ಭಾನುವಾರ, ಅಕ್ಟೋಬರ್ 1, 2017

ಅಲರ್ಜಿಗೆ ಕಾರಣ ಮತ್ತು ಮನೆಮದ್ದು.

ಅಲರ್ಜಿಗೆ ಕಾರಣ ಮತ್ತು ಮನೆಮದ್ದು.
 
ಅಲರ್ಜಿಯಿಂದ ಮೈಯೆಲ್ಲಾ ತುರಿಸುವುದು, ಕೆಂಪು ಗುಳ್ಳೆಗಳು ಏಳುವುದು, ಅಲರ್ಜಿ ಶೀತ, ಕೆಮ್ಮು ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಅಲರ್ಜಿ ಯಾವ ಕಾರಣದಿಂದ ಬರುತ್ತಿದೆ ಎಂದು ಹೆಚ್ಚಿನ ಬಾರಿ ತಿಳಿಯುವುದೇ ಇಲ್ಲ. ಅಲರ್ಜಿಗೆ ಕಾರಣ ಸರಿಯಾಗಿ ತಿಳಿಯದಿದ್ದರೆ ಅದಕ್ಕೆ ಚಿಕಿತ್ಸೆ ಮಾಡಿದರೂ ಅಲರ್ಜಿ ಸಮಸ್ಯೆ ಆಗಾಗ ಕಂಡು ಬರುತ್ತದೆ.
ಸಾಮಾನ್ಯವಾಗಿ ದೂಳು, ಮಾಲಿನ್ಯ, ವಿಷಕಾರಕ ಸಸ್ಯಗಳು, ಇಂಜೆಕ್ಷನ್ ಮತ್ತು ಡ್ರಗ್ಸ್ ಈ ಕಾರಣಗಳಿಂದ ಅಲರ್ಜಿ ಉಂಟಾಗುವುದು. ಕೆಲವರಿಗೆ ಅತೀ ಶಾಖ ಅಥವಾ ಅತೀ ಕಡಿಮೆ ಉಷ್ಣತೆ ಇರುವ ಸ್ಥಳಕ್ಕೆ ಹೋದಾಗ ಕೂಡ ಅಲರ್ಜಿ ಉಂಟಾಗುವುದು. ಕೆಲವೊಮ್ಮೆ ಶುಚಿಯಿಲ್ಲದ ಅಹಾರ ಸೇವನೆ , ಜೀವನ ಶೈಲಿ, ದೈಹಿಕ ಸುಸ್ತು, ಮಾನಸಿಕ ಒತ್ತಡ ಇವುಗಳು ಕೂಡ ಅಲರ್ಜಿ ಸಮಸ್ಯೆಗೆ ಒಂದು ಕಾರಣವಾಗಿದೆ. ಈ ರೀತಿ ಅಲರ್ಜಿ ಉಂಟಾದರೆ ತಲೆ ನೋವು, ಮುಖ ಮೈ ಊದಿಕೊಳ್ಳುವುದು, ಚರ್ಮದಲ್ಲಿ ಕೆಂಪು ಗುಳ್ಳೆಗಳು ಕಂಡುಬರುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ದೇಹವು ಈ ಅಲರ್ಜಿ ವಿರುದ್ಧ ಹೋರಾಡಲು ಅಸಮರ್ಥವಾಗುವುದು. ಆಹಾರ ಸಾಮಾಗ್ರಿಗಳಿಂದ ಬರುವ ಅಲರ್ಜಿಯಾದರೆ ತಕ್ಷಣ ಗ್ರಹಿಸಬಹುದು. ಏಕೆಂದರೆ ಆ ಆಹಾರ ತಿಂದ ತಕ್ಷಣ ಅಲರ್ಜಿಯ ಲಕ್ಷಣಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ಈ ಕೆಳಗಿನ ಆಹಾರಗಳು ಫುಡ್ ಅಲರ್ಜಿ ತರುತ್ತದೆ. ಹಾಗಂತ ಈ ಆಹಾರಗಳು ಎಲ್ಲಾ ವ್ಯಕ್ತಿಗಳಿಗೆ ಅಲರ್ಜಿ ತರುವುದಿಲ್ಲ, ಬರೀ ಆಹಾರದಿಂದ ತಿಂದ ಮಾತ್ರವಲ್ಲ, ಈ ಕೆಳಗಿನ ಯಾವುದಾದರೂ ಒಂದು ಕಾರಣದಿಂದ ಕೂಡ ಅಲರ್ಜಿ ಉಂಟಾಗುವುದು.
 
ಅಲರ್ಜಿಗೆ ಕಾರಣಗಳು:
ಮೊಟ್ಟೆ, ಮೀನು, ಏಡಿ, ಮೃದ್ವಂಗಿಗಳು, ವಾಲ್ ನೆಟ್, ಹಾಲು, ಗೋಧಿ, ಸೋಯಾಬೀನ್ಸ್, ಚಾಕಲೇಟ್, ಹಾಳಾದ ಆಹಾರ ಸೇವನೆ, ಮಿತಿಮೀರಿದ ಒತ್ತಡ, ಮಾನಸಿಕ ಒತ್ತಡ, ಕೀಟಗಳು, ಔಷಧಿಗಳು.
ಅಲರ್ಜಿಯ ಲಕ್ಷಣಗಳು:
ಆಗಾಗ ಕಾಡುವ ತಲೆನೋವು, ಜ್ವರ, ವಾಂತಿ, ಮೈಗ್ರೇನ್, ತಲೆಸುತ್ತು, ಖಿನ್ನತೆ, ಮೈಯೆಲ್ಲಾ ತುರಿಕೆ, ಅಸ್ತಮಾ, ಅಸ್ತಮಾ, ಉಸಿರಾಟದಲ್ಲಿ ತೊಂದರೆ ಶೀನು, ಕೆಮ್ಮು, ಶೀತ, ಮೈಯೆಲ್ಲಾ ಊದಿಕೊಳ್ಳುವುದು, ಕಣ್ಣಿನ ಸುತ್ತ ಕಪ್ಪು ವರ್ತುಲ.
ಅಲರ್ಜಿಗೆ ಮನೆ ಮದ್ದು:

1. ಗಂಧವನ್ನು ತೇಯ್ದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ, ತುರಿಕೆ ಕಂಡು ಬರುವ ಜಾಗದಲ್ಲಿ ಹಾಕಿದರೆ ತುರಿಕೆ ಕಡಿಮೆಯಾಗುವುದು.

2. ಬಾದಾಮಿಯನ್ನು ಪೇಸ್ಟ್ ರೀತಿ ಮಾಡಿ ತುರಿಕೆ ಕಂಡು ಬಂದಲ್ಲಿ ಹಚ್ಚಿದರೆ ತುರಿಕೆ ಕಡಿಮೆಯಾಗುವುದು.

3. ಪುದೀನಾ ಎಲೆಯನ್ನು ಪೇಸ್ಟ್ ಮಾಡಿ ಅದನ್ನು ಒಂದು ಗ್ಲಾಸ್ ಗೆ ಹಾಕಿ ಪಾನಕ ರೀತಿ ಮಾಡಿ ಒಂದು ಚಮಚ ಸಕ್ಕರೆ ದಿನಕ್ಕೆ ಎರಡು ಬಾರಿ ಕುಡಿದರೆ ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು.

4. ಅಲರ್ಜಿ ಬಂದು ತುಂಬಾ ತುರಿಕೆ ಉಂಟಾದರೆ ಪಪ್ಪಾಯಿ ಬೀಜವನ್ನು ಪೇಸ್ಟ್ ರೀತಿ ಮಾಡಿ ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ತುರಿಕೆ ಕಡಿಮೆಯಾಗುವುದು.
5. 3-4 ಚಮಚ ತೆಂಗಿನೆಣ್ಣೆಗೆ 2 ಚಮಚ ನಿಂಬೆ ರಸ ಹಾಕಿ ಮಿಶ್ರ ಮಾಡಿ ಹಚ್ಚಿದರೆ ಅಲರ್ಜಿಯಿಂದ ಮೈ ಕೆಂಪಾಗಿದ್ದರೆ ಅದು ಕಡಿಮೆಯಾಗುವುದು.
6. ವಿಟಮಿನ್ ಸಿ ಅಧಿಕವಿರುವ ಆಹಾರ ತಿನ್ನಬೇಕು.

7. ಎರಡು ಚಮಚ ಸೈಡರ್ ವಿನಗರ್ ಅನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುಡಿದರೆ ಅಲರ್ಜಿ ಕಡಿಮೆಯಾಗುವುದು.
8. ಐದು ಚಮಚ ಹರಳೆಣ್ಣೆಯನ್ನು ಒಂದು ಲೋಟ ಹಣ್ಣಿನ ಜ್ಯೂಸ್ ಅಥವಾ ಬರೀ ನೀರಿನಲ್ಲಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟಯಲ್ಲಿ ಕುಡಿದರೆ ಅಲರ್ಜಿ ಸಮಸ್ಯೆಯನ್ನು ಹೋಗಲಾಡಿಸಬಹುದು.
9. ಕ್ಯಾರೆಟ್, ಬೀಟ್ ರೂಟ್, ಸೌತೆಕಾಯಿ ಈ ಮೂರನ್ನು ಮಿಶ್ರ ಮಾಡಿ  ಜ್ಯೂಸ್ ತಯಾರಿಸಿ ಕುಡಿದರೆ ಅಲರ್ಜಿ ಸಮಸ್ಯೆ ಕಡಿಮೆಯಾಗುವುದು.
ಸಲಹೆ: ಈ ಮನೆಮದ್ದು ಪಾಲಿಸುವಾಗ ಅಲರ್ಜಿ ಕಾರಣವಾದ ಆಹಾರಗಳನ್ನು ತಿನ್ನಬಾರದು.

-------------------------------------------------------

ಆಯುಧಪೂಜೆ ನೆಪದಲ್ಲಿ ಬೂದಕುಂಬಳಕಾಯಿ ಒಡೆಯುವವರೇ ಇತ್ತ ಗಮನಿಸಿ!!
ಒಂದು ಬೂದಕುಂಬಳಕಾಯಿ ಒಬ್ಬ ಬುದ್ದರಿಗೆ ಸಮ!!

ಬುದ್ಧಿಶಕ್ತಿ ಹೆಚ್ಚಿಸುವ ಬೃಹತ್ ಫಲ ಬೂದುಗುಂಬಳ
(ದೇಹದ ಕೊಬ್ಬು ಕರಗಿಸುತ್ತದೆ ಈ ಕೂಷ್ಮಾಂಡ)
ಮಾಹಿತಿ ಸಂಗ್ರಹ- ಕಾದಲ್ ಸಿದ್ದಪ್ಪ, ಪತ್ರಕರ್ತ, ಮಂಡ್ಯ (ಕೃಪೆ-ಕನ್ನಡಪ್ರಭ)

ಜೀವಸಂಕುಲಗಳಲ್ಲಿ ಬುದ್ಧಿ ಇಲ್ಲದವರು ಪಶುವಿಗೆ ಸಮಾನ. ತಮ್ಮ ಮಕ್ಕಳು ಬುದ್ಧಿವಂತರಾಗಬೇಕು ಎನ್ನುವ ಆಸೆ ಯಾವ ತಂದೆ-ತಾಯಿಗಿಲ್ಲ? ಈ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದಲ್ಲಿ ವಿಶಿಷ್ಟ ಔಷಧಿಗಳಿವೆ. ಮಾರುಕಟ್ಟೆಯಲ್ಲಿ ನೆನಪಿನ ಶಕ್ತಿ ಮತ್ತು ಬುದ್ಧಿಶಕ್ತಿ ಹೆಚ್ಚಿಸುವ ಔಷಧಿಗಳಿಗೆ ಮುಗಿಬೀಳುವ ಜನ, ಮನೆಯಲ್ಲಿರುವ ದಿವ್ಯ ಔಷಧಿಗಳನ್ನೇ ಮರೆತಿದ್ದಾರೆ. ನಮ್ಮ ಮನೆಗಳಲ್ಲಿ ದಿನನಿತ್ಯ ಬಳಸುವ ಕೆಲವು ಆಹಾರ ಪದಾರ್ಥಗಳು ಬುದ್ಧಿಶಕ್ತಿಯನ್ನು ಬಲಪಡಿಸುತ್ತವೆ. ಅಂಥಹ ತರಕಾರಿಯಲ್ಲಿ ಬೂದುಗುಂಬಳಕ್ಕೆ ಅಗ್ರಸ್ಥಾನ.
ತುಪ್ಪ, ಒಂದೆಲಗದ ಸೊಪ್ಪು, ಬಜೆ, ಬೂದುಗುಂಬಳಕಾಯಿ ಮುಂತಾದವು ಬುದ್ಧಿಯನ್ನು ಪ್ರಕಾಶಿಸುತ್ತವೆ. ಕರಾವಳಿಯ ಕಡೆ ಸಾಮಾನ್ಯ ತರಕಾರಿಯಂತೆ ಪ್ರತಿ ದಿನ ಬೂದುಗುಂಬಳವನ್ನು ಬಳಸುತ್ತಾರೆ.  ಗೃಹ ಪ್ರವೇಶಗಳಲ್ಲಿ ಮನೆಗೆ ದೃಷ್ಟಿಯಾಗದಂತೆ ಮನೆ ಮುಂದೆ ಕಟ್ಟಲು, ದಸರಾ ಹಬ್ಬದಲ್ಲಿ ಬಲಿ ಕೊಡಲು, ಮದುವೆ ಮುಂಜಿಗಳಲ್ಲಿ ಸಿಹಿ ತಯಾರಿಸಲು, ದಾನ ಮಾಡಲು ಬೂದು ಗುಂಬಳಕಾಯಿ ಉಪಯೋಗ.
ಬೂದುಗುಂಬಳಕಾಯಿ ಪೋಷಕಾಂಶಗಳ ಕಣಜ. ಕಾರ್ಬೊಹೈಡ್ರೇಟ್, ಸಕ್ಕರೆ ಅಂಶ, ಫೈಬರ್, ಕೊಬ್ಬು, ಪ್ರೊಟೀನ್, ವಿಟಮಿನ್ ಎ, ಬಿ1, ಬಿ2, ಬಿ3, ಬಿ5, ಬಿ6, ಬಿ9, ಸಿ, ಕ್ಯಾಲ್ಷಿಯಂ, ಕಬ್ಬಿಣಾಂಶ, ಮೆಗ್ನೀಶಿಯಂ, ಪೊಟಾಶಿಯಂ, ಸೋಡಿಯಂ ಮತ್ತು ಜಿಂಕ್ ಅಂಶಗಳಿವೆ. ಉರಿಯೂತ, ಹಿಸ್ಟಮಿನ್ ಪ್ರತ್ಯಾಮ್ಲ, ಅಲ್ಸರ್ ಇತ್ಯಾದಿಗಳ ವಿರುದ್ಧ ಹೋರಾಡುವ ಗುಣವನ್ನು ಇದು ಹೊಂದಿದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.
ಬೂದುಗುಂಬಳಕಾಯಿಯ ಎಲೆ, ಹೂ, ಕಾಯಿ, ಬೀಜ ಹೀಗೆ ಎಲ್ಲ ಭಾಗಗಳೂ ಉಪಯೋಗಕ್ಕೆ ಬರುತ್ತವೆ. ಕುಂಬಳಕಾಯಿಯ ಉಪಯೋಗ ಅದರ ಬೆಳವಣಿಗೆಯ ಮೇಲೆ ನಿರ್ಧಾರವಾಗುತ್ತದೆ. ಕುಂಬಳಕಾಯಿ ಬೀಜಗಳನ್ನು ತಿನ್ನಬಹುದು. ಇವು ಸಹ ಪ್ರೊಟೀನ್, ಜಿಂಕ್, ವಿಟಮಿನ್, ಮ್ಯಾಂಗನೀಸ್, ಪ್ರಾಸ್ಫರಸ್ ಅಂಶಗಳನ್ನು  ಒಳಗೊಂಡಿವೆ ಮತ್ತು ಕೊಬ್ಬು ಕರಗಿಸುವ ಗುಣ ಹೊಂದಿವೆ. ಕುಂಬಳಕಾಯಿ ಬೀಜಗಳಿಂದ ಎಣ್ಣೆಯನ್ನು ತಯಾರಿಸುತ್ತಾರೆ. ಇದು ರಕ್ತನಾಳ ಮತ್ತು ನರಗಳನ್ನು ಶಕ್ತಿಗೊಳಿಸುತ್ತದೆ.
ಬೂದು ಕುಂಬಳಕಾಯಿ ವಿಶೇಷವಾಗಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರ ರಸಕ್ಕೆ ಕೆಂಪು ಕಲ್ಲುಸಕ್ಕರೆ ಹಾಕಿ ಕುಡಿದರೆ ಪಿತ್ತದೋಷ ಕಡಿಮೆಯಾಗುತ್ತದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ. ಖಾಲಿ ಹೊಟ್ಟೆಗೆ ರಸ ಕುಡಿಯುವುದರಿಂದ ವಿಶೇಷವಾಗಿ ಕರುಳಿನ ಹುಣ್ಣಿಗೆ ಉತ್ತಮ ಔಷಧಿ.
ಬೂದುಗುಂಬಳಕಾಯಿಯಲ್ಲಿ ನೀರಿನ ಅಂಶ ಹೆಚ್ಚು ಇರುವುದರಿಂದ  ಮೂತ್ರವನ್ನು ಹೆಚ್ಚಿಸುವುದರಿಂದ ಮೂತ್ರಕೋಶವನ್ನು ಶುದ್ಧಿ ಮಾಡುತ್ತದೆ. ಉರಿಮೂತ್ರ, ಮೂತ್ರಕೋಶದಲ್ಲಿ ಕಲ್ಲು, ಮೂತ್ರ ತಡೆ ಮುಂತಾದ ಮೂತ್ರ ವಿಕಾರಗಳನ್ನು ನಿವಾರಿಸುತ್ತದೆ. ದೇಹದ ತೂಕ ಇಳಿಸಿಕೊಳ್ಳಲು ಹಾಗೂ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಬೂದುಗುಂಬಳ ಬಲು ಉಪಯೋಗಿ.
ಕೊಬ್ಬರಿ ಎಣ್ಣೆಯಲ್ಲಿ ಬೂದುಗುಂಬಳಕಾಯಿ ಸಿಪ್ಪೆಯನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಕೂದಲು ಬೆಳೆಯುತ್ತದೆ. ಒಣ ಮತ್ತು ಒರಟು ತಲೆಗೆ ಮೃದುತ್ವ ನೀಡುತ್ತದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ