ದಸರಾ ಎನ್ನುವುದು 'ದಶಂ ಹರ' ಎಂಬ ಸಂಸ್ಕೃತ ಶಬ್ಧದ ಅಪಭ್ರಂಶವಾಗಿದೆ. 'ದಶ' ಎಂದರೆ ಹತ್ತು. 'ಹರ' ಎಂದರೆ ನಿರ್ಮೂಲನೆ ಮಾಡುವುದು... ನಮ್ಮಲ್ಲಿರುವ ಹತ್ತು ವಿಧವಾದ ದುರ್ಗುಣಗಳನ್ನು ನಿರ್ಮೂಲನೆ ಮಾಡುವುದು ದಸರಾ ಹಬ್ಬದ ಹಿಂದಿರುವ ತತ್ವ.
ಆ ದಶ ಗುಣಗಳು:
ನಮಲ್ಲಿರುವ ಈ ಹತ್ತು ರಕ್ಕಸರ ಕೊಂದು ವಿಜಯ ಸಾಧಿಸುವ ದಿನವೇ ನಾವೆಲ್ಲರೂ ವಿಜೃಂಭಣೆಯಿಂದ ವಿಜಯ ದಶಮಿ ಆಚರಿಸೋಣ.
ಮಿತ್ರರೇ, ಇನ್ನೊಂದು ಕಿವಿಮಾತು.
ಈ ಹತ್ತು ದಿನಗಲ್ಲಿ ಯಾವುದೇ ಒಳ್ಳೆಯ ಕೆಲಸ ಆರಂಭಿಸಲು ಪಂಚಾಂಗ ನೋಡುವ ಅಗತ್ಯವಿಲ್ಲ.
ಎಲ್ಲರಿಗೂ ದಸರಾ ಹಬ್ಬದ ಹೃತ್ಪೂರ್ವಕ ಶುಭಾಶಯಗಳು... ನಿಮ್ಮೆಲ್ಲರನ್ನೂ ಆ ಜಗದೀಶ್ವರೀಯಾದ ದುರ್ಗಾ ಪರಮೇಶ್ವರಿಯು ಅನುಗ್ರಹಿಸಲಿ ಎಂದು ತಾಯಿಯ ಚರಣ ಕಮಲಗಳಲ್ಲಿ ಸವಿನಯ ಪ್ರಾರ್ಥನೆ...
ಹೆಂಡತಿ ತನ್ನ ನಾಲಿಗೆ ಮೇಲೆ ಅರಿಷಿಣ, ಕುಂಕುಮ, ಮಂತ್ರಾಕ್ಷತೆ ಹಾಕಿಕೂಳ್ತಾ ಇದ್ದಳು. ಇದನ್ನು ನೋಡಿದ ಗಂಡ ಧೈರ್ಯ ಮಾಡಿ ಕೇಳಿದ, ಏನ್ಮಡ್ತಾ ಇದ್ದೀಯಾ ಕಣೇ.?
ಹೆಂಡತಿ:ಕಾಣ್ತಾ ಇಲ್ವೇನ್ರೀ ಆಯುಧ ಪೂಜೆ ಮಾಡ್ತಾ ಇದ್ದೇನೆ.!!
-------------------
೧ ಕಪ್ ಹುರುಳಿಯನ್ನು ಬೆಳಗ್ಗೆ ನೆನೆಸಿ ರಾತ್ರಿ ನೀರು ಬಸಿದು ೫ ಕಪ್ಪ್ ನೀರು ಹಾಕಿ ಕುಕ್ಕರಲ್ಲಿ ೪_೫ ವಿಸಿಲ್ ಬರುವಂತೆ ಬೇಯಿಸಿ,ಅನಂತರ ೧ ಕಪ್ ನುಗ್ಗೆ ಸೊಪ್ಪು,೧ ಚಮಚ ಹುಣಸೆ ಹಣ್ಣು,೧.೫ ಚಮಾಚ ಬೆಲ್ಲ,೨ ಚಮಚ ಉಪ್ಪು,೨ ಚಮಚ ಸಾರಿನ ಪುಡಿ,ಬೆಳ್ಳುಳ್ಳಿ ಒಗ್ಗರಣೆ ಹಾಕಿ ಚೆನ್ನಾಗಿ ಕುದಿಸಿ,ಸೂಪ್ ನಂತೆ ಕುಡಿಯಲೂ ಬಳಸಬಹುದು,ಊಟಕ್ಕೂಸೈ,ತಳದ ಹುರುಳಿಯನ್ನು ಪಲ್ಯದಂತೆಯೂ ತಿನ್ನಬಹುದು
-----------------------------------------------
ಜೇನು ತುಪ್ಪ
ನಿಜಕ್ಕೂ ಜೇನು ತುಪ್ಪ ಆರೋಗ್ಯಕ್ಕೆ ಮಾರಕವೇ?
ಜೇನು ತುಪ್ಪವನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ. ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧ ಗುಣಗಳು ಇದನ್ನು ಜನಪ್ರಿಯಗೊಳಿಸಿವೆ. ಆದರೆ ಅತಿಯಾಗಿ ಸೇವಿಸಿದರೆ ಅಮೃತವು ವಿಷವಾಗುವಂತೆ, ಜೇನನ್ನು ಅತಿಯಾಗಿ ಸೇವಿಸಿದರೆ ಅಡ್ಡ ಪರಿಣಾಮಗಳಿಗೆ ಗುರಿಯಾಗಬೇಕಾಗುತ್ತದೆ. ಪ್ರಸಿದ್ಧ ನ್ಯೂಟ್ರಿಷಿಯನಿಸ್ಟ್ ಆದ ಪ್ರಿಯಾ ಕಾತ್ಪಾಲ್ರವರ ಪ್ರಕಾರ ಜೇನು ತುಪ್ಪವನ್ನು ಹೆಚ್ಚಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆಯಂತೆ. ಅತಿಯಾದ ಜೇನು ತುಪ್ಪವು ಜೀರ್ಣ ಕ್ರಿಯೆಯ ಮೇಲೆ ಹಾನಿ ಮಾಡುತ್ತದೆ. ಇದು ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು ಮತ್ತು ಡಯೇರಿಯಾಗೆ ಕಾರಣವಾಗುತ್ತದೆ. ಜೇನು ತುಪ್ಪವು ಹೊಟ್ಟೆಯಲ್ಲಿರುವಷ್ಟು ಹೊತ್ತು ನಿಮಗೆ ಅಸೌಖ್ಯವನ್ನುಂಟು ಮಾಡುತ್ತಲೆ ಇರುತ್ತದೆ
ಜೇನು ತುಪ್ಪದಲ್ಲಿರುವ ಫ್ರಕ್ಟೋಸ್ ಅಂಶವು ಸಣ್ಣ ಕರುಳು ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ. ಜೇನು ತುಪ್ಪ ಸ್ವಲ್ಪ ಪ್ರಮಾಣದ ಆಮ್ಲೀಯ ಗುಣಗಳನ್ನು ಒಳಗೊಂಡಿದೆ. ಇದು ನಿಮ್ಮ ಎನಾಮೆಲ್ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಇದು ನಿಮ್ಮ ಈಸೊಫಗುಸ್, ಕರುಳುಗಳು ಮತ್ತು ಜಠರಗಳ ಮೇಲೆ ಅಡ್ಡ ಪರಿಣಾಮ ಬೀರಿ, ನಿಮ್ಮ ದೇಹದಲ್ಲಿ ಆಸಿಡ್ ರಿಫ್ಲಕ್ಸ್ ಅಂದರೆ ಎದೆ ಉರಿ ಬರುವಂತೆ ಮಾಡುತ್ತದೆ.
ಒಂದು ವಿಚಾರವನ್ನು ಮರೆಯಬೇಡಿ. ಜೇನು ತುಪ್ಪ ಸಕ್ಕರೆಯ ಒಂದು ರೂಪ, ಇದನ್ನು ಹೆಚ್ಚಾಗಿ ಸೇವಿಸಿದರೆ ನಿಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣದ ಏರುಪೇರಿಗೆ ಕಾರಣವಾಗಬಹುದು. " ಜೇನು ತುಪ್ಪವು ಮಧುಮೇಹ ಇರುವವರಲ್ಲಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಏರು ಪೇರು ಮಾಡುತ್ತದೆ" ಎಂದು ಪ್ರಿಯಾರವರು ಹೇಳುತ್ತಾರೆ.
ತಜ್ಞರ ಪ್ರಕಾರ ಒಂದು ವೇಳೆ ನೀವು ಹೂವುಗಳ ಪರಾಗ ರೇಣುಗಳಿಗೆ ಅಲರ್ಜಿಯನ್ನು ಹೊಂದಿದ್ದರೆ, ನಿಮಗೆ ಜೇನು ತುಪ್ಪ ಸೇವನೆಯಿಂದ ಅಲರ್ಜಿ ಉಂಟಾಗಬಹುದಂತೆ. ಇದರ ಜೊತೆಗೆ ಜೇನು ತುಪ್ಪ ಸೇವನೆಯಿಂದ ತ್ವಚೆಯ ಮೇಲೆ ಗುಳ್ಳೆಗಳು ಉಂಟಾಗಬಹುದು. ಉಸಿರಾಟದ ಸಮಸ್ಯೆ ಮತ್ತು ಆಹಾರ ನುಂಗುವಿಕೆಗು ಸಹ ಜೇನು ತುಪ್ಪದಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಇಂತಹ ಪರಾಗ ರೇಣುಗಳ ಅಲರ್ಜಿಯನ್ನು ಹೊಂದಿದ್ದರೆ ಏನು ಮಾಡಬಹುದು ಎಂಬುದಕ್ಕೆ ಪರಿಹಾರಗಳನ್ನು ಈ ಕೆಳಗೆ ನೀಡಿದ್ದೇವೆ ಓದಿ.
ಅಧಿಕ ಪ್ರಮಾಣದ ಜೇನು ತುಪ್ಪವನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಧಿಕ ಪ್ರಮಾಣದ ಕ್ಯಾಲೊರಿಗಳು ಸೇರುತ್ತವೆ. ಆದ್ದರಿಂದ ಒಂದು ವೇಳೆ ನೀವು ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಜೇನು ತುಪ್ಪವನ್ನು ನೋಡಿಕೊಂಡು ಸೇವಿಸುವುದು ಒಳ್ಳೆಯದು.
ಸಲಹೆ: ಒಂದು ದಿನಕ್ಕೆ ಎಷ್ಟು ಜೇನು ತುಪ್ಪವನ್ನು ಸೇವಿಸಬಹುದು ಎಂಬ ಕುರಿತು ಯಾವುದೇ ಮಿತಿಗಳು ಇಲ್ಲ. ಆದರೆ ಇದನ್ನು ಪ್ರತಿನಿತ್ಯ ಹೆಚ್ಚಾಗಿ ಸೇವಿಸಬೇಡಿ ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವು ಅಧಿಕ ಪ್ರಮಾಣದ ಸಿಹಿ ತಿನಿಸುಗಳನ್ನು ಸೇವಿಸಿದ ದಿನ ಜೇನು ತುಪ್ಪವನ್ನು ಸೇವಿಸಲು ಹೋಗಬೇಡಿ. ಸೇವಿಸಲೆ ಬೇಕಾದಲ್ಲಿ ಸ್ವಲ್ಪ ಮಾತ್ರ ಸೇವಿಸಿ. ನಿಮ್ಮ ಸಕ್ಕರೆಯ ಸೇವನೆಯ ಪ್ರಮಾಣವನ್ನು ಯಾವುದೇ ಕಾರಣಕ್ಕು 100 ಕ್ಯಾಲೋರಿಗಳಿಗಿಂತ ಹೆಚ್ಚಿಗೆ ಮಾಡಿಕೊಳ್ಳಬೇಡಿ. ಅಂದರೆ ಪ್ರತಿ ದಿನ 6 ಟೀ ಚಮಚ ಪ್ರಮಾಣದ ಒಳಗೆ ನಿಮ್ಮ ಸಕ್ಕರೆಯ ಸೇವನೆ ಮಿತಿಯಿರಲಿ.
------------------------------------------
ನೆಲ್ಲಿಕಾಯಿ ಜ್ಯೂಸ್
ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ಲಾಭ
ನೆಲ್ಲಿಕಾಯಿ ಮಾರ್ಕೆಟ್ ನಲ್ಲಿ ಎಲ್ಲಾ ಕಾಲದಲ್ಲೂ ದೊರೆಯುತ್ತದೆ. ಇದನ್ನು ಪ್ರತಿನಿತ್ಯ ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, ಕೂದಲು ಉದುರುವ ಸಮಸ್ಯೆ ಕಂಡು ಬರುವುದಿಲ್ಲ. ನೆಲ್ಲಿ ಕಾಯಿಯಿಂದ ಆಮ್ಲ ಜ್ಯೂಸ್ ತಯಾರಿಸಲಾಗುತ್ತದೆ, ಯಾವುದೇ ಆರ್ಯುವೇದ ಅಂಗಡಿಗಳಲ್ಲಿ ಕೇಳಿದರೆ ಈ ಜ್ಯೂಸ್ ದೊರೆಯುತ್ತದೆ. ಇದನ್ನು ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಇಲ್ಲಿ ನಾವು ಆಮ್ಲ ಜ್ಯೂಸ್ ಯನ್ನು ಪ್ರತಿದಿನ ಕುಡಿದರೆ ದೊರೆಯುವ ಪ್ರಮುಖ ಪ್ರಯೋಜನಗಳ ಬಗ್ಗೆ ಹೇಳಲಾಗಿದೆ:
ಅಸ್ತಮಾವನ್ನು ಕಮ್ಮಿ ಮಾಡುತ್ತದೆ ಇದನ್ನು ನಿಗದಿತ ಪ್ರಮಾಣದಲ್ಲಿ ಜೇನು ಜೊತೆ ತೆಗೆದುಕೊಳ್ಳುತ್ತಾ ಬಂದರೆ ಅಸ್ತಮಾ ಕಾಯಿಲೆ ಕಡಿಮೆಯಾಗುವುದು. ಉಸಿರಾಟದ ತೊಂದರೆ ಅನುಭವಿಸುತ್ತಿರುವವರೆಗೆ ಇದು ಅತ್ಯುತ್ತಮವಾದ ಔಷಧಿಯಾಗಿದೆ.
ದೀರ್ಘಕಾಲದ ಮಲಬದ್ಧತೆ ಗುಣವಾಗುವುದು ಮಲಬದ್ಧತೆ ಸಮಸ್ಯೆಯಿಂದ ತುಂಬಾ ಕಾಲದಿಂದ ಬಳಲುತ್ತಿರುವವರು ಆಮ್ಲ ಜ್ಯೂಸ್ ಕುಡಿದರೆ ಈ ಸಮಸ್ಯೆ ಗುಣಮುಖವಾಗುವುದು.
ರಕ್ತವನ್ನು ಶುದ್ಧೀಕರಿಸುತ್ತದೆ ತಾಜಾ ಆಮ್ಲ ರಸವನ್ನು ಜೇನು ಜೊತೆ ಮಿಶ್ರಣ ಮಾಡಿ ಕುಡಿದರೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ.
ಮೂತ್ರ ಉರಿ ಶಮನ ಮಾಡುತ್ತದೆ 30mlಆಮ್ಲ ಜ್ಯೂಸ್ ಅನ್ನು ಪ್ರತಿದಿನ ಎರಡು ಬಾರಿ ಕುಡಿದರೆ ಉರಿ ಮೂತ್ರದ ಸಮಸ್ಯೆ ಇರುವುದಿಲ್ಲ.
ಸೆಕೆಯಲ್ಲಿ ದೇಹವನ್ನು ತಂಪಾಗಿ ಇಡುತ್ತದೆ ಸೆಕೆಗಾಲದಲ್ಲಿ ದೇಹ ಬೆಂದು ಹೋದ ಅನುಭವ ಉಂಟಾಗುವುದು, ಸೆಕೆಯನ್ನು ತಡೆಯಲು ಪ್ರತೀದಿನ ಸ್ವಲ್ಪ ಆಮ್ಲ ಜ್ಯೂಸ್ ಕುಡಿದರೆ ಇದು ದೇಹವನ್ನು ತಂಪಾಗಿಡುತ್ತದೆ.
ಮುಟ್ಟಿನ ಸಮಯದಲ್ಲಿ ಒಳ್ಳೆಯದು ಮುಟ್ಟಿನ ಸಮಯದಲ್ಲಿ ತುಂಬಾ ರಕ್ತಸ್ರಾವವಾಗುತ್ತಿದ್ದರೆ ಹಣ್ಣಾದ ಬಾಳೆ ಹಣ್ಣನ್ನು ತಿಂದು ಈ ಆಮ್ಲವನ್ನು ಕುಡಿದರೆ ತುಂಬಾ ರಕ್ತಸ್ರಾವವಾಗುವುದಿಲ್ಲ.
ಮುಖದ ಅಂದಕ್ಕೆ ಆಮ್ಲ ಜ್ಯೂಸ್ ಅನ್ನು ಸ್ವಲ್ಪ ಜೇನಿಗೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಕುಡಿಯುತ್ತಾ ಬಂದರೆ ಮುಖದಲ್ಲಿ ಬಿಳಿ ಮಚ್ಚೆ, ಮೊಡವೆ, ಬ್ಯ್ಯಾಕ್ ಹೆಡ್ಸ್ ಈ ರೀತಿಯ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ, ಮುಖದ ಕಾಂತಿ ಹೆಚ್ಚುವುದು.
ಕೆಂಪು ರಕ್ತ ಕಣ ಹೆಚ್ಚಿಸುತ್ತದೆ ದೇಹದಲ್ಲಿ ಕೆಂಪು ರಕ್ತ ಕಣ ಕಡಿಮೆಯಾದರೆ ರಕ್ತ ಹೀನತೆ ಉಂಟಾಗುವುದು. ಆಮ್ಲ ಹಾಗಾಗದಂತೆ ತಡೆಯುತ್ತದೆ.
ಶಕ್ತಿ ತುಂಬುತ್ತದೆ ಆಮ್ಲ ಜ್ಯೂಸ್ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ, ಹೃದಯದ ನರಗಳ ಅರೋಗ್ಯ ಹೆಚ್ಚಿಸಿ, ಹೃದಯ ಸಂಬಂಧಿತ ಸಮಸ್ಯೆ ಬರುವುದನ್ನು ತಡೆಯುತ್ತದೆ.
ಪೈಲ್ಸ್ ರೋಗಿಗಳಿಗೆ ಒಳ್ಳೆಯದು ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಮಲಬದ್ಧತೆ ಕಂಡು ಬರುವುದು ಸಹಜ. ಈ ಆಮ್ಲ ಜ್ಯೂಸ್ ಕುಡಿದರೆ ಆ ಸಮಸ್ಯೆಯಿಂದ ಪಾರಾಗಬಹುದು.
ಕಣ್ಣಿನ ಆರೋಗ್ಯಕ್ಕೆ ಇದನ್ನು ಕುಡಿಯುವುದರಿಂದ ಕ್ರಮೇಣ ಕಣ್ಣಿನ ಆರೋಗ್ಯ ಹೆಚ್ಚುವುದು.
ನೆರಿಗೆಯನ್ನು ತಡೆಯುತ್ತದೆ ಮುಖದಲ್ಲಿ ಅಕಾಲಿಕ ನೆರಿಗೆಯನ್ನು ತಡೆಗಟ್ಟುತ್ತದೆ, ತ್ವಚೆ ರಕ್ಷಣೆಯನ್ನು ಮಾಡುತ್ತದೆ.
ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ ಆಮ್ಲ ಜ್ಯೂಸ್ ಅನ್ನು ಅರಿಶಿಣ ಹಾಗೂ ಜೇನು ಜೊತೆ ಕುಡಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
ಸಮತೂಕ ಇದನ್ನು ಕುಡಿಯುವುದರಿಂದ ದೇಹದಲ್ಲಿರುವ ಅಧಿಕ ಕೊಬ್ಬಿನಂಶ ಕರಗುತ್ತದೆ, ಇದರಿಂದ ನೀವು ಸಮತೂಕವನ್ನು ಪಡೆಯಬಹುದು.
------------------------------------------
ಹಣ್ಣುಗಳ ಪರಿಣಾಮ
ಅಪ್ಪಿತಪ್ಪಿಯೂ ಭರ್ಜರಿ ಊಟದ ಬಳಿಕ ಹಣ್ಣುಗಳನ್ನು ಸೇವಿಸಬೇಡಿ!
ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದರೇ ಹೆಚ್ಚು ಪ್ರಯೋಜನಕಾರಿಯಾಗಿದೆ
ಅಪ್ಪಿತಪ್ಪಿಯೂ ಭರ್ಜರಿ ಊಟದ ಬಳಿಕ ಹಣ್ಣುಗಳನ್ನು ಸೇವಿಸಬೇಡಿ!
ನಮಗೆ ಅಗತ್ಯವಾದ ಹಲವು ಪೋಷಕಾಂಶಗಳು ಹಣ್ಣುಗಳ ಮೂಲಕ ದೊರಕುತ್ತದೆ. ಆದರೆ ಎಲ್ಲಾ ಹಣ್ಣುಗಳಲ್ಲಿ ಎಲ್ಲಾ ಪೋಷಕಾಂಶಗಳು ಏಕಪ್ರಕಾರವಾಗಿರುವುದಿಲ್ಲ. ಆ ಪ್ರಕಾರ ಕೇವಲ ಒಂದೇ ಪ್ರಕಾರದ ಆಹಾರವನ್ನು ನಾವು ಸೇವಿಸುವ ಬದಲು ಬೇರೆ ಬೇರೆ ಹೊತ್ತಿನಲ್ಲಿ ಬೇರೆ ಬೇರೆ ಹಣ್ಣುಗಳನ್ನು ಸೇವಿಸುವುದರಿಂದ ಎಲ್ಲಾ ಹಣ್ಣುಗಳ ಗರಿಷ್ಟ ಉಪಯೋಗವನ್ನು ಪಡೆಯಬಹುದು. ಆದರೆ ಹಣ್ಣುಗಳನ್ನು ಯಾವುದೇ ಹೊತ್ತಿನಲ್ಲಿ ಮನಬಂದಂತೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಉದಾಹರಣೆಗೆ ಊಟದ ಬಳಿಕ ಹಲಸಿನ ಹಣ್ಣು ತಿನ್ನುವುದು ಅತಿಸಾರಕ್ಕೆ ಆಹ್ವಾನ (ಸ್ವಾತಂತ್ರ್ಯಪೂರ್ವದಲ್ಲಿ ಹಲಸಿನ ಹಣ್ಣು ತಿಂದು ರೈಲು ಹತ್ತಿದ್ದ ಭಾರತದ ಹಳ್ಳಿಗರೊಬ್ಬರು ನಿಲ್ದಾಣವೊಂದರಲ್ಲಿ ಶೌಚಕ್ಕೆಂದು ಇಳಿದು ಹಿಂದಿರುಗುವಷ್ಟರಲ್ಲಿ ರೈಲು ಹೊರಟು ಹೋಗಿತ್ತು. ಈ ಬಗ್ಗೆ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಬ್ರಿಟಿಷ್ ಸರ್ಕಾರ ರೈಲುಗಳಲ್ಲಿಯೇ ಶೌಚಾಲಯವನ್ನು ನಿರ್ಮಿಸಿರುವುದು ಈಗ ಇತಿಹಾಸ).
ಆದ್ದರಿಂದ ಹಣ್ಣುಗಳನ್ನು ಸೇವಿಸುವುದಕ್ಕಿಂತಲೂ ಯಾವಾಗ ಮತ್ತು ಯಾವ ಪ್ರಮಾಣದಲ್ಲಿ ತಿನ್ನಬೇಕು ಎಂದು ಅರಿಯುವುದು ಆರೋಗ್ಯದ ಗುಟ್ಟು. ಹಣ್ಣುಗಳ ಬಗ್ಗೆ ಪ್ರತಿ ಪ್ರದೇಶದಲ್ಲಿಯೂ ಬೇರೆ ಬೇರೆಯಾದ ನಂಬುಗೆಗಳಿವೆ. ಕೆಲವರು ಖಾಲಿಹೊಟ್ಟೆಯಲ್ಲಿ ತಿಂದರೆ ಉತ್ತಮ ಎಂದರೆ ಇನ್ನೊಬ್ಬರು ಇದಕ್ಕೆ ತದ್ವಿರುದ್ದವಾಗಿ ಖಾಲಿ ಹೊಟ್ಟೆಯಲ್ಲಿ ಎಂದೂ ತಿನ್ನಬಾರದು ಎಂದು ಸಲಹೆ ನೀಡುತ್ತಾರೆ. ಹಾಗಾದರೆ ಸರಿ ಯಾವುದು? ಯಾವುದನ್ನು ಅನುಸರಿಸಬೇಕು? ಎಷ್ಟು ತಿನ್ನಬೇಕು? ಅಷ್ಟಕ್ಕೂ ದುಬಾರಿಯಾಗಿರುವ ಹಣ್ಣುಗಳನ್ನು ತಿನ್ನಲೇ ಬೇಕೇ? ತಿನ್ನದಿದ್ದರೆ ಏನು ನಷ್ಟ? ಹಣ್ಣುಗಳನ್ನು ಸಿಪ್ಪೆ ಸಹಿತ ತಿನ್ನಬೇಕೇ? ಸಿಪ್ಪೆ ರಹಿತವಾಗಿಸಿಯೇ? ಹಣ್ಣುಗಳನ್ನು ಇತರ ಅಡುಗೆಗಳೊಂದಿಗೆ ಬೇಯಿಸಿ ತಿಂದರೆ ಉತ್ತಮವೇ ಅಲ್ಲವೇ? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ವಿಜ್ಞಾನ ಯಾವ ಉತ್ತರ ನೀಡುತ್ತದೆ ಎಂಬುದನ್ನು ಇಲ್ಲಿ ಸಂಗ್ರಹಿಸಲಾಗಿದೆ.
ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದರೇ ಹೆಚ್ಚು ಪ್ರಯೋಜನಕಾರಿಯಾಗಿದೆ
ನಮ್ಮ ಹೊಟ್ಟೆಯಲ್ಲಿರುವ ಆಹಾರ ಸುಮಾರು ಮೂರು ಘಂಟೆಗಳ ಬಳಿಕ ಕರುಳುಗಳಿಗೆ ರವಾನೆಯಾಗುವ ಮೂಲಕ ಖಾಲಿಯಾಗುತ್ತದೆ. ಆದರೆ ಈ ಸಮಯದಲ್ಲಿ ಆಹಾರ ಸೇವಿಸುವುದು ಒಳ್ಳೆಯದಲ್ಲ. ಏಕೆಂದರೆ ಖಾಲಿಯಾದ ಬಳಿಕ ಜಠರ ರಸ ಸ್ರವಿಸಿ ಮುಂದಿನ ಆಹಾರದ ಜೀರ್ಣಕ್ರಿಯೆಗೆ ಸಿದ್ಧಪಡಿಸಲು ಕೊಂಚ ಸಮಯದ ಅಗತ್ಯವಿದೆ ಅಂದರೆ ಸುಮಾರು ಎರಡು ಘಂಟೆ. ಈ ಆವಧಿಯನ್ನು ಅನುಸರಿಸಿಯೇ ನಮ್ಮ ಬೆಳಿಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಸಂಜೆಯ ತಿಂಡಿ ಮತ್ತು ರಾತ್ರಿಯ ಊಟಗಳನ್ನು ನಿಗದಿಪಡಿಸಲಾಗಿದೆ. ಅಂತೆಯೇ ಹಣ್ಣುಗಳನ್ನೂ ಹಿಂದಿನ ಊಟದ ಸುಮಾರು ಐದು ಘಂಟೆಗಳ ಬಳಿಕ ಸೇವಿಸಿದರೆ ಹಣ್ಣಿನಲ್ಲಿರುವ ಪೋಷಕಾಂಶಗಳ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು.
ಭರ್ಜರಿ ಊಟದ ಬಳಿಕ ಹಣ್ಣುಗಳ ಸೇವನೆ ಬೇಡ ಭರ್ಜರಿ ಊಟದ ಬಳಿಕ ಕೆಲವು ಸಂಪ್ರದಾಯಗಳಲ್ಲಿ ಹಣ್ಣುಗಳನ್ನು ಸೇವಿಸಲು ನೀಡುತ್ತಾರೆ. ಮಲೆನಾಡಿನಲ್ಲಿ ಪ್ರತಿ ಊಟದ ಬಳಿಕ ಬಾಳೆಹಣ್ಣು ಸೇವಿಸುವುದು ಊಟದ ಒಂದು ಅಂಗವೇ ಆಗಿದೆ. ಆದರೆ ವಿಜ್ಞಾನ ಭಾರೀ ಊಟದ ಬಳಿಕ ಹಣ್ಣುಗಳನ್ನು ಸೇವಿಸುವುದು ವಿಹಿತವಲ್ಲ ಎನ್ನುತ್ತದೆ. ಏಕೆಂದರೆ ಭರ್ಜರಿ ಊಟದ ಬಳಿಕ ಜಠರರಸ ಆ ಊಟವನ್ನು ಜೀರ್ಣಗೊಳಿಸಲು ಹೆಚ್ಚು ಬಳಕೆಯಾಗುವುದರಿಂದ ಬಳಿಕ ಆಗಮನವಾದ
ಹಣ್ಣುಗಳನ್ನು ಜೀರ್ಣಿಸಲು ವಿಫಲವಾಗುತ್ತದೆ. ಈ ಹಣ್ಣುಗಳು ನಿಧಾನವಾಗಿ ಕೊಳೆಯಲು ಆರಂಭಿಸುತ್ತವೆ. ಇದರಿಂದ ಹುಳಿತೇಗು, ಅಜೀರ್ಣ, ಹೊಟ್ಟೆಯಲ್ಲಿ ಉರಿ ಮೊದಲಾದ ತೊಂದರೆಗಳು ಎದುರಾಗುತ್ತವೆ. ಆದರೆ ಬಾಳೆಹಣ್ಣಿನಲ್ಲಿ ಈ ಪ್ರಮಾಣ ಕನಿಷ್ಟವಿರುತ್ತದೆ. ಸೇಬು ಮತ್ತು ಆಮ್ಲೀಯ ಹಣ್ಣುಗಳು (ಕಿತ್ತಳೆ, ಮೂಸಂಬಿ ಮೊದಲಾದವು) ಗರಿಷ್ಟ ತೊಂದರೆ ನೀಡುತ್ತವೆ. ಹಾಗಾಗಿ ಊಟದ ಪ್ರಮಾಣ ಕಡಿಮೆಯಿದ್ದು ನಾರಿನ ಹಣ್ಣುಗಳನ್ನು ಮಾತ್ರ ಸೇವಿಸುವುದು ಉತ್ತಮ. ಬಾಳೆ, ಪೊಪ್ಪಾಯಿ, ಕಲ್ಲಂಗಡಿ, ತರಬೂಜ ಮೊದಲಾದ ನೀರಿನಂಶ ಹೆಚ್ಚಿರುವ ಹಣ್ಣುಗಳನ್ನು ಅಲ್ಪಪ್ರಮಾಣದಲ್ಲಿ ಸೇವಿಸಬಹುದು. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದು ಅತ್ಯಂತ ಸೂಕ್ತ ಸಮಯ ಬೆಳಿಗ್ಗೆದ್ದ ಬಳಿಕ ಪ್ರಾತಃವಿಧಿಗಳನ್ನು ಪೂರೈಸಿ ಕೊಂಚ ವ್ಯಾಯಾಮ, ಸ್ನಾನ ಮುಗಿಸಿದ ಬಳಿಕ ಯಾವುದೇ ಹಣ್ಣನ್ನು ತಿಂದರೂ ಅದರಲ್ಲಿರುವ ಪೋಷಕಾಂಶಗಳ ಗರಿಷ್ಟ ಲಾಭವನ್ನು ಪಡೆಯಬಹುದು ಎಂದು ಆಹಾರತಜ್ಞರು ಅಭಿಪ್ರಾಯಪಡುತ್ತಾರೆ. ಅಂತೆಯೇ ಎರಡು ಪ್ರಮುಖ ಊಟಗಳ ನಡುವಣ ಸಮಯದಲ್ಲಿ (ಅಂದರೆ ಬೆಳಗ್ಗಿನ ಉಪಾಹಾರ ಮತ್ತು ಮದ್ಯಾಹ್ನದ ಊಟದ ನಡುವೆ, ಮಧ್ಯಾಹ್ನದ ಊಟ ಮತ್ತು ರಾತ್ರಿಯೂಟದ ನಡುವೆ) ಅಲ್ಪ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸಬಹುದು ಎಂದು ಅವರು ಸಲಹೆ ನೀಡುತ್ತಾರೆ. ನಿಮ್ಮ ಆರೋಗ್ಯವನ್ನು ಅನುಸರಿಸಿ ಸೂಕ್ತ ಹಣ್ಣುಗಳನ್ನು ಆಯ್ಕೆಮಾಡಿಕೊಳ್ಳಿರಿ ಮಧುಮೇಹಿಗಳಿಗೆ ಸಕ್ಕರೆ ಹೇಗೆ ನಿಷೇಧವೋ ಅಂತೆಯೇ ಸಕ್ಕರೆಯ ಅಂಶ ಹೆಚ್ಚಿರುವ ಹಣ್ಣುಗಳೂ ನಿಷೇಧವಾಗಿದೆ. ವೈದ್ಯರು ಪ್ರತಿ ರೋಗಿಯ ಆರೋಗ್ಯದ ಅಂಕಿ ಅಂಶಗಳನ್ನು ತಾಳೆಹಾಕಿ ಯಾವ ಹಣ್ಣುಗಳು ಸೂಕ್ತ ಎಂದು ಸಲಹೆ ನೀಡುತ್ತಾರೆ. ಆ ಸಲಹೆಯಂತೆಯೇ ಹಣ್ಣುಗಳನ್ನು ಸೂಕ್ತ ಸಮಯದಲ್ಲಿ ಸೇವಿಸುವು ವಿಹಿತ. ಅಂತೆಯೇ, ಹೊಟ್ಟೆಯಲ್ಲಿ ತೊಂದರೆ ಇರುವವರು ಆಮ್ಲೀಯ ಹಣ್ಣುಗಳು, ಅಂದರೆ ಕಿತ್ತಳೆ, ಮೂಸಂಬಿ ಚಕ್ಕೋತ ಮೊದಲಾದ ಹಣ್ಣುಗಳನ್ನು ಸೇವಿಸಬಾರದು. ತೂಕ ಇಳಿಸುವ ನಿಟ್ಟಿನಲ್ಲಿರುವವರು ಹಣ್ಣುಗಳನ್ನು ಅಲ್ಪ ಪ್ರಮಾಣದಲ್ಲಿ ಮತ್ತು ಹಸಿಯಾಗಿ ತಿನ್ನಬಹುದಾದ ತರಕಾರಿಗಳನ್ನು ಸಾಲಾಡ್ ರೂಪದಲ್ಲಿ ಹೆಚ್ಚು ಸೇವಿಸಬೇಕು. ಹಣ್ಣುಗಳನ್ನು ಜ್ಯೂಸ್ ಮಾಡಿಕೊಂಡು ಕುಡಿದರೆ ಹೆಚ್ಚು ಲಾಭಕರ
ಹಣ್ಣುಗಳನ್ನು ಹಾಗೇ ತಿನ್ನುವುದು ಉತ್ತಮವಾದರೂ ಜೀರ್ಣಕ್ರಿಯೆ ಸುಲಭವಾಗಲು ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಳ್ಳುವುದು ಉತ್ತಮ ಎಂದು ಆಹಾರತಜ್ಞರು ಅಭಿಪ್ರಾಯಪಡುತ್ತಾರೆ
------------------------------------------------
[29/09 2:37 PM] +91 94498 28225: *ತ್ವಚೆಯ ಕಾಂತಿಗೆ, ಅಡುಗೆ ಮನೆಯ ಉತ್ಪನ್ನಗಳೇ ಸಾಕು*
ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ, ಎಷ್ಟೇ ಹಣ ವ್ಯಯಿಸಲು ಕೂಡ ನಾವು ಸಿದ್ಧರಾಗಿರುತ್ತೇವೆ. ಹಾಗಾಗಿ ಜನರಲ್ಲಿ ಹೆಚ್ಚುತ್ತಿರುವ ಸೌಂದರ್ಯ ಪ್ರಜ್ಞೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಕಂಪೆನಿಗಳು ಅವರ ಬೇಡಿಕೆಗಳನ್ನು ಪೂರೈಸಲು ಮಾರುಕಟ್ಟೆಯಲ್ಲಿ ತರಹೇವಾರಿ ಉತ್ಪನ್ನವನ್ನು ಬಿಟ್ಟು ಅಥವಾ ಟಿವಿಗಳಲ್ಲಿ ಒಂದೇ ರೀತಿಯ ಜಾಹೀರಾತುಗಳನ್ನು ಪದೇ ಪದೇ ತೋರಿಸಿ ಜನರನ್ನು ಆದಷ್ಟು ಮರಳು ಮಾಡಿ ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮಳೆಗಾಲದಲ್ಲಿ ಚರ್ಮದ ಸಮಸ್ಯೆಗಳಿಗೆ ಫಲಪ್ರದ ಸಲಹೆ ಆದರೆ ಇಂತಹ ಉತ್ಪನ್ನಗಳಲ್ಲಿ ರಾಸಾಯನಿಕಗಳು ಅಧಿಕವಾಗಿದ್ದು, ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಅದಕ್ಕಾಗಿ ನಾವು ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಸ್ವಾಭಾವಿಕ ಪರಿಹಾರಗಳ ಕಡೆಗೆ ಗಮನ ಹರಿಸಬೇಕಾದ ಕಾಲ ಬಂದಿದೆ. ಅದ್ದರಿಂದ ರಾಸಾಯನಿಕ ವಸ್ತುಗಳನ್ನು ಬಳಸಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುವುದನ್ನು ತಪ್ಪಿಸಿ ನೈಸರ್ಗಿಕವಾಗಿ ದೊರೆಯುವ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ವಸ್ತುಗಳನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ.
*ಅರಿಶಿನ*
ಸುಕ್ಕುಗಳನ್ನು ನಿವಾರಿಸುವುದರಲ್ಲಿ ಸಹ ಅರಿಶಿನ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸ್ವಲ್ಪ ಅಕ್ಕಿಪುಡಿಯ ಜೊತೆಗೆ ಒಂದು ಚಮಚ ಅರಿಶಿನ ಪುಡಿಯನ್ನು ಬೆರೆಸಿಕೊಳ್ಳಿ. ಇದಕ್ಕೆ ಒಂದು ಚಮಚ ಟೊಮೇಟೊ ರಸ ಹಾಗು ಒಂದು ಚಮಚ ಹಾಲನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖದಲ್ಲಿರುವ ಸುಕ್ಕುಗಳ ಮೇಲೆ ಲೇಪಿಸಿ. ನಂತರ ಇದನ್ನು 20 ನಿಮಿಷಗಳ ಕಾಲ ಬಿಟ್ಟು, ಬಿಸಿ ನೀರಿನಿಂದ ತೊಳೆಯಿರಿ. ಈ ಪರಿಹಾರವನ್ನು ವಾರಕ್ಕೊಮ್ಮೆ ಮಾಡಿ. ಆಗ ನೋಡಿ, ನಿಮ್ಮ ಸುಕ್ಕಿಗೆ ಪರಿಹಾರ ದೊರೆಯಿತೆ ಇಲ್ಲವೇ, ಎಂದು. ಅಲ್ಲದೆ ಅರಿಶಿನದಲ್ಲಿರುವ ಆಂಟಿ-ಸೆಪ್ಟಿಕ್ ಮತ್ತು ಆಂಟಿ-ಬ್ಯಾಕ್ಟೀರಿಯಾ ಗುಣಗಳು ಹೆಚ್ಚಾಗಿರುವುದರಿಂದ ಇದನ್ನು ಮೊಡವೆಗಳ ನಿವಾರಣೆಗಾಗಿ ಫೇಸ್ ಪ್ಯಾಕ್ನಂತೆ ಕೂಡ ಬಳಸಬಹುದು.
*ತ್ವಚೆಯ ಮೇಲಿನ ಕಲೆಯನ್ನು ನಿವಾರಿಸಲು ಅಕ್ಕಿ ನೀರು*
ತ್ವಚೆಯ ಮೇಲಿನ ಕಲೆಗಳನ್ನು ಅಕ್ಕಿಯ ನೀರಿನೊ೦ದಿಗೆ ತಿಳಿಗೊಳಿಸಿಕೊಳ್ಳಿರಿ. ನಿಮ್ಮ ಮುಖವನ್ನು ಅಕ್ಕಿನೀರಿನಿ೦ದ ತೊಳೆದುಕೊಳ್ಳುವುದಕ್ಕೆ ಮೊದಲು ಅದಕ್ಕೆ ಚಿಟಿಕೆಯಷ್ಟು ಅರಿಶಿನವನ್ನು ಸೇರಿಸಿಕೊಳ್ಳಿರಿ. ಇದರಿ೦ದ ಅಕ್ಕಿ ನೀರಿನಿ೦ದಾಗಬಹುದಾದ ಪ್ರಯೋಜನವು ಮತ್ತಷ್ಟು ಹೆಚ್ಚಾಗುತ್ತದೆ. ಅಷ್ಟೇ ಏಕೆ ಅಕ್ಕಿ ನೀರನ್ನು ಒ೦ದು ಫೇಸ್ ವಾಶ್ನ ರೂಪದಲ್ಲಿ ನಿಯಮಿತವಾಗಿ ಬಳಸಿದ್ದೇ ಆದಲ್ಲಿ, ಅದು ಮೊಡವೆಗಳ ನಿವಾರಣೆಗೆ ನೆರವಾಗುತ್ತದೆ. ಆದರೂ ಸಹ, ಅಕ್ಕಿ ನೀರಿನ ನಿಯಮಿತ ಬಳಕೆಯು ನಿಮ್ಮ ತ್ವಚೆಯನ್ನು ಮಾತ್ರ ಶುಷ್ಕಗೊಳಿಸಿಬಿಡುತ್ತದೆ.
ಅಡುಗೆ ಮನೆಯಲ್ಲಿರುವ ಅಡುಗೆ ಸೋಡಾ ಅಚ್ಚ ಬಿಳುಪಿನ, ಗೌರವರ್ಣದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ನೀವೇನೂ ದುಬಾರಿಯಾದ ತ್ವಚೆಯ ಆರೈಕೆಗೆ ಸ೦ಬ೦ಧಿಸಿದ೦ತಹ ಉತ್ಪನ್ನಗಳನ್ನೇನೂ ಖರೀದಿಸಬೇಕಾಗಿಲ್ಲ. ಇದಕ್ಕಾಗಿ ನಿಮಗೆ ನಿಮ್ಮ ಅಡುಗೆಕೋಣೆಯಲ್ಲಿರಬಹುದಾದ ಒ೦ದು ಟೀ ಚಮಚದಷ್ಟು ಅಡುಗೆಸೋಡಾವು ಸಾಕಾಗುತ್ತದೆ. ಸಾಮಾನ್ಯವಾಗಿ ತ್ವಚೆಯ ಮೇಲೆ ಕಂಡುಬರುವ ಕಪ್ಪು ಕಲೆಗಳ ನಿವಾರಣೆಗಾಗಿ ಒ೦ದು ಟೀ ಚಮಚದಷ್ಟು ಅಡುಗೆ ಸೋಡಾಗೆ ಒ೦ದು ಟೀ ಚಮಚದಷ್ಟು ಲಿ೦ಬೆಯ ರಸ ಹಾಗೂ ಎರಡು ಟೀ ಚಮಚಗಳಷ್ಟು ಬೆಚ್ಚಗಿನ ನೀರಿನೊ೦ದಿಗೆ ಬೆರೆಸಿರಿ.
ಹತ್ತಿಯ ಉ೦ಡೆಯೊ೦ದನ್ನು ಈ ದ್ರಾವಣದಲ್ಲಿ ಅದ್ದಿ, ಅದನ್ನು ನಿಮ್ಮ ಮುಖದ ಮೇಲೆ ನಯವಾಗಿ ಉಜ್ಜಿರಿ. ಐದು ನಿಮಿಷಗಳ ಬಳಿಕ ಮುಖವನ್ನು ತೊಳೆದುಬಿಡಿರಿ.ತೈಲಾ೦ಶವುಳ್ಳ ಹಾಗೂ ಸುಲಭವಾಗಿ ಮೊಡವೆಗಳಿಗೆ ತುತ್ತಾಗಬಲ್ಲ ಪ್ರಕೃತಿಯುಳ್ಳ ತ್ವಚೆಗೆ ಈ ಪ್ಯಾಕ್ ಹೇಳಿಮಾಡಿಸಿದ೦ತಿರುತ್ತದೆ.
*ತ್ವೆಚೆಯ ಕಾಂತಿಯನ್ನು ಹೆಚ್ಚಿಸಲು ಗಂಧದ ಎಣ್ಣೆ*
ತ್ವೆಚೆಯ ಕಾಂತಿಯನ್ನು ಹೆಚ್ಚಿಸಲು ಎಲ್ಲರು ಬಯಸುವುದು ಸಹಜ. ಅಂತೆಯೇ ಇದನ್ನು ಸಾಧ್ಯವಾಗಿಸಲು ಗಂಧವನ್ನು ಬಳಸಬಹುದಾಗಿದೆ. ಗಂಧದ ಎಣ್ಣೆಯಿಂದ ಮುಖದ ಮೇಲೆ ಎಣ್ಣೆಯ ಮಸಾಜ್ ಮಾಡುವಾಗ ಎಣ್ಣೆಯ ಜೊತೆಗೆ ಗಂಧದ ಹುಡಿಯನ್ನು ಬಳಸಿ ಮಾಡುವ ಮೂಲಕ ಚರ್ಮವನ್ನು ನಯವಾಗಿ ಇಡಬಹುದು. ಮುಖದ ಮೇಲೆ ಹೀಗೆ ಹಚ್ಚಿನ ಎಣ್ಣೆಯನ್ನು ಹನ್ನೆರಡು ಗಂಟೆಗಳ ಕಾಲ ಹಾಗೆಯೇ ಇಡಬೇಕು. ಹೀಗೆ ಗಂಧವನ್ನು ತ್ವಚೆಯ ಕಾಂತಿಯನ್ನು ಕಾಪಾಡಲು ಬಳಸಬಹುದಾಗಿದೆ.
-------------------------------------------------
ಎಲ್ಲಾ ರೋಗಗಳಿಗೂ ರಾಮಬಾಣ ಇದ್ದಂತೆ. ಕ್ಯಾನ್ಸರ್ನಿಂದ ಶುಗರ್ ವರೆಗೂ…..!
ನಿಮಗೆ ಮಾಡಹಾಗಲ ಕಾಯಿ ಬಗ್ಗೆ ಗೊತ್ತಾ? ಹಾಗಲಕಾಯಿ ಜಾತಿಗೆ ಸೇರಿದ ಇದನ್ನು ಕೆಲವು ಪ್ರದೇಶಗಳಲ್ಲಿ ಮಾಡಹಾಗಲ, ಮೂಡಹಾಗಲ ಕಾಯಿ ಎನ್ನುತ್ತಾರೆ. ನೋಡಲು ಹಾಗಲಕಾಯಿ ತರಹವೇ ಇರುತ್ತದೆ. ಆದರೆ ಕಹಿ ಇರಲ್ಲ. ನೋಡಲು ಉದ್ದವಾಗಿ ಅಲ್ಲದೆ ಗುಂಡಾಗಿ ಅದರ ಮೇಲೆ ಚಿಕ್ಕಚಿಕ್ಕ ಮುಳ್ಳಿನಂತಹವು ಇರುತ್ತವೆ. ಅವುಗಳನ್ನು ನಮ್ಮ ಅಡುಗೆಯಲ್ಲಿ ಚೆನ್ನಾಗಿ ಬಳಸಿಕೊಂಡರೆ ಶುಗರ್, ಕ್ಯಾನ್ಸರ್, ಚರ್ಮ ರೋಗಗಳು, ಒಬೆಸಿಟಿಯಂತಹ ಅನೇಕ ಕಾಯಿಲೆಗಳು ಮೊದಲೇ ನಿವಾರಿಸಿಕೊಳ್ಳಬಹುದು.
ಮಾಡಹಾಗಲಕಾಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ನಿಮಗಾಗಿ:
ಗರ್ಭಿಣಿಯರಿಗೆ: ಮಾಡಹಾಗಲಕಾಯಲ್ಲಿ ಫೋಲೇಟ್ಗಳು ಅಧಿಕವಾಗಿ ಇರುತ್ತವೆ. ಇವು ದೇಹದಲ್ಲಿನ ಹೊಸ ಕಣಗಳ ವೃದ್ಧಿಗೆ, ಗರ್ಭಸ್ಥ ಶಿಶುವಿನ ಬೆಳವಣಿಗೆಗೆ ಸಹಕಾರಿ.ಮಧುಮೇಹಿಗಳು: ಮಾಡಹಾಗಲಕಾಯಿ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.ಕ್ಯಾನ್ಸರ್ ರೋಗಿಗಳು: ಮಾಡಹಾಗಲದಲ್ಲಿ ಇರುವ ಫೈಟೋ ನ್ಯೂಟ್ರಿಯಂಟ್ಗಳು ಪಿತ್ತಜನಕಾಂಗ, ಸ್ನಾಯುಗಳ ಕಣಜಾಲಕ್ಕೆ ಶಕ್ತಿಯನ್ನು ನೀಡುತ್ತವೆ. ನಿತ್ಯ ತಿನ್ನುವುದರಿಂದ ಇದರಲ್ಲಿನ ಪೋಷಕಗಳು ದೇಹದಲ್ಲಿ ಉಂಟಾಗುವ ಕ್ಯಾನ್ಸರ್ ಕಾರಕಗಳನ್ನು ನಾಶಪಡಿಸುತ್ತವೆ.ಮಾಡಹಾಗಲದಲ್ಲಿನ ವಿಟಮಿನ್ ’ಸಿ’ ದೇಹವನ್ನು ಸೋಂಕುಗಳಿಂದ ಕಾಪಾಡುತ್ತದೆ.ಇದರಲ್ಲಿ ಫ್ಲವನಾಯಿಡ್ಸ್ ಸಮೃದ್ಧಿಯಾಗಿ ಲಭಿಸುತ್ತವೆ. ಇವು ಆಂಟಿ ಏಜಿಂಗ್ ಆಗಿ ಕೆಲಸ ಮಾಡುತ್ತವೆ. ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತವೆ.ಇದರಲ್ಲಿ ಲಭಿಸುವ ವಿಟಮಿನ್ ’ಎ’ ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸುತ್ತದೆ.ಮೂತ್ರಪಿಂಡ ಸಮಸ್ಯೆಯಿಂದ ಬಳಲುವವರು ಈ ತರಕಾರಿಗೆ ಎಷ್ಟು ಪ್ರಾಮುಖ್ಯತೆ ಕೊಟ್ಟರೆ ಅಷ್ಟು ಒಳ್ಳೆಯದು.ಜೀರ್ಣವ್ಯವಸ್ಥೆಯನ್ನು ಉತ್ತಮಪಡಿಸಲು ಇವು ಸಹಕಾರಿ.ಸ್ವಲ್ಪ ಕ್ಯಾಲೊರಿಗಳಿರುವ ಕಾರಣ ದಪ್ಪ ಆಗುತ್ತಾರೆಂಬ ಭಯ ಬೀಳಬೇಕಾಗಿಲ್ಲ.ಫೈಬರ್, ವಿಟಮಿನ್ಗಳು, ಆಂಟಿ ಆಕ್ಸಿಡೆಂಟ್ಗಳು ಅಧಿಕವಾಗಿ ಲಭಿಸುತ್ತವೆ.
---------------------------------------------------
*ಮೂತ್ರಪಿಂಡಗಳನ್ನು ಶುದ್ಧಿಕರಿಸುವ ದಿವ್ಯೌಷದ.ನೀವೆ ಮನೆಯಲ್ಲಿ ತಯಾರಿಸಿಕೊಳ್ಳಬಹುದು.*
ನಮ್ಮ ಶರೀರದಲ್ಲಿರುವ ವ್ಯರ್ಥ ಪದಾರ್ಥಗಳನ್ನು ಹೊರಹಾಕುವುದರಲ್ಲಿ ನಮ್ಮ ಕಿಡ್ನಿಗಳು (ಮೂತ್ರ ಪಿಂಡಗಳು) ಪ್ರಮುಖ ಪಾತ್ರ ವಹಿಸುತ್ತವೆ.ಶರೀರವು ಸಕ್ರಮವಾಗಿ ಕಾರ್ಯನಿರ್ವಹಿಸಬೇಕೆಂದರೆ,ಮೂತ್ರಪಿಂ ಡಗಳು ನಿರಂತರವಾಗಿ ಕೆಲಸಮಾಡುತ್ತಲೇ ಇರಬೇಕು.ಮೂತ್ರ ಪಿಂಡಗಳು ಪ್ರತಿದಿನವೂ ಲವಣಗಳು, ವಿಷಪದಾರ್ಥಗಳನ್ನು ಸೋಸಿ ದೇಹದಿಂದ ಹೊರದೂಡುತ್ತಿರುತ್ತವೆ.ಆದರೆ,ಕೆಳಗೆ ತಿಳಿಸಲಾದ ಒಂದು ಸಹಜ ಸಿದ್ಧವಾದ ಪಾನೀಯದಿಂದ ಕಿಡ್ನಿಗಳು ತ್ವರಿತವಾಗಿ ಶುಭ್ರಗೊಳ್ಳುತ್ತವೆ.ಆ ಪಾನೀಯವನ್ನು ತಯಾರಿಸವುದು ಹೇಗೆಂದು ತಿಳಿಯೋಣ.
1.ತಾಜಾ ಕೊತ್ತಂಬರಿ ಸೊಪ್ಪನ್ನು ತೊಳೆದು ಕತ್ತರಿಸಬೇಕು.
2.ಒಂದು ಪಾತ್ರೆಯಲ್ಲಿ ನೀರು ಹಾಕಿ ,ಅದರಲ್ಲಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸ್ವಲ್ಪಹೊತ್ತು ನೆನೆಸಿಡಬೇಕು.ನಂತರ 10 ನಿಮಿಷಗಳಕಾಲ ಕುದಿಸಬೇಕು.
3.ಪಾತ್ರೆಯನ್ನು ಸ್ಟೌ ನಿಂದ ಕೆಳಗಿಳಿಸಿ, ಮುಚ್ಚಳದಿಂದ ಮುಚ್ಚಿ ಆರಲು ಬಿಡಬೇಕು.
4.ದ್ರವ ತಣ್ಣಗಾದ ಮೇಲೆ ,ಒಂದು ಶುಭ್ರವಾದ ಬಟ್ಟೆಯಿಂದ ಸೋಸಿಕೊಂಡು,ಫ್ರಿಡ್ಜ್ ನಲ್ಲಿಟ್ಟುಕೊಳ್ಳಬೇಕು.
5. ದಿನಕ್ಕೆ ಒಂದು ಲೋಟದಂತೆ ,ತಿಂಗಳಲ್ಲಿ ಎರಡು ಬಾರಿ ಈ ಪಾನೀಯವನ್ನು ಸೇವಿಸಬೇಕು.ಇದನ್ನು ಕುಡಿದನಂತರ,ಶರೀರದಲ್ಲಿರುವ ಕಲ್ಮಶಗಳು ಹೊರಹೋಗುವುದರಿಂದ ಮೂತ್ರದ ಬಣ್ಣ ಬದಲಾಗುತ್ತದೆ. ಈ ಪಾನೀಯದ ಒಟ್ಟಿಗೆ ಪ್ರತಿ ದಿನವೂ ಸಾಧ್ಯವಾದಷ್ಟು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ಅಧಿಕ ಲಾಭವಾಗುತ್ತದೆ.
6.ಮಹಿಳೆಯರಿಗೆ ಋತು ಸಮಯದಲ್ಲಿ ಉಂಟಾಗುವ ನೋವುಗಳನ್ನು ಈ ಪಾನಿಯ ನಿವಾರಿಸುತ್ತದೆ.
ಆದರೆ,ಮೂತ್ರ ಪಿಂಡದಲ್ಲಿ ಕಲ್ಲುಗಳಿರುವವರು ಈ ಪಾನೀಯವನ್ನು ಸೇವಿಸಬಾರದು. ಏಕೆಂದರೆ ಈ ಪಾನೀಯವನ್ನು ಸೇವಿಸುವುದರಿಂದ ಇತರೆ ಸಮಸ್ಯೆಗಳು ತಲೆದೋರಬಹುದು.
ಗರ್ಭಿಣಿ ಸ್ತ್ರೀಯರು ಈ ಪಾನೀಯವನ್ನು ಸೇವಿಸಬೇಕಾದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು.
[29/09 2:38 PM] +91 94498 28225: *ಮಂಡಿನೋವು, ಕೀಲುನೋವು ಇರುವವರಿಗೆ ತರಕಾರಿ ರಸ*
ವಿಧ ವಿಧ ಸಮಸ್ಯೆಗಳಿಗೆ ವಿಭಿನ್ನ ತರಕಾರಿ ರಸ ತಯಾರಿಸಿಕೊಳ್ಳುವುದು ಹೇಗೆ ಎಂಬ ವಿಷಯದ ಬಗ್ಗೆ ಕಳೆದ ಸಂಚಿಕೆಯಿಂದ ತಿಳಿಯಲು ಪ್ರಾರಂಭಿಸಿದ್ದೇವೆ. ಈಗ ನಾವು ಮಂಡಿನೋವು, ಕೀಲುನೋವಿನವರಿಗಾಗಿ ತಯಾರಿ ಹೇಗೆ ಎಂಬುದನ್ನು ತಿಳಿಯೋಣ.
ಮಂಡಿನೋವು ಮತ್ತು ಕೀಲುನೋವಿನ ಸಮಸ್ಯೆಯಿಂದ ಬಳಲುವವರು ಉಪ್ಪನ್ನು ಜಸ್ತಿ ತಿನ್ನುತ್ತಿದ್ದು ನೀರು ಕಡಿಮೆ ಕುಡಿಯುತ್ತಿರುತ್ತಾರೆ ಅಥವಾ ಭಾರವಾದ ವಸ್ತುಗಳನ್ನು ಹೊರುತ್ತಿರುತ್ತಾರೆ ಅಥವಾ ಮಂಡಿ ಮತ್ತು ಕೀಲುಗಳನ್ನು ಅವಶ್ಯಕ್ಕಿಂತ ಜಸ್ತಿ ಬಳಸುತ್ತಿರುತ್ತಾರೆ. ಉದಾಹರಣೆಗೆ ಫುಟ್ಬಾಲ್ ಮತ್ತು ಕ್ರಿಕೆಟ್ ಆಟಗಾರರು. ಇವರಿಗೆ ಈ ರಸ ವರದಾನ.
ತಯಾರಿ ಹೇಗೆ?
ಒಬ್ಬರಿಗೆ ಬೇಕಾಗುವ ತರಕಾರಿ: ಸೋರೆಕಾಯಿ-50 ಗ್ರಾಂ; ಸೌತೆಕಾಯಿ-100 ಗ್ರಾಂ; ಕ್ಯಾರಟ್-150 ಗ್ರಾಂ; ಪಾಲಕ್ಸೊಪ್ಪು-2 ಹಿಡಿಯಷ್ಟು; ಕೊತ್ತಂಬರಿಸೊಪ್ಪು-2 ಹಿಡಿಯಷ್ಟು; ಕರಿಬೇವು-3 ಹಿಡಿಯಷ್ಟು; ತುಳಸಿ ಎಲೆ-12, ಅಮೃತಬಳ್ಳಿ ಎಲೆ-4, ಲೋಳೇಸರ (ಅಲೊವೆರಾ)-5 ಗ್ರಾಂ; ಬೆಟ್ಟದ ನೆಲ್ಲಿಕಾಯಿ-1.
ತಯಾರಿಸುವ ವಿಧಾನ: ಲೋಳೆಸರದೊಳಗಿನ ಲೋಳೆಯನ್ನು 5 ಗ್ರಾಂನಷ್ಟು ತೆಗೆದು ಚಿಕ್ಕದಾಗಿ ಕತ್ತರಿಸಿ ಲೋಟಕ್ಕೆ ಸುರಿದುಕೊಳ್ಳಿ. ಬೆಟ್ಟದ ನೆಲ್ಲಿಕಾಯಿಯನ್ನು ತುರಿದು ಕೈಯಿಂದ ಹಿಂಡಿ ರಸವನ್ನು ಈ ಲೋಟಕ್ಕೆ ಬೆರೆಸಿ. ಸೋರೆಕಾಯಿ, ಸೌತೆಕಾಯಿ, ಕ್ಯಾರಟ್, ಸೊಪ್ಪು ಮತ್ತು ಇತರೆ ಎಲೆಗಳನ್ನು ಹುಣಸೆನೀರಿನಲ್ಲಿ 10 ನಿಮಿಷ ತೊಳೆದು ಚಿಕ್ಕದಾಗಿ ಕತ್ತರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಲೋಟಕ್ಕೆ ಸೋಸಬೇಕು. ಈಗ ಎಲ್ಲವನ್ನು ಚಮಚದಿಂದ ಚೆನ್ನಾಗಿ ಕಲೆಸಿ ತುಂಬ ನಿಧಾನವಾಗಿ ಚಪ್ಪರಿಸುತ್ತಾ 10 ನಿಮಿಷ ಕುಳಿತೇ ಕುಡಿಯಿರಿ. ಹೆಚ್ಚಿನ ಲಾಲಾರಸದೊಂದಿಗೆ ಸೇವಿಸಿದರೆ ಹೆಚ್ಚು ಲಾಭ ಇಲ್ಲದಿದ್ದರೆ ಲಾಭ ಅಷ್ಟಕ್ಕಷ್ಟೆ.
ಈ ರಸವನ್ನು ಬೆಳಿಗ್ಗೆ ತಿಂಡಿಗಿಂತ ಒಂದು ಗಂಟೆ ಮುಂಚೆ ಮತ್ತು ಸಂಜೆ ಊಟಕ್ಕಿಂತ ಒಂದೂವರೆ ಗಂಟೆ ಮುಂಚೆ ಅಂದರೆ 4 ರಿಂದ 5 ಗಂಟೆಯ ಒಳಗೆ ಸೇವಿಸುವುದೊಳಿತು. ಪ್ರತಿಬಾರಿಯೂ ತಾಜ ತಯಾರಿಸಿಕೊಂಡು ತಕ್ಷಣವೇ ಸೇವಿಸಿ.
ಸೂಚನೆ: ಇದನ್ನು ಸೇವಿಸುತ್ತಿರುವ ದಿನಗಳಲ್ಲಿ ಮಂಡಿಗೆ ಅಥವಾ ಕೀಲಿಗೆ ಎಳ್ಳೆಣ್ಣೆ ಅಥವಾ ತೇಜಸ್ ತೈಲಮ್ (ಪತಂಜಲಿ ಉತ್ಪನ್ನ) ಸವರಿ 10 ನಿಮಿಷ ಮಾಲೀಶ್ ಮಾಡಿಕೊಂಡು ಬಿಸಿನೀರು ಮತ್ತು ತಣ್ಣೀರ್ನು ಒಂದಾದ ಮೇಲೊಂದರಂತೆ ನೋವಿರುವ ಜಗದ ಮೇಲೆ 10 ನಿಮಿಷಗಳ ಕಾಲ ಹೊಯ್ಯತ್ತಿರಿ. ಅಥವಾ ಹತ್ತಿಬಟ್ಟೆಯಿಂದಲೂ ಅದ್ದಿ ಶಾಖ ಕೊಡಬಹುದು. ನಂತರ ಅದನ್ನು ಒರೆಸಿ ಬಾಡಿ ಉಬ್ಟನ್ ಪುಡಿ (ಪತಂಜಲಿ ಉತ್ಪನ್ನ) ಸ್ವಲ್ಪ ತೆಗೆದುಕೊಂಡು ದೋಸೆ ಹಿಟ್ಟಿನ ಹದ ಕಲೆಸಿ ಆ ಜಗಕ್ಕೆ ಹಚ್ಚಿ ಒಣಬಟ್ಟೆ ಸುತ್ತಿಬಿಡಿ. ಒಂದು ಗಂಟೆಯ ನಂತರ ಬಿಸಿನೀರಿನಿಂದ ತೊಳೆಯಿರಿ. ಮೇಲಿನ ರಸ ಸೇವನೆಯ ಜೊತೆಗೆ ಇದೂ ಅವಶ್ಯಕ.
ಆಹಾರ ನಿಯಮ
ಸಮಯಕ್ಕೆ ಸರಿಯಾಗಿ ಊಟ ಮಾಡಿ. ಆ ಸಮಯಕ್ಕೆ ಹಸಿವಾಗುವಂತೆ ಹಿಂದಿನ ಆಹಾರದ ಪ್ರಮಾಣವಿರಲಿ. ನೀವು 3 ರೊಟ್ಟಿ ತಿನ್ನುವಿರಾದರೆ 2ಕ್ಕೇ ನಿಲ್ಲಿಸಿ. ನಿಮಗೆ ಹೊಟ್ಟೆ ಅರ್ಧ ತುಂಬಿರುವಾಗ ಮೆದುಳಿನಿಂದ ನಿಮಗೆ ಸೂಚನೆ ಬರುತ್ತದೆ. ಆಗ ನೀವು ಮಜ್ಜಿಗೆಯೊಂದಿಗೆ ನಿಮ್ಮ ಊಟ ಮುಗಿಸಿಬಿಡಿ.
ಏನು ತಿನ್ನಬೇಕು?
ಮಂಡಿ ಅಥವಾ ಕೀಲುನೋವು ಇರುವವರಿಗೆ ನವಣೆ ಮತ್ತು ಕೊರಲೆ ಅಕ್ಕಿಗಳು ಸಂಪೂರ್ಣ ವಾಸಿಯಾಗಲು ಸಹಕರಿಸುವುದು. ಹಾಗಾಗಿ ಕನಿಷ್ಠ ಒಂದು ಬಾರಿಯಾದರೂ ಇವುಗಳಿಂದ ಆಹಾರ ತಯಾರಿಸಿಕೊಂಡು ತಿನ್ನಿ. ಆದರೆ ಎಚ್ಚರವಿರಲಿ ಸ್ವಲ್ಪವೇ ತಿನ್ನಬೇಕು ಮತ್ತು ಸಮುದ್ರಲವಣವನ್ನು ಅತ್ಯಂತ ಕಡಿಮೆ ಬಳಸಬೇಕು. ನೋವು ಮಾಯವಾಗುವವರೆಗೆ ಉಪ್ಪು ನಿಲ್ಲಿಸಿದರೆ ಉತ್ತಮ. ಎಣ್ಣೆಯನ್ನು ಒಗ್ಗರಣೆ ಕೊಡಲೂ ಬಳಸಬಾರದು. ಆದರೆ ನಮ್ಮ ದೇಹಕ್ಕೆ ಎಣ್ಣೆಯ ಅವಶ್ಯಕತೆಯಿರುವುದರಿಂದ ಪ್ರಾಕೃತಿಕ ರೂಪದಲ್ಲಿ ಉಪಯೋಗಿಸಬೇಕು. ಇದಕ್ಕಾಗಿ ಹಸಿಕೊಬ್ರಿತುರಿ / ಕರಿಎಳ್ಳಿನಪುಡಿ / ಶೇಂಗಾಪುಡಿಯನ್ನು ಉಪಯೋಗಿಸಬಹುದು. ಎರಡನೇ ಬಾರಿ ಆಹಾರ ಸೇವಿಸುವಾಗ ರಾಗಿ ಅಥವಾ ಹಾರಕ ಅಥವಾ ಸಾಮೆ ಅಥವಾ ಊದಲುವಿನಿಂದ ತಯಾರಿಸಿಕೊಳ್ಳಿ.
ನೀರು ಕುಡಿಯುವ ವಿಧಾನ
ಬೆಳಿಗ್ಗೆ ಎದ್ದ ತಕ್ಷಣ 3 ಲೋಟ ಉಗುರುಬೆಚ್ಚಗಿನ ನೀರು ಕುಡಿಯಿರಿ. ನಂತರ ಯೋಗ, ಧ್ಯಾನ, ಕಪಾಲಭಾತಿ ಪ್ರಾಣಾಯಾಮ ಅಭ್ಯಸಿಸಿ. ಮಂಡಿ ಬಿಗಿ ಮತ್ತು ಸಡಿಲಗೊಳಿಸುವ ವ್ಯಾಯಾಮ ಮಾಡಿ. ಇದಕ್ಕಾಗಿ ನಮ್ಮ ಸಂಸ್ಥೆ ಪ್ರಕಟಿಸಿದ ‘ಪ್ರಾಣಾಯಾಮ ಹಾಗೂ ಸರಳ ಯೋಗಾಸನಗಳು’ ಎಂಬ ಪುಸ್ತಕವನ್ನು ನೀವು ಆಶ್ರಯಿಸಬಹುದು. ಮೊದಲ ಬಾರಿ ನೀರು ಕುಡಿದು ಸುಮಾರು ಒಂದೂವರೆ ಗಂಟೆ ಆದ ಬಳಿಕ ಪುನಃ 2 ರಿಂದ 3 ಲೋಟ ನೀರು ಕುಡಿಯಿರಿ. ಒಟ್ಟಿನಲ್ಲಿ ದಿನದಲ್ಲಿ 3 ಲೀಟರ್ ನೀರು ಕುಡಿದಿರಬೇಕು. ಊಟ ಮಾಡುವಾಗ ನೀರು ಕುಡಿಯಬೇಡಿ. ಒಂದೂವರೆ ಗಂಟೆಯ ಬಳಿಕ ಕುಡಿಯಿರಿ. ನಿಮ್ಮ ತೂಕ ಜಸ್ತಿಯಿದ್ದ ಪಕ್ಷದಲ್ಲಿ ಒಂದು ಕೇಜಿ ತೂಕಕ್ಕೆ 50 ಮಿ.ಲೀ.ನಂತೆ ನೀರು ಸೇವಿಸಿ.
ಹೀಗೆ ಅನುಸರಿಸಿದರೆ ನಿಮಗೆ 3 ರಿಂದ 4 ವಾರ ಗಳಲ್ಲಿ ನಿಮ್ಮ ಮಂಡಿ ಅಥವಾ ಕೀಲುನೋವು ಮಾಯವಾಗಲು ತೊಡಗುವುದು. ತುಂಬ ಹಳೆಯ ನೋವಾಗಿದ್ದಲ್ಲಿ ವಾಸಿಯಾಗಲು ಇನ್ನು ಕೆಲವು ವಾರಗಳು ಬೇಕಾಗಬಹುದು. ಖಂಡಿತ ಈ ಚಿಕಿತ್ಸೆಯು ತುಂಬ ಪರಿಣಾಮಕಾರಿಯಾಗಿದೆ. ಎಷ್ಟೋ ಜನರ ಮೇಲೆ ಪ್ರಯೋಗಿಸಲಾಗಿದೆ. ನೀವೂ ಪ್ರಯತ್ನಿಸಿ, ಲಾಭ ಪಡೆಯಿರಿ ಮತ್ತು ನಾಲ್ಕಾರು ಜನರಿಗೆ ತಿಳಿಸುವ ಮಹದುಪಕಾರ ಮಾಡಿ. ಅಧ್ಯಾತ್ಮ ಎಂದರೆ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದು ಮತ್ತು ಇನ್ನೊಬ್ಬರ ಒಳಿತು ಬಯಸುವುದೇ ಆಗಿದೆ.
ಇಲ್ಲಿ ತರಕಾರಿ ಮತ್ತು ಸೊಪ್ಪುಗಳ ಒಂದು ಅಂದಾಜಿನ ಪ್ರಮಾಣ ಕೊಡಲಾಗಿದೆ ಅಷ್ಟೆ. ನೀವು ಇಲ್ಲಿ ಕೊಟ್ಟಿರುವ ತರಕಾರಿಯನ್ನು ನಿಮ್ಮ ದೇಹದ ಅವಶ್ಯಕತೆಗನುಗುಣವಾಗಿ ವಿಭಿನ್ನ ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಸಾವಯವ ತರಕಾರಿ ಆದರೆ ಒಳ್ಳೆಯದು. ಪ್ರಮಾಣ: ಒಂದು ಬಾರಿಗೆ ಸುಮಾರು 200 ಮಿ.ಲೀ. ರಸ ಸೇವಿಸಿ.
-----------------------------------------------------------
*ಆರೋಗ್ಯಭಾಗ್ಯ :* ಮಧುಮೇಹ
ಸಕ್ಕರೆ ರೋಗವನ್ನು ಹೇಗೆ ನಿಯಂತ್ರಿಸಬಹುದು: ಪ್ರಮುಖವಾದ 5 ದಾರಿಗಳು
By: Anuradha Yogesh
ಭಾರತ ದೇಶವು 'ಸಕ್ಕರೆ ರೋಗದ ದೇಶ' ಎಂದು ಕರೆಸಿಕೊಳ್ಳುವ ಮಟ್ಟಿಗೆ ಸಕ್ಕರೆ ರೋಗಿಗಳನ್ನು ಹೊಂದಿದೆ. ಸುಮಾರು 5 ಕೋಟಿ ಜನ ಸಕ್ಕರೆ ರೋಗಿಗಳು ಇದ್ದರೆ, 2025 ರ ಹೊತ್ತಿಗೆ ಈ ಸಂಖ್ಯೆ ಇನ್ನೂ ಮೂರು ಕೋಟಿ ಹೆಚ್ಚಾಗಬಹುದು.
ಆದರೆ ಈ ಅಂಕಿಅಂಶಗಳು ಈ ರೋಗವು ರೋಗಿಯನ್ನು ಹೇಗೆ ನಿಧಾನವಾಗಿ ಮರಣದ ಶಯ್ಯೆಯ ಕಡೆಗೊಯ್ಯುವದು ಎಂದು ಹೇಳುವದಿಲ್ಲ. ನಿಮ್ಮ ಜೀವನದಲ್ಲಿ ಈ ರೋಗ ನಿಯಂತ್ರಣಕ್ಕೆ ಸಹಾಯಕವಾಗುವ 5 ದಾರಿಗಳು ಹೀಗಿವೆ...
ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳಬೇಕು
ಮಾನವರ ದೇಹ ಬಹಳ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಹೊಂದಿದೆ. ಕಡಿಮೆ ಆಹಾರ ಸೇವಿಸಿದರೆ, ಇನ್ನೂ ಜಾಸ್ತಿ ಶೇಖರಣೆಗೆ ಅನುಕೂಲ ಮಾಡಿಕೊಳ್ಳುತ್ತದೆ. ಅವಶ್ಯಕತೆಗಿಂತ ಜಾಸ್ತಿ ತಿಂದರೆ ದೇಹದ ಎಲ್ಲಾ ಕಡೆಗೆ ಸಮನಾಗಿ ಹಂಚುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ ಈ ವ್ಯವಸ್ಥೆ ಸರಿಯಾಗಿ ಚಾಲನೆಯಲ್ಲಿರುತ್ತದೆ. ಆದರೆ, ಸಕ್ಕರೆ ರೋಗಿಗಳ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚು-ಕಡಿಮೆ ಆಗಿ, ಹೈಪೊಗ್ಲೈಸೆಮಿಕ್ ಆಘಾತವಾಗಬಹುದು. ಆದ್ದರಿಂದ ರೋಗಿಗಳು ಆಹಾರದ ದಿನಚರಿಯನ್ನು ಸರಿಯಾಗಿ ಪಾಲಿಸುವದಲ್ಲದೆ, ದಿನವಿಡೀ ಸಮಯಕ್ಕೆ ಸರಿಯಾಗಿ ಸ್ವಲ್ಪ ಸ್ವಲ್ಪವೇ ಆಹಾರ ಸೇವಿಸಬೇಕು.
ಪುರುಷರಿಗೆ 'ಮಧುಮೇಹ' ಬಂದರೆ ಬಲು ಡೇಂಜರ್! ಯಾಕೆಂದರೆ...
ಆಹಾರದಲ್ಲಿ ನಾರಿನ ಅಂಶವನ್ನು ಹೆಚ್ಚಿಸಬೇಕು
ಬ್ರೌನ್ ರೈಸ್, ತರಕಾರಿ, ಹಣ್ಣಿನ ಬೀಜ, ಸಿಪ್ಪೆಗಳಲ್ಲಿರುವ ಕರಗಲಾರದ ನಾರಿನಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸೇಬು, ಓಟ್ಸ್, ಒಣಹಣ್ಣುಗಳಲ್ಲಿ ಕಂಡುಬರುವ ಕರಗಬಹುದಾದ ನಾರಿನ ಅಂಶ ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಅಂಶಗಳನ್ನು ನಿಯಂತ್ರಿಸುತ್ತದೆ. ನಾರಿನಂಶವು ಬೇಗನೆ ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ, ಇದರಿಂದ ಸಕ್ಕರೆ ರೋಗಕ್ಕೆ ಪ್ರಮುಖ ಕಾರಣವಾದ ಅನವಶ್ಯಕ ಆಹಾರ ಸೇವನೆ ನಿಯಂತ್ರಣಕ್ಕೆ ಬರುತ್ತದೆ.
ಬೆಳಗಿನ ಉಪಹಾರ ಚೆನ್ನಾಗಿ ತಿಂದು, ರಾತ್ರಿಯ ಊಟ ಹಿತಮಿತವಾಗಿ ಮಾಡಬೇಕು:
'ಉಪಹಾರ ರಾಜನಂತೆ, ಮಧ್ಯಾಹ್ನದ ಊಟ ಸಾಮಾನ್ಯ ವ್ಯಕ್ತಿಯಂತೆ, ರಾತ್ರಿ ಊಟ ಭಿಕ್ಷುಕನಂತೆ ಮಾಡಬೇಕು' ಎಂಬ ಪ್ರಸಿದ್ಧ ನಾಣ್ಣುಡಿಯೇ ಇದೆ. ಈ ಮಾತು ಎಲ್ಲರಿಗೂ ಅನ್ವಯಿಸುತ್ತದೆ, ಮುಖ್ಯವಾಗಿ ಟೈಪ್-೨ ಸಕ್ಕರೆ ರೋಗ ಇರುವವರಿಗೆ. ಸುಮಾರು ಅಧ್ಯಯನಗಳ ಪ್ರಕಾರ ಪ್ರೋಟೀನ್ ಭರಿತ ಆದರೆ ಕಡಿಮೆ ಕಾರ್ಬೋಹೈಡ್ರೇಟ್ ಇರುವ ಆಹಾರ ಮತ್ತು ಮಿತವಾದ ರಾತ್ರಿಯ ಭೋಜನ ಆಹಾರದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಇದು ನಿಯಂತ್ರಿಸುವದಲ್ಲದೆ, ಉತ್ತಮವಾದ ಜೀವನಶೈಲಿಯನ್ನು ಒದಗಿಸುತ್ತದೆ.
ಪ್ರತಿದಿನ ತಪ್ಪದೆ ವ್ಯಾಯಾಮ ಮಾಡಬೇಕು
ಇದು ಸಕ್ಕರೆ ರೋಗ ನಿಯಂತ್ರಣಕ್ಕೆ ಅತಿ ಪ್ರಮುಖವಾದ ದಾರಿ. ಮೊದಲನೆಯದೆಂದರೆ, ಆರೋಗ್ಯ ಸುಧಾರಿಸುತ್ತದೆ ಮತ್ತು ಸಕ್ಕರೆ ರೋಗಕ್ಕೆ ಮುಖ್ಯ ಕಾರಣವಾದ ಬೊಜ್ಜನ್ನು ನಿಯಂತ್ರಿಸುತ್ತದೆ.
ಎರಡನೆಯದಾಗಿ, ಸಕ್ಕರೆ ರೋಗದಿಂದ ನಿಧಾನವಾಗಿ ಕಾಣಿಸಿಕೊಳ್ಳುವ ಅಡ್ಡಪರಿಣಾಮಗಳನ್ನು ನಿಯಂತ್ರಿಸುತ್ತದೆ.ಆದ್ದರಿಂದ, ತಪ್ಪದೆ ಕನಿಷ್ಠ 3೦ ನಿಮಿಷದ ವ್ಯಾಯಮ ಮಾಡಲೇಬೇಕು. ಉದ್ಯಾನವನದಲ್ಲಿ ಕೇವಲ ಬಿರುಸಾದ ನಡಿಗೆಯಾದರೂ ತೊಂದರೆಯಿಲ್ಲ.
ಆರೋಗ್ಯಕರವಾದ ಕೊಬ್ಬಿನಂಶವಿರುವ ಆಹಾರ ಮತ್ತು ಹಣ್ಣುಗಳನ್ನು ತಿನ್ನಬೇಕು
ಸಕ್ಕರೆ ರೋಗಕ್ಕೆ ಸಮತೋಲಿತ ಆಹಾರ ಅತಿಮುಖ್ಯ, ಆದರೆ ಸ್ವಲ್ಪ ಸಣ್ಣ ಪುಟ್ಟ ಬದಲಾವಣೆ ಅಗತ್ಯವಾಗಿದೆ. ಅಸಂಕೀರ್ಣ ಕಾರ್ಬೋಹೈಡ್ರೇಟ್ ಗಳಾದ ಮೈದಾ ಬ್ರೆಡ್, ಅನ್ನ, ಆಲೂಗಡ್ಡೆಗಳನ್ನು ತ್ಯಜಿಸಬೇಕು. ಸಂಕೀರ್ಣ ಆಹಾರಗಳದ ಸಂಪೂರ್ಣ ಗೋಧಿ ಧಾನ್ಯಗಳು, ಬೇಳೆ, ಕಾಳುಗಳ ಸೇವನೆಯನ್ನು ಆಹಾರದಲ್ಲಿ ಅಳವಡಿಸಿಕೊಳ್ಳಬೇಕು. ಅಷ್ಟೆ ಅಲ್ಲದೆ, ಆಹಾರದಲ್ಲಿ ಕಡಿಮೆ ಕೊಬ್ಬಿನಂಶವಿರುವ ಪ್ರೋಟೀನ್(ಚೀಸ್, ಮೊಟ್ಟೆ,ಮೊಸರು,ಸೊಯಾ),ಆರೋಗ್ಯಕರವಾದ ಕೊಬ್ಬಿನಂಶವಿರುವ ಅವಕಡೊ,ಒಣಹಣ್ಣುಗಳು,ಹೆಚ್ಚು ನಾರಿನಂಶವಿರುವ ತರಕಾರಿ,ಹಣ್ಣುಗಳನ್ನು(ಬ್ರೊಕೋಲಿ,ಬೆ ರ್ರಿಹಣ್ಣುಗಳು) ಸೇವಿಸಬೇಕು. ಆದರೆ ಕಿತ್ತಳೆ, ಮಾವು ಹಾಗು ಕಲ್ಲಂಗಡಿಯಂತಹ ಸಕ್ಕರೆ ಅಂಶ ಭರಿತ ಹಣ್ಣುಗಳ ಸೇವನೆ ವ್ಯರ್ಜ್ಯವಾಗಿದೆ.
ಮಧುಮೇಹ ನಿಯಂತ್ರಣಕ್ಕೆ, ಪ್ರಯತ್ನಿಸಿ ನೈಸರ್ಗಿಕ ಆಹಾರಗಳು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ