ಶನಿವಾರ, ಸೆಪ್ಟೆಂಬರ್ 30, 2017

ನನ್ನ ಭಾರತ ಶ್ರೇಷ್ಠ ಭಾರತ..

ನನ್ನ ಭಾರತದ ಕಿರು ಪರಿಚಯ 

ಬಟ್ಟೆ ಹಾಕಿಕೊಳ್ಳಲು ಗೊತ್ತಿಲ್ಲದವರಿಗೆ, ಬಟ್ಟೆ ಹಾಕುವದನ್ನು ಕಲಿಸಿದವರು ನಮ್ಮ ಪೂರ್ವ ಭಾರತೀಯರು ಅರ್ಥಾತ್ ಸಂಸ್ಕೃತ ಪಂಡಿತರು, 

ಗಣಿತವನ್ನು ಅರಿದು ಕುಡಿದವರು ಹಾಗೂ ಇಡೀ ಜಗತ್ತಿಗೆ ಗಣಿತವನ್ನು ಕಲಿಸಿದವರು ಸಂಸ್ಕೃತ ಪಂಡಿತರು.

ಜಗತ್ತಿಗೆ ಸೊನ್ನೆ ಕೊಟ್ಟವರು ನಮ್ಮ ಸಂಸ್ಕೃತ ಪಂಡಿತರೇ.

೧೦,೦೦೦ ವರ್ಷಗಳ ಹಿಂದೆಯೇ ನಮ್ಮ ಸಂಸ್ಕೃತ ಪಂಡಿತರು ಭೂಮಿ ಗೋಲಾಕಾರದಲ್ಲಿದೆ ಎಂದು ಹೇಳಿದ್ದರು...ಏಕೆಂದರೆ #ಭೂಗೋಳ ಎಂದೆ ನಾವು ಕರೆಯುತ್ತೇವೆ ಭೂಮಿ ಗೋಳಾಕಾರದಲ್ಲಿದ್ದದ್ದರಿಂದ ಭೂಗೋಳ ಎಂದು ನಮ್ಮ ಸಂಸ್ಕೃತ ಪಂಡಿತರು ಆವಾಗಲೇ 
ಹೆಸರಿಸಿದ್ದಾರೆ. 

Civilization ಆದ ನಂತರ ವಿದೇಶಿಯರು telescope ಮುಖಾಂತರ ಒಂಭತ್ತು ಗ್ರಹಗಳಿವೆ ಎಂದು ಹೆಸರಿಸಿದರೆ, ನಮ್ಮ ಸಂಸ್ಕೃತ ಪಂಡಿತರು ೧೦,೦೦೦ ವರ್ಷಗಳ ಹಿಂದೆಯೆ # ನವಗ್ರಹ ಎಂದು ಹೆಸರಿಸಿದ್ದಾರೆ. ಅಷ್ಟೇ ಅಲ್ಲ,  ಈ  ಗ್ರಹಗಳ  ಗಾತ್ರ,  ತೂಕ,  ವೇಗ  ಇತ್ಯಾದಿಗಳನ್ನೆಲ್ಲಾ  ನಿರೂಪಿಸಿದ್ದಾರೆ. 

ವಿದೇಶಿಯರು trigonometry ಎಂದು ಗಣಿತದಲ್ಲಿ ಹೇಳಿದರೆ, ನಮ್ಮ ಸಂಸ್ಕೃತ ಪಂಡಿತರು #ತ್ರಿಕೋಣಮಿತಿ ಎಂದು ಏಳು-ಎಂಟನೇ ಶತಮಾನದಲ್ಲಿ ಹೇಳಿದ್ದಾರೆ.

ವೇಳೆ ಹೇಳಲು ಬರದ ವಿದೇಶೀಯರಿಗೆ ವೇಳೆ ಹೇಗೆ ಹೇಳಬೇಕು ಎಂದು ಕಲಿಸಿಕೊಟ್ಟವರು ನಮ್ಮ ಸಂಸ್ಕೃತ ಪಂಡಿತರು.
ಓರಿಸ್ಸಾದ ಕೋನಾರ್ಕ್ ಮಂದಿರಕ್ಕೆ ಅಂಟಿಕೊಂಡಂತಹ ೨೪ ಚಕ್ರಗಳನ್ನು ನೋಡಿ ಈಗಲೂ ಪ್ರಖರವಾಗಿ ವೇಳೆ ಹೇಳುವರು.

Live show ಎಂದು ೧೦೦ ವರ್ಷದಿಂದ ವಿದೇಶಿಯರು ಹೇಳುತ್ತ ಬರುತ್ತಿದ್ದರೆ, ನಮ್ಮ ಸಂಸ್ಕೃತಿಯಲ್ಲಿ ಹೇಳಲಾಗಿರುವ ಪ್ರಕಾರ ಮಹಾಭಾರತದಲ್ಲಿ ಈ LIVE SHOW ಪ್ರಮಾಣವಾಗಿದೆ.ಮಹಾಭಾರತದ ಯುದ್ಧವನ್ನು ಕುಳಿತಲ್ಲಿಯೇ ಸಂಜಯನು ಕುರುಡ ಧೃತರಾಷ್ಟ್ರನಿಗೆ ಕಾಮೆಂಟ್ರಿ ಹೇಳ್ತಾನೆ. ಇದು ಸಂಸ್ಕೃತ ಮಾತನಾಡುವ ಕಾಲದಲ್ಲಿಯೇ.

ಈಗಿನ ಕಾರ್ಖಾನೆಯಲ್ಲಿ zinc ಅದಿರು ಪ್ರಮುಖವಾದ ಪಾತ್ರವನ್ನು ವಹಿಸಿದೆ ,ಏಕೆಂದರೆ zinc ಬಳಸಿ galvanizing ಮಾಡಿದರೆ steel productಗಳು ತುಕ್ಕು ಹಿಡಿಯುವದಿಲ್ಲ.....ಉದಾಹರಣೆಗೆ steel ವಿದ್ಯುತ್ ಕಂಬಗಳನ್ನು ನೋಡಿ, silver ಬಣ್ಣದಲ್ಲಿರುತ್ತವೆ,ಕಾರಣ zinc ಉಪಯೋಗ ಮಾಡಿರುತ್ತಾರೆ....
ಆ zinc ಹೇಗೆ mining ಮಾಡಿಬತೆಗೆದುಕೊಳ್ಳಬೇಕೆಂಬ ಪದ್ಧತಿ ಮೊದಲು ಭಾರತೀಯರೇ ಕಂಡುಹಿಡಿದದ್ದು....ಪುರಾವೆ ಇದೆ....ಕೊಲ್ಲೂರಿನಲ್ಲಿ ದೇವಸ್ಥಾನದ ಮುಂದೆ ಈಗಲೂ ೭೫೦ft. ಉಕ್ಕಿನ ಕಂಬವೊಂದನ್ನು ನೆಡಲಾಗಿದೆ. Carbon testing ಪ್ರಕಾರ ಆ ಕಂಬ ೧೫೦೦ ವರ್ಷಗಳ ಹಿಂದೆ ನೆಡಲಾಗಿದೆ..

ವಿದೇಶೀಯರಿಗೆ ಬಂಗಾರ ಎಂದರೆ ಏನು ವಜ್ರ ಎಂದರೇನು ಎಂಬ ತಿಳುವಳಿಕೆ ಇಲ್ಲದೇ ಇರತಕ್ಕಂತಹ ಕಾಲದಲ್ಲಿ ಬಂಗಾರದ ಒಡವೆ ಮಾಡಿಸಿ ದೇವರಿಗೆ ಸಮರ್ಪಿಸುವದು ಅಷ್ಟೆ ಅಲ್ಲ ನಮ್ಮ ಮಹಿಳೆಯರು ಆಭರಣಗಳನ್ನು ಮಾಡಿಸಿ ತೊಡುತ್ತಿದ್ದರು.....

ಜಗತ್ತಿನಲ್ಲಿ ಅತೀ ಪುರಾತನ ಭಾಷೆಯ ಪಟ್ಟಿಯಲ್ಲಿ ಸಂಸ್ಕೃತ ಭಾಷೆ ಮೊಟ್ಟ ಮೊದಲದ್ದಾಗಿದೆ...
ನೆನಪಿರಲಿ ಕನ್ನಡ ಭಾಷೆ ಮೂರನೇಯದ್ದಾಗಿದೆ.

ಈಗೀಗ ವಿದೇಶಿಯರು ಯೋಗಾಸನದತ್ತ ಮುಖಮಾಡಿದ್ದಾರೆ....ಎಷ್ಟೋ ಸಾವಿರ ವರ್ಷಗಳ ಹಿಂದೆಯೇ ಸಂಸ್ಕೃತ ಪಂಡಿತರು ಯೋಗಾಸನವನ್ನು ಹೇಳಿಕೊಟ್ಟಿದ್ದಾರೆ....ವಿಶ್ವಾಮಿತ್ರರು ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದ ಭಂಗಿಗೆ ವಿಶ್ವಾಮಿತ್ರ ಆಸನ ಎಂದು ಹೇಳುವರು.....

ಭೂಮಿ ಸೂರ್ಯನಿಂದ ಎಷ್ಟು ದೂರ ಇದೆ ಎಂದು ವಿದೇಶಿಯರು ಅರ್ಥಾತ್ ನಾಸಾದವರು ೪೦೦-೫೦೦ ವರ್ಷಗಳ ಹಿಂದೆ ಕಂಡುಹಿಡಿದರೆ, ಅದಕ್ಕಿಂತು ಮೊದಲಾಗಿ ಅಕ್ಬರನ ಪ್ರಾಂತ್ಯದಲ್ಲಿ ವಾಸವಾಗಿದ್ದ ತುಲಸೀದಾಸರು ಹನುಮಂತ ದೇವರ ಕುರಿತು ಸ್ತೋತ್ರ ಬರೆಯುತ್ತಾರೆ ಆ ಸ್ತೋತ್ರದಲ್ಲಿ ಎಷ್ಟು ದೂರ ಎಂಬುದನ್ನು ಪ್ರಖರವಾಗಿ ಅಂಕಿಗಳಲ್ಲಿ ಬರೆಯಲಾಗಿದೆ ಕಾರಣ ಹನುಮಂತ ದೇವರು ಸೂರ್ಯನನ್ನು ಉಂಡೆ ಎಂದು ತಿಳಿದು ತಿನ್ನಲು ಹೋಗಿದ್ದರಲ್ಲಾ ಆ ಕಾರಣವೇ ....ಅದಿರಲಿ....ಆ ಸ್ತೋತ್ರ ಹನುಮಾನ ಚಾಲಿಸಾ.....

ಇನ್ನು ಅನೇಕ ಪುರಾವೆಗಳಿವೆ....ನಮ್ಮ ಸಂಸ್ಕೃತ ಪಂಡಿತರೇ ಈ ಇಡೀ ಜಗತ್ತಿನ civilization ಗೆ ಕಾರಣ ಎಂದು ತೋರಿಸಲು.......

ನನ್ನ ಭಾರತ ಶ್ರೇಷ್ಠ ಭಾರತ..
----------------------------------------------------------------------------------------------------------------


ಹಿಂದೂ ಶಾಸ್ತ್ರಗಳಲ್ಲಿ ಮಂಗಳ ಸೂತ್ರಕ್ಕೆ ಎಂತಹ ಮಹತ್ವವಾದ ಸ್ಥಾನ ಇದೆ ಅಂತ ತಿಳ್ಕೊಳ್ಳಿ, ನಮ್ಮ ಶಾಸ್ತ್ರಗಳ ಬಗ್ಗೆ ಹೆಮ್ಮೆ ಮೂಡುತ್ತೆ..

ಹಿಂದೂಗಳ ವಿವಾಹದಲ್ಲಿ ನಡೆಯುವ ಶಾಸ್ತ್ರ ಹಾಗೂ ಒಂದೊಂದು ಮಂತ್ರಕ್ಕೂ ಸಹ ನಮ್ಮ ವೇದ, ಉಪನಿಷತ್ತು, ಪುರಾಣ, ನೀತಿ ಸಂಹಿತೆಗಳಲ್ಲಿ ವಿವಾಹಕ್ಕೊಂದು ಮಹತ್ತರ ಸ್ಥಾನವಿದೆ. ವೈದೀಕ ಪದ್ಧತಿಯ ವಿವಾಹವು ಜೀವನದ ಅವಿಭಾಜ್ಯ ಅಂಗವಾಗಿದೆ. ಧರ್ಮದ ಹಲವು ಮೂಲಭೂತ ಅಂಶಗಳನ್ನು ಅದು ಸಮೀಕರಿಸಿಕೊಂಡಿದೆ. ಆದರೆ ಇಂದಿನ ಯಾಂತ್ರಿಕ ಆಧುನಿಕ ಯುಗದಲ್ಲಿ ವಿವಾಹ ಸಂಸ್ಕಾರವಾಗಿ ಉಳಿಯದೇ ಅದೊಂದು ಪ್ರತಿಷ್ಠೆಯನ್ನು ತೋರುವ ಕುಟುಂಬದ ಸಮಾರಂಭವಾಗಿ ಮಾರ್ಪಟ್ಟಿದೆ.

ಹಿಂದೂ ಧರ್ಮದಲ್ಲಿ ಮದುವೆಗೆ ತುಂಬಾ ಮಹತ್ವ ಇದೆ. ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ. ಇದಕ್ಕೆ ಮಂಗಳ ಸೂತ್ರ, ತಾಳಿ, ಕಂಠಿ, ಕರಿಮಣಿ, ಮಾಂಗಲ್ಯ ಇತ್ಯಾದಿ ವಿವಿಧ ಹೆಸರುಗಳಿರುವ ಅತಿ ಪವಿತ್ರ ಮತ್ತು ಅತ್ಯಂತ ಭಾವನಾತ್ಮಕವಾದ ಆಭರಣವಿದು. ವೈವಾಹಿಕ ಸ್ಥಿತಿಯ ಸಂಕೇತವಾಗಿ ಮಹಿಳೆಯರು ಮಂಗಳ ಸೂತ್ರವನ್ನು ಧರಿಸುತ್ತಾರೆ.

ಮೊದಲಿಗೆ ಮಾಂಗಲ್ಯ ಅಂದತಕ್ಷಣ ನಮ್ಮಲ್ಲಿ ಕರಿಮಣಿ, ತಾಳಿ, ಹವಳ ಹೀಗೆ ಅವರವರ ಸಂಪ್ರದಾಯಗಳ ಪ್ರಕಾರ ಮಂಗಳ ಸೂತ್ರ ವನ್ನು ಧರಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರ ಗ್ರಂಥಗಳಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿಕೊಳ್ಳಬೇಕೆಂಬುದನ್ನು ಉಲ್ಲೇಖಿಸಲಾಗಿದೆ. ಹಾಗಾದರೆ ಬನ್ನಿ ಜ್ಯೋತಿಷ್ಯಶಾಸ್ತ್ರ ಗ್ರಂಥಗಳಲ್ಲಿ ಮಾಂಗಲ್ಯಕ್ಕೆ ಇರುವ ಮಹತ್ವವನ್ನು ತಿಳಿಯೋಣ.

ಕಪ್ಪು ಬಣ್ಣದ ಕರಿಮಣಿ

ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದೇ ಮಂಗಲ ಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ. ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಕಪ್ಪು ಮಣಿ ಹೀರಿಕೊಳ್ಳುತ್ತವೆ ಮತ್ತು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದಂತೆ. ಅಷ್ಟೇ ಅಲ್ಲ, ಯೌವನ ಸೌಂದರ್ಯಭರಿತ ಗೃಹಿಣಿಯನ್ನು ಪರ ಪುರುಷರು ಕಾಮದ ದೃಷ್ಟಿಯಿಂದ ಅಥವಾ ಇತರೆ ಯಾವುದೇ ಕೆಟ್ಟ ದೃಷ್ಟಿಯಿಂದ ನೋಡಬಾರದು.

ಕುತ್ತಿಗೆಯಲ್ಲಿ ಈ ಮಂಗಲಸೂತ್ರ ಧರಿಸುವುದು

ಮಾಂಗಲ್ಯವನ್ನು ಕುತ್ತಿಗೆ ಕಟ್ಟುವುದರಿಂದ ತಾಳಿಯು ಎದೆ ಭಾಗದಲ್ಲಿ ಇರುತ್ತದೆ. ಇದರಿಂದ ಎದೆ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನುಈ ತಾಳಿಯು ಹೀರಿಕೊಳ್ಳುತ್ತದೆ. ಅಷ್ಟೇ ಅಲ್ಲದೆ, ಹಾಲುಣಿಸುವ ತಾಯಿಯಲ್ಲಿ ಎದೆ ಹಾಲಿನ ಉಷ್ಣತೆಯನ್ನು ಹೀರಿಕೊಂಡು ಎದೆಹಾಲು ಕೆಡದಂತೆ ಶಿಶುವಿಗೆ ಉಣಲೂ ಅನುಕೂಲವಾದ ಸಮ ಉಷ್ಣತೆಯಲ್ಲಿರಿಸಲು ಸಹಾಯ ಮಾಡುತ್ತದೆ. ಕತ್ತಿನ ಸುತ್ತ ಸುಷುಮ್ನಾ ನಾಡಿಗೆ ಸಮ್ಮಿಲನ ಚಕ್ರಗಳ ಆಧಾರವಾದ ಬೆನ್ನೆಲುಬಿನ ಮೇಲ್ಭಾಗ(ಕತ್ತಿನ ಹಿಂಭಾಗದಿಂದ) ವಿಶುದ್ಧ ಚಕ್ರಕ್ಕೆ ಹರಿದು ಬಂದು ಹೃದಯದ ಭಾಗದಲ್ಲಿರುವ ಅನಾಹುತ ಚಕ್ರದಲ್ಲಿ ಸಮ್ಮಿಲನಗೊಳ್ಳುತ್ತದೆ. ಹೃದಯ ಜ್ಯೋತಿಯು ಸದಾ ದರ್ಶನೀಯವೆಂದು ಕುತ್ತಿಗೆಯಲ್ಲಿ ಈ ಮಂಗಲಸೂತ್ರವನ್ನು ಧರಿಸಲಾಗುತ್ತದೆ.

ಮಂಗಳಸೂತ್ರದಲ್ಲಿ ಬರುವ ಇನ್ನೊಂದು ವಸ್ತು ಹವಳ

ಜ್ಯೋತಿಷ್ಯದ ಪ್ರಕಾರ ಹವಳ ಕುಜ ಗ್ರಹವನ್ನು ಸೂಚಿಸುತ್ತದೆ. ಕುಜ ಶರೀರದಲ್ಲಿ ಶಕ್ತಿಯನ್ನು ವೃದ್ಧಿಸುತ್ತದೆ. ಅದರಂತೆಯೇ ಶರೀರದಲ್ಲಿ ಶಕ್ತಿ ಹಾಗೂ ಸದಾ ಕ್ರಿಯಾಶೀಲ ವ್ಯಕ್ತಿತ್ವ ಇವೆರಡೂ ಸಹ ಗೃಹಿಣಿಗೆ ಅತ್ಯಂತ ಆವಶ್ಯ. ಇದರಿಂದಾಗಿಯೇ ವಿವಾಹದ ನಂತರ ಕುಜ ದೋಷದಿಂದಾಗಿ ದಂಪತಿಗಳ ಮಧ್ಯದಲ್ಲಿ ಯಾವುದೇ ವಿರಸ ಅಥವಾ ಜಗಳ ಉಂಟಾಗಬಾರದು ಎಂದು ಕುಜನ ರತ್ನವಾದ ಈ ಹವಳವನ್ನು ಮಂಗಳಸೂತ್ರದಲ್ಲಿ ಹಾಕುವುದು.

ರಾಮಪ್ರಸಾದ ಕಾಮತ್ ಮುಖಾ೦ತರ
ಬಿಪಿ ಬಿಪಿ ಬಿಪಿ, ಮನುಕುಲಕ್ಕೆ ಮಾರಿಯಾಗಿ ಪರಿಣಮಿಸಿರುವ ಈ ವ್ಯಾದಿ ಆಯುರ್ವೇದದಲ್ಲಿದೆ ಸುಲಭ ಪರಿಹಾರ.‌ನಿತ್ಯ ಬೆಳಗ್ಗೆ ಖಾಲಿಹೊಟ್ಟೆಗೆ ಎರಡು ಚಮಚ ಅಮೃತ ಬಳ್ಳಿಯ ರಸ ಜೀನಿನೊಂದಿಗೆ ಸೇವಿಸಿ ಅಥವಾ ಐದಾರು ಹಸಿಎಲೆಯನ್ನು ಜೇನು ಬೆರೆಸಿ ಸವಿಯಿರಿ ಸಾಕು. ನೋ ಬಿಪಿ, ಬಿ ಹ್ಯಾಪಿ ಹ್ಯಾಪಿ

ಬನ್ನು ನೋವಿಗೆ 2ಕೆಜಿ ಹುರುಳಿ ಒಂದು ದಿಂಬಿನ ಚೀಲ ಹೊಲಿದುಕೊಳ್ಳಿ ಅದರಲ್ಲಿ ಹುರಳಿ ತುಂಬಿ ಸಡಿಲವಾಗಿ ಹೊಲಿಯಿರಿ ರಾತ್ರಿ ಮಲಗಿದಾಗ ಹುರಳಿ ಚೀಲ ಬೆನ್ನು,ಕತ್ತು,ಸೊಂಟ ನೋವಿರುವಜಾಗದಲ್ಲಿ ಹಾಸಿಗೆ ಮೇಲೆ ಇಟ್ಟು ಮಲಗಿ ನೋವು ನಿವಾರಣೆ !! ಹುರಳಿ ಬದಲಿಸುವ ಅವಷ್ಯಕತೆ ಇಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ