೆಗೆದುಕೊಳ್ಳಿ. ಮೂಳೆ ನೋವು ಅಥವಾ ಇತರ ಯಾವುದೇ ಕೀಲು ನೋವಿನ ಸಮಸ್ಯೆಗಳಿಗೆ ಇದೊಂದು ಉತ್ತಮ ಪರಿಹಾರವಾಗಿದೆ.
3. ಎಣ್ಣೆ ಮಸಾಜ್ -
ಬಿಸಿ ಎಣ್ಣೆ ಮಸಾಜ್ ಮೂಳೆ ನೋವಿಗೆ ರಾಮಬಾಣ. ನೀವು ತೆಂಗಿನ ಎಣ್ಣೆ, ಆಲೀವ್ ಎಣ್ಣೆ ಅಥವಾ ಇತರ ಯಾವುದೇ ಎಣ್ಣೆಯನ್ನು ಮಸಾಜ್ಗಾಗಿ ಬಳಸಬಹುದು. ನೋವಿರುವ ಜಾಗಕ್ಕೆ ನಿತ್ಯವೂ ಎಣ್ಣೆ ಮಸಾಜ್ ಮಾಡುವುದು ತುಂಬಾ ಉಪಯೋಗಕಾರಿ. ಸ್ವಲ್ಪ ಎಣ್ಣೆ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಬಿಸಿ ಮಾಡಿದ ಎಣ್ಣೆಯನ್ನು ನೋವಿರುವ ಜಾಗಕ್ಕೆ 10-15 ನಿಮಿಷಗಳಿಗೆ ಹಚ್ಚಿ ಹಾಗೂ ವೃತ್ತಾಕಾರವಾಗಿ ಮಸಾಜ್ ಮಾಡಿ. ಎಣ್ಣೆ ಮಸಾಜ್ ನೋವಿನಿಂದ ತ್ವರಿತ ಆರಾಮವನ್ನು ನೀಡುತ್ತದೆ.
4.ವ್ಯಾಯಾಮ -
ನಿತ್ಯವೂ ವ್ಯಾಯಾಮ ಮಾಡುವುದು ಹಲವಾರು ರೋಗಗಳಿಗೆ ಸೂಕ್ತ ಪರಿಹಾರವನ್ನು ನೀಡುತ್ತದೆ. ಅತಿ ತೂಕ ಮತ್ತು ಸ್ಥೂಲಕಾಯತೆಯಿಂದ ಕೆಲವೊಮ್ಮೆ ಮೂಳೆ ನೋವು ಉಂಟಾಗಬಹುದು. ಮೂಳೆ ಸ್ನಾಯುಗಳಿಗೆ ವ್ಯಾಯಾಮ ಸಿಗುವಂತಹ ದೈಹಿಕ ಕಸರತ್ತನ್ನು ಮಾಡಬೇಕು. ಸ್ಕಿಪ್ಪಿಂಗ್, ಏರೋಬಿಕ್ಸ್ ಮತ್ತು ಡ್ಯಾನ್ಸಿಂಗ್ನಂತಹ ವ್ಯಾಯಾಮಗಳನ್ನು ಮನೆಯಲ್ಲಿ ಮಾಡಿ. ಮೂಳೆಗಳಿಗೆ ಭರಿಸಲಾಗದ ಅತಿಯಾದ ತೂಕವನ್ನು ವ್ಯಾಯಾಮವು ಕಡಿಮೆ ಮಾಡುತ್ತದೆ.
5. ಇತರ ಪರಿಹಾರಗಳು -
ಮೇಲೆ ತಿಳಿಸಿದ ಮನೆ ಮದ್ದುಗಳ ಬದಲಾಗಿ ಕೂಡ ಹಲವಾರು ಮೂಳೆ ನೋವಿನ ಪರಿಹಾರ ಉಪಾಯಗಳು ಸಾಕಷ್ಟಿವೆ. ಅರಿಶಿನ ಮಿಶ್ರಿತ ಹಾಲಿನ ಸೇವನೆಯನ್ನು ಈ ಪರಿಹಾರಗಳು ಒಳಗೊಂಡಿವೆ. ಊತವನ್ನು ಕಡಿಮೆ ಮಾಡುವ ಅಂಶಗಳು ಅರಶಿನದಲ್ಲಿ ಹೇರಳವಾಗಿದ್ದು ಮೂಳೆನೋವಿಗೆ ಪರಿಹಾರವನ್ನು ನೀಡುತ್ತದೆ. ಸೆಳೆತವಿರುವ ಜಾಗಕ್ಕೆ ಮೆಂತ್ಯವನ್ನು ನೆನೆಸಿ ಅದನ್ನು ಪೇಸ್ಟ್ನಂತೆ ಸವರಿ. ಇದು ಕೂಡ ಉತ್ತಮ ಪರಿಹಾರಕವಾಗಿದೆ
------------------------------------------------------------------------
------------------------------------------------------------------------
ಧರ್ಮ ಬಿಂದು
ಕಂಸನೊಮ್ಮೆ ಕೃಷ್ಣನನ್ನು ಕೊಲ್ಲುವ ಉದ್ದೇಶದಿಂದ ಬಿಲ್ಲ ಹಬ್ಬಕ್ಕೆ ಮಧುರೆಗೆ ಕರೆಯುವ ಸಂಕಲ್ಪ ಮಾಡಿದ..
ಕೃಷ್ಣನನ್ನು ಕರೆತರಲು ಕೃಷ್ಣ ಭಕ್ತ ಅಕ್ರೂರನನ್ನೇ ಕಳುಹಿಸಿದ.
ಅಕ್ರೂರನಿಗೋ ಕೃಷ್ಣನನ್ನು ನೋಡುವ ಸಂತೋಷ.ಮತ್ತೊಂದು ಕಡೆ.ಕಂಸನ ಕುತಂತ್ರಕ್ಕಾಗಿ ಸಂಕಟ.
ಇಂತಹ ಕೆಲಸವನ್ನ ನನ್ನಿಂದ ಕಂಸ ಮಾಡಿಸುತ್ತಿದ್ದಾನೆಅಂತ..
ದ್ವಾರಕೆಗೆ ಅಕ್ರೂರ ತಲುಪಿದ್ದಾನೆ.ಕೃಷ್ಣನನ್ನು ಹುಡುಕಿದ್ದಾನೆ..,
ಎಲ್ಲೂ ಕೃಷ್ಣ ಕಾಣಿಸಲಿಲ್ಲ.ಕೃಷ್ಣನಿಗಾಗಿ ಹುಡುಕಿದ
ಕೃಷ್ಣ ಹಟ್ಟಿಯಲ್ಲಿ ಆಕಳ ಹಾಲು ಕರೆಯುತ್ತಿದ್ದ.ಈ ದೃಶ್ಯ ಅವನ ಮನಸ್ಸನ್ನು ಕುಲುಕಿತು
ಮನಸ್ಸಿನಲ್ಲೇ ಈ ರೀತಿ ಯೋಚಿಸಿದನಂತೆ*
ನಾನು ಕಂಸನ ಆಳಾಗುವುದಕ್ಕಿಂತ ಕೃಷ್ಣನ ಮನೆಯ ದನವಾಗಬಾರದಿತ್ತೇ...?ಕೃಷ್ಣನ ಕೈಯ ಸ್ಪರ್ಶವಾದರೂ ದೊರಕುತ್ತಿತ್ತು..ಎಂದು..
ಇಷ್ಟು ಯೋಚಿಸಿದ್ದೇ ತಡ,ಕೃಷ್ಣ ಬಂದವನೇ ಅಕ್ರೂರನನ್ನು ಬಾಚಿ ತಬ್ಬಿಕೊಂಡನಂತೆ..
ಕೃಷ್ಣ ಎಲ್ಲರ ಅಂತರ್ಯಾಮಿಯಲ್ಲವೇ,ಭಕ್ತನ ಅಂತರಂಗದ ಅಳಲು ಗೊತ್ತಾಗದೇ ಇರುವುದೇ
ನಮ್ಮ ಪ್ರಾರ್ಥನೆ ಪ್ರಾಮಾಣಿಕವಾಗಿದ್ದರೆ ಖಂಡಿತವಾಗಿಯೂ ಕೃಷ್ಣ ಅದನ್ನು ಮನ್ನಿಸುತ್ತಾನೆ
ಅಕ್ರೂರ ಆಸೆ ಪಟ್ಟಂತೆ ನಾವು ಯಾವತ್ತಾದರೂ ಆಸೆಪಟ್ಟಿದ್ದೇವೆಯೇ.??ಅವನ ಪಾದಸ್ಪರ್ಶದ ಆಸೆ ನಮ್ಮಲ್ಲಿ ಮೂಡಿದೆಯೆ.????.
ಆದರೆ ನಮ್ಮಲ್ಲಿ ಮೂಡಿರುವದು ಲೌಕಿಕದ ಬೇಡಿಕೆಗಳ ಆಶೆಗಳ ಪಟ್ಟಿ ಹೊರತು...
ಆ ಅಸುರಾರಿ ವಸುದೇವ ಸುತನ,ಪಾದ ಸ್ಮರಣೆಯನ್ನು ಸದಾ ಮಾಡುವ ಆಸೆಇನ್ನೂ ಬಂದಿಲ್ಲ ..
ನಮಗೆ
ಪುಣ್ಯದ ಫಲ ಬೇಕು,ಆದರೆ ಪುಣ್ಯ ಮಾಡುವ. ಕಾರ್ಯಗಳನ್ನು ಮಾಡಲು ಮನಸ್ಸಿನಲ್ಲಿ ಬರುವದಿಲ್ಲ ..
ಮತ್ತೆ ಪಾಪದ ಫಲ ಬೇಡ,ಮತ್ತೆ ಮಾಡುವದು ಅನಂತ ಪಾಪಗಳ ರಾಶಿ..ಹೀಗಾದರೆ ಹೇಗೆ??
ಶ್ರೀಕೃಷ್ಣ. ನಮಗೆ ದರ್ಶನ ನೀಡುವಲ್ಲಿ ತಡಮಾಡುತ್ತಿಲ್ಲ
ನಾವು ಪ್ರಾರ್ಥನೆ ಯಲ್ಲಿ ಮತ್ತುಧರ್ಮದ ಹಾದಿಯಲ್ಲಿ ನಡೆಯಲು ಎಡವಿದ್ದೇವೆ.. ಆದರೆ ಅವನಲ್ಲಿ ನಿಷ್ಕಲ್ಮಷ ಭಕ್ತಿ ಮೂಡಿದ್ದರೆ ಖಂಡಿತವಾಗಿಯೂ ಒಂದು ದಿನ ಬಾಚಿ ತಬ್ಬಿಕೊಳ್ಳುತ್ತಾನೆ..
ಅದಕ್ಕಾಗಿ ನಾವುಗಳು ಕಾಯುವಂತಾಗಲಿ.ಪ್ರತಿನಿತ್ಯ ಅದಕ್ಕಾಗಿ ಪ್ರಾಮಾಣಿಕವಾಗಿ ಆಸೆ ಪಡುವಂತಾಗಲಿ.....
ಶ್ರೀಕೃಷ್ಣಾಯ ನಮಃ
------------------------------------------------------------------------
------------------------------------------------------------------------
ತೀರ್ಥಪ್ರಬಂಧ
ಅರುಣಾಚಲೇಶ್ವರ
(ತಿರುವಣ್ಣಾಮಲೈ) -
ದಕ್ಷಿಣದ ಪಂಚತತ್ತ್ವ ಲಿಂಗಗಳಲ್ಲಿ ಅಗ್ನಿ ಲಿಂಗವು ಅರುಣಾಚಲದಲ್ಲಿದೆ ಎಂದು ನಂಬಿಕೆ.
ನಂದಿಕೇಶ್ವರನು ಭೂಮಿಯಲ್ಲಿ ತಂದಿಟ್ಟ ಮೂರು ಶಿಖರಗಳಲ್ಲಿ ಇದು ಒಂದು. ಈ ಪರ್ವತದ ಸುತ್ತಲೂ ಪ್ರದಕ್ಷಿಣೆ ಹಾಕಲು ಕಾಲುದಾರಿ ಇದೆ.
ಕಾರ್ತಿಕ ಮಾಸದ ಹುಣ್ಣಿಮೆಯಂದು ಒಂದು ದೊಡ್ಡ ಪಾತ್ರೆಯಲ್ಲಿ ಮಣಗಟ್ಟಲೆ ಕರ್ಪೂರವನ್ನು ರಾಶಿಹಾಕಿ ಉರಿಸುತ್ತಾರೆ. ಈ ಅಗ್ನಿದರ್ಶನಕ್ಕಾಗಿ ಸಾವಿರಾರು ಜನ ಇಲ್ಲಿ ಸೇರುತ್ತಾರೆ. ಇಲ್ಲಿಯೇ ಅರುಣಾಚಲ ದೇವಾಲಯವಿದೆ.
ಫಣಿಗಣವರಭೂಷಃ ಪಾರ್ವತೀ ಶ್ಲಾಘ್ಯವೇಷಃ |
ಖಲಜನ ಕೃತರೋಷಃ ಖಂಡಿತಾತ್ಮೀಯ ದೋಷಃ ||
ಸದರುಣಗಿರಿವಾಸಃ ಶಕ್ರಸೂರ್ಯಾದ್ಯಧೀಶಃ |
ಪರಿಹೃತಭವಪಾಶಃ ಪಾತುಮಾಂ ಪಾರ್ವತೀಶಃ ||೩೭||
ಹೇ ಸರ್ಪಗಳಿಂದ ಅಲಂಕೃತನಾದ, ಪಾರ್ವತೀ ಮೆಚ್ಚಿದ ವೇಷಭೂಷಣಗಳುಳ್ಳ, ದುರ್ಜನರಲ್ಲಿ ಕುಪಿತನಾದ, ಇಂದ್ರ ಸೂರ್ಯಾದಿ ದೇವತೆಗಳಿಗೆ ಒಡೆಯನಾದ, ಸಂಸಾರ ಬಂಧನದಿಂದ ಬಿಡುಗಡೆ ಮಾಡುವ, ಅರಣಾಚಲ ನಿವಾಸಿಯಾದ, ಪಾರ್ವತೀಪತಿಯಾದ ಶಂಕರನೇ ನಮ್ಮನ್ನು ನಿರಂತರ ರಕ್ಷಿಸು ಎಂದು ರಾಜರು ಅರುಣಾಚಲೇಶ್ವರನನ್ನು ಪ್ರಾರ್ಥಿಸುತ್ತಾರೆ.
ಅರುಣಾಚಲೇಶ್ವರನಾದ ಶಿವನು ಪಾರ್ವತೀಪತಿ, ನಾಗಭೂಷಣ, ಖಲಜನವಿರೋಧಿ, ಭಕ್ತಜನದೋಷನಾಶಕ, ಇಂದ್ರಸೂರ್ಯಾದಿಗಳ ಅಧಿಪತಿ, ಭವಹರವಾದ ಸುಜ್ಞಾನದಾಯಕ ಎಂದು ಭಾವ. ತತ್ತ್ವಜ್ಞಾನದ ಅರುಣೋದಯಕ್ಕೆ ಮನೋನಿಯಾಮಕರಾದ ಅರುಣಾಚಲೇಶ್ವರ ಭಜನೆ ಅತ್ಯವಶ್ಯ.
------------------------------------------------------------------------
------------------------------------------------------------------------
ದಾಮೋದರಸ್ತೋತ್ರಂ :-
ಹರಿಃ ಓಂ
ಮತ್ಸ್ಯಾಕೃತಿಧರ ಜಯ ದೇವೇಶ
ವೇದವಿಬೋಧಕ ಕೂರ್ಮಸ್ವರೂಪ !
ಮಂದರಗಿರಿಧರ ಸೂಕರರೂಪ
ಭೂಮಿವಿಧಾರಕ ಜಯ ದೇವೇಶ !!೧!!
ಅರ್ಥ :- ಮತ್ಸ್ಯ (ಮೀನಿನ) ರೂಪವನ್ನು ಧರಿಸಿದಂಥ, ಸಕಲದೇವತೆಗಳಿಗೆ ಈಶನಾದ, ಸಮುದ್ರಮಥನಕಾಲದಲ್ಲಿ ಕೂರ್ಮ (ಆಮೆ) ರೂಪದಿಂದ ಮಂದರಪರ್ವತವನ್ನು ಎತ್ತಿದಂಥ, ಮತ್ತು ವೇದಗಳನ್ನು ಬೋಧನೆ ಮಾಡಿದಂಥ, ಮತ್ತೆ ವರಾಹರೂಪದಿಂದ ಇಡೀ ಭೂಮಂಡಲವನ್ನೇ ತನ್ನ ಕೋರೆಯಮೇಲೆ ಇಟ್ಟುಕೊಂಡಂಥ (ಧರಿಸಿದಂಥ) ಮತ್ಸ್ಯಕೂರ್ಮವರಾಹಸ್ವರೂಪನಾದ ದಾಮೋದರನೇ ನಿಮಗೆ ಜಯ ಜಯ ಜಯವಾಗಲಿ (ನಿಮ್ಮ ಜಯದ ಜ್ಞಾನ ನಮಗಾಗಲಿ) ಅಂತ ಪ್ರಾರ್ಥನೆ.
ಸರ್ವೇ ಜನಾಃ ಸುಖಿನೋ ಭ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ