ಸಕ್ಕರೆ ರೋಗವನ್ನು ಹೇಗೆ ನಿಯಂತ್ರಿಸಬಹುದು
ಭಾರತ ದೇಶವು 'ಸಕ್ಕರೆ ರೋಗದ ದೇಶ' ಎಂದು ಕರೆಸಿಕೊಳ್ಳುವ ಮಟ್ಟಿಗೆ ಸಕ್ಕರೆ ರೋಗಿಗಳನ್ನು ಹೊಂದಿದೆ. ಸುಮಾರು 5 ಕೋಟಿ ಜನ ಸಕ್ಕರೆ ರೋಗಿಗಳು ಇದ್ದರೆ, 2025 ರ ಹೊತ್ತಿಗೆ ಈ ಸಂಖ್ಯೆ ಇನ್ನೂ ಮೂರು ಕೋಟಿ ಹೆಚ್ಚಾಗಬಹುದು.
ಆದರೆ ಈ ಅಂಕಿಅಂಶಗಳು ಈ ರೋಗವು ರೋಗಿಯನ್ನು ಹೇಗೆ ನಿಧಾನವಾಗಿ ಮರಣದ ಶಯ್ಯೆಯ ಕಡೆಗೊಯ್ಯುವದು ಎಂದು ಹೇಳುವದಿಲ್ಲ. ನಿಮ್ಮ ಜೀವನದಲ್ಲಿ ಈ ರೋಗ ನಿಯಂತ್ರಣಕ್ಕೆ ಸಹಾಯಕವಾಗುವ 5 ದಾರಿಗಳು ಹೀಗಿವೆ...
ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳಬೇಕು
ಮಾನವರ ದೇಹ ಬಹಳ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಹೊಂದಿದೆ. ಕಡಿಮೆ ಆಹಾರ ಸೇವಿಸಿದರೆ, ಇನ್ನೂ ಜಾಸ್ತಿ ಶೇಖರಣೆಗೆ ಅನುಕೂಲ ಮಾಡಿಕೊಳ್ಳುತ್ತದೆ. ಅವಶ್ಯಕತೆಗಿಂತ ಜಾಸ್ತಿ ತಿಂದರೆ ದೇಹದ ಎಲ್ಲಾ ಕಡೆಗೆ ಸಮನಾಗಿ ಹಂಚುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ ಈ ವ್ಯವಸ್ಥೆ ಸರಿಯಾಗಿ ಚಾಲನೆಯಲ್ಲಿರುತ್ತದೆ. ಆದರೆ, ಸಕ್ಕರೆ ರೋಗಿಗಳ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚು-ಕಡಿಮೆ ಆಗಿ, ಹೈಪೊಗ್ಲೈಸೆಮಿಕ್ ಆಘಾತವಾಗಬಹುದು. ಆದ್ದರಿಂದ ರೋಗಿಗಳು ಆಹಾರದ ದಿನಚರಿಯನ್ನು ಸರಿಯಾಗಿ ಪಾಲಿಸುವದಲ್ಲದೆ, ದಿನವಿಡೀ ಸಮಯಕ್ಕೆ ಸರಿಯಾಗಿ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸಬೇಕು.
ಪುರುಷರಿಗೆ 'ಮಧುಮೇಹ' ಬಂದರೆ ಬಲು ಡೇಂಜರ್! ಯಾಕೆಂದರೆ...
ಆಹಾರದಲ್ಲಿ ನಾರಿನ ಅಂಶವನ್ನು ಹೆಚ್ಚಿಸಬೇಕು
ಬ್ರೌನ್ ರೈಸ್, ತರಕಾರಿ, ಹಣ್ಣಿನ ಬೀಜ, ಸಿಪ್ಪೆಗಳಲ್ಲಿರುವ ಕರಗಲಾರದ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸೇಬು, ಓಟ್ಸ್, ಒಣಹಣ್ಣುಗಳಲ್ಲಿ ಕಂಡುಬರುವ ಕರಗಬಹುದಾದ ನಾರಿನ ಅಂಶ ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಅಂಶಗಳನ್ನು ನಿಯಂತ್ರಿಸುತ್ತದೆ. ನಾರಿನಂಶವು ಬೇಗನೆ ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ, ಇದರಿಂದ ಸಕ್ಕರೆ ರೋಗಕ್ಕೆ ಪ್ರಮುಖ ಕಾರಣವಾದ ಅನವಶ್ಯಕ ಆಹಾರ ಸೇವನೆ ನಿಯಂತ್ರಣಕ್ಕೆ ಬರುತ್ತದೆ.
ಬೆಳಗಿನ ಉಪಹಾರ ಚೆನ್ನಾಗಿ ತಿಂದು, ರಾತ್ರಿಯ ಊಟ ಹಿತಮಿತವಾಗಿ ಮಾಡಬೇಕು:
'ಉಪಹಾರ ರಾಜನಂತೆ, ಮಧ್ಯಾಹ್ನದ ಊಟ ಸಾಮಾನ್ಯ ವ್ಯಕ್ತಿಯಂತೆ, ರಾತ್ರಿ ಊಟ ಭಿಕ್ಷುಕನಂತೆ ಮಾಡಬೇಕು' ಎಂಬ ಪ್ರಸಿದ್ಧ ನಾಣ್ಣುಡಿಯೇ ಇದೆ. ಈ ಮಾತು ಎಲ್ಲರಿಗೂ ಅನ್ವಯಿಸುತ್ತದೆ, ಮುಖ್ಯವಾಗಿ ಟೈಪ್-೨ ಸಕ್ಕರೆ ರೋಗ ಇರುವವರಿಗೆ. ಸುಮಾರು ಅಧ್ಯಯನಗಳ ಪ್ರಕಾರ ಪ್ರೋಟೀನ್ ಭರಿತ ಆದರೆ ಕಡಿಮೆ ಕಾರ್ಬೋಹೈಡ್ರೇಟ್ ಇರುವ ಆಹಾರ ಮತ್ತು ಮಿತವಾದ ರಾತ್ರಿಯ ಭೋಜನ ಆಹಾರದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಇದು ನಿಯಂತ್ರಿಸುವದಲ್ಲದೆ, ಉತ್ತಮವಾದ ಜೀವನಶೈಲಿಯನ್ನು ಒದಗಿಸುತ್ತದೆ.
ಪ್ರತಿದಿನ ತಪ್ಪದೆ ವ್ಯಾಯಾಮ ಮಾಡಬೇಕು
ಇದು ಸಕ್ಕರೆ ರೋಗ ನಿಯಂತ್ರಣಕ್ಕೆ ಅತಿ ಪ್ರಮುಖವಾದ ದಾರಿ. ಮೊದಲನೆಯದೆಂದರೆ, ಆರೋಗ್ಯ ಸುಧಾರಿಸುತ್ತದೆ ಮತ್ತು ಸಕ್ಕರೆ ರೋಗಕ್ಕೆ ಮುಖ್ಯ ಕಾರಣವಾದ ಬೊಜ್ಜನ್ನು ನಿಯಂತ್ರಿಸುತ್ತದೆ.
ಎರಡನೆಯದಾಗಿ, ಸಕ್ಕರೆ ರೋಗದಿಂದ ನಿಧಾನವಾಗಿ ಕಾಣಿಸಿಕೊಳ್ಳುವ ಅಡ್ಡಪರಿಣಾಮಗಳನ್ನು ನಿಯಂತ್ರಿಸುತ್ತದೆ.ಆದ್ದರಿಂದ, ತಪ್ಪದೆ ಕನಿಷ್ಠ 3೦ ನಿಮಿಷದ ವ್ಯಾಯಮ ಮಾಡಲೇಬೇಕು. ಉದ್ಯಾನವನದಲ್ಲಿ ಕೇವಲ ಬಿರುಸಾದ ನಡಿಗೆಯಾದರೂ ತೊಂದರೆಯಿಲ್ಲ.
ಆರೋಗ್ಯಕರವಾದ ಕೊಬ್ಬಿನಂಶವಿರುವ ಆಹಾರ ಮತ್ತು ಹಣ್ಣುಗಳನ್ನು ತಿನ್ನಬೇಕು
ಸಕ್ಕರೆ ರೋಗಕ್ಕೆ ಸಮತೋಲಿತ ಆಹಾರ ಅತಿಮುಖ್ಯ, ಆದರೆ ಸ್ವಲ್ಪ ಸಣ್ಣ ಪುಟ್ಟ ಬದಲಾವಣೆ ಅಗತ್ಯವಾಗಿದೆ. ಅಸಂಕೀರ್ಣ ಕಾರ್ಬೋಹೈಡ್ರೇಟ್ ಗಳಾದ ಮೈದಾ ಬ್ರೆಡ್, ಅನ್ನ, ಆಲೂಗಡ್ಡೆಗಳನ್ನು ತ್ಯಜಿಸಬೇಕು. ಸಂಕೀರ್ಣ ಆಹಾರಗಳದ ಸಂಪೂರ್ಣ ಗೋಧಿ ಧಾನ್ಯಗಳು, ಬೇಳೆ, ಕಾಳುಗಳ ಸೇವನೆಯನ್ನು ಆಹಾರದಲ್ಲಿ ಅಳವಡಿಸಿಕೊಳ್ಳಬೇಕು. ಅಷ್ಟೆ ಅಲ್ಲದೆ, ಆಹಾರದಲ್ಲಿ ಕಡಿಮೆ ಕೊಬ್ಬಿನಂಶವಿರುವ ಪ್ರೋಟೀನ್(ಚೀಸ್, ಮೊಟ್ಟೆ,ಮೊಸರು,ಸೊಯಾ),ಆರೋಗ್ಯಕರವಾದ ಕೊಬ್ಬಿನಂಶವಿರುವ ಅವಕಡೊ,ಒಣಹಣ್ಣುಗಳು,ಹೆಚ್ಚು ನಾರಿನಂಶವಿರುವ ತರಕಾರಿ,ಹಣ್ಣುಗಳನ್ನು(ಬ್ರೊಕೋಲಿ,ಬೆ ರ್ರಿಹಣ್ಣುಗಳು) ಸೇವಿಸಬೇಕು. ಆದರೆ ಕಿತ್ತಳೆ, ಮಾವು ಹಾಗು ಕಲ್ಲಂಗಡಿಯಂತಹ ಸಕ್ಕರೆ ಅಂಶ ಭರಿತ ಹಣ್ಣುಗಳ ಸೇವನೆ ವ್ಯರ್ಜ್ಯವಾಗಿದೆ.
ಮಧುಮೇಹ ನಿಯಂತ್ರಣಕ್ಕೆ, ಪ್ರಯತ್ನಿಸಿ ನೈಸರ್ಗಿಕ ಆಹಾರಗಳು
----------------------------------------------------
*ಮಜ್ಜಿಗೆ ಮಹಿಮೆ* -ಉಪಯುಕ್ತ ಮಾಹಿತಿ-
(ಮಲಗುವ ಮುನ್ನ) ಹಾಲು ಕುಡಿದರೆ, ಬೆಳಿಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ?
ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಿಡಲು ನೆರವಾಗುತ್ತದೆ. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅರ್ಧದಷ್ಟು ಕಡಿಮೆ ಕ್ಯಾಲರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ. ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲರಿ, ಕೊಬ್ಬಿನ ಅಂಶ ತೀರಾ ಕಡಿಮೆ.
ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ. ಬೇಸಿಗೆಯಲ್ಲಂತೂ ಮಜ್ಜಿಗೆಯನ್ನು ನೆನೆಸಿಕೊಂಡರೆನೇ ‘ಆಹಾ!’ ಎನ್ನುತ್ತೇವೆ. ಮಜ್ಜಿಗೆ ಕೇವಲ ದಾಹವನ್ನು ತಣಿಸುವುದಷ್ಟೇ ಅಲ್ಲ, ಇದರಿಂದ ಹಲವು ಪ್ರಯೋಜನಗಳೂ ಇವೆ.
*ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸೆಗಳಲ್ಲಿ, ಚರ್ಮರೋಗದಿಂದ ಬಳಲುತ್ತಿರುವವರಿಗೆ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆ ಬಳಸಲಾಗುವುದು.
*ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶಗಳು ಅಧಿಕವಾಗಿವೆ. ಅನಿಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆ
ಳವಣಿಗೆಗೆ ಅಗತ್ಯವಿರುವ ವಿಟಮಿನ್ ಬಿ 12 ಇದರಲ್ಲಿ ಹೇರಳವಾಗಿದೆ.
*ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.
*ಮಜ್ಜಿಗೆಯಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
* ಇದರಲ್ಲಿ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಶಕ್ತಿ ನೀಡುತ್ತದೆ.
*ಮಜ್ಜಿಗೆಯು ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ.
*ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ.
*ಜಠರ ವಿಕಾರಗಳಿಗೆ ಮಜ್ಜಿಗೆ ದಿವ್ಯೌಷಧಿ. ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನಿಜಾಂಶವನ್ನು ನೀಡುತ್ತದೆ.
*ಕ್ಷಾರ ಹಾಗೂ ಕಷಾಯ ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ.
*ಲಿವರ್ನಲ್ಲಿನ ವಿಷಗುಣಗಳನ್ನು ತೆಗೆದುಹಾಕುವ ಶಕ್ತಿ ಮಜ್ಜಿಗೆಗೆ ಇದೆ.
*ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವು ಗುಣವಾಗುತ್ತದೆ.
*ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿಶುಂಠಿ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.
*ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಸಭೆ ಸಮಾರಂಭಗಳಲ್ಲಿ ಅಧಿಕ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ.
*ಅರ್ಧ ಚಮಚ ಶುಂಠಿರಸ ಹಾಗೂ ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ. ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆಯೊಂದಿಗೆ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಬಹಳ ಉತ್ತಮ. ಇದು ಅಗತ್ಯ ನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಮುಪ್ಪನ್ನು ತಡೆಯುತ್ತದೆ.
*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.
*ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಕೊನೆಯಲ್ಲಿ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ಹೊಟ್ಟೆಗೂ ಸುಖಕರ, ಊಟವೂ ಪೂರ್ಣವಾಗುತ್ತದೆ.
*ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಲೋಟ ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.
*ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.
*ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಸಲ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಕುಡಿಯಿರಿ ಗೊತ್ತಿಲ್ಲಾದವರಿಗೆ ತಿಳಿಸಿಕೊಡಿ...
ಹೃದಯದ ಲಬ್ ಡಬ್ ಲಬ್ ಡಬ್ ಬಡಿತವೇ ಜೀವಂತಿಕೆಯ ಸೆಲೆ. ಇದು ನಿರಂತರವಾಗಿದ್ದರೇನೆ ಜೀವನ.
ಈ ಹೃದಯ ಎಲ್ಲಾ ಭಾವನೆಗಳಿಗೂ ಮೂಲ. ಆದ್ದರಿಂದಲೇ ಹೃದಯವಂತರು, ಹೃದಯಹೀನರು ಎಂಬ ಪದಗಳು ಹುಟ್ಟಿಕೊಂಡಿರೋದು. ಇನ್ನು ಹೃದಯಗಳ ಕೊಡು ಕೊಳ್ಳುವಿಕೆಯಂತು ಮತ್ತೊಂದು ಗಾಢ ಸಂಬಂಧ ಬೆಸೆಯಲು ಕಾರಣವಾಗಿವೆ. ಇಂಥ ಅಮೂಲ್ಯ ಹೃದಯವು ಸದಾ ಆರೋಗ್ಯವಾಗಿರಬೇಕು ಎಂದೇ ಎಲ್ಲರು ಬಯಸೋದು.
ಇಂಥ ಹೃದಯಕ್ಕೂ ಒಂದು ದಿನವಿದೆ ಎಂದು ನಿಮಗೆ ಗೊತ್ತೇ? ಹೌದು. ಸೆಪ್ಟೆಂಬರ್ 29 ಅನ್ನು ವಿಶ್ವದೆಲ್ಲೆಡೆ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ. ಜಿನಿವಾದಲ್ಲಿರುವ ವರ್ಲ್ಡ್ ಹಾರ್ಟ್ ಫೆಡರೇಷನ್(ಡಬ್ಲ್ಯೂಎಚ್ಎಫ್) ಎಂಬ ಸರ್ಕಾರೇತರ ಸಂಸ್ಥೆಯೊಂದು ಇಂಥದ್ದೊಂದು ದಿನವನ್ನು ಹುಟ್ಟು ಹಾಕಿತು. ಈ ದಿನದ ಮುಖ್ಯ ಉದ್ದೇಶ ಜಗತ್ತಿನಾದ್ಯಂತ ಇರುವ ಹೃದಯ ಸಂಬಂಧಿ ರೋಗಗಳ ವಿರುದ್ಧ ಹೋರಾಡುವುದು ಮತ್ತು ಅವುಗಳ ಬಾರದಂತೆ ತಡೆದು ಹೃದಯವನ್ನು ಆರೋಗ್ಯವಾಗಿಡುವುದಾಗಿದೆ.
ಜಗತ್ತಿನಾದ್ಯಾಂತ ಪ್ರತಿ ವರ್ಷ ಹೃದಯ ಸಂಬಂಧಿ ಕಾಯಿಲೆಗಳಿಂದ ಸುಮಾರು 173 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಈ ಸಂಖ್ಯೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಶೇ. 80 ರಷ್ಟು ಇರುವುದು ಇನ್ನೂ ಅಘಾತಕಾರಿಯಾಗಿದೆ. ಡಬ್ಲ್ಯೂಎಚ್ಎಫ್ ಯು ಹಲವಾರು ಜಾಗೃತಿ ಕಾರ್ಯಕ್ರಮಗಳ ಮೂಲಕ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ.
-----------------------------------------------------------
ಗರ್ಭಿಯಣಿಯರಿದ್ದಾಗ ಅಮ್ಮಂದಿರು ಧೂಮಪನ ಮಾಡಿದರೆ ಜನಿಸುವ ಮಗು ಮಾನಸಿಕ ಅಸ್ವಸ್ಥತೆಯಿಂದ ಕೂಡಿರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ತಾಯಿಯ ರಕ್ತದಲ್ಲಿ ನಿಕೋಟಿನ್ ಪ್ರಮಾಣವು ಅಧಿಕವಾಗಿದ್ದರೆ ನವಜಾತಶಿಶುವಿನಲ್ಲಿ ಶೇ.38ರಷ್ಟು ಪ್ರಮಾಣದಲ್ಲಿ ಮನೋವ್ಯಾಧಿ (ಸ್ಕಿಜೋಫ್ರೇನಿಯಾ) ಬರುವ ಸಾಧ್ಯತೆ ಹೆಚ್ಚು.
ನಿಕೋಟಿನ್ ಸುಲಭವಾಗಿ ಭ್ರೂಣದ ರಕ್ತಪ್ರವಾಹವನ್ನು ಹಾದು ಹೋಗುತ್ತದೆ. ಇದು ನಿರ್ದಿಷ್ಟವಾಗಿ ಭ್ರೂಣದ ಮಿದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.ಜತೆಗೆ ಸಣ್ಣ ಹಾಗೂ ದೀರ್ಘಕಾಲಿನ ಬದಲಾವಣೆಗಳ ಸಂವೇದನೆಗೆ ಕಾರಣವಾಗುತ್ತದೆ. ಇತರೆ ನರಗಳ ಅಸ್ವಸ್ಥತೆಗೆ ಕೂಡ ಕಾರಣವಾಗುತ್ತದೆ.
‘ನಿಕೋಟಿನ್ಗೆ ಭ್ರೂಣವು ಒಡ್ಡಿಕೊಳ್ಳುವುದು ಮತ್ತು ಸ್ಕಿಜೋಫ್ರೇನಿಯಾಕ್ಕೂ ಸಂಬಂಧವಿರುವುದು ತಮ್ಮ ಗಮನಕ್ಕೆ ಬಂದಿದೆ’ ಎಂದು ಅಮೆರಿಕದಲ್ಲಿರುವ ಕೊಲಂಬಿಯಾ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ನ ಹಿರಿಯ ಲೇಖಕ ಅಲನ್ ಬ್ರೌನ್ ಹೇಳಿದ್ದಾರೆ.
ಗರ್ಭಿಣಿಯರು ಧೂಮಪಾನ ಮಾಡಿದರೆ ಗರ್ಭಕೋಶದ ಮೇಲೆ ಗಮನಾರ್ಹವಾದ ಸಮಸ್ಯೆ ಉಂಟಾಗುತ್ತದೆ. ಜತೆಗೆ ಹುಟ್ಟುವ ಮಗು ಕಡಿಮೆ ತೂಕವನ್ನು ಹೊಂದಿರುತ್ತದೆ.
---------------------------------------------------------------
-ಬೇವಿನ ಕಡ್ಡಿಗಳು ಹಲ್ಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ನಿಯಮಿತವಾಗಿ ಹಲ್ಲುಜ್ಜುತ್ತಾ ಬಂದರೆ ಹಲ್ಲು ಶುಭ್ರವಾಗಿರುತ್ತದೆ.
-ಬೇವಿನ ಕಡ್ಡಿಯನ್ನು ಜಗಿದಾಗ ಒಸರುವ ರಸ ಬಾಯಿಯಲ್ಲಿರುವ ಲಾಲಾರಸದೊಂದಿಗೆ ಸೇರಿ ಅದ್ಭುತವಾದ ಬ್ಯಾಕ್ಟೀರಿಯಾ ನಿರೋಧಕ ದ್ರವವಾಗುತ್ತದೆ. ಇದು ಬ್ಯಾಕ್ಟೀರಿಯಾಗಳನ್ನು ತಕ್ಷ ಣವೇ ಕೊಂದು ಬಾಯಿಯ ಸ್ವಚ್ಛತೆ ಕಾಪಾಡುತ್ತದೆ.
-ಈ ದ್ರವಕ್ಕೆ ಕೆನ್ನೆಯ ಒಳ ಭಾಗ, ವಸಡು, ನಾಲಿಗೆ ಮೊದಲಾದ ಕಡೆಗಳಲ್ಲಿ ಉರಿಯೂತದಿಂದ ಉಂಟಾಗಿರುವ ಗುಳ್ಳೆ, ಕಡಿತ ಮೊದಲಾದವುಗಳನ್ನು ನಿವಾರಿಸುವ ಶಕ್ತಿಯಿದೆ. ಈ ದ್ರವವನ್ನು ನುಂಗದೆ ಉಗಿಯಬೇಕು. ಬಳಿಕ ತಣ್ಣೀರಿನಲ್ಲಿ ಬಾಯಿಯನ್ನು ಮುಕ್ಕಳಿಸಬೇಕು.
-ಇದರ ಒರಟು ನಾರುಗಳು ಹಲ್ಲುಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರದೇ ಇದ್ದರೂ ಮೃದುವಾಗಿರುವ ವಸಡುಗಳನ್ನು ಘಾಸಿಗೊಳಿಸಬಹುದು. ಆದ್ದರಿಂದ ವಸಡುಗಳ ಮೇಲೆ ಈ ನಾರುಗಳು ಒತ್ತಡ ಹಾಕದಂತೆ ಎಚ್ಚರ ವಹಿಸಬೇಕು.
-ಹಲ್ಲುಗಳ ನಡುವೆ ಕೆಲವು ನಾರುಗಳು ತುಂಡಾಗಿ ಸಿಲುಕಿಕೊಳ್ಳಬಹುದು. ಇವುಗಳನ್ನು ಬಾಯಿ ಮುಕ್ಕಳಿಸುವಾಗ ತೆಗೆಯಬೇಕು.
-ಒಂದು ಬೇವಿನ ಕಡ್ಡಿಯನ್ನು ಒಂದು ಬಾರಿ ಮಾತ್ರ ಬಳಸಿ. ಏಕೆಂದರೆ ಒಂದು ಬಾರಿಯ ಉಪಯೋಗದಲ್ಲಿಯೇ ಇದರ ರಸವೆಲ್ಲಾ ಹೋಗಿರುತ್ತದೆ. ಮುಂದಿನ ಬಾರಿ ಹೊಸ ಕಡ್ಡಿಯನ್ನೇ ಉಪಯೋಗಿಸಿ.
-ಉಪಯೋಗಿಸಿದ ಕಡ್ಡಿಯನ್ನು ಅಡ್ಡಕ್ಕೆ ಸೀಳಿ ಅದರಿಂದ ನಾಲಿಗೆಯನ್ನು ಸ್ವಚ್ಛಗೊಳಿಸಬಹುದು.
-----------------------------------------------------------
ನಿದ್ದೆ ಕಡಿಮೆಯಾದ್ರೆ ಬೊಜ್ಜು, ಮಧುಮೇಹ ಅಪಾಯ
ಏಜೆನ್ಸೀಸ್
ಲಂಡನ್: ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡದೆ ಇದ್ದರೆ ಬೊಜ್ಜು ಮತ್ತು ಮಧುಮೇಹ ಕಾಡುವ ಅಪಾಯವಿದೆ ಎಂದು ಬ್ರಿಟನ್ನ ಲೀಡ್ಸ್ ಯುನಿವರ್ಸಿಟಿ ನಡೆಸಿದ ಸಂಶೋಧನೆ ತಿಳಿಸಿದೆ. ಈಗಿನ ಪರಿಸ್ಥಿತಿಯಲ್ಲಿ ವಯಸ್ಕರಿಗೆ ಒಂಬತ್ತು ಗಂಟೆ ವಿಶ್ರಾಂತಿಯ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಸಂಶೋಧಕರ ತಂಡ, 1615 ಮಂದಿಯನ್ನು ತಿಂಗಳುಗಟ್ಟಲೆ ಕಾಲ ಅಧ್ಯಯನ ನಡೆಸಿ ತನ್ನ ವರದಿ ಪ್ರಕಟಿಸಿದೆ.
ವರದಿಯ ಪ್ರಕಾರ, ಆರು ಗಂಟೆ ನಿದ್ದೆ ಮಾಡಿದವರ ಸೊಂಟದ ಸುತ್ತಳತೆ ಒಂಬತ್ತು ಗಂಟೆ ನಿದ್ರಿಸಿದವರ ಸೊಂಟದ ಸುತ್ತಳತೆಗಿಂತ ಮೂರು ಸೆಂ.ಮೀ. ಹೆಚ್ಚಳವಾಗಿದೆ.ಜಗತ್ತಿನಲ್ಲಿ ಸ್ಥೂಲ ಕಾಯ ಮತ್ತು ಮಧುಮೇಹ ಸಮಸ್ಯೆ ಭಾರಿ ವೇಗದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಯಾಪಚಯ ಕ್ರಿಯೆಯ ಮೇಲೆ ನಿದ್ದೆಯ ಪರಿಣಾಮಗಳ ಬಗ್ಗೆ ಅಧ್ಯಯನ ನಡೆದಿದೆ. ಹಿಂದಿನ ವರದಿಗಳು ಸರಾಸರಿ ದಿನಕ್ಕೆ ಏಳು ಗಂಟೆ ನಿದ್ದೆ ಮಾಡಬೇಕು ಎಂದು ಸೂಚಿಸಿದ್ದರೆ, ಲೀಡ್ಸ್ ವಿವಿ ಸಂಶೋಧಕರ ವರದಿ ಒಂಬತ್ತು ಗಂಟೆ ನಿದ್ದೆಯ ಸಲಹೆ ನೀಡಿದೆ.
ತಪಾಸಣೆ ಹೇಗೆ?
ಸಂಶೋಧಕರ ತಂಡ 19ರಿಂದ 65 ವರ್ಷದ ನಡುವಿನ 1615 ಮಂದಿಯನ್ನು ನಿರಂತರ ತಪಾಸಣೆಗೆ ಒಳಪಡಿಸಿತ್ತು. ಅವರ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ, ಕೊಲೆಸ್ಟರಾಲ್ ಮತ್ತು ಥೈರಾಯ್ಡ್ ವಿಶ್ಲೇಷಣೆಯನ್ನು ನಡೆಸಿದ ಸಂಶೋಧಕರು ಬಳಿಕ ಅವರು ನಿದ್ದೆ ಮಾಡುವ ಅವಧಿ ಮತ್ತು ಆಹಾರ ಸೇವನೆಯ ಬಗ್ಗೆ ವಿವರ ದಾಖಲಿಸಲು ಸೂಚಿಸಿತು.ಅಂತಿಮವಾಗಿ ಎಲ್ಲರ ಮಾಹಿತಿಗಳನ್ನು ಕಲೆ ಹಾಕಿ ವಿಶ್ಲೇಷಿಸಿದಾಗ ದಿನಕ್ಕೆ ಕೇವಲ ಆರು ಗಂಟೆ ನಿದ್ದೆ ಮಾಡಿದ ವ್ಯಕ್ತಿಗಳ ಸೊಂಟದ ಸುತ್ತಳತೆ, 9 ಗಂಟೆ ನಿದ್ರಿಸಿದವರ ಸೊಂಟದ ಸುತ್ತಳತೆಗಿಂತ ಮೂರು ಸೆಂ.ಮೀ. ಹೆಚ್ಚಾಗಿರುವುದು ಬಯಲಿಗೆ ಬಂತು. ಮತ್ತು ಅವರ ದೇಹದ ತೂಕ ಮಿತಿ ಮೀರಿದ್ದು ಸ್ಪಷ್ಟವಾಗಿತ್ತು.ಅದೇ ವೇಳೆ, ದೇಹಕ್ಕೆ ಅಗತ್ಯವಾಗಿರುವ 'ಗುಡ್ ಕೊಲೆಸ್ಟರಾಲ್ ಪ್ರಮಾಣ' ಕಡಿಮೆ ನಿದ್ದೆ ಮಾಡಿದವರಲ್ಲಿ ಕಡಿಮೆ ಇತ್ತು.
ಕೊಬ್ಬು ಚರ್ಮದ ಅಡಿಯಲ್ಲಲ್ಲಈ ಸಂಶೋಧನೆಯಿಂದ ಬೆಳಕಿಗೆ ಬಂದ ಹೊಸ ಅಂಶವೇನೆಂದರೆ, ಇಲ್ಲಿ ತಪಾಸಣೆಗೆ ಒಳಗಾದವರಲ್ಲಿ ಹೆಚ್ಚಿನವರಿಗೆ ಕೊಬ್ಬು ಚರ್ಮದ ಅಡಿ ಭಾಗದಲ್ಲಿ ಶೇಖರಣೆ ಆಗಿರಲಿಲ್ಲ. ಬದಲಾಗಿ, ಪಿತ್ತಜನಕಾಂಗ, ಮೇದೋಜೀರಕಾಂಗ ಮತ್ತು ಕರುಳಿನ ಸುತ್ತ ಶೇಖರಣೆಗೊಂಡಿತ್ತು. ಇದು ಹಾರ್ಮೋನ್ಗಳ ಕಾರ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸಿತ್ತು. ಇದರಿಂದ ಡಯಾಬಿಟೀಸ್ ಟೈಪ್ 2 ಮತ್ತು ಹೃದಯ ರೋಗದ ಅಪಾಯ ಹೆಚ್ಚಾಗುವ ಸಾಧ್ಯತೆ ಬೆಟ್ಟು ಮಾಡಲಾಗಿದೆ.ಕ್ಯಾನ್ಸರ್ ಭೀತಿಯೂ ಇದೆಮೇ 24ರಂದು ಬ್ರಿಟಿಷ್ ಜರ್ನಲ್ ಆಫ್ ಕ್ಯಾನ್ಸರ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸೊಂಟದ ಸುತ್ತ 11 ಸೆಂ.ಮೀ.ಗಿಂತ ಹೆಚ್ಚು ಕೊಬ್ಬು ಬೆಳೆದರೆ ಕ್ಯಾನ್ಸರ್ ಅಪಾಯ ಶೇ. 13ರಷ್ಟು ಹೆಚ್ಚುತ್ತದೆಯಂತೆ. ಅದರಲ್ಲೂ ನಿತಂಬ ಭಾಗದಲ್ಲಿ ಎಂಟು ಸೆಂ.ಮೀ.ಗಿಂತ ಹೆಚ್ಚು ಕೊಬ್ಬು ಶೇಖರಣೆಯಾದರೆ ಕರುಳಿನ ಕ್ಯಾನ್ಸರ್ ಭೀತಿ ಶೇ. 15ರಷ್ಟು ಹೆಚ್ಚಾಗುತ್ತದೆ.
ಪದೇ ಪದೆ ಸೀನು ಬರುವುದು, ಮೂಗಿನಿಂದ ನೀರು ಸೋರುವುದು, ಶೀತ, ಕಣ್ಣುಗಳು ಕೆಂಪಾಗುವುದು, ಮುಖ ಸ್ವಲ್ಪ ಊದಿಕೊಳ್ಳುವುದು, ಚರ್ಮದ ತುರಿಕೆ, ಚರ್ಮ ದದ್ದು ಬರುವುದು, ಗಂಟಲು ಕರಕರ, ಉಸಿರಾಟದಲ್ಲಿ ಅಡಚಣೆ, ಆಯಾಸ, ಶಬ್ದದಲ್ಲಿ ಏರುಪೇರು ಅಂಥ ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ಇರುವ ಕಾರಣವನ್ನು ಅಲರ್ಜಿ ಅಂತ ಕರೆಯುತ್ತಾರೆ. ಅಲರ್ಜಿ ಎನ್ನುವುದು ಮಾನವನ ಶರೀರದ ರೋಗನಿರೋಧಕ ವ್ಯವಸ್ಥೆಗೆ ಸಂಬಂಧಪಟ್ಟ ಪ್ರತಿಕ್ರಿಯೆ. ಉದಾ:ಹೂವುಗಳ ಪರಾಗ ಕಣಗಳು, ಧೂಳು, ಹೊಗೆ, ಕೆಲವು ಆಹಾರ ಪದಾರ್ಥಗಳು (ಹಾಲು, ಮೊಟ್ಟೆ, ಸೋಯಾ, ಮೀನು), ಕೆಲವು ರೀತಿಯ ಔಷಧಗಳು (ಆ್ಯಂಟಿಬಯಾಟಿಕ್ಸ್, ಬಿ.ಪಿ ಮಾತ್ರೆ ಸೇವನೆ), ಇಲ್ಲವೇ ಇತರ ಸರಿ ಹೊಂದದ ಪದಾರ್ಥಗಳನ್ನು ಮುಟ್ಟುವುದರಿಂದ, ಜಂತುಗಳ ಸ್ಪರ್ಶ, ವಾತಾವರಣದಲ್ಲಿ ಬದಲಾವಣೆಯಿಂದ ನಮ್ಮ ಶರೀರದೊಳಗೆ ಅತಿಯಾದ ಪ್ರತಿಕ್ರಿಯೆ ಪ್ರಾರಂಭವಾಗುವುದನ್ನು ಅಲರ್ಜಿ ಅಂತ ಕರೆಯುತ್ತಾರೆ.
ಅಲರ್ಜಿ ಉಂಟು ಮಾಡುವ ಪದಾರ್ಥವನ್ನು ಅಲರ್ಜಿಟಿಕ್ ಅಂತ ಕರೆಯುತ್ತಾರೆ ಮತ್ತು ಅಲರ್ಜಿಗೆ ಕಾರಣವಾದ ಪ್ರತಿಕ್ರಿಯೆನ್ನು ಅಲರ್ಜಿಕ್ ರಿಯಾಕ್ಷನ್ ಅಂತ ಕರೆಯುತ್ತಾರೆ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಸೇವಿಸುವ ಆಹಾರಗಳ ಜತೆಗೆ ಒಳಗಡೆ ಪ್ರವೇಶಿಸುವ ಎಷ್ಟೋ ಕ್ರಿಮಿಕೀಟಗಳ ವಿರುದ್ಧ ಬಿಳಿ ರಕ್ತ ಕಣಗಳು ತೀವ್ರವಾಗಿ ಹೋರಾಡಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. ಇಂಥ ಹಾನಿಯನ್ನು ಉಂಟು ಮಾಡುವ ಪದಾರ್ಥಗಳಿಗೆ ನಮ್ಮ ಶರೀರ ತೀವ್ರ ಪ್ರತಿಕ್ರಿಯೆ ನೀಡುವುದನ್ನು 'ಹೈಪರ್ ಸೆನ್ಸಿಟಿವಿಟಿ' ಅಥವಾ 'ಅಲರ್ಜಿ' ಎಂದು ಕರೆಯುತ್ತಾರೆ.
ಅಲರ್ಜಿಯಲ್ಲಿ ವಿವಿಧ ರೀತಿಗಳು: ಶ್ವಾಸಕೋಶದ ಅಲರ್ಜಿ: ಸುತ್ತಮುತ್ತಲಿನ ವಾತಾವರಣದಲ್ಲಿರುವ ಹೊಗೆ, ಧೂಳಿನಿಂದ ಸೀನು ಬರುವುದು ಸಹಜ. ಆದರೆ ಅಲರ್ಜಿಯಿಂದ ಬಳಲುತ್ತಿರುವವರಿಗೆ ಪದೇ ಪದೆ ಸೀನು ಬರುವುದು, ಮೂಗಿನಿಂದ ನೀರು ಬರುವುದು, ಕಣ್ಣುಗಳು ಕೆಂಪಾಗಿ ಕಣ್ಣೀರು ಬರುತ್ತದೆ. 'ಅಲರ್ಜಿಕ್ ರೈನಸೈಟಿಸ್' ಅಂತ ಕರೆಸಿಕೊಳ್ಳುವ ಈ ಸಮಸ್ಯೆಯನ್ನು ಕಡೆಗಣಿಸಿದರೆ ಮೂಗು ಕಟ್ಟುವುದು, ಉಸಿರಾಟಕ್ಕೆ ತೊಂದರೆ, ಕಫ ಬರುವುದು, ಮುಖದ ಒಳಗಡೆ ನೋವು, ತಲೆನೋವು ಮೊದಲಾದ ಸಮಸ್ಯೆಗಳು ಬರುತ್ತವೆ. ಇದು ತೀವ್ರವಾದರೆ 'ಅಲರ್ಜಿಕ್ ಸೈನಸೈಟಿಸ್' ಅಂತ ಕರೆಯುತ್ತಾರೆ. ಇದೇ ರೀತಿಯ ವ್ಯಾಧಿ ಶ್ವಾಸಕೋಶದ ಒಳಗಡೆ ಸೇರಿಕೊಂಡು, ಉಸಿರಾಟಕ್ಕೆ ತೊಂದರೆಯನ್ನು ಉಂಟು ಮಾಡಿ ಕಫದ ಜತೆಗೆ ಕೆಮ್ಮು ಪ್ರಾರಂಭವಾಗುತ್ತದೆ. ವೈದ್ಯ ಭಾಷೆಯಲ್ಲಿ ಇದನ್ನು 'ಅಲರ್ಜಿಕ್ ಬ್ರಾಂಕೈಟಿಸ್' ಅಂತ ಕರೆಯುತ್ತಾರೆ. ಈ ಸಂದರ್ಭದಲ್ಲಿ ಆಯಾಸ, ನಿಶ್ಶಕ್ತಿ ಕೂಡ ಸೇರಿಕೊಂಡರೆ ಅದನ್ನು 'ಅಲರ್ಜಿಕ್ ಅಸ್ತಮಾ' ಅಂತ ಕರೆಯುತ್ತಾರೆ.
ಸ್ಕಿನ್ ಅಲರ್ಜಿ:ಅಲರ್ಜಿ ಉಂಟು ಮಾಡುವ ಅನೇಕ ರೀತಿಯ ಅಂಶಗಳಿಂದ ಚರ್ಮ ಕೂಡ ಪ್ರಭಾವಿತಕ್ಕೊಳಗಾಗುತ್ತದೆ. ಅಂದರೆ ಮುಖ್ಯವಾಗಿ ಕೆಲವು ರೀತಿಯ ಔಷಧಗಳನ್ನು ಸೇವಿಸುವುದರಿಂದ ಸೋಂಕು, ಕೆಲವು ರೀತಿಯ ಆಹಾರಗಳು ಇಲ್ಲವೇ ಯಾವುದಾದರು ಒಂದು ವಸ್ತು ಶರೀರಕ್ಕೆ ಸರಿ ಹೊಂದದಿದ್ದರೆ ಅದನ್ನು ಸ್ಪರ್ಶಿಸಿದಾಗ ಕೂಡಲೇ ತುರಿಕೆ, ಚರ್ಮ ದಪ್ಪವಾಗುವುದು, ಚರ್ಮ ಕೆಂಪಾಗುವುದನ್ನು ಗಮನಿಸಬಹುದು.
ಜೀರ್ಣಕೋಶ ಅಲರ್ಜಿ:ಕೆಲವು ರೀತಿಯ ಆಹಾರ ಪದಾರ್ಥಗಳು ದೇಹಕ್ಕೆ ಸರಿಹೊಂದದಿರುವುದರಿಂದ ಜೀರ್ಣಕೋಶ ಅಲರ್ಜಿ ಉಂಟಾಗುತ್ತದೆ. ಮುಖ್ಯವಾಗಿ ನಿತ್ರಾಣ, ಬಲಹೀನತೆ, ಮಲಬದ್ಧತೆಯಂತಹ ಲಕ್ಷಣಗಳ ಜತೆಗೆ ಒಂದು ಸಾರಿ ವಾಂತಿ ಅಥವಾ ಭೇದಿಯಾಗುವುದಕ್ಕೆ ಅವಕಾಶವಿದೆ.
ರೋಗ ಪತ್ತೆ ಪರೀಕ್ಷೆ:ಅಲರ್ಜಿಯಿಂದ ಬಳಲುತ್ತಿರುವವರು ತ್ವರಿತವಾಗಿ ವೈದ್ಯರನ್ನು ಸಂಪರ್ಕಿಸಬೇಕು. ರಕ್ಷ ಪರೀಕ್ಷೆ, ಸ್ಕಿನ್ ಪ್ರಿಕ್ ಟೆಸ್ಟ್, ಎಕ್ಸ್ರೇ-ಪಿಎನ್ಎಸ್, ಸಿಟಿ ಸ್ಕ್ಯಾನ್-ಪಿಎನ್ಎಸ್, ಪಿಎಫ್ಟಿ ಪರೀಕ್ಷೆಗಳಿಂದ ಅಲರ್ಜಿಯ ಕಾರಣಗಳನ್ನು ಪತ್ತೆ ಹಚ್ಚಬಹುದು.
ಹೋಮಿಯೋಕೇರ್ ಇಂಟರ್ನ್ಯಾಷನಲ್ ಚಿಕಿತ್ಸೆ:ಹೋಮಿಯೋಕೇರ್ ಇಂಟರ್ನ್ಯಾಷನಲ್ನಲ್ಲಿ ಆಧುನಿಕ ಜೆನೆಟಿಕ್ ಕಾನ್ಟ್ಸಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ಅಸಮತೋಲನದಿಂದ ಕೂಡಿರುವ ರೋಗನಿರೋಧಕ ಶಕ್ತಿಯನ್ನು ಸರಿಪಡಿಸಬಹುದು. ಈ ಮೂಲಕ ಮರಳಿ ಬಾರದಿರುವಂತೆ ಮಾಡಬಹುದು. ಹೋಮಿಯೋಕೇರ್ ಇಂಟರ್ನ್ಯಾಷನಲ್ ಚಿಕಿತ್ಸೆಯಿಂದ ಶರೀರದೊಳಗಿರುವ ರೋಗ ನಿರೋಧಕ ಶಕ್ತಿಯನ್ನು ಸಮತೋಲನ ಮಾಡುವ ಮೂಲಕ ಅಲರ್ಜಿಕ್ ಪದಾರ್ಥಗಳನ್ನು ಸಹಿಸಿಕೊಳ್ಳುವ ರೀತಿಯಲ್ಲಿ ಅತ್ಯಂತ ಸಮರ್ಥವಾದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದರಿಂದ ಶರೀರದ ಇಮ್ಯೂನ್ ಸಿಸ್ಟಮ್ ಬೂಸ್ಟ್ ಆಗುತ್ತದೆ. ಆನಂತರ ಎಲ್ಲ ಪ್ರತಿಕೂಲ ಪರಿಸ್ಥಿತಿಯಲ್ಲೂ ಆರೋಗ್ಯ ಚೆನ್ನಾಗಿರುತ್ತದೆ.
[29/09 6:53 PM] +91 94498 28225: ಅಲರ್ಜಿಗೆ ಕಾರಣ ಮತ್ತು ಮನೆಮದ್ದು
ಅಲರ್ಜಿಯಿಂದ ಮೈಯೆಲ್ಲಾ ತುರಿಸುವುದು, ಕೆಂಪು ಗುಳ್ಳೆಗಳು ಏಳುವುದು, ಅಲರ್ಜಿ ಶೀತ, ಕೆಮ್ಮು ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಅಲರ್ಜಿ ಯಾವ ಕಾರಣದಿಂದ ಬರುತ್ತಿದೆ ಎಂದು ಹೆಚ್ಚಿನ ಬಾರಿ ತಿಳಿಯುವುದೇ ಇಲ್ಲ. ಅಲರ್ಜಿಗೆ ಕಾರಣ ಸರಿಯಾಗಿ ತಿಳಿಯದಿದ್ದರೆ ಅದಕ್ಕೆ ಚಿಕಿತ್ಸೆ ಮಾಡಿದರೂ ಅಲರ್ಜಿ ಸಮಸ್ಯೆ ಆಗಾಗ ಕಂಡು ಬರುತ್ತದೆ.
ಸಾಮಾನ್ಯವಾಗಿ ದೂಳು, ಮಾಲಿನ್ಯ, ವಿಷಕಾರಕ ಸಸ್ಯಗಳು, ಇಂಜೆಕ್ಷನ್ ಮತ್ತು ಡ್ರಗ್ಸ್ ಈ ಕಾರಣಗಳಿಂದ ಅಲರ್ಜಿ ಉಂಟಾಗುವುದು. ಕೆಲವರಿಗೆ ಅತೀ ಶಾಖ ಅಥವಾ ಅತೀ ಕಡಿಮೆ ಉಷ್ಣತೆ ಇರುವ ಸ್ಥಳಕ್ಕೆ ಹೋದಾಗ ಕೂಡ ಅಲರ್ಜಿ ಉಂಟಾಗುವುದು. ಕೆಲವೊಮ್ಮೆ ಶುಚಿಯಿಲ್ಲದ ಅಹಾರ ಸೇವನೆ , ಜೀವನ ಶೈಲಿ, ದೈಹಿಕ ಸುಸ್ತು, ಮಾನಸಿಕ ಒತ್ತಡ ಇವುಗಳು ಕೂಡ ಅಲರ್ಜಿ ಸಮಸ್ಯೆಗೆ ಒಂದು ಕಾರಣವಾಗಿದೆ. ಈ ರೀತಿ ಅಲರ್ಜಿ ಉಂಟಾದರೆ ತಲೆ ನೋವು, ಮುಖ ಮೈ ಊದಿಕೊಳ್ಳುವುದು, ಚರ್ಮದಲ್ಲಿ ಕೆಂಪು ಗುಳ್ಳೆಗಳು ಕಂಡುಬರುತ್ತದೆ.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ದೇಹವು ಈ ಅಲರ್ಜಿ ವಿರುದ್ಧ ಹೋರಾಡಲು ಅಸಮರ್ಥವಾಗುವುದು. ಆಹಾರ ಸಾಮಾಗ್ರಿಗಳಿಂದ ಬರುವ ಅಲರ್ಜಿಯಾದರೆ ತಕ್ಷಣ ಗ್ರಹಿಸಬಹುದು. ಏಕೆಂದರೆ ಆ ಆಹಾರ ತಿಂದ ತಕ್ಷಣ ಅಲರ್ಜಿಯ ಲಕ್ಷಣಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ಈ ಕೆಳಗಿನ ಆಹಾರಗಳು ಫುಡ್ ಅಲರ್ಜಿ ತರುತ್ತದೆ. ಹಾಗಂತ ಈ ಆಹಾರಗಳು ಎಲ್ಲಾ ವ್ಯಕ್ತಿಗಳಿಗೆ ಅಲರ್ಜಿ ತರುವುದಿಲ್ಲ, ಬರೀ ಆಹಾರದಿಂದ ತಿಂದ ಮಾತ್ರವಲ್ಲ, ಈ ಕೆಳಗಿನ ಯಾವುದಾದರೂ ಒಂದು ಕಾರಣದಿಂದ ಕೂಡ ಅಲರ್ಜಿ ಉಂಟಾಗುವುದು.
ಅಲರ್ಜಿಗೆ ಕಾರಣಗಳು:
ಮೊಟ್ಟೆ, ಮೀನು, ಏಡಿ, ಮೃದ್ವಂಗಿಗಳು, ವಾಲ್ ನೆಟ್, ಹಾಲು, ಗೋಧಿ, ಸೋಯಾಬೀನ್ಸ್, ಚಾಕಲೇಟ್, ಹಾಳಾದ ಆಹಾರ ಸೇವನೆ, ಮಿತಿಮೀರಿದ ಒತ್ತಡ, ಮಾನಸಿಕ ಒತ್ತಡ, ಕೀಟಗಳು, ಔಷಧಿಗಳು.
ಅಲರ್ಜಿಯ ಲಕ್ಷಣಗಳು:
ಆಗಾಗ ಕಾಡುವ ತಲೆನೋವು, ಜ್ವರ, ವಾಂತಿ, ಮೈಗ್ರೇನ್, ತಲೆಸುತ್ತು, ಖಿನ್ನತೆ, ಮೈಯೆಲ್ಲಾ ತುರಿಕೆ, ಅಸ್ತಮಾ, ಅಸ್ತಮಾ, ಉಸಿರಾಟದಲ್ಲಿ ತೊಂದರೆ ಶೀನು, ಕೆಮ್ಮು, ಶೀತ, ಮೈಯೆಲ್ಲಾ ಊದಿಕೊಳ್ಳುವುದು, ಕಣ್ಣಿನ ಸುತ್ತ ಕಪ್ಪು ವರ್ತುಲ.
ಅಲರ್ಜಿಗೆ ಮನೆ ಮದ್ದು:
1. ಗಂಧವನ್ನು ತೇಯ್ದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ, ತುರಿಕೆ ಕಂಡು ಬರುವ ಜಾಗದಲ್ಲಿ ಹಾಕಿದರೆ ತುರಿಕೆ ಕಡಿಮೆಯಾಗುವುದು.
2. ಬಾದಾಮಿಯನ್ನು ಪೇಸ್ಟ್ ರೀತಿ ಮಾಡಿ ತುರಿಕೆ ಕಂಡು ಬಂದಲ್ಲಿ ಹಚ್ಚಿದರೆ ತುರಿಕೆ ಕಡಿಮೆಯಾಗುವುದು.
3. ಪುದೀನಾ ಎಲೆಯನ್ನು ಪೇಸ್ಟ್ ಮಾಡಿ ಅದನ್ನು ಒಂದು ಗ್ಲಾಸ್ ಗೆ ಹಾಕಿ ಪಾನಕ ರೀತಿ ಮಾಡಿ ಒಂದು ಚಮಚ ಸಕ್ಕರೆ ದಿನಕ್ಕೆ ಎರಡು ಬಾರಿ ಕುಡಿದರೆ ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು.
4. ಅಲರ್ಜಿ ಬಂದು ತುಂಬಾ ತುರಿಕೆ ಉಂಟಾದರೆ ಪಪ್ಪಾಯಿ ಬೀಜವನ್ನು ಪೇಸ್ಟ್ ರೀತಿ ಮಾಡಿ ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ತುರಿಕೆ ಕಡಿಮೆಯಾಗುವುದು.
5. 3-4 ಚಮಚ ತೆಂಗಿನೆಣ್ಣೆಗೆ 2 ಚಮಚ ನಿಂಬೆ ರಸ ಹಾಕಿ ಮಿಶ್ರ ಮಾಡಿ ಹಚ್ಚಿದರೆ ಅಲರ್ಜಿಯಿಂದ ಮೈ ಕೆಂಪಾಗಿದ್ದರೆ ಅದು ಕಡಿಮೆಯಾಗುವುದು.
6. ವಿಟಮಿನ್ ಸಿ ಅಧಿಕವಿರುವ ಆಹಾರ ತಿನ್ನಬೇಕು.
7. ಎರಡು ಚಮಚ ಸೈಡರ್ ವಿನಗರ್ ಅನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುಡಿದರೆ ಅಲರ್ಜಿ ಕಡಿಮೆಯಾಗುವುದು.
8. ಐದು ಚಮಚ ಹರಳೆಣ್ಣೆಯನ್ನು ಒಂದು ಲೋಟ ಹಣ್ಣಿನ ಜ್ಯೂಸ್ ಅಥವಾ ಬರೀ ನೀರಿನಲ್ಲಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟಯಲ್ಲಿ ಕುಡಿದರೆ ಅಲರ್ಜಿ ಸಮಸ್ಯೆಯನ್ನು ಹೋಗಲಾಡಿಸಬಹುದು.
9. ಕ್ಯಾರೆಟ್, ಬೀಟ್ ರೂಟ್, ಸೌತೆಕಾಯಿ ಈ ಮೂರನ್ನು ಮಿಶ್ರ ಮಾಡಿ ಜ್ಯೂಸ್ ತಯಾರಿಸಿ ಕುಡಿದರೆ ಅಲರ್ಜಿ ಸಮಸ್ಯೆ ಕಡಿಮೆಯಾಗುವುದು.
ಸಲಹೆ: ಈ ಮನೆಮದ್ದು ಪಾಲಿಸುವಾಗ ಅಲರ್ಜಿ ಕಾರಣವಾದ ಆಹಾರಗಳನ್ನು ತಿನ್ನಬಾರದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ