ಶನಿವಾರ, ಸೆಪ್ಟೆಂಬರ್ 30, 2017

ಹೊಟ್ಟೆನೋವು

ಆರು ಮೀಡಿಯಮ್ ಸೈಜ಼್ ಈರುಳ್ಳಿ ಯನ್ನು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ
ಒಂದ್ ಬೌಲ್ ಗೆ ಹಾಕಿ ಅದಕ್ಕೆ ನಾಲ್ಕು ಚಮಚ ಜೇನು ಹಾಕಿ ನೀರು ಹಾಕಿ ಹಾಗೆ ಬಿಡಿ ಅದನ್ನು ಲೊ ಸಿಮ್ಮಲ್ಲಿ ಕುದಿಸಿ ಚೆನ್ನಾಗಿ ಮಗುಚಿ 
ಈ ಸಿರಾಪನ್ನು ಪ್ರತಿ ಮೂರುಗಂಟೆಗೊಮ್ಮೆ ಒಂದ್ ಚಮಚ ಸೇವಿಸಿ ಕೆಮ್ಮು ಇದ್ದವರು

 ಬಿಸಿ ನೀರಿನಲ್ಲಿ ಉಪ್ಪು,ಹಾಕಿ ೩ ಚಮಚದಷ್ಟು ಕೊಬ್ಬರಿ ಎಣ್ಣೆ ಹಾಕಿ ಗಳಗಳಮಾಡುತ್ತಾ ೧೫_೨೦ ನಿಮಿಷ ಬಾಯಿಯಲ್ಲಿಟ್ಟು ಉಗುಳಬೇಕು,ದಿನದಲ್ಲಿ ೪_೬ ಸಲ.,೧೫,೨೦ ದಿನ...ದತ್ತೂರದ ಎಲೆಯ ರಸ,ಅರಸಿನ,ಸ್ವಲ್ಪ ಸುಣ್ಣ ಬೆರಸಿ ಗಂಟಲಿನ ಹೊರಗಡೆ ಗೆ ಹಚ್ಚಬೇಕು,ಗುಣವಾಗುತ್ತದೆ

ಪಪ್ಪಾಯದ ಬೀಜ,ಓಮ್ ಕಾಳು,ಬೆಳ್ಳುಳ್ಳಿ ತಲಾ ೨ ಚಮಚ ಅರೆದು ಮಜ್ಜಿಗೆ ಹಾಕಿ ಕುಡಿದು ಬೆಳಿಗ್ಗೆ‌೨ ಚಮಚ ಹರಳೆಣ್ಣೆ ಬಿಸಿನೀರಿನಲ್ಲಿ ಹಾಕಿ ಕುಡಿಯಿರಿ, ವಾರಕ್ಕೊಮ್ಮೆ ೪ ವಾರ ಮಾಡಬೇಕು.

ನಿಂಬೆಹಣ್ಣು ಶರಬತ್,ಚಿಟಿಕೆ ಉಪ್ಪು,ಯಾಲಕ್ಕಿ ಪುಡಿ ಹಾಕಿ‌ ಆಗಾಗ ಕಾಲು ಕಪ್ನ ನಂತೆ ಕುಡಿಯಿರಿ

ಹೊಟ್ಟೆ ನೋವು ಎನ್ನುವುದು ಎಲ್ಲಾ ವಯಸ್ಸಿನಲ್ಲಿ ವಿವಿಧ ಕಾರಣಗಳಿಂದ ಬರುವಂತಹ ಸಾಮಾನ್ಯ ಆರೋಗ್ಯ ಸಮಸ್ಯೆ. ಇದಕ್ಕೆಲ್ಲಾ ಮುಖ್ಯ ಕಾರಣ, ಯಾವುದೋ ಅಗ್ಗದ ಅಥವಾ ಹಾಳಾದ, ಕ್ರಿಮಿಗಳಿಂದ ಕೂಡಿದ ಆಹಾರ ಹೊಟ್ಟೆ ಸೇರಿದರೆ, ಅಜೀರ್ಣ ಸಮಸ್ಯೆ, ಆಹಾರ ವಿಷವಾಗುವುದು, ಆಹಾರದ ಅಲರ್ಜಿ, ಅಲ್ಸರ್, ಮಲಬದ್ಧತೆ, ಹೊಟ್ಟೆಯ ವೈರಸ್, ಗ್ಯಾಸ್ ಹರ್ನಿಯಾ, ಹೀಗೆ ಮುಂತಾದ ಹಲವಾರು ಸಮಸ್ಯೆಗಳಿರಬಹುದು, ಹಾಗಂತ ಸಮಸ್ಯೆ ಚಿಕ್ಕದೆಂದು ಉದಾಸೀನ ಮಾಡುವಂತಿಲ್ಲ!
ಆದರೆ, ಕೆಲವರು ಇಂತಹ ಸಮಸ್ಯೆ ಬಗ್ಗೆ ಗೆಳೆಯ/ತಿಯರಲ್ಲೂ ಹೇಳಿಕೊಳ್ಳಲು ಸಂಕೋಚ ಪಟ್ಟುಕೊಳ್ಳುತ್ತಾರೆ, ಇಲ್ಲಿ ಪ್ರತಿಷ್ಠೆಯ ಪ್ರಶ್ನೆಯೇ ಅವರಿಗೆ ಮುಖ್ಯವಾಗಿರುತ್ತದೆ!, ಅದರಲ್ಲೂ ಹಿಂದಿನ ಕಾಲದ ನಮ್ಮ ಅಜ್ಜ, ಅಜ್ಜಿ ಹೇಳುವ ಟಿಪ್ಸ್ ಈ ಕಾಲದವರಿಗೆ ರುಚಿಸುವುದಿಲ್ಲ. ಡಾಕ್ಟರ್ ಹತ್ತಿರ ಹೋಗಿ ಹಣ ತೆತ್ತು ಬಂದು ತಾತ್ಕಾಲಿಕ ಪರಿಹಾರ ಪಡೆಯುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ! ಚಿಂತಿಸದಿರಿ ಹೊಟ್ಟೆನೋವಿನಿಂದ ಸ್ವಲ್ಪ ಮಟ್ಟಿನ ಆರಾಮ ಕೊಡುವ ಸರಳವಾದ ಮನೆಮದ್ದನ್ನು ನೀಡಿದ್ದೇವೆ ಮುಂದೆ ಓದಿ..... ಅಪ್ಪಿತಪ್ಪಿಯೂ ಹೊಟ್ಟೆ ನೋವನ್ನು ನಿರ್ಲಕ್ಷಿಸಬೇಡಿ
ದಯವಿಟ್ಟು ಗಮನಿಸಿ: ಒಂದು ವೇಳೆ, ಹೊಟ್ಟೆನೋವು ತೀವ್ರವಾಗಿದ್ದರೆ ಮತ್ತು ನಿರಂತರವಾಗಿದ್ದರೆ ಆಗ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಸಲಹೆ ಪಡೆದುಕೊಳ್ಳಿ
 
ಶುಂಠಿ
ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣ ಮತ್ತು ಇತರ ಆರೋಗ್ಯಕಾರಿ ಲಾಭಗಳಿವೆ. ಇದು ಜೀರ್ಣಕ್ರಿಯೆ ಸರಾಗವಾಗಿಸಿ ಹೊಟ್ಟೆ ನೋವು ಕಡಿಮೆ ಮಾಡುತ್ತದೆ. ಒಣಗಿದ ಶುಂಠಿಗಿಂತ ಹಸಿ ಶುಂಠಿ ಹೆಚ್ಚು ಪರಿಣಾಮಕಾರಿ.ಇದಕ್ಕಾಗಿ ಹಸಿಶುಂಠಿಯ ಒಂದಿಂಚಿನ ತುಂಡನ್ನು ಜಜ್ಜಿ ಹಾಲಿಲ್ಲದ ಟೀ ಜೊತೆ ಕುದಿಸಿ ಸೋಸಿ ಬಿಸಿಯಾಗಿರುವಂತೆಯೇ ಸೇವಿಸುವುದರಿಂದ ಹೊಟ್ಟೆನೋವು ಕೂಡಲೇ ಕಡಿಮೆಯಾಗುತ್ತದೆ. ಜೊತೆಗೆ ಹುಳಿತೇಗು, ವಾಕರಿಕೆ ಮತ್ತು ವಾಂತಿಯನ್ನೂ ನಿಲ್ಲಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ಕೊಂಚ ಜೇನನ್ನೂ ಸೇರಿಸಬಹುದು.
   

ಲಿಂಬೆ ಹಣ್ಣು ಮತ್ತು ಅಡುಗೆ ಸೋಡ....
ಒಂದು ಲೋಟ ನೀರಿಗೆ ಒಂದು ಲಿಂಬೆ ಹಣ್ಣಿನ ರಸ ಹಿಂಡಿ, ಅರ್ಧ ಟೀ ಚಮಚ ಅಡಿಗೆ ಸೋಡ ಸೇರಿಸಿ, ದಿನಕ್ಕೆ ಒಂದು ಗ್ಲಾಸ್ ಸೇವಿಸಿದರೆ ಹೊಟ್ಟೆನೋವಿನ ಸಮಸ್ಯೆಯೊಂದಿಗೆ, ಅಜೀರ್ಣದ ಸಮಸ್ಯೆಯೂ ನಿವಾರಣೆಯಾಗುವುದು.
   

ಉಗುರುಬೆಚ್ಚನೆಯ ನೀರು+ಉಪ್ಪು
ಒಂದು ವೇಳೆ ಹೊಟ್ಟೆಯುಬ್ಬರಿಸಿ ಹೊಟ್ಟೆನೋವಾಗುತ್ತಿದ್ದರೆ, ಒಂದು ಲೋಟ ಉಗುರುಬೆಚ್ಚನೆಯ ಬಿಸಿನೀರಿಗೆ ಒಂದು ಚಿಕ್ಕ ಚಮಚ(ತೀವ್ರವಾಗಿದ್ದರೆ ಎರಡು ಚಮಚ) ಅಡುಗೆ ಉಪ್ಪು ಹಾಕಿ ಕದಡಿ ಕುಡಿಯಿರಿ. ಬೆಳ್ಳಂ ಬೆಳಿಗ್ಗೆ ಕುಡಿಯಿರಿ, ಉಪ್ಪು ಬೆರೆಸಿದ ಬೆಚ್ಚನೆಯ ನೀರು
   

ಪುದೀನಾ ಎಲೆಗಳ ಜ್ಯೂಸ್
ಹೊಟ್ಟೆನೋವು, ವಾಕರಿಕೆ ಮತ್ತು ವಾಂತಿಗೆ ಪುದೀನಾ ಎಲೆಗಳ ರಸ ಉತ್ತಮ ಪರಿಹಾರವಾಗಿದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಆರು ದೊಡ್ಡ ಪುದೀನಾ ಎಲೆಗಳ ಪ್ರಮಾಣದಲ್ಲಿ ಜ್ಯೂಸರ್‌ನಲ್ಲಿ ಅಗತ್ಯವಿದ್ದಷ್ಟು ರಸವನ್ನು ಸಿದ್ಧಪಡಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
   

ಪುದೀನಾ ಎಲೆಗಳ ಜ್ಯೂಸ್
ಈ ನೀರನ್ನು ಒಂದರಿಂದ ಮೂರು ಲೋಟಗಳವರೆಗೂ ಕುಡಿಯಬಹುದು. ಇನ್ನೂ ಉತ್ತಮ ಪರಿಣಾಮಕ್ಕಾಗಿ ಒಂದು ಬಾರಿಗೆ ಆರು ಎಲೆಗಳನ್ನು ಹಸಿಯಾಗಿ ಜಗಿದು ನೀರಿನೊಂದಿಗೆ ನುಂಗಬಹುದು. ಈ ರಸವನ್ನು ಊಟದ ಬಳಿಕ ಸೇವಿಸಬೇಕು.
   

ಏಲಕ್ಕಿ+ ಜೀರಿಗೆ
ಅಜೀರ್ಣದ ಕಾರಣದಿಂದ ಹೊಟ್ಟೆನೋವಾಗಿದ್ದರೆ ಒಂದು ಲೋಟ ನೀರಿಗೆ ಸುಮಾರು ಐದರಿಂದ ಆರು ಏಲಕ್ಕಿಗಳ ಸಿಪ್ಪೆ ಸುಲಿದು ಕೇವಲ ಬೀಜಗಳನ್ನು ಮತ್ತು ಒಂದು ಚಿಕ್ಕ ಚಮಚ ಜೀರಿಗೆಯನ್ನು ಹಾಕಿ ಕುದಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
   

ಏಲಕ್ಕಿ+ ಜೀರಿಗೆ
ಸುಮಾರು ಮೂರು ನಿಮಿಷ ಕುದಿದ ಬಳಿಕ ಒಲೆಯಿಂದಿಳಿಸಿ ತಣಿಯಲು ಬಿಡಿ. ಈ ನೀರನ್ನು ದಿನಕ್ಕೆ ಮೂರು ಬಾರಿ ಊಟದ ಬಳಿಕ ಕುಡಿಯಬಹುದು.
ರವಿಹೊಳ್ಳ

*ಜೇನುತುಪ್ಪ-ಎಳ್ಳು ಬೆರೆಸಿ ಒಂದು ತಿಂಗಳು ಖಾಲಿ ಹೊಟ್ಟೆಯಲ್ಲಿ ಸೇವಿಸಿ!*

ನಮ್ಮ ದೇಹದ ಮೇಲೆ ಸತತವಾಗಿ ಸೂಕ್ಷ್ಮಜೀವಿಗಳ ಧಾಳಿಯಾಗುತ್ತಲೇ ಇರುತ್ತದೆ. ಆದರೆ ಇವುಗಳ ವಿರುದ್ಧ ಹೋರಾಡಲು ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯೂ ಸತತವಾಗಿ ಕೆಲಸ ಮಾಡುತ್ತಲೇ ಬರುವುದರಿಂದ ರೋಗಗಳು ಭಾಧಿಸುವುದಿಲ್ಲ. ಆದರೆ ಕೆಲವು ಕಾಯಿಲೆಗಳು ವ್ಯಕ್ತಿಯೊಬ್ಬರ ಜೀವನವನ್ನು ಕೆಲವೇ ಕ್ಷಣಗಳಲ್ಲಿ ಕೊನೆಯಾಗಿಸುವಷ್ಟು ಮಾರಕವಾಗಿರುತ್ತವೆ. ನಮ್ಮ ದೇಹವೊಂದು ನಿಗೂಢ ಮಂದಿರ. ನಮ್ಮ ದೇಹದ ಮೇಲೆ ಆಗುವ ಕೆಲವಾರು ಧಾಳಿಯನ್ನು ಎದುರಿಸುತ್ತಾ ಒಂದು ರಕ್ಷಣಾ ಗೋಡೆಯನ್ನು ಕಟ್ಟಿರುತ್ತವೆ.

ಯಾವಾಗ ಈ ಗೋಡೆಯ ಸಾಮರ್ಥ ಮೀರಿ ಕುಸಿಯಿತೋ, ಆಗ ಥಟ್ಟನೇ ಭಯಾನಕ ರೋಗ ಆವರಿಸುತ್ತದೆ. ಧೂಮಪಾನಿಗಳು ಇಡಿಯ ಜೀವಮಾನ ಧೂಮಪಾನ ಮಾಡಿದರೂ ಧಾಳಿ ಎಸಗದಿದ್ದುದು ಜೀವನದ ಯಾವುದೋ ಒಂದು ಅವಧಿಯಲ್ಲಿ ಥಟ್ಟನೇ ಕ್ಯಾನ್ಸರ್ ರೂಪದಲ್ಲಿ ಧಾಳಿ ಎಸಗುತ್ತದೆ. ಇದುವರೆಗೆ ಈ ಗೋಡೆಯ ಸಾಮರ್ಥವನ್ನು ತಮ್ಮ ಸಾಮರ್ಥ ಎಂದೇ ಪರಿಗಣಿಸಿದ್ದ ಧೂಮಪಾನಿಗೆ ಈಗ ನಿಂತ ನೆಲವೇ ಕುಸಿದ ಅನುಭವವಾಗುತ್ತದೆ. ಆದ್ದರಿಂದ ನಮ್ಮ ಆರೋಗ್ಯದ ಬಗ್ಗೆ ಚಿಕ್ಕ ಚಿಕ್ಕ ವಿಷಯಗಳ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ..

*ದೊಡ್ಡಚಮಚದಷ್ಟು ಜೇನು ಮತ್ತು ಎಳ್ಳು* 

ಆರೋಗ್ಯದ ಕಾಳಜಿಗೆ ಹೆಚ್ಚು ಕಷ್ಟಪಡಬೇಕಾಗಿಲ್ಲ. ನಮ್ಮ ಅಡುಗೆ ಮನೆಯಲ್ಲಿರುವ ಸಾಮಾನ್ಯ ಸಾಮಾಗ್ರಿಗಳೇ ಸಾಕಾಗುತ್ತವೆ. ಆದರೆ ಈ ಕ್ರಮಗಳನ್ನು ನಿಯಮಿತವಾಗಿ ಅನುಸರಿಸುವುದು ಮಾತ್ರ ತುಂಬಾ ಅವಶ್ಯ. ಇಂತಹದ್ದೇ ಒಂದು ರಕ್ಷಣಾ ವ್ಯವಸ್ಥೆ ಎಂದರೆ ತಲಾ ಒಂದು ದೊಡ್ಡಚಮಚದಷ್ಟು ಜೇನು ಮತ್ತು ಎಳ್ಳನ್ನು ಬೆರೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ ಕನಿಷ್ಠ ಏಳು ಬಗೆಯ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು. ಮುಂದೆ ಓದಿ...

*ಮೂಳೆಗಳನ್ನು ದೃಢಗೊಳಿಸುತ್ತದೆ*

ಎಳ್ಳು ಮತ್ತು ಜೇನಿನಲ್ಲಿರುವ ಪೋಷಕಾಂಶಗಳಲ್ಲಿ ಹೆಚ್ಚಿನ ಪ್ರೋಟೀನು ಮತ್ತು ಕೊಂಚ ಕ್ಯಾಲ್ಸಿಯಂ ಇದೆ. ಅಲ್ಲದೇ ಈ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ಜೇನು ನೆರವಾಗುತ್ತದೆ. ಪರಿಣಾಮವಾಗಿ ಮೂಳೆಗಳು ದೃಢಗೊಳ್ಳುತ್ತವೆ

*ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ* 

ಈ ಸಂಯೋಜನೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ತನ್ಮೂಲಕ ಹಲವಾರು ಖಾಯಿಲೆಗಳ ವಿರುದ್ದ ರಕ್ಷಣೆ ಒದಗಿಸುತ್ತದೆ. ಪರಿಣಾಮವಾಗಿ ಆರೋಗ್ಯ ವೃದ್ಧಿಸುತ್ತದೆ.

*ಶಕ್ತಿಯನ್ನು ಹೆಚ್ಚಿಸುತ್ತದೆ* 

ಇದರಲ್ಲಿರುವ ಹಾರ್ಮೋನುಗಳು ದೇಹಕ್ಕೆ ತಕ್ಷಣದ ಶಕ್ತಿಯನ್ನು ಒದಗಿಸುತ್ತವೆ. ಇದರಲ್ಲಿರುವ ಹಲವಾರು ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚು ಶಕ್ತಿವರ್ಧಕವಾಗಿರುವ ಕಾರಣ ವ್ಯಾಯಾಮ, ದೂರದ ನಡಿಗೆ ಮೊದಲಾದ ಶ್ರಮದ ಕೆಲಸಗಳಿಗೂ ಮುನ್ನ ತಿಂದು ಹೊರಟರೆ ಹೆಚ್ಚು ಆಯಾಸವಾಗುವುದಿಲ್ಲ.

*ಸೆಡೆತವನ್ನು ಕಡಿಮೆಗೊಳಿಸುತ್ತದೆ*

 ಮಹಿಳೆಯರು ಮಾಸಿಕ ದಿನಗಳಲ್ಲಿ ಅನುಭವಿಸುವ ಕೆಳಹೊಟ್ಟೆಯ ಸೆಡೆತ ಹಾಗೂ ನೋವನ್ನು ಕಡಿಮೆಗೊಳಿಸಲು ಈ ಮಿಶ್ರಣ ಅತ್ಯುತ್ತಮವಾಗಿದೆ. ಇದರಲ್ಲಿರುವ ಪೋಷಕಾಂಶಗಳು ಗರ್ಭಾಶಯದ ಗೋಡೆಗಳ ಉರಿಯೂತವನ್ನು ಕಡಿಮೆಗೊಳಿಸುವ ಗುಣ ಹೊಂದಿದ್ದು ಸೆಡೆತವನ್ನು ಕಡಿಮೆ ಮಾಡುತ್ತದೆ

*ಹಸಿವನ್ನು ಕಡಿಮೆಮಾಡುತ್ತದೆ* 

ಒಂದು ವೇಳೆ ನೀವು ತೂಕ ಇಳಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದರೆ ಈ ಮಿಶ್ರಣ ನಿಮಗೆ ತುಂಬ ಅಗತ್ಯವಾಗಿದೆ. ಏಕೆಂದರೆ ಈ ಮಿಶ್ರಣವನ್ನು ಸೇವಿಸಿದ ಬಳಿಕ ಹೆಚ್ಚಿನ ಹೊತ್ತಿನವರೆಗೆ ಹೊಟ್ಟೆ ತುಂಬಿದಂತಿದ್ದು ಅನಗತ್ಯವಾಗಿ ಅನಾರೋಗ್ಯಕರ ಆಹಾರವನ್ನು ಸೇವಿಸದಂತೆ ತಡೆಯುತ್ತದೆ. ತನ್ಮೂಲಕ ಹೆಚ್ಚಬಹುದಾಗಿದ್ದ ತೂಕವನ್ನು ತಡೆದಂತಾಗುತ್ತದೆ.

*ಚರ್ಮ ಮತ್ತು ಕೂದಲ ಆರೋಗ್ಯ ಹೆಚ್ಚಿಸುತ್ತದೆ*

ಜೇನು ಮತ್ತು ಎಳ್ಳಿನಲ್ಲಿರುವ ಪ್ರೋಟೀನು ಮತ್ತು ಆಂಟಿ ಆಕ್ಸಿಡೆಂಟುಗಳು ಚರ್ಮ ಮತ್ತು ಕೂದಲಿಗೂ ಉತ್ತಮವಾಗಿವೆ. ಇವುಗಳು ಆರೋಗ್ಯಕರ ಚರ್ಮ ಹಾಗೂ ಕೂದಲಿನ ಜೀವಕೋಶಗಳು ಬೆಳೆಯಲು ನೆರವಾಗುತ್ತವೆ ಹಾಗೂ ತನ್ಮೂಲಕ ಆರೋಗ್ಯಕರ ಚರ್ಮ ಹಾಗೂ ಸೊಂಪಾದ ಕೂದಲು ಪಡೆಯಲು ನೆರವಾಗುತ್ತದೆ.

*ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ* 

ಈ ಮಿಶ್ರಣದ ಆಂಟಿ ಆಕ್ಸಿಡೆಂಟುಗಳು ಮೆದುಳಿಗೆ ಹರಿಯುವ ರಕ್ತದ ಪ್ರಮಾಣವನ್ನು ಹೆಚ್ಚಿಸಿ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಏಕಾಗ್ರತೆ, ಸ್ಮರಣಾಶಕ್ತಿ, ತಾರ್ಕಿಕ ಶಕ್ತಿ ಮೊದಲಾದ ಸಾಮರ್ಥ್ಯಗಳು ಹೆಚ್ಚುತ್ತವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ