ಶನಿವಾರ, ಸೆಪ್ಟೆಂಬರ್ 30, 2017

ಮನೆ ಮದ್ದು,

ನಮಗೇನಾದರೂ ಮೈ ಹುಷಾರಿಲ್ಲದಿದ್ದಾಗ ನಮಗೆ ಡಾಕ್ಟರ್ ಹತ್ರ ಓಡೋ ಮೊದಲು ನೆನಪಾಗೋದು ಮನೆಯಲ್ಲಿರೋ ಸಾಮಾನು... ಅಂದರೆ ಮನೆ ಮದ್ದು, ಮನೆ ಮದ್ದು ಕೆಲಸ ಮಾಡದೇ ಹೋದಾಗ ಮಾತ್ರ ಡಾಕ್ಟರ್ ನೆನಪಾಗ್ತಾರೆ ಅಂದ್ರೆ ಅದು ಸುಳ್ಳಲ್ಲ. ಅದಕ್ಕೇ ನಿಮಗೆ ಸಹಾಯ ಆಗೋ ಒಂದಿಷ್ಟು ಮನೆ ಮದ್ದುಗಳು ಇಲ್ಲಿವೆ ನೋಡಿ.

1. ದಾಳಿಂಬೆ ಸೇವಿಸೋದು ಹೃದಯಕ್ಕೆ ತುಂಬ ಒಳ್ಳೇದು. ದಿನಾ ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಬಿ ಪಿ ಕಡಿಮೆ ಮಾಡ್ಕೋಬೋದು.

2. ಗ್ಯಾಸ್ಟ್ರಿಕ್ ಅಂತ ಒದ್ದಾಡೋರೆಲ್ಲಾ, ದಿನಾ ಊಟ ಆದ್ಮೇಲೆ ಒಂದೆರೆಡು ತುಳಸೀ ಎಲೆಗಳನ್ನ ತಿಂದ್ರೆ ಆಸಿಡಿಟಿ ಕಡಿಮೆ ಆಗೋದಲ್ಲದೇ ಹೊಟ್ಟೇಲಿ ಅಲ್ಸರ್ ಕೂಡ ಆಗಲ್ಲ.

3. ಊಟದ ನಂತರ ಒಂದು ಲವಂಗ ತಿಂದ್ರೂ ಆಸಿಡಿಟಿ ಕಡಿಮೆ ಆಗುತ್ತೆ.

4. ನಿಮಗೆ ಅಸಿಡಿಟಿ ಮತ್ತಿನ್ಯಾವುದೇ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡರೂ, ದಿನಾ ಬೆಳಗ್ಗೆ ಖಾಲಿ ಹೊಟ್ಟೇಲಿ ಒಂದೆಸಳು ಬೆಳ್ಳುಳ್ಳಿನ ನೀರಲ್ಲಿ ಮಾತ್ರೆ ತರ ತಗೊಳ್ಳಿ.

5.  ಬೇಸಿಗೆಯ ದಗೆಗೆ ಉಂಟಾಗೋ ತಲೆನೋವನ್ನ ಹೋಗಲಾಡಿಸೋಕೆ ಒಂದು ಲೋಟ ಕಲ್ಲಂಗಡಿ ಜ್ಯೂಸ್ ಸಾಕು!

6. ದಿನಾ ಬೆಳಗ್ಗೆ ಖಾಲಿ ಹೊಟ್ಟೇಲಿ ಒಂದು ಸೇಬನ್ನ ತಿನ್ನೋದ್ರಿಂದ ಮೈಗ್ರೇನ್ ಕಡಿಮೆ ಆಗುತ್ತಂತೆ. ಇದು ಅಂತೆಕಂತೆ ಅಲ್ಲ... ವರ್ಷಗಳಿಂದ ನರಳಿರೋರ ಅನುಭವದ ಮಾತು!

7.  6 ಖರ್ಜೂರಾನ ಬಿಡಿಸಿ ಅರ್ಧ ಲೀಟರ್ ಹಾಲಲ್ಲಿ ಕಡಿಮೆ ಉರೀಲಿ ಕುದಿಸಿ, ದಿನಕ್ಕೆ 3 ಲೋಟ ಕುಡಿದರೆ ಒಣ ಕೆಮ್ಮು ಮಂಗಮಾಯ!

8.  ಕೆಮ್ಮು, ನೆಗಡಿ, ಕಫ, ಗಂಟಲು ನೋವು ಏನಾದ್ರೂ ಆಗಿದ್ರೆ, ಅದನ್ನ ಕಡಿಮೆ ಮಾಡೋಕೆ ಒಂದು ಚಮಚ ಜೇನಿಗೆ ಒಂದು ಚಮಚ ಶುಂಠಿ ರಸ ಸೇರಿಸಿ ಕುಡೀರಿ.

9. ನಿಮಗೇನಾದ್ರೂ ಊಟ - ತಿಂಡಿ ಸರಿಯಾಗಿ ಜೀರ್ಣ ಆಗ್ತಿಲ್ಲ ಅನ್ನಿಸ್ತಿದ್ರೆ ಅಥವಾ ಮಲಬದ್ಧತೆ ಕಾಡ್ತಿದ್ರೆ, ದಿನಾ ಊಟಕ್ಕೆ ಮುಂಚೆ ಒಂದು ಬಟ್ಟಲು ಬೇಯಿಸಿದ ಬೀಟ್ರೂಟ್ ತಿನ್ನಿ.

10. ಕೆಮ್ಮು ಕಡಿಮೆ ಮಾಡೋಕೆ ಈ ಕಾಫ್ ಸಿರಪ್ ಮಾಡ್ಕೊಳಿ

6 ಈರುಳ್ಳಿನ ಕತ್ತರಿಸಿ ಅದರ ಜೊತೆಗೆ 4 ಚಮಚ ಜೇನನ್ನ ಸೇರಿಸಿ. ಅದನ್ನ ಒಂದು ಬೋರೊಸಿಲ್ ಗಾಜಿನ ಬಾಟ್ಲಿಗೆ ಹಾಕಿ, ಚನ್ನಾಗಿ ಕುಲುಕಿ. ಆಮೇಲೆ ಅದನ್ನ ಒಂದು ನೀರಿನ ಪಾತ್ರೇಲಿಟ್ಟು ಕಮ್ಮಿ ಫ್ಲೇಮಲ್ಲಿ ಸ್ವಲ್ಪ ಹೊತ್ತು ಕುದಿಸಿ. ತಣ್ಣಗಾದ್ಮೇಲೆ, ಶೋಧಿಸಿ, 3 ಗಂಟೆಗೆ ಒಂದು ಚಮಚ ಕುಡೀರಿ.

11. ಮೊಡವೆಗಳು ಹಾಗು ಕಪ್ಪುಕಲೆಗಳನ್ನ ಕಡಿಮೆ ಮಾಡೋಕೆ ತುರಿದ ಸೌತೇಕಾಯನ್ನ ಮುಖಕ್ಕೆ ಹಚ್ಚಿ, 15 ನಿಮಿಷ ಆದ್ಮೇಲೆ ತೊಳೀರಿ.

12. 3 - 4 ಖರ್ಜೂರಾನ ಸ್ವಲ್ಪ ಹಾಲ್ಲಲ್ಲಿ ಹಾಕಿ ಕುಟ್ಟಿ ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ದಿನಾ ತಿನ್ನಿ. ರಕ್ತಹೀನತೆ, ಸುಸ್ತಾಗೋದು... ಎಲ್ಲಾ ವಾಸಿ ಆಗುತ್ತೆ.

13. ಡಾರ್ಕ್ ಸರ್ಕಲ್ಸ್ ಕಡಿಮೆ ಮಾಡೋಕೆ ಟೊಮಾಟೋ ಪ್ಯಾಕ್ ಹಾಕೊಳಿ

ಒಂದೆರೆಡು ಟೊಮಾಟೋ, ಒಂದು ಚಮಚ ನಿಂಬೆ ರಸ, ಒಂದು ಚಿಟಿಕೆ ಕಡಲೇಹಿಟ್ಟು ಮತ್ತೆ ಅರಿಶಿಣ ಹಾಕಿ ಮಿಕ್ಸೀಲಿ ಪೇಸ್ಟ್ ಮಾಡ್ಕೊಳ್ಳಿ. ಇದನ್ನ ಕಣ್ಣಿನ ಸುತ್ತ ಹಚ್ಚಿ 10-20 ನಿಮಿಷದ ನಂತರ ತೊಳೆಯಿರಿ. ವಾರಕ್ಕೆರೆಡು ಮೂರು ಬಾರಿ ಹೀಗೆ ಮಾಡಿದ್ರೆ ಕಣ್ಣಿನ ಸುತ್ತ ಇರೋ ಕಪ್ಪು ಹೋಗಿ ಚರ್ಮಕ್ಕೆ ಕಾಂತಿ ಬರುತ್ತೆ.

14. ಗಂಟಲ ಕಿಚ್ ಕಿಚ್ ಗೆ ಅರಿಶಿಣ ಮತ್ತು ಉಪ್ಪಿನ ನೀರು ರಾಮಬಾಣ

ನಿಮಗೆ ಗಂಟಲು ನೋವಾಗ್ತಿದ್ರೆ, ಅರ್ಧ ಲೋಟ ಬಿಸಿನೀರಿಗೆ ಒಂದು ಚಮಚ ಉಪ್ಪು ಮತ್ತು ಒಂದು ಚಮಚ ಅರಿಶಿಣ ಹಾಕಿ ಗಾರ್ಗಲ್ ಮಾಡಿ. ದಿನದಲ್ಲಿ ಸುಮಾರು ಸಾರಿ ಹೀಗೆ ಮಾಡಿ. ಜೊತೇಲಿ ಗಾರ್ಗಲ್ ಮಾಡಿದ ಅರ್ಧ ಗಂಟೆ ಏನನ್ನೂ ತಿನ್ನದೇ ಇರೋದು ಒಳ್ಳೇದು. ಆಮೇಲ್ ನೋಡಿ ಗಂಟಲು ನೋವು ಎಷ್ಟ್ ಬೇಗ ಓಡಿಹೋಗತ್ತೆ ಅಂತ!

15. ಕಿವಿ ನೋವಾಗಿದ್ರೆ ಒಂದೆರೆಡು ಹನಿ ಬೆಳ್ಳುಳ್ಳಿ ರಸಾನ ಕಿವಿಗೆ ಹಾಕೊಳಿ ಸಾಕು. ಇನ್ಫೆಕ್ಷನ್ ಇಂದ ನೋವಾಗಿದ್ರೆ ವಾಸಿಯಾಗತ್ತೆ.

16. ದೇಹದಿಂದ ಬರೊ ದುರ್ವಾಸನೆ ಕಡಿಮೆ ಮಾಡೋಕೆ ಬೇಕಿಂಗ್ ಸೋಡಾ ಜೊತೇಲಿ ನಿಂಬೆ ರಸ ಹಾಕಿ ಕಂಕಳಿಗೆ ಹಚ್ಚಿ.

17. ಹೊಟ್ಟೆ ಉಬ್ಬರಕ್ಕೆ ಸೋಂಪ್ ಕಾಳು ಉಪ್ಯೋಗ್ಸಿ

* ಬಿಸಿ ನೀರಲ್ಲಿ ಸೋಂಪು ಕಾಳನ್ನ ಹಾಕಿ ಕುದಿಸಿ ಕುಡೀರಿ ಅಥವಾ ಬರೀ ಸೋಂಪು ಕಾಳನ್ನ ಅಗೀರಿ.

* ಸೋಂಪ್ ಜೊತೆ ಏಲಕ್ಕಿ ಮತ್ತು ಪುದೀನ ಎಲೆಗಳನ್ನ ನೀರಲ್ಲಿ ಹಾಕಿ ಕುದಿಸಿ ಕುಡೀರಿ.

ಇದೆಲ್ಲಾ ಹೊಟ್ಟೆ ಉಬ್ಬರ ಕಡಿಮೆ ಮಾಡುತ್ತೆ.

18. ದೇಹದಲ್ಲಿರೋ ಕಸ ಹೊರ ಹಾಕೋಕೆ ಬಿಸಿನೀರಲ್ಲಿ ನಿಂಬೆ ರಸ ಹಾಕಿ ಕುಡೀರಿ

ವಿಟಮಿನ್ ಸಿ ಹೆಚ್ಚಿರೊ ನಿಂಬೆ ಹಣ್ಣಲ್ಲಿ ವಿಟಮಿನ್ ಬಿ, ರಿಬೋಫ್ಲಾವಿನ್,  ಫಾಸ್ಫರಸ್, ಮಗ್ನೀಶಿಯಂ ಹಾಗು ಕ್ಯಾಲ್ಷಿಯಂ ಕೂಡ ಇದೆ. ಇದು ದೇಹಕ್ಕೆ ತುಂಬಾ ಒಳ್ಳೇದಂತೆ. ದಿನಾ ನಿಂಬೆರಸಾನ ಬಿಸಿನಿರಿನ ಜೊತೆ ಸೇರಿಸಿ ಕುಡಿಯೋ ಅಭ್ಯಾಸ ಇದ್ದರೆ ನಿಮ್ಮ ಹೊಟ್ಟೆಗೆ ಒಳ್ಳೇದು. ಇದು ವಾಂತಿ ಬಾರದ ಹಾಗೆ ನೋಡಿಕೊಂಡು ಬಿ ಪಿ, ಎದೆಯುರಿ, ಅಜೀರ್ಣ ಮತ್ತೆ ಡಿಪ್ರೆಷನ್ ಕೂಡ ದೂರ ಮಾಡುತ್ತಂತೆ.

19. ಹಿಂದಿನ ರಾತ್ರಿ ಕುಡಿದಿದ್ದ ನಶೆ ಇಳಿಸಕ್ಕೆ  ಬಾಳೆಹಣ್ಣಿನ ಮಿಲ್ಕ್ ಶೇಕ್ಗೆ ಜೇನು ತುಪ್ಪ ಸೇರಿಸಿ ಕುಡೀರಿ

ತಣ್ಣಗಿರೋ ಹಾಲು ಹೊಟ್ಟೆಯ ಒಳಪದರಾನ ತಂಪಾಗಿಸಿದ್ರೆ, ಬಾಳೆ ಹಣ್ಣು ಹಾಗು ಜೇನು ದೇಹದಲ್ಲಿ ಕಡಿಮೆ ಆಗಿರೋ ಶುಗರ್ ಲೆವೆಲ್ ಜಾಸ್ತಿ ಮಾಡತ್ತೆ.

20. ಜಾಸ್ತಿ ಕೆಮ್ಮಿರೋರು ತುಳಸಿ ರಸದ ಜೊತೆ ಬೆಳ್ಳುಳ್ಳಿ ರಸ ಹಾಗು ಜೇನು ತುಪ್ಪ ಸೇರಿಸಿ ಕುಡೀರಿ

ಇದನ್ನ 3 ಗಂಟೆಗೊಮ್ಮೆ ಕುಡಿಯೋದ್ರಿಂದ ಕೆಮ್ಮು ವಾಸಿ ಆಗುತ್ತೆ.
[26/09 5:25 PM] ‪+91 94498 28225‬: ಮಲ ವಿಸರ್ಜನೆ ಸಮಯದಲ್ಲಿ ನೋವು ಕಾಣಿಸಿಕೊಂಡಾಗ 'ಏನೂ ಆಗುವುದಿಲ್ಲ' ಅನ್ನುತ್ತ ಬಹಳ ಜನರು ನಿರ್ಲಕ್ಷ್ಯ ಮಾಡುತ್ತಾರೆ. ಈ ಸಮಸ್ಯೆ ತೀವ್ರವಾದಾಗ ಮಾತ್ರ ವೈದ್ಯರ ಹತ್ತಿರ ಹೋಗುತ್ತಾರೆ. ಈ ರೀತಿಯ ನೋವು, ರಕ್ತಸ್ರಾವವಾಗುವುದು ಇಲ್ಲವೇ ಮಲಬದ್ಧತೆ ಅಂತಹ ಸಮಸ್ಯೆಗಳಿಂದ ತುಂಬಾ ಜನರು ನರಳುತ್ತಿದ್ದಾರೆ. ಈ ಸಮಸ್ಯೆ ಬರುವುದಕ್ಕೆ ಮುಖ್ಯ ಕಾರಣ ಪೈಲ್ಸ್, ಫಿಷರ್ಸ್ ಅಥವಾ ಫಿಸ್ತುಲಾ ಅಂತ ಹೇಳಬಹುದು. 

ಗುದದ್ವಾರದಲ್ಲಿರುವ ರಕ್ತನಾಳಗಳು ಹಿಗ್ಗಿ ಊತಕ್ಕೆ ಗುರಿಯಾಗಿ, ತೀವ್ರವಾದ ನೋವು ಮತ್ತು ರಕ್ತಸ್ರಾವವಾಗುವ ಸಮಸ್ಯೆಯನ್ನು ಮೂಲವ್ಯಾಧಿ (ಪೈಲ್ಸ್) ಅಂತ ಕರೆಯುತ್ತಾರೆ. ದೀರ್ಘಕಾಲಿಕ ಮಲಬದ್ಧತೆ, ಕಿಬ್ಬೊಟ್ಟೆ ಹೆಚ್ಚು ಕಾಲ ಒತ್ತಡಕ್ಕೆ ಗುರಿಯಾಗುವುದು, ದೀರ್ಘಕಾಲಿಕ ಕೆಮ್ಮಿನಿಂದ ಬಳಲುತ್ತಿರುವುದು, ಗರ್ಭಧಾರಣೆ ಸಮಯದಲ್ಲಿ, ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಮೂಲವ್ಯಾಧಿ ಬರುವ ಸಾಧ್ಯತೆ ಹೆಚ್ಚು. ಗುದದ್ವಾರದ ಹತ್ತಿರ ಇರುವ ರಕ್ತನಾಳಗಳ ಮೇಲೆ ಅಧಿಕ ಒತ್ತಡ ಬೀಳುವುದರಿಂದ, ಅವುಗಳಲ್ಲಿರುವ ಗೋಡೆಗಳಿಗೆ ಪೆಟ್ಟಾಗಿ, ರಕ್ತನಾಳಗಳು ಹಿಗ್ಗುತ್ತವೆ. ಇದರಿಂದ ರಕ್ತ ಸಂಚಲನ ನಿಲ್ಲುವುದರಿಂದ, ಮಲ ವಿಸರ್ಜನೆ ಸಮಯದಲ್ಲಿ ಒತ್ತಡ ಏರ್ಪಟ್ಟು, ಅದರಿಂದ ಸಹಿಸಲಾಗದ ನೋವು ಉಂಟಾಗಿ, ರಕ್ತನಾಳಗಳು ಒಡೆದು ಹೋಗಿ ರಕ್ತಸ್ರಾವ ಆಗುತ್ತದೆ. ಸಾಮಾನ್ಯವಾಗಿ ಮೂಲವ್ಯಾಧಿಯನ್ನು ಇಂಟರ್ನಲ್ ಮತ್ತು ಎಕ್ಸ್‌ಟರ್ನಲ್ ಅಂತ ವಿಧಗಳಾಗಿ ವಿಂಗಡಿಸುತ್ತಾರೆ. 
ಇಂಟರ್ನಲ್ ಪೈಲ್ಸ್:ಮಲ ವಿಸರ್ಜನೆ ಮಾರ್ಗದಲ್ಲಿ ಇರುವ ರಕ್ತನಾಳಗಳು ಊತಕ್ಕೆ ಗುರಿಯಾಗುವುದರಿಂದ ಇದು ಹುಟ್ಟಿಕೊಳ್ಳುತ್ತದೆ. ಎಕ್ಸ್‌ಟರ್ನಲ್ ಪೈಲ್ಸ್‌ಗೆ ಹೋಲಿಸಿದಾಗ ಇಂಟರ್ನಲ್ ಪೈಲ್ಸ್‌ನಿಂದ ಉಂಟಾಗುವ ನೋವು ಕಡಿಮೆ ಇರುತ್ತದೆ. 

ಎಕ್ಸ್‌ಟರ್ನಲ್ ಪೈಲ್ಸ್:ಗುದದ್ವಾರದ ಕೊನೆಯ ಭಾಗದಲ್ಲಿರುವ ರಕ್ತನಾಳಗಳು ಊತಕ್ಕೆ ಗುರಿಯಾಗಿ, ಅವುಗಳ ಮೇಲೆ ಇರುವ ಮ್ಯೂಕಸ್ ಪೊರೆ ಹೊರಗೆ ಕಾಣಿಸಿಕೊಳ್ಳುವುದನ್ನು ವೈದ್ಯಕೀಯ ಭಾಷೆಯಲ್ಲಿ ಎಕ್ಸ್‌ಟರ್ನಲ್ ಪೈಲ್ಸ್ ಅಂತ ಕರೆಯುತ್ತಾರೆ. ಇದರಲ್ಲಿ ತೀವ್ರವಾದ ನೋವು, ರಕ್ತಸ್ರಾವದ ಸಮಸ್ಯೆಗಳು ಉಂಟಾಗುತ್ತವೆ. 

ಫಿಷರ್ಸ್: 

ಗುದದ್ವಾರದ ಹತ್ತಿರ ನೀಟಾದ ಬಿರುಕನ್ನು 'ಫಿಷರ್' ಅಂತ ಹೇಳುತ್ತಾರೆ. ಇದು ತುಂಬಾ ನೋವು ಮತ್ತು ಉರಿಯಿಂದ ಕೂಡಿರುತ್ತದೆ. 

ಕಾರಣಗಳು:ದೀರ್ಘಕಾಲದ ಮಲಬದ್ಧತೆ, ಭೇದಿ ಇರುವುದರಿಂದ ಫಿಷರ್ ಏರ್ಪಡುವ ಸಾಧ್ಯತೆ ಇರುತ್ತದೆ. ಗರ್ಭದಾರಣೆ ಸಮಯದಲ್ಲಿ ಕೂಡ ಕೆಲವು ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್, ಅಲ್ಸರೇಟಿವ್ ಕೊಲೈಟೆಸ್ ರೋಗಗಳಿಂದ ಬಳಲುತ್ತಿರುವವರಲ್ಲಿ ಈ ತೊಂದರೆ ಉಂಟಾಗುವ ಅವಕಾಶ ಹೆಚ್ಚು. 

ಫಿಸ್ತುಲಾ:ಎರಡು ಎಪಿಥಿಲಿಯಲ್ ಕಣಜಾಲಗಳ ಮಧ್ಯೆ ಇರುವ ಒಂದು ನಾಳದ ರೀತಿಯ ನಿರ್ಮಾಣವನ್ನು ಫಿಸ್ತುಲಾ ಅಂತ ಹೇಳುತ್ತಾರೆ. ಫಿಸ್ತುಲಾ ಅನ್ನುವುದು ನಮ್ಮ ಶರೀರದಲ್ಲಿ ಎಲ್ಲಿಯಾದರೂ ಏರ್ಪಡಬಹುದು. ಆದರೆ ಸಾಮಾನ್ಯವಾಗಿ ಉಂಟಾಗುವ ಫಿಸ್ತುಲಾಗಳಲ್ಲಿ 'ಅನಲ್ ಫಿಸ್ತುಲಾ' ಒಂದು. ಇದು ಹೆಚ್ಚಾಗಿ ಅಧಿಕ ತೂಕ ಇರುವವರಲ್ಲಿ ಕಾಣಿಸುತ್ತದೆ. ಪುಷ್ಠದ (ಆ್ಠಠಿಠಿಟ್ಚ) ಮಧ್ಯೆ ಇರುವ ಗುದದ್ವಾರದ ಪಕ್ಕದಲ್ಲಿ ಉಂಟಾಗುತ್ತದೆ. ಚರ್ಮದ ಮೇಲೆ ಮೊಡವೆಯ ರೀತಿಯಲ್ಲಿ ಮೂಡುತ್ತದೆ. ಅದು ನೋವು, ಊತ ಉಂಟಾಗಿ 2-3 ದಿನಗಳಲ್ಲಿ ಒಡೆದು ಕೀವು ಸೋರುತ್ತದೆ. ಇವುಗಳ ಜತೆಗೆ ಕೆಲವರಲ್ಲಿ ಜ್ವರದಂತಹ ಲಕ್ಷಣಗಳು ಉಂಟಾಗಿ ಫಿಸ್ತುಲಾ ತೊಂದರೆ ಕಾಣಿಸಿಕೊಳ್ಳುತ್ತದೆ. ಫಿಸ್ತುಲಾ ಒಂದು ಬಾರಿ ಗುದದ್ವಾರದ ಒಳಗೆ ತೂರಿಕೊಂಡು ಅದರಿಂದ ಮಲ ಬರುವುದನ್ನು 'ಫಿಸ್ತುಲಾ-ಇನ್-ಅನೋ' ಅಂತ ಹೇಳುತ್ತಾರೆ. 

ಕಾರಣಗಳು:ಬೊಜ್ಜು, ಗಂಟೆಗಟ್ಟಲೆ ಅಲುಗಾಡದೆ ಕುಳಿತು ಕೆಲಸ ಮಾಡುವವರಲ್ಲಿ, ತೀವ್ರವಾದ ಮಲಬದ್ಧತೆಯಿಂದ ಬಳಲುತ್ತಿರುವವರಲ್ಲಿ, ಕ್ಯಾನ್ಸರ್ ಅಥವಾ ಅಲ್ಸರೇಟಿವ್ ಕೊಲೈಟಿಸ್ ರೋಗ ಇರುವವರಲ್ಲಿ ಫಿಸ್ತುಲಾ ಹೆಚ್ಚಾಗಿ ಕಾಣಿಸುತ್ತದೆ. 

ರೋಗಪತ್ತೆ ಪರೀಕ್ಷೆಗಳು: 

ಇಎಸ್‌ಆರ್, ಫಿಸ್ತುಲೋಗ್ರಾಮ್, ಎಂಆರ್‌ಐ, ಸಿಟಿ ಸ್ಕ್ಯಾನ್ ಪರೀಕ್ಷೆಗಳ ಜತೆಗೆ ಇತರ ವ್ಯಾಧಿಗಳು ಮತ್ತು ಅದರ ತೀವ್ರತೆಯನ್ನು ಗುರುತಿಸುತ್ತಾರೆ. 

ಹೋಮಿಯೋಕೇರ್ ಇಂಟರ್‌ನ್ಯಾಷನಲ್ ಚಿಕಿತ್ಸೆ: 

ಇಲ್ಲಿ ಜೆನೆಟಿಕ್ ಕಾನ್ಸ್ಟಿಟ್ಯೂಷನಲ್ ವೈದ್ಯ ಪದ್ಧತಿಯಿಂದ ಪೈಲ್ಸ್, ಫಿಷರ್ಸ್, ಫಿಸ್ತುಲಾ, ಮಲಬದ್ಧತೆ ಮುಂತಾದ ಸಮಸ್ಯೆಗಳ ಮೂಲ ಕಾರಣಗಳನ್ನು ಗುರುತಿಸಿ ಸಂಪೂರ್ಣವಾಗಿ ವಾಸಿ ಮಾಡಲಾಗುವುದು. ಈ ಕಾಯಿಲೆಗಳು ಮತ್ತೆ ಬರದಿರುವ ಹಾಗೆ, ಯಾವುದೇ ಶಸ್ತ್ರಚಿಕಿತ್ಸೆರಹಿತ ಹೋಮಿಯೋಕೇರ್ ಇಂಟರ್‌ನ್ಯಾಷನಲ್ ವೈದ್ಯ ಪದ್ಧತಿಯಿಂದ ವಾಸಿ ಮಾಡಬಹುದು. 
ರವಿಹೊಳ್ಳ🙏💐
[26/09 5:25 PM] ‪+91 94498 28225‬: ಪೈಲ್ಸ್ ಅಥವಾ ಮೂಲವ್ಯಾಧಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಅದರಲ್ಲೂ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತಿದೆ.
 

ಮಲವಿಸರ್ಜನೆಗೆ ಹೋದಾಗ ತುಂಬಾ ನೋವಾಗುವುದು, ರಕ್ತ ಸುರಿಯುವಿಕೆ, ಉರಿ ಇವೆಲ್ಲಾ ಮೂಲವ್ಯಾಧಿ ಸಮಸ್ಯೆಯ ಲಕ್ಷಣವಾಗಿದೆ. ಇದಕ್ಕೆ ಅನೇಕ ಚಿಕಿತ್ಸೆಗಳಿವೆ. ಈ ಕಾಯಿಲೆ ಪ್ರಭಾವದ ಮೇಲೆ ಇದಕ್ಕೆ ಚಿಕಿತ್ಸೆಯನ್ನು ಮಾಡಲಾಗುವುದು. ಈ ಕಾಯಿಲೆ ಅಧಿಕವಾಗಿದ್ದರೆ ಆಪರೇಷನ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಔಷಧಿಯಿಂದ ಗುಣಪಡಿಸಬಹುದು.

ಮೂಲವ್ಯಾಧಿ ಕಾಯಿಲೆಯನ್ನು ಬರದಂತೆ ತಡೆಯುವ ಬಂದ ಕಾಯಿಲೆಯನ್ನು ಗುಣಪಡಿಸುವ ಸಾಮರ್ಥ್ಯ ಕೆಲವೊಂದು ಆಹಾರಗಳಿಗಿವೆ. ಆ ಆಹಾರಗಳು ಯಾವುವು ಎಂದು ನೋಡೋಣ ಬನ್ನಿ.

 
ಮೂಲಂಗಿ
ಮೂಲಂಗಿ ಮೂಲವ್ಯಾಧಿಗೆ ಅತ್ಯುತ್ತಮವಾದ ಔಷಧಿಯಾಗಿದೆ. ಇದರ ಜ್ಯೂಸ್ ಕುಡಿದರೆ ಮೂಲವ್ಯಾಧಿ ಕಾಯಿಲೆ ಗುಣಮುಖವಾಗುವುದು. ಮೊದಮೊದಲು 1/3 ಕಪ್ ಮೂಲಂಗಿ ರಸ ಕುಡಿಯಿರಿ. ನಂತರ ಅರ್ಧ ಕಪ್ ನಷ್ಟು ಪ್ರತಿದಿನ ಕುಡಿಯುತ್ತಾ ಬನ್ನಿ. ಹೀಗೆ ಮಾಡಿದರೆ ಪೈಲ್ಸ್ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಇದರಿಂದ ಚಟ್ನಿ, ಪಲ್ಯ ಮಾಡಿ ತಿನ್ನಿ. ಇದರ ಸೊಪ್ಪು ಕೂಡ ತುಂಬಾ ಒಳ್ಳೆಯದು.
   

ದಾಳಿಂಬೆ ಸಿಪ್ಪೆ
ದಾಳಿಂಬೆ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಬೇಯಿಸಿ. ನಂತರ ಸೋಸಿ ಆ ನೀರನ್ನು ದಿನದಲ್ಲಿ ಎರಡು ಬಾರಿ ಕುಡಿಯಿರಿ. ಈ ರೀತಿ ಮಾಡುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆ ಗುಣಮುಖವಾಗುವುದು.
 
   

ಶುಂಠಿ ಹಾಕಿದ ನಿಂಬೆ ಪಾನಕ
ನಿರ್ಜಲೀಕರಣದಿಂದ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ. ಅದಕ್ಕೆ ಶುಂಠಿ ರಸವನ್ನು ನಿಂಬೆ ಹಣ್ಣಿನ ಪಾನಕಕ್ಕೆ ಹಾಕಿ ಕುಡಿಯುವುದು ಒಳ್ಳೆಯದು.
   

ಅಂಜೂರ
ಒಣ ಅಂಜೂರವನ್ನು ರಾತ್ರಿಯಲ್ಲಿ ನೆನೆ ಹಾಕಿ ಬೆಳಗ್ಗೆ ಅರ್ಧ ನೀರನ್ನು ಕುಡಿದು, ಉಳಿದ ಅರ್ಧ ನೀರನ್ನು ಸಂಜೆ ಕುಡಿಯಿರಿ.
   

ಹಸಿ ಈರುಳ್ಳಿ
ಹಸಿ ಈರುಳ್ಳಿ ಮೂಲವ್ಯಾಧಿಗೆ ಉತ್ತಮವಾದ ಮನೆ ಮದ್ದಾಗಿದೆ. ಪೈಲ್ಸ್ ನಿಂದಾಗಿ ರಕ್ತ ಬರುತ್ತಿದ್ದರೆ, ಹಸಿ ಈರುಳ್ಳಿ ತಿಂದರೆ ಸಾಕು ರಕ್ತ ಸೊರುವುದು ನಿಲ್ಲುವುದು.
   

ಟಾಯ್ಲೆಟ್
ಮಲ ವಿಸರ್ಜನೆಗ ಹೋದಾಗ ಸರಿಯಾಗಿ ಹೋಗದಿದ್ದರೆ ಒತ್ತಡ ಹಾಕಬೇಡಿ. ಕೂರುವ ರೀತಿ ಕೂಡ ಸರಿಯಾಗಿರಲಿ. ಮಲವನ್ನು ಒತ್ತಡ ಹಾಕಿ ಮಾಡಿದರೆ ಮೂಲವ್ಯಾಧಿ ಹೆಚ್ಚಾಗುವುದು.
   

ವ್ಯಾಯಾಮ
ಮಲಬದ್ಧತೆ ತಡೆಯಲು ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ನಡೆಯುವ ವ್ಯಾಯಾಮ ಮಾಡಿ. ಆದರೆ ಭಾರ ಎತ್ತುವಂತಹ ಕಷ್ಟದ ವ್ಯಾಯಾಮವನ್ನು ಮೂಲವ್ಯಾಧಿ ಇರುವವರು ಮಾಡಬಾರದು.
   

ಅರಿಶಿಣ
ಅರಿಶಿಣವನ್ನು (ಗಡ್ಡೆ) ನೀರಿನಲ್ಲಿ ಬೇಯಿಸಿ ಆ ನೀರು ಕುಡಿಯುವುದರಿಂದಲೂ ಮೂಲವ್ಯಾಧಿಯನ್ನು ಗುಣ ಪಡಿಸಬಹುದು.
   

ಬಾಳೆ ಹಣ್ಣು
ಮೂಲವ್ಯಾಧಿ ಇರುವವರು ಪ್ರತಿದಿನ ರಾತ್ರಿ 1 ಬಾಳೆ ಹಣ್ಣು ತಿನ್ನುವುದು ಒಳ್ಳೆಯದು. ಇದರಿಂದ ಮಲ ಮಾಡಲು ಹೋಗುವಾಗ ಕಷ್ಟವಾಗುವುದಿಲ್ಲ.
   

ಬೀನ್ಸ್
ಕಿಡ್ನಿ ಬೀನ್ಸ್, ಬ್ಲ್ಯಾಕ್ ಬೀನ್ಸ್ ಈ ರೀತಿಯ ಬೀನ್ಸ್ ಆಹಾರಗಳನ್ನು ತಿನ್ನಬೇಕು. ಈ ರೀತಿ ಮಾಡಿದರೆ ಪೈಲ್ಸ್ ನೈಸರ್ಗಿಕವಾಗಿ ಗುಣಮುಖವಾಗುವುದು.

--------------------------------------------------------
 
ನಮ್ಮ ದೇಹದ ಅತಿ ಮುಖ್ಯ ಅಂಗಗಳಲ್ಲಿ ಮೂತ್ರಪಿಂಡಗಳೂ ಒಂದು. ಇವು ಸತತವಾಗಿ ನಮ್ಮ ದೇಹದಲ್ಲಿ ಆಹಾರದ ಮೂಲಕ ಆಗಮಿಸಿದ್ದ ವಿಷಕಾರಿ ವಸ್ತುಗಳನ್ನು, ಕಲ್ಮಶಗಳನ್ನು ನಿವಾರಿಸಿ ಹೊರಹಾಕುತ್ತವೆ. ವಿಶೇಷವಾಗಿ ನೀರಿನಲ್ಲಿ ಕರಗಿದ್ದ ಉಪ್ಪು ಮತ್ತು ಇತರ ಲವಣಗಳನ್ನು ಸೋಸಿ ಮೂತ್ರದ ಮೂಲಕ ಹೊರಹಾಕುತ್ತವೆ. ಕಿಡ್ನಿ ಕಲ್ಲು ಕರಗಿಸುವ, ಹಿತ್ತಲ ಗಿಡದ ಮದ್ದು
ಕೆಲವು ಸಂದರ್ಭಗಳಲ್ಲಿ ಈ ಲವಣಗಳು ಹರಳುಗಟ್ಟಿ ಮೂತ್ರಪಿಂಡಗಳ ಒಳಗೇ ಉಳಿದುಕೊಳ್ಳುತ್ತವೆ. ಇವೇ ಮೂತ್ರಪಿಂಡಗಳ ಕಲ್ಲು. ಸರಿಸುಮಾರಾಗಿ ಪ್ರತಿಯೊಬ್ಬರ ಮೂತ್ರಪಿಂಡಗಳಲ್ಲಿಯೂ ಚಿಕ್ಕ ಚಿಕ್ಕ ಕಲ್ಲುಗಳಿದ್ದೇ ಇರುತ್ತವೆ. ಆದರೆ ಸತತವಾಗಿ ನೀರು ಕುಡಿಯುವ ಮತ್ತು ನಿಯಮಿತವಾಗಿ ಮೂತ್ರವಿಸರ್ಜಿಸುವ ಮೂಲಕ ಈ ಕಲ್ಲುಗಳೂ ಕರಗುತ್ತಾ ಹೋಗುತ್ತವೆ.
ಮೂತ್ರ ತಡೆದು ಹಿಡಿದಷ್ಟೂ ಈ ಕಲ್ಲುಗಳ ಸಾಂದ್ರತೆ ಹೆಚ್ಚುತ್ತದೆ. ಒಂದು ಹಂತದಲ್ಲಿ ಇವು ದೊಡ್ಡದಾಗುತ್ತಾ ಮೂತ್ರಪಿಂಡಗಳ ಒಳಗೆ ಒತ್ತಡ ನೀಡುವ ಮೂಲಕ ನೋವು ಕೊಟ್ಟು ತಮ್ಮ ಇರುವಿಕೆಯನ್ನು ತೋರ್ಪಡಿಸುತ್ತವೆ. ಆಗ ತಡಬಡಾಯಿಸಿ ನೋವು ತಡೆಯಲಾರದೇ ಎಲ್ಲರೂ ವೈದ್ಯರ ಬಳಿ ಓಡುತ್ತಾರೆ.   ಕಿಡ್ನಿ ಕಲ್ಲುಗಳ ನಿವಾರಣೆಗೆ ಇಲ್ಲಿದೆ ಸೂಕ್ತ ಪರಿಹಾರ
ಈ ಸ್ಥಿತಿ ಬರದೇ ಇರಲು ನಿಯಮಿತವಾಗಿ ನೀರು ಕುಡಿಯುತ್ತಿರುವುದು, ಮೂತ್ರ ತಡೆಗಟ್ಟದಿರುವುದು, ಲವಣಗಳನ್ನು ಹೆಚ್ಚಾಗಿ ಸೇವಿಸದೇ ಇರುವುದು ಮೊದಲಾದ ಕ್ರಮಗಳನ್ನು ನಮ್ಮ ಜೀವನದ ಅಭ್ಯಾಸವಾಗಿಸಬೇಕು. ಒಂದು ವೇಳೆ ಮಾಹಿತಿಯ ಕೊರತೆಯಿಂದ ಈಗಾಗಲೇ ತಡವಾಗಿದ್ದು ಮೂತ್ರಪಿಂಡಗಳಲ್ಲಿ ಕಲ್ಲು ಮೂಡಿದ್ದರೆ ಇವನ್ನು ಸಮರ್ಥವಾಗಿ ಹೊರಹಾಕಲು ಸುಲಭ ಮತ್ತು ಸಮರ್ಥವಾದ ವಿಧಾನವೊಂದಿದೆ, ಬನ್ನಿ, ಈ ವಿಧಾನ ಯಾವುದು ಎಂಬುದನ್ನು ನೋಡೋಣ.....    
 
ಅಗತ್ಯವಿರುವ ಸಾಮಾಗ್ರಿಗಳು
1. ಒಂದು ಮುಷ್ಟಿಯಷ್ಟು ಕೊತ್ತಂಬರಿ ಅಥವಾ ಪಾರ್ಸ್ಲೆ ಎಲೆಗಳು (ದಂಟು ನಿವಾರಿಸಿದ್ದು)
2. ನೀರು ಸುಮಾರು ಒಂದು ಲೀಟರ್
   

ತಯಾರಿಕಾ ವಿಧಾನ
*ಎಲೆಗಳನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
*ಒಂದು ಚಿಕ್ಕ ಪಾತ್ರೆಯಲ್ಲಿ ಕೊಂಚ ನೀರು ಹಾಕಿ ಹೆಚ್ಚಿದ ಎಲೆಗಳನ್ನು ಇದರಲ್ಲಿ ಬೆರೆಸಿ
*ಈ ನೀರನ್ನು ಬಿಸಿಮಾಡಿ. ನೀರು ಕುದಿಯಲು ಪ್ರಾರಂಭವಾದ ಬಳಿಕ ಮುಚ್ಚಳ ಮುಚ್ಚದೇ ಮಧ್ಯಮ ಉರಿಯಲ್ಲಿ ಇನ್ನೂ ಹತ್ತು ನಿಮಿಷ ಕುದಿಸಿ.
   

ತಯಾರಿಕಾ ವಿಧಾನ
ಬಳಿಕ ಉರಿ ಆರಿಸಿ ಹಾಗೇ ತಣಿಯಲು ಬಿಡಿ.
ಪೂರ್ಣವಾಗಿ ತಣಿದ ಬಳಿಕ ಈ ನೀರನ್ನು ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ ಫ್ರಿಜ್ಜಿನಲ್ಲಿಡಿ. ಈ ನೀರನ್ನು ತಣ್ಣಗಿದ್ದಂತೆಯೇ ಇಡಿಯ ದಿನ ನೀರಿನ ಬದಲಿಗೆ ಕುಡಿಯಿರಿ. ಸಾಧ್ಯವಾದಷ್ಟು ಬೇರೆ ಯಾವುದೇ ದ್ರವವನ್ನು ಸೇವಿಸದಿರಿ.
   

ಮೂತ್ರದ ಬಣ್ಣದಲ್ಲಿ ಬದಲಾವಣೆ.....
ಕೆಲವೇ ದಿನಗಳಲ್ಲಿ ನಿಮ್ಮ ಮೂತ್ರದ ಬಣ್ಣ ಬದಲಾಗಿರುವುದನ್ನು ಗಮನಿಸುತ್ತೀರಿ. ಮೂತ್ರದ ಬಣ್ಣ ಬಿಳಿಯಾಗಿದ್ದಷ್ಟೂ ಉತ್ತಮ. ಅಂದರೆ ಮೂತ್ರಪಿಂಡಗಳಲ್ಲಿದ್ದ ಕಲ್ಲುಗಳು ಕರಗಿ ನೀರಾಗಿ ಹರಿದಿರುವುದನ್ನು ಇದು ಖಚಿತಪಡಿಸುತ್ತದೆ.
   

ಇತರ ಕಲ್ಮಶವನ್ನೂ ದೇಹದಿಂದ ಹೊರಹಾಕುತ್ತದೆ...
ಇದರಿಂದ ಬರೆಯ ಕಲ್ಲುಗಳು ಮಾತ್ರವಲ್ಲ, ದೇಹದಲ್ಲಿರುವ ಇತರ ಕಲ್ಮಶ ಮತ್ತು ವಿಷಕಾರಿ ವಸ್ತುಗಳನ್ನೂ ಹೊರಹಾಕಲು ಸಾಧ್ಯವಾಗುತ್ತದೆ.
   

ಇತರ ಕಲ್ಮಶವನ್ನೂ ದೇಹದಿಂದ ಹೊರಹಾಕುತ್ತದೆ...
ಒಂದು ವೇಳೆ ನೀರು ಕುದಿಸಿ ಸೋಸಲು ವ್ಯವಧಾನ ಅಥವಾ ಸಮಯವಿಲ್ಲದಿದ್ದರೆ ಕೊತ್ತಂಬರಿ ಸೊಪ್ಪು ಅಥವಾ ಪಾರ್ಸ್ಲೆ ಎಲೆಗಳನ್ನು ಜಜ್ಜಿ ಟೀಪುಡಿಯ ಬದಲು ಬಿಸಿನೀರಿಗೆ ಬಳಸಿ ಹಾಲಿಲ್ಲದೇ ಕೊಂಚವೇ ಸಕ್ಕರೆ ಬೆರೆಸಿ ಟೀ ಬದಲಿಗೆ ಕುಡಿಯಿರಿ. ಇದರಿಂದ ಕೊಂಚ ಹೆಚ್ಚು ಸಮಯ ತಗಲುತ್ತದಾದರೂ ನಿಧಾನವಾಗಿ ಮೂತ್ರಪಿಂಡದ ಕಲ್ಲುಗಳು ಇಲ್ಲವಾಗುತ್ತವೆ.
ರವಿಹೊಳ್ಳ💐🙏
[26/09 5:25 PM] ‪+91 94498 28225‬: ಕೆಲವರಿಗೆ ಇದೊಂದು ಸಮಸ್ಯೆ. ಸಮಸ್ಯೆ ಎನ್ನುವುದಕ್ಕಿಂತ ಕಿರಿ ಕಿರಿ. ಅದುವೇ ಬಾಯಿ ಹುಣ್ಣು. ತಿನ್ನಲೂ ಆಗದೇ ಮಾತನಾಡಲೂ ಆಗದೇ ಸಣ್ಣ ಹುಣ್ಣು ವಿಪರೀತ ನೋವು ಕೊಡುತ್ತದೆ. ಇದನ್ನು ಪರಿಹರಿಸಲು ಕೆಲವು ಮನೆ ಔಷಧಗಳಿವೆ. ಅವು ಯಾವುವೆಂದು ನೋಡೋಣ.   ಬಾಯಿ ಹುಣ್ಣಿಗೆ ಪ್ರಮುಖ ಕಾರಣ, ಉಷ್ಣ, ಒತ್ತಡ, ಆಹಾರದ ಅಲರ್ಜಿ,  ಔಷಧಿಗಳ ಅಲರ್ಜಿ ಮುಂತಾದವು. ಇದಕ್ಕೆ ಕೆಲವರು ಬಿ ಕಾಂಪ್ಲೆಕ್ಸ್ ಮಾತ್ರೆ ತೆಗೆದುಕೊಳ್ಳುವುದು ಸಾಮಾನ್ಯ. ಅದರ ಹೊರತಾಗಿ ನಾವು ಮನೆಯಲ್ಲೇ ಕೆಲವು ಸಿಂಪಲ್ ಮದ್ದು ಮಾಡಬಹುದು.   ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಕುದಿಸಿ ಅದರ ನೀರನ್ನು ಸೇವಿಸಬಹುದು. ಇಲ್ಲದಿದ್ದರೆ ತಣ್ಣಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬಹುದು. ಅದೂ ಅಲ್ಲದಿದ್ದರೆ ಕೊತ್ತಂಬರಿ ಕಾಳನ್ನು ನೆನೆ ಹಾಕಿದ ನೀರಿನಲ್ಲಿ ಬಾಯಿ ಮುಕ್ಕಳಿಸಬಹುದು.   ಇದಲ್ಲದಿದ್ದರೆ, ಮೆಂತೆ ಕಾಳನ್ನು ರಾತ್ರಿ ಮಲಗುವ ಮೊದಲ ಬಾಯಿಯಲ್ಲಿ ಹಾಕಿ ಸ್ವಲ್ಪ ಹತ್ತು ಜಗಿದು ನುಂಗಬೇಕು. ಕುಚ್ಚಿಲು ಅಕ್ಕಿ ತೊಳೆದ ನೀರಿನಲ್ಲಿ ಬಾಯಿ ಮುಕ್ಕಳಿಸುವುದು ಕೂಡಾ ಬಾಯಿ ಹುಣ್ಣಿಗೆ ಪರಿಹಾರ. ಸೀಬೆಕಾಯಿ ಗಿಡ ಮನೆಯ ಹಿತ್ತಲಲ್ಲಿದ್ದರೆ, ಅದರ ಚಿಗುರು ಎಲೆಯನ್ನು ಬಾಯಿಯಲ್ಲಿ ಹಾಕಿ ರಸ ನುಂಗಬಹುದು.   ಇದೇ ರೀತಿ ಮಲಗುವ ಮೊದಲು ಬಾಯಿ ಹುಣ್ಣಿರುವ ಜಾಗಕ್ಕೆ ತುಪ್ಪ ಸವರಿ ಮಲಗಿದರೆ ಬೆಳಿಗ್ಗಿನ ಹೊತ್ತಿಗೆ ಬಾಯಿ ಹುಣ್ಣು ಮಂಗ ಮಾಯ. ತುಳಸಿ ಎಲೆಯನ್ನು ಜಗಿಯುವುದರಿಂದ ಬಾಯಿ ಹುಣ್ಣು ಮಾತ್ರವಲ್ಲ, ಶೀತಕ್ಕೆ ಕೂಡಾ ಪರಿಹಾರ ನೀಡುತ್ತದೆ
------------------------------------------------------

ಕಿಡ್ನಿ ಸ್ಟೋನ್…  ಪ್ರಸ್ತುತ ಯಾಂತ್ರಿಕ ಜೀವನದಲ್ಲಿ ಕಿಡ್ನಿ ಸ್ಟೋನ್ ಸಾಮಾನ್ಯ ಸಮಸ್ಯೆಯಾಗಿದೆ. ಶೇ. 10-15ರಷ್ಟು ಜನ ಪ್ರಪಂಚದಲ್ಲಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾದಲ್ಲಿ ಕಿಡ್ನಿ ಸ್ಟೋನ್ ಗೆ ಮೊದಲ ಹಂತದಲ್ಲೇ ಚಿಕಿತ್ಸೆ ಪಡೆದು ಮನೆಯಲ್ಲೇ ತಯಾರಿಸಿದ ಬಾಳೆ ದಿಂಡಿನ ಅಡುಗೆಯಿಂದ ಇದನ್ನ ಕರಗಿಸಬಹುದು. ಬಾಳೆದಿಂಡಿನಲ್ಲಿ ಅನೇಕ ಖಾದ್ಯಗಳನ್ನ ಮಾಡಬಹುದು. ಬಾಳೆದಿಂಡಿನ ಪಲ್ಯ ಹೆಚ್ಚು ರುಚಿ ನೀಡುತ್ತೆ.

ಬಾಳೆದಿಂಡಿನ ಪಲ್ಯ
 
ಬೇಕಾಗುವ ಪದಾರ್ಥಗಳು:
ಬಾಳೆದಿಂಡು – 1(1 ಮೊಳ ಉದ್ದ),
ಕಡಲೇಬೇಳೆ- 2 ಚಮಚ
ತುರಿದ ತೆಂಗಿನಕಾಯಿ - 1 ಬಟ್ಟಲು
ಹಸಿಮೆಣಸಿನ ಕಾಯಿ – 2
ಒಣಮೆಣಸಿನ ಕಾಯಿ – 2
ಬೆಲ್ಲ – ಸ್ವಲ್ಪ
ಹುಣಸೆಹಣ್ಣಿನ ರಸ
ಉಪ್ಪು - ರುಚಿಗೆ
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಅರಿಶಿನ, ಕೊತ್ತಂಬರಿ ಸೊಪ್ಪು
 
ಮಾಡುವ ವಿಧಾನ: ಕುಕ್ಕರ್ ಗೆ ಎಣ್ಣೆ, ಒಣಮೆಣಸಿನ ಕಾಯಿ, ಕಡಲೇಬೇಳೆ ಹಾಕಿ ನಂತರ ಹೆಚ್ಚಿಟ್ಟ ಬಾಳೆದಿಂಡು ಹಾಕಿ 2 ಕೂಗು ಕೂಗಿಸಿಕೊಳ್ಳಬೇಕು. ಇದನ್ನು ಇಳಿಸಿಕೊಂಡು ಆರಿಸಿಟ್ಟುಕೊಳ್ಳಬೇಕು. ಸಾಸಿವೆ, ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಹಾಕಿ ರುಬ್ಬಿಕೊಳ್ಳಬೇಕು.
ಒಂದು ಪ್ಯಾನ್ ಗೆ ಎಣ್ಣೆ, ಸಾಸಿವೆ, ಕರಿಬೇವು, ಅರಿಶಿನ ಹಾಕಿ ಒಗ್ಗರಣೆ ಹಾಕಿಕೊಳ್ಳಬೇಕು. ಇದಕ್ಕೆ ಬೇಯಿಸಿಟ್ಟುಕೊಂಡ ಬಾಳೆದಿಂಡನ್ನು ಹಾಕಿ, ಉಪ್ಪು, ಸ್ವಲ್ಪ ಬೆಲ್ಲ, ಹುಣಸೆಹಣ್ಣಿನ ರಸ ಹಾಕಿ. ಬಳಿಕ ರುಬ್ಬಿಟ್ಟುಕೊಂಡ ಮಸಾಲಾ ಹಾಕಿ ಪ್ಯಾನ್ ನಲ್ಲಿ ಹುರಿಯಬೇಕು. ಕೊತ್ತಂಬರಿ ಸೊಪ್ಪು ಹಾಕಿ ಗಾರ್ನಿಶ್ ಮಾಡಿದರೆ ರುಚಿಯಾದ ಹೆಲ್ದಿಯಾದ ಬಾಳೆದಿಂಡಿನ ಪಲ್ಯ ರೆಡಿ.
ರವಿಹೊಳ್ಳ
[26/09 6:47 PM] ‪+91 94498 28225‬: ಸ್ಪ್ರೌಟ್ಸ್ ಅಥವಾ ಮೊಳಕೆಕಾಳು ಆರೋಗ್ಯಕ್ಕೆ ಉತ್ತಮವಾದದ್ದು. ದಪ್ಪಗಾಗಿದ್ದೀನಿ, ಬೊಜ್ಜುಬಂದಿದೆ ಎಂದು ಬೆಳಗ್ಗಿನ ತಿಂಡಿ ಬಿಡುವ ಬದಲು ಈ ಸ್ಪ್ರೌಟ್ ಸಲಾಡ್ ನ್ನು ಸೇವಿಸಿ. ಇದರಿಂದ ನಿಮ್ಮ ಆರೋಗ್ಯವನ್ನು ವೃದ್ದಿಸಿಕೊಳಬಹುದು ಜೊತೆಗೆ ದೇಹವನ್ನು ಸಣ್ಣಗಾಗಿಸಿಕೊಳ್ಳಬಹುದು.
 
ಮೊಳಕೆಕಾಳುಗಳ ಸೇವನೆ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೇ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಹಜವಾಗಿಸಿ ಟೈಪ್ 2 ಡಯಾಬಿಟಿಸ್ ಅಪಾಯವನ್ನು ತಪ್ಪಿಸುತ್ತದೆ.
ಸ್ಪ್ರೌಟ್ಸ್ ಸಲಾಡ್: ಬೇಕಾಗುವ ಸಾಮಗ್ರಿಗಳು:
ಮೊಳಕೆ ಬರಿಸಿದ ಕಾಳುಗಳು-1 1/2ಕಪ್
ಆಪಲ್ ಟೊಮೋಟೊ-1ಕಪ್
ಹೆಚ್ಚಿದ ಸೌತೆಕಾಯಿ-1ಕಪ್
ಹೆಚ್ಚಿದ ಈರುಳ್ಳಿ-ಸ್ವಲ್ಪ(ಬೇಕಿದ್ದರೆ ಮಾತ್ರ)
ಕತ್ತರಿಸಿದ ಕರಿಬೇವು-ಒಂದು ಎಸಳು 
ಕಾಳು ಮೆಣಸು-1/2 ಟೇಬಲ್ ಚಮಚ
ಉಪ್ಪು-ರುಚಿಗೆ ತಕ್ಕಷ್ಟು 
ಹುರಿದ ಜೀರಿಗೆ-1 ಚಮಚ, 
ನಿಂಬೆ ರಸ-1 ಚಮಚ, 
ಗಟ್ಟಿ ಮೊಸರು-2 ಎರಡು ಟೇಬಲ್ ಚಮಚ , 
ಹಸಿ ಶುಂಠಿ ಪೇಸ್ಟ್- 1 ಚಮಚ, 
ಹೆಚ್ಚಿದ ಕೊತ್ತಂಬರಿಸೊಪ್ಪು-ಸ್ವಲ್ಪ
 
ಮಾಡುವ ವಿಧಾನ:
 
ಒಂದು ಪಾತ್ರೆಗೆ ಮೊಳಕೆ ಕಾಳುಗಳು, ಉಪ್ಪು, ಸ್ವಲ್ಪ ನೀರು ಹಾಕಿ ಮೊಳಕೆಕಾಳು, ಆಪಲ್ ಟೊಮೆಟೊಗಳನ್ನು ಹಾಫ್ ಬಾಯಿಲ್ ಮಾಡಿ. ನಂತರ ಮೊಳಕೆಕಾಳುಗಳು ತಣ್ಣಗಾಗಲು ಬಿಡಿ. 
 
ಈಗ ಒಂದು ಬೌಲ್ ನಲ್ಲಿ ಗಟ್ಟಿಮೊಸರು, ಶುಂಠಿ ಪೇಸ್ಟ್, ಕತ್ತರಿಸಿದ ಕರಿ ಬೇವು, ಜೀರಿಗೆ, ಮೆಣಸಿನ ಪುಡಿ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಅದಕ್ಕೆ ತಣ್ಣಗಾದ ಮೊಳಕೆಕಾಳು-ಆಪಲ್ ಟೊಮೆಟೊ, ಹೆಚ್ಚಿದ ಸೌತೆಕಾಯಿ, ಈರುಳ್ಳಿ ಸೇರಿಸಿ ಸ್ವಲ್ಪ ನಿಂಬೆರಸ ಸೇರಿಸಿ ಚೆನ್ನಾಗಿ ತಿರುಗಿಸಿ. ಈಗ ಸಲಾಡ್ ಮಿಶ್ರಣವನ್ನು ಸರ್ವಿಂಗ್ ಬೌಲ್ ಗೆ ಹಾಕಿ ಅದರ ಮೇಲೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಸ್ಪ್ರೌಟ್ಸ್ ಸಲಾಡ್ ರೆಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ