ಭಾನುವಾರ, ಅಕ್ಟೋಬರ್ 29, 2017

ಮಧುಮೇಹಕ್ಕೆ ರಾಮಬಾಣ ಕಾಶಿಕಣಗಿಲೆ

ಮಧುಮೇಹಕ್ಕೆ ರಾಮಬಾಣ ಕಾಶಿಕಣಗಿಲೆ..........  ಸದಾಪುಷ್ಪ ಕೈತೋಟದಲ್ಲಿ ಕಡ್ಡಾಯವಾಗಿ ಇರಬೇಕಾದ ಗಿಡ..
ಕಾಶಿಕಣಗಿಲೆ ಅಥವಾ ನಿತ್ಯ ಮಲ್ಲಿಗೆ. ಇದನ್ನು ಹಿಂದಿಯಲ್ಲಿ ಸದಾಬಹಾರ್ ಎಂದು ಕರೆಯುತ್ತಾರೆ. ಇಂಗ್ಲಿಷ್‌ನಲ್ಲಿ ಮಡಗಾಸ್ಕರ್ ಪೆರಿವಿಂಕಲ್ ಎನ್ನುತ್ತಾರೆ. ಆದರೆ ಹೇಗೆ ಕರೆದರೂ ಈ ಗಿಡ ಇದ್ದರೆ ಅದ್ಭುತವಾದ ಔಷಧ ಗುಣಗಳನ್ನು ಮಾತ್ರ ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ಯಾಕೆಂದರೆ ಈ ಗಿಡದ ಎಲೆಗಳು, ಹೂವು, ಬೇರಿಂದ ಸಹ ನಮಗೆ ಅದೆಷ್ಟೋ ಉಪಯೋಗಗಳಿವೆ. ಕ್ಯಾನ್ಸರ್, ಮಧುಮೇಹ ರೋಗಗಳು ಕಡಿಮೆಯಾಗುತ್ತವೆ. ಇದನ್ನು ಬಹಳಷ್ಟು ಮಂದಿ ಒಂದು ಅಲಂಕಾರಿಕ ಸಸ್ಯವಾಗಿ ಬೆಳೆಸುತ್ತಾರೆ. ಇದರಲ್ಲಿ ಎರಡು ವಿಧಗಳಿವೆ. ಒಂದು ಜಾತಿಯ ಗಿಡ ಬಿಳಿ ಹೂವು ಬಿಟ್ಟರೆ ಇನ್ನೊಂದು ನಸುಗೆಂಪು ಹೂವನ್ನು ಬಿಡುತ್ತದೆ. ಆದರೆ ಅನೇಕ ಮಂದಿಗೆ ಈ ಗಿಡದಲ್ಲಿನ ಔಷಧಿ ಗುಣಗಳು ಗೊತ್ತಿಲ್ಲ. ಇನ್ನು ಈ ಗಿಡದಿಂದ ನಮಗೆ ಏನೆಲ್ಲಾ ಪ್ರಯೋಜನಗಳಿವೆ ಎಂದು ಈಗ ತಿಳಿದುಕೊಳ್ಳೋಣ..!
1. ಗಾಯಗಳು, ಹುಣ್ಣುಗಳಿಗೆ :
ಕಾಶಿಕಣಗಿಲೆ ಎಲೆಗಳು ಕೆಲವನ್ನು ತೆಗೆದುಕೊಂಡು ಚೆನ್ನಾಗಿ ಅರೆದು ಪೇಸ್ಟ್ ತರಹ ಮಾಡಿಕೊಳ್ಳಬೇಕು. ಅದನ್ನು ಗಾಯಗಳಿಗೆ, ಹುಣ್ಣುಗಳಿಗೆ ಹಚ್ಚಬೇಕು. ಇದರಿಂದ ಅವು ಕೂಡಲೇ ಕಡಿಮೆಯಾಗುತ್ತವೆ. ನಿತ್ಯ 2, 3 ಸಲ ಈ ರೀತಿ ಮಾಡಬೇಕಾಗುತ್ತದೆ.
2. ಮಧುಮೇಹ
ಕಾಶಿಕಣಗಿಲೆ ಗಿಡದ ಬೇರುಗಳನ್ನು ಸಂಗ್ರಹಿಸಿ ನೀರಿನಲ್ಲಿ ಚೆನ್ನಾಗಿ ಸ್ವಚ್ಛಗೊಳಿಸಬೇಕು. ಅವುಗಳನ್ನು ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಆ ಪುಡಿಯನ್ನು ಅರ್ಧ ಗ್ರಾಮ್ ಪ್ರಮಾಣದಲ್ಲಿ ತೆಗೆದುಕೊಂಡು ಒಂದು ಟೀಸ್ಫೂನ್ ಜೇನಿನೊಂದಿಗೆ ಬೆರೆಸಿ ಸೇವಿಸಬೇಕು. ಇದರಿಂದ ಡಯಾಬಿಟೀಸ್ ನಿವಾರಣೆಯಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ರಾತ್ರಿ ಊಟ ಮಾಡುವ ಮುನ್ನ ಎರಡು ಸಲ ತಿಂದರೆ ಮಧುಮೇಹ ಗುಣವಾಗುತ್ತದೆ. ಅದೇ ರೀತಿ ಈ ಗಿಡದ ಎಲೆಗಳನ್ನು ಅಥವಾ ಹೂವುಗಳನ್ನು ಎರಡು ಮೂರು ತೆಗೆದುಕೊಂಡು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಜಗಿದು ತಿನ್ನಬೇಕು. ಈ ರೀತಿ ತಿಂಗಳ ಕಾಲ ಮಾಡಿದರೆ ಆಗುವ ಬದಲಾವಣೆಗಳನ್ನು ನೀವೇ ಗಮನಿಸುತ್ತೀರ.
3. ಹೈಪರ್ ಟೆನ್ಷನ್, ಬಿಪಿ
ಕಾಶಿಕಣಗಿಲೆ ಎಲೆಗಳನ್ನು 5 ತೆಗೆದುಕೊಳ್ಳಬೇಕು. ಇವುಗಳನ್ನು ಚೆನ್ನಾಗಿ ತೊಳೆದು ರಸ ತೆಗೆಯಬೇಕು. ಇದನ್ನು 2 ರಿಂದ 3 ಎಂಎಲ್ ಪ್ರಮಾಣದಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ, ರಾತ್ರಿ ಮಲಗುವ ಮುನ್ನ ಕುಡಿಯಬೇಕು. ಇದರಿಂದ ಬಿಪಿ, ಹೈಪರ್ ಟೆನ್ಷನ್ ಕಡಿಮೆಯಾಗುತ್ತದೆ.
4. ಋತು ಸಮಸ್ಯೆಗಳು
ಋತು ಸಮಯದಲ್ಲಿ ಬರುವ ಸಮಸ್ಯೆಗಳಿಂದ ಉಪಶಮನ ಪಡೆಯಬೇಕೆಂದರೆ ಕಾಶಿಕಣಗಿಲೆ ಎಲೆಗಳನ್ನು 6 ರಿಂದ 8 ತೆಗೆದುಕೊಳ್ಳಬೇಕು. ಇವುಗಳನ್ನು 2 ಕಪ್ ನೀರಿನಲ್ಲಿ ಹಾಕಿ ಕುದಿಸಬೇಕು. ಚೆನ್ನಾಗಿ ಕುದಿದ ಮೇಲೆ ನೀರು ಅರ್ಧ ಕಪ್ ಆಗುತ್ತದೆ. ಆ ನೀರನ್ನು ಕುಡಿಯಬೇಕು. ಈ ರೀತಿ ತಿಂಗಳಿಗೊಮ್ಮೆ ಮಾಡಿದರೂ ಸ್ತ್ರೀಯರ ಋತು ಸಮಯದಲ್ಲಿ ತೀವ್ರ ರಸ್ತಸ್ರಾವ ಆಗದೆ ಇರುತ್ತದೆ.
5. ಮೂಗು, ಬಾಯಲ್ಲಿ ರಕ್ತಸ್ರಾವ
ಕಾಶಿಕಣಗಿಲೆ ಗಿಡದ ಹೂವುಗಳ ಮೊಗ್ಗು, ದಾಳಿಂಬೆ ಹೂವಿನ ಮೊಗ್ಗನ್ನು ಸಂಗ್ರಹಿಸಿ ಅವುಗಳಿಂದ ರಸ ತೆಗೆಯಬೇಕು. ಆ ರಸಗಳನ್ನು ಬೆರೆಸಿ ಮಿಶ್ರಣವಾಗಿ ಮಾಡಿಕೊಂಡು ಅದನ್ನು ಮೂಗಿನಲ್ಲಿ ಹಾಕಿಕೊಂಡರೆ ರಸ್ತಸ್ರಾವ ನಿಲ್ಲುತ್ತದೆ. ಬಾಯಲ್ಲಿ ಹಾಕಿಕೊಂಡರೆ ಬಾಯಿಂದ ಬರುವ ರಕ್ರಸ್ರಾವವೂ ಕಡಿಮೆಯಾಗುತ್ತದೆ. ಈ ರೀತಿ ಮಾಡುವುದರಿಂದ ಬಾಯಲ್ಲಿನ ಹುಣ್ಣು ಕಡಿಮೆಯಾಗುತ್ತದೆ.
6. ಹುಳುಗಳು ಕಡಿತಕ್ಕೆ
ಹುಳು, ಕೀಟಗಳು ಕಚ್ಚಿದಾಗ ಕೆಂಪಗೆ ದದ್ದುಗಳಾಗುತ್ತವೆ. ತುರಿಕೆ ಆಗುತ್ತದೆ. ಆದರೆ ಆ ಭಾಗದ ಮೇಲೆ ಕಾಶಿಕಣಗಿಲೆ ಎಲೆಗಳ ರಸ ಹಿಂಡಿದರೆ ಕೂಡಲೆ ಸಮಸ್ಯೆಯಿಂದ ಉಪಶಮನ ಸಿಗುತ್ತದೆ. ನೋವು, ಉರಿ, ಊತ ಕಡಿಮೆಯಾಗುತ್ತದೆ.
7.ಮೊಡವೆಗಳು, ಮಚ್ಚೆಗಳು
ಕಾಶಿಕಣಗಿಲೆ ಗಿಡದ ಎಲೆಗಳನ್ನು ಕೆಲವು ಸಂಗ್ರಹಿಸಿ ಒಣಗಿಸಬೇಕು. ಅವುಗಳನ್ನು ಪುಡಿ ಮಾಡಿಕೊಳ್ಳಬೇಕು. ಆ ಪುಡಿಗೆ ಬೇವಿನ ಪುಡಿ, ಅರಿಶಿಣ ಬೆರೆಸಬೇಕು. ಈ ಮಿಶ್ರಣವನ್ನು ನೀರಿನಲ್ಲಿ ಬೆರೆಸಿ ಮುಖಕ್ಕೆ ಇಟ್ಟುಕೊಳ್ಳಬೇಕು. ಸ್ವಲ್ಪ ಸಮಯದ ಬಳಿಕ ತೊಳೆದುಕೊಳ್ಳಬೇಕು. ಈ ರೀತಿ ನಿತ್ಯ ಮಾಡುತ್ತಿದ್ದರೆ ಮುಖದ ಮೇಲೆ ಮೊಡವೆಗಳು, ಮಚ್ಚೆಗಳು ಹೋಗಿ ಮುಖ ಕಾಂತಿಯುವಾಗಿ, ಮೃದುವಾಗಿ ಬದಲಾಗುತ್ತದೆ.
8. ಕ್ಯಾನ್ಸರ್
ಕಾಶಿಕಣಗಿಲೆ ಗಿಡದ ಎಲೆಗಳ ರಸದ ಜತೆಗೆ ಬೇರುಗಳನ್ನು ಒಣಗಿಸಿ ತಯಾರಿಸಿಕೊಂಡ ಪುಡಿಯಿಂದ ಡಿಕಾಕ್ಷನ್ ಮಾಡಿಕೊಂಡು ನಿತ್ಯ ಕುಡಿಯುತ್ತಿದ್ದರೆ ಕ್ಯಾನ್ಸರ್ ಕಡಿಮೆಯಾಗುತ್ತದೆ. ಯಾವುದೇ ರೀತಿಯ ಕ್ಯಾನ್ಸರ್ ಆದರೂ ಕಡಿಮೆ ಮಾಡುವ ಗುಣಗಳು ಇದರಲ್ಲಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಇವುಗಳಲ್ಲಿರುವ ಪವರ್‌ಫುಲ್ ಆಂಟಿ ಆಕ್ಸಿಡೆಂಟ್‍ಗಳು ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಯುತ್ತವೆ. ಇದರಿಂದ ಕ್ಯಾನ್ಸರ್ ಕಡಿಮೆಯಾಗುತ್ತದೆ.
9. ಡಿಪ್ರೆಷನ್, ಆತಂಕ
ಈ ಗಿಡದ ಎಲೆಗಳು ಅಥವಾ ಹೂವುಗಳ ರಸ ನಿತ್ಯ ತೆಗೆದುಕೊಂಡರೆ ಡಿಪ್ರೆಷನ್ ನಿವಾರಣೆಯಾಗುತ್ತದೆ. ಆತಂಕ, ಒತ್ತಡ ಕಡಿಮೆಯಾಗುತ್ತದೆ. ನಿದ್ದೆ ಚೆನ್ನಾಗಿ ಬರುತ್ತದೆ. ಮಾನಸಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ