ಶನಿವಾರ, ಸೆಪ್ಟೆಂಬರ್ 9, 2017


ಧರ್ಮ ಎಂದರೇನು? ದೇವರು ಎಂದರೆ ಯಾರು?  ಈ ವಿಷಯಗಳಲ್ಲಿ  ಮಾತನಾಡುವುದೇ ಕಷ್ಟ. ಯಾಕೆಂದರೆ ಇವೆಲ್ಲವೂ ಆತ್ಮದಲ್ಲಿ  ಏಳುವ ಪ್ರಶ್ನೆ.  ಶರೀರಕ್ಕೆ  ಇವುಗಳ ಬಗ್ಗೆ ಗೊತ್ತಿಲ್ಲ. ಶರೀರ ಬದುಕಿನಲ್ಲಿ ಶರೀರಕ್ಕೆ  ಸಂಬಂಧಿಸಿದ ಗುಣಧರ್ಮಗಳಿಗೆ ಸ್ಪಂದಿಸುತ್ತವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನೊಳ ಗೊಂಡ ಶರೀರ.  ಶರೀರಕ್ಕೆ ಅಂತ್ಯ ಇದೆ. ಯಾವಾಗ ಶರೀರದಲ್ಲಿದ್ದ ಚೇತನ ಹೊರಟು ಹೋಗುತ್ತದೋ ಆವಾಗ ಶರೀರವನ್ನು ಹೆಣ ಎನ್ನುತ್ತಾರೆ. "ಅವನು (ರಾಮ) ಸತ್ತು ಹೋದ " ಈ ಮಾತಿನಲ್ಲಿ ಸತ್ತದ್ದು ಯಾರು?  ಹೋದದ್ದು ಯಾರು?  ಒಂದು ಶರೀರ ಬದುಕಿರುವಾಗ ಇದ್ದ ಕ್ರಿಯಾಶೀಲತೆ ಸತ್ತಾಗ ಇರುವುದಿಲ್ಲ. ಅಂದರೆ ಶರೀರದಿಂದ ಏನೋ ಒಂದು ಚೇತನ (ಶಕ್ತಿ, ಪ್ರಾಣ, ಆತ್ಮ ) ಹೋಗಿರುವುದೂ ಸತ್ಯ. ಬದುಕಿರುವಾಗ ಶರೀರದಲ್ಲಿ ಇರುವ ಚೇತನವನ್ನು ಯಾರು ಅರಿಯುತ್ತಾರೋ  ಅವನಿಗೆ ದೇವರು ಎಂದರೆ ಯಾರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ.  ಒಬ್ಬ ವ್ಯಕ್ತಿಯಲ್ಲಿ ಆತ್ಮ ಜ್ಞಾನದ ಲಕ್ಷಣ ಇದೆಯಾ ಎಂದು ತಿಳಿಯುವುದು ಹೇಗೆ? ಈಗ ಚಳಿಗಾಲ.  ಈ ಚಳಿಗೆ ಬೆಳಿಗ್ಗೆ. ಐದು ಘಂಟೆಗೆ ತಣ್ಣೀರು ಸ್ನಾನ ಪ್ರತಿ ದಿನ ಮಾಡಬೇಕು. ಆಗ ಆವನಿಗೆ ಚಳಿ ಆಂತ ಅನಿಸಲೇ ಬಾರದು.  ಆತ್ಮಕ್ಕೆ  ಚಳಿ ಸೆಖೆ ರೂಪ ಆಕಾರ ಬಣ್ಣ ಜಾತಿ ನೋವು ...... ಹೀಗೆ ಯಾವುದೂ ಇಲ್ಲ. ಎಲ್ಲವೂ ಇರುವುದು ಶರೀರಕ್ಕೆ. ಆದುದರಿಂದಲೇ ಶರೀರಕ್ಕೆ ಚಳಿ ಅನಿಸುವ ತಣ್ಣೀರು ಸ್ನಾನಕ್ಕೆ ಪ್ರತಿಕ್ರಿಯಿಸುವ ಬುದ್ಧಿ ಶರೀರದ ಮಾತು ಕೇಳುವುದಾದರೆ ಚಳಿ ಚಳಿ ಎಂದು ಹೇಳುತ್ತದೆ. ಆತ್ಮದ ಮಾತು ಕೇಳಿದರೆ  ಇನ್ನು ಎರಡು ಮೂರು ಚೆಂಬು ನೀರು ಹಾಕುವ ಎಂದೆನಿಸುವುದು.  
ಈ ಮಾತುಗಳನ್ನು  ಇಟ್ಟುಕೊಂಡು  ಹೇಳುವುದಾದರೆ ನಮ್ಮ ಧರ್ಮ ಆತ್ಮ ಧರ್ಮ,  (ಸಿಂಧು - ಹಿಂದುವಾಗಿ ಗುರುತಿಸಿ ಕೊಂಡದ್ದು)  ಇದು ವಿಶ್ವದಲ್ಲಿ  ಆಡಗಿರುವ ಧರ್ಮ,  ಹಾಗಾಗಿ ಸನಾತನ ಧರ್ಮಕ್ಕೆ  ಸ್ಥಾಪಕ ಅಂತ ಇಲ್ಲ. ವಿಶ್ವದ ಪ್ರತಿಯೊಂದು ಚರಾಚರ ವಸ್ತುಗಳಿಗೂ ಅವುಗಳದೇ ಆದ ಧರ್ಮ ಇದೆ. ಧರ್ಮದಿಂದ ವಸ್ತು ಪ್ರಬೇಧಗಳು ಜೀವ ಪ್ರಬೇಧಗಳು ಉಂಟಾಗುವುದು.......  ಆಧ್ಯಾತ್ಮ ಬರವಣಿಗೆಗೆ ಸಿಗುವುದು ಕಷ್ಟ. ಆತ್ಮ ಜ್ಞಾನದ ವಿಷಯ ವಾದುದರಿಂದ  ಆತ್ಮ ಸಾಕ್ಷಿಯೇ ಮೂಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ