ವಿಪ್ರ ಭಾಂದವರೇ ಗಮನಿಸಿ
"ನಾಳೆ ಚಂಪನ ವಿರುದ್ಧ ಮೈಸೂರಿನಲ್ಲಿ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಪ್ರತಿಭಟನೆ"
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ
ಹಿಂದೂ ವಿರೋಧಿ ಬ್ರಹ್ಮದ್ವೇಷಿ ಚಂಪನನ್ನು ಅಧ್ಯಕ್ಷನಾಗಿ ನೇಮಕ ಮಾಡಿರುವುದನ್ನು ಖಂಡಿಸಿ ಹಾಗೂ ಸಾಂಸ್ಕೃತಿಕ ರಾಜಧಾನಿಗೆ ಮನೋರೋಗಿ ಚಂಪಾ ಕಾಲಿಡಬಾರದೇಂದು ರಾಜ್ಯಸರ್ಕಾರಕ್ಕೆ ಆಗ್ರಹಿಸಿ
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ನಾಳೆ ಬೆಳಗ್ಗೆ 10ಘಂಟೆಗೆ ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದು ವಿಪ್ರಭಾಂದವರು ಭಾಗವಹಿಸಬೇಕೆಂದು ವಿನಂತಿ.
ಈ ಸಂದೇಶವನ್ನು ಎಲ್ಲಾ ಬ್ರಾಹ್ಮಣ ವಾಟ್ಸಪ್ ಗ್ರೂಪಿಗೆ ರವಾನಿಸಿ
ಜೈ ಬ್ರಾಹ್ಮಣ ಯುವ ಶಕ್ತಿ
೧೫ಹದಿನೈದು ಕರಿಬೇವಿನ ಎಲೆ ಚಿಟಿಕೆ ಜೀರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿ ನಿಮ್ಮ ತೂಕ ಇಳಿಯುತ್ತದೆ
ರಾತ್ರಿ ಕೆಟ್ಟ ಕನಸು ಬೀಳಬಾರದು ಎಂದರೆ ಏನು ಮಾಡಬೇಕು ಗೊತ್ತಾ..?
ಜಗತ್ತೆಲ್ಲಾ ಇಂದು ಬಹಳ ವೇಗವಾಗಿ ಮುಂದೆ ಸಾಗುತ್ತಿದೆ. ಹಾಗಾಗಿ ನಮಗೆ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಲು ದಿನಕ್ಕೆ 24 ಗಂಟೆಗಳ ಸಮಯ ಸಾಕಾಗುತ್ತಿಲ್ಲ. ಅಷ್ಟು ಬಿಝಿಯಾಗಿ ನಾವು ಕೆಲಸ ಮಾಡಿಕೊಳ್ಳುತ್ತಿದ್ದೇವೆ. ಆ ರೀತಿ ಬಿಝಿ ಆಗಿ ನಿದ್ದೆಯನ್ನೂ ಸರಿಯಾಗಿ ಮಾಡಲಾಗುತ್ತಿಲ್ಲ. ನಿತ್ಯ ಕನ್ನಿಷ್ಟ 8 ಗಂಟೆಗಳ ಅಲ್ಲ, 6 ಗಂಟೆ ಸಹ ಗುಣಮಟ್ಟದಿಂದ ಕೂಡಿದ ನಿದ್ದೆ ಮಾಡಲಾಗುತ್ತಿಲ್ಲ. ಕೆಲಸದ ಒತ್ತಡ, ಅನಾರೋಗ್ಯ ಸಮಸ್ಯೆಗಳ ಕಾರಣ ಬಹಳಷ್ಟು ಮಂದಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಪ್ರತಿಫಲವಾಗಿ ಅದು ಲೈಫ್ಸ್ಟೈಲ್ ಖಾಯಿಲೆಗಳಿಗೆ ಕಾರಣವಾಗುತ್ತಿದೆ. ಆದರೆ ಕೆಳಗೆ ನಾವು ಕೊಟ್ಟಂತಹ ಸೂಚನೆಗಳನ್ನು ಪಾಲಿಸಿದರೆ ನಿದ್ದೆಯನ್ನು ಚೆನ್ನಾಗಿ ಮಾಡಬಹುದು. ಆ ಸೂಚನೆಗಳು ಏನು ಎಂದು ಈಗ ತಿಳಿದುಕೊಳ್ಳೋಣ.
1. ಏಲಕ್ಕಿ
ಸ್ವಲ್ಪ ಏಲಕ್ಕಿ ತೆಗೆದುಕೊಂಡು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಆ ವಸ್ತ್ರವನ್ನು ನಿಮ್ಮ ದಿಂಬಿನ ಪಕ್ಕದಲ್ಲಿ ಇಟ್ಟುಕೊಳ್ಳಿ. ಇದರಿಂದ ನಿದ್ದೆ ಚೆನ್ನಾಗಿ ಬರುತ್ತದೆ. ಹಾಸಿಗೆಗೆ ಹೊರಳಿದ ಕೂಡಲೆ ನಿದ್ದೆಗೆ ಜಾರುತ್ತೀರ. ಅಷ್ಟೇ ಅಲ್ಲ ಈ ರೀತಿ ಮಾಡುವುದರಿಂದ ಕೆಟ್ಟ ಕನಸುಗಳು ಬೀಳಲ್ಲ. ಬಹಳ ಹಾಯಾಗಿ ನಿದ್ರಿಸಬಹುದು.
ಕೆಟ್ಟ ಕನಸುಗಳು ನಿದ್ರೆಯ ಸುಖ ಹಾಳು ಮಾಡುತ್ತಿವೆಯೇ.... ಹೀಗೆ ಮಾಡಿ
7 days ago
ಕೆಲವೊಮ್ಮೆ ನಿದ್ರೆ ಮಾಡುವ ಸಮಯದಲ್ಲಿ ಜನರಿಗೆ ವಿಚಿತ್ರ ಅನುಭವವಾಗುತ್ತದೆ. ಇದರಿಂದ ಅರ್ಧದಲ್ಲೆ ಅವರ ನಿದ್ರೆ ಭಂಗವಾಗುತ್ತದೆ. ಕೆಲವು ಜನರಿಗೆ ಇದು ಯಾವಾಗಲೂ ಚಿಂತೆಗೀಡು ಮಾಡುವ ವಿಷಯವಾಗಿದೆ. ಇಂತಹ ಸಮಸ್ಯೆ ಬಾರದಿರಲು ನೀವು ವಾಸ್ತು ಶಾಸ್ತ್ರವನ್ನು ಅನುಸರಿಸಬೇಕು. ಆವಾಗ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯ.
ಸಣ್ಣ ಏಲಕ್ಕಿ :
ರಾತ್ರಿ ನಿದ್ರೆ ಮಾಡುವ ಸಮಯದಲ್ಲಿ ನಿಮಗೆ ಭಯವಾದರೆ ಅಥವಾ ಸಡನ್ ಆಗಿ ಹೆದರಿಕೆಯಾಗಿ ಎಚ್ಚರವಾಗದಿರಲು 5-6 ಏಲಕ್ಕಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ದಿಂಬಿನ ಕೆಳಗೆ ಅಥವಾ ಹತ್ತಿರ ಇಡಿ.
ನೀರು ತುಂಬಿದ ತಾಮ್ರದ ಪಾತ್ರೆ :
ನಿದ್ರೆಯಲ್ಲಿ ಭಯವಾದರೆ ಅಥವಾ ಮತ್ತೆ ಮತ್ತೆ ನಿದ್ರೆಯಿಂದ ಎಚ್ಚರವಾಗುತ್ತಿದ್ದರೆ, ಒಂದು ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಸಿ ಬೆಡ್ನ ಬಳಿ ಇರಿ. ಬೆಳಗ್ಗೆ ಎದ್ದು ಆ ನೀರನ್ನು ಗಿಡಗಳಿಗೆ ಹಾಕಿ.
ದಿಂಬಿನ ಬಳಿ ಚಾಕು ಇಡಿ :
ವಾಸ್ತು ಅನುಸಾರ ಮಕ್ಕಳಿಗೆ ನಿದ್ರೆ ಮಾಡುವಾಗ ಹಲವಾರು ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದುದರಿಂದ ಮಲಗುವ ದಿಂಬಿನ ಕೆಳಗೆ ಚಾಕು ಇಟ್ಟು ಬಿಡಿ.
ಶಾರ್ಪ್ ವಸ್ತುಗಳು :
ಚಾಕು ಅಥವಾ ಯಾವುದಾದರು ಶಾರ್ಪ್ ವಸ್ತುಗಳು ಅಂದರೆ ಕನ್ನಡಿ, ನೇಲ್ಕಟರ್, ಮುಳ್ಳು ಮೊದಲಾದ ವಸ್ತುಗಳನ್ನು ದಿಂಬಿನ ಕೆಳಗೆ ಇಟ್ಟು ಮಲಗೋದರಿಂದ ರಾತ್ರಿ ಹೊತ್ತು ಭಯವಾಗೋದಿಲ್ಲ.
ಹಳದಿ ಅಕ್ಕಿ :
ಹಳದಿ ಅಕ್ಕಿಯ ಸಹಾಯದಿಂದ ನೀವು ಭಯ ಹಾಗೂ ಕೆಟ್ಟ ಕನಸು ಬೀಳೋದನ್ನು ದೂರ ಮಾಡಬಹುದು. ದಿಂಬಿನ ಅಡಿಯಲ್ಲಿ ಕಾಗದ ಅಥವಾ ಬಟ್ಟೆಯಲ್ಲಿ ಸ್ವಲ್ಪ ಹಳದಿ ಅಕ್ಕಿಯನ್ನು ಕಟ್ಟಿ ಇಡಿ.
ಪದೇ ಪದೆ ಸೀನು ಬರುವುದು, ಮೂಗಿನಿಂದ ನೀರು ಸೋರುವುದು, ಶೀತ, ಕಣ್ಣುಗಳು ಕೆಂಪಾಗುವುದು, ಮುಖ ಸ್ವಲ್ಪ ಊದಿಕೊಳ್ಳುವುದು, ಚರ್ಮದ ತುರಿಕೆ, ಚರ್ಮ ದದ್ದು ಬರುವುದು, ಗಂಟಲು ಕರಕರ, ಉಸಿರಾಟದಲ್ಲಿ ಅಡಚಣೆ, ಆಯಾಸ, ಶಬ್ದದಲ್ಲಿ ಏರುಪೇರು ಅಂಥ ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ಇರುವ ಕಾರಣವನ್ನು ಅಲರ್ಜಿ ಅಂತ ಕರೆಯುತ್ತಾರೆ. ಅಲರ್ಜಿ ಎನ್ನುವುದು ಮಾನವನ ಶರೀರದ ರೋಗನಿರೋಧಕ ವ್ಯವಸ್ಥೆಗೆ ಸಂಬಂಧಪಟ್ಟ ಪ್ರತಿಕ್ರಿಯೆ. ಉದಾ:ಹೂವುಗಳ ಪರಾಗ ಕಣಗಳು, ಧೂಳು, ಹೊಗೆ, ಕೆಲವು ಆಹಾರ ಪದಾರ್ಥಗಳು (ಹಾಲು, ಮೊಟ್ಟೆ, ಸೋಯಾ, ಮೀನು), ಕೆಲವು ರೀತಿಯ ಔಷಧಗಳು (ಆ್ಯಂಟಿಬಯಾಟಿಕ್ಸ್, ಬಿ.ಪಿ ಮಾತ್ರೆ ಸೇವನೆ), ಇಲ್ಲವೇ ಇತರ ಸರಿ ಹೊಂದದ ಪದಾರ್ಥಗಳನ್ನು ಮುಟ್ಟುವುದರಿಂದ, ಜಂತುಗಳ ಸ್ಪರ್ಶ, ವಾತಾವರಣದಲ್ಲಿ ಬದಲಾವಣೆಯಿಂದ ನಮ್ಮ ಶರೀರದೊಳಗೆ ಅತಿಯಾದ ಪ್ರತಿಕ್ರಿಯೆ ಪ್ರಾರಂಭವಾಗುವುದನ್ನು ಅಲರ್ಜಿ ಅಂತ ಕರೆಯುತ್ತಾರೆ.
ಅಲರ್ಜಿ ಉಂಟು ಮಾಡುವ ಪದಾರ್ಥವನ್ನು ಅಲರ್ಜಿಟಿಕ್ ಅಂತ ಕರೆಯುತ್ತಾರೆ ಮತ್ತು ಅಲರ್ಜಿಗೆ ಕಾರಣವಾದ ಪ್ರತಿಕ್ರಿಯೆನ್ನು ಅಲರ್ಜಿಕ್ ರಿಯಾಕ್ಷನ್ ಅಂತ ಕರೆಯುತ್ತಾರೆ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರಗಳ ಜತೆಗೆ ಒಳಗಡೆ ಪ್ರವೇಶಿಸುವ ಎಷ್ಟೋ ಕ್ರಿಮಿಕೀಟಗಳ ವಿರುದ್ಧ ಬಿಳಿ ರಕ್ತ ಕಣಗಳು ತೀವ್ರವಾಗಿ ಹೋರಾಡಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. ಇಂಥ ಹಾನಿಯನ್ನು ಉಂಟು ಮಾಡುವ ಪದಾರ್ಥಗಳಿಗೆ ನಮ್ಮ ಶರೀರ ತೀವ್ರ ಪ್ರತಿಕ್ರಿಯೆ ನೀಡುವುದನ್ನು 'ಹೈಪರ್ ಸೆನ್ಸಿಟಿವಿಟಿ' ಅಥವಾ 'ಅಲರ್ಜಿ' ಎಂದು ಕರೆಯುತ್ತಾರೆ.
ಅಲರ್ಜಿಯಲ್ಲಿ ವಿವಿಧ ರೀತಿಗಳು: ಶ್ವಾಸಕೋಶದ ಅಲರ್ಜಿ: ಸುತ್ತಮುತ್ತಲಿನ ವಾತಾವರಣದಲ್ಲಿರುವ ಹೊಗೆ, ಧೂಳಿನಿಂದ ಸೀನು ಬರುವುದು ಸಹಜ. ಆದರೆ ಅಲರ್ಜಿಯಿಂದ ಬಳಲುತ್ತಿರುವವರಿಗೆ ಪದೇ ಪದೆ ಸೀನು ಬರುವುದು, ಮೂಗಿನಿಂದ ನೀರು ಬರುವುದು, ಕಣ್ಣುಗಳು ಕೆಂಪಾಗಿ ಕಣ್ಣೀರು ಬರುತ್ತದೆ. 'ಅಲರ್ಜಿಕ್ ರೈನಸೈಟಿಸ್' ಅಂತ ಕರೆಸಿಕೊಳ್ಳುವ ಈ ಸಮಸ್ಯೆಯನ್ನು ಕಡೆಗಣಿಸಿದರೆ ಮೂಗು ಕಟ್ಟುವುದು, ಉಸಿರಾಟಕ್ಕೆ ತೊಂದರೆ, ಕಫ ಬರುವುದು, ಮುಖದ ಒಳಗಡೆ ನೋವು, ತಲೆನೋವು ಮೊದಲಾದ ಸಮಸ್ಯೆಗಳು ಬರುತ್ತವೆ. ಇದು ತೀವ್ರವಾದರೆ 'ಅಲರ್ಜಿಕ್ ಸೈನಸೈಟಿಸ್' ಅಂತ ಕರೆಯುತ್ತಾರೆ. ಇದೇ ರೀತಿಯ ವ್ಯಾಧಿ ಶ್ವಾಸಕೋಶದ ಒಳಗಡೆ ಸೇರಿಕೊಂಡು, ಉಸಿರಾಟಕ್ಕೆ ತೊಂದರೆಯನ್ನು ಉಂಟು ಮಾಡಿ ಕಫದ ಜತೆಗೆ ಕೆಮ್ಮು ಪ್ರಾರಂಭವಾಗುತ್ತದೆ. ವೈದ್ಯ ಭಾಷೆಯಲ್ಲಿ ಇದನ್ನು 'ಅಲರ್ಜಿಕ್ ಬ್ರಾಂಕೈಟಿಸ್' ಅಂತ ಕರೆಯುತ್ತಾರೆ. ಈ ಸಂದರ್ಭದಲ್ಲಿ ಆಯಾಸ, ನಿಶ್ಶಕ್ತಿ ಕೂಡ ಸೇರಿಕೊಂಡರೆ ಅದನ್ನು 'ಅಲರ್ಜಿಕ್ ಅಸ್ತಮಾ' ಅಂತ ಕರೆಯುತ್ತಾರೆ.
ಸೈನಸ್ ಕಾಣಿಸಿಕೊಂಡರೆ ತುಂಬಾ ಕಿರಿಕಿರಿಯಾಗುವುದು. ದೂಳು, ಬೆಕ್ಕಿನ ಅಥವಾ ನಾಯಿಯ ರೋಮ, ಕೆಲವು ಕ್ರಿಮಿಗಳಿಂದ ಈ ರೀತಿಯ ಮೂಗಿನ ಅಲರ್ಜಿ ಉಂಟಾಗುವುದು. ಸೀನು, ಮೂಗು ಕಟ್ಟುವುದು ಮತ್ತು ಮೂಗಿನಲ್ಲಿ ದ್ರವ ಸ್ರವಿಸುವುದು ಹಾಗೂ ಸೈನಸ್ ತಲೆನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ಸಮಸ್ಯೆ ಕಂಡುಬಂದರೆ ಈ ಕೆಳಗಿನ ಮನೆಮದ್ದಿನ ಮೂಲಕ ನಿವಾರಿಸಬಹುದು.
ಸೈನಸ್ ಗೆ ಮನೆಮದ್ದು:
ಆಪಲ್ ಸೈಡರ್ ವಿನಿಗರ್: ಆಪಲ್ ಸೈಡರ್ ವಿನಿಗರ್ ಸೈನಸ್ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾದ ಮನೆ ಔಷಧಿಯಾಗಿದೆ. ಶೀತ, ಮೂಗು ತುರಿಸುವುದು ಮುಂತಾದ ಲಕ್ಷಣಗಳು ಕಾಣಿಸಿಕೊಂಡಾಗ ಇದನ್ನು ಟಾನಿಕ್ ರೀತಿ ತೆಗೆದುಕೊಂಡರೆ ಅಲರ್ಜಿ ಹೆಚ್ಚಾಗುವುದಿಲ್ಲ, ಇದರಿಂದ ಸೈನಸ್ ಸಮಸ್ಯೆ ನಿವಾರಣೆಯಾಗುವುದು. ವಿನಿಗರ್ ಅನ್ನು ಈ ರೀತಿ ಸೇವಿಸಿ:
* ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ವಿನಿಗರ್ ಹಾಕಿ ಪ್ರತಿನಿತ್ಯ ಕುಡಿದರೆ ಒಳ್ಳೆಯದು.
* ಒಂದು ಚಮಚ ವಿನಿಗರ್ ಅನ್ನು ಸಲಾಡ್ ಜೊತೆ ಹಾಕಿ ಬೇಕಾದರೆ ತಿನ್ನಬಹುದು.
ಅಲ್ಲದೆ ಈ ಕೆಳಗಿನ ವಿಧಾನಗಳನ್ನು ಕೂಡ ಬಳಸಬಹುದು:
* ಜೀರಿಗೆ: ಕಪ್ಪು ಜೀರಿಗೆಯನ್ನು ತೆಳುಬಟ್ಟೆಗೆ ಹಾಕಿ ಕಟ್ಟಿ ಅದನ್ನು ಮೂಗಿನ ಬಳಿ ಇಟ್ಟುಕೊಂಡು ಜೋರಾಗಿ ಉಸಿರಾಡಿದರೆ ಉಸಿರಾಟ ಮುಕ್ತವಾಗುತ್ತದೆ.
* ನೀಲಗಿರಿ ತೈಲ: ಬಿಸಿ ನೀರಿಗೆ ಕೆಲವು ಹನಿ ನೀಲಗಿರಿ ತೈಲ ಹಾಕಿ ಅದರ ಆವಿಯನ್ನು ತೆಗೆದುಕೊಂಡರೆ ಸೈನಸ್ ನಿಂದ ರಿಲೀಫ್ ನೀಡುತ್ತೆ.
* ಆಲಿವ್ ಎಣ್ಣೆ: ಮೂಗು ಕಟ್ಟಿದಂತಿದ್ದರೆ ನಿಮ್ಮ ಮೂಗಿನ ಮತ್ತು ಕಣ್ಣಿನ ಸುತ್ತ ಆಲಿವ್ ಎಣ್ಣೆ ಹಚ್ಚಿಕೊಳ್ಳಿ.
* ಈರುಳ್ಳಿ, ಬೆಳ್ಳುಳ್ಳಿ: ಸೈನಸ್ ಸಮಸ್ಯೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ತುಂಬಾ ಪರಿಣಾಮಕಾರಿ ಎನ್ನಲಾಗಿದೆ. ನಿಮ್ಮ ಆಹಾರದಲ್ಲಿ ಇವುಗಳನ್ನು ಹೆಚ್ಚು ಬಳಸಿದರೆ ಉತ್ತಮ.
* ಕ್ಯಾರೆಟ್: ಕ್ಯಾರೆಟ್ ಜ್ಯೂಸ್ ಸೇವನೆ ಸೈನಸ್ ಕಡಿಮೆಗೊಳಿಸುತ್ತದೆ ಎನ್ನಲಾಗಿದೆ.
* ಮೆಂತ್ಯೆ ಕಾಳು: ಮೆಂತ್ಯೆ ಕಾಳು ಕೂಡ ಸೈನಸ್ ಸಮಸ್ಯೆಗೆ ಪರಿಹಾರ ನೀಡಬಲ್ಲದು. ಒಂದು ಚಮಚ ಮೆಂತ್ಯೆಯನ್ನು 250 ಮಿಲಿ ನೀರಿನೊಂದಿಗೆ ಬೆರೆಸಿ ಅದು ಅರ್ಧವಾಗುವವರೆಗೂ ಕುದಿಸಿ ಸೇವಿಸಿದರೆ ಒಳ್ಳೆಯದು. ಇದು ಸೈನಸ್ ನಿಂದ ತಗುಲುವ ಜ್ವರಕ್ಕೂ ಪರಿಹಾರ ನೀಡಿ, ದೇಹದಿಂದ ವಿಷಕಾರಿ ಅಂಶವನ್ನು ತೊಲಗಿಸುತ್ತದೆ.
ತಲೆ ನೋವು ಬರಲು ಕಾರಣ ಒಂದೇ ಇರಬೇಕಿಲ್ಲ. ಒತ್ತಡ ಹೆಚ್ಚಾದರೆ, ಕೆಲಸ ಜಾಸ್ತಿಯಾದರೆ, ಸರಿಯಾಗಿ ತಿನ್ನದಿದ್ದರೆ ಹೀಗೆ ಹಲವಾರು ಕಾರಣಕ್ಕೆ ಸಹಿಸಲಾರದಷ್ಟು ತಲೆ ನೋವು ಬಂದುಬಿಡುತ್ತೆ. ಆಗ ನೀವು ಹುಡುಕುವ ಮಾರ್ಗ ಯಾವುದು? ಮಾತ್ರೆ.
ಮಾತ್ರೆ ನುಂಗುವುದು ಹಲವು ಅಡ್ಡ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೂ ಬೇರೆ ವಿಧಿಯಿಲ್ಲದೆ ಮಾತ್ರೆಗಳನ್ನು ನುಂಗುವುದು ರೂಢಿ. ಅದಕ್ಕೆಂದೇ ತಲೆ ನೋವಿಗೆ ಇಲ್ಲಿ ಕೆಲವು ನೈಸರ್ಗಿಕ ಟಿಪ್ಸ್ ಗಳನ್ನು ನೀಡಲಾಗಿದೆ.
ತಲೆ ನೋವಿಗೆ ನೈಸರ್ಗಿಕ ಮಾರ್ಗ ಏಕೆ ಅನುಸರಿಸಬೇಕು?
* ನೈಸರ್ಗಿಕ ವಿಧಾನವನ್ನು ಅನುಸರಿಸುವುದರಿಂದ ದೇಹದಲ್ಲಿ ಕೆಮಿಕಲ್ ಉಳಿದುಕೊಳ್ಳುವುದಿಲ್ಲ. ಅಂದರೆ ಪ್ಯಾರಾಸೆಟಮೊಲ್ ಅಥವಾ ಆಸ್ಪಿರಿನ್ ಅಂಶ ಉಳಿಯುವುದಿಲ್ಲ. ಇದರಿಂದ ಅಡ್ಡ ಪರಿಣಾಮವೂ ಉಂಟಾಗುವುದಿಲ್ಲ.
* ತುಂಬಾ ಸುಲಭವಾಗಿ ಅನುಸರಿಸಬಹುದಾದ ಈ ವಿಧಾನದಿಂದ ಬೇಗನೆ ನೋವಿಗೆ ಉಪಶಮನ ಕಂಡುಕೊಳ್ಳಬಹುದು.
ತಲೆ ನೋವಿಗೆ ಮನೆ ಔಷಧಿ ಯಾವುದು?
* ಮಸಾಲಾ ಟೀ ಕುಡಿಯಿರಿ: ತಲೆ ನೋವು ಕಾಣಿಸಿಕೊಂಡ ತಕ್ಷಣ ಮಸಾಲಾ ಟೀ ಸೇವಿಸಿದರೆ ರಿಲ್ಯಾಕ್ಸ್ ಆಗುತ್ತದೆ. ಮಸಾಲೆ ಟೀ ತಲೆ ನೋವು ಹೋಗಿಸುವಲ್ಲಿ ಹೆಚ್ಚು ಪರಿಣಾಮಕಾರಿ. ಇದು ಮೆದುಳಿನ ನರವನ್ನು ಚುರುಕುಗೊಳಿಸಿ ನೋವನ್ನು ಹೋಗಲಾಡಿಸುತ್ತದೆ. ಟೀನಲ್ಲಿ ಶುಂಠಿ, ಲವಂಗ ಮತ್ತು ಏಲಕ್ಕಿ ಇರಬೇಕು. ಆದರೆ ಟೀ ಕುಡಿಯುವುದನ್ನೇ ಚಟ ಮಾಡಿಕೊಂಡು ಟೀ ಸಿಗದಿದ್ದ ಪಕ್ಷದಲ್ಲಿ ತಲೆ ನೋವು ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಈ ಸಲಹೆ ಅನ್ವಯಿಸುವುದಿಲ್ಲ.
* ಬಿಸಿ ಎಣ್ಣೆ ಮಸಾಜ್: ಅತಿಯಾದ ಒತ್ತಡದಿಂದ ತಲೆ ನೋವು ಉಂಟಾಗಿದ್ದರೆ ಎಣ್ಣೆ ಮಸಾಜ್ ಗಿಂತ ಬೇರೆ ಪರಿಹಾರವಿಲ್ಲ. ಯಾವುದಾದರೂ ಗಿಡಮೂಲಿಕೆಯ ಎಣ್ಣೆಯನ್ನು (ನೀಲಗಿರಿ ಎಣ್ಣೆ) ಬೆಚ್ಚಗೆ ಮಾಡಿ ಬೆರಳಿನ ಸಹಾಯದಿಂದ ತಲೆಯ ಮೇಲೆ ಮೆತ್ತಗೆ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಬೇಕು. ನೋವು ಹೆಚ್ಚಿರುವ ಜಾಗಕ್ಕೆ ಹೆಚ್ಚು ಒತ್ತಡ ಹೇರಿ ಮಸಾಜ್ ಮಾಡಿಕೊಂಡರೆ ನೋವು ಉಪಶಮನಗೊಳ್ಳುತ್ತದೆ.
* ಬಿಸಿ ನೀರಿನೊಂದಿಗೆ ನಿಂಬೆರಸ: ಮದ್ಯ ಕುಡಿದು ನಿಶೆ ಇಳಿದಿರದಿದ್ದರೂ ತಲೆ ನೋವು ಬರುತ್ತದೆ. ಅಂತಹ ಸಮಯದಲ್ಲಿ ಈ ವಿಧಾನವನ್ನು ಅನುಸರಿಸಬೇಕು. ಅಂದರೆ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ನಿಂಬೆರಸ ಹಿಂಡಿ ಸ್ವಲ್ಪ ಸಕ್ಕರೆ ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ತಿರುಗಿಸಿ ಕುಡಿಯಬೇಕು. ಇದನ್ನು ಸ್ವಲ್ಪ ಸಮಯದ ಅಂತರದಲ್ಲಿ ಸುಮಾರು 3 ಬಾರಿ ಕುಡಿದರೆ ತಲೆ ನೋವು ಮತ್ತು ತಲೆ ಸುತ್ತು ಕಡಿಮೆಯಾಗುತ್ತದೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ