ಕೂತರೇ ನಿಂತರೇ ಡಾಕ್ಟರ್ ಬಳಿ ಓಡ ಬೇಡಿ :
ಅಂಗೈಯಲ್ಲಿ ಆರೋಗ್ಯ
♦ *ಬಿಕ್ಕಳಿಕೆ ಬರುವುದೇ :* ಹುರುಳಿ ಕಷಾಯ ಸೇವಿಸಿರಿ.
♦ *ಕಫ ಬರುವುದೇ :* ಶುಂಠಿ ಕಷಾಯ ಸೇವಿಸಿರಿ.
♦ *ಹೊಟ್ಟೆಯಲ್ಲಿ ಹರಳಾದರೇ :* ಬಾಳೆದಿಂಡಿನ ಪಲ್ಯ ಸೇವಿಸಿರಿ.
♦ *ಬಿಳಿ ಕೂದಲೇ :* ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.
♦ *ಮರೆವು ಬರುವುದೇ :* ನಿತ್ಯ ಸೇವಿಸಿ ಜೇನು.
♦ *ಕೋಪ ಬರುವುದೇ :* ಕಾಳು ಮೆಣಸು ಸೇವಿಸಿ.
♦ *ಮೂಲವ್ಯಾಧಿಯೇ :* ನಿತ್ಯ ಸೇವಿಸಿ ಎಳ್ಳು.
♦ *ಮುಪ್ಪು ಬೇಡವೇ :* ಗರಿಕೆ ರಸ ಸೇವಿಸಿ.
♦ *ನಿಶಕ್ತಿಯೇ :* ದೇಶಿ ಆಕಳ ಹಾಲು ಸೇವಿಸಿ.
♦ *ಇರುಳುಗಣ್ಣು ಇದೆಯೇ :* ತುಲಸಿ ರಸ ಕಣ್ಣಿಗೆ ಹಾಕಿ.
♦ *ಕುಳ್ಳಗಿರುವಿರೇ :* ನಿತ್ಯ ಸೇವಿಸಿ ನಿಂಬೆ ಹಣ್ಣು.
♦ *ತೆಳ್ಳಗಿರುವಿರೆ :* ನಿತ್ಯ ಸೇವಿಸಿ ಸೀತಾ ಫಲ.
♦ *ತೆಳ್ಳಗಾಗಬೇಕೇ :* ನಿತ್ಯ ಸೇವಿಸಿ ಬಿಸಿ ನೀರು.
♦ *ಹಸಿವಿಲ್ಲವೇ :* ನಿತ್ಯ ಸೇವಿಸಿ ಓಂ ಕಾಳು.
♦ *ತುಂಬಾ ಹಸಿವೇ :* ಸೇವಿಸಿ ಹಸಿ ಶೇಂಗಾ.
♦ *ಬಾಯಾರಿಕೆಯೇ :* ಸೇವಿಸಿ ತುಳಸಿ.
♦ *ಬಾಯಾರಿಕೆ ಇಲ್ಲವೇ :* ಸೇವಿಸಿ ಬೆಲ್ಲ.
♦ *ಸಕ್ಕರೆ ಕಾಯಿಲೆಯೇ :* ಬಿಡಿ ಸಕ್ಕರೆ, ಸೇವಿಸಿ ರಾಗಿ.
♦ *ರಕ್ತ ಹೀನತೆಯೇ :* ನಿತ್ಯ ಸೇವಿಸಿ ಪಾಲಕ್ ಸೊಪ್ಪು.
♦ *ತಲೆ ಸುತ್ತುವುದೇ :* ಬೆಳ್ಳುಳ್ಳಿ ಕಷಾಯ ಸೇವಿಸಿ.
♦ *ಬಂಜೆತನವೇ :* ಔದುಂಬರ ಚಕ್ಕೆ ಕಷಾಯ
♦ *ಸ್ವಪ್ನ ದೋಷವೇ :* ತುಳಸಿ ಕಷಾಯ ಸೇವಿಸಿ.
♦ *ಅಲರ್ಜಿ ಇದೆಯೇ :* ಅಮೃತ ಬಳ್ಳಿ ಕಷಾಯ ಸೇವಿಸಿ.
♦ *ಹೃದಯ ದೌರ್ಬಲವೇ :* ಸೋರೆಕಾಯಿ ರಸ ಸೇವಿಸಿ.
♦ *ರಕ್ತ ದೋಷವೇ :* ಕೇಸರಿ ಹಾಲು ಸೇವಿಸಿ.
♦ *ದುರ್ಗಂಧವೇ :* ಹೆಸರು ಹಿಟ್ಟು ಸ್ನಾನ ಮಾಡಿ.
♦ *ಕೋಳಿ ಜ್ವರಕ್ಕೆ :* ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.
♦ *ಕಾಲಲ್ಲಿ ಆಣಿ ಇದೆಯೇ :* ಉತ್ತರಾಣಿ ಸೊಪ್ಪು ಕಟ್ಟಿರಿ.
♦ *ಮೊಣಕಾಲು ನೋವು :* ನಿತ್ಯ ಮಾಡಿ ವಜ್ರಾಸನ.
♦ *ಸಂಕಟ ಆಗುವುದೇ :* ಎಳನೀರು ಸೇವಿಸಿ.
♦ *ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ :* ನಿತ್ಯ ಕೊಡಿ ಜೇನು.
♦ *ಜಲ ಶುದ್ಧಿ : ಮಾಡಬೇಕೇ :* ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ,ಅದರಲ್ಲಿ ತುಳಸಿ ಎಲೆ ಹಾಕಿರಿ.
♦ *ವಾಂತಿಯಾಗುವುದೇ :* ಎಳನೀರು-ಜೇನು ಸೇವಿಸಿ.
♦ *ಭೇದಿ ತುಂಬಾ ಆಗುವುದೇ :* ಅನ್ನ ಮಜ್ಜಿಗೆ ಊಟ ಮಾಡಿ.
♦ *ಹಲ್ಲು ಸಡಿಲವೇ :* ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.
♦ *ಕಾಮಾಲೆ ರೋಗವೇ :* ನಿತ್ಯ ಮೊಸರು ಸೇವಿಸಿ.
♦ *ಉಗುರು ಸುತ್ತು ಇದೆಯೇ :* ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.
♦ *ಎದೆ ಹಾಲಿನ ಕೊರತೆಯೇ :* ನಿತ್ಯ ಸೇವಿಸಿ ಎಳ್ಳು.
♦ *ಎಲುಬುಗಳ ನೋವೇ :* ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.
♦ *ತುಟಿ ಸೀಳಿದಿಯೇ :* ಹಾಲಿನ ಕೆನೆ ಹಚ್ಚಿರಿ.
♦ *ಪಿತ್ತವೇ :* ಚಹಾ ಬಿಟ್ಟುಬಿಡಿ.
♦ *ಉಷ್ಣವೇ :* ಕಾಫಿ ಬಿಟ್ಟುಬಿಡಿ.
♦ *ಚಂಚಲವೇ :* ನಾಸಿಕದಲ್ಲಿ ದೇಶಿ ತುಪ್ಪ ಹಾಕಿ.
♦ *ಬಹು ಮೂತ್ರವೇ :* ದಾಲ್ಚಿನ್ನಿ ಕಷಾಯ ಸೇವಿಸಿ.
♦ *ಮೂತ್ರ ತಡೆಗೆ :* ಜೀರಿಗೆ ಕಷಾಯ ಸೇವಿಸಿ.
♦ *ಆಯಾಸವೇ :* ಅಭ್ಯಂಗ ಸ್ನಾನ ಮಾಡಿ.
♦ *ಉಗ್ಗು ತೊದಲು ಇದ್ದರೆ :* ದಿನಾಲು ಶಂಖ ಊದಿರಿ.
♦ *ಹಿಮ್ಮಡಿ ಸೀಳುವುದೇ :* ಔಡಲ ಎಣ್ಣೆ ಸುಣ್ಣ ಕಲಸಿ ಲೇಪಿಸಿ
ಓಮ( ವಾಡಕ್ಕಿ) ೨ ಚಮಚ ಜಜ್ಜಿ ಹಾಕಿ ೧ ಕಪ್ ನೀರಲ್ಲಿ ಚೆನ್ನಾಗಿ ಕುದಿಸಿ ಸೋಸಿ ಕುಡಿಸಿ
ಬಾಳೆ ಹೂ ನಾರಿನಂಶದಿಂದ ಕೂಡಿದೆ,ಮಲಬದ್ಧತೆ, ಮುಟ್ಟುದೋಶ,ಮೂತ್ರ ಪಿಂಡದ ಕಲ್ಲು ನಿವಾರಿಸುತ್ತದೆ
*ವೀಳ್ಯದೆಲೆ ಎಂಬ ಹಸಿರು ಬಂಗಾರವನ್ನು ಎಷ್ಟು ಹೊಗಳಿದರೂ ಸಾಲದು!*
*ಗಾಯಗಳನ್ನು ಮಾಗಿಸುತ್ತದೆ*
ವೀಳ್ಯದೆಲೆಯಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ. ಇವು ಉತ್ಕರ್ಷಣಶೀಲ ಒತ್ತಡ (oxidative stress)ವನ್ನು ಕಡಿಮೆಗೊಳಿಸಿ ತನ್ಮೂಲಕ ಗಾಯಗಳನ್ನು ಶೀಘ್ರವಾಗಿ ಮಾಗಿಸಲು ನೆರವಾಗುತ್ತವೆ. ಅಲ್ಲದೇ ಗಾಯದ ಮೂಲಕ ನಷ್ಟಹೊಂದಿದ್ದ ಅಂಗಾಂಶಗಳನ್ನು ಮತ್ತೆ ಮರುತುಂಬಿಸಲು ಹಾಗೂ ಇದರಲ್ಲಿ ಪೂರ್ಣಪ್ರಮಾಣದ ಪ್ರೋಟೀನುಗಳಿರುವಂತೆ ಸಹಕರಿಸುತ್ತದೆ. ಇದಕ್ಕಾಗಿ ಕೆಲವು ಎಲೆಗಳನ್ನು ಹಿಂಡಿ ತೆಗೆದ ರಸವನ್ನು ಗಾಯದ ಮೇಲೆ ಹಚ್ಚಬೇಕು ಬಳಿಕ ಕೆಲವು ಎಲೆಗಳನ್ನು ಗಾಯದ ಮೇಲೆ ಸುತ್ತಿ ಬ್ಯಾಂಡೇಜು ಮಾಡಬೇಕು. ಇದರಿಂದ ಗಾಯ ಒಂದೆರಡು ದಿನಗಳಲ್ಲಿಯೇ ಮಾಗುತ್ತದೆ. ಸಂಧಿವಾತ ಈ ಎಲೆಗಳಲ್ಲಿರುವ ಪಾಲಿಫಿನಾಲ್, ವಿಶೇಷವಾಗಿ ಚಾವಿಕಾಲ್ ಎಂಬ ಪೋಷಕಾಂಶ ಅತ್ಯುತ್ತಮವಾದ ಉರಿಯೂತ ನಿವಾರಕವಾಗಿದೆ. ಈ ಎಲೆಯ ರಸವನ್ನು ಸಂಧಿವಾತ ಹಾಗೂ ಇತರ ತೊಂದರೆ ಇರುವ ಕೀಲುಗಳ ಮೇಲೆ ನೇರವಾಗಿ ಹಚ್ಚುವ ಮೂಲಕ ಉತ್ತಮ ಪರಿಹಾರ ಕಂಡುಕೊಳ್ಳಬಹುದು...
*ಅಜೀರ್ಣ*
ಈ ರಸ ಜೀರ್ಣಾಂಗಗಳನ್ನು ರಕ್ಷಿಸುವ, ವಾಯುಪ್ರಕೋಪ ನಿವಾರಕ, ಸಾರಸಂಗ್ರಹಿ ಮೊದಲಾದ ಗುಣಗಳನ್ನು ಹೊಂದಿದೆ. ವೀಳ್ಯದೆಲೆಯನ್ನು ಜಗಿದು ನುಂಗುವ ಮೂಲಕ ಇದರ ರಸದಲ್ಲಿರುವ ಗುಣಗಳನ್ನು ಪಡೆಯಬಹುದು. ಇದು ಅಜೀರ್ಣ ಸಹಿತ ಹಲವು ಜೀರ್ಣಕ್ರಿಯೆ ತೊಂದರೆಗಳನ್ನು ನಿವಾರಿಸುತ್ತದೆ. ಬರೆಯ ಎಲೆಯನ್ನು ಜಗಿದು ನುಂಗುವ ಮೂಲಕ ಬಾಯಿಯಲ್ಲಿ ಹೆಚ್ಚಿನ ಲಾಲಾರಸ ಉತ್ಪತ್ತಿಯಾಗಲು ನೆರವಾಗುತ್ತದೆ.
*ಬಾಯಿಯ ದುರ್ವಾಸನೆ*
ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಬಾಯಿಯ ಸ್ವಚ್ಛತೆಯನ್ನು ಕಾಪಾಡಲು ನೆರವಾಗುತ್ತದೆ. ವೀಳ್ಯದೆಲೆಯನ್ನು ಜಗಿಯುವುದರಿಂದ ಲಾಲಾರಸದ ಉತ್ಪತ್ತಿ ಹೆಚ್ಚುತ್ತದೆ ಎಂದು ಸಂಶೋಧನೆಗಳ ಮೂಲಕ ಸಾಬೀತಾಗಿದೆ. ಲಾಲಾರಸ ಹೆಚ್ಚಿದ್ದಷ್ಟೂ ಬಾಯಿಯಲ್ಲಿರುವ ಪಿಎಚ್ ಮಟ್ಟವನ್ನು ಸಂತುಲಿತ ಮಟ್ಟಕ್ಕೆ ಇಳಿಸುವ ಮೂಲಕ ಬಾಯಿಯೊಳಗೆ ಬ್ಯಾಕ್ಟೀರಿಯಾಗಳ ಬೆಳವಣಿಗೆಯಾಗದಂತೆ ತಡೆಯಬಹುದು
*ಪುರುಷರಲ್ಲಿ ಉದ್ರೇಕತೆಯ ತೊಂದರೆ*
ಆಯುರ್ವೇದದ ಪ್ರಕಾರ 'ಧ್ವಜ ಭಂಗ' ಅಥವಾ ಪುರುಷರಲ್ಲಿ ಉದ್ರೇಕತೆಯ ಕೊರತೆಯನ್ನು ನೀಗಿಸುವಲ್ಲಿ ವೀಳ್ಯದೆಲೆ ಅತ್ಯುತ್ತಮವಾಗಿದೆ. ಈ ರಸದಲ್ಲಿರುವ ಪೋಷಕಾಂಶಗಳು ಒತ್ತಡವನ್ನು ಕಡಿಮೆಗೊಳಿಸುವುದರ ಜೊತೆಗೇ ರಕ್ತನಾಳಗಳನ್ನು ಸಡಿಲಿಸಿ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ. ಊಟದ ಬಳಿಕ ಒಂದು ಅಥವಾ ಎರಡು ವೀಳ್ಯದೆಲೆಗಳನ್ನು ಜಗಿದು ನುಂಗುವ ಮೂಲಕ ಈ ತೊಂದರೆಯನ್ನು ಪರಿಹರಿಸಿಕೊಳ್ಳಬಹುದು.
*ಸುಟ್ಟಗಾಯಗಳಿಗೆ*
ಕೆಲವು ವೀಳೆಯದೆಲೆಗಳನ್ನು ಜಜ್ಜಿ ಒಂದು ಬಟ್ಟೆಯಲ್ಲಿ ಹಿಂಡಿ ರಸ ತೆಗೆಯಿರಿ. ಇದಕ್ಕೆ ಕೊಂಚ ಜೇನು ಸೇರಿಸಿ ಸುಟ್ಟಜಾಗಕ್ಕೆ ಹಚ್ಚಿ ಒಣಗಲುಬಿಡಿ. ಒಣಗಿದ ಬಳಿಕವೂ ಇನ್ನಷ್ಟು ರಸ ಹಚ್ಚಿ. ಇದೇ ರೀತಿ ದಿನದಲ್ಲಿ ಕೆಲವಾರು ಬಾರಿ ಪುನರಾವರ್ತಿಸಿ. ಒಂದೆರಡು ದಿನಗಳಲ್ಲಿ ಸುಟ್ಟಚರ್ಮದ ಕೆಳಗೆ ಹೊಸಚರ್ಮ ಬೆಳೆಯಲು ಪ್ರಾರಂಭವಾಗುತ್ತದೆ
*ಕೆಂಪಾದ ಮತ್ತು ತುರಿಕೆಯಿರುವ ಕಣ್ಣು*
ಒಂದು ಕಪ್ ನೀರನ್ನು ಕುದಿಸಿ ಒಲೆಯಿಂದ ಇಳಿಸಿದ ಬಳಿಕ ಸುಮಾರು ಆರು ಎಳೆಯ ವೀಳ್ಯದೆಲೆಗಳನ್ನು ಹಾಕಿ ತಣಿಯಲು ಬಿಡಿ. ಬಳಿಕ ಈ ನೀರನ್ನು ಸೋಸಿ ದಿನಕ್ಕೆ ಮೂರು ಬಾರಿ ಕಣ್ಣುಗಳನ್ನು ತೊಳೆದುಕೊಳ್ಳಿ. ಒಂದೆರಡು ದಿನಗಳಲ್ಲಿಯೇ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಪೂರ್ತಿಯಾಗಿ ಉರಿ ಕಡಿಮೆಯಾಗುವ ತನಕ ಈ ವಿಧಾನವನ್ನು ಅನುಸರಿಸಿ.
*ಮೈ ಕೈ ತುರಿಕೆಗೆ*
ಸುಮಾರು ಒಂದು ಲೀಟರ್ ನೀರಿಗೆ ಇಪ್ಪತ್ತು ವೀಳೆಯದೆಲೆಗಳನ್ನು ಹಾಕಿ ಕುದಿಸಿ ತಣಿಸಿ. ತಣಿದ ನೀರಿನಿಂದ ಎಲೆಗಳನ್ನು ಸೋಸಿ ತೆಗೆದು ಈ ನೀರಿನಿಂದ ತುರಿಕೆಯಿರುವ ಜಾಗವನ್ನು ಚೆನ್ನಾಗಿ ತೊಳೆದುಕೊಳ್ಳಿ. ಈ ನೀರನ್ನು ಅದ್ದಿದ ಸ್ಪಂಜ್ ಉಪಯೋಗಿಸಿ ಒರೆಸಿಕೊಳ್ಳುವುದೂ ಉತ್ತಮ ವಿಧಾನವಾಗಿದೆ. ಒಂದೆರಡು ದಿನಗಳಲ್ಲಿಯೇ ತುರಿಕೆ ಪೂರ್ಣವಾಗಿ ಮಾಯವಾಗುವುದು
ಸುಮಾರು ಎಂಟರಿಂದ ಹತ್ತು ಚೆನ್ನಾಗಿ ಬಲಿತ ವೀಳೆಯದೆಲೆಗಳ ಎರಡೂ ಬದಿಗೆ ಕೊಬ್ಬರಿ ಎಣ್ಣೆ ಹಚ್ಚಿ ಒಂದರ ಮೇಲೊಂದಿರಿಸಿ. ಇವನ್ನು ಒಟ್ಟಿಗಿರಿಸಲು ದಾರವನ್ನು ಸುತ್ತಿ ಒಂದು ಚಿಕ್ಕ ಗಂಟಾಗಿಸಿ. ಇದನ್ನು ಕಾವಲಿಯ ಮೇಲಿಟ್ಟು ಎಲೆಗಳು ಒಣಗುವವರೆಗೆ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ಬಿಸಿಯಿದ್ದಂತೆಯೇ ಸ್ತನಗಳಿಗೆ ಶಾಖ ನೀಡುವುದರಿಂದ ತಾಯಿಹಾಲು ಹೆಚ್ಚುತ್ತದೆ
*ಸಿಪ್ಪೆ ಎಂದು ತಾತ್ಸಾರ ಬೇಡ... ಇದರಲ್ಲಿಯೇ ಹೆಚ್ಚು ಪೋಷಕಾಂಶಗಳಿರುವುದು*
ನಮಗೆ ಗೊತ್ತಿರುವ ಹಾಗೆ ಹಣ್ಣು ಮತ್ತು ತರಕಾರಿಗಳು ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅವು ನಮ್ಮ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇವುಗಳ ಸಿಪ್ಪೆಯೂ ಹೆಚ್ಚು ಆರೋಗ್ಯಕರವಾದದ್ದು ಎನ್ನುವುದನ್ನು ನಾವು ತಿಳಿದಿಲ್ಲ. ಸಾಮಾನ್ಯವಾಗಿ ನಾವು ಹಣ್ಣು ಹಾಗೂ ತರಕಾರಿಯನ್ನು ಬಳಸುವಾಗ ಅದರ ಸಿಪ್ಪೆಯನ್ನು ತೆಗೆದು ಕಸದ ಬುಟ್ಟಿಗೆ ಅಥವಾ ಗಿಡ-ಮರಗಳ ಬುಡಕ್ಕೆ ಹಾಕುತ್ತೇವೆ.
ಈ ಸಿಪ್ಪೆಗಳು ಎಷ್ಟು ವರ್ಣ ರಂಜಿತವಾಗಿ ಮನಸ್ಸಿಗೆ ಮುದ ನೀಡುತ್ತವೆಯೋ ಅಷ್ಟೇ ಪ್ರಮಾಣದಲ್ಲಿ ಪೌಷ್ಟಿಕಾಂಶವನ್ನು ಒದಗಿಸುತ್ತವೆ. ಕೆಲವು ವರದಿಯ ಪ್ರಕಾರ ಸಿಪ್ಪೆಗಳಿಂದ ಕ್ಯಾನ್ಸರ್ನಂತಹ ರೋಗಗಳನ್ನು ತಡೆಗಟ್ಟಬಹುದು. ಕೆಲವು ಹಣ್ಣು ಹಾಗೂ ತರಕಾರಿಗಳ ಸಿಪ್ಪೆ ಮತ್ತು ಬೀಜಗಳನ್ನು ಎಸೆಯುವುದರಿಂದ ಆರೋಗ್ಯಕರ ವಸ್ತುವನ್ನು ಎಸೆಯುತ್ತಿದ್ದೇವೆ ಎನ್ನುವುದನ್ನು ನಾವು ಅರಿಯಬೇಕು.
ಹಣ್ಣುಗಳು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯ ವರ್ಧಕ ಆಹಾರವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರು ಹಣ್ಣುಗಳನ್ನು ತಿನ್ನಬಹುದು. ಹಣ್ಣುಗಳಲ್ಲಿ ಇರುವಂತಹ ವಿಟಮಿನ್, ಖನಿಜಾಂಶಗಳು ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ ಹೆಚ್ಚಿನ ಹಣ್ಣುಗಳನ್ನು ಬಳಸುವ ನಾವು ಅದರ ಸಿಪ್ಪೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಹಣ್ಣು ತಿಂದ ಬಳಿಕ ಸಿಪ್ಪೆ ಯಾಕೆ ಎಂದು ಭಾವಿಸಿ ಅದನ್ನು ಕಸದ ಬುಟ್ಟಿಗೆ ಬಿಸಾಡುತ್ತೇವೆ. ಇಲ್ಲಿ ಸಿಪ್ಪೆಯಿಂದ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ತಿಳಿಸಿಕೊಡಲಿದೆ. ಹಣ್ಣುಗಳ ಸಿಪ್ಪೆಯಿಂದ ದೇಹಕ್ಕೆ ಯಾವ್ಯಾವ ಲಾಭಗಳು ಆಗಲಿದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.
ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ನಿತ್ಯ ನಾವು ಉಪಯೋಗಿಸುವಂತಹ ತರಕಾರಿಗಳ ಸಿಪ್ಪೆಯಿಂದ ಯಾವೆಲ್ಲಾ ಉಪಯೋಗಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಯೋಣ ಬನ್ನಿ..
*ಸೂಚನೆ-*
ಹಣ್ಣುಗಳು ಹಾಗೂ ತರಕಾರಿಗಳನ್ನು ಆರಿಸುವಾಗ ಅದರ ಸಿಪ್ಪೆಯ ಮೇಲೆ ತೆಳುವಾದ ಕೀಟನಾಶಕದ ಪದರ ಇದೆಯೇ ಎಂದು ನೋಡಿಕೊಳ್ಳಿ. ಒಂದು ವೇಳೆ ತೆಳುವಾಗಿ ಪೌಡರ್ ಅಂಟಿಸಿದಂತೆ ಪದರವೇನಾದರೂ ಇದ್ದರೆ ಈ ಸಿಪ್ಪೆಗಳನ್ನು ಬಳಸಬೇಡಿ. (ಸಾಮಾನ್ಯವಾಗಿ ಹಣ್ಣುಗಳನ್ನು ಕೊಳ್ಳುವಾಗಲೇ ಇದನ್ನು ಗಮನಿಸಿ ಕೊಳ್ಳದೇ ಇರುವುದು ಮೇಲು). ಈ ಕೀಟನಾಶಕ ಸಿಪ್ಪೆಯ ಆಳಕ್ಕೆ ಇಳಿದಿರುವುದರಿಂದ ಇವುಗಳ ಬಳಕೆ ಒಳ್ಳೆಯದಲ್ಲ.....
ಸೇಬಿನ ಸಿಪ್ಪೆ
ಸೇಬಿನ ಸಿಪ್ಪೆಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ. ಇದು ಮಲಬದ್ದತೆಯಾಗದಂತೆ ತಡೆಯುವ ಶಕ್ತಿ ಹೊಂದಿದೆ. ಅಲ್ಲದೇ ಈ ಸಿಪ್ಪೆಯನ್ನು ಸೇವಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಕೆಲವು ಬಗೆಯ ಕ್ಯಾನ್ಸರ್ ಗಳನ್ನೂ ತಡೆಯಲು ಸಾಧ್ಯವಾಗುತ್ತದೆ. ಆದರೆ ಇಂದು ಮಾರುಕಟ್ಟೆಯಲ್ಲಿ ಸಿಗುವ ಸೇಬುಗಳ ಸಿಪ್ಪೆಗಳ ಮೇಲೆ ತೆಳುವಾದ ಮೇಣದ ಲೇಪನವಿರುವ ಕಾರಣ ಇದನ್ನು ಕೊಂಚ ಬಿಸಿನೀರಿನಲ್ಲಿ ಉಪ್ಪು ಬೆರೆಸಿ ಇದರಲ್ಲಿ ತೊಳೆದುಕೊಂಡ ಬಳಿಕವೇ ಸೇವಿಸಬೇಕು
ಪಪ್ಪಾಯಿ ಹಣ್ಣಿನ ಸಿಪ್ಪೆ
ತಿನ್ನಲು ಅತ್ಯಂತ ಕಹಿಯಾಗಿರುವ ಪೊಪ್ಪಾಯಿ ಸಿಪ್ಪೆಯಲ್ಲಿ ನಮ್ಮ ಕರುಳುಗಳನ್ನು ಒಳಗಿನಿಂದ ಸ್ವಚ್ಛಗೊಳಿಸುವ ಕೆಲವು ರಾಸಾಯನಿಕಗಳಿವೆ. ಒಂದು ವೇಳೆ ಅಜೀರ್ಣ, ಮಲಬದ್ಧತೆ ಮೊದಲಾದ ತೊಂದರೆಗಳು ಎದುರಾದರೆ ಪಪ್ಪಾಯಿಯ ಸಿಪ್ಪೆಯನ್ನು ನುಣ್ಣಗೆ ಅರೆದು ಮಜ್ಜಿಗೆಯೊಂದಿಗೆ ಬೆರೆಸಿ ಒಂದು ಲೋಟ ಕುಡಿದರೆ ಮರುದಿನ ಹೊಟ್ಟೆ ಶುದ್ಧೀಕರಣವಾಗುತ್ತದೆ.
ಬಾಳೆಹಣ್ಣೆನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಹಲ್ಲಿಗೆ ಉಜ್ಜುವುದರಿಂದ ಹಲ್ಲು ಬಿಳಿಯಾಗುವುದು. ಸುಟ್ಟ ಚರ್ಮದ ಮೇಲೆ ಬಾಳೆಹಣ್ಣಿನ ಸಿಪ್ಪೆ ಇಡುವುದರಿಂದ ನೋವು ಶಮನವಾಗುವುದು. ಒಡೆದ ಪಾದಗಳಿಗೆ ಬಾಳೆಹಣ್ಣಿನ ಸಿಪ್ಪೆ ಉಜ್ಜಿಕೊಂಡರೆ ಒಂದು ವಾರದಲ್ಲಿ ಒಳ್ಳೆಯ ಫಲಿತಾಂಶ ಸಿಗುವುದು.
ದಾಳಿಂಬೆ ಸಿಪ್ಪೆ
ದಾಳಿಂಬೆಯ ಸಣ್ಣ ಸಣ್ಣ ಬೀಜಗಳು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿರುವಂತೆ ಅದರ ದಪ್ಪದ ಸಿಪ್ಪೆಯಲ್ಲಿ ಕೂಡ ತುಂಬಾ ಆರೋಗ್ಯ ಗುಣಗಳು ಇವೆ. ಇದು ಆರೋಗ್ಯ ಹಾಗೂ ತ್ವಚೆಗೆ ತುಂಬಾ ಪರಿಣಾಮಕಾರಿಯಾಗಲಿದೆ. ದಾಳಿಂಬೆ ಸಿಪ್ಪೆಯು ಮೊಡವೆ, ಬೊಕ್ಕೆ, ಕೂದಲು ಉದುರುವುದು ಮತ್ತು ತಲೆಹೊಟ್ಟನ್ನು ನಿವಾರಣೆ ಮಾಡುವುದು. ದಾಳಿಂಬೆ ಸಿಪ್ಪೆಯಲ್ಲಿರುವ ಇರುವ ಲಾಭಗಳೆಂದರೆ ಹೃದಯದ ಕಾಯಿಲೆ, ಗಂಟಲು ನೋವು, ಹಲ್ಲಿನ ಸ್ವಚ್ಛತೆ ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡುವುದು.
ಬೀಟ್ರೂಟ್ ಸಿಪ್ಪೆ
ಇದನ್ನು ಹುರಿದು ಅಥವಾ ಸೂಪ್ ಮಾಡಿ ಕುಡಿಯಬಹುದು. ಇದರಿಂದ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಅಂಶವು ಹೆಚ್ಚುವುದು.
ಸೌತೆಕಾಯಿ ಸಿಪ್ಪೆ
ಸೌತೆಕಾಯಿ ಸಿಪ್ಪೆ ಫೈಬರ್ ಗುಣದ ಉತ್ತಮ ಮೂಲ ಎಂದು ಹೇಳಲಾಗುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ಜೊತೆಗೆ ಕರುಳಿನ ಕ್ಯಾನ್ಸರ್ ಆಗದಂತೆ ತಡೆಯುವುದು
ಕಿತ್ತಳೆ ಸಿಪ್ಪೆ
ಕಿತ್ತಳೆ ಸಿಪ್ಪೆಯು ಫೈಬರ್, ವಿಟಮಿನ್ ಮತ್ತು ಫ್ಲವೋನಾಯಿಡ್ಗಳ ಶಕ್ತಿಯಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತನಾಳಗಳ ರಕ್ಷಣೆ ಮತ್ತು ದೇಹದಲ್ಲಿ ಕಾಣಿಸಿಕೊಂಡ ಉರಿಯೂತಗಳ ನಿವಾರಣೆಗೆ ಸಹಾಯ ಮಾಡುತ್ತದೆ.
ಕುಂಬಳಕಾಯಿ ಬೀಜ
ಕುಂಬಳಕಾಯಿ ಬೀಜದಲ್ಲಿ ಒಮೆಗಾ-3, ಸತು, ಮೆಗ್ನೀಸಿಯಮ್, ಫೈಬರ್, ಕ್ಯಾಲ್ಸಿಯಂ, ವಿಟಮಿನ್ ಬಿ ಸಮೃದ್ಧವಾಗಿದೆ. ಇದು ಉರಿಯೂತ, ಹೃದಯ ರೋಗ, ಕ್ಯಾನ್ಸರ್, ಸಂಧಿವಾತದ ಅಪಾಯವನ್ನು ತಡೆಯುತ್ತದೆ. ಈ ಬೀಜಗಳನ್ನು ಹುರಿದುಕೊಂಡು ಸೇವಿಸಬಹುದು. ಹಸಿಯ ಬೀಜವನ್ನು ಹಾಗೇ ಸೇವಿಸಬಹುದು. ಇಲ್ಲವಾದರೆ ಬ್ರೆಡ್ ಮತ್ತು ಸಲಾಡ್ಗಳ ಜೊತೆಯಲ್ಲೂ ಸೇವಿಸಬಹುದು.
ನಿಂಬೆ ಹಣ್ಣಿನ ಸಿಪ್ಪೆ
ಸಂಧಿವಾತ ಅಥವಾ ಮೂಳೆಸಂದುಗಳಲ್ಲಿ ನೋವಿದ್ದರೆ ಈ ವಿಧಾನವನ್ನು ಪ್ರಯತ್ನಿಸಿ: ಒಂದು ಲಿಂಬೆಯಹಣ್ಣಿನ ರಸ ಹಿಂಡಿದ ಬಳಿಕ ಸಿಪ್ಪೆಯನ್ನು ಮಾತ್ರ ಸುಲಿದುಕೊಳ್ಳಿ. ಒಳಗಿನ ತೊಳೆಗಳನ್ನೆಲ್ಲಾ ನಿವಾರಿಸಿ ಕೇವಲ ಹೊರಪದರವನ್ನು ಮಾತ್ರ ಸಂಗ್ರಹಿಸಿ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಹಣ್ಣಾದ ಲಿಂಬೆಯ ಸಿಪ್ಪೆಯ ಹಳದಿ ಭಾಗವನ್ನು ಮಾತ್ರ ಸಂಗ್ರಹಿಸಿ ಒಳಗಣ ಬಿಳಿ ಭಾಗವನ್ನು ನಿವಾರಿಸಬೇಕು. ಈ ಸಿಪ್ಪೆಯನ್ನು ಚಿಕ್ಕದಾಗಿ ಕೊಚ್ಚಿ ಒಂದು ದಪ್ಪ ಬ್ಯಾಂಡೇಜ್ ಬಟ್ಟೆಯಲ್ಲಿ ಸುತ್ತಿಕೊಂಡು ನೋವಿರುವ ಭಾಗಕ್ಕೆ ತಗಲುವಂತೆ ಕಟ್ಟಿಕೊಳ್ಳಿ. ನಡೆದಾಡುವಾಗ ಈ ಗಂಟು ಜಾರಿ ಹೋಗದಂತಿರಬೇಕು. ಸುಮಾರು ಎರಡರಿಂದ ಮೂರು ಗಂಟೆ ಹಾಗೇ ಬಿಟ್ಟು ಬಳಿಕ ನಿವಾರಿಸಿ. ನಿಂಬೆ ಸಿಪ್ಪೆಯು ಫೈಬರ್ ಹಾಗೂ ಸಮೃದ್ಧವಾದ ವಿಟಮಿನ್ ಎ ಸತ್ವವನ್ನು ಒಳಗೊಂಡಿದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದನ್ನು ಸಿಟ್ರಿಕ್ ಹಣ್ಣುಗಳ ಜೊತೆಗೆ ಅಥವಾ ಜೇನುತುಪ್ಪ ಮತ್ತು ಮೊಸರು ಮಿಶ್ರಣದೊಂದಿಗೆ ಸೇವಿಸಬೇಕು.
ಕಾರ್ನ್ ಕ್ಯೂಬ್ಸ್
ಕಾರ್ನ್ ಕಾಬ್ಸ್ಗಳು ಕ್ಯಾಲೋರಿಗಳನ್ನು ಕಡಿಮೆಮಾಡುತ್ತವೆ. ಮಧುಮೇಹಕ್ಕೆ, ಕಣ್ಣಿನ ಆರೋಗ್ಯ ಕಾಪಾಡಲು, ಹೃದಯ ನಾಳಗಳ ಆರೋಗ್ಯಕ್ಕೆ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸ್ಟ್ರಾಬೆರ್ರಿಯ ಎಲೆಗಳು
ಇದು ದೇಹದಲ್ಲಿರುವ ಹಾನಿಕಾರಕ ರಾಡಿಕಲ್ಸ್ನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಸ್ಟ್ರಾಬೆರ್ರಿ ಎಲೆಗಳ ಕಸಾಯ ಮಾಡಿ ಕುಡಿಯುವುದರಿಂದ ದೇಹವು ಆರೋಗ್ಯ ಪೂರ್ಣವಾಗಿರುತ್ತದೆ
*ಕಲ್ಲಂಗಡಿ ತೊಗಟೆ (ರಿಂಡ್ಸ್)*
ಕಲ್ಲಂಗಡಿ ಸಿಪ್ಪೆಯ ಬಿಳಿ ಬಾಗದಲ್ಲಿ ಇರುವಂತಹ ಹಲವಾರು ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತೂಕ ಕಡಿಮೆ ಮಾಡಲು ಬಯಸುವವರಿಗೆ ಈ ಭಾಗವು ತುಂಬಾ ನೆರವಾಗುವುದು. ಕಲ್ಲಂಗಡಿ ಸಿಪ್ಪೆಯನ್ನು ತ್ವಚೆಗೆ ಉಜ್ಜಿದಾಗ ಅದರಲ್ಲಿರುವ ಕಲ್ಮಶಗಳು ಹೊರಬರುವುದು. ತ್ವಚೆಯಲ್ಲಿರುವ ಫ್ರೀ ರ್ಯಾಡಿಕಲ್ ಅನ್ನು ಇದು ತಟಸ್ಥಗೊಳಿಸುವುದು. ಇದರಿಂದ ತ್ವಚೆಯ ಹಾನಿಯನ್ನು ತಡೆಯಬಹುದು.
ಕಲ್ಲಂಗಡಿಯ ತೊಗಟೆಯು ಅಮೈನೋ ಆಮ್ಲದಿಂದ ಸಮೃದ್ಧವಾಗಿದೆ. ಇದು ರಕ್ತನಾಳದ ಹಿಗ್ಗುವಿಕೆಗೆ ಸಹಾಯವಾಗುತ್ತದೆ. ಇದನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಸುಧಾರಣೆಗೊಂಡು ದೇಹವು ಆರೋಗ್ಯವಾಗಿರುವಂತೆ ಮಾಡುತ್ತದೆ.
No one must die of cancer except out of carelessness; (1). First step is to stop all sugar intake, without sugar in your body, cancer would die a natural death. (2). Second step is to blend a whole lemon fruit with a cup of hot water and drink it for about 1-3 months first thing before food and cancer would disappear, research by Maryland College of Medicine says, it's 1000 times better than chemotherapy. (3). Third step is to drink 3 spoonfuls of organic coconut oil, morning and night and cancer would disappear, you can choose any of the two therapies after avoiding sugar. Ignorance is no excuse; I have been sharing this information for over 5 years. Let everyone around you know, it's a sacrilege for anyone this day to die of cancer; God bless. Enjoy your wonderful day.
ಸೌತೇಕಾಯಿ ಕತ್ತರಿಸಿ ಅದನ್ನ ಮಲಗುವಾಗ ಕಣ್ಣಿಗೆ ಹಚ್ಚಿ, ಆಲೂಗಡ್ಡೆ ರುಬ್ಬಿ.ಕಣ್ಣಿಗೆ ಹಚ್ಚಿ ರಾತ್ರಿ ಮಲಗಿ.. ರೋಸ್ ವಾಟರ್ ಸಹ ಉತ್ತಮ .ಮುಖ್ಯವಾಗಿ ಚೆನ್ನಾಗಿ ನಿದ್ದೆ ಮಾಡಿ
ಮುಖದಲ್ಲಿ ವರ್ಣಕತೆ (pigmentation) ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಕಂಡು ಬರುತ್ತದೆ. ಇದು ಕಪ್ಪು ಬಣ್ಣದಲ್ಲಿ ಇರಬಹುದು ತುಂಬಾ ಬೆಳ್ಳಗೆ ಇದ್ದವರಲ್ಲಿ ಸ್ವಲ್ಪ ಕೆಂಪು ಬಣ್ಣದಲ್ಲಿ ಕಂಡು ಬರುತ್ತದೆ. ಈ ರೀತಿಯ ಕಲೆಗಳು ಇದ್ದರೆ ಮುಜುಗರ ಉಂಟಾಗುತ್ತದೆ.
ಈ ರೀತಿ ಮುಖದಲ್ಲಿ ಇರುವ ಕಲೆಯನ್ನು ಹೋಗಲಾಡಿಸಲು ಅನೇಕ ವಿಧಾನಗಳಿವೆ. ಆ ವಿಧಾನವನ್ನು ಬಳಸುವುದು ಹೇಗೆ ಎಂದು ತಿಳಿದಿರಬೇಕಷ್ಟೆ. ಇಲ್ಲಿ ನಾವು pigmentation ಹೋಗಲಾಡಿಸಲು ಟಾಪ್ 8 ಟಿಪ್ಸ್ ನೀಡಲಾಗಿದೆ ನೋಡಿ:
1. ಫ್ರೆಶ್ ಕ್ರೀಮ್
ಪ್ರೆಶ್ ಕ್ರೀಮ್ ಗೆ ಸ್ವಲ್ಪ ನಿಂಬೆ ರಸ ಹಾಕಿ ಮುಖಕ್ಕೆ ಹಚ್ಚಿ 1 ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡುತ್ತಾ ಬಂದರೆ ಮುಖದಲ್ಲಿರುವ ಕಲೆ ಕ್ರಮೇಣ ಕಡಿಮೆಯಾಗುವುದು.
2. ತುಳಸಿ ಎಲೆ
ತುಳಸಿ ರಸಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಹಚ್ಚಿದರೆ ರೀತಿಯ ಕಲೆಗಳು ಸಂಪೂರ್ಣವಾಗಿ ಮಾಯವಾಗುವುದು ಹಾಗೂ ಮುಂದಕ್ಕೆ ಈ ರೀತಿಯ ಕಲೆಗಳು ಮತ್ತೆ ಮುಖದಲ್ಲಿ ಕಾಣಿಸಿಕೊಳ್ಳುವುದಿಲ್ಲ.
3. ಜೀರಿಗೆ
ಜೀರಿಗೆ ನೀರನ್ನು ಮಾಡಿ ಅದರಿಂದ ಮುಖ ತೊಳೆಯಿರಿ. ಈ ರೀತಿ ಸ್ವಲ್ಪ ದಿನಗಳವರೆಗೆ ಮಾಡುತ್ತಾ ಬನ್ನಿ, ನಿಮ್ಮ ಮುಖದಲ್ಲಿರುವ ಕಲೆಗಳು ಮಾಯವಾಗುವುದು ನಿಮ್ಮ ಗಮನಕ್ಕೆ ಬರುತ್ತದೆ.
4. ಕಿತ್ತಳೆ ಸಿಪ್ಪೆ
ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ನೀರಿನಲ್ಲಿ ಕಲೆಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಈ ರೀತಿ ಮಾಡಿದರೆ ಪಿಗ್ ಮೆಂಟೇಷನ್ (pigmentation) ಮಾತ್ರವಲ್ಲ ಮೊಡವೆ ಕೂಡ ಮಾಯವಾಗುವುದು.
5. ಸೀಬೆಕಾಯಿ ಮತ್ತು ಬಾಳೆ ಹಣ್ಣು
ಸೀಬೆಕಾಯಿ ಮತ್ತು ಬಾಳೆ ಹಣ್ಣನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಕಲೆಗಳು ಮಾಯವಾಗಿ ನಿಮ್ಮ ಮುಖದ ಅಂದ ಹೆಚ್ಚುವುದು (1 ಬಾಳೆ ಹಣ್ಣು, 1 ಸೀಬೆಕಾಯಿ ಪೇಸ್ಟ್ ಮಾಡಿ ಫ್ರಿಜ್ ನಲ್ಲಿಟ್ಟರೆ 1 ವಾರ ಹಚ್ಚಬಹುದು)
6. ಸೌತೆಕಾಯಿ
ಸೌತೆಕಾಯಿ ರಸವನ್ನು ಪ್ರತಿದಿನ ಹಚ್ಚಿದರೆ pigmentation ಕಡಿಮೆಯಾಗುವುದು ಮುಖದ ಹೊಳಪು ಕೂಡ ಹೆಚ್ಚುವುದು.
7. ರೋಸ್ ವಾಟರ್
ಇಲ್ಲಿ ನೀಡಿರುವ ವಿಧಾನಗಳಲ್ಲಿ ನಿಮಗೆ ಬೇಕಾದ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ರಾತ್ರಿ ಮಲಗುವಾಗ ರೋಸ್ ವಾಟರ್ ಹಚ್ಚಿ ಮಲಗಿ. ಈ ರೀತಿ ಮಾಡಿದರೆ ನಿಮ್ಮ ಮುಖದಲ್ಲಿರುವ ಕಲೆಗೆ ಗುಡ್ ಬೈ ಹೇಳಬಹುದು
8. ಕೆಂಪು ಮೂಲಂಗಿ
ಆಹಾರದಲ್ಲಿ ಕೆಂಪು ಮೂಲಂಗಿ ಸೇರಿಸಿ. ಶುದ್ಧವಾದ ಗಾಳಿ ಸೇವಿಸಿ. ಈ ರೀತಿ ಮಾಡಿದರೆ ಮುಖದಲ್ಲಿರುವ ಕಲೆಯನ್ನು (pigmentation) ಯಾವುದೇ ಸ್ಕಿನ್ ಟ್ರೀಟ್ ಮೆಂಟ್ ತೆಗೆಯದೇ
ಹೋಗಲಾಡಿಸಬಹುದು.
---------------------------------------------
ಕಾದಾರಿದ ನೀರಲ್ಲಿ ನಿಂಬೆ ಶರಬತ್ ಮಾಡಿ ಅದಕ್ಕೆ ೩ ಚಿಟಿಕೆ ಯಾಲಕ್ಕಿ ಪುಡಿ,೧ ಚಿಟಿಕೆ ಉಪ್ಪು ಹಾಕಿ ಆಗಾಗ ೩_೪ ಚಮಚದಂತೆ ಕುಡಿಯಬೇಕು
ಕೂದಲು ಉದುರುವುದನ್ನು ತಡೆಗಟ್ಟುವ ಮನೆಯ ಮದ್ದು
ಈಗಾಗಲೇ ಮಳೆಗಾಲ ಆರಂಭವಾಗಿದೆ. ಜೊತೆಗೆ ಕೇಶ ಸಂಬಂಧಿ ಸಮಸ್ಯೆಗಳು ಶುರುವಾಗುತ್ತೆ. ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆ ಸ್ವಲ್ಪ ಹೆಚ್ಚಾಗುತ್ತದೆ. ಹೀಗಾಗಿ ಕೂದಲ ಆರೈಕೆಗೆ ಕೊಂಚ ಹೆಚ್ಚಾಗೆ ಗಮನ ನೀಡಬೇಕಾಗುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಅದಕ್ಕಾಗೆ ಸಮಯ ಮೀಸಲಿಡುವುದು ಕಷ್ಟ. ಜೊತೆಗೆ ಹಿಂದಿನ ಕಾಲದ ಹಾಗೆ ಪ್ರತಿ ದಿನ ಎಣ್ಣೆ ಹಚ್ಚಿ ಮಸಾಜ್ ಮಾಡಿ ಕೂದಲ ತೊಳೆಯುವಷ್ಟು ಸಮಯ ಈಗ ಇಲ್ಲ. ಹಾಗಂತ ಕೂದಲ ಬಗ್ಗೆ ಕಾಳಜಿ ತೆಗೆದುಕೊಳ್ಳದೇ ಇರುವುದಕ್ಕೂ ಆಗುವುದಿಲ್ಲ. ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಬಳಸಿಕೊಂಡು ಸುಂದರ ಹಾಗೂ ಆರೋಗ್ಯಯುತ ಕೂದಲನ್ನು ಬೆಳೆಸಿಕೊಳ್ಳಲು ಕೊಲವೊಂದು ಟಿಪ್ಸ್ ಇಲ್ಲಿದೆ.
ಈರುಳ್ಳಿ: ಈರುಳ್ಳಿಯಲ್ಲಿ ಸಲ್ಫರ್ ಹೆಚ್ಚಾಗಿ ಇರುವುದರಿಂದ ಕೂದಲು ಉದುರುವುದನ್ನು ತಡೆಗಟ್ಟಿ ಕೂದಲಿಗೆ ಜೀವ ತುಂಬತ್ತೆ. ಇರುಳ್ಳಿಯನ್ನು ಜಜ್ಜಿ ರಸ ತೆಗೆದುಕೊಂಡು, ಇಲ್ಲವೇ ಕತ್ತರಿಸಿ ಹೋಳುಗಳನ್ನಾಗಿ ಮಾಡಿ ಬುರುಡೆಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ತಲೆಯಲ್ಲಿರುವ ಸತ್ತ ಚರ್ಮ( Dead Skin) ತೆಗೆದು ಕೂದಲಿಗೆ ಅಗತ್ಯವಾದ ಪೋಷಕಾಂಶ ಪೂರೈಸಲು ಸಹಾಯ ಮಾಡುತ್ತದೆ. ವಾರಕ್ಕೆ 2 ಭಾರಿ ಹೀಗೆ ಮಾಡಿ ನಂತರ ಮ್ಯಾಜಿಕ್ ನೋಡಿ.
ತೆಂಗಿನಕಾಯಿ ಹಾಲು: ಮನೆಯಲ್ಲಿ ತೆಂಗಿನ ಕಾಯಿ ರುಬ್ಬುವಾಗ ಸ್ಲಲ್ಪ ಪ್ರಮಾಣದ ಹಾಲು ತೆಗೆದುಕೊಂಡು ಅದಕ್ಕೆ 4 ರಿಂದ 5 ಹನಿ ಲ್ಯಾವೆಂಡರ್ ಎಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಮಸಾಜ್ ಮಾಡಿ. ತೆಂಗಿನ ಹಾಲಿನಲ್ಲಿರುವ ಪೊಟ್ಯಾಶಿಯಂ ಮತ್ತು ಅಗತ್ಯವಾದ ಫ್ಯಾಟ್ ಕೂದಲಿನ ಆರೈಕೆ ಮಾಡಿ ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಕೂದಲು ಉದುರುವುದನ್ನು ತಡೆಗಟ್ಟುತ್ತದೆ
ಕೋಳಿ ಮೊಟ್ಟೆ: ಕೋಳಿ ಮೊಟ್ಟೆ ಕೂದಲ ಆರೈಕೆಯಲ್ಲಿ ಉತ್ತಮ ಪಾತ್ರ ವಹಿಸುತ್ತದೆ. ವಾರಕ್ಕೆ ಒಮ್ಮೆ ಹಸಿ ಕೋಳಿ ಮೊಟ್ಟೆಯ ಲೋಳೆಯನ್ನು ತೆಗೆದುಕೊಂಡು ಪ್ಯಾಕ್ ರೀತಿ ಕೂದಲಿಗೆ ಹಚ್ಚಿಕೊಂಡು 20 ನಿಮಿಷದ ನಂತರ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಇದರಲ್ಲಿರುವ ,ಪೋಷಕಾಂಶಗಳು ಕೂದಲನ್ನು ಆರೋಗ್ಯಯುತವಾಗಿಸುತ್ತವೆ. ಅಗತ್ಯ ವೆನಿಸಿದರೇ ಆಲಿವ್ ಆಯಿಲ್ ಕೂಡ ಮಿಕ್ಸ್ ಮಾಡಿ ಹಚ್ಚಿಕೊಳ್ಳಬಹುದು.
ಬೆಟ್ಟದ ನೆಲ್ಲಿಕಾಯಿ: ಕೂದಲ ಆರೈಕೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಪಾತ್ರ ತುಂಬಾ ಮಹತ್ವದ್ದು. ವಿಟಮಿನ್ ಸಿ ಯನ್ನು ಅಧಿಕವಾಗಿ ಹೊಂದಿರುವ ನೆಲ್ಲಿಕಾಯಿ ಪುಡಿಯನ್ನುನಿಂಬೆ ರಸದ ಜೊತೆಗೆ ಮಿಕ್ಸ್ ಮಾಡಿ ಒಣಗಲು ಬಿಡಿ ನಂತರ ಬಿಸಿನೀರಿನಲ್ಲಿ ಶಾಂಪು ಹಾಕದೇ ತೊಳೆಯಿರಿ. ಇದರಿಂದ ತಲೆಹೊಟ್ಟು ನಿವಾರಣೆಯಾಗಿ ಕೂದಲೂ ಸೊಂಪಾಗಿ ಬೆಳೆಯುತ್ತದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ