ಸೋಮವಾರ, ಸೆಪ್ಟೆಂಬರ್ 18, 2017

ಶ್ರಾದ್ಧದ ಮಹಿಮೆ

ಶ್ರಾದ್ಧದ  ಮಹಿಮೆ  ಮತ್ತು  ವಿಧಾನಗಳನ್ನು  ತಿಳಿಯುವ  ಪ್ರಯತ್ನ  ಮಾಡೋಣ.

ಶ್ರಾದ್ಧಗಳು  ಒಟ್ಟು  96  ಎಂಬುದಾಗಿ  ಹೇಳಲಾಗಿದೆ.  ಆವು  ಯಾವೆಂದರೆ  ?
1)  ಅಮಾವಾಸ್ಯ  ಶ್ರಾದ್ಧಗಳು         12.
2)  ಸಂಕ್ರಮಣ  ಶ್ರಾದ್ಧಗಳು            12.
3)  ಯುಗಾದಿ  ಶ್ರಾದ್ಧಗಳು                4.
(  ಮಾಘ  ಅಮಾವಾಸ್ಯೆ,  ಭಾದ್ರಪದ  ಕೃಷ್ಣ  ತ್ರಯೋದಶಿ,  ವ್ಯೆಶಾಖ  ಶುಕ್ಲ  ತೃತೀಯಾ,  ಕಾರ್ತಿಕ  ಶುಕ್ಲ  ನವಮಿ.  )
4)  ವ್ಯೆದೃತಿ  ಶ್ರಾದ್ಧಗಳು                  13.
5)  ವ್ಯತಿಪಾತ  ಶ್ರಾದ್ಧಗಳು              13.
6)  ಮಹಾಲಯ  ಶ್ರಾದ್ಧಗಳು            16.
7)  ಅಷ್ಟಕ  ಶ್ರಾದ್ಧಗಳು                   12.
(  ಹಿಂದಿನ  ದಿನದ  ಶ್ರಾದ್ಧ - 4.  ಮರುದಿನದ  ಶ್ರಾದ್ಧ  4  ಸೇರಿ  )
8)  ಮನ್ವಾದಿ  ಶ್ರಾದ್ಧಗಳು                14.
ಹೀಗೆ  ಒಟ್ಟು  ಶ್ರಾದ್ಧಗಳು  96.

ಶ್ರಾದ್ಧಗಳನ್ನು  12  ಪ್ರಕಾರವಾಗಿದೆಯೆಂದು  ವಿಶ್ವಾಮಿತ್ರ  ಋಷಿಗಳು  ಹೇಳಿರುತ್ತಾರೆ.
ಅವುಗಳು  ಹೀಗಿವೆ.
1)  ನಿತ್ಯಶ್ರಾದ್ಧ.  2)  ನ್ಯೆಮಿತ್ತಿಕ  ಶ್ರಾದ್ಧ.  3)  ಕಾಮ್ಯ  ಶ್ರಾದ್ಧ.  4)  ವೃದ್ಧಿ  ಶ್ರಾದ್ಧ.  5)  ಸಪಿಂಡೀಕರಣ  ಶ್ರಾದ್ಧ.  6)  ಪಾರ್ವಣಶ್ರಾದ್ಧ  7)  ಗೋಷ್ಠ್ಯ  ಶ್ರಾದ್ಧ.  8)  ಶುದ್ಧಿ  ಶ್ರಾದ್ಧ.  9)  ಕರ್ಮಾಂಗ  ಶ್ರಾದ್ಧ.  10)  ದ್ಯೆವಿಕ  ಶ್ರಾದ್ಧ.  11)  ಯಾತ್ರಾ  ಶ್ರಾದ್ಧ.  12)  ಪುಷ್ಟಿ  ಶ್ರಾದ್ಧ.
                                              

ಕರ್ಮಭೂಮಿ  ಎನಿಸಿದ  ಈ  ಭರತ  ಖಂಡದ  ಸನಾತನ  ಧರ್ಮಗಳಲ್ಲಿ  " *ಶ್ರಾದ್ಧ "  ಕರ್ಮವು  ಮುಖ್ಯವಾಗಿದೆ.  ಇದು  ಅತ್ಯಂತ  ಶ್ರೇಯಸ್ಕರವಾದ  ಕರ್ಮವಾಗಿದೆ.  ಇದಕ್ಕೆ        "  ಪಿತೃಯಜ್ಞ  "  ವೆಂದು  ಕರೆಯುವದುಂಟು.
ಶ್ರಾದ್ಧ  ಎಂದರೇನು ?

ನಮ್ಮ  ಜನ್ಮಕ್ಕೆಕಾರಣರಾಗಿ,  ನಮ್ಮನ್ನು  ಹೆತ್ತು  ಹೊತ್ತು  ಸಾಕಿ,  ಸಲಹಿ  ನಮ್ಮ  ಉದ್ದಾರಕ್ಕೇ  ಶ್ರಮಿಸಿ,  ನಮ್ಮನ್ನಗಲಿ  ಹೋದ  ತಂದೆ -ತಾಯಿ  ಹಿರಿಯರು  ಮುಂತಾದವರನ್ನು  ಸ್ಮರಿಸಿ,  ಅವರನ್ನು  ಕುರಿತು  ಶ್ರದ್ಧೆಯಿಂದ  ಅನ್ನಜಲಾದಿಗಳನ್ನು  ಕೊಡುವ  ಪಿತೃಕಾರ್ಯಕ್ಕೆ  "  ಶ್ರಾದ್ಧ  "  ವೆಂದು  ಹೆಸರು.
ಪಿತೃನುದ್ದಿಶ್ಯ  ವಿಪ್ರೇಭ್ಯೋ  ದತ್ತಂ  ಶ್ರಾದ್ಧಮುದಾಹೃತಮ್ "
ಪಿತೃಗಳನ್ನುದ್ದೇಶಿಸಿ  ಬ್ರಾಹ್ಮಣರಿಗೆ  ಕೊಟ್ಟದ್ದು  "  ಶ್ರಾದ್ಧ  "  ವೆಂದು  ಕರೆಯಲ್ಪಡುತ್ತದೆ.
ಪಿತ್ರುದ್ದೇಶೇನ  ಶ್ರದ್ಧಯಾ  ತ್ಯಕ್ತಸ್ಯ  ದ್ರವ್ಯಸ್ಯ  ಬ್ರಾಹ್ಮಣ್ಯೆರ್ಯತ್ಸ್ವೀಕರಣಂ  ತತ್  ಶ್ರಾದ್ಧಮ್
ಪಿತೃಗಳನ್ನುದ್ದೇಶಿಸಿ  ಶ್ರದ್ದೆಯಿಂದ  ಕೊಡಲ್ಪಟ್ಟ  ದ್ರವ್ಯವನ್ನು  ಬ್ರಾಹ್ಮಣರು  ಸ್ವೀಕರಿಸುವುದಕ್ಕೆ  ಶ್ರಾದ್ಧವೆಂದು  ಹೆಸರು.
ಒಟ್ಟಿನಲ್ಲಿ  ಶ್ರದ್ಧೆಯಿಂದ  ತನಗೆ  ಪ್ರಿಯವಾದ  ಭೋಜ್ಯಗಳನ್ನು  ತನ್ನ  ಪಿತೃಗಳನ್ನುದ್ದೇಶಿಸಿ  ಕೊಡುವ  "  ಪಿಂಡಪ್ರದಾನ  "  ಕ್ರಿಯೆಗೆ  ಶ್ರಾದ್ಧವೆಂದು  ಹೇಳುತ್ತಾರೆ.
ಇಲ್ಲಿ  ಕೆಲವರು  ಪ್ರಶ್ನೆ  ಕೇಳುವುದುಂಟು -  ನಮ್ಮನ್ನಗಲಿ  ಹೋದ  ಪಿತೃಗಳಿಗೆ  ನಾವು  ಕೊಡುವ  ಜಲಾಂಜಲಿ,  ಪಿಂಡಪ್ರದಾನದಿಂದ  ಅವರು  ಹೇಗೆ  ತೃಪ್ತರಾಗುತ್ತಾರೆ ?  ನಾವು  ಇಲ್ಲಿ  ಬ್ರಾಹ್ಮಣನಿಗೆ  ದಾನವಾಗಿ  ಕೊಟ್ಟದ್ದು  ಪಿತೃಗಳಿಗೆ  ಹೇಗೆ  ತಲುಪುತ್ತದೆ ?

 ಉತ್ತರ.
ನಾವು  ಕೊಟ್ಟ  ಅನ್ನವನ್ನು  ಅಂದರೆ  ಅದರ  ಸಾರ  ಭಾಗವನ್ನು  ವಸು,  ರುದ್ರ,  ಆದಿತ್ಯ  ತದಂತರ್ಗತ  ಭಾರತೀರಮಣ  ಮುಖ್ಯ  ಪ್ರಾಣಾಂತರ್ಗತ  ಪ್ರದ್ಯುಮ್ನ,  ಸಂಕರ್ಷಣ,  ವಾಸುದೇವ  ರೂಪಿ  ಭಗವಂತನು  ಸ್ವೀಕರಿಸಿ  ಅದನ್ನು  ನಮ್ಮ  ಪಿತೃಗಳು  ಯಾವ  ಯೋನಿಯಲ್ಲಿ  ಹುಟ್ಟಿ,  ಎಲ್ಲಿ  ಇರುವರೋ,  ಅಲ್ಲಿ  ಅವರಿಗೆ  ಆಹಾರರೂಪವಾಗಿ  ಸೂಕ್ತರೀತಿಯಲ್ಲಿ  ಕೊಟ್ಟು  ಸಂತೋಷ  ಪಡಿಸುತ್ತಾನೆ  ಭಗವಂತ.

ನ  ಸಂತಿ  ಪಿತರಶ್ಚೇತಿ  ಕೃತ್ವಾ  ಮನಸಿ  ಯೋ  ನರಃ  !
ಶ್ರಾದ್ಧಂ  ನ  ಕುರುತೇ  ತತ್ರ  ತಸ್ಯ  ರಕ್ತಂ  ಪಿಬಂತಿ  ತೇ  !!

ಯಾವ  ಮನುಷ್ಯರು  ಪಿತೃಗಳ  ದೇಹವನ್ನು  ಸುಟ್ಟು  ಭಸ್ಮ  ಮಾಡಿದಮೇಲೆ  ಅವರಿಗೆ  ಹೊಟ್ಟೇಇಲ್ಲ  ಎಂಬ  ಭಾವನೆಯಿಂದ  ಪಿತೃಗಳ  ಶ್ರಾದ್ಧಾದಿಗಳನ್ನು  ಯಾರು  ಮಾಡುವುದಿಲ್ಲವೋ,  ಇಂಥವರ  ಪಿತೃಗಳು  ಸಿಟ್ಟಾಗಿ  ಈ  ನಾಸ್ತಿಕರ  ರಕ್ತವನ್ನು  ಹೀರುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ