ಶನಿವಾರ, ಸೆಪ್ಟೆಂಬರ್ 30, 2017

ಈರುಳ್ಳಿಯನ್ನು ಮನೆ ಮದ್ದು ಆಗಿ ಉಪಯೋಗಿಸಿ

ಈರುಳ್ಳಿಯನ್ನು ಮನೆ ಮದ್ದು ಆಗಿ ಉಪಯೋಗಿಸಿ

ಈರುಳ್ಳಿಯು ಪಿತ್ತಹರ ಕಫ‌ಹರ. ಈರುಳ್ಳಿಯ ಬೀಜ ವಾತಹರ. ಇದು ರಜಸ್‌ ಮತ್ತು ತಮೋಗುಣವನ್ನು ವೃದ್ಧಿಸುತ್ತದೆ.
ಈರುಳ್ಳಿಯಲ್ಲಿ ಶರ್ಕರಪಿಷ್ಟ , ಪ್ರೊಟೀನ್‌, ಕ್ಯಾಲಿÏಯಂ, ಕಬ್ಬಿಣ ಸಣ್ತೀ , ಜೀವಸತ್ವ ಎಬಿಸಿಗಳನ್ನು ಹೊಂದಿದೆ.

ಈರುಳ್ಳಿ 2 ಚಮಚಕ್ಕೆ 2 ಚಮಚ ಜೇನು ಬೆರೆಸಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅಧಿಕ ರಕ್ತದೊತ್ತಡ ಶಮನವಾಗುತ್ತದೆ.
ನೆಗಡಿ, ಕೆಮ್ಮು ಕಫ‌ಕ್ಕೆ ಈರುಳ್ಳಿಯ ರಸಕ್ಕೆ (2 ಚಮಚ), ಜೇನು ತುಪ್ಪ (2 ಚಮಚ), 2 ಚಿಟಿಕೆ ಕಾಳುಮೆಣಸಿನ ಹುಡಿ ಬೆರೆಸಿ ನೀಡಿದರೆ ಮಕ್ಕಳಲ್ಲಿ  ನೆಗಡಿ, ಕೆಮ್ಮು ಕಫ‌ ಶಮನವಾಗುತ್ತದೆ.
ಪುಟ್ಟ ಮಕ್ಕಳಿಗೆ ಇಡೀ ಬಿಳಿ ಈರುಳ್ಳಿ /ಕೆಂಪು ಈರುಳ್ಳಿಯನ್ನು ಬೇಯಿಸಿ ಅಥವಾ ಸುಟ್ಟು ಸೇವಿಸಲು ನೀಡಿದರೆ ಕೆಮ್ಮು ಕಫ‌ ನಿವಾರಣೆಯಾಗುತ್ತದೆ. ಇದು ರಕ್ತವರ್ಧಕವೂ ಹೌದು.
ಈರುಳ್ಳಿಯನ್ನು ಕತ್ತರಿಸಿ ಬೆಲ್ಲ , ತುಪ್ಪ ಬೆರೆಸಿ ಸೇವಿಸಿದರೆ ದೇಹದ ತೂಕ ವೃದ್ಧಿಯಾಗುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಈರುಳ್ಳಿಯ ಬೀಜಗಳಿಂದ ಚಹಾ ಮಾಡಿ ಸೇವಿಸಿದರೆ ನಿದ್ರಾಜನಕವಾಗಿದೆ.
ಈರುಳ್ಳಿಯ ರಸವನ್ನು ಕಣ್ಣಿಗೆ ಕಾಡಿಗೆಯಂತೆ ಲೇಪಿಸಿದರೆ ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ.
ಈರುಳ್ಳಿಯನ್ನು ಕತ್ತರಿಸಿ ನೀರಿನಲ್ಲಿ ಕುದಿಸಿ ಆರಿದ ಬಳಿಕ ಕಾಳುಮೆಣಸಿನ ಹುಡಿ, ಜೇನು ಬೆರೆಸಿ ಸೇವಿಸಿದರೆ ಕೆಮ್ಮು ದಮ್ಮು ಶಮನವಾಗುತ್ತದೆ.
ಈರುಳ್ಳಿಯನ್ನು ಕತ್ತರಿಸಿ ಹಸಿಯಾಗಿ ಊಟಕ್ಕೆ ಮೊದಲು ಸೇವಿಸಿದರೆ ಜೀರ್ಣಶಕ್ತಿ ಮತ್ತು ಪಚನಶಕ್ತಿ ವೃದ್ಧಿಯಾಗುತ್ತದೆ.
4 ಚಮಚ ಈರುಳ್ಳಿ ರಸಕ್ಕೆ 4 ಚಿಟಿಕೆ ಇಂಗು ಬೆರೆಸಿ ಸೇವಿಸಿದರೆ ಹೊಟ್ಟೆ ಉಬ್ಬರ, ಹೊಟ್ಟೆನೋವು ಶಮನವಾಗುತ್ತದೆ.
ಕಿವಿಯಲ್ಲಿ ನೋವಿರುವಾಗ ಈರುಳ್ಳಿ ರಸವನ್ನು ಕುದಿಸಿ 2 ಹುಂಡು ದಿನಕ್ಕೆ 3-4 ಬಾರಿ ಹಾಕಿದರೆ ಕಿವಿಯ ನೋವು ಉರಿಯೂತ ಶಮನವಾಗುತ್ತದೆ.
ಈರುಳ್ಳಿ ಹೂವುಗಳನ್ನು ಸೇವಿಸಿದರೆ ರುಚಿ ಮತ್ತು ಜೀರ್ಣಶಕ್ತಿ ವೃದ್ಧಿಯಾಗುತ್ತದೆ.
ಬಲಹೀನತೆ, ಅಶಕ್ತಿ ಇರುವಾಗ ಈರುಳ್ಳಿ ರಸ 3 ಚಮಚ, ತುಪ್ಪ 3 ಚಮಚ ಬೆರೆಸಿ ನಿತ್ಯ ಸೇವಿಸಿದರೆ ಬಲ್ಯ ಮತ್ತು ಶಕ್ತಿಕಾರಕ.
ಪುಟ್ಟ ಈರುಳ್ಳಿಯನ್ನು ಸೇವಿಸಿದರೆ ಋತುಚಕ್ರ ಕ್ರಮಯುತವಾಗಿ ಉಂಟಾಗುತ್ತದೆ.
ಸುಣ್ಣದ ತಿಳಿನೀರು ಮತ್ತು ಈರುಳ್ಳಿ ರಸ ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ಕಾಲರಾ ರೋಗದಲ್ಲಿ ಗುಣಕಾರಿ.
ಮೂತ್ರದಲ್ಲಿ ಸೋಂಕು ಇರುವಾಗ ಈರುಳ್ಳಿ ಜ್ಯೂಸ್‌ ನಿತ್ಯ ಸೇವಿಸಿದರೆ  ಮೂತ್ರದ ಸೋಂಕು, ಮೂತ್ರದಲ್ಲಿ ಉರಿ, ಮೂತ್ರದಲ್ಲಿನ ಕಲ್ಲು ನಿವಾರಣೆಯಾಗುತ್ತದೆ.
ಅರ್ಧ ಕಪ್‌ ಈರುಳ್ಳಿ ಜ್ಯೂಸ್‌ಗೆ 4 ಚಮಚ ಕಲ್ಲುಸಕ್ಕರೆ ಪುಡಿ ಬೆರೆಸಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತಸ್ರಾವಯುಕ್ತ ಮೂಲವ್ಯಾಧಿ ಶಮನವಾಗುತ್ತದೆ.
ದಾಳಿಂಬೆ ಸಿಪ್ಪೆಯ ಕಷಾಯದಲ್ಲಿ ಈರುಳ್ಳಿ ರಸ ಬೆರೆಸಿ ನೀಡಿದರೆ ಅತಿಸಾರ, ಆಮಶಂಕೆ ಶಮನವಾಗುತ್ತದೆ.
ಹೊಟ್ಟೆನೋವು ಇರುವಾಗ 2 ಚಮಚ ಈರುಳ್ಳಿ ರಸ, 2 ಚಮಚ ಲಿಂಬೆರಸ, 2 ಚಿಟಿಕೆ ಉಪ್ಪು ಬೆರೆಸಿ ಸೇವಿಸಿದರೆ ಹೊಟ್ಟೆನೋವು ಶಮನವಾಗುತ್ತದೆ.
ಕಪ್ಪು ಜೀರಿಗೆ ಮತ್ತು ಈರುಳ್ಳಿಯನ್ನು ಜಜ್ಜಿ ಅದರ ಹೊಗೆ ಸೇವಿಸಿದರೆ ಹಲ್ಲುನೋವು, ಒಸಡು ಊತ ಶಮನವಾಗುತ್ತದೆ.
ಸಾಸಿವೆ ಎಣ್ಣೆ ಮತ್ತು ಈರುಳ್ಳಿ ರಸ ಬೆರೆಸಿ ಬೆಚ್ಚಗೆ ಮಾಡಿ ಗಂಟುನೋವಿಗೆ ಲೇಪಿಸಿದರೆ, ಗಂಟುನೋವು, ಊತ ಶಮನವಾಗುತ್ತದೆ. ದಿನಕ್ಕೆ 3-4 ಬಾರಿ ಲೇಪಿಸಬೇಕು.
ಚಳಿಯಲ್ಲಿ ಕಾಲು ಒಡೆದರೆ ಈರುಳ್ಳಿಯ ಬಿಲ್ಲೆಯಿಂದ ಕಾಲಿನ ಹಿಮ್ಮಡಿಯನ್ನು ತಿಕ್ಕಿ , ತದನಂತರ ಕೊಬ್ಬರಿ ಎಣ್ಣೆ ಲೇಪಿಸಿದರೆ. ಕಾಲಿನ ಒಡಕು ಶಮನವಾಗುತ್ತದೆ.
ಶಿಲೀಂಧ್ರದ ಸೋಂಕು ಹಾಗೂ ತುರಿಕೆ, ಕಜ್ಜಿ ಮುಂತಾದ ಚರ್ಮದ ತೊಂದರೆಗಳಲ್ಲಿ ಲಿಂಬೆರಸ, ತುಳಸೀರಸಕ್ಕೆ ಅಷ್ಟೇ ಪ್ರಮಾಣದ ಈರುಳ್ಳಿ ರಸ ಬೆರೆಸಿ ಲೇಪಿಸಿದರೆ ಶಮನಕಾರಿ.
ಹಿಮ್ಮಡಿಯ ಸೀಲಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟಬಹುದು.
ತೂಕ ಹೆಚ್ಚಾಗಬೇಕೆಂದಾಗ ಬೆಲ್ಲದೊಂದಿಗೆ ದಿನವೂ ಈರುಳ್ಳಿಯ ಒಂದು ಗಡ್ಡೆಯನ್ನು ಸೇವಿಸುತ್ತಾ ಬರಬಹುದು.
ತುರಿಕಜ್ಜಿ ಇತ್ಯಾದಿ ಚರ್ಮರೋಗವಿದ್ದಾಗ ಬಿಳೀ ಈರುಳ್ಳಿ ರಸಕ್ಕೆ ಅರಸಿನಪುಡಿ ಕಲಸಿ ಬಾಹ್ಯಲೇಪನವಾಗಿ ಹಚ್ಚುವುದರಿಂದ ಅನುಕೂಲ ದೊರೆಯುವುದು.
ಜೇನುನೊಣ ಇಲ್ಲವೇ ಚೇಳು ಕಚ್ಚಿದಾಗ ಆ ಭಾಗದ ಮೇಲೆ ಈರುಳ್ಳಿ ಹೋಳನ್ನು ತಿಕ್ಕುವುದರಿಂದ ಉಪಶಮನ ದೊರೆಯುವುದು. ಅಲ್ಲದೆ ಕಿವಿಶೂಲೆಯಲ್ಲಿ ಇದರ ರಸವನ್ನು ಸ್ವಲ್ಪ ಬಿಸಿಮಾಡಿ ಒಂದೆರಡು ಹನಿ ಬಿಟ್ಟರೆ ನೋವು ಬಿಟ್ಟುಹೋಗುವುದು. ಸೋರುತ್ತಿದ್ದರೂ ಕೂಡಾ ಅದನ್ನು ನಿಲ್ಲಿಸುವುದು.
ಪ್ರತಿ ದಿನ ಈರುಳ್ಳಿ ಸೇವನೆಯಿಂದ ರಕ್ತ ವೃದ್ಧಿಸುತ್ತದೆ.
ಒಂದು ಈರುಳ್ಳಿಯನ್ನು ಸಣ್ಣ ಹೆಚ್ಚಿ ತುಪ್ಪದಲ್ಲಿ ಹುರಿದು ಕೊಟ್ಟಣದ ಅನ್ನದೊಂದಿಗೆ ಕಲಸಿ ತಿಂದರೆ ರಕ್ತಬೇದಿ ಶಮನ.
ಒಂದು ಈರುಳ್ಳಿ ಗಡ್ಡೆಯನ್ನು ಕೆಂಡದಲ್ಲಿ  ಸುಟ್ಟು ತಿನ್ನುವುದು ಆಮಶಂಕೆ ರೋಗಕ್ಕೆ ಉತ್ತಮ.
ಎರಡು ಟೀ ಚಮಚ ಈರುಳ್ಳಿ ರಸ, ತುಪ್ಪದಲ್ಲಿ ಹುರಿದ ಕಡಲೇಕಾಳು ಗಾತ್ರದ ಇಂಗು, ಎರಡು ಟೀ ಚಮಚ ಬಡೇಸೊಪ್ಪಿನ ಪುಡಿ-ಒಟ್ಟಿಗೆ ಕಲಸಿ ಸೇವಿಸುತ್ತ ಬಂದರೆ ವಾಂತಿ ಭೇದಿಗೆ ಒಳ್ಳೆಯದು.
[30/09 7:07 AM] ‪+91 94498 28225‬: *ನಾವು ತಿಳಿಯದ ಗೋಧಿಯ ಇನ್ನೊಂದು ಭಯಾನಕ ಮುಖ: ಶ್ರೀ ಅನಂತಜೀ*

ಶಿವಮೊಗ್ಗ:ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 15 ದಿನಗಳ ಉಚಿತ ಯೋಗ ಶಿಬಿರದಲ್ಲಿ ಇಂದು ದಿನ ನಿತ್ಯ ನಾವು ತಿನ್ನುತ್ತಿರುವ ಗೋಧಿಯ ಬಗ್ಗೆ ಅನಂತ್‍ಜೀಯವರು ಜನತೆಯನ್ನು ಬೆಚ್ಚಿ ಬೀಳಿಸುವ ಕಟು ವಾಸ್ತವ ಸತ್ಯವನ್ನು ತಿಳಿಸಿದರು.
ಪ್ರತಿದಿನ ನಾವು ತಿನ್ನುವ ಗೋಧಿಯನ್ನು ನಮ್ಮ ಪೂರ್ವಜರು ತಿನ್ನುವುದಿರಲಿ ಕಣ್ಣಲ್ಲೂ ಕೂಡ ಯಾರು ನೋಡಲೇ ಇಲ್ಲ…….!!!
ಅಮೇರಿಕಾ ವಿಜ್ಞಾನಿಗಳು ಈ ಗೋಧಿಯನ್ನು ‘Wheat’ ಎಂದು ಯಾರೂ ಕರೆಯುವುದಿಲ್ಲ. ಈ ಗೋಧಿಗೆ ‘ಟ್ರಿಟಿಕಂ ವಲ್ಗೇರ್’  ಎಂದು ಕರೆಯುತ್ತಾರೆ……!! ಈ ಹೆಸರು ಎಷ್ಟೋ ಜನರಿಗೆ ಗೊತ್ತೇ ಇಲ್ಲ……!!

ಈ ಗೋಧಿ ಕೇವಲ 51 ವರ್ಷಗಳ ಹಿಂದೆ ಅಂದರೆ 1965 ರಲ್ಲಿ ಅಮೇರಿಕಾ ಸರ್ಕಾರವು ಗೋಧಿರವೆ ಮಾಡಿ ಹಡಗಿನಲ್ಲಿ ತಂದು ನಮ್ಮ ದೇಶದ ಹಳ್ಳಿ-ಹಳ್ಳಿಗಳಿಗೂ ಕೊಟ್ಟು, ಶಾಲೆಗಳಲ್ಲಿ ರವೆ ಉಪ್ಪಿಟ್ಟು ಮಾಡಿ ಉಚಿತವಾಗಿ ತಿನ್ನಿಸಿ, ಈ ಗೋಧಿಯನ್ನು ತಿನ್ನಲು ಕಲಿಸಿದರು…….!! 1975 ರ ನಂತರ ಈ ಗೋಧಿಯನ್ನು ನಮ್ಮ ದೇಶದಲ್ಲೇ ಬೆಳೆಸಲಾಯಿತು. ಮೊದಲು ಗೋಧಿಯನ್ನು ಬೆಳೆದ ರಾಜ್ಯ ಪಂಜಾಬ್…ಇಂದು ಪಂಜಾಬ್ ರಾಜ್ಯ ದೇಶದ ದೊಡ್ಡ ಕ್ಯಾನ್ಸರ್ ರಾಜ್ಯ……..!! ಪಂಜಾಬ್ ರಾಜ್ಯದಲ್ಲಿ ಒಂದೊಂದು ಮನೆಯಲ್ಲಿ 2 ರಿಂದ 3 ಜನ ಕ್ಯಾನ್ಸರ್ ರೋಗಿಗಳಿದ್ದಾರೆ…….! ಹೇಳಬೇಕೆಂದರೆ ಇಡೀ ರಾಜ್ಯವೇ ಕ್ಯಾನ್ಸರ್ ರಾಜ್ಯ…….!!!

ವಿಪರ್ಯಾಸವೆಂದರೆ ಭಾರತೀಯರೆಲ್ಲರು ಬಹಳ ಸಂತೋಷದಿಂದ ಅಮೇರಿಕಾದಿಂದ ಬಂದ ಈ ಗೋಧಿಯನ್ನು ತಿನ್ನಲು ಕಲಿತದು.
ಆತ್ಮೀಯರೇ ಕನಿಷ್ಟ ಪಕ್ಷ ಒಮ್ಮೆಯಾದರು ನೀವು ತಿನ್ನುತ್ತಿರುವ ಗೋಧಿಯ ಬಗ್ಗೆ ಯೋಚಿಸಿದ್ದೀರಾ……? ನಮ್ಮ ಪೂರ್ವಜರು ಕಣ್ಣಲ್ಲೂ ನೋಡದಂತಹ ಈ ಗೋಧಿಯನ್ನು ತಿನ್ನುವ ಮುನ್ನ ತುಸು ವಿಚಾರ ಮಾಡಿ ತಿನ್ನಿರಿ.

ನಿರಂತರವಾಗಿ ಈ ಗೋಧಿಯನ್ನು ತಿನ್ನುವುದರಿಂದ ಗೋಧಿಯಲ್ಲಿರುವ ಗ್ಲೂಟೇನ್  ಎಂಬ ರಾಸಾಯನಿಕ ನಮ್ಮ ಕರುಳಿನ ಒಳಭಾಗದಲ್ಲಿ ಲೇಪನವಾಗುವುದು. ಆಗ ದೇಹದ ಉಷ್ಣತೆ ಹೆಚ್ಚಾಗಿ ನಿಮಗೆ ಮಲಬದ್ಧತೆಯಾಗುತ್ತದೆ. ಮಲಬದ್ಧತೆಯಾದಾಗ ತಿಂದಂತಹ ಆಹಾರ ಕೊಳೆಯುತ್ತದೆ. ತಿಂದ ಆಹಾರ ಕೊಳೆತಾಗ ಗಾಳಿ ಉತ್ಪತ್ತಿಯಾಗುತ್ತದೆ. ಆ ಗಾಳಿಯನ್ನು ಗ್ಯಾಸ್ಟ್ರೈಟೀಸ್ ಎಂದು ಕರೆಯುತ್ತೇವೆ. ನೀವೀಗ ಜೀವನ ಪರ್ಯಂತ ಗ್ಯಾಸ್ಟ್ರೈಟೀಸ್ ಮಾತ್ರೆಯನ್ನು ನುಂಗಬೇಕಾಗುತ್ತದೆ. ತಿಂದಂತಹ ಆಹಾರ ಕಟ್ಟಿಕೊಂಡು ಕೊಳೆಯುವ ಕ್ರಿಯೆಯಿಂದ ಯಥೇಚ್ಛವಾಗಿ ಟಾಕ್ಸೀನ್ ಉತ್ಪತ್ತಿಯಾಗುತ್ತದೆ. ಈ ಎಲ್ಲಾ ಗಲೀಜು ನೇರವಾಗಿ ನಿಮ್ಮ ರಕ್ತದಲ್ಲಿ ಬೆರೆಯುತ್ತದೆ. ಈಗ ಶುರುವಾಯಿತು ನೋಡಿ ನಾನಾ ತರಹದ ಖಾಯಿಲೆಗಳು.

ಆತ್ಮೀಯರೇ ಇಷ್ಟಕ್ಕೇ ಮುಗಿಯಲಿಲ್ಲ….. ಈ ಗೋಧಿಯಲ್ಲಿರುವ ಗ್ಲೂಟೇನ್  ನಿಮ್ಮ ಕೀಲುಗಳ ಮಧ್ಯೆ ಇರುವ ಸೈನೋವಿಲ್ ದ್ರವವನ್ನು ಹಂತ-ಹಂತವಾಗಿ ಒಣಗಿಸಿ ನಿಮ್ಮನ್ನು ಸಂದಿವಾತ (ಅರ್ಥರೈಟೀಸ್) ರೋಗಿಗಳನ್ನಾಗಿ ಮಾಡಿ ಜೀವನವನ್ನು ನರಕಮಯವಾಗಿಸುತ್ತದೆ.
ಆತ್ಮೀಯರೇ ಮತ್ತೊಂದು ಭಯಾನಕ ಸಂಗತಿ ಏನೆಂದರೆ ಈ ಗೋಧಿಯಲ್ಲಿರುವ ಗ್ಲೂಟೇನ್  ನಿಮ್ಮ ಪ್ಯಾಂಕ್ರಿಯಾಸ್ ಗ್ರಂಥಿಯಲ್ಲಿರುವ ಬೀಟಾ ಜೀವಕೋಶಗಳನ್ನು ಹಂತ ಹಂತವಾಗಿ ನಿಷ್ಕ್ರಿಯಗೊಳಿಸುತ್ತದೆ. ಬೀಟಾ ಜೀವಕೋಶಗಳ ನಿಷ್ಕ್ರಿಯತೆಯಿಂದ ಇನ್ಸುಲಿನ್ ಉತ್ಪತ್ತಿಯು ಕಮ್ಮಿಯಾಗುತ್ತಾ ಹೋಗಿ ನೀವು ಜೀವನ ಪರ್ಯಂತ ಡಯಾಬಿಟೀಸ್ ರೋಗಿಗಳಾಗುತ್ತೀರಿ.

ಆತ್ಮೀಯರೇ ಭಾರತೀಯರು ಎಷ್ಟೆಷ್ಟು ಬೇಗ ರೋಗಿಗಳಾಗುತ್ತಾರೋ ಅಷ್ಟೇ ಸಂತೋಷಪಡುತ್ತವೆ ವಿದೇಶದಲ್ಲಿರುವ ಔಷಧಿ ಕಂಪನಿಗಳು. ಈ ಎಲ್ಲಾ ಔಷಧಿ ಕಂಪನಿಗಳ ಮೂಲ ಉದ್ದೇಶವೇ ಜನಗಳನ್ನು ವ್ಯವಸ್ಥಿತವಾಗಿ ರೋಗಿಗಳನ್ನಾಗಿ ಮಾಡಿ ಹಣಗಳಿಸುವುದೇ ಆಗಿದೆ. ಭಾರತೀಯರು ತಮಗರಿವಿಲ್ಲದಂತೆ ರೋಗಿಗಳಾಗಲೆಂದೇ ಗೋಧಿಯನ್ನು ಹಡಗಿನಲ್ಲಿ ತಂದು ಹಳ್ಳಿ ಹಳ್ಳಿಗೂ ಹಂಚಿದರು.
ನಮ್ಮ ಹಿರಿಯರು ಗೋಧಿಯನ್ನು ತಿನ್ನಲಿಲ್ಲ ಹಾಗಾಗಿ ಗ್ಯಾಸ್ಟ್ರೈಟೀಸ್, ಮಲಬದ್ಧತೆ, ಸಂಧಿವಾತ, ಫೈಲ್ಸ್, ಡಯಾಬಿಟೀಸ್ ಈ ಯಾವ ಖಾಯಿಲೆಗಳ ಹೆಸರೂ ಕೂಡ ನಮ್ಮ ಪೂರ್ವಜರಿಗೆ ಗೊತ್ತಿರಲಿಲ್ಲ.

ಆತ್ಮೀಯರೇ ನಾವು ಯಾಕೆ ಗೋಧಿಯನ್ನು ತಿಂದು ಇಂತಹ ರೋಗವನ್ನು ತಂದುಕೊಂಡು ಬಲಿಪಶುಗಳಂತೆ ಜೀವನವನ್ನು ಹಾಳುಮಾಡಿಕೊಳ್ಳಬೇಕು. ಈ ಎಲ್ಲಾ ಖಾಯಿಲೆಗಳು ನಿಮಗೆ ಬೇಡವೆಂದರೆ ಇಂದೇ ಗೋಧಿ ಮತ್ತು ಅದರಿಂದ ತಯಾರಿಸಿದ ನಾನಾ ರೀತಿಯ ಪದಾರ್ಥಗಳನ್ನು ಕಸದ ತೊಟ್ಟಿಗೆ ಹಾಕಿ. ಉಳಿದ ಜೀವನವನ್ನು ಆರೋಗ್ಯ ಪೂರ್ಣರಾಗಿ ಬದುಕಿ ಎಂದು ಗೋಧಿಯ ಹಿಂದಿರುವ ಭಯಾನಕ ಮಾಹಿತಿಯನ್ನು ಅಂಕಿ-ಅಂಶಗಳೊಂದಿಗೆ ತಿಳಿಸಿದರು. ನಿಜವಾಗಿಯೂ ಯೋಗ ವಿಸ್ಮಯ ಶಿಬಿರವು ಜನಗಳನ್ನು ವಿಸ್ಮಯಗೊಳಿಸುತ್ತಿರುವುದರಲ್ಲಿ ಯಾವ ಅನುಮಾನವು ಇಲ್ಲ.

ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಶ್ರೀ ಅನಂತ್‍ಜೀರವರಿಗೆ ಕರೆ ಮಾಡಿ. ಮೊ. : 9964762267

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ