ಶನಿವಾರ, ಸೆಪ್ಟೆಂಬರ್ 30, 2017

*ಭಗವಂತನ ರೂಪಗಳು

*ಭಗವಂತನ ರೂಪಗಳು ಒಂದೇ, ಹಲವೇ ಎಂಬ ಜಿಜ್ಞಾಸೆ ಅನಾದಿ ಕಾಲದಿಂದಲೂ ಕಾಡುತ್ತಾ ಬಂದಿದೆ.*

ಪರಬ್ರಹ್ಮನು ಈ ಜಗತ್ತಿನಲ್ಲಿ ಅವತರಿಸಿದ್ದಾನೆ. ಆದರೆ ಅವನ ರೂಪಗಳು ಮಾತ್ರ ಹಲವು.

ಮತ್ತು ಅವು ಕಾಲಾನುಕಾಲಕ್ಕೆ ಬದಲಾಗುತ್ತವೆ.
 ಅವನ ರಹಸ್ಯವೇನು ಎಂಬುದನ್ನು ಆತ ತಿಳಿಯಗೊಡುವುದಿಲ್ಲ. ಹಾಗೆ ಅವನ ನಿಜರೂಪವನ್ನು ಬಚ್ಚಿಡಲು ಕಾರಣವೇನು.

ಹೀಗೆ ಚಿಂತಿಸೋಣ,

*ದೈವ ಎನ್ನುವುದು ಅತಿಮಾನುಷತೆಯ ಪ್ರತೀಕ*

ಮನುಷ್ಯನಿಂದಾಗದ ಕಾರ್ಯಗಳು ದೇವರಿಂದ ಆಗುತ್ತವೆ, ಅದರಿಂದ ಮಾನವ ದೈವದ ಮೊರೆ ಹೊಕ್ಕ.

ನಮ್ಮ ದಶಾವತಾರವನ್ನು ಗಮನಿಸುವಾ,

*ದೇವರು ನಾವು ನೆನೆದಾಗ ನೆನೆದ ರೂಪದಲ್ಲಿ ಬರುತ್ತಾನೆ*

*ವೇದಗಳು ಸಾಗರದಲ್ಲಿ ಮುಳುಗೆ ಮೀನಾಗಿ ಈಜಿ ರಕ್ಷಿಸಿದ*

*ಮಂದರ ಪರ್ವತವು ಮುಳುಗುತ್ತಿರಲು ಕೂರ್ಮನಾಗಿ ಅದನ್ನು ಹೊತ್ತ*

*ಭೂಮಿಯನ್ನು ಉಳಿಸಲು ವರಾಹನಾಗಿ ಬಂದ*

*ವರದ ಮಹಿಮೆ ತಿಳಿಸಲು ನರಸಿಂಹನಾದ*

*ಬೇಡುವುದಾದರೆ ನಾನೆ ಮೊದಲು ಎಂದು ವಾಮನನಾದ*

*ಜಗದ ಕ್ಷಾತ್ರತೇಜ ಮುರಿಯಲು ಭಾರ್ಗವನಾದ*

*ಮಾನವನಾಗಿಯೂ ಪುರುಷೋತ್ತಮನಾಗಬಹುದೆಂದು ತಿಳಿಸಲು ರಾಮನಾದ*

*ಭೂಭಾರವಿಳಿಸಲು ಕೃಷ್ಣನಾದ*

*ಶಾಂತಿಯನ್ನು ಹರಡಲು ಬುದ್ಧನಾದ*

*ಈಗ ನಮ್ಮ ಸ್ವಾರ್ಥದ ಪರಮಾವಧಿಯಾದ ಕಲ್ಕಿ ರೂಪದಲ್ಲಿದ್ದಾನೆ.*(ಸ್ವಾರ್ಥವೇ ಇಲ್ಲಿಯ ರೂಪ).

ಅಂದ ಮೇಲೆ ಎಲ್ಲ ಕಾಲದಲ್ಲೂ ದೇಶದಲ್ಲೂ ಗುಪ್ತಗಾಮಿನಿಯಾಗಿ ಹರಿಯುವ ಜಗನ್ನಿಯಾಮಕನನ್ನು ಅವಿತು ಕೊಂಡಿದ್ದಾನೆ ಎನ್ನುವುದೇ ಭ್ರಮೆಯಾಗುತ್ತದೆ.

ಆದರೂ , 
ಅವನು ನಮ್ಮೊಡನಿದ್ದರೂ ಅರಿಯಲಾಗದ ನಮ್ಮ ಮೂಢತನಕ್ಕೆ ದೇವರನ್ನು ಕಾಣಲಿಲ್ಲಾ ಎನ್ನುತ್ತೇವಲ್ಲಾ, ಅದೇ ವಿಶೇಷ.

ನಿಮ್ಮೊಡನಿದ್ದೂ ನಿಮ್ಮಂತಾಗದೆ ಎನ್ನುವಂತೆ ಭಗವಂತನನ್ನು ಪಕ್ಕದಲ್ಲಿದ್ದರೂ ಅರಿಯಲಾರೆವು.

ಬನ್ನಿ ನಮ್ಮೊಡನೆ ಇರುವವರಲ್ಲಿ ಭಗವಂತನನ್ನು ಕಾಣೋಣ.

ನಮನಗಳೊಂದಿಗೆ

-------------------------------------------------------

 *ಬಾದಾಮಿ ಎಣ್ಣೆ*

ಈ ಎಣ್ಣೆಯ ಮಹತ್ವವೇನು? ಈ ಬಗ್ಗೆ ನಮ್ಮ ತಾಯಂದಿರು ಚೆನ್ನಾಗಿ ಅರಿತಿದ್ದರು. ಚಳಿಗಾಲದಲ್ಲಿ ಮಕ್ಕಳು ಹೊರಹೋಗಬೇಕಾದರೆ ಕೈ, ತುಟಿ, ಕುತ್ತಿಗೆ, ಕಾಲುಗಳಿಗೆ ಹಚ್ಚಿ ಕಳುಹಿಸುತ್ತಿದ್ದರು. ಏಕೆಂದರೆ ಚಳಿಯಿಂದ ಚರ್ಮ ಒಡೆಯುವುದನ್ನು ಬಾದಾಮಿ ಎಣ್ಣೆ ತಡೆಯುತ್ತದೆ. ಬಾದಾಮಿ ಫಲಗಳಂತೆಯೇ ಬಾದಾಮಿ ಎಣ್ಣೆ ಸಹಾ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉತ್ತಮವಾಗಿದೆ. ನಿಸರ್ಗ ನೀಡಿದ ಈ ಅದ್ಭುತ ಆಹಾರದ ಬಗ್ಗೆ ಇತರ ವಿವರಗಳನ್ನು ನೋಡೋಣ.

ಬಾದಾಮಿ ಎಣ್ಣೆ ವಿಟಮನ್ ಮತ್ತು ಖನಿಜಗಳ ಆಗರವಾಗಿದೆ ಬಾದಾಮಿ ಎಣ್ಣೆ ಬೆಲೆಯಲ್ಲಿ ಕೊಂಚ ದುಬಾರಿಯಾದರೂ ಇದರಲ್ಲಿರುವ ಪೋಷಕಾಂಶಗಳನ್ನು ಗಣನೆಗೆ ತೆಗೆದುಕೊಂಡರೆ ಅತ್ಯಂತ ಶ್ರೀಮಂತವಾದ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಇ, ಡಿ ಮತ್ತು ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ನಂತಹ ಖನಿಜಗಳು ಹೇರಳವಾಗಿವೆ. ನಿಮ್ಮ ಅಡುಗೆಗಳಲ್ಲಿ ಕಡೆಯದಾಗಿ ಒಂದೆರಡು ತೊಟ್ಟು ಬಾದಾಮಿ ಎಣ್ಣೆ ಸೇರಿಸಿದರೆ ಅಡುಗೆಯ ಸ್ವಾದದ ಜೊತೆಗೆ ಪೌಷ್ಟಿಕತೆಯೂ ಹೆಚ್ಚುತ್ತದೆ. ಬಾದಾಮಿ ಎಣ್ಣೆ ನವಿರಾದ ಸಿಹಿ ಸ್ವಾದವನ್ನು ಹೊಂದಿರುವುದರಿಂದ ಅಡುಗೆಯ ರುಚಿಯೂ ಹೆಚ್ಚುತ್ತದೆ

*ಹೇರಳವಾಗಿರುವ ಫ್ಲೇವನಾಯ್ಡುಗಳು*

 ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಅಗತ್ಯವಿರುವ ಇಂಧನ ಆಂಟಿ ಆಕ್ಸಿಡೆಂಟುಗಳ ಮೂಲಕ ದೊರಕುತ್ತದೆ. ಫ್ಲೇವನಾಯ್ಡ್ ಎಂಬ ಆಂಟಿ ಆಕ್ಸಿಡೆಂಟುಗಳು ಬಾದಾಮಿಯಲ್ಲಿ, ಅದರಲ್ಲೂ ವಿಶೇಷವಾಗಿ ಬಾದಾಮಿಯ ಸಿಪ್ಪೆಯಲ್ಲಿ ಹೇರಳವಾಗಿವೆ. ಬಾದಾಮಿ ಎಣ್ಣೆಯನ್ನು ಸಿಪ್ಪೆ ಸಹಿತವಾಗಿದ್ದಾಗಲೇ ಹಿಂಡಿ ತೆಗೆದಿರುವ ಕಾರಣ ಈ ಫ್ಲೇವನಾಯ್ಡುಗಳು ಎಣ್ಣೆಯಲ್ಲಿಯೂ ಲಭ್ಯವಿದೆ. ಎಣ್ಣೆಗಿಂತಲೂ ಬಾದಾಮಿಯನ್ನು ಸಿಪ್ಪೆ ಸಹಿತವಾಗಿ ಒಣಫಲವಾಗಿ ತಿನ್ನುವುದರಿಂದ ಈ ಫ್ಲೇವನಾಯ್ಡುಗಳು ಗರಿಷ್ಟ ಪ್ರಮಾಣದಲ್ಲಿ ಲಭ್ಯವಾಗುತ್ತದೆ. 

*ಆರೋಗ್ಯಕರ ಮತ್ತು ಹೊಳಪುಳ್ಳ ಕೂದಲಿಗೆ ನೆರವಾಗುತ್ತದೆ.*

ಬಾದಾಮಿ ಎಣ್ಣೆಯನ್ನು ನೇರವಾಗಿ ಕೂದಲಿಗೆ ಹಚ್ಚಿಕೊಳ್ಳಬಹುದು. ಈ ಎಣ್ಣೆಯಲ್ಲಿ ಒಮೆಗಾ-6 ಕೊಬ್ಬಿನ ಆಮ್ಲವಿದೆ. ಈ ಆಮ್ಲ ತಲೆಯ ಚರ್ಮವನ್ನು ಪ್ರಚೋದಿಸಿ ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ಕೂದಲ ಬುಡದಿಂದ ಆರೋಗ್ಯಕರ ಕೂದಲು ಬೆಳೆಯಲು ನೆರವಾಗುತ್ತದೆ. ಜೊತೆಗೇ ಕೂದಲನ್ನು ಬುಡದಿಂದ ಬಲಪಡಿಸುವ ಕಾರಣ ತುದಿಯವರೆಗೂ ಕೂದಲು ಉತ್ತಮ ಪೋಷಣೆ ಪಡೆದು ಹೊಳಪು ಮತ್ತು ಬೆಳವಣಿಗೆ ಪಡೆಯುತ್ತದೆ. ಕೂದಲ ಬುಡಕ್ಕೆ ಹೆಚ್ಚಿನ ಪೋಷಕಾಂಶಗಳು ದೊರಕುವುದರಿಂದ ಉದುರುವುದು ಕಡಿಮೆಯಾಗಿ ಕೂದಲು ದಟ್ಟವಾಗಿ ಬೆಳೆಯಲು ನೆರವಾಗುತ್ತದೆ

*ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುತ್ತದೆ*

ಬಾದಾಮಿ ಎಣ್ಣೆಯಲ್ಲಿ ಒಮೆಗಾ-3 ಕೊಬ್ಬಿನ ತೈಲವೂ ಇದೆ. ಈ ತೈಲ ರಕ್ತದಲ್ಲಿ ಸೇರಿದ ಬಳಿಕ ರಕ್ತನಾಳಗಳ ಒಳಗೆ ಅಂಟಿಕೊಂಡಿದ್ದ ಕೆಟ್ಟ ಕೊಲೆಸ್ಟ್ರಾಲ್ ಅಥವಾ (LDL-low density lipoprotein) ಗಳನ್ನು ಸಡಿಲಗೊಳಿಸಿ ಹೊರ ಅಟ್ಟಲು ನೆರವಾಗುತ್ತದೆ. ನಿಮ್ಮ ಅಡುಗೆಯಲ್ಲಿ ಸಾಧ್ಯವಾದಷ್ಟು ಪ್ರಮಾಣದಲ್ಲಿ ಬಾದಾಮಿ ಎಣ್ಣೆಯನ್ನು ಸೇರಿಸುವ ಮೂಲಕ ಮನೆಯವರೆಲ್ಲರ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ. 
[26/09 2:58 PM] ‪+91 94498 28225‬: *ಹರಳೆಣ್ಣೆಯ ಉಪಯೋಗಗಳು*

*ಸೊಂಟ ನೋವಿದ್ದರೆ....* 

ವಾರಕ್ಕೊಮ್ಮೆ ಹರಳೆಣ್ಣೆಯಿಂದ ಕೆಳಬೆನ್ನನ್ನು ಮಸಾಜ್ ಮಾಡುತ್ತಾ ಬಂದರೆ ಸೊಂಟನೋವು ಕಡಿಮೆಯಾಗುತ್ತದೆ.

*ಧ್ವನಿ ಗಡುಸಾಗಿದ್ದರೆ*

ಧ್ವನಿ ಗಡುಸಾಗಿದ್ದರೆ ಗಂಟಲಿಗೆ ಪ್ರತಿದಿನ ಮೂರು ತಿಂಗಳುಗಳ ಕಾಲ ಹರಳೆಣ್ಣೆ ಸವರಿಕೊಳ್ಳುತ್ತಾ ಇದ್ದರೆ ಧ್ವನಿಪೆಟ್ಟಿಗೆಯ ಗಂಟು ಕರಗಿ ಗಡಸು ಅಥವಾ ಬಿದ್ದು ಹೋದ ಧ್ವನಿ ಇಲ್ಲವಾಗುತ್ತದೆ

*ಚರ್ಮದ ತೊಂದರೆಗಳಿಗೆ....*

ನರಹುಲಿ (wart), ಆಣಿ ಮೊದಲಾದ ಚರ್ಮದ ತೊಂದರೆಗಳಿಗೆ ಸತತವಾಗಿ ಒಂದು ತಿಂಗಳ ಕಾಲ ಹರಳೆಣ್ಣೆ ಹಚ್ಚಿದರೆ ನಿವಾರಣೆಯಾಗುತ್ತದೆ. ಅಲ್ಲದೆ ಚರ್ಮದ calcification or calcium deposit (ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಪ್ರಕಟಗೊಳ್ಳುವುದು) ತೊಂದರೆ ಕಂಡುಬಂದರೆ ಹರಳೆಣ್ಣೆಯಿಂದ ನಿತ್ಯವೂ ಮಸಾಜ್ ಮಾಡಿದರೆ ಕ್ರಮೇಣ ಕಡಿಮೆಯಾಗುತ್ತದೆ.

*ಗೊರಕೆಯ ನಿಯಂತ್ರಣಕ್ಕೆ*

ಗೊರಕೆಯ ತೊಂದರೆ ಇದ್ದರೆ ಕೆಳಹೊಟ್ಟೆಗೆ ಎರಡು ವಾರಗಳ ಕಾಲ ಹರಳೆಣ್ಣೆಯಿಂದ ಮಸಾಜ್ ಮಾಡುವ ಮೂಲಕ ಕಡಿಮೆಯಾಗುತ್ತದೆ.

*ಜೇನ್ನೊಣ ಕಚ್ಚಿದಾಗ....*

ಜೇನ್ನೊಣ ಕಚ್ಚಿದ ಬಳಿಕ ಆಗುವ ಉರಿಯನ್ನು ಕಡಿಮೆ ಮಾಡಲು ಹರಳೆಣ್ಣೆ ಹಚ್ಚಿದರೆ ಸಾಕು


*ಕೂದಲ ಆರೈಕೆಗೆ....*

ಕೂದಲ ಬೆಳವಣಿಗೆಗೆ ಶಾಂಪೂ ಮಾಡಿಕೊಳ್ಳುವ ಮೊದಲು ಕೂದಲಿಗೆ ಹರಳೆಣ್ಣೆ ಹಚ್ಚಿ ಇಪ್ಪತ್ತು ನಿಮಿಷದ ಬಳಿಕ ಶಾಂಪೂ ಹಾಕಿ ತೊಳೆದುಕೊಂಡರೆ ಉತ್ತಮ ಪರಿಣಾಮ ಪಡೆಯಬಹುದು.

*ಮದ್ಯಪಾನದಿಂದ ಮುಕ್ತಿ ಪಡೆಯಲು*

ಮದ್ಯಪಾನದಿಂದ ಮುಕ್ತಿ ಪಡೆಯಲು ರೋಗಿಗೆ ಆಹಾರದಲ್ಲಿ ಕೊಂಚ ಹರಳೆಣ್ಣೆ ಸೇರಿಸುತ್ತಾ ಇದ್ದರೆ ಪರಿಣಾಮ ಕಂಡುಬರುತ್ತದೆ. 

*ವೃದ್ಧಾಪ್ಯನಿಯಂತ್ರಣಕ್ಕೆ!*

ಹರಳೆಣ್ಣೆಯಿಂದ ಚರ್ಮವನ್ನು ಆಗಾಗ ಮಸಾಜ್ ಮಾಡಿಕೊಳ್ಳುತ್ತಾ ಇದ್ದರೆ ವೃದ್ಧಾಪ್ಯವನ್ನು ದೂರವಾಗಿಸಬಹುದು.

*ಗರ್ಭಿಣಿಯರಿಗೆ ಆರೈಕೆಗೆ*

ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ಕಡೆಯ ಎರಡು ತಿಂಗಳಲ್ಲಿ ಕೊಂಚ ಹರಳೆಣ್ಣೆಯನ್ನು ಉಬ್ಬಿದ ಹೊಟ್ಟೆಯ ಭಾಗಕ್ಕೆ ಸವರಿಕೊಳ್ಳುತ್ತಾ ಇದ್ದರೆ ಹೆರಿಗೆಯ ಬಳಿಕ ಹೊಟ್ಟೆಯಲ್ಲಿ ಸೆಳೆತದ ಗುರುತುಗಳು (stretch marks) ಅತ್ಯಂತ ಕಡಿಮೆಯಾಗುತ್ತವೆ.

*ಗಾಯದ ಸಮಸ್ಯೆಗೆ*

ಗಾಯ, ಜಜ್ಜಿದ, ಅಥವಾ ಚಿಕ್ಕಪುಟ್ಟ ಚರ್ಮ ತರಚಿದ ಸ್ಥಳದ ಮೇಲೆ ಕೊಂಚ ಹರಳೆಣ್ಣೆ ಸವರಿದರೆ ಬೇಗನೇ ಗುಣವಾಗುತ್ತದೆ. ಅಲ್ಲದೆ ನಡೆಯುವಾಗ ಕಾಲು ಉಳುಕಿದರೆ ತಕ್ಷಣ ಹರಳೆಣ್ಣೆ ಹಚ್ಚಿ ಇಡಿಯ ರಾತ್ರಿ ಹಾಗೇ ಬಿಟ್ಟರೆ ಬೆಳಿಗ್ಗೆದ್ದಾಗ ನೋವು ಇರುವುದಿಲ್ಲ. 

-----------------------------------------

ಬೆಳಗ್ಗೆ ಎದ್ದ ಕೂಡಲೇ ೪_೬ ಕಪ್ ತುಸು ಬಿಸಿ ಇರುವ ನೀರನ್ನು ಕುಡಿಯಿರಿ, ಆಹಾರದಲ್ಲಿ ನಾರಿನಂಶ,ಸೊಪ್ಪು,ಹಣ್ಣು ಇರಲಿ,ಚಹಾ ಕಾಫಿ,೨_೩ ಕಪ್ ಮಾತ್ರ ಸೇವಿಸಿ,ದಿನದಲ್ಲಿ ೩_೪ ಲೀ ದ್ರವ ಪದಾರ್ಥ ಸೇವಿಸಿ.,ರಾತ್ರಿ ಮಲಗುವ ಮುನ್ನ ೧ ಕಪ್ ಬಿಸಿ ನೀರಿಗೆ ೧ ಚಮಚ ಹರಳೆಣ್ಣೆ ಹಾಕಿ ಕುಡಿಯಿರಿ.

ಪಾಷಾಣ ಭೇದಿ ಸಸ್ಯದ ಸಮೂಲ ತೆಗೆದುಕೊಂಡು, ಹೆಚ್ಚಿ,ನೆಗ್ಗಿನ ಮುಳ್ಳು ಜಜ್ಜಹಾಕಿ ಕಶಾಯ ಕುಡಿದರೆ stone ಕರಗಿ ಹೋಗುತ್ತದೆ, ಹಲವಾರು ಜನರಿಗೆ ಪ್ರಯೋಜನವಾಗಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ