ನಮ್ಮ ಪರಿಸರದ ಮಾಲಿನ್ಯ ಮಾಡುವುದರಲ್ಲಿ ನಮ್ಮ ಪ್ರಾರ್ಥನಾ ಮಂದಿರಗಳದ್ದೇ ಸಿಂಹ ಪಾಲು. ಕಾಲ ಬದಲಾಗಿದೆ ಎಂದು ಹೇಳುತ್ತಾ ಹೇಳುತ್ತಾ ಆಧುನಿಕತೆಯ ತನ್ನದಾಗಿಸಿಕೊಂಡಿರುವ ಈ ಕಾಲದಲ್ಲೂ ಸಂಕುಚಿತ ಮನೋಭಾವದಿಂದ ಕೆಲವು ವಿಷಯಗಳಲ್ಲಿ ಧೋರಣೆ ಬದಲಾಗದೇ ಹಿಂಸೆಗೆ ಕಾರಣವಾಗುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಮಕ್ಕಳು ಓದು ಬರಹದಲ್ಲಿ ಕಾಲ ಕಳೆಯುವ ಹೂತ್ತಿನಲ್ಲಿ ಗ್ರಾಮದ ಗಲ್ಲಿಗಲ್ಲಿಗೆ ಇರುವ ಪ್ರಾರ್ಥನಾ ಮಂದಿರಗಳಲ್ಲಿ ಕರ್ಕಶ ಧ್ವನಿಯಲ್ಲಿ ಕಾರ್ಯಕ್ರಮ ಗಳು ಪ್ರಾರಂಭ ವಾಗುತ್ತವೆ. ಇದಕ್ಕೆ ಒಂದು ಇತಿ ಮಿತಿ ಇರುವುದಿಲ್ಲ. ಕ್ರಮ ರೀತಿ ನೀತಿಯೂ ಇರುವುದಿಲ್ಲ. ವರ್ಷದಲ್ಲಿ ವಿಶೇಷ ಪೂಜೆ, ಉಪನ್ಯಾಸ ಅಥವಾ ಧಾರ್ಮಿಕ ಆಚರಣೆ ನಿಮಿತ್ತ ಎಂದು ಹೇಳಿ ಸುಮ್ಮನಾಗ ಬಹುದು. ಆದರೆ ಖುಷಿ ಬಂದ ಹಾಗೆ ನಡೆಯುತ್ತಿರುವುದು ಅಜ್ಞಾನದ ಪರಮಾವಧಿ.
ಪ್ರಾರ್ಥನಾ ಮಂದಿರ ಸ್ಥಾಪನೆಯ ಉದ್ದೇಶ ಬಿಡುವಿನ ವೇಳೆಯಲ್ಲಿ ದೇವರ ಧ್ಯಾನ ಮಾಡಿ ಮನಸ್ಸು ಹಗುರ ಮಾಡಿಕೊಳ್ಳುವ ಒಂದು ಕೇಂದ್ರ. ಅದನ್ನೇ ಧಾರ್ಮಿಕ ಶ್ರದ್ಧಾ ಕೇಂದ್ರ ಎನ್ನುವುದು. ದೇವಸ್ಥಾನಗಳಿಗೂ ಪ್ರಾರ್ಥನಾ ಮಂದಿರಗಳಿಗೂ ವ್ಯತ್ಯಾಸ ಇದೆ. ದೇವಸ್ಥಾನ ಹಲವು ಮಾಗಣೆಗಳಿಗೆ ಒಂದು. ಅಲ್ಲಿ ಪ್ರತಿ ನಿತ್ಯ ಮೂರು ಹೂತ್ತಿನಲ್ಲಿ ಆರಾಧನೆ ನಡೆಯುತ್ತದೆ. ಆದರೆ ಪ್ರಾರ್ಥನಾ ಮಂದಿರಗಳ ಹಾಗಲ್ಲ. ಅವುಗಳ ಕಾರ್ಯಚಟುವಟಿಕೆ ಸೀಮಿತ.
ಭಕ್ತರ ಪರಿಸರದಲ್ಲಿ (residential area) ದೇವರ ಧ್ಯಾನದಲ್ಲಿ ಕಾಲಕಳೆಯಲು ಒಂದು ಅವಕಾಶ. ಅದು ಹಿಂದೂ ಧರ್ಮದ ಗುಡಿಗಳಿರಲಿ, ಮುಸ್ಲಿಮರ ಮಸೀದಿಯೇ ಆಗಿರಲಿ ಅಥವಾ ಕ್ರಿಶ್ಚನ್ನಿನವರ ಚರ್ಚ್ ಆಗಿರಲಿ ಇವೆಲ್ಲ ಪ್ರಾರ್ಥನಾ ಮಂದಿರದಗಳಿಗೆ ಹೋಗುವ ಭಕ್ತ ಪ್ರಾರ್ಥನೆ ಮಾಡಿ ದೈನಂದಿನ ಕಾರ್ಯದಲ್ಲಿ ತೊಡಗಿಕೂಳ್ಳುತ್ತಾನೆ. ಇಂತಹ ಮಂದಿರಗಳಲ್ಲಿರುವ ಅರ್ಚಕ, ಮೌಲಿ ಅಥವಾ ಫಾದರ್ ಅಲ್ಲಿ ಬಂದಿರುವ ಭಕ್ತನ ಕಷ್ಟ ಪರಿಹಾರ ಸೂಚಿಸುವ ಕ್ರಮ ಪ್ರಸಾದ ಈ ಮೊದಲಾದ ನಂಬಿಕೆಗೆ ಒತ್ತು ನೀಡುವ ವಿಚಾರವೇ ಪ್ರಧಾನ. ಹಾಗಾಗಿ ಧ್ವನಿ ವರ್ಧಕ ಬಳಸುವ ಅವಶ್ಯಕತೆ ಇರುವುದಿಲ್ಲ.
ಪ್ರಾರ್ಥನಾ ಮಂದಿರ ಸ್ಥಾಪನೆಯ ಉದ್ದೇಶ ಬಿಡುವಿನ ವೇಳೆಯಲ್ಲಿ ದೇವರ ಧ್ಯಾನ ಮಾಡಿ ಮನಸ್ಸು ಹಗುರ ಮಾಡಿಕೊಳ್ಳುವ ಒಂದು ಕೇಂದ್ರ. ಅದನ್ನೇ ಧಾರ್ಮಿಕ ಶ್ರದ್ಧಾ ಕೇಂದ್ರ ಎನ್ನುವುದು. ದೇವಸ್ಥಾನಗಳಿಗೂ ಪ್ರಾರ್ಥನಾ ಮಂದಿರಗಳಿಗೂ ವ್ಯತ್ಯಾಸ ಇದೆ. ದೇವಸ್ಥಾನ ಹಲವು ಮಾಗಣೆಗಳಿಗೆ ಒಂದು. ಅಲ್ಲಿ ಪ್ರತಿ ನಿತ್ಯ ಮೂರು ಹೂತ್ತಿನಲ್ಲಿ ಆರಾಧನೆ ನಡೆಯುತ್ತದೆ. ಆದರೆ ಪ್ರಾರ್ಥನಾ ಮಂದಿರಗಳ ಹಾಗಲ್ಲ. ಅವುಗಳ ಕಾರ್ಯಚಟುವಟಿಕೆ ಸೀಮಿತ.
ಭಕ್ತರ ಪರಿಸರದಲ್ಲಿ (residential area) ದೇವರ ಧ್ಯಾನದಲ್ಲಿ ಕಾಲಕಳೆಯಲು ಒಂದು ಅವಕಾಶ. ಅದು ಹಿಂದೂ ಧರ್ಮದ ಗುಡಿಗಳಿರಲಿ, ಮುಸ್ಲಿಮರ ಮಸೀದಿಯೇ ಆಗಿರಲಿ ಅಥವಾ ಕ್ರಿಶ್ಚನ್ನಿನವರ ಚರ್ಚ್ ಆಗಿರಲಿ ಇವೆಲ್ಲ ಪ್ರಾರ್ಥನಾ ಮಂದಿರದಗಳಿಗೆ ಹೋಗುವ ಭಕ್ತ ಪ್ರಾರ್ಥನೆ ಮಾಡಿ ದೈನಂದಿನ ಕಾರ್ಯದಲ್ಲಿ ತೊಡಗಿಕೂಳ್ಳುತ್ತಾನೆ. ಇಂತಹ ಮಂದಿರಗಳಲ್ಲಿರುವ ಅರ್ಚಕ, ಮೌಲಿ ಅಥವಾ ಫಾದರ್ ಅಲ್ಲಿ ಬಂದಿರುವ ಭಕ್ತನ ಕಷ್ಟ ಪರಿಹಾರ ಸೂಚಿಸುವ ಕ್ರಮ ಪ್ರಸಾದ ಈ ಮೊದಲಾದ ನಂಬಿಕೆಗೆ ಒತ್ತು ನೀಡುವ ವಿಚಾರವೇ ಪ್ರಧಾನ. ಹಾಗಾಗಿ ಧ್ವನಿ ವರ್ಧಕ ಬಳಸುವ ಅವಶ್ಯಕತೆ ಇರುವುದಿಲ್ಲ.
ಮುಸ್ಲಿಮರ ಪ್ರಾರ್ಥನಾ ಮಂದಿರಗಳಾದ ಮಸೀದಿಗಳಲ್ಲಿ ಬಾಂಕ ಕೂಗುವ ಕ್ರಮ ಇದೆ. ಅದಕ್ಕೆ ಧ್ವನಿ ವರ್ಧಕ ಬಳಸುತ್ತಾರೆ. ಅದಕ್ಕೆ ಕೊಡುವ ವಾಲ್ಯುಂ ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಕೇಳುವಂತಿರುತ್ತದೆ. ಇದು ಅಗತ್ಯವಿದೆಯಾ? ಈಗೀಗ ಮಕ್ಕಳಿಗೆ ಮಾಡುವ ಪಾಠವೂ ಧ್ವನಿವರ್ಧಕದ ಮೂಲಕವೇ ನಡೆಯುತ್ತಿದೆ. ಅವರು ಮಾಡುವ ಪಾಠ ಊರವರಿಗೆ ಕೇಳುವ ಅಗತ್ಯವಿದೆಯಾ? ಧಾರ್ಮಿಕ ಆಚರಣೆಗಳು ಆಯಾಯ ಮತದಾರರಿಗೆ ಮಾತ್ರ ಕೇಳಲು ಆಚರಿಸಲು ಇರುವುದೇ ವಿನಹಃ ಅನ್ಯಮತೀಯರಿಗೆ ಅದು ಸಹ್ಯವಲ್ಲ. ಈ ದೃಷ್ಟಿಯಿಂದ ನೋಡಿದರೂ ಸಾರ್ವಜನಿಕರ ಕಿವುಡುಗಚ್ಚವ ರೀತಿಯಲ್ಲಿ ಧ್ವನಿವರ್ಧಕದ ಬಳಕೆ ಅಗತ್ಯವಿಲ್ಲ.
ಅದೂ ಅಲ್ಲದೇ ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ 10-20 ಜನರನ್ನು ಮುಂದೆ ಕೂರಿಸಿ ಕೊಂಡು ಊರವರಿಗೆ ಹರ್ಟ್ ಆಗುವ ರೀತಿಯಲ್ಲಿ ಧ್ವನಿವರ್ಧಕ ರಾತ್ರಿ 11 ಘಂಟೆಯ ಬಳಸುವುದೂ ಇದೆ. ಈ ಕ್ರಮ ಪ್ರತಿ ದಿನ ಮಸೀದಿ ಬದಲಾಯಿಸಿ ಮಾಡುವ ಕ್ರಮದಿಂದಾಗಿ ಮುಸ್ಲಿಮರ ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ನೆಮ್ಮದಿ ಹಾಳುಗೆಡವುತ್ತಿದೆ.
ಅದೂ ಅಲ್ಲದೇ ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ 10-20 ಜನರನ್ನು ಮುಂದೆ ಕೂರಿಸಿ ಕೊಂಡು ಊರವರಿಗೆ ಹರ್ಟ್ ಆಗುವ ರೀತಿಯಲ್ಲಿ ಧ್ವನಿವರ್ಧಕ ರಾತ್ರಿ 11 ಘಂಟೆಯ ಬಳಸುವುದೂ ಇದೆ. ಈ ಕ್ರಮ ಪ್ರತಿ ದಿನ ಮಸೀದಿ ಬದಲಾಯಿಸಿ ಮಾಡುವ ಕ್ರಮದಿಂದಾಗಿ ಮುಸ್ಲಿಮರ ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ನೆಮ್ಮದಿ ಹಾಳುಗೆಡವುತ್ತಿದೆ.
ಈ ಎಲ್ಲಾ ವಾಸ್ತವತೆಯನ್ನು ಅರಿತು ಪ್ರಾರ್ಥನಾ ಮಂದಿರಗಳು ( ಯಾವುದೇ ಜಾತಿ ಮತ ಧರ್ಮ ಭೇದವಿಲ್ಲದೆ ) ಕೇವಲ ಪ್ರಾರ್ಥನಾ ಮಂದಿರಗಳಾಗಿಯೇ ಕಾರ್ಯ ನಿರ್ವಹಿಸುವಂತಾಗಲಿ. ಅವರವರ ಧರ್ಮ ಅವರವರು ಆಚರಣೆ ಅವರವರ ಮನೆಯಲ್ಲಿಯೇ ಮಾಡುವಂತಾಗಲಿ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ವಸತಿ ಗೃಹ ಪ್ರದೇಶದಲ್ಲಿ
ಇತ್ತೀಚೆಗೆ ಹುಟ್ಟಿ ಬೆಳೆದಿರುವ ಮತ್ತು ಮುಂದೆ ಹುಟ್ಟುವ ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿವರ್ಧಕದ ಬಳಕೆಯನ್ನು ನಿಷೇಧಿಸುವ ಅಗತ್ಯವಿದೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ವಸತಿ ಗೃಹ ಪ್ರದೇಶದಲ್ಲಿ
ಇತ್ತೀಚೆಗೆ ಹುಟ್ಟಿ ಬೆಳೆದಿರುವ ಮತ್ತು ಮುಂದೆ ಹುಟ್ಟುವ ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿವರ್ಧಕದ ಬಳಕೆಯನ್ನು ನಿಷೇಧಿಸುವ ಅಗತ್ಯವಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ