ಶನಿವಾರ, ಸೆಪ್ಟೆಂಬರ್ 30, 2017

ಗ್ಯಾಸ್ಟ್ರಿಕ್ ನಿವಾರಣೆ

ಒಂದು ಲೋಟ ನೀರಿಗೆ ಒಂದು ಚಮಚ ಅಡುಗೆ ಸೋಡಾ ಹಾಗೂ ಅರ್ಧ ಹೋಳು ನಿಂಬೆ ರಸವನ್ನು ಚೆನ್ನಾಗಿ ಹಿಂಡಿ ಕುಡಿದರೆ ಗ್ಯಾಸ್ ಟ್ರಬಲ್ ಸಮಸ್ಯೆಯಿಂದ ನಿವಾರಣೆ ಹೊಂದಬಹುದು .

ಅರ್ಧ ಚಮಚ ದಾಲ್ಚಿನ್ನಿ ಪುಡಿಯನ್ನು ಒಂದು ಲೋಟ ಬಿಸಿ ಹಾಲಿಗೆ ಬೆರೆಸಿ ಕಾಳು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಕುಡಿದರೆ ಹತ್ತು ನಿಮಿಷದೊಳಗೆ ಗ್ಯಾಸ್ಟ್ರಿಕ್ ಸಮಸ್ಯೆ ಪರಿಹಾರವಾಗುತ್ತದೆ.

ಚಿಟಕೆ ಹಿಂಗನ್ನು ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿ ದಿನಕ್ಕೆ ಎರಡರಿಂದ ಮೂರು ಬಾರಿ ಸೇವನೆ ಮಾಡಿದರೆ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗುತ್ತದೆ .

ಒಂದು ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ತೆಗೆದುಕೊಂಡು ಚಿಟಿಕೆಯಷ್ಟು ಹಿಂಗನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಉತ್ತಮ .

ಅರ್ಧ ಹಿಡಿಯಷ್ಟು ಪುದಿನಾ ಎಲೆಗಳನ್ನು ಒಂದು ಲೋಟ ಬಿಸಿ ನೀರಿನಲ್ಲಿ ಚೆನ್ನಾಗಿ ಬೇಯಿಸಿ ಆ ನೀರನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿದರೆ ಗ್ಯಾಸ್ಟಿಕ್ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ನಿಂಬೆಹಣ್ಣಿನ ರಸಕ್ಕೆ ಸ್ವಲ್ಪ ಪುದೀನಾರಸ, ಶುಂಠಿ ರಸ ಹಾಗೂ ಸ್ವಲ್ಪ ಮೆಣಸುಪುಡಿ ಹಾಕಿ ಕುಡಿಯುವುದರಿಂದ ಹೊಟ್ಟೆನೋವು ಶಮನಗೊಳ್ಳುತ್ತದೆ.

ಒಂದು ಚಮಚ ಸೋಂಪು, ನಿಂಬೆ ರಸ ಹಾಗೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನಪುಡಿಯನ್ನು ಬೆಚ್ಚಗಿನ ನೀರಿಗೆ ಹಾಕಿ ಕುಡಿಯುವುದರಿಂದ ಹೊಟ್ಟೆನೋವು ಶೀಘ್ರದಲ್ಲಿಯೇ ಶಮನಗೊಳ್ಳುತ್ತದೆ.

7-8 ಚಮಚ ನೀರಿಗೆ ಉಪ್ಪು ಮಿಶ್ರಿತ ಬೆಳ್ಳುಳ್ಳಿ ರಸವನ್ನು ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಶಮನಗೊಳ್ಳುತ್ತದೆ.

ಕೊತ್ತಂಬರಿ (ದನಿಯಾ)ಬೀಜ ಮತ್ತು ಒಣಶುಂಠಿಯನ್ನು ಚೆನ್ನಾಗಿ ಜಜ್ಜಿಕೊಂಡು ಕುದಿಯುವ ನೀರಿಗೆ ಹಾಕಿ ಸ್ವಲ್ಪ ಹೊತ್ತಿನ ನಂತರ ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಶೋಧಿಸಿ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಮಾಯವಾಗುತ್ತದೆ.

ತುಳಸಿ ರಸ, ಬೆಳ್ಳುಳ್ಳಿ ರಸ ಹಾಗೂ ಜೇನುತಪ್ಪವನ್ನು ಸಮಭಾಗ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿದರೆ ಹೊಟ್ಟೆಯಲ್ಲಿನ ಉರಿ ಕಡಿಮೆಯಾಗುತ್ತದೆ.

ರಾತ್ರಿ ಕೊತ್ತಂಬರಿ ಮತ್ತು ಮೆಂತ್ಯವನ್ನು ನೀರಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಎದೆಯುರಿ, ಹುಳಿ ತೇಗು, ಗ್ಯಾಸ್ ಟ್ರಬಲ್ ಶಮನವಾಗುತ್ತದೆ.

ಹಸಿ ಈರುಳ್ಳಿಯನ್ನು ಜಗಿದು ತಿನ್ನುವುದರಿಂದ ಈ ಸಮಸ್ಯೆ ಬಹು ಬೇಗ ನಿವಾರಣೆ ಯಾಗುತ್ತದೆ.

ಹುಳಿಯಿಲ್ಲದ ಮಜ್ಜಿಗೆಯನ್ನು ಹೆಚ್ಚು ಹೆಚ್ಚಾಗಿ ಕುಡಿಯೋದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆಯು ನಿವಾರಣೆಯಾಗುತ್ತದೆ.


 ಮನೆ ಮದ್ದು ಜೀರಿಗೆ

ಎಲ್ಲರ ಅಡುಗೆ ಮನೆಯ ಸಾಂಬಾರ್ ಬಟ್ಟಲಲ್ಲಿ ಕಾಣಿಸಿಕೊಳ್ಳುವ ‘ಜೀರಿಗೆ’ ಬಹೂಪಯೋಗಿ ಕಿಚನ್ ಮೆಡಿಸಿನ್ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಇದೊಂದು ರೋಗ ನಿರೋಧಕ ಶಕ್ತಿಯುಳ್ಳ ಮಸಾಲೆ ಪದಾರ್ಥ. ವಿಧಿಬದ್ಧವಾಗಿ ಜೀರಿಗೆ ಸೇವಿಸುವುದರಿಂದ ಹೃದಯರೋಗ, ಪಿತ್ತಪ್ರಕೃತಿ, ವಾಯು ವಿಕೋಪ, ಮಲಬದ್ಧತೆ, ಬಾಯಿಹುಣ್ಣು, ಆಮ್ಲತೆ, ಜ್ವರ, ಮೂತ್ರಕೋಶ ಸಂಬಂಧಿ ಕಾಯಿಲೆ, ಜೀರ್ಣ ಶಕ್ತಿ ಇಲ್ಲದಿರುವುದು, ಹೀಗೆ ಹತ್ತು ಕಾಯಿಲೆಗಳನ್ನು ಪ್ರಾರಂಭದಲ್ಲಿಯೇ ತಡೆಗಟ್ಟಬಹುದಾಗಿದೆ.

ಜೀರಿಗೆ ಸೇವನೆಯ ವಿಧಾನಗಳು
*ಕುಡಿಯುವ ನೀರಿನ ಡ್ರಮ್ಮಿಗೆ ಒಂದೆರಡು ಚಮಚ ಜೀರಿಗೆ ಮುಂಜಾನೆ ಸೇರಿಸಿರಿ. ಇದರಿಂದ ಪರಿಮಳಯುಕ್ತ ಜೀರಿಗೆ ಮಿಶ್ರಿತ ನೀರು ಮನೆ ಮಂದಿಗೆಲ್ಲಾ ದೊರೆಯುತ್ತದೆ. ಜೀರಿಗೆ ಮಿಶ್ರಣದ ನೀರು ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ. ಜೊತೆಗೆ ದಿನವಿಡೀ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.

*ಜೀರಿಗೆ ಕಷಾಯ: ಸ್ವಲ್ಪ ಜೀರಿಗೆ ಹದವಾಗಿ ಬಿಸಿ ಮಾಡಿ, ಮಿಕ್ಸಿಯಲ್ಲಿ ನುಣುಪಾಗಿ ಹುಡಿ ಮಾಡಿ, ಕಾಫಿ – ಟೀ ಬದಲಾಗಿ, ಬಿಸಿ ನೀರಿನಲ್ಲಿ ಸೇರಿಸಿ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಹಾಗೂ ಹಾಲು ಸೇರಿಸಿ ಮುಂಜಾನೆ ತಿಂಡಿ ತಿನ್ನುವಾಗ ಹಾಗೂ ಸಾಯಂಕಾಲ ಕುಡಿಯಿರಿ. ಇದರಿಂದ ಬಾಯಿರುಚಿ ಹಾಗೂ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಜೀರಿಗೆ ಕಶಾಯ ಸೇವಿಸಿದ ವ್ಯಕ್ತಿಗಳಿಗೆ ಮೂತ್ರಕ್ಕೆ ಸಂಬಂಧಿಸಿದ ಕಾಯಿಲೆ ಹಾಗೂ ಮೂತ್ರಕೋಶದ ವೈಫಲ್ಯ ಬರುವ ಸಾಧ್ಯತೆಯೇ ಇರುವುದಿಲ್ಲ.

*ಕೆಮ್ಮು ತಲೆ ನೋವು ಜ್ವರ ಬಂದಾಗ: ನಾಲ್ಕು ಗ್ಲಾಸ್‌ ನೀರಿಗೆ 3–4 ಚಮಚ ಜೀರಿಗೆ ಪುಡಿ, 6–8 ಮೆಣಸಿನಕಾಳು ಪುಡಿ, ಒಣ ಶುಂಠಿ, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ, ತಣಿಸಿ, ದಿನಕ್ಕೆ 3–4 ಬಾರಿ ಕುಡಿದರೆ ಕೆಮ್ಮು, ತಲೆನೋವು, ಜ್ವರ ಒಂದೆರಡು ದಿನಗಳಲ್ಲಿ ಮಾಯವಾಗುತ್ತದೆ.

*ಮನೆಯಲ್ಲಿ ಕೆಲಸ ಮಾಡುವಾಗ ಹಾಗೂ ಓಡಾಡುವಾಗ ಒಂದು ಚಿಟಕಿ ಜೀರಿಗೆ ಬಾಯಿಯಲ್ಲಿ ಹಾಕಿ ಅಗಿಯುತ್ತಿದ್ದರೆ, ಇದರಿಂದ ಬರುವ ರಸ, ಬಾಯಿ ಜೊಲ್ಲಿನಲ್ಲಿ ಸೇರಿ ದೇಹದ ಅಂಗಾಂಗ ಪ್ರವೇಶಿಸುತ್ತದೆ. ಈ ಪ್ರಕ್ರಿಯೆಯಿಂದ ಲವಲವಿಕೆ ಉಂಟಾಗುತ್ತದೆ. ಜೊತೆಗೆ ಕಾಯಿಲೆಗೆ ನೋ ಎಂಟ್ರಿ ಸಿಗ್ನಲ್‌ ತೋರಿಸುತ್ತದೆ. ಬಾಯಿ ವಾಸನೆ ಮಾಯವಾಗುತ್ತದೆ.

*ಜೀರಿಗೆ ಬೆಲ್ಲದ ಉಂಡೆ: ಈ ಹಿಂದೆ ತಿಳಿಸಿದಂತೆ ಮಿಕ್ಸಿಯಲ್ಲಿ ನುಣುಪಾಗಿ ಮಾಡಿದ ಜೀರಿಗೆ ಪುಡಿ ಹಾಗೂ ಅದಕ್ಕೆ ಸಮಾನ ತೂಕದ ಬೆಲ್ಲ ಸೇರಿಸಿ, ಬಾಣಲೆಯಲ್ಲಿ ಹದವಾಗಿ ಕುದಿಸಿ, ತಣ್ಣಗಾದ ನಂತರ ಆ ಮಿಶ್ರಣದಿಂದ ನೆಲ್ಲಿಕಾಯಿ ಗಾತ್ರದ ಉಂಡೆ ಮಾಡಿರಿ. ಬಾಯಾರಿಕೆ ಆದಾಗ ಒಂದು ಉಂಡೆ ಸೇವಿಸಿ ನೀರು ಕುಡಿಯಿರಿ. ಇದರಿಂದ ದೇಹ ತಂಪಾಗಿರುತ್ತದೆ. ಮಕ್ಕಳು ಈ ಉಂಡೆ ತುಂಬಾ ಇಷ್ಟ ಪಡುತ್ತಾರೆ. ಓದುವ ಮಕ್ಕಳ ಜ್ಞಾಪಕ ಶಕ್ತಿ ಕೂಡಾ ವೃದ್ಧಿಯಾಗುತ್ತದೆ.

ಜೀರಿಗೆ ಒಂದು ಉತ್ತಮ ಮನೆ ಮದ್ದು. ಇದರ ಸೇವನೆ ಬಹುಸುಲಭ ಹಾಗೂ ರುಚಿಕರ. ಪ್ರತೀ ದಿವಸ ಮನೆ ಮಂದಿ ಎಲ್ಲಾರೂ ಒಂದಲ್ಲ ಒಂದು ರೀತಿಯಲ್ಲಿ ಜೀರಿಗೆ ಸೇವಿಸಿ ಧೃಡಕಾಯರಾಗಿರಿ.
 
[29/09 10:34 PM] ‪+91 94498 28225‬: *ಅಡುಗೆಯ ರುಚಿ ಹೆಚ್ಚಿಸುವ ಇಂಗಿನಲ್ಲಿದೆ, ಸಾಕಷ್ಟು ಪ್ರಯೋಜನಗಳು*

ಯಾವುದೇ ಅಡುಗೆಗೆ ರುಚಿ ನೀಡುವ ಉಪ್ಪಿನಂತೆಯೇ ಇಂಗು ಸಹಾ ಇನ್ನೊಂದು ರುಚಿಕಾರಕವಾಗಿದೆ. ವಿಶೇಷವಾಗಿ ಸಾಂಬಾರ್, ರಸಂ ಹಾಗೂ ಒಗ್ಗರಣೆ ನೀಡುವ ಇತರ ಅಡುಗೆಗಳಲ್ಲಿ ಚಿಟಿಕೆಯಷ್ಟು ಇಂಗು ಹಾಕಿದರೆ ರುಚಿ ಹೆಚ್ಚುತ್ತದೆ. ಇಂಗಿಲ್ಲದ ಉಪ್ಪಿನಕಾಯಿ ವಿರಳ. ಇಂಗನ್ನು ಹಾಗೇ ತಿನ್ನುವಂತಿಲ್ಲ ಆಷ್ಟೊಂದು ಕಹಿಯಾಗಿರುತ್ತದೆ.

ಇದೇ ಕಾರಣಕ್ಕೆ 'ಇಂಗು ತಿಂದ ಮಂಗ' ಎಂಬ ವಿಶೇಷಣವನ್ನು ಕನ್ನಡದಲ್ಲಿ ಧಾರಾಳವಾಗಿ ಬಳಸಲಾಗುತ್ತದೆ. ಒಂದು ಬಗೆಯ ಮರದ ತೊಗಟೆಯಿಂದ ಒಸರುವ ಗೋಂದನ್ನು ಒಣಗಿಸಿ ಪುಡಿಯಾಗಿಸಿದ ಇಂಗಿನ ಬಳಕೆ ಸಾವಿರಾರು ವರ್ಷಗಳ ಹಿಂದಿನಿಂದಲೇ ಆಯುರ್ವೇದದಲ್ಲಿದೆ. ಬನ್ನಿ, ಇದರ ಆರೋಗ್ಯಕರ ಪ್ರಯೋಜನಗಳು ಹಾಗೂ ನೈಸರ್ಗಿಕ ಗುಣಗಳ ಬಗ್ಗೆ ಅರಿಯೋಣ.... 

*ಜೀರ್ಣಶಕ್ತಿ ಹೆಚ್ಚಿಸಲು*

ಯಾವುದೇ ಆಹಾರ ಚೆನ್ನಾಗಿ ಜೀರ್ಣಿಸಲೆಂದು ಒಗ್ಗರಣೆಯಲ್ಲಿ ಚಿಟಿಕೆಯಷ್ಟು ಇಂಗನ್ನು ಸೇರಿಸಲಾಗುತ್ತದೆ. ವಾಯು ಪ್ರಕೋಪವುಂಟು ಮಾಡುವ ಆಹಾರಗಳ ಪ್ರಭಾವದಿಂದ ಹೊಟ್ಟೆಯಲ್ಲಿ ಗಾಳಿ ತುಂಬಿಕೊಳ್ಳದಿರಲೂ ಇದು ನೆರವಾಗುತ್ತದೆ. ಹೊಟ್ಟೆಯುಬ್ಬರಿಕೆ ಎದುರಾದರೆ ತಕ್ಷಣ ಇಂಗು ಬೆರೆಸಿದ್ ಉಗುರುಬೆಚ್ಚನೆಯ ನೀರನ್ನು ಕುಡಿದರೆ ತಕ್ಷಣ ಪರಿಹಾರ ದೊರಕುತ್ತದೆ. ಕೆಲವಾರು ಸಂಶೋಧನೆಗಳಲಿ ಕಂಡುಕೊಂಡಿರುವ ಪ್ರಕಾರ ಇಂಗಿನ ಪುಡಿಯಲ್ಲಿ ಉರಿಯೂತ ಗುಣವಿರುವ ಜೊತೆಗೇ ಉತ್ತಮ ಆಂಟಿ ಆಕ್ಸಿಡೆಂಟು ಗುಣಗಳೂ ಇವೆ. ಅಷ್ಟೇ ಅಲ್ಲ, ಇದರಲ್ಲಿ ವಂಶವಾಹಿ ಧಾತುವನ್ನು ರೂಪಾಂತರಗೊಳಿಸುವ ಗುಣವೂ ಇದೆ.

*ಕ್ಯಾನ್ಸರ್ ತಡೆಗಟ್ಟುತ್ತದೆ*

 ಇಂಗಿನಲ್ಲಿ ರುಚಿ ನೀಡುವ ಗುಣದ ಹೊರತಾಗಿ ಕ್ಯಾನ್ಸರ್ ತಡೆಗಟ್ಟುವ ಗುಣವೂ ಇದೆ. ಅಂದರೆ ಒಂದು ವೇಳೆ ದೇಹದ ಯಾವುದಾದರೊಂದು ಅಂಗಾಂಶದ ಜೀವಕೋಶಗಳು ಅಗತ್ಯಕ್ಕೂ ಹೆಚ್ಚು ಬೆಳವಣಿಗೆಯಾದರೆ ಇದು ವಂಶವಾಹಿನಿಯ ಸೂಚನೆಗೆ ವಿರುದ್ದವಾಗಿದ್ದು ಇಂಗಿನಲ್ಲಿರುವ ವಿಶೇಷ ಗುಣ ಈ ಜೀವಕೋಶಗಳನ್ನು ಇನ್ನಷ್ಟು ವೃದ್ದಿಗೊಳ್ಳದಂತೆ ತಡೆಯುತ್ತದೆ.

*ಲೈಂಗಿಕ ರೋಗಗಳನ್ನು ತಡೆಗಟ್ಟುತ್ತದೆ*

 ಈಜಿಪ್ಟ್ ನಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ ರುಚಿಕಾರಕವಾಗಿ ಬಳಸಲಾಗುವ ಇಂಗಿನಲ್ಲಿ ಪರಾವಲಂಬಿ ಕ್ರಿಮಿ ವಿರೋಧ ಗುಣ ಕೆಲವಾರು ಲೈಂಗಿಕ ರೋಗಗಳನ್ನು ಹರಡುವುದನ್ನು ತಡೆಯುತ್ತದೆ ಹಾಗೂ ಗುಣಪಡಿಸಲು ನೆರವಾಗುತ್ತದೆ. ವಿಶೇಷವಾಗಿ Trichomonas vaginalis ಅಥವಾ Trichomoniasis ಎಂಬ ಮಾರಕ ರೋಗಗಳನ್ನು ವಾಸಿ ಮಾಡಲೂ ಔಷಧಿಯಂತೆ ಕೆಲಸ ಮಾಡುತ್ತದೆ.

*ಉಸಿರಾಟದ ತೊಂದರೆ*

 ಉಸಿರಾಟದ ತೊಂದರೆ ಮೂಡಿಸುವ ಬ್ರಾಂಕೈಟಿಸ್, ಅಸ್ತಮಾ ಹಾಗೂ ನಾಯಿಕೆಮ್ಮು ಮೊದಲಾದ ರೋಗಗಳಿಗೆ ಬಿಸಿನೀರಿಗೆ ಕೊಂಚ ಇಂಗು, ಜೇನು ಮತ್ತು ಹಸಿಶುಂಠಿ ಬೆರೆಸಿ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ. ವಿಶೇಷವಾಗಿ ಮಕ್ಕಳಿಗೆ ಗಂಟಲು ಕಟ್ಟಿಕೊಂಡಿರುವ ಸ್ಥಿತಿಯನ್ನು ನಿವಾರಿಸಲು ಬಳಸಬಹುದು.

*ನರವ್ಯವಸ್ಥೆಯ ಏರುಪೇರು* 

ಇಂಗು ಉತ್ತಮವಾದ ಉಪಶಮನಕಾರಿ ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ. ಪರಿಣಾಮವಾಗಿ ಸೆಳೆತಕ್ಕೆ ಒಳಗಾಗಿರುವ ನರಗಳನ್ನು ಶಮನಗೊಳಿಸುತ್ತದೆ ಹಾಗೂ ಸಡಿಲಿಸಿ ನಿರಾಳವಾಗಿಸುತ್ತದೆ. ಇದು ಇಂಗಿನ ಅತ್ಯುತ್ತಮ ಪ್ರಯೋಜನಗಳಲ್ಲೊಂದಾಗಿದೆ. ವಿಶೇಷವಾಗಿ ಖಿನ್ನತೆ, ಮನೋಭಾವನೆಯಲ್ಲಿ ಬದಲಾವಣೆ, ಚಿತ್ತಕ್ಷೋಭೆ, ಅರಳುಮರಳು ಮೊದಲಾದ ನರವ್ಯವಸ್ಥೆಗೆ ಸಂಬಂಧಿಸಿದ ತೊಂದರೆಗಳಿಗೆ ಉತ್ತಮ ಪರಿಹಾರ ಒದಗುತ್ತದೆ. ಒಂದರ್ಥದಲ್ಲಿ ಮಾದಕ ಪದಾರ್ಥವಾದ ಓಪಿಯಂ ಸೇವನೆಯ ಪರಿಣಾಮಗಳಿಗೆ ವಿರುದ್ದ ಪರಿಣಾಮ ನೀಡುವ ಮೂಲಕ ಇದರ ಹಿಡಿತದಿಂದ ಹೊರಬರಲು ನೆರವಾಗುತ್ತದೆ.


*ಕಿವಿನೋವನ್ನು ಕಡಿಮೆ ಮಾಡುತ್ತದೆ*

 ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಇದಕ್ಕೆ ಚಿಟಿಕೆಯಷ್ಟು ಇಂಗು ಸೇರಿಸಿ ಮಿಶ್ರಣ ಮಾಡಿ ತಣಿಯಲು ಬಿಡಿ.ಇದು ತಣಿದ ಬಳಿಕ ಈ ಮಿಶ್ರಣವನ್ನು ಅಡ್ಡಮಲಗಿ ಕಿವಿಯೊಳಕ್ಕೆ ಒಂದೊಂದಾಗಿ ಹನಿಯಂತೆ ಬಿಡಿ. ಕೊಂಚ ಸಮಯ ಹಾಗೇ ಮಲಗಿದ್ದು ಬಳಿಕ ನಿಂತು ಹೆಚ್ಚಿನ ದ್ರವ ಹೊರಹರಿಯುವಂತೆ ಮಾಡಿ. ಇದರಿಂದ ಕಿವಿನೋವು ಕಡಿಮೆಯಾಗುತ್ತದೆ.


*ಇತರ ಆರೋಗ್ಯಕರ ಗುಣಗಳು* 

ಕೀಟಗಳ ಕಡಿತದಿಂದ ಉರಿಯುತ್ತಿರುವ ಚರ್ಮ, ಹಾವಿನ ಕಡಿತ ಮೊದಲಾವುಗಳಿಗೆ ಉತ್ತಮ ಪರಿಹಾರ ಒದಗಿಸುತ್ತದೆ. ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ನೋವಿಗೆ ಬಿಸಿನೀರಿಗೆ ಕೊಂಚ ಇಂಗು ಬೆರೆಸಿ ಕುಡಿಯುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಕೀಟ ಕಡಿದ ಭಾಗ ಅಥವಾ ತಲೆನೋವು ಹೆಚ್ಚಿರುವ ಸ್ಥಳದಲ್ಲಿ ಇಂಗನ್ನು ದಪ್ಪನೆಯ ಲೇಪನವಾಗಿಸಿ ಲೇಪಿಸಿಕೊಂಡರೆ ಅತಿ ಶೀಘ್ರದಲ್ಲಿ ನೋವು ಕಡಿಮೆಯಾಗುತ್ತದೆ.

 ಹಿರೋಯಿನ್ ನಂತ ಕೂದಲು ನಿಮ್ಮದಾಗಬೇಕಾ?

ನಮ್ಮ ಸೌಂದರ್ಯದ ಒಂದು ಭಾಗ ಕೂದಲು. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುವವರಿದ್ದಾರೆ. ಸಮಯದ ಜೊತೆ ಜನರು ಆರೋಗ್ಯಕರ ಕೂದಲನ್ನು ಕಳೆದುಕೊಳ್ತಿದ್ದಾರೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗ್ತಿದೆ. ಕೂದಲು ಬೆಳ್ಳಗಾಗುವುದು, ತಲೆ ಹೊಟ್ಟು ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತವೆ.

ನಿಮ್ಮ ಕೂದಲು ಕೂಡ ಹೊಳಪು ಕಳೆದುಕೊಂಡು ಉದುರುತ್ತಿದ್ದರೆ ಸರಳ ಮನೆ ಮದ್ದಿನ ಮೂಲಕ ಆರೋಗ್ಯ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.

ಕರಿಬೇವು : ಕರಿಬೇವಿನ ಪೇಸ್ಟ್ ಮಾಡಿ ಅದಕ್ಕೆ ಒಂದು ಚಮಚ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ವಾರದಲ್ಲಿ ಎರಡರಿಂದ ಮೂರು ಬಾರಿ ಈ ಪೇಸ್ಟನ್ನು ತಲೆಗೆ ಹಚ್ಚಿಕೊಳ್ಳಿ. ಇದು ಕೂದಲು ಹೊಳಪು ಪಡೆಯಲು ನೆರವಾಗುತ್ತದೆ.

ಮೆಂತ್ಯ : ಮೆಂತ್ಯವನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ತಲೆಗೆ ಹಚ್ಚಿಕೊಂಡು ಒಣಗಿದ ನಂತ್ರ ತಲೆ ಸ್ನಾನ ಮಾಡಿ. ನಿಧಾನವಾಗಿ ಕೂದಲು ಹೊಳಪು ಪಡೆಯುವ ಜೊತೆಗೆ ಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ.

ಆಲಿವ್ ಆಯಿಲ್ : ಮೂರರಿಂದ ನಾಲ್ಕು ಚಮಚ ಆಲಿವ್ ಆಯಿಲ್ ತೆಗೆದುಕೊಂಡು ಬಿಸಿ ಮಾಡಿ. ಸ್ವಲ್ಪ ಬಿಸಿಯಾದ ಮೇಲೆ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಸುಮಾರು ಒಂದು ಗಂಟೆ ನಂತ್ರ ತಲೆ ತೊಳೆದುಕೊಳ್ಳಿ.

ಮೊಸರು : ಈರುಳ್ಳಿ ರಸಕ್ಕೆ ಮೊಸರನ್ನು ಸೇರಿಸಿ. ಈ ಮಿಶ್ರಣಕ್ಕೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ನೆತ್ತಿಯ ಮೇಲೆ ಹಚ್ಚಿ. ಸ್ವಲ್ಪ ಸಮಯದ ನಂತ್ರ ಕೂದಲನ್ನು ತೊಳೆಯಿರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ