ಶನಿವಾರ, ಸೆಪ್ಟೆಂಬರ್ 30, 2017

ಕುಂಕುಮ ಮಹತ್ವ ಮತ್ತು ಲಾಭ

ಕುಂಕುಮ ಮಹತ್ವ ಮತ್ತು ಲಾಭ
ಕುಂಕುಮವನ್ನು ಯಾವಾಗ ಮತ್ತು ಹೇಗೆ ಹಚ್ಚಿಕೊಳ್ಳಬೇಕು ?

ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದು : ಸ್ನಾನವಾದ ನಂತರ ಬಲಗೈಯ ಅನಾಮಿಕಾದಿಂದ ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು. ಕುಂಕುಮವು ಹಣೆಗೆ ಸರಿಯಾಗಿ ಹಿಡಿದುಕೊಳ್ಳಲು ಮೇಣವನ್ನು ಉಪಯೋಗಿಸಬೇಕು. ಹಣೆಗೆ ಮೊದಲು ಮೇಣವನ್ನು ಹಚ್ಚಿ ಅದರ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು.
ಅನಾಮಿಕಾದಿಂದ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದರ ಹಿಂದಿನ ಶಾಸ್ತ್ರ : ಅನಾಮಿಕಾದಿಂದ ಪ್ರಕ್ಷೇಪಿತವಾಗುವ ಆಪತತ್ತ್ವದ ಲಹರಿಗಳ ಸಹಾಯದಿಂದ ಕುಂಕುಮದಲ್ಲಿನ ಶಕ್ತಿತತ್ತ್ವವು ಕಡಿಮೆ ಕಾಲಾವಧಿಯಲ್ಲಿ ಜಾಗೃತವಾಗಿ ಆಜ್ಞಾಚಕ್ರದಲ್ಲಿ ಸಂಗ್ರಹವಾಗು ವುದರಿಂದ ಕುಂಕುಮದಲ್ಲಿನ ರಜೋಗುಣದ ಕಾರ್ಯಕ್ಕೆ ಶಕ್ತಿಯ ಬಲವು ಪ್ರಾಪ್ತವಾಗುತ್ತದೆ.

ಓರ್ವ ಸ್ತ್ರೀಯು ಇತರ ಸ್ತ್ರೀಯರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು ಉಪಯೋಗಿಸುವುದರ ಹಿಂದಿನ ಶಾಸ್ತ್ರ : ----
ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಅವರಲ್ಲಿರುವ ಕೆಟ್ಟಶಕ್ತಿಗಳು ಬೆರಳಿನ ಮೂಲಕ ನಮ್ಮ ದೇಹದೊಳಗೆ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.

೧.‘ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದುಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.

೨. ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ.

೩. ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.’

೪. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ 
ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ !
‘ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾದರೆ ಆ ಶಕ್ತಿಯಲ್ಲಿ ಕಾರ್ಯಕ್ಕನುಸಾರ ದೇವಿಯ ತಾರಕ ಅಥವಾ ಮಾರಕ ತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮ ವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.’

೫. ಸ್ತ್ರೀಯರು ಗೋಲಾಕಾರ ಕುಂಕುಮವನ್ನು ಮತ್ತು ಪುರುಷರು ಕುಂಕುಮದ
 ಉದ್ದ ತಿಲಕವನ್ನು ಏಕೆ ಹಚ್ಚಿಕೊಳ್ಳಬೇಕು ?

ಸ್ತ್ರೀಯು ಶಕ್ತಿಯ ಪ್ರತೀಕವಾಗಿದ್ದಾಳೆ. ಸ್ತ್ರೀಯರು ತಮ್ಮ ಆಜ್ಞಾಚಕ್ರದ ಮೇಲೆ ಕೆಂಪು ಗೋಲಾಕಾರ ಕುಂಕುಮದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ. ಸ್ತ್ರೀಯರು ಹಣೆಯ ಮೇಲೆ ಹಚ್ಚಿಕೊಂಡಿರುವ ಕುಂಕುಮದಿಂದ ತಮ್ಮಲ್ಲಿರುವ ಜಗನ್ಮಾತೆ ಶ್ರೀ ದುರ್ಗಾದೇವಿಯ ತತ್ತ್ವದ ಪೂಜೆಯನ್ನು ಮಾಡುತ್ತಾರೆ. ಸ್ತ್ರೀಯರು ತಮ್ಮ ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳುವುದೆಂದರೆ ತಮ್ಮಲ್ಲಿರುವ ಶಕ್ತಿತತ್ತ್ವದ ಪೂಜೆಯನ್ನು ಮಾಡುವುದಾಗಿದೆ. ಕೆಂಪು ಗೋಲಾಕಾರ ಕುಂಕುಮವು ಶ್ರೀದುರ್ಗಾದೇವಿಯ ತತ್ತ್ವದ ಅಪ್ರಕಟ ಶಕ್ತಿಯ ಪ್ರತೀಕವಾಗಿದೆ.

 ಗೋಲಾಕಾರ ಕುಂಕುಮದಿಂದ ಶಕ್ತಿಯು ಅಲ್ಲಿಯೇ ತಿರುಗುತ್ತಿರುತ್ತದೆ ಮತ್ತು ಆವಶ್ಯಕತೆಗನುಸಾರ ಕೇಂದ್ರಬಿಂದುವಿ ನಿಂದ ಪ್ರಕಟವಾಗುತ್ತದೆ.

ಪುರುಷನು ಶಿವನ ಪ್ರತೀಕವಾಗಿದ್ದಾನೆ. ಪುರುಷರು ತಮ್ಮ ಆಜ್ಞಾಚಕ್ರದ ಮೇಲೆ ಉದ್ದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ. ಪುರುಷರು ಹಣೆಯ ಮೇಲೆ ಹಚ್ಚಿಕೊಂಡಿರುವ ಉದ್ದ ತಿಲಕದಿಂದ ತಮ್ಮಲ್ಲಿರುವ ಶಿವತತ್ತ್ವದ ಪೂಜೆಯನ್ನು ಮಾಡುತ್ತಾರೆ. ಕೆಂಪು ಕುಂಕುಮದ ತಿಲಕವು ಶಿವತತ್ತ್ವದ ಪ್ರಕಟಶಕ್ತಿಯ ಪ್ರತೀಕವಾಗಿದ್ದು ಉದ್ದ ತಿಲಕದ ಮೇಲಿನ ತುದಿಯಿಂದ ಶಿವನ ಪ್ರಕಟಶಕ್ತಿಯು ಹೊರಬೀಳುತ್ತದೆ.

‘ಕುಂಕುಮದ ವೈಶಿಷ್ಟ್ಯ:  ಕುಂಕುಮವನ್ನು ರಾಸಾಯನಿಕಗಳಿಂದ ತಯಾರಿಸದೇ ಶುದ್ಧ ಅರಿಶಿನದಿಂದ ತಯಾರಿಸಿರುವುದರಿಂದ ಅದು ಸಾತ್ತ್ವಿಕವಾಗಿದೆ.

೬. ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮವನ್ನು  ಹಚ್ಚಿಕೊಳ್ಳುವುದು ಏಕೆ ಹೆಚ್ಚು ಯೋಗ್ಯವಾಗಿದೆ ?

ಕುಂಕುಮವು ಪಾವಿತ್ರ್ಯದ ಮತ್ತು ಮಾಂಗಲ್ಯದ ಪ್ರತೀಕವಾಗಿದೆ. ಕೃತಕ ವಸ್ತುಗಳಿಗಿಂತ ನೈಸರ್ಗಿಕ ವಸ್ತುಗಳಲ್ಲಿ ದೇವತೆಗಳ ಚೈತನ್ಯ ಲಹರಿಗಳನ್ನು ಸೆಳೆದುಕೊಳ್ಳುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುತ್ತದೆ. ಕುಂಕುಮವನ್ನು ಅರಿಶಿನದಿಂದ ತಯಾರಿಸಿರುವುದರಿಂದ ಟಿಕಲಿಗಿಂತ ಕುಂಕುಮವು ಹೆಚ್ಚು ನೈಸರ್ಗಿಕವಾಗಿದೆ, ಅಲ್ಲದೇ ಕುಂಕುಮದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಪರಿಮಳದಲ್ಲಿ ಬ್ರಹ್ಮಾಂಡದಲ್ಲಿನ ದೇವತೆಗಳ ಪವಿತ್ರಕಗಳನ್ನು ಆಕರ್ಷಿಸುವ ಹಾಗೂ ಪ್ರಕ್ಷೇಪಿಸುವ ಕ್ಷಮತೆಯಿರು ವುದರಿಂದ ಕುಂಕುಮವು ತಾರಕ-ಮಾರಕ ಚೈತನ್ಯಲಹರಿಗಳನ್ನು ಪ್ರಕ್ಷೇಪಿಸಿ ಜೀವವನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತದೆ. ಆದುದರಿಂದ ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮವನ್ನು ಹಚ್ಚಿಕೊಳ್ಳುವುದು ಸಾತ್ತ್ವಿಕತೆ ಯನ್ನು ಸೆಳೆದುಕೊಳ್ಳುವ ದೃಷ್ಟಿಯಿಂದ ಹೆಚ್ಚು ಫಲದಾಯಕವಾಗಿದೆ.

ಟಿಕಲಿಯ ಹಿಂಬದಿಯಲ್ಲಿ ಉಪಯೋಗಿಸಿದ ಅಂಟು ತಮೋಗುಣಿ ಯಾಗಿರುವುದರಿಂದ ಅದು ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಳ್ಳುತ್ತದೆ. ಈ ಲಹರಿಗಳು ಜೀವದ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳುವುದರಿಂದ ಶರೀರದಲ್ಲಿನ ರಜ-ತಮ ಕಣಗಳ ಪ್ರಾಬಲ್ಯವು ಹೆಚ್ಚಾಗುತ್ತದೆ.
ಸತತವಾಗಿ ಟಿಕಲಿಯನ್ನು ಹಚ್ಚಿಕೊಳ್ಳುವುದರಿಂದ ಆ ಸ್ಥಳದಲ್ಲಿ ಕೆಟ್ಟಶಕ್ತಿಗಳ ಸ್ಥಾನವು ನಿರ್ಮಾಣವಾಗುವ ಸಾಧ್ಯತೆಯಿರುತ್ತದೆ.

ಮೊಳಕೆ ಕಾಳು ತಿನ್ನೋದ್ರಿಂದ ಜೀರ್ಣಶಕ್ತಿ ಹೆಚ್ಚುತ್ತೆ

ಬೀಜ ಮೊಳಕೆ ಒಡೆದ್ರೇನೇ ಒಂದು ಗಿಡ ಚಿಗುರೋಕೆ ಸಾಧ್ಯ ಅನ್ನೋ ಮಾತು ಎಷ್ಟು ನಿಜಾನೋ ನಮ್ಮ ಆರೋಗ್ಯ ಚೆನ್ನಾಗಿರೋಕೆ ಮೊಳಕೆ ಕಾಳುಗಳನ್ನ ತಿನ್ಬೇಕು ಅನ್ನೋದೂ ಅಷ್ಟೇ ಸತ್ಯ. ಸಾಮಾನ್ಯವಾಗಿ ಮೊಳಕೆ ಕಾಳುಗಳು ಅಂದರೆ ನಮಗೆ ನೆನಪಾಗೋದು ಕಡಲೆ ಕಾಳು, ಹೆಸರು ಕಾಳು, ಹುರುಳಿ ಕಾಳು ಮತ್ತು. ಇದರಲ್ಲಿ ಯಾವುದು ತಿಂದರೂ ಅಥವಾ ಎಲ್ಲಾ ಸೇರಿಸಿ ತಿಂದರೂ ನಿಮಗೆ ನಾವು ಹೇಳೋ ಎಲ್ಲಾ ಲಾಭಗಳೂ ಸಿಗುತ್ವೆ. ಕಾಳುಗಳನ್ನ ಹಾಗೇ ತಿನ್ನೋ ಬದಲು ಮೊಳಕೆ ಒಡೆದ್ಮೇಲೆ ತಿಂದ್ರೆ ಅದರಲ್ಲಿ ಪೌಷ್ಟಿಕಾಂಶಗಳು ಜಾಸ್ತಿ ಇರುತ್ತೆ.

ಕೆಲವು ಸಂಸ್ಕೃತಿಗಳಲ್ಲಿ ಮೊಳಕೆ ಕಾಳುಗಳಿಗೆ ಸಾಕಷ್ಟು ಮಹತ್ವ ಕೊಟ್ಟಿದ್ದಾರೆ. ಆದ್ರೆ ಇದರಲ್ಲಿ ಎಷ್ಟು ಪೌಷ್ಟಿಕಾಂಶ ಇದೆ ಅಂತ ಹೆಚ್ಚು ತಿಳಿದಿರೋದು ಭಾರತೀಯರಿಗೆ ಮಾತ್ರ ಅನ್ಸುತ್ತೆ. ಅದಕ್ಕೆ ಎಲ್ಲೆಲ್ಲಿ ಮೊಳಕೆ ಕಾಳುಗಳನ್ನ ಸೇರಿಸೋಕೆ ಸಾಧ್ಯ ಆಗುತ್ತೋ ಅಲ್ಲೆಲ್ಲಾ ಸೇರಿಸಿರೋದು ನಾವು ಮಾತ್ರ. ಈಗೇನು ಮಾರ್ಕೇಟ್ ನಲ್ಲಿ ನಿಮಗೆ ಯಾವ ಮೊಳಕೆ ಕಾಳು ಬೇಕೋ ಸಿಗುತ್ತೆ, ಅದಕ್ಕೋಸ್ಕರ ಮನೇಲಿ ಕಷ್ಟ ಪಡೋ ಅಗತ್ಯಾನೂ ಇಲ್ಲ. ಇನ್ನೊಂದ್ ಮಾತು, ಮೊಳಕೆ ಕಾಳನ್ನ ಬೇಯಿಸಿದ್ರೆ ಅದರ ಪೌಷ್ಟಿಕತೆ ದೇಹಕ್ಕೆ ಸಿಗಲ್ಲ. ಹಾಗಾಗಿ ಯಾವಾಗ್ಲೇ ಮೊಳಕೆ ಕಾಳು ತಿಂದ್ರೂ ನೀವು ಹಸಿಯಾಗೇ ತಿಂದ್ರೆ ಒಳ್ಳೇದು.

ಮೊಳಕೆ ಕಾಳಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಕೆ, ಫೋಲೇಟ್, ನೈಯಾಸಿನ್, ಥೈಯಾಮಿನ್, ವಿಟಮಿನ್ ಸಿ, ವಿಟಮಿನ್ ಏ, ರೈಬೋಫ್ಲೇವಿನ್, ಮ್ಯಾಂಗನೀಸ್, ಕಾಪರ್, ಜಿಂಕ್, ಮಗ್ನೀಷಿಯಂ, ಐರನ್, ಕ್ಯಾಲ್ಷಿಯಂ ಅಷ್ಟೇ ಅಲ್ಲದೇ ದೇಹಕ್ಕೆ ಬೇಕಾದ  ಬೇರೆ ಎನ್ಜೈಮ್ ಗಳೂ ಇವೆ. ಅಬ್ಬಾ! ಪಟ್ಟಿ ಎಷ್ಟು ದೊಡ್ಡದಿದೆ ನೋಡಿದ್ರಾ?

ಇಷ್ಟರ ಮೇಲೆ ಇನ್ಯಾಕ್ ತಡ, ಮೊಳಕೆ ಕಾಳಿಂದ ಏನೇನ್ ಲಾಭ ಇದೆ ಅಂತ ತಿಳ್ಕೊಂಡೇ ಬಿಡೋಣ ಬನ್ನಿ.

1. ಮೊಳಕೆ ಕಾಳು ತಿನ್ನೋದ್ರಿಂದ ಜೀರ್ಣಶಕ್ತಿ ಹೆಚ್ಚುತ್ತೆ

ಇದರಲ್ಲಿರೋ ಎನ್ಜೈಮ್ ಗಳು ಜೀರ್ಣಕ್ರಿಯೇನ ಸರಾಗ ಮಾಡಿದ್ರೆ, ಫೈಬರ್ ಅಂಶ ಆಹಾರದ ಸಂಚಾರವನ್ನ ಸಲೀಸು ಮಾಡಿ ಮಲ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿ ಆಗೋ ಹಾಗೆ ನೋಡ್ಕೊಂಡು ಮಲಬದ್ಧತೆ ತಡಿಯತ್ತೆ.

 

2. ದೇಹದಲ್ಲಿ ಜೀವಕಣಗಳ ಉತ್ಪತ್ತಿ ಮಾಡಿ, ಹಳೇ ಕಣಗಳ ರಿಪೇರಿ ಮಾಡತ್ತೆ

ನಿಮಗೆ ಗೊತ್ತಿರೋ ಹಾಗೆ ಮೊಳಕೆ ಕಾಳಲ್ಲಿ ಸಾಕಷ್ಟು ಎನ್ಜೈಮ್ಸ್ ಇರೋದ್ರಿಂದ ದೇಹದಲ್ಲಿ ಎಲ್ಲಾ ಭಾಗಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನ ಸರಿಯಾಗಿ ಸಿಗೋ ಹಾಗೆ ಮಾಡಿ, ದೇಹದ ಎಲ್ಲಾ ಕ್ರಿಯೆಗಳೂ ಸರಿಯಾಗಿ ಆಗೋ ಹಾಗೆ ನೋಡಿಕೊಳ್ಳುತ್ತೆ. ಜೊತೇಲಿ ಅತೀ ಹೆಚ್ಚು ಪ್ರೋಟೀನ್ ಇರೋ ಕಾರಣ ದೇಹದಲ್ಲಿ ಜೀವಕಣಗಳ ಉತ್ಪತ್ತಿ ಹಾಗು ಹಳೇ ಕಣಗಳ ರಿಪೇರಿ ಕೂಡ ಇದರದ್ದೇ ಕೆಲಸ. ಇನ್ನು ಮಾಂಸಾಹಾರ ತಿನ್ನದೇ ಇರೋರಿಗೆ ಇದಕ್ಕಿಂದ ಒಳ್ಳೇ ಆಹಾರ ಇಲ್ಲ ಅನ್ಬೋದು!

3. ಅನೀಮಿಯಾ ಬರೋದನ್ನ ತಡಿಯತ್ತೆ

ಅನೀಮಿಯಾ ಬಂದಿದೆ ಅಂದ್ರೆ ರಕ್ತ ಕಣ ಕಡಿಮೆ ಆಗಿದೆ ಅಂತ, ಇದು ಸಾಮಾನ್ಯವಾಗಿ ಐರನ್ ಅಂಶದ ಕೊರತೆಯಿಂದ ಆಗುತ್ತೆ. ಮೊಳಕೆ ಕಾಳುಗಳಲ್ಲಿ ಐರನ್ ಜೊತೆ ಕಾಪರ್ ಕೂಡ ಇರೋದ್ರಿಂದ ಅನೀಮಿಯಾ ಇಂದ ಸಾಮಾನ್ಯವಾಗಿ ಬರೋ ಸುಸ್ತು, ಏಕಾಗ್ರತೆ ಕೊರತೆ, ತಲೆ ಸುತ್ತು, ಹೊಟ್ಟೆ ಸಮಸ್ಯೆಗಳಿಂದ ನಿಮ್ಮನ್ನ ದೂರ ಇರಿಸುತ್ತೆ.



4. ನಿಮ್ಮ ಹೃದಯ ಕಾಪಾಡತ್ತೆ

ಮೊಳಕೆ ಕಾಳುಗಳಲ್ಲಿರೋ ಒಮೇಗಾ ಫ್ಯಾಟೀ ಆಸಿಡ್ ದೇಹಕ್ಕೆ ಬೇಕಾಗೋ ಒಳ್ಳೆ ಕೊಬ್ಬಿನ ಅಂಶ ಸೇರೊ ಹಾಗೆ ಮಾಡಿ ನಿಮ್ಮ ರಕ್ತ ನಾಳಗಳ ಆರೋಗ್ಯಾನ ಕಾಪಾಡುತ್ತೆ. ಇದು ಆಂಟಿ ಇನ್ಪ್ಲಮೇಟರಿ ಆಗಿರೋ ಕಾರಣ ರಕ್ತನಾಳಗಳ ಮೇಲಿರೋ ಒತ್ತಡಾನೂ ಕಡಿಮೆ ಮಾಡತ್ತೆ. ಇದರಲ್ಲಿರೋ ಪೊಟ್ಯಾಶಿಯಂ ರಕ್ತದೊತ್ತಡ ಕಡಿಮೆ ಮಾಡಿ ರಕ್ತನಾಳಗಳನ್ನ ಸ್ವಸ್ಥವಾಗಿಡುತ್ತೆ. ರಕ್ತ ಸಂಚಾರ ಹೆಚ್ಚಿಸಿ ದೇಹಕ್ಕೆ ಹೆಚ್ಚು ಆಕ್ಸಿಜನ್ ಸಿಗೋ ಹಾಗೆ ನೋಡಿಕೊಂಡು ಸ್ಟ್ರೋಕ್ ಹಾಗೆ ಹಾರ್ಟ್ ಅಟ್ಯಾಕ್ ಆಗದ ಹಾಗೆ ನೋಡಿಕೊಳ್ಳುತ್ತೆ.

5. ತಾಯಿ ಹೊಟ್ಟೇಲಿರೋ ಮಗೂಗೆ ನರಗಳ ಸಮಸ್ಯೆ ಬರ್ದೇ ಇರೋ ಹಾಗೆ ನೋಡಿಕೊಳ್ಳುತ್ತೆ

ವಿಟಮಿನ್ ಬಿ ಕಾಂಪ್ಲೆಕ್ಸಲ್ಲಿ ಒಂದಾಗಿರೋ ಫಾಲೇಟ್ ಕೊರತೆಯಿಂದ ನ್ಯೂರಲ್ ಟ್ಯೂಬ್ ಡಿಫೆಕ್ಟ್ ಆಗುತ್ತೆ ಮಗೂಗೆ. ಮೊಳಕೆ ಕಾಳಲ್ಲಿರೋ ಫಾಲೇಟ್ ಇದನ್ನ ಆಗದ ಹಾಗೆ ತಡೆಗಟ್ಟುತ್ತೆ.



6. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ

ಮೊಳಕೆ ಕಾಳಲ್ಲಿರೋ ವಿಟಮಿನ್ ಸಿ ಒಂದೆ ಸಾಕು ಕಣ್ರೀ ದೇಹಕ್ಕೆ ಇನ್ಫೆಕ್ಷನ್ ಆಗದ ಹಾಗೆ ತಡ್ಯೋಕೆ... ಇದರ ಜೊತೆ ವಿಟಮಿನ್ ಏ ಕೂಡ ಹೇರಳಾವಾಗಿರೋದ್ರಿಂದ ದೇಹಕ್ಕೆ ಹೆಚ್ಚೆಚ್ಚು ಆಂಟಿ ಆಕ್ಸಿಡೆಂಟ್ಸ್ ಸಿಕ್ಕಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ.

7. ಕ್ಯಾನ್ಸರ್ ಬರದ ಹಾಗೆ ನೋಡಿಕೊಳ್ಳುತ್ತೆ

ಮೊಳಕೆ ಕಾಳಲ್ಲಿರೋ ವಿಟಮಿನ್ ಏ, ಸಿ ಜೊತೇಲಿ ಅಮಿನೊ ಆಸಿಡ್ಸ್ ಹಾಗೆ ಪ್ರೋಟೀನ್ ಎಲ್ಲದರ ಜೊತೆ ಎನ್ಜೈಮ್ಸ್ ದೇಹದಲ್ಲಿ ಫ್ರೀ ರಾಡಿಕಲ್ಸ್ ಸೇರದ ಹಾಗೆ ಮಾಡುತ್ತೆ. ದೇಹದಲ್ಲಿ ನಡೆಯೋ ಹಲವಾರು ಕ್ರಿಯೆಗಳ ಪರಿಣಾಮವಾಗಿ ಫ್ರೀ ರಾಡಿಕಲ್ಸ್ ಉತ್ಪತ್ತಿ ಆಗುತ್ತೆ, ಈ ಫ್ರೀ ರಾಡಿಕಲ್ಸ್ ದೇಹದಲ್ಲಿ ಕ್ಯಾನ್ಸರ್ ಸೆಲ್ಸ್ ಸೇರೋ ಹಾಗೆ ಮಾಡುತ್ತೆ. ಅಷ್ಟೇ ಅಲ್ಲದೇ ಸಾಕಷ್ಟು ಖಾಯಿಲೆಗಳಿಗೂ ಇದು ಕಾರಣ ಆಗುತ್ತೆ. ಬೇಗ ವಯಸ್ಸಾಗೋದು, ಕಣ್ಣು ಮಂಜಾಗೋದು, ಹೃದಯಕ್ಕೆ ತೊಂದರೆ ಆಗೋದು ಹೀಗೆ. ಇದೆಲ್ಲ ಆಗಬಾರದು ಅಂದ್ರೆ ಎಲ್ಲಾ ಬಿಟ್ಟು ಮೊಳಕೆ ಕಾಳು ತಿನ್ನಿ.

 

8. ಕಣ್ಣಿನ ದೃಷ್ಟಿ ಹೆಚ್ಚು ಕಾಲ ಚೆನ್ನಗಿರೋ ಹಾಗೆ ಮಾಡುತ್ತೆ

ವಿಟಮಿನ್ ಏ ಕಣ್ಣಿಗೆ ಸಾಕಷ್ಟು ಉಪಯುಕ್ತ ಅಂತ ಕೇಳಿದ್ದೀರ ಅಲ್ವಾ? ಅದು ನಿಜ. ಯಾಕೆಂದ್ರೆ ಮೊಳಕೆ ಕಾಳು ದಿನಾ ತಿನ್ನೋದ್ರಿಂದ ದೃಷ್ಟಿ ದೋಷ ತಡೆಗಟ್ಟಿ ಗ್ಲುಕೋಮ ಹಾಗೆ ಕ್ಯಾಟರಾಕ್ಟ್ ಆಗದ ಹಾಗೆ ನೋಡಿಕೊಳ್ಳುತ್ತೆ.

9. ತುಟಿ ಮತ್ತು ಬಾಯಿ ಸುತ್ತಾ ಆಗೋ ಹುಣ್ಣು ತಡೆಗಟ್ಟುತ್ತೆ

ಮೊಳಕೆ ಕಾಳಲ್ಲಿರೋ ಲೈಸೀನ್ ಅನ್ನೋ ಎನ್ಜೈಮ್ ಇದನ್ನ ತ್ಡೆಗಟ್ಟೋದ್ರಲ್ಲಿ ಸಾಕಷ್ಟು ಪರಿಣಾಮಕಾರಿ ಅಂತೆ. ತುಟಿ ಸುತ್ತ ಆಗೊ ಹುಣ್ಣು ನೋವನ್ನ ಉಂಟುಮಾಡೊದಲ್ಲದೇ ಇನ್ಫೆಕ್ಟ್ ಆದರೆ ಸಾಕಷ್ಟು ತೊಂದರೆ ಮಾಡುತ್ತೆ. ಹಾಗಾಗಿ ಇದು ಆಗದ ಹಾಗೆ ನೋಡ್ಕೊಳ್ಳೋದು ಉತ್ತಮ.

 

10.  ಆಗಾಗ ಅಲರ್ಜೀ ಆಗ್ತಿದ್ರೆ ಅದನ್ನೂ ಕಡಿಮೆ ಮಾಡತ್ತೆ

ವಿಗ್ರಹವನ್ನು ಕೆತ್ತದೆಯೇ ನೆಲೆಸಿರುವ ಸ್ವಾಮಿಯ ದೇವಾಲಯದ ರಹಸ್ಯ*

*ವಿಗ್ರಹವನ್ನು ಕೆತ್ತದೆಯೇ ನೆಲೆಸಿರುವ ಸ್ವಾಮಿಯ ದೇವಾಲಯದ ರಹಸ್ಯ*

ಭಕ್ತರಿಗಾಗಿ ದೇವತೆಗಳು ವಿವಿಧ ರೂಪದಲ್ಲಿ, ವಿವಿಧ ಪ್ರದೇಶದಲ್ಲಿ ನೆಲೆಸಿ ದುಷ್ಟಶಕ್ತಿಗಳಿಂದ ಕಾಪಾಡಿ ರಕ್ಷಣೆಯನ್ನು ನೀಡುತ್ತಾ ಇರುತ್ತಾರೆ. ಕೋರಿಕೆಗಳನ್ನು ಪೂರೈಸುತ್ತಾ ಇರುವ ಬಗ್ಗೆ ಹಲವಾರು ಗ್ರಂಥಗಳಲ್ಲಿ ಮತ್ತು ಪುರಾಣ ಇತಿಹಾಸದಲ್ಲಿ ತಿಳಿದುಕೊಳ್ಳಬಹುದು. ಹಾಗೆಯೇ ಭಕ್ತರಿಗಾಗಿ ಬೆಟ್ಟದ ಮೇಲೆ ನೆಲೆಸಿದ್ದಾನೆ ಶ್ರೀ ವೆಂಕಟೇಶ್ವರಸ್ವಾಮಿ. ಈ ದೇವಾಲಯವನ್ನು ಚಿಕ್ಕ ತಿರುಪತಿ, ಮನ್ಯಂಕೊಂಡ ಎಂದು ಹಲವಾರು ಹೆಸರುಗಳಿಂದ ಕರೆಯುತ್ತಾರೆ.

*ನಿಮಿಷಕ್ಕೆ ಒಮ್ಮೆ ಭಾರ ಹೆಚ್ಚಾಗುವ ಮೂರ್ತಿ ಇವನು....*

ಶ್ರೀ ವೆಂಕಟೇಶ್ವರ ಸ್ವಾಮಿಯು ತನ್ನ ಭಕ್ತರನ್ನು ದುಷ್ಟಶಕ್ತಿಗಳಿಂದ ಕಾಪಾಡಲು..ಕೆಲವು ಪ್ರದೇಶದಲ್ಲಿ ನೆಲೆಸಿದ್ದಾನೆ. ಅಂಥಹ ಪ್ರದೇಶಗಳಲ್ಲಿ ಒಂದು "ಮನ್ಯಕೊಂಡ". ಇದನ್ನು 2 ನೇ ತಿರುಪತಿ ಎಂದೂ ಸಹ ಕರೆಯುತ್ತಾರೆ. ತಿರುಪತಿಯಲ್ಲಿನ ಸ್ವಾಮಿಯನ್ನು ನೋಡುವುದಕ್ಕೆ ಆಗದೇ ಇರುವವರು ಈ ದೇವಾಲಯದಲ್ಲಿ ದರ್ಶನ ಪಡೆಯಬಹುದು.

ಪ್ರಸ್ತುತ ಲೇಖನದಲ್ಲಿ ಚಿಕ್ಕ ತಿರುಪತಿಯ ಬಗ್ಗೆ ಕೆಲವು ಕುತೂಹಲಕಾರಿಯಾದ ಮಾಹಿತಿಯನ್ನು ಪಡೆಯೋಣ.

*ಎಲ್ಲಿದೆ?*

ಈ ಕ್ಷೇತ್ರ ತೆಲಂಗಾಣ ರಾಜ್ಯದ ಮೆಹೆಬೂಬ್ ನಗರದಿಂದ ಸುಮಾರು 17 ಕಿ. ಮೀ ದೂರದಲ್ಲಿದೆ. ಸಿದ್ದರು, ಮುನಿಗಳು ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ತಪಸ್ಸು ಮಾಡುತ್ತಿದ್ದರಿಂದ ಹಾಗಾಗಿ ಇದನ್ನು 'ಮುನಿಗಳ ಕೊಂಡ' ಎಂದು ಕರೆಯುತ್ತಾರೆ. ತದನಂತರ ಅರಣ್ಯ ಪ್ರದೇಶಗಳಿಂದ ಅವೃತ್ತಗೊಂಡಿದ್ದರಿಂದ 'ಮನ್ಯಕೊಂಡ' ಎಂದು ಹೆಸರು ಬಂದಿತು.

*ಕೇಶವಯ್ಯ ಎಂಬ ಮುನಿ*

ಕೇಶವಯ್ಯ ಎಂಬ ಮುನಿ ಮಲಗಿರುವ ಸಮಯದಲ್ಲಿ ಶ್ರೀನಿವಾಸ ಕನಸ್ಸಿನಲ್ಲಿ ಕಾಣಿಸಿ ಕೃಷ್ಣಾ ನದಿ ತೀರದಲ್ಲಿ ಮುನಿಗಳ ಕೊಂಡದಲ್ಲಿ ಸ್ವಯಂ ಭೂವಾಗಿ ನೆಲೆಸುತ್ತೇನೆ ಎಂದು ಹೇಳುತ್ತಾನೆ. ಆ ನಂತರ ಕೇಶವಯ್ಯ ಈ ಪ್ರದೇಶಕ್ಕೆ ತೆರಳಿ ಸ್ವಾಮಿಗೆ ಪೂಜೆಗಳನ್ನು ಮಾಡುವುದನ್ನು ಪ್ರಾರಂಭ ಮಾಡಿದನಂತೆ.

*ಸ್ಥಳೀಯ ಕಥೆಯ ಪ್ರಕಾರ*

ಹಾಗೆಯೇ ಇನ್ನೊಂದು ಕಥನದ ಪ್ರಕಾರ ತಿರುಪತಿಗೆ ಕಾಲುನಡಿಗೆಯ ಮೂಲಕ ಹಿಂದಿರುಗುತ್ತಿರುವ ಒಬ್ಬ ವೃದ್ಧೆ ಸ್ವಾಮಿಯನ್ನು ನೆನೆಯುತ್ತಾಳೆ. ಆಗ 'ಸ್ವಾಮಿ ನಿನ್ನನ್ನು ಕಾಣಲು ಅಷ್ಟು ದೂರ ಬರಲು ನನ್ನಲ್ಲಿ ಶಕ್ತಿ ಕುಂದಿ ಹೋಗಿದೆ. ಹಾಗಾಗಿ ಸಮೀಪದಲ್ಲಿಯೇ ದರ್ಶನ ನೀಡುವಂತೆ ಮಾಡು ತಂದೆ ಎಂದು ಕೋರಿಕೊಳ್ಳುತ್ತಾಳೆ. ಹೀಗಾಗಿಯೇ ಸ್ವಾಮಿ ಸ್ವಯಂ ಭೂವಾಗಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ.

*ದೇವಾಲಯದ ವಿಶೇಷತೆ*

ಇಲ್ಲಿ ಸ್ವಾಮಿ ಆದಿಶೇಷನ ಮೇಲೆ ನೀರಿನಲ್ಲಿ ಲಕ್ಷ್ಮೀಸಮೇತನಾಗಿ ನೆಲೆಸಿದ್ದಾನೆ. ತಿರುಮಲದಲ್ಲಿ ಸ್ವಾಮಿಗೆ ಕಾಲು ನಡಿಗೆ ಮಾರ್ಗದಿಂದ ಹೇಗೆ ಕೆಲವರು ಸಾಗುತ್ತಾರೆಯೋ ಅದೇ ರೀತಿಯಲ್ಲಿ ಮಾನ್ಯಕುಂಡದಲ್ಲಿನ ಆ ದೇವಾಲಯಕ್ಕೂ ಮೆಟ್ಟಿಲುಗಳ ಮೂಲಕ ಹಾಗೆಯೇ ಸೇರಿಕೊಳ್ಳಬೇಕು.

*ಸ್ವಯಂ ಭೂ*

ಯಾವುದೇ ಶಿಲ್ಪಗಳು ಕೆತ್ತನೆ ಮಾಡದೆಯೇ ಸ್ವಾಮಿ ಈ ದೇವಾಲಯದಲ್ಲಿ ಸ್ವಯಂ ಭೂವಾಗಿ ನೆಲೆಸಿದ್ದಾನೆ. ಹಾಗೆಯೇ ಇಲ್ಲಿನ ಕೊಳವನ್ನು ಯಾರು ಕೂಡ ನಿರ್ಮಾಣ ಮಾಡಿಲ್ಲ. ಇದೇ ಈ ದೇವಾಲಯದ ವಿಶೇಷಗಳು.

*ಭಕ್ತರ ವಿಶ್ವಾಸ*

ಕೆಲವು ವರ್ಷಗಳ ನಂತರ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದರು. ಇಲ್ಲಿನ ಸ್ವಾಮಿಯನ್ನು ಭಕ್ತಿ, ಶ್ರದ್ಧೆಯಿಂದ ದರ್ಶನ ಮಾಡಿ ಆರಾಧನೆ ಮಾಡಿದರೆ ಕೋರಿಕೆಗಳನ್ನು ನೇರವೇರಿಸುತ್ತಾನಂತೆ. ಇದು ಭಕ್ತರ ಪ್ರಬಲವಾದ ನಂಬಿಕೆಯಾಗಿದೆ.

*ಪುಣ್ಯ ಭೂಮಿ*

ಒಂದು ಕಾಲದಲ್ಲಿ ಮುನಿಗಳು, ಸಿದ್ದರು ಈ ಪ್ರದೇಶದಲ್ಲಿ ತಪಸ್ಸು ಮಾಡಿದ ಪುಣ್ಯ ಭೂಮಿಯಾಗಿದೆ. ಶ್ರೀನಿವಾಸ ಕನಸ್ಸಿನಲ್ಲಿ ಕಾಣಿಸಿ ಸ್ವಯಂ ಭೂವಾಗಿ ನೆಲೆಸಿರುವ ಪವಿತ್ರವಾದ ಸ್ಥಳವಿದು.


*ಹೇಗೆ ಸಾಗಬೇಕು?.*

ಮನ್ಯಕೊಂಡ ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಪಟ್ಟಣಕ್ಕೆ ಸುಮಾರು 17 ಕಿ.ಮೀ ದೂರದಲ್ಲಿರುವ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಮಹೆಬೂಬ್ ನಗರದಿಂದ ರಾಯಚೂರಿಗೆ ತೆರಳುವ ಅಂತರಾಷ್ಟ್ರೀಯ ರಹದಾರಿ ಮಾರ್ಗದಿಂದ ಸುಮಾರು 4 ಕಿ.ಮೀ ಒಳಭಾಗದಲ್ಲಿದೆ.

*ಬ್ರಹ್ಮೋತ್ಸವಗಳು*

ಮೆಹುಬೂಬ್ ನಗರ ಜಿಲ್ಲೆಯಲ್ಲಿಯೇ ಅತ್ಯಂತ ಪ್ರಮುಖವಾದ ಪುಣ್ಯಕ್ಷೇತ್ರವಾಗಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವಿದೆ. ಎತ್ತರವಾದ ಬೆಟ್ಟದ ಮೇಲೆ, ಪ್ರಶಾಂತವಾದ ವಾತಾವರಣದಲ್ಲಿ ನೆಲೆಸಿರುವ ಸ್ವಾಮಿಗೆ ವರ್ಷಕ್ಕೊಮ್ಮೆ ಬ್ರಹ್ಮೋತ್ಸವವನ್ನು ವಿಜೃಂಬಣೆಯಿಂದ ನಡೆಸುತ್ತಾರೆ.


*2 ನೇ ತಿರುಪತಿ*

ಮನ್ಯಕೊಂಡದಲ್ಲಿನ ದೇವಾಲಯವು 2 ನೇ ತಿರುಪತಿ ಎಂದು ಹೆಸರುವಾಸಿಯಾಗಿದೆ. ಹೋದರೆ ತಿರುಪತಿ ಇಲ್ಲದೇ ಹೋದರೆ ಮಾನ್ಯಕೊಂಡ ಎಂಬಂತೆ ಭಕ್ತರು ತೆರಳುತ್ತಾರೆ. ಇಲ್ಲಿನ ಸ್ವಾಮಿಯನ್ನು ಕಂಡರೆ ಅಲ್ಲಿನ ಸ್ವಾಮಿಯನ್ನು ಕಂಡತೆ ಎಂದು ಭಕ್ತರು ನಂಬುತ್ತಾರೆ.

*ಎಲ್ಲಾ ವಿಶೇಷತೆಗಳೆ*

ಬೆಟ್ಟದ ಮೇಲೆ ನೆಲೆಸಿರುವ ಈ ಸ್ವಾಮಿ ದೇವಾಲಯದಲ್ಲಿರುವುದೆಲ್ಲಾ ವಿಶೇಷವೇ. ಅದೆನೆಂದರೆ ಮಾಡದೇ ಇರುವ ಪಾದಗಳು, ನಿರ್ಮಾಣ ಮಾಡದ ಕೊಳ, ನಿರ್ಮಾಣ ಮಾಡದ ದೇವಾಲಯ, ಕೆತ್ತನೆ ಮಾಡದ ವಿಗ್ರಹ ಇವೆಲ್ಲವನ್ನೂ ಕಂಡು ಪುನೀತರಾಗಬಹುದು.

*ಅಲಮೇಲು ಮಂಗಮ್ಮ*

ಬೆಟ್ಟವನ್ನು ಇಳಿಯುತ್ತಿರುವವರು ಅಲಮೇಲು ಮಂಗಮ್ಮನನ್ನು ತಪ್ಪದೇ ದರ್ಶನ ಮಾಡಬೇಕು. ಬೆಟ್ಟದ ಮೇಲೆ ಒಂದು ಸ್ಥಳದಲ್ಲಿ ಸ್ವಾಮಿಯ ಪಾದಗಳು ಕಾಣಿಸುತ್ತವೆ. ಇಲ್ಲಿ ಅತ್ಯಂತ ಸುಂದರವಾದ ಪರಿಸರವನ್ನು ಕೂಡ ಅಸ್ವಾಧಿಸಬಹುದು.

*ರೈಲ್ವೆ ನಿಲ್ದಾಣ*

ಮನ್ಯಕೊಂಡ ರೈಲ್ವೆ ನಿಲ್ದಾಣ ಇಲ್ಲದೆ. ಇದು ಗದ್ವಾಲ್, ಕಾಚಿಗೂಡ, ಸಿಕಿಂದ್ರಾಬಾದ್, ಗುಂಟೂರು ಪ್ರದೇಶಗಳಿಂದ ಇಲ್ಲಿಗೆ ರೈಲುಗಳ ಸಂಪರ್ಕವಿದೆ. ಬೆಟ್ಟದ ಕೆಳಗಿನಿಂದ ದೇವಾಲಯಕ್ಕೆ ಸೇರಬೇಕಾದರೆ ಉಚಿತ ಬಸ್ಸು, ಆಟೋ, ಖಾಸಗಿ ವಾಹನಗಳ ಸೌಲಭ್ಯವೂ ಕೂಡ ಇಲ್ಲಿದೆ.
*ನಮ್ಮ ಮೈ ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು ಆದ್ಭುತಗಳು ಹೊರಗೆಲ್ಲೋ ಅಲ್ಲ, ನಿಮ್ಮ ದೇಹದಲ್ಲೇ ಇವೆ*

ನಮ್ಮ ದೇಹಕ್ಕೆ ಯಾವ್ದು ಸರಿ? ಚಳಿ ಇದ್ರೆ ಒಳ್ಳೆದಾ? ಬಿಸಿಲಾದ್ರೆ ಒಳ್ಳೆದಾ? ಯಾವ್ದು ಶೀತ ಯಾವ್ದು ಉಷ್ಣ, ಏನು ತಿಂದ್ರೆ ಒಳ್ಳೇದು ಏನು ಮಾಡಿದ್ರೆ ಒಳ್ಳೇದು... ಈ ಎಲ್ಲಾ ವಿಷಯಗಳು ನಮಗೆ ಚೆನ್ನಾಗೇ ಗೊತ್ತಿರುತ್ತೆ. ಆದರೆ ನಮ್ಮ ದೇಹದ ಬಗ್ಗೆ ತಿಳ್ಕೊಳಕ್ಕೆ ಬ್ರಹ್ಮಾಂಡದಷ್ಟಿದೆ. ಅದರಲ್ಲಿ ನೀವು ಪ್ರಾಯಶಃ ಕೇಳಿಲ್ಲದಿರೋ 20 ವಿಷಯಗಳ್ನ ಹೇಳ್ತೀವಿ ಕೇಳಿ… ಮೊದಲು ಕೇಳಿದಾಗ ನಮಗೆ ಬಹಳ ಆಶ್ಚರ್ಯ ಆಯಿತು. ನಿಮಗೂ ಆಗೋದ್ರಲ್ಲಿ ಸಂದೇಹ ಇಲ್ಲ, ಓದ್ತಾ ಹೋಗಿ…

1. ಒಬ್ಬೊಬ್ಬರ ನಾಲಿಗೆ ಇನ್ನೊಬ್ಬರ ತರಹ ಇರಲ್ಲ - ಬೆರಳಚ್ಚು ಹೇಗೋ ಹಾಗೆ ಸೈನ್ ಹಾಕಕ್ಕೆ ಬರದೆ ಇರೋರು ಹೆಬ್ಬೆಟ್ಟು ಯಾಕೆ ಒತ್ತುತ್ತಾರೆ ಹೇಳಿ? ಯಾಕಂದ್ರೆ ಬೆರಳಚ್ಚು ಒಬ್ಬೊಬ್ಬರಿಗೂ ಬೇರ್ಬೇರೆ. ಹಾಗೇ ನಿಮ್ಮ ನಾಲಿಗೆ ಅಚ್ಚು ಕೂಡ ಬೇರೆಯೋರ ತರಹ ಇರಲ್ಲ.

2. ಒಂದು ಕೂದಲಲ್ಲಿ ಒಂದು ಸೇಬು ನೇತು ಹಾಕಬಹುದು. ಅಷ್ಟು ಶಕ್ತಿ ಇರುತ್ತೆ ಅದಕ್ಕೆ.

3. ಭೂಮಿ ಮೇಲೆ ಎಷ್ಟು ಜನ ಇರ್ತಾರೋ ಅಷ್ಟೇ ಬ್ಯಾಕ್ಟೀರಿಯಾಗಳು ನಿಮ್ಮ ಬಾಯಲ್ಲೂ ಇರುತ್ವೆ. ಆದ್ರೆ ಅವು ತೊಂದ್ರೆ ಮಾಡಲ್ಲ ಬಿಡಿ.

4. ನಿಮ್ಮ ಉಗುರಲ್ಲಿ ಈ ತರಹ ಅರ್ಧಚಂದ್ರಾಕಾರ ಕಾಣಿಸ್ತಾ ಇಲ್ಲದೆ ಹೋದ್ರೆ, ಅಥವಾ ಉಗುರು ತುಂಬ ಮೃದುವಾಗಿದ್ದು ಬೇಗ ಮುರಿದು ಹೋಗ್ತಿದ್ರೆ, ನಿಮ್ಮ ಥೈರಾಯಿಡ್ ಹಾರ್ಮೋನ್ ಹೆಚ್ಚಾಗಿದೆ ಅಂತರ್ಥ.

5. ನಿಮ್ಮ ಮೆದುಳಿಗೆ ತಲುಪೋ ವಿಚಾರಗಳು ಗಂಟೆಗೆ 400 ಕಿ.ಮಿ ವೇಗದಲ್ಲಿ ಚೆಲಿಸುತ್ತೆ.

6. ಮನುಷ್ಯನ ರಕ್ತದಲ್ಲಿ 29 ಬಗೆ. ಅತೀ ಅಪರೂಪದ್ದು ಜಪಾನಿನ ಒಂದು ಸಣ್ಣ ಕುಟುಂಬದಲ್ಲಿ ಸಿಗುತ್ತೆ.

7. ಒಂದ್ ದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತು ಹಾಕಿ 19,312 ಕಿ.ಮೀ ಚಲಿಸುತ್ತೆ.

8. ನಮ್ಮ ದೇಹದ ನರಗಳನ್ನೆಲ್ಲ ಒಟ್ತುಗೂಡಿಸಿ ನೋಡಿದ್ರೆ ಅದರ ಉದ್ದ 75 ಕಿ.ಮಿ ಆಗುತ್ತೆ.

9. ಒಂದು ದಿನಕ್ಕೆ ಸುಮಾರು 20,000 ಬಾರಿ ಉಸಿರಾಡ್ತೀವಿ.

10. ನಮ್ಮ ಕಣ್ಣುಗಳು ಸುಮಾರು 1 ಕೋಟಿ ಬಣ್ಣಗಳನ್ನ ಗುರುತಿಸುತ್ವೆ, ಆದ್ರೆ ನಮ್ಮ ಮೆದುಳಿಗೆ ಅವನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳೋ ಶಕ್ತಿ ಇಲ್ಲ.

11. ಮನುಷ್ಯ ಬದುಕಿರೋ ವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ - ವರ್ಷಕ್ಕೆ 0.25 mm ನಷ್ಟು

12. ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ.

13. ಪ್ರತಿದಿನ ನಮ್ಮ ದೇಹ ಸುಮಾರು 1 ಕೋಟಿ ಚರ್ಮ ಕಣಗಳನ್ನ ಕಳೆದುಕೊಳ್ಳುತ್ವೆ. ಸರಿಯಾಗಿ ತೂಕ ಮಾಡಿ ನೋಡಿದ್ರೆ ವರ್ಷಕ್ಕ 2 ಕಿಲೋ ಗೊತ್ತಾ! 

14. ನಮ್ಮ ಚರ್ಮದ 1 sq.cm ವಿಸ್ತೀರ್ಣದಲ್ಲಿ ನೂರಾರು ನೋವಿನ ಕೋಶಗಳಿರುತ್ತವೆ.

15. ಹೆಣ್ಣು ಮಕ್ಕಳ ನಾಲಿಗೇಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತವೆ.

16. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಟ್ಟು 35 ಟನ್ ತಿಂತಾನೆ.

17. ಒಬ್ಬ ಮನುಷ್ಯ ಕೇವಲ ಕಣ್ಣು ಮಿಟಿಕಿಸೋದ್ರಲ್ಲೇ 5 ವರ್ಷ ಕಳೀತಾನೆ. ಮಿಟುಕಿಸ್ತಾ ಕೆಲವರು ಬೇರೆ ಕೆಲಸಾನೂ ಮಾಡ್ತಾರೆ

18. ಒಂದು ಸೆಕೆಂಡಲ್ಲಿ ನಮ್ಮ ಮೆದುಳಲ್ಲಿ 1 ಲಕ್ಷ ರಾಸಾಯನಿಕ ಕ್ರಿಯೆಗಳಾಗುತ್ವೆ.

19. ನೀವು ಶೀತ ಆದಾಗ ಸೀನ್ತೀರಲ್ಲ ಅದರ ವೇಗ ಗಂಟೆಗೆ 160 ಕಿ. ಮೀ ಇರುತ್ತೆ.

20. ನಕ್ಕಾಗ ನಿಮ್ಮ ಮುಖದ 17 ಬೇರೆ ಬೇರೆ ಮಾಂಸ ಖಂಡಗಳು ಕೆಲ್ಸ ಮಾಡುತ್ತವೆ… ಅತ್ತಾಗ 43... ಅಂದ್ರೆ ಅಳಕ್ಕೆ ಕೆಲಸ ಜಾಸ್ತಿ ಮಾಡಬೇಕು 

21. ಗಂಡಸರಿಗೆ ದಿನಕ್ಕೆ 40 ಕೂದಲು ಉದುರಿದರೆ ಹೆಂಗಸರಿಗೆ 70 ಉದುರುತ್ತೆ

22. ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದ ಸಿಗಲ್ಲ

23. ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ

24. ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ

25. ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಂತರ ಬೇರೆ ಹುಟ್ಟುತ್ತವೆ.

26. ವಸಂತ ಋತುವಿನಲ್ಲಿ ಮಕ್ಕಳು ಹೆಚ್ಚು ಬೆಳೀತಾರೆ.

27. ಸೀನಿದಾಗ ದೇಹದ ಎಲ್ಲಾ ಕ್ರಿಯೆಗಳೂ ತಾತ್ಕಾಲಿಕವಾಗಿ ನಿಲ್ಲುತ್ತವೆ. ಎದೆ ಕೂಡ ಬಡಿದುಕೊಳ್ಳಲ್ಲ.

28. ತಲೆಬುರುಡೆಯಲ್ಲಿ 26 ಬೇರೆಬೇರೆ ಮೂಳೆಗಳಿರುತ್ತವೆ

29. ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿಲ್ಲ ಅಂತ ಅರ್ಥ. ಕುಡೀರಿ!

30. ಹೆಚ್ಚು ಉಪ್ಪು ತಿನ್ನುವುದರಿಂದ ಎಲ್ಲಾ ರೀತಿಯ ರೋಗಗಳು ಬರುತ್ತವೆ ಸಕ್ಕರೆ ಖಾಯಿಲೆ, ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಗಳು...

31. ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ (ನರ್ವ್ ಸೆಲ್ಸ್) ಇರುತ್ತೆ

32. ಬೇಯಿಸದ ಅಡುಗೆ (ಉದಾ: ಕೋಸಂಬರಿ) ಬೇಯಿಸಿದ ಅಡುಗೆಗಿಂತ ಎರಡರಷ್ಟು ಬೇಗ ಅರಗುತ್ತದೆ

33. ಮಂಡಿಚಿಪ್ಪು (ನೀ ಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ. 2-6 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.

34. ಹೃದಯ ದಿನಕ್ಕೆ ಸುಮಾರು 1,000 ಸಲ ರಕ್ತವನ್ನು ಸುತ್ತು ಹಾಕಿಸುತ್ತದೆ

35. ನಮ್ಮ ಮೂಳೆಗಳಿಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ

ಚುಕ್ಕುಬುಕ್ಕು

36. ತಿಂದಿದ್ದು ಬಾಯಿಂದ ಹೊಟ್ಟೆ ವರೆಗೆ ಹೋಗಕ್ಕೆ 7 ಸೆಕೆಂಡ್ ತೊಗೊಳ್ಳುತ್ತೆ

37. ನಮಗೆ ಹುಟ್ಟಿದಾಗ 300 ಮೂಳೆಗಳಿರುತ್ತವೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.

38. ಒಂದು ಕಣ್ಣಿನ ರೆಪ್ಪೆ ಸುಮಾರು 5 ತಿಂಗಳಿರುತ್ತದೆ. ಆಮೇಲೆ ಉದುರಿ ಹೋಗುತ್ತದೆ.

39. ಎರಡು ಹುಬ್ಬೂ ಸೇರಿದರೆ ಸುಮಾರು 1,000 ಕೂದಲಿರುತ್ತೆ

40. ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ

41. ಮಕ್ಕಳ ನಾಲಿಗೆಯಲ್ಲಿ ದೊಡ್ಡೋರಿಗಿಂತ ಜಾಸ್ತಿ ಟೇಸ್ಟ್ ಬಡ್ಸ್ ಇರುತ್ತವೆ

42. ವಯಸ್ಸಾಗುತ್ತಿದ್ದ ಹಾಗೆ ಕಣ್ಣು ದೊಡ್ಡದಾಗೋದಿಲ್ಲ. ಆದರೆ ಕಿವಿ ಮತ್ತು ಮೂಗು ಆಗುತ್ತಲೇ ಇರುತ್ತವೆ.

ಶ್ರೀದುರ್ಗಾಮಾನಸ ಪೂಜಾ

॥ ಶ್ರೀದುರ್ಗಾಮಾನಸ ಪೂಜಾ ॥

ಶ್ರೀ ಗಣೇಶಾಯ ನಮಃ ।
ಉದ್ಯಚ್ಚಂದನಕುಂಕುಮಾರುಣಪಯೋಧಾರಾಭಿರಾಪ್ಲಾವಿತಾಂ
ನಾನಾನರ್ಘ್ಯಮಣಿಪ್ರವಾಲಘಟಿತಾಂ ದತ್ತಾಂ ಗೃಹಾಣಾಂಬಿಕೇ ।
ಆಮೃಷ್ಟಾಂ ಸುರಸುಂದರೀಭಿರಭಿತೋ ಹಸ್ತಾಂಬುಜೈರ್ಭಕ್ತಿತೋ
ಮಾತಃ ಸುಂದರಿ ಭಕ್ತಕಲ್ಪಲತಿಕೇ ಶ್ರೀಪಾದುಕಾಮಾದರಾತ್ ॥ 1॥

ದೇವೇಂದ್ರಾದಿಭಿರರ್ಚಿತಂ ಸುರಗಣೈರಾದಾಯ ಸಿಂಹಾಸನಂ
ಚಂಚತ್ಕಾಂಚನಸಂಚಯಾಭಿರಚಿತಂ ಚಾರುಪ್ರಭಾಭಾಸ್ವರಮ್ ।
ಏತಚ್ಚಂಪಕಕೇತಕೀಪರಿಮಲಂ ತೈಲಂ ಮಹಾನಿರ್ಮಲಂ
ಗಂಧೋದ್ವರ್ತನಮಾದರೇಣ ತರುಣೀದತ್ತಂ ಗೃಹಾಣಾಂಬಿಕೇ ॥ 2॥

ಪಶ್ಚಾದ್ದೇವಿ ಗೃಹಾಣ ಶಂಭುಗೃಹಿಣಿ ಶ್ರೀಸುಂದರಿ ಪ್ರಾಯಶೋ
ಗಂಧದ್ರವ್ಯಸಮೂಹನಿರ್ಭರತರಂ ಧಾತ್ರೀಫಲಂ ನಿರ್ಮಲಮ್ ।
ತತ್ಕೇಶಾನ್ ಪರಿಶೋಧ್ಯ ಕಂಕತಿಕಯಾ ಮಂದಾಕಿನೀಸ್ರೋತಸಿ
ಸ್ನಾತ್ವಾ ಪ್ರೋಜ್ಜ್ವಲಗಂಧಕಂ ಭವತು ಹೇ ಶ್ರೀಸುಂದರಿ ತ್ವನ್ಮುದೇ ॥ 3॥

ಸುರಾಧಿಪತಿಕಾಮಿನೀಕರಸರೋಜನಾಲೀಧೃತಾಂ
ಸಚಂದನಸಕುಂಕುಮಾಗುರುಭರೇಣ ವಿಭ್ರಾಜಿತಾಮ್ ।
ಮಹಾಪರಿಮಲೋಜ್ಜ್ವಲಾಂ ಸರಸಶುದ್ಧಕಸ್ತೂರಿಕಾಂ
ಗೃಹಾಣ ವರದಾಯಿನಿ ತ್ರಿಪುರಸುಂದರಿ ಶ್ರೀಪ್ರದೇ ॥ 4॥

ಗಂಧರ್ವಾಮರಕಿನ್ನರಪ್ರಿಯತಮಾಸಂತಾನಹಸ್ತಾಂಬುಜ-
ಪ್ರಸ್ತಾರೈರ್ಧ್ರಿಯಮಾಣಮುತ್ತಮತರಂ ಕಾಶ್ಮೀರಜಾಪಿಂಜರಮ್ ।
ಮಾತರ್ಭಾಸ್ವರಭಾನುಮಂಡಲಲಸತ್ಕಾಂತಿಪ್ರದಾನೋಜ್ಜ್ವಲಂ
ಚೈತನ್ನಿರ್ಮಲಮಾತನೋತು ವಸನಂ ಶ್ರೀಸುಂದರಿ ತ್ವನ್ಮುದಮ್ ॥ 5॥

ಸ್ವರ್ಣಾಕಲ್ಪಿತಕುಂಡಲೇ ಶ್ರುತಿಯುಗೇ ಹಸ್ತಾಂಬುಜೇ ಮುದ್ರಿಕಾ
ಮಧ್ಯೇ ಸಾರಸನಾ ನಿತಂಬಫಲಕೇ ಮಂಜೀರಮಂಘ್ರಿದ್ವಯೇ ।
ಹಾರೋ ವಕ್ಷಸಿ ಕಂಕಣೌ ಕ್ವಣರಣತ್ಕಾರೌ ಕರದ್ವಂದ್ವಕೇ
ವಿನ್ಯಸ್ತಂ ಮುಕುಟಂ ಶಿರಸ್ಯನುದಿನಂ ದತ್ತೋನ್ಮದಂ ಸ್ತೂಯತಾಮ್ ॥ 6॥

ಗ್ರೀವಾಯಾಂ ಧೃತಕಾಂತಿಕಾಂತಪಟಲಂ ಗ್ರೈವೇಯಕಂ ಸುಂದರಂ
ಸಿಂದೂರಂ ವಿಲಸಲ್ಲಲಾಟಫಲಕೇ ಸೌಂದರ್ಯಮುದ್ರಾಧರಮ್ ।
ರಾಜತ್ಕಜ್ಜಲಮುಜ್ಜ್ವಲೋತ್ಪಲದಲಶ್ರೀಮೋಚನೇ ಲೋಚನೇ
ತದ್ದಿವ್ಯೌಷಧಿನಿರ್ಮಿತಂ ರಚಯತು ಶ್ರೀಶಾಂಭವಿ ಶ್ರೀಪ್ರದೇ ॥ 7॥

ಅಮಂದತರಮಂದರೋನ್ಮಥಿತದುಗ್ಧಸಿಂಧೂದ್ಭವಂ
ನಿಶಾಕರಕರೋಪಮಂ ತ್ರಿಪುರಸುಂದರಿ ಶ್ರೀಪ್ರದೇ ।
ಗೃಹಾಣ ಮುಖಮೀಕ್ಷತುಂ ಮುಕುರಬಿಂಬಮಾವಿದ್ರುಮೈ-
ರ್ವಿನಿರ್ಮಿತಮಧಚ್ಛಿದೇ ರತಿಕರಾಂಬುಜಸ್ಥಾಯಿನಮ್ ॥ 8॥

ಕಸ್ತೂರೀದ್ರವಚಂದನಾಗುರುಸುಧಾಧಾರಾಭಿರಾಪ್ಲಾವಿತಂ
ಚಂಚಚ್ಚಂಪಕಪಾಟಲಾದಿಸುರಭಿರ್ದ್ರವ್ಯೈಃ ಸುಗಂಧೀಕೃತಮ್ ।
ದೇವಸ್ತ್ರೀಗಣಮಸ್ತಕಸ್ಥಿತಮಹಾರತ್ನಾದಿಕುಂಭವ್ರಜೈ-
ರಂಭಃಶಾಂಭವಿ ಸಂಭ್ರಮೇಣ ವಿಮಲಂ ದತ್ತಂ ಗೃಹಾಣಾಂಬಿಕೇ ॥ 9॥

ಕಹ್ಲಾರೋತ್ಪಲನಾಗಕೇಸರಸರೋಜಾಖ್ಯಾವಲೀಮಾಲತೀ-
ಮಲ್ಲೀಕೈರವಕೇತಕಾದಿಕುಸುಮೈ ರಕ್ತಾಶ್ವಮಾರಾದಿಭಿಃ ।
ಪುಷ್ಪೈರ್ಮಾಲ್ಯಭರೇಣ ವೈ ಸುರಭಿಣಾ ನಾನಾರಸಸ್ರೋತಸಾ
ತಾಮ್ರಾಂಭೋಜನಿವಾಸಿನೀಂ ಭಗವತೀಂ ಶ್ರೀಚಂಡಿಕಾಂ ಪೂಜಯೇ ॥ 10॥

ಮಾಂಸೀಗುಗ್ಗುಲಚಂದನಾಗುರುರಜಃ ಕರ್ಪೂರಶೈಲೇಯಜೈ-
ರ್ಮಾಧ್ವೀಕೈಃ ಸಹಕುಂಕುಮೈಃ ಸುರಚಿತೈಃ ಸರ್ಪಿಭಿರಾಮಿಶ್ರಿತೈಃ ।
ಸೌರಭ್ಯಸ್ಥಿತಿಮಂದಿರೇ ಮಣಿಮಯೇ ಪಾತ್ರೇ ಭವೇತ್ ಪ್ರೀತಯೇ
ಧೂಪೋಽಯಂ ಸುರಕಾಮಿನೀವಿರಚಿತಃ ಶ್ರೀಚಂಡಿಕೇ ತ್ವನ್ಮುದೇ ॥ 11॥

ಘೃತದ್ರವಪರಿಸ್ಫುರದ್ರುಚಿರರತ್ನಯಷ್ಟ್ಯಾನ್ವಿತೋ
ಮಹಾತಿಮಿರನಾಶನಃ ಸುರನಿತಂಬಿನೀನಿರ್ಮಿತಃ ।
ಸುವರ್ಣಚಷಕಸ್ಥಿತಃ ಸಘನಸಾರವರ್ತ್ಯಾನ್ವಿತ-
ಸ್ತವ ತ್ರಿಪುರಸುಂದರಿ ಸ್ಫುರತಿ ದೇವಿ ದೀಪೋ ಮುದೇ ॥ 12॥

ಜಾತೀಸೌರಭನಿರ್ಭರಂ ರುಚಿಕರಂ ಶಾಲ್ಯೋದನಂ ನಿರ್ಮಲಂ
ಯುಕ್ತಂ ಹಿಂಗುಮರೀಚಜೀರಸುರಭಿರ್ದ್ರವ್ಯಾನ್ವಿತೈರ್ವ್ಯಂಜನೈಃ ।
ಪಕ್ವಾನ್ನೇನ ಸಪಾಯಸೇನ ಮಧುನಾ ದಧ್ಯಾಜ್ಯಸಮ್ಮಿಶ್ರಿತಂ
ನೈವೇದ್ಯಂ ಸುರಕಾಮಿನೀವಿರಚಿತಂ ಶ್ರೀಚಂಡಿಕೇ ತ್ವನ್ಮುದೇ ॥ 13॥

ಲವಂಗಕಲಿಕೋಜ್ಜ್ವಲಂ ಬಹುಲನಾಗವಲ್ಲೀದಲಂ
ಸಜಾತಿಫಲಕೋಮಲಂ ಸಘನಸಾರಪೂಗೀಫಲಮ್ ।
ಸುಧಾಮಧುರಮಾಕುಲಂ ರುಚಿರರತ್ನಪಾತ್ರಸ್ಥಿತಂ
ಗೃಹಾಣ ಮುಖಪಂಕಜೇ ಸ್ಫುರಿತಮಂಬ ತಾಂಬೂಲಕಮ್ ॥ 14॥

ಶರತ್ಪ್ರಭವಚಂದ್ರಮಃ ಸ್ಫುರಿತಚಂದ್ರಿಕಾಸುಂದರಂ
ಗಲತ್ಸುರತರಂಗಿಣೀಲಲಿತಮೌಕ್ತಿಕಾಡಂಬರಮ್ ।
ಗೃಹಾಣ ನವಕಾಂಚನಪ್ರಭವದಂಡಖಂಡೋಜ್ಜ್ವಲಂ
ಮಹಾತ್ರಿಪುರಸುಂದರಿ ಪ್ರಕಟಮಾತಪತ್ರಂ ಮಹತ್ ॥ 15॥

ಮಾತಸ್ತ್ವನ್ಮುದಮಾತನೋತು ಸುಭಗಸ್ತ್ರೀಭಿಃ ಸದಾಽಽಂದೋಲಿತಂ
ಶುಭ್ರಂ ಚಾಮರಮಿಂದುಕುಂದಸದೃಶಂ ಪ್ರಸ್ವೇದದುಃಖಾಪಹಮ್ ।
ಸದ್ಯೋಽಗಸ್ತ್ಯವಸಿಷ್ಠನಾರದಶುಕವ್ಯಾಸಾದಿವಾಲ್ಮೀಕಿಭಿಃ
ಸ್ವೇ ಚಿತ್ತೇ ಕ್ರಿಯಮಾಣ ಏವ ಕುರುತಾಂ ಶರ್ಮಾಣಿ ವೇದಧ್ವನಿಃ ॥ 16॥

ಸ್ವರ್ಗಾಂಗಣೇ ವೇಣುಮೃದಂಗಶಂಖಭೇರೀನಿನಾದೈರೂಪಗೀಯಮಾನಾ ।
ಕೋಲಾಹಲೈರಾಕಲಿತಾತವಾಸ್ತು ವಿದ್ಯಾಧರೀನೃತ್ಯಕಲಾಸುಖಾಯ ॥ 17॥

ದೇವಿ ಭಕ್ತಿರಸಭಾವಿತವೃತ್ತೇ ಪ್ರೀಯತಾಂ ಯದಿ ಕುತೋಽಪಿ ಲಭ್ಯತೇ ।
ತತ್ರ ಲೌಲ್ಯಮಪಿ ಸತ್ಫಲಮೇಕಂಜನ್ಮಕೋಟಿಭಿರಪೀಹ ನ ಲಭ್ಯಮ್ ॥ 18॥

ಏತೈಃ ಷೋಡಶಭಿಃ ಪದ್ಯೈರೂಪಚಾರೋಪಕಲ್ಪಿತೈಃ ।
ಯಃ ಪರಾಂ ದೇವತಾಂ ಸ್ತೌತಿ ಸ ತೇಷಾಂ ಫಲಮಾಪ್ನುಯಾತ್ ॥ 19॥

॥ ಇತಿ ದುರ್ಗಾತಂತ್ರೇ ದುರ್ಗಾಮಾನಸಪೂಜಾ ಸಮಾಪ್ತಾ ॥

‎ರಾಷ್ಟ್ರಧ್ವಜ‬

‎ರಾಷ್ಟ್ರಧ್ವಜ‬

» ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2

» ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ

» ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ.ಇದು ನಿಲಿ ಬಣ್ಣದಿಂದ ಕೂಡಿದೆ.

» ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ 1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು.

» ಭಾರತದ ಧ್ವಜಸಂಹಿತೆ (flag code) 26 ಜನೆವರಿ 2002 ರಂದು ಜಾರಿಗೆ ಬಂದಿತು.

» ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು.

» ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ.

» ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು.

» ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು

» ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ.

» ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.

ವೇದಗಳು

ವೇದಗಳು ~ ಭಾರತೀಯ ಸನಾತನ ಸಂಸ್ಕೃತಿಯ ಮೂಲಸ್ರೋತಸ್ಸು ವೇದಗಳಾಗಿವೆ. ಧರ್ಮ-ಬ್ರಹ್ಮಗಳ ಕುರಿತಾದ ಪರಮ ಪ್ರಾಮಾಣಿಕ ವಿಚಾರವೇ ವೇದ. ಬ್ರಹ್ಮಾಂಡದಲ್ಲಿ ಅಂತರ್ಗತವಾದ ಮೂಲಭೂತ ತತ್ವವೇ ಬ್ರಹ್ಮವಾದರೆ, ಬ್ರಹ್ಮಾಂಡದ ಆಧಾರಭೂತವಾದ ಕ್ರಿಯಾಮಯ ಚೇತನವೇ ಧರ್ಮವಾಗಿದೆ. ಇಂತಹ ಧರ್ಮ-ಬ್ರಹ್ಮಗಳನ್ನು ಪ್ರಾಮಾಣಿಕವಾಗಿ ಬೋಧಿಸುವ ಜ್ಞಾನರಾಶಿಯೇ ವೇದ. ಗೌಣಾರ್ಥದಲ್ಲಿ ಪರಿಚಾಯಕ ಗ್ರಂಥರಾಶಿಯೇ ವೇದ.

ಧರ್ಮಬ್ರಹ್ಮಣೀ ವೇದೈಕವೇದ್ಯೇ |
ಧರ್ಮಂ ಜಿಜ್ಞಾಸಮಾನಾನಾಂ ಪ್ರಮಾಣಂ ಪರಮಂ ಶ್ರುತಿಃ ||

ಇತ್ಯಾದಿ ಶತಶಃ ವಚನಗಳು ಇದನ್ನು ಪ್ರಮಾಣೀಕರಿಸುತ್ತವೆ.

ಇಂತಹ ವೇದಗಳಿಂದ ನಾವು ಇಷ್ಟಪ್ರಾಪ್ತಿ ಮತ್ತು ಅನಿಷ್ಟಪರಿಹಾರಗಳೆಂಬ ಪ್ರಯೋಜನವನ್ನು ಹೊಂದಬಹುದಾಗಿದೆ. ಇದನ್ನು ಸಾಯಣಾಚಾರ್ಯರು ಹೀಗೆ ಸ್ಪಷ್ಟಪಡಿಸಿದ್ದಾರೆ.

ಇಷ್ಟಪ್ರಾಪ್ತ್ಯನಿಷ್ಟಪರಿಹಾರಯೋಃ ಅಲೌಕಿಕಮುಪಾಯಂ ಯೋ ಗ್ರಂಥೋ ವೇದಯತಿ ಸ ವೇದಃ||

 ಅಂದರೆ ವೇದವಿಹಿತವಾದ ಅಲೌಕಿಕ ಉಪಾಯರೂಪ ಕರ್ಮಗಳಿಂದ ನಮಗೆ ಇಷ್ಟವಾದುದು ಪ್ರಾಪ್ತವಾಗುತ್ತದೆ ಮತ್ತು ಅನಿಷ್ಟವಾದುದು ದೂರವಾಗುತ್ತದೆ.

ಅಗ್ನಿಹೋತ್ರಂ ಜುಹುಯಾತ್ ಸ್ವರ್ಗಕಾಮಃ ||

ಇಲ್ಲಿ ಸ್ವರ್ಗರೂಪ ಇಷ್ಟಪ್ರಾಪ್ತಿಗೆ ಅಗ್ನಿಹೋತ್ರಾನುಷ್ಠಾನ ರೂಪ ಅಲೌಕಿಕ ಉಪಾಯವು ವಿಹಿತವಾಗಿದೆ.

ಸರ್ವಂ ಪಾಪ್ಮಾನಂ ತರತಿ ತರತಿ ಬ್ರಹ್ಮಹತ್ಯಾಂ, ಯೋsಶ್ವಮೇಧೇನ ಯಜತೇ | ಯು ಉ ಚೈನಮೇವಂ ವೇದ||

ಇಲ್ಲಿ ಪಾಪ ಮತ್ತು ಬ್ರಹ್ಮಹತ್ಯಾದೋಷ ರೂಪ ಅನಿಷ್ಟಗಳಿಗೆ ಪರಿಹಾರವಾಗಿ ಅಶ್ವಮೇಧಯಾಗಾನುಷ್ಠಾನರೂಪದಲ್ಲಿ ಅಲೌಕಿಕ ಉಪಾಯವು ವಿಹಿತವಾಗಿದೆ. ಕರ್ಮಕಾಂಡದಲ್ಲಿ ಈ ಪ್ರಕಾರವಾದರೆ, ಜ್ಞಾನಕಾಂಡದಲ್ಲಿ ಬ್ರಹ್ಮರೂಪ ಇಷ್ಟಪ್ರಾಪ್ತಿಯನ್ನೂ, ಅಹಂತಾ, ಮಮತಾ ಇತ್ಯಾದಿ ಅನಿಷ್ಟ ಪರಿಹಾರಕ್ಕೆ ಸಾಧನ ಚತುಷ್ಟಯಾದಿ ಅಲೌಕಿಕ ಉಪಾಯವನ್ನೂ ವೇದವು ತಿಳಿಸಿಕೊಡುತ್ತದೆ. ಈ ಪ್ರಕಾರ ಪ್ರತ್ಯಕ್ಷಾನುಮಾನ- ಉಪಮಾನ ಪ್ರಮಾಣಗಳಿಂದ ಲೌಕಿಕವಾಗಿ ತಿಳಿಯಲಸಾಧ್ಯವಾದ, ಇಷ್ಟಪ್ರಾಪ್ತಿ ಮತ್ತು ಅನಿಷ್ಟ ಪರಿಹಾರಗಳಿಗೆ ಅಲೌಕಿಕವಾದ ಉಪಾಯವನ್ನು ತಿಳಿಸುವುದೇ ವೇದದ ಪರಮ ಪ್ರಯೋಜನವಾಗಿದೆ.

ಈ ಅಲೌಕಿಕ ಉಪಾಯವು ಅನುಷ್ಠಾನರೂಪವಾಗಿದೆ. ಇದನ್ನು ಮಂತ್ರಗಳೂ, ಬ್ರಾಹ್ಮಣಗಳೂ ನಮಗೆ ಬೋಧಿಸುತ್ತವೆ. ಮಂತ್ರಾಶ್ಚ ಕರ್ಮಕರಣಾಃ || ಎಂಬಂತೆ ಅನುಷ್ಠಾನದಲ್ಲಿ ಕರಣತ್ವೇನ ಪರಿಗೃಹೀತವಾಗಿ ಯಾಜ್ಞಿಕ ಪ್ರಸಿದ್ಧಿಯಿಂದ ಮಂತ್ರತ್ವೇನ ಗೃಹೀತವಾದ ವೇದಭಾಗವು ಮಂತ್ರವೆನಿಸುವುದು. ಇದನ್ನು ಹೊರತುಪಡಿಸಿ ಉಳಿದೆಲ್ಲ ಭಾಗವು “ಶೇಷೇ ಬ್ರಾಹ್ಮಣಶಬ್ಧಃ” ಎಂಬಂತೆ ಬ್ರಾಹ್ಮಣ ಎನಿಸಿಕೊಳ್ಳುತ್ತದೆ. ಇದರಲ್ಲಿ ಬ್ರಾಹ್ಮಣಾನೀತಿಹಾಸಾನ್ ಪುರಾಣಾನಿ ಕಲ್ಪಾನ್ಗಾಥಾ ನಾರಾಶಾಗ್ ಂಸೀಃ -ಎಂಬಂತೆ ಪುರಾಣ, ಇತಿಹಾಸ, ಕಲ್ಪ, ಗಾಥಾ, ನಾರಾಶಂಸೀ ಎಲ್ಲವೂ ಅಂತರ್ಗತವಾಗಿವೆ. ಸಂಹಿತಾ-ಬ್ರಾಹ್ಮಣ- ಆರಣ್ಯಕ ಎಂಬುದಾಗಿ ಸ್ವತೋವಿಭಕ್ತವಾಗಿ ತನ್ನನ್ನು ತೋರಿಸಿಕೊಳ್ಳುವ ವೇದವು ಆರಣ್ಯಕವನ್ನು ಬ್ರಾಹ್ಮಣಭಾಗದಲ್ಲಿ ಆಂತರ್ಗತವಾಗಿಸಿದೆ. ಇದರಿಂದ “ಮಂತ್ರಬ್ರಾಹ್ಮಣಯೋಃ ವೇದನಾಮಧೇಯಮ್” ಎಂಬುದಾಗಿ ವೇದಲಕ್ಷಣವು ಸಂಪನ್ನವಾಗಿದೆ.

ಸಂಹಿತಾ ಮಂತ್ರಾತ್ಮಕವಾಗಿದ್ದರೆ ಬ್ರಾಹ್ಮಣ ವಿಧ್ಯರ್ಥವಾದಾತ್ಮಕವಾಗಿದೆ. ಆರಣ್ಯಕವು ಜ್ಞಾನಕಾಂಡವೆಂಬುದಾಗಿ ಪ್ರಸಿದ್ಧವಾಗಿದೆ. ತಥಾಪಿ ಕ್ವಚಿತ್ ತತ್ಪ್ರತಿಷ್ಠೇತ್ಯುಪಾಸೀತ, ತನ್ನಮ ಇತ್ಯುಪಾಸೀತ – ಇತ್ಯಾದಿ ಉಪಾಸನಾ ಭಾಗವನ್ನು, ಪ್ರವರ್ಗ್ಯ ವಿಧಿಬೋಧಕವಾಗಿ ಕರ್ಮಕಾಂಡವನ್ನು ವಿವರಿಸುತ್ತಿದೆ. ಆರಣ್ಯಕದ ಕೊನೆಯಲ್ಲಿ ಉಪನಿಷತ್ತು ಸೇರಿಕೊಂಡಿದೆ. ಆದುದರಿಂದಲೇ ಆರಣ್ಯಕೋಪನಿಷತ್ ಎಂಬ ನಾಮಧೇಯವಿದೆ. ಅರಣ್ಯಾಧ್ಯಯನಾದೇತದಾರಣ್ಯಕಮೀತೀರ್ಯತೇ | ಅರಣ್ಯಾಧ್ಯಾಯಯೋಗ್ಯತ್ವಾದಪ್ಯಾರಣ್ಯಕಮಿಷ್ಯತೇ|| ಎಂಬ ಸಾಯಣ ಭಾಷ್ಯ ವಚನದಂತೆ ಅರಣ್ಯದಲ್ಲಿ ಕುಳಿತು ಅಧ್ಯಯವ ಮಾಡಬೇಕಾಗಿರುವ ಮತ್ತು ಆರಣ್ಯರು-ಸನ್ಯಾಸಿಗಳು ಕೂಡಾ ಅಧ್ಯಯನ ಮಾಡುವುದಕ್ಕೆ ಯೋಗ್ಯವಾದ ಪವಿತ್ರವೂ, ರಹಸ್ಯವೂ ಆದ ವಿದ್ಯೆ ಆರಣ್ಯಕವಾಗಿದೆ. ಒಟ್ಟಿನಲ್ಲಿ ಸಂಹಿತಾ-ಬ್ರಾಹ್ಮಣ-ಆರಣ್ಯಕಗಳಿಂದ ಕರ್ಮ-ಜ್ಞಾನ-ಉಪಾಸನಾ ಇವು ಮೂರೂ ಬೋಧಿತವಾಗುತ್ತವೆ.

ಅನಂತಾ ವೈ ವೇದಾಃ | ಎಂಬಂತೆ ವೇದಗಳು ಅನಂಯವಾಗಿವೆ. ಈಗ ಉಪಲಬ್ಧವಿರುವುದು ಮಾತ್ರ ಸಾಂತವಾಗಿದೆ. ಏಕಶತಮಧ್ವರ್ಯುಶಾಖಾಃ, ಸಹಸ್ರವರ್ತ್ಮಾ ಸಾಮವೇದಃ, ಏಕವಿಂಶತಿಧಾ ಬಾಹ್ವೃಚ್ಯಂ, ನವಧಾsಥರ್ವಣೋ ವೇದಃ|| ಎಂಬುದಾಗಿ ಮಹಾಭಾಷ್ಯಕಾರ ಪತಂಜಲಿಗಳು ಗಣಿಸಿದ್ದಾರೆ, ಅಂದರೆ ಯಜುರ್ವೇದ ನೂರ ಒಂದು ಶಾಖೆ, ಸಾಮವೇದ ಸಹಸ್ರಶಾಖೆ, ಋಗ್ವೇದ ಇಪ್ಪತ್ತೊಂದು ಶಾಖೆ, ಅಥರ್ವಣ ಒಂಭತ್ತು ಶಾಖೆ. ಈ ಸಂಖ್ಯೆಯು ಆ ಕಾಲದಲ್ಲಿ ಪ್ರಚಲಿತವಾಗಿದ್ದ ಶಾಖಾವಿಷಯಕವಾಗಿದೆ.  ಈ ಸಂಖ್ಯಾಭಿಪ್ರಾಯವನ್ನು ಚರಣವ್ಯೂಹ ಗ್ರಂಥವೂ ತಿಳಿಸುತ್ತದೆ.ಇವುಗಳಲ್ಲಿ ಅನೇಕ ಶಾಖೆಗಳು ಲುಪ್ತವಾಗಿದ್ದು, ಬೆರಳೆಣಿಕೆಯಷ್ಟು ಮಾತ್ರ ಉಪಲಬ್ಧ ಇವೆ. ಶಾಖೆಗಳು ಉಪಲಬ್ಧವೆಂದರೆ ಗ್ರಂಥರೂಪದಲ್ಲಿ ಇದ್ದರೆ ಸಾರ್ಥಕವಾಗುವುದಿಲ್ಲ.  ಆಯಾ ಶಾಖೆಯ ಅಧ್ಯೇತೃಗಳೇ ಜೀವಂತ ಉಪಲಬ್ಧಿಯೆನಿಸುತ್ತಾರೆ.

ತ್ರಯೀ ಶಬ್ಧವು ಸಂಹಿತಾ-ಬ್ರಾಹ್ಮಣ-ಉಪನಿಷತ್- ಈ ಮೂರು ಅವಯವಗಳಿಂದ ಅರ್ಥವತ್ತಾಗಿದೆ. ಇವು ಮೂರು ಋಗ್ಯಜುಸ್ಸಾಮಾಥರ್ವ ರೂಪ ಚತುರ್ವೇದಗಳಲ್ಲಿಯೂ ಸಮಾನವಾಗಿವೆ. ಕ್ವಚಿತ್ ಋಗ್ಯಜುಸ್ಸಾಮ ಎಂಬುದಾಗಿ ವೇದತ್ರಯಗಳು ತ್ರಯೀ ಎನಿಸುತ್ತವೆ. ಪ್ರಸಂಗವಶಾತ್ ಈ ಅರ್ಥವು ಸಾಧುವೇ. ಆದರೂ ಋಗ್ ಲಕ್ಷಣಬಾಹುಲ್ಯವಿರುವ ಅಥರ್ವ ವೇದವನ್ನು ತ್ರಯೀಬಹಿರ್ಭೂತವೆಂದು ಕಲ್ಪಿಸುವುದು ಅನುಚಿತ.

ಛಂದೋನೀಯತತ್ವ, ಗೀತಿರೂಪತ್ವ, ವೃತ್ತಗೀತಿವರ್ಜಿತತ್ವೇನ ಪ್ರಶ್ಲಿಷ್ಟ ಪಠಿತತ್ವ- ಈ ಪ್ರಕಾರ ಲಕ್ಷಣೋಪೇತವಾಗಿರುವ ಋಕ್  ಸಾಮಯಜುರ್ವೇದಗಳು ಲಕ್ಷಣಾವಶಾತ್ ಭಿನ್ನವಾಗಿಯೇ ಹೊರತು ತಾತ್ವಿಕವಾಗಿ ಒಂದೇ ಆಗಿವೆ. ಕೃಷ್ಣದ್ವೈಪಾಯನರು ಜಗದುಪಕಾರಾರ್ಥವಾಗಿ ಏಕೀಭೂಯಾಸ್ಥಿತವಾದ ವೇದವನ್ನು ಚತುರ್ಧಾ ವಿಭಾಗಿಸಿದರು. “ಸಕಲವೇದಪರಿಪಾಲನಂ ತು ಅಶಕ್ಯಮೇಕೇನ ಪುರುಷೇಣ ಇತಿ ಶಾಖಾಬೇಧ ಪ್ರವೃತ್ತಿಃ” ಎಂಬುದಾಗಿ ಭಟ್ಟಭಾಸ್ಕರರು ಶಾಖಾಬೇಧಕ್ಕೆ ಯುಕ್ತಿಯನ್ನು ನೀಡಿರುತ್ತಾರೆ.

ಈ ಪ್ರಕಾರ ಶಾಖಾಬೇಧದಿಂದ ವೇದಪರಿಪಾಲನೆಯು ಸುಲಭವಾಗಿವೆ. ಸ್ವಶಾಖೆಯ ಅಧ್ಯಯನದಿಂದಲೇ ‘ಸ್ವಾಧ್ಯಾಯೋsಧ್ಯೇತವ್ಯಃ’ – ಎಂಬ ಅಧ್ಯಯನ ವಿಧಿಯು ನಿರಾಕಾಂಕ್ಷವಾಗುವುದು. ಅಧ್ಯಯನ ವಿಧಿಯು ಅರ್ಥಜ್ಞಾನ ಪರ್ಯಾವಸಾಯಿಯೇ ಹೊರತು ಕೇವಲ ಅಕ್ಷರಗ್ರಹಣಕ್ಕೆ ಸೀಮಿತವಾಗಿಲ್ಲ.

 

ಆದುದರಿಂದಲೇ “ಬ್ರಾಹ್ಮಣೇನ ನಿಷ್ಕಾರಣೋ ಧರ್ಮಃ ಷಡಂಗೋ ವೇದೋsಧ್ಯೇಯೋ ಜ್ಞೇಯಶ್ಚ|ಎಂಬುದಾಗಿ ಪತಂಜಲಿ ಮಹರ್ಷಿಗಳ ಮಹಾಭಾಷ್ಯ ವಚನದಂತೆ ಪ್ರತಿಯೊಬ್ಬ ಬ್ರಾಹ್ಮಣನು ಫಲಾಪೇಕ್ಷೆ ಇಲ್ಲದೆ ಮಹಿಮಾತಿಶಯಯುತವಾದ ಸಾಂಗವೇದವನ್ನು ಅಧ್ಯಯನ ಮಾಡಬೇಕು. ಇದು ಅನುಲ್ಲಂಘನೀಯ ಶಾಸ್ತ್ರನಿಯಮವಾಗಿದೆ.

ಕೃಷ್ಣ ಯಜುರ್ವೇದ

“ಏಕಶತಮಧ್ವರ್ಯುಶಾಖಾಃ” – ಎಂಬುದಾಗಿ ನೂರ ಒಂದು ಶಾಖಾತ್ಮಕವಾಗಿರುವ ಅಧ್ವರ್ಯುವೇದವೇ ಯಜುರ್ವೇದ. ಹಿಂದೆ ಹೇಳಿದಂತೆ ಋಕ್ ಮತ್ತು ಸಾಮಗಳಿಂದ ಭಿನ್ನವಾಗಿ ಅನಿಯತಾಕ್ಷರಾವಸಾನವಾಗಿ, ಪ್ರಶ್ಲಿಷ್ಟಪಠಿತವಾಗಿರುವ ಮಂತ್ರಸಮೂಹವೇ ಯಜುಸ್ಸು ಎನಿಸಿಕೊಳ್ಳುತ್ತದೆ. ಈ ಪ್ರಕಾರ ಯಜುರ್ಮಂತ್ರಗಳ ಬಾಹುಲ್ಯವಿರುವ ಶಾಖೆಯೇ ಯಜುರ್ವೇದ. ಇಲ್ಲಿ ಋಕ್ಕುಗಳೂ, ಸಾಮಗಳೂ ಸೇರಿಕೊಂಡಿವೆ. ಯಜುರ್ವೇದವು ಶುಕ್ಲ-ಕೃಷ್ಣ ಎಂಬುದಾಗಿ ದ್ವಿಧಾ ವಿಭಕ್ತವಾಗಿದ್ದು, ಶುಕ್ಲಯಜುರ್ವೇದದಲ್ಲಿ ಮಂತ್ರ- ಬ್ರಾಹ್ಮಣಗಳು ವ್ಯವಸ್ಥಿತವಾಗಿ ಕಂಡುಬರುತ್ತಿವೆ. ಇದರಲ್ಲಿ ಕಾಣ್ವ- ಮಾಧ್ಯಂದಿನ ಎಂದು ಎರಡು ಶಾಖೆಗಳಿವೆ.

ಕೃಷ್ಣ ಯಜುರ್ವೇದದಲ್ಲಿ ತೈತ್ತಿರೀಯ, ಮೈತ್ರಾಯಣೀಯ, ಕಾಠಕ ಎಂದು ಮೂರು ಶಾಖೆಗಳು ಉಪಲಬ್ಧಿಯಿವೆ. ಇದರಲ್ಲಿ ತೈತ್ತಿರೀಯ ಶಾಖಾಧ್ಯಾಯಿಗಳು ಭಾರತದಾದ್ಯಂತ- ತತ್ರಾಪಿ ದಕ್ಷಿಣ ಭಾರತದಲ್ಲಿ ಬಹಳ ಮಂದಿ ಇದ್ದಾರೆ. ಚರಣವ್ಯೂಹ ಗ್ರಂಥವು ತೈತ್ತಿರೀಯ ಶಾಖೆಯ ಬಗ್ಗೆ ಈ ಮುಂದಿನಂತೆ ತಿಳಿಸಿದೆ.

“ತೈತ್ತಿರೀಯಕಾ ನಾಮ ದ್ವಿಭೇದಾ ಭವಂತಿ | ಔಖ್ಯಾಃ, ಖಾಂಡಿಕೇಯಾಶ್ಚೇತಿ|ತತ್ರ ಖಾಂಡಿಕೇಯಾ ನಾಮ ಪಂಚಭೇದಾ ಭವಂತಿ| ಆಪಸ್ತಂಭಾಃ, ಬೋಧಾಯನಾಃ, ಸತ್ಯಾಷಾಢಾಃ,

ಹೈರಣ್ಯಕೇಶಾಃ, ಕಾಣ್ವಾಯಾನಾಶ್ಚೇತಿ|”

ತೈತ್ತಿರೀಯ ಈ ಭೇದವು ಸೂತ್ರಾನುಸಾರಿಯೇ ಹೊರತು, ಎಲ್ಲಾ ಸೂತ್ರದವರಿಗೂ ಸಂಹಿತಾ-ಬ್ರಾಹ್ಮಣ-ಆರಣ್ಯಕಗಳು ಒಂದೇ ಆಗಿದೆ.

ಯಜುರ್ವೇದದ ಕೃಷ್ಣತ್ವದ ಬಗ್ಗೆ ಕೆಲವು ಮತಗಳಿವೆ.

ವೇದೋಪಕ್ರಮಣೇ ಚತುರ್ದಶೀಯುಕ್ತಪೂರ್ಣಿಮಾಗ್ರಹಣಾತ್ ಶುಕ್ಲ ಯಜುಃ ಪ್ರತಿಪದ್ಯುಕ್ತಪೂರ್ಣಿಮಾಗ್ರಹಣಾತ್, ಕೃಷ್ಣಯಜುರಿತಿ| ತೈತ್ತಿರೀಯರಿಗೆ ಉಪಾಕರ್ಮವು ಶ್ರಾವಣಪೂರ್ಣಿಮೆಯಂದು ವಿಹಿತವಾಗಿದೆ. ಚತುರ್ದಶೀ ಸಹಿತವಾದ ಪೂರ್ಣಿಮೆಯಂದು ಕೆಲವರು ವೇದಾರಂಭಮಾಡಿದರೆ, ಕೆಲವರು ಮುಂದಿನ ದಿನ ಅಂದರೆ ಪ್ರತಿಪತ್ಸಹಿತವಾದ ಹುಣ್ಣಿಮೆಯಂದು ವೇದಾರಂಭವನ್ನಾಚರಿಸುತ್ತಾರೆ. ಚತುರ್ದಶೀಯುಕ್ತವಾದರೆ ಶುಕ್ಲಪಕ್ಷದಲ್ಲಿ ವೇದಾರಂಭ ಮಾಡಿದಂತಾಗುವುದು. ಪ್ರತಿಪತ್ಸಹಿತವಾದ ಹುಣ್ಣಿಮೆಯಂದು ಮಾಡಿದ ವೇದಾರಂಭ ಕೃಷ್ಣಪಕ್ಷದಲ್ಲಿ ಆಚರಿಸಿದಂತಾಗುವುದು. ಈ ಪ್ರಕಾರ ಕೃಷ್ಣಪಕ್ಷದ ಸ್ಪರ್ಶದಿಂದ ಅಂದರೆ ಪ್ರತಿಪದ್ಯುಕ್ತ ಪೂರ್ಣಿಮೆಯಂದು ವೇದಾರಂಭವನ್ನಾಚರಿಸುವವರು ಕೃಷ್ಣಯಜುರ್ವೇದೀಯರು, ಅವರು ಅಧ್ಯಯನ ಮಾಡುವ ವೇದ ಕೃಷ್ಣಯಜುರ್ವೇದ ಎನಿಸಿದೆ.

 

ಅಗ್ನ್ಯಾಧಾನಾನಂತರದಲ್ಲಿ ದರ್ಶ-ಪೂರ್ಣಾಮಾಸೇಷ್ಟಿಗಳನ್ನು ಮಾಡುವಾಗ ಕೃಷ್ಣಯಜುಃಶಾಖೆಯವರು ಪೂರ್ಣಮಾಸೇಷ್ಟಿಯಿಂದ ಇಷ್ಟಾರಂಭ ಮಾಡುತ್ತಾರೆ.  ಪೂರ್ಣಿಮೆಯ ನಂತರದಲ್ಲಿ ಕೃಷ್ಣಪಕ್ಷ ಬರುವುದರಿಂದ ಚಂದ್ರನ ಕ್ಷಯದಂತೆ ಯಜಮಾನನಿಗೆ ಬರುವ ದೋಷದ ನಿವೃತ್ತಿಗಾಗಿ ಸಾರಸ್ವತ ಹೋಮವನ್ನು ಮಾಡುತ್ತಾರೆ. ಈ ಪ್ರಕಾರ ಪೂರ್ಣಮಾಸೇಷ್ಟಿಯ ನಂತರದಲ್ಲಿ, ಕೃಷ್ಣಪಕ್ಷಾರಂಭವಾಗುವುದರಿಂದ, ಈ ಕ್ರಮದಲ್ಲಿ ಅನುಷ್ಠಿಸುವವರ ಸಂಬಂಧೀ ಶಾಖೆಯು ಕೃಷ್ಣಯಜುರ್ವೇದ ಎನಿಸಿದೆ.

ಬುದ್ಧಿಮಾಲಿನ್ಯಹೇತುತ್ವಾನ್ ತದ್ಯಜುಃ ಕೃಷ್ಣಮೀರ್ಯತೇ|
ವ್ಯವಸ್ಥಿತಪ್ರಕರಣಂ ತದ್ಯಜುಃ ಶುಕ್ಲಮೀರ್ಯತೇ |

ಮಂತ್ರ- ಬ್ರಾಹ್ಮಣಗಳು ವ್ಯವಸ್ಥಿತವಾಗಿರದೆ, ಮಿಶ್ರವಾಗಿದ್ದು, ತಿಳಿದುಕೊಳ್ಳಲು ಕಷ್ಟಸಾಧ್ಯವಾಗಿರುವುದರಿಂದ – ಈ ಪ್ರಕಾರದ ಯಜುಸ್ಸಮೂಹವು ಕೃಷ್ಣಯಜುರ್ವೇದ ಎನಿಸಿದೆ.

ಕೃಷ್ಣಯಜುರ್ವೇದದ ತೈತ್ತಿರೀಯ ಶಾಖಾಧ್ಯಯನದಲ್ಲಿ ಸಾರಸ್ವತಪಾಠವು ವಿಹಿತವಾಗಿದೆ, ಸಾಂಪ್ರದಾಯಿಕವಾಗಿದೆ. ಇಲ್ಲಿ ಮಂತ್ರ-ಬ್ರಾಹ್ಮಣಗಳ ಸಾಂಕರ್ಯವಿದೆ. “ಅಪಿ ಸಾರಸ್ವತೇ ಪಾಠೇ ಜ್ಞಾನಮಾತ್ರಮಿಹೇಷ್ಯತೇ” – ಎಂಬಂತೆ ಮಂತ್ರ-ಬ್ರಾಹ್ಮಣ ವಿವೇಕಾರ್ಥವಾಗಿ ಕಾಂಡಾನುಕ್ರಮಣಿಕಾ ಪಾಠವನ್ನು ತಿಳಿಯಬೇಕು. ಇದಕ್ಕೆ ಬೋಧಾಯನ-ಆಪಸ್ತಂಬ ಹಿರಣ್ಯಕೇಶೀಯ ಗೃಹ್ಯಸೂತ್ರಗಳು ಆಧಾರವಾಗಿವೆ.

ತಿತ್ತಿರಿಣಾ ಪ್ರೋಕ್ತಂ – ತೈತ್ತಿರೀಯಂ |
ತೇನ ಪ್ರೋಕ್ತಂ (ಪಾಣಿನಿ ಸೂತ್ರ – 4-3-101)
ತಿತ್ತಿರಿ-ವರತಂತು-ಛಣ್ (ಪಾಣಿನಿ ಸೂತ್ರ 4-3-102)

ಈ ಸೂತ್ರಗಳಂತೆ ಆಚಾರ್ಯ ತಿತ್ತಿರಿಯು ವಿಶೇಷವಾಗಿ ಈ ಶಾಖೆಯನ್ನು ಪ್ರವಚನ ಮಾಡಿದ್ದರಿಂದ ತೈತ್ತಿರೀಯ ಎಂಬ ಹೆಸರು ಬಂದಿತು.

ಅಧ್ವರ್ಯು ರ್ವಾ ಋತ್ವಿಜಾಂ ಪ್ರಥಮೋ ಯುಜ್ಯತೇ, ತೇನ ಸ್ತೋಮೋ ಯೋಕ್ತವ್ಯ ಇತ್ಯಾಹುಃ ||

ಎಂಬಂತೆ ಯಜ್ಞದಲ್ಲಿ ಪ್ರಥಮವಾಗಿ ಅಧ್ವರ್ಯುವರಣವನ್ನು ಮಾಡುತ್ತಾರೆ. ಅವನು ಋತ್ವಿಗ್ಗಣವನ್ನು ಮುಂದೆ ಒಯ್ಯುವವನಾಗಿರುತ್ತಾನೆ. ಈ ಪ್ರಕಾರ ಅಧ್ವರ್ಯುವು ವಿಷಯಕ ಯಜ್ಞಪ್ರಕ್ರಿಯೆಯು ಈ ಶಾಖೆಯಲ್ಲಿ ಪ್ರಧಾನವಾಗಿಯೂ, ವಿಸ್ತಾರವಾಗಿಯೂ ಬಂದಿರುವುದರಿಂದ ಕೃಷ್ಣಯಜುರ್ವೇದವು ಅಧ್ವರ್ಯುವೇದ ಎಂದು ಪ್ರಸಿದ್ಧವಾಗಿದೆ.

ಯುಗಾಂತೇsನ್ತರ್ಹಿತಾನ್ ವೇದಾನ್ ಸೇತಿಹಾಸಾನ್ ಮಹರ್ಷಯಃ |
ಲೇಭಿರೇ ತಪಸಾ ಪೂರ್ವಮನುಜ್ಞಾತಾಃ ಸ್ವಯಂಭುವಾ||

ಮಹರ್ಷಿಗಳು ಕಲ್ಪಾದಿಯಲ್ಲಿ ಬ್ರಹ್ಮನಿಂದ ಅನುಜ್ಞಾತರಾಗಿ, ಯುಗಾಂತದಲ್ಲಿ ನಿಗೂಹಿತವಾಗಿದ್ದ ಇತಿಹಾಸ ಸಹಿತವಾದ ವೇದಗಳನ್ನು ತಪೋಬಲದಿಂದ ದರ್ಶನ ಮಾಡಿಕೊಂಡರು. ಇಂತಹ ಸತ್ವಯುತವಾದ ವೇದಗಳು ನಮಗೆಲ್ಲಾ ದಾರಿದೀಪಗಳಾಗಲಿ.

||ಸ್ವಸ್ತಿ ನೋ ಬೃಹಸ್ಪತಿರ್ದಧಾತು||

ಸರಕಾರ ಅಸ್ತಿತ್ವದಲ್ಲಿತ್ತು..?

ಈ ಸಂದೇಶವನ್ನು ಬೇರೆ ಗುಂಪುಗಳಿಗೆ ಹಂಚಲು ಜಾಸ್ತಿ ಹಣ ವೆಚ್ಚವಾಗುವದಿಲ್ಲ.. ಕೇವಲ ಐದು ನಿಮಿಷಗಳ ಸಮಯ ಸಾಕು..
ದೇಶಭಕ್ತಿಯನ್ನು ಸಾರಲು...!


👤ದೇಶವನ್ನು ಒಡೆದು ಇಬ್ಬಾಗ ಮಾಡುವಾಗ ಯಾವ ಸರಕಾರ ಅಸ್ತಿತ್ವದಲ್ಲಿತ್ತು..?

👤ಅದೀಕ್ರತ ಕಾಶ್ಮೀರ ನಿರ್ಮಾಣವಾದಾಗ ಯಾರ ಸರಕಾರ ಆಡಳಿತದಲ್ಲಿತ್ತು..?

👤ಮುಂಬಯಿ ಮೇಲೆ ದಾಳಿ ನೆಡೆದಾಗ ಯಾರ ಸರಕಾರ ಆಡಳಿತದಲ್ಲಿತ್ತು..?

👤ಚೈನಾ ದೇಶವು ಭಾರತದ ಭೂಮಿಯನ್ನು ವಶಪಡಿಸಿಕೊಂಡಾಗ ಯಾರ ಸರಕಾರ ಆಡಳಿತದಲ್ಲಿತ್ತು..?

👤ವೀರ ಸೈನಿಕರ ತಲೆ ಕತ್ತರಿಸಿ ಪಾಕಿಸ್ತಾನಕ್ಕೆ ಕೊಂಡು ಹೋದಾಗ ಯಾವ ಸರಕಾರ ಆಡಳಿತದಲ್ಲಿತ್ತು..? 

👤ಕಲ್ಲಿದ್ದಲು ಹಗರಣ ನೆಡೆದಾಗ ಯಾವ ಸರಕಾರ ಆಡಳಿತದಲ್ಲಿತ್ತು..?

👤ಸೈನಿಕರ ಸಮವಸ್ತ್ರದ ಹಣವನ್ನು ನುಂಗಿ ನೀರು ಕುಡಿಯುವಾಗ ಯಾವ ಸರಕಾರ ಆಡಳಿತ ನೆಡೆಸುತ್ತಿತ್ತು..?

👤ಸಿಕ್ ಸಮುದಾಯದ ಮಾರಣಹೋಮ ನೆಡೆದಾಗ ಯಾವ ಸರಕಾರ ಆಡಿಳಿತದಲ್ಲಿತ್ತು..?

👤ಸಿಮ್ಲಾ ಒಪ್ಪಂದ ಮಾಡಿಕೊಂಡು ದೇಶದ ಅಮೂಲ್ಯ ಭೂಮಿಯನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಾಗ ಯಾವ ಸರಕಾರ ಆಡಳಿತದಲ್ಲಿತ್ತು..?

👤ಆಸಾಮ್ ನಲ್ಲಿ ಹಿಂದೂಗಳ ಮಾರಣ ಹೋಮ ನೆಡೆದಾಗ ಯಾವ ಸರಕಾರ ಆಡಳಿತದಲ್ಲಿತ್ತು..?

👤ಕಾಸ್ಮೀರಿ ಪಂಡಿತರ ಹತ್ಯಾಕಾಂಡ ನೆಡೆದಾಗ ಯಾವ ಸರಕಾರ ಆಡಳಿತದಲ್ಲಿತ್ತು.?

👤ಕಾಮನ್ ವೆಲ್ತ್ ಕ್ರೀಡಾ ಹಗರಣ ನೆಡೆದಾಗ ಯಾವ ಸರಕಾರ ಆಡಳಿತದಲ್ಲಿತ್ತು..?

👤2G ಹಗರಣ ನೆಡೆದಾಗ ಯಾವ ಸರಕಾರ ಆಡಳಿತದಲ್ಲಿತ್ತು..?

👤ದೂರದರ್ಶನದ ಮೂಲ ಲಾಂಛನವಾದ "ಸತ್ಯಂ ಶಿವಂ ಸುಂದರಂ" ಎನ್ನುವ ನುಡಿಯನ್ನು ಧರ್ಮ ಸಹಿಷ್ಣುತೆಯ ಹೆಸರಿನಲ್ಲಿ ಕಿತ್ತು ಹಾಕಿದಾಗ ಯಾವ ಸರಕಾರವು ಆಡಳಿತ ನೆಡೆಸುತ್ತಿತ್ತು... ?

👤ಭಾರತೀಯ ಮುದ್ರೆಯಿಂದ "ಸತ್ಯಮೇವ ಜಯತೆ" ಯನ್ನು ತೆಗೆದುಹಾಕಿದಾಗ ಯಾವ ಸರಕಾರ ಆಡಳಿತ ನೆಡೆಸುತ್ತಿತ್ತು..?

👤ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಸರಕಾರ ಯಾವುದಾಗಿತ್ತು..?
     
👉🏻ಸಂವಿಧಾನದ ಪ್ರಕಾರ 30(A) ಗೆ ಸಂಬಂದಿಸಿದಂತೆ ವಿದ್ಯಾಲಯಗಳಲ್ಲಿ ಭಗವದ್ಗೀತೆ,ರಾಮಾಯಣದ ಬಗ್ಗೆ ಹೇಳುವದನ್ನ, ಕಲಿಸುವದನ್ನ ನಿರ್ಬಂದಿಸಲಾಗಿದೆ..

👉🏻ಮುಸ್ಲಿಂ ಮದರಸಾಗಳಲ್ಲಿ, ಕ್ರಿಶ್ಚಿಯನ್ ಕಾನ್ವೆಂಟುಗಳಲ್ಲಿ ಕುರಾನ್ ಮತ್ತು ಬಾಯಿಬಲ್ ಗಳನ್ನು ಬೋದಿಸಬಹುದಾಗಿದೆ..

👉🏻ಹಿಂದೂ ಮಂದಿರ ಮತ್ತು ತೀರ್ಥಸ್ಥಾನಗಳಿಗೆ ಬಂದಂತಹ ದೇಣಿಗೆಯ ಮೇಲೆ ಸರಕಾರಕ್ಕೆ ೭೦ ಪ್ರತಿಶತ ಅಧಿಕಾರ.. ಮಸೀದಿ ಮತ್ತು ಚರ್ಚುಗಳಿಗೆ ಬಂದ ದೇಣಿಗೆ ಅವರವರಿಗೆ ಪೂರ್ಣ ಅಧಿಕಾರ!! ಅದರ ಜೊತೆ ಮತ್ತಷ್ಟು ಸರಕಾರದ ಅನುದಾನ ಬೇರೆ..!! 

👉🏻ಬಾಬಾ ಅಮರನಾಥ ಯಾತ್ರಿಕರ ಮೇಲೆ ಸರಕಾರಕ್ಕೆ ಟೆಕ್ಸ್ ತುಂಬಬೇಕು.. ಅದೇ ಹಜ್ ಯಾತ್ರಿಕರಿಗೆ ಸರಕಾರಿ ಸಬ್ಸಿಡಿ.. ವ್ಹಾ... ಹೇಗಿದೆ ನೋಡಿ ಹಿಂದುಸ್ಥಾನದ ಹಿಂದುಗಳ ಪರಿಸ್ಥಿತಿ. ಇದು ದರ್ಮಸಹಿಷ್ಣುತೆಯಂತೆ...!!!

 
ಮನಸಿದ್ದರೆ ಈ ಸಂದೇಶವನ್ನು ಮುಂದಕ್ಕೆ ಕಳುಹಿಸಿ..❗ ಇಲ್ಲವಾದಲ್ಲಿ ನಿನ್ನನ್ನು ನೀನು ಹಿಂದೂಸ್ಥಾನಿ ಎಂದು ಕರೆದುಕೊಳ್ಳಬೇಡ....‼

       🙏🏻ಜೈ ಹಿಂದ್🙏🏻

ಸೂಲಿಬೆಲೆ

ಯುವ_ಬ್ರಿಗೇಡ್ ನಾಯಕ #ಚಕ್ರವರ್ತಿ_ಸೂಲಿಬೆಲೆ ರವರು ಒಬ್ಬ #ದೇಶದ್ರೋಹಿ ಅನ್ನೋದ್ರಲ್ಲಿ ಅನುಮಾನವೇ ಬೇಡ

#ರಮಾನಾಥ್ ರೈ ಪ್ರಕಾರ ಸೂಲಿಬೆಲೆ ಒಬ್ಬ #ದೇಶದ್ರೋಹಿ...
#ಸಿದ್ದಣ್ಣನ ಪ್ರಕಾರ ಸೂಲಿಬೆಲೆ ಒಬ್ಬ #ಕೋಮುವಾದಿ....

ಹೌದು ಕಣ್ರೀ ಈ ಚಕ್ರವರ್ತಿ ಸೂಲಿಬೆಲೆ ಒಬ್ಬ ದೇಶದ್ರೋಹಿ ಮತ್ತು ಕೋಮುವಾದಿ ಅನ್ನೋದ್ರಲ್ಲಿ ಎರಡು ಮಾತಿಲ್ಲ... ಯಾಕೆ ಅಂತ ಹೇಳ್ತೀನಿ...

* ಬಾಲ್ಯದಲ್ಲಿ ಮಕ್ಕಳ ಜೊತೆ ಆಡುವ ಬದಲು #ರಾಮಕೃಷ್ಣ ಪರಮಹಂಸರ ಮತ್ತು #ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡ ಈ ಚಕ್ರವರ್ತಿ ಸೂಲಿಬೆಲೆ ಒಬ್ಬ ಕೋಮುವಾದಿನೇ..

* ಹುಡುಗಿಯರ ಹಿಂದೆ ಬೀಳಬೇಕಿದ್ದ ಯೌವನದಲ್ಲಿ ಹೋಗಿ ಹೋಗಿ ಸ್ವಾತಂತ್ರ್ಯ ಹೋರಾಟಗಾರ ಜೀವನ ಚರಿತ್ರೆಗಳ ಹಿಂದೆ ಬಿದ್ನಲ್ಲ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಈತ ದೇಶದ್ರೋಹಿನೇ..

* ಮದುವೆ ಆಗುವ ವಯಸ್ಸಿನಲ್ಲಿ ದೇಶಸೇವೆಗಾಗಿ ಸನ್ಯಾಸತ್ವ ಸ್ವೀಕರಿಸಿದನಲ್ಲ ಈ ಚಕ್ರವರ್ತಿ ಸೂಲಿಬೆಲೆ ಒಬ್ಬ ದೇಶದ್ರೋಹಿನೇ ..

* ಇಂಜಿನಿಯರಿಂಗ್ ಓದಿ ಕೆಲಸಕ್ಕೆ ಹೋಗುವ ಬದಲು #ಹಿಂದೂ_ಧರ್ಮದ ರಕ್ಷಣೆಗೆ ನಿಂತನಲ್ಲ ಈ ಚಕ್ರವರ್ತಿ ಸೂಲಿಬೆಲೆ ಒಬ್ಬ ಕೋಮುವಾದಿ ಅನ್ನೋದ್ರಲ್ಲಿ ತಪ್ಪಿಲ್ಲ..

* ಮೊಬೈಲ್ ನಲ್ಲಿ ಬರಿ ದೇಹದ ಸುಖಕ್ಕಾಗಿ ವಿಡಿಯೋ ನೋಡುತ್ತಿದ್ದ ಯುವಪೀಳಿಗೆಯನ್ನು ದೇಶಭಕ್ತಿಯ ವಿಡಿಯೋ ನೋಡುವಂತೆ ಪ್ರೇರೆಪಿಸಿದನಲ್ಲ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ...

* ಸೆಲ್ಫಿ ತಗೊಂಡು ಕಾಲಹರಣ ಮಾಡುತ್ತಿದ್ದ ಯುವತಿಯರ ಮನಸಲ್ಲಿ ಸೋದರಿ ನಿವೇಧಿತಾರ ಚಿಂತನೆ ತುಂಬಿದನಲ್ಲ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗ್ಲೂ ದೇಶದ್ರೋಹಿ ಕಣ್ರೀ

* ಹುಡುಗಿಯರು ಹಾಕೋ ನಾಯಿಮರಿ ಪೋಟೋಗೆ ಲೈಕು ಕಮೆಂಟು ಕೊಡೋದಕ್ಕೆ ಹಾತೋರೆಯುತ್ತಿದ್ದ ಯುವಕರಿಗೆ #ವಿವೇಕಾನಂದ_ಸಾವರ್ಕರ್_ಭಗತ್_ಸಿಂಗ್_ಸುಭಾಷ್ ಚಂದ್ರ ಬೋಸ್ ರಂತಹ ಮಹನೀಯರ ಬಗ್ಗೆ ಚರ್ಚೆ ಮಾಡುವಂತೆ ತನ್ನ ಭಾಷಣದ ಮುಖಾಂತರ ಪ್ರೇರಣೆ ಕೊಟ್ನಲ್ಲಾ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ

* ಬರಿ ಭಾಷಣದಿಂದ ಬದಲಾವಣೆ ಸಾಧ್ಯವಿಲ್ಲ ಅಂತ ಯುವಕರನ್ನು ಸಂಘಟಿಸಿ ಕಲ್ಯಾಣಿಗಳನ್ನು ಸ್ವಚ್ಛಗೊಳಿಸುತ್ತ ಮೋದಿಯ #ಸ್ವಚ_ಭಾರತಕ್ಕೆ ಒಂದು ಅರ್ಥ ಕೊಟ್ನಲ್ಲಾ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ

* ಸ್ವಾತಂತ್ರ್ಯ ಅಂದ್ರೆ ಗಾಂಧೀಜಿ ಅನ್ಕೊಂಡಿದ್ದ ಸಮಾಜಕ್ಕೆ ಗಾಂಧೀಜಿಗಿಂತ ಮುಂಚೆಯೇ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ
ಸಾವಿರಾರು ಹೋರಾಟಗಾರರ ಜೀವನವನ್ನು ಇದೇ ಸಮಾಜದ ಮುಂದೆ ಅನಾವರಣಗೊಳಿಸಿದ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ....

* ಎಲ್ಲೂ ಕೆಲಸ ಸಿಗದೇ ಬಡತನಕ್ಕೆ ಸೈನ್ಯ ಸೇರುತ್ತಾರೆ ಅಂತ ಹೇಳಿಕೆ ಕೊಡುವ ನಾಯಿಗಳ ನಡುವೆ ಸೈನಿಕರನ್ನು ಕಣ್ಮುಂದೆ ಇರುವ ದೇವರು ಅಂತ ಬಣ್ಣಿಸಿ ಸೈನಿಕರ ಮೇಲೆ ಭಾರತೀಯರ ಪ್ರೀತಿ ಹೆಚ್ಚುವಂತೆ ಮಾಡಿದ್ನಲ್ಲ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ಕೋಮುವಾದಿ ...

* ಸುಳ್ಳು ಇತಿಹಾಸ ಓದಿ ದೇಶದ್ರೋಹಿಗಳನ್ನೇ ದೇಶಭಕ್ತರು ಅಂತ ಅನ್ಕೊಂಡಿದ್ದ ನಮಗೆ ನೈಜ ಇತಿಹಾಸದ ದರ್ಶನವನ್ನು ದಾಖಲೆ ಸಮೇತ ಸ್ಪಷ್ಟಪಡಿಸಿ ನಮ್ಮ ದೇಶಭಕ್ತಿ ಜಾಗೃತಗೊಳಿಸಿದ ಈ ಚಕ್ರವರ್ತಿ ಸೂಲಿಬೆಲೆ ಒಬ್ಬ ದೇಶದ್ರೋಹಿ ಕಣ್ರೀ

* #ಶ್ರೀರಾಮ ಗಂಡಸಲ್ಲ ಅಂತ ಹೇಳಿಕೆ ಕೊಡುವವರ ನಡುವೆ ಶ್ರೀರಾಮ ಹಿಂದೂಗಳ ಅಂತರಾತ್ಮ ಅಂತ ಹೆಮ್ಮೆಯಿಂದ ಹೇಳಿದ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ಕೋಮುವಾದಿ

* ಭಗವದ್ಗೀತೆ ಸುಡ್ತೀನಿ ಅಂದ ಮೂರ್ಖನಿಗೆ ತನ್ನ ಮಾತಲ್ಲೆ ಅವನ ಸದ್ದಡಗಿಸಿ #ಭಗವದ್ಗೀತೆಯ ಮಹತ್ವವನ್ನು ಸಮಾಜದ ಮುಂದೆ ತೆರೆದಿಟ್ಟ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ಕೋಮುವಾದಿ ...

* ತನ್ನನ್ನು ಲಕ್ಷಾಂತರ ಜನ ಹಿಂಬಾಲಿಸುತ್ತರೆ ಅನ್ನುವ ಅರಿವಿಟ್ಟುಕೊಂಡು ತನ್ನ ಭಾಷಣದಲ್ಲಿ ಇವತ್ತಿಗೂ ಸಹ ಒಂದೇ ಒಂದು ಅವ್ಯಾಚ ಶಬ್ಧವನ್ನು ಉಪಯೋಗಿಸದ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ...

* ಇಪ್ಪತ್ತೈದು ಜನ ಹಿಂಬಾಲಕರನ್ನು ಇಟ್ಕೊಂಡು ದುರಹಂಕರಾದಿಂದ ಮೆರೆಯುವ ನಾಯಕರ ನಡುವೆ ಲಕ್ಷಾಂತರ ಹಿಂಬಾಲಕರು ಇದ್ದರೂ ಸರಳತೆಯ ಮೂರ್ತಿಯಂತಿರುವ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ...

* ದಿನಪೂರ್ತಿ #ಭಾರತ_ಭಾರತ ಅಂತ ಕನವರಿಸುವ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ ಅಲ್ಲದೇ ಮತ್ತೇನೂ...

* ಹಣ ಮಾಡಿ ಬದುಕುವುದೇ ಜೀವನ ಅನ್ಕೊಂಡಿದ್ದ ಲಕ್ಷಾಂತರ ಯುವಕರ ಎದೆಯಲ್ಲಿ ದೇಶಪ್ರೇಮದ ಜ್ವಾಲೆ ಹಚ್ಚಿದ ಈ ಚಕ್ರವರ್ತಿ ಸೂಲಿಬೆಲೆ ನಿಜವಾಗಿಯೂ ಒಬ್ಬ ದೇಶದ್ರೋಹಿ

ಕೊನೆಯದಾಗಿ

ಸಿದ್ದಣ್ಣ ರಮಾನಾಥ ರೈ ಸೇರಿದಂತೆ ಅನೇಕ #ಕಾಂಗ್ರೆಸ್ ಮುಖಂಡರು ತಮ್ಮ ಹೊಲಸು ನಾಲಿಗೆಯಿಂದ ಕೊಳಕು ಮಾತುಗಳನ್ನು ಆಡಿ ಜನರ ಮುಂದೆ ಬೆತ್ತಲಾಗಿದ್ದಾರೆ ಅನ್ನೋದು ಅಕ್ಷರಶಃ ಸತ್ಯ....

ಚಕ್ರವರ್ತಿ ಸೂಲಿಬೆಲೆ ಎಂಬ #ಅಪ್ಪಟ_ಹಿಂದೂ ಮತ್ತು ಶ್ರೇಷ್ಠ ದೇಶಭಕ್ತನ ಬಗ್ಗೆ ಬರೆಯೋದಿಕ್ಕೆ ದಿನಗಳೇ ಸಾಕಾಗುವುದಿಲ್ಲ..

ಈ ಮೇಲಿನ ಲೇಖನದಲ್ಲಿ ಚಕ್ರವರ್ತಿ ಸೂಲಿಬೆಲೆ ಕೆಲವೊಮ್ಮೆ ಏಕವಚನದಲ್ಲಿ ಸಂಬೋಧಿಸಿರುವುದು ಅವರ ಮೇಲಿನ ಪ್ರೀತಿ ಗೌರವದಿಂದ ಮತ್ತು ಸಂದರ್ಭಕ್ಕೆ ತಕ್ಕಂತೆ ಅಂತ ಧೃಡಿಕರಿಸುತ್ತೇನೆ...

ಹೇಗೆ ಮತ್ತೊಬ್ಬ #ವಿವೇಕಾನಂದರು ಹುಟ್ಟುವುದಕ್ಕೆ ಸಾದ್ಯವಿಲ್ಲವೋ ಹಾಗೆ ಮತ್ತೊಬ್ಬ #ಚಕ್ರವರ್ತಿ ಹುಟ್ಟಲು ಸಾಧ್ಯವಿಲ್ಲ ಅಂದರೆ ಅತಿಶಯೋಕ್ತಿಯೇನಲ್ಲ...🇮🇳🇮🇳🇮🇳