ದ್ವೈತ - ಅದ್ವೈತ - ವಿಶಿಷ್ಟಾದ್ವೈತ ಎಂದರೇನು? ಈ ಮೂರೂ ಸಿದ್ಧಾಂತಗಳಿಗೂ ಇರುವ ವ್ಯತ್ಯಾಸವೇನು?
ಉತ್ತರ : ಈ ಮೂರೂ ಮತಗಳು ಉಪನಿಷತ್ , ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಎಂಬ ಪ್ರಸ್ಥಾನತ್ರಯಗಳಿಂದ ಮೂಡಿಬಂದವು. ಶ್ರೀಮನ್ಮಧ್ವಾಚಾರ್ಯರು , ಶ್ರೀಶಂಕರಭಗವತ್ಪಾದಾಚಾರ್ಯರು ಹಾಗೂ ಶ್ರೀಮದ್ರಾಮಾನುಜಾಚಾರ್ಯರು ಈ ಮೂರೂ ಸಿದ್ಧಾಂತಗಳ ಪ್ರವರ್ತಕರು, ಪ್ರಸ್ಥಾನತ್ರಯವನ್ನು ಈ ಮೂವರೂ ಆಚಾರ್ಯರು ಮೂರು ಬಗೆಯಾಗಿ ಅರ್ಥೈಸಿ ಭಾಷ್ಯ ಬರೆದು, ಈ ಮೂರು ಮತಗಳನ್ನು ಸ್ಥಾಪಿಸಿದರು. ಈ ಮೂವರು ಆಚಾರ್ಯರಿಗೂ ಮೂಲ ಗುರು ಒಬ್ಬರೇ. ಅವರೇ ಪುರಾಣಪ್ರಸಿದ್ಧರಾದ ಶ್ರೀ ಕೃಷ್ಣದ್ವೈಪಾಯನ ವೇದವಾಸ್ಯರು.
ದ್ವೈತ ಮತದ ಪ್ರಕಾರ #ಹರಿಯೇ ಸರ್ವೋತ್ತಮನು.
( ವೇದಗಳಲ್ಲಿ ಹೇಳಿರುವ ಬ್ರಹ್ಮ ಶಬ್ದವು ಶ್ರೀ ಹರಿಯ ಕುರಿತೇ ಆಗಿದೆ )
ಈ ಜಗತ್ತು ಸತ್ಯವೇ ಹೊರತು ಮಿಥ್ಯೆಯಲ್ಲ , ಜೀವರು ಎಂದೆಂದಿಗೂ ಶ್ರೀ ಹರಿಗೆ ಅನುಚರರಾಗಿದ್ದು ಬೇರೆ - ಬೇರೆಯೇ ಆಗಿ ಇರುವವರು. ಜೀವನಿಗೆ ಸ್ವರೂಪದ ಆನಂದ ದೊರೆತಾಗ ಅದೇ ಮುಕ್ತಿಯೆನಿಸಿಕೊಳ್ಳುತ್ತದೆ. ಅಂತಹಾ ಮುಕ್ತಿಗೆ ಭಕ್ತಿಯೇ ಪ್ರಧಾನ ಸಾಧನ. ಪ್ರತ್ಯೇಕ , ಅನುಮಾನ , ಆಗಮ ಎಂಬ ಮೂರು ಪ್ರಮಾಣಗಳು ಹಾಗು ನಾಲ್ಕು ವೇದಗಳಲ್ಲೂ ಶ್ರೀಹರಿಯೇ ಸರ್ವೋತ್ತಮನೆಂದು ವೇದ್ಯವಾಗಿದೆ.
ಅದ್ವೈತ ಮತದ ಪ್ರಕಾರ #ಸರ್ವಂ_ಖಲ್ವಿದಂ_ಬ್ರಹ್ಮ. ಎಂದರೆ ಏನಿದೆಯೋ ಅದೆಲ್ಲವೂ ಸಚ್ಚಿದಾನಂದ ಬ್ರಹ್ಮ. "ಜೀವೋ ಬ್ರಹ್ಮೈವ ನಾಪರಃ " _ ಎಂದರೆ ಜೀವನು ಬ್ರಹ್ಮನೇ ಹೊರತು ಬೇರಲ್ಲ, ಜೀವ ಜಗತ್ತಾಗಿ ಏನೇನು ಗೋಚರಿಸುತ್ತಿದೆಯೋ ಅವೆಲ್ಲವೂ ಪರಬ್ರಹ್ಮದ ಮಾಯಾವಿಲಾಸ, ಜೀವಿಗಳ ಬುದ್ಧಿಗೆ ಕವಿದ ಭ್ರಮೆಯ ಕಾರಣದಿಂದ ಈ ಜಗತ್ತು - ಜನನ - ಮರಣ, ಸುಖ - ದುಃಖಾದಿದ್ವಂದಗಳು ಕಾಣಿಸಿಕೊಳ್ಳುತ್ತವೆ. ಭ್ರಮೆಯು ಹರಿದಾಗ ಎಲ್ಲವೂ ಮಾಯವಾಗಿ ಬ್ರಹ್ಮವೊಂದೇ ವಿರಾಜಿಸುತ್ತದೆ. ಈ ಭ್ರಮೆಯ ಪೊರೆಯನ್ನು ಹರಿಯುವುದೇ ಸಾಧನೆಯ ಉದ್ದೇಶ.
ವಿಶೇಷಣಗಳಿಂದ ಕೂಡಿದ ಅದ್ವೈತವೇ #ವಿಶಿಷ್ಟಾದ್ವೈತ. #ಚಿತ್_ಮತ್ತು_ಅಚಿತ್ ಎಂಬುವುಗಳೇ ವಿಶೇಷಣಗಳು. ಚಿತ್ ಎಂದರೆ ಚೇತನ, ಅಚಿತ್ ಎಂದರೆ ಜಡವಸ್ತು. ಈ ಚಿತ್ ಮತ್ತು ಅಚಿತ್ ಸೇರಿ ಪರಮಾತ್ಮನ ಶರೀರವೆನಿಸಿಕೊಳ್ಳುತ್ತದೆ. ಹೀಗೆ ಚಿತ್ ಮತ್ತು ಅಚಿತ್ ಗಳು ಬೇರೆ ಬೇರೆಯಾಗಿ ಕಂಡರೂ ಪರಮಾತ್ಮನೊಂದಿಗೆ ಸೇರಿಕೊಂಡಿವೆ. ಅಂಶ - ಅಂಶೀ ಭಾವದಿಂದ; ಶೇಷ - ಶೇಷೀ ಸಂಭಂದಿಂದ..
ತಂತಮ್ಮ ಮತದ ಪ್ರಕಾರ ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕೆನ್ನುವವರು ಆಯಾ ಸಂಪ್ರದಾಯದ ಗುರುಗಳ ಬಳಿಗೆ ಹೋಗಬೇಕು. ಸಾಧನೆಯ ವಿವರಗಳನ್ನು ಸ್ಪಷ್ಟವಾಗಿ ಅರಿತು ಧೃಢಪಡಿಸಿಕೊಳ್ಳದೇ ಮುಂದುವರೆಯಲಾಗದು. ಈ ಮತಗಳು ಇರುವುದು ತನ್ನ ಮತದಲ್ಲಿ ತಿಳಿಸಲಾದ ಆಧ್ಯಾತ್ಮಿಕ ಸಾಧನಾ ವಿಧಾನವನ್ನು ಅರಿತು ತತ್ವವನ್ನು ಅಂದರೆ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಹೊರತು ವಾದ - ವಿವಾದ ಮಾಡುತ್ತಾ ಗೊಂದಲವೆಬ್ಬಿಸುವುದಕ್ಕಲ್ಲ.
ಅದ್ವೈತಕ್ಕೂ - ವಿಶಿಷ್ಟಾದ್ವೈತಕ್ಕೂ ಮತ್ತು ದ್ವೈತಕ್ಕೂ ನಡುವೆ ಇರುವ ವ್ಯತ್ಯಾಸವೇನು?
ಉತ್ತರ :
ಈ ಮೂರೂ ಮತಗಳು ವೈದಿಕ ಸಂಪ್ರದಾಯದಲ್ಲೇ ಬರುತ್ತದೆ. ಇವು ವೇದಾಂತ ದರ್ಶನಗಳು. ಅನುಭವದ ಆಧಾರದ ಮೇಲೆ ಆಚಾರ್ಯರು ಜನರಿಗೆ ಇವನ್ನು ತಿಳಿಸಿದ್ದಾರೆ. ಮೊದಲು ಶಂಕರಾಚಾರ್ಯರು ಅದ್ವೈತ ದರ್ಶನವನ್ನು ಸಾದರಪಡಿಸಿದರು, ಆನಂತರ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತವನ್ನೂ ; ಮಧ್ವಾಚಾರ್ಯರು ದ್ವೈತವೇದಾಂತವನ್ನು ಮುಂದಿಟ್ಟರು.
#ಜೀವ_ಜಗತ್ತು_ಈಶ್ವರ ಇವುಗಳ ಮೇಲೆ ಈ ಮತಗಳು ನಿಂತಿವೆ. ಅದ್ವೈತ ಪ್ರಕಾರ ಬ್ರಹ್ಮವೊಂದೇ ಸತ್ಯ ; ಜಗತ್ತು ಮಿಥ್ಯ ; ಜೀವವು ಬ್ರಹ್ಮವೇ ಹೊರತು ಬೇರಲ್ಲ , ಜ್ನಾನಬಲದಿಂದ ಜೀವವು ಬ್ರಹ್ಮಸಾಕ್ಷಾತ್ಕಾರ ಮಾಡಿಕೊಳ್ಳಬಹುದು.
ದ್ವೈತವೆಂದರೆ ಎರಡು ; ಜಗತ್ತು ಸತ್ಯ , ಜೀವಾತ್ಮ ಪರಮಾತ್ಮ ಬೇರೆ - ಬೇರೆ ಎಂಬುದು ಇಲ್ಲಿನ ಮುಖ್ಯ ತತ್ವ , ಅದ್ವೈತದ ಪ್ರಕಾರ ಪಾರಮಾರ್ಥಿಕವಾಗಿ ಜಗತ್ತು ಮಿಥ್ಯೆ ಎಂದಿದೆ, ಅದೇ ವ್ಯವಾಹಾರಿಕವಾಗಿ ಅದು ಸತ್ಯವೆಂದರೆ ದ್ವೈತವು ಎರಡೂ ಅರ್ಥದಲ್ಲಿ ಅದನ್ನು ಸತ್ಯವೆಂದಿದೆ. ಹರಿಯೇ ಸರ್ವೋತ್ತಮ , ಅವನನ್ನು ಭಕ್ತಿಮಾರ್ಗದಿಂದ ಭಜಿಸಿ ಅವನ ಸಾಯಜ್ಯದಲ್ಲಿರುವುದೇ ಮೋಕ್ಷ ಎಂದಿದೆ.
ವಿಶಿಷ್ಟಾದ್ವೈತ ಎಂದರೆ ಪರಮಾತ್ಮನು ವಿಶಿಷ್ಟನಾಗಿದ್ದಾನೆ , ಶ್ರೀಮನ್ನಾರಯಣನೇ ಪರಬ್ರಹ್ಮ , ಅವನು ಚಿತ್ ಮತ್ತು ಅಚಿತ್ ನಿಂದ ತುಂಬಿದ್ದಾನೆ. ಜೀವಾತ್ಮ ಅದರ ಒಂದು ಅಂಶ. ಶರಣಾಗತಿಯಿಂದ ಭಕ್ತಿಯಿಂದ ಪರಮಾತ್ಮ ನೊಡನೆ ಇರುವುದೇ ಮೋಕ್ಷ. ಅವರವರ ಅನುಭವ ಅವರವರಿಗೆ ನಿಜ, ಅದೇ ಪ್ರಮಾಣ , ಇವೆಲ್ಲಾ ಒಂದಕ್ಕೊಂದು ವಿರೋಧವಲ್ಲ ; ಪೂರಕವಾಗಿದೆ. ಭಗವಂತನ ಉಪಾಸನೆಯ ವಿಷಯದಲ್ಲಿ ನಮಗೆ ಸ್ವಾತಂತ್ರ್ಯವಿದೆ. ಅದರಂತೆ ನಮ್ಮ ಅನುಭೂತಿ - ಅನುಭವ - ಅಭಿರುಚಿ ಸಿದ್ಧಿಸುತ್ತದೆ. ಇದು ವಿಶಿಷ್ಟಾದ್ವೈತ.
ನಮಗೆ ದೇಹಭಾವವಿದೆ ; ಜೀವಭಾವವಿದೆ ; ಆತ್ಮ ಭಾವವಿದೆ; ದೇಹಬುದ್ಧಿ - ಜೀವಬುದ್ಧಿ - ಆತ್ಮಬುದ್ಧಿ ನಮಗಿದೆ. ಆಯಾಯ ದೃಷ್ಟಿಕೋನದಿಂದ ಅನುಭವವೂ ಭಿನ್ನವಾಗುತ್ತದೆ. " ದೇಹಬುಧ್ಯಾತು ದಾಸೋಹಂ ಜೀವಬುಧ್ಯಾ ತ್ವದಂಶಕಃ | ಆತ್ಮಬುಧ್ಯಾ ತ್ವಮೇವಾಹಂ ಇತಿ ಮೇ ನಿಶದಚಿತಾಮತಿಃ ||"
ಅಂದರೆ ದೇಹ ಬುದ್ಧಿಯಿಂದ ನಾನು ದಾಸ ; ನೀನು ಈಶ , ಇದು ದ್ವೈತ.
ಜೀವಬುದ್ಧಿ ಇರುವಾಗ ನಾನು ಅಂಶ; ನೀನು ಅಂಶಿ , ಇದು ವಿಶಿಷ್ಟಾದ್ವೈತ.
ಆತ್ಮಬುದ್ಧಿ ಬಂದಾಗ ನೀನು - ನಾನು ಎಂಬ ಬೇಧವಿಲ್ಲ ಇದು ಅದ್ವೈತ.
ದೇಹ ಭಾವದಲ್ಲಿ ಸಖ್ಯ , ಜೀವಭಾವದಲ್ಲಿ ದಾಸ್ಯ , ಆತ್ಮ ಭಾವದಲ್ಲಿ ಸಾಮರಸ್ಯ ಸಿದ್ಧಿಸುತ್ತದೆ. ಮೂರು ವೇದವಿಹಿತ ಅನುಭವ. ಕರ್ಮ, ಭಕ್ತಿ, ಜ್ನಾನಗಳು ಅನುಕ್ರಮವಾಗಿ ಮುಖ್ಯವಾಗುತ್ತದೆ. ನಾವು ಯಾರೂ ಒಮ್ಮಲೆ ದ್ವೈತಿಗಳು, ಅದ್ವೈತಿಗಳು, ಅಥವಾ ವಿಶಿಷ್ಟಾದ್ವೈತಿಗಳು ಆಗಲು ಸಾಧ್ಯವಿಲ್ಲ. ಒಬ್ಬನಿಗೆ ಈ ಮುರೂ ಅನುಭವ ಆಗಬಹುದು.
Whatsapp.
ಉತ್ತರ : ಈ ಮೂರೂ ಮತಗಳು ಉಪನಿಷತ್ , ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಎಂಬ ಪ್ರಸ್ಥಾನತ್ರಯಗಳಿಂದ ಮೂಡಿಬಂದವು. ಶ್ರೀಮನ್ಮಧ್ವಾಚಾರ್ಯರು , ಶ್ರೀಶಂಕರಭಗವತ್ಪಾದಾಚಾರ್ಯರು ಹಾಗೂ ಶ್ರೀಮದ್ರಾಮಾನುಜಾಚಾರ್ಯರು ಈ ಮೂರೂ ಸಿದ್ಧಾಂತಗಳ ಪ್ರವರ್ತಕರು, ಪ್ರಸ್ಥಾನತ್ರಯವನ್ನು ಈ ಮೂವರೂ ಆಚಾರ್ಯರು ಮೂರು ಬಗೆಯಾಗಿ ಅರ್ಥೈಸಿ ಭಾಷ್ಯ ಬರೆದು, ಈ ಮೂರು ಮತಗಳನ್ನು ಸ್ಥಾಪಿಸಿದರು. ಈ ಮೂವರು ಆಚಾರ್ಯರಿಗೂ ಮೂಲ ಗುರು ಒಬ್ಬರೇ. ಅವರೇ ಪುರಾಣಪ್ರಸಿದ್ಧರಾದ ಶ್ರೀ ಕೃಷ್ಣದ್ವೈಪಾಯನ ವೇದವಾಸ್ಯರು.
ದ್ವೈತ ಮತದ ಪ್ರಕಾರ #ಹರಿಯೇ ಸರ್ವೋತ್ತಮನು.
( ವೇದಗಳಲ್ಲಿ ಹೇಳಿರುವ ಬ್ರಹ್ಮ ಶಬ್ದವು ಶ್ರೀ ಹರಿಯ ಕುರಿತೇ ಆಗಿದೆ )
ಈ ಜಗತ್ತು ಸತ್ಯವೇ ಹೊರತು ಮಿಥ್ಯೆಯಲ್ಲ , ಜೀವರು ಎಂದೆಂದಿಗೂ ಶ್ರೀ ಹರಿಗೆ ಅನುಚರರಾಗಿದ್ದು ಬೇರೆ - ಬೇರೆಯೇ ಆಗಿ ಇರುವವರು. ಜೀವನಿಗೆ ಸ್ವರೂಪದ ಆನಂದ ದೊರೆತಾಗ ಅದೇ ಮುಕ್ತಿಯೆನಿಸಿಕೊಳ್ಳುತ್ತದೆ. ಅಂತಹಾ ಮುಕ್ತಿಗೆ ಭಕ್ತಿಯೇ ಪ್ರಧಾನ ಸಾಧನ. ಪ್ರತ್ಯೇಕ , ಅನುಮಾನ , ಆಗಮ ಎಂಬ ಮೂರು ಪ್ರಮಾಣಗಳು ಹಾಗು ನಾಲ್ಕು ವೇದಗಳಲ್ಲೂ ಶ್ರೀಹರಿಯೇ ಸರ್ವೋತ್ತಮನೆಂದು ವೇದ್ಯವಾಗಿದೆ.
ಅದ್ವೈತ ಮತದ ಪ್ರಕಾರ #ಸರ್ವಂ_ಖಲ್ವಿದಂ_ಬ್ರಹ್ಮ. ಎಂದರೆ ಏನಿದೆಯೋ ಅದೆಲ್ಲವೂ ಸಚ್ಚಿದಾನಂದ ಬ್ರಹ್ಮ. "ಜೀವೋ ಬ್ರಹ್ಮೈವ ನಾಪರಃ " _ ಎಂದರೆ ಜೀವನು ಬ್ರಹ್ಮನೇ ಹೊರತು ಬೇರಲ್ಲ, ಜೀವ ಜಗತ್ತಾಗಿ ಏನೇನು ಗೋಚರಿಸುತ್ತಿದೆಯೋ ಅವೆಲ್ಲವೂ ಪರಬ್ರಹ್ಮದ ಮಾಯಾವಿಲಾಸ, ಜೀವಿಗಳ ಬುದ್ಧಿಗೆ ಕವಿದ ಭ್ರಮೆಯ ಕಾರಣದಿಂದ ಈ ಜಗತ್ತು - ಜನನ - ಮರಣ, ಸುಖ - ದುಃಖಾದಿದ್ವಂದಗಳು ಕಾಣಿಸಿಕೊಳ್ಳುತ್ತವೆ. ಭ್ರಮೆಯು ಹರಿದಾಗ ಎಲ್ಲವೂ ಮಾಯವಾಗಿ ಬ್ರಹ್ಮವೊಂದೇ ವಿರಾಜಿಸುತ್ತದೆ. ಈ ಭ್ರಮೆಯ ಪೊರೆಯನ್ನು ಹರಿಯುವುದೇ ಸಾಧನೆಯ ಉದ್ದೇಶ.
ವಿಶೇಷಣಗಳಿಂದ ಕೂಡಿದ ಅದ್ವೈತವೇ #ವಿಶಿಷ್ಟಾದ್ವೈತ. #ಚಿತ್_ಮತ್ತು_ಅಚಿತ್ ಎಂಬುವುಗಳೇ ವಿಶೇಷಣಗಳು. ಚಿತ್ ಎಂದರೆ ಚೇತನ, ಅಚಿತ್ ಎಂದರೆ ಜಡವಸ್ತು. ಈ ಚಿತ್ ಮತ್ತು ಅಚಿತ್ ಸೇರಿ ಪರಮಾತ್ಮನ ಶರೀರವೆನಿಸಿಕೊಳ್ಳುತ್ತದೆ. ಹೀಗೆ ಚಿತ್ ಮತ್ತು ಅಚಿತ್ ಗಳು ಬೇರೆ ಬೇರೆಯಾಗಿ ಕಂಡರೂ ಪರಮಾತ್ಮನೊಂದಿಗೆ ಸೇರಿಕೊಂಡಿವೆ. ಅಂಶ - ಅಂಶೀ ಭಾವದಿಂದ; ಶೇಷ - ಶೇಷೀ ಸಂಭಂದಿಂದ..
ತಂತಮ್ಮ ಮತದ ಪ್ರಕಾರ ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕೆನ್ನುವವರು ಆಯಾ ಸಂಪ್ರದಾಯದ ಗುರುಗಳ ಬಳಿಗೆ ಹೋಗಬೇಕು. ಸಾಧನೆಯ ವಿವರಗಳನ್ನು ಸ್ಪಷ್ಟವಾಗಿ ಅರಿತು ಧೃಢಪಡಿಸಿಕೊಳ್ಳದೇ ಮುಂದುವರೆಯಲಾಗದು. ಈ ಮತಗಳು ಇರುವುದು ತನ್ನ ಮತದಲ್ಲಿ ತಿಳಿಸಲಾದ ಆಧ್ಯಾತ್ಮಿಕ ಸಾಧನಾ ವಿಧಾನವನ್ನು ಅರಿತು ತತ್ವವನ್ನು ಅಂದರೆ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಹೊರತು ವಾದ - ವಿವಾದ ಮಾಡುತ್ತಾ ಗೊಂದಲವೆಬ್ಬಿಸುವುದಕ್ಕಲ್ಲ.
ಅದ್ವೈತಕ್ಕೂ - ವಿಶಿಷ್ಟಾದ್ವೈತಕ್ಕೂ ಮತ್ತು ದ್ವೈತಕ್ಕೂ ನಡುವೆ ಇರುವ ವ್ಯತ್ಯಾಸವೇನು?
ಉತ್ತರ :
ಈ ಮೂರೂ ಮತಗಳು ವೈದಿಕ ಸಂಪ್ರದಾಯದಲ್ಲೇ ಬರುತ್ತದೆ. ಇವು ವೇದಾಂತ ದರ್ಶನಗಳು. ಅನುಭವದ ಆಧಾರದ ಮೇಲೆ ಆಚಾರ್ಯರು ಜನರಿಗೆ ಇವನ್ನು ತಿಳಿಸಿದ್ದಾರೆ. ಮೊದಲು ಶಂಕರಾಚಾರ್ಯರು ಅದ್ವೈತ ದರ್ಶನವನ್ನು ಸಾದರಪಡಿಸಿದರು, ಆನಂತರ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತವನ್ನೂ ; ಮಧ್ವಾಚಾರ್ಯರು ದ್ವೈತವೇದಾಂತವನ್ನು ಮುಂದಿಟ್ಟರು.
#ಜೀವ_ಜಗತ್ತು_ಈಶ್ವರ ಇವುಗಳ ಮೇಲೆ ಈ ಮತಗಳು ನಿಂತಿವೆ. ಅದ್ವೈತ ಪ್ರಕಾರ ಬ್ರಹ್ಮವೊಂದೇ ಸತ್ಯ ; ಜಗತ್ತು ಮಿಥ್ಯ ; ಜೀವವು ಬ್ರಹ್ಮವೇ ಹೊರತು ಬೇರಲ್ಲ , ಜ್ನಾನಬಲದಿಂದ ಜೀವವು ಬ್ರಹ್ಮಸಾಕ್ಷಾತ್ಕಾರ ಮಾಡಿಕೊಳ್ಳಬಹುದು.
ದ್ವೈತವೆಂದರೆ ಎರಡು ; ಜಗತ್ತು ಸತ್ಯ , ಜೀವಾತ್ಮ ಪರಮಾತ್ಮ ಬೇರೆ - ಬೇರೆ ಎಂಬುದು ಇಲ್ಲಿನ ಮುಖ್ಯ ತತ್ವ , ಅದ್ವೈತದ ಪ್ರಕಾರ ಪಾರಮಾರ್ಥಿಕವಾಗಿ ಜಗತ್ತು ಮಿಥ್ಯೆ ಎಂದಿದೆ, ಅದೇ ವ್ಯವಾಹಾರಿಕವಾಗಿ ಅದು ಸತ್ಯವೆಂದರೆ ದ್ವೈತವು ಎರಡೂ ಅರ್ಥದಲ್ಲಿ ಅದನ್ನು ಸತ್ಯವೆಂದಿದೆ. ಹರಿಯೇ ಸರ್ವೋತ್ತಮ , ಅವನನ್ನು ಭಕ್ತಿಮಾರ್ಗದಿಂದ ಭಜಿಸಿ ಅವನ ಸಾಯಜ್ಯದಲ್ಲಿರುವುದೇ ಮೋಕ್ಷ ಎಂದಿದೆ.
ವಿಶಿಷ್ಟಾದ್ವೈತ ಎಂದರೆ ಪರಮಾತ್ಮನು ವಿಶಿಷ್ಟನಾಗಿದ್ದಾನೆ , ಶ್ರೀಮನ್ನಾರಯಣನೇ ಪರಬ್ರಹ್ಮ , ಅವನು ಚಿತ್ ಮತ್ತು ಅಚಿತ್ ನಿಂದ ತುಂಬಿದ್ದಾನೆ. ಜೀವಾತ್ಮ ಅದರ ಒಂದು ಅಂಶ. ಶರಣಾಗತಿಯಿಂದ ಭಕ್ತಿಯಿಂದ ಪರಮಾತ್ಮ ನೊಡನೆ ಇರುವುದೇ ಮೋಕ್ಷ. ಅವರವರ ಅನುಭವ ಅವರವರಿಗೆ ನಿಜ, ಅದೇ ಪ್ರಮಾಣ , ಇವೆಲ್ಲಾ ಒಂದಕ್ಕೊಂದು ವಿರೋಧವಲ್ಲ ; ಪೂರಕವಾಗಿದೆ. ಭಗವಂತನ ಉಪಾಸನೆಯ ವಿಷಯದಲ್ಲಿ ನಮಗೆ ಸ್ವಾತಂತ್ರ್ಯವಿದೆ. ಅದರಂತೆ ನಮ್ಮ ಅನುಭೂತಿ - ಅನುಭವ - ಅಭಿರುಚಿ ಸಿದ್ಧಿಸುತ್ತದೆ. ಇದು ವಿಶಿಷ್ಟಾದ್ವೈತ.
ನಮಗೆ ದೇಹಭಾವವಿದೆ ; ಜೀವಭಾವವಿದೆ ; ಆತ್ಮ ಭಾವವಿದೆ; ದೇಹಬುದ್ಧಿ - ಜೀವಬುದ್ಧಿ - ಆತ್ಮಬುದ್ಧಿ ನಮಗಿದೆ. ಆಯಾಯ ದೃಷ್ಟಿಕೋನದಿಂದ ಅನುಭವವೂ ಭಿನ್ನವಾಗುತ್ತದೆ. " ದೇಹಬುಧ್ಯಾತು ದಾಸೋಹಂ ಜೀವಬುಧ್ಯಾ ತ್ವದಂಶಕಃ | ಆತ್ಮಬುಧ್ಯಾ ತ್ವಮೇವಾಹಂ ಇತಿ ಮೇ ನಿಶದಚಿತಾಮತಿಃ ||"
ಅಂದರೆ ದೇಹ ಬುದ್ಧಿಯಿಂದ ನಾನು ದಾಸ ; ನೀನು ಈಶ , ಇದು ದ್ವೈತ.
ಜೀವಬುದ್ಧಿ ಇರುವಾಗ ನಾನು ಅಂಶ; ನೀನು ಅಂಶಿ , ಇದು ವಿಶಿಷ್ಟಾದ್ವೈತ.
ಆತ್ಮಬುದ್ಧಿ ಬಂದಾಗ ನೀನು - ನಾನು ಎಂಬ ಬೇಧವಿಲ್ಲ ಇದು ಅದ್ವೈತ.
ದೇಹ ಭಾವದಲ್ಲಿ ಸಖ್ಯ , ಜೀವಭಾವದಲ್ಲಿ ದಾಸ್ಯ , ಆತ್ಮ ಭಾವದಲ್ಲಿ ಸಾಮರಸ್ಯ ಸಿದ್ಧಿಸುತ್ತದೆ. ಮೂರು ವೇದವಿಹಿತ ಅನುಭವ. ಕರ್ಮ, ಭಕ್ತಿ, ಜ್ನಾನಗಳು ಅನುಕ್ರಮವಾಗಿ ಮುಖ್ಯವಾಗುತ್ತದೆ. ನಾವು ಯಾರೂ ಒಮ್ಮಲೆ ದ್ವೈತಿಗಳು, ಅದ್ವೈತಿಗಳು, ಅಥವಾ ವಿಶಿಷ್ಟಾದ್ವೈತಿಗಳು ಆಗಲು ಸಾಧ್ಯವಿಲ್ಲ. ಒಬ್ಬನಿಗೆ ಈ ಮುರೂ ಅನುಭವ ಆಗಬಹುದು.
Whatsapp.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ