ಪೂರ್ವಜನ್ಮಾರ್ಜಿತ ಪುಣ್ಯ ಮತ್ತು ಪಾಪಗಳ ಫಲವನ್ನು ಮೊದಲು ಭೋಗಿಸಿ, ಕರ್ಮ ಸಂಬಂಧದಿಂದ ಜೀವಿಗೆ ಯಾವುದಾದರೂ ವ್ಯಾಧಿ ಉಂಟಾಗುತ್ತದೆ ||೧೯||
ಆಧಿ (ಮಾನಸಿಕ ರೋಗ) ಮತ್ತು ವ್ಯಾಧಿ (ದೈಹಿಕ ರೋಗ) ಯಿಂದ ಮುಕ್ತ ಮತ್ತು ಜೀವನ ಧಾರಣೆ ಮಾಡುವ ಆಸೆಯಿಂದ ಉತ್ಕಂಠಿತ ಆ ಜೀವಿಯ ತಿಳುವಳಿಕೆಗೆ ಬಾರದಂತೆಯೇ, ಸರ್ಪದಂತೆ ಬಲಿಷ್ಠನಾದ ಕಾಲನು ಜೀವಿಯ ಸಮೀಪ ಬರುತ್ತಾನೆ. ||೨೦||
ಆ ಮೃತ್ಯುವಿನ ಸಂಪ್ರಾಪ್ತಿಯ ಸ್ಥಿತಿಯಲ್ಲಿ ಕೂಡ, ಜೀವಿಯಲ್ಲಿ ವೈರಾಗ್ಯ ಉಂಟಾಗುವುದಿಲ್ಲ. ಜೀವಿಯು ಯಾರನ್ನು ಪಾಲನೆ - ಪೋಷಣೆ ಮಾಡಿರುತ್ತಾನೋ, ಅವರಿಂದಲೇ ಪಾಲನೆ - ಪೋಷಣೆಗೊಳಗಾಗುತ್ತಾನೆ; ವೃದ್ಧಾವಸ್ಥೆಯ ಕಾರಣ ವಿಕೃತರೂಪಧಾರಿಯಾದ ಮತ್ತು ಮರಣಾಭಿಮುಖನಾದ ಆ ಜೀವಿಯು ಮನೆಯಲ್ಲಿ ಅವಮಾನಪೂರ್ವಕ ನೀಡಲಾಗುವ ಪದಾರ್ಥಗಳನ್ನು ಶ್ವಾನದಂತೆ ಸೇವಿಸುತ್ತ ಜೀವನವನ್ನು ಕಳೆಯುತ್ತಾನೆ. ಆತ ರೋಗಿಯಾಗುತ್ತಾನೆ, ಅಜೀರ್ಣದಿಂದ ಪೀಡಿತನಾಗುತ್ತಾನೆ; ಆತನ ಆಹಾರ ಮತ್ತು ಸಮಸ್ತ ಚಟುವಟಿಕೆಗಳು ಕಡಿಮೆಯಾಗುತ್ತವೆ ||೨೧-೨೨||
ಪ್ರಾಣವಾಯು ಹೊರಗೆ ಹೋಗುವ ಸಮಯ ಕಣ್ಣುಗಳು ಕೆಳಮೇಲಾಗುತ್ತವೆ, ನಾಡಿಗಳು ಕಫದ ಕಾರಣದಿಂದ ಸ್ಥಗಿತವಾಗುತ್ತವೆ. ಕೆಮ್ಮು ಪೀಡಿಸುತ್ತದೆ ಮತ್ತು ಉಸಿರೆಳೆದುಕೊಳ್ಳಲು ವಿಶೇಷ ಪ್ರಯತ್ನ ಮಾಡಬೇಕಾಗುತ್ತದೆ ಮತ್ತು ಕಂಠದಿಂದ 'ಸುರ್-ಗುರ್' ಎಂಬ ಶಬ್ಧ ಹೊರಹೊಮ್ಮತೊಡಗುತ್ತದೆ. ||೨೩||
ಚಿಂತಾಗ್ರಸ್ಥ ಸ್ವಜನರಿಂದ ಸುತ್ತುವರೆದ ಮತ್ತು ಶಯನಸ್ಥನಾದ ಆ ಜೀವಿ (ವ್ಯಕ್ತಿ) ಕಾಲಪಾಶದ ವಶನಾಗುವ ಕಾರಣ, ಸಜ್ಜನರು ಕರೆದರೂ ಕೂಡ, ಓಗೊಡುವುದಿಲ್ಲ. ಈ ಪ್ರಕಾರ, ಕುಟುಂಬದ ಪಾಲನೆ-ಪೋಷಣೆಯಲ್ಲಿ ನಿರಂತರ ತೊಡಗಿರುವಂಥ, ಅಜಿತೇಂದ್ರಿಯ ವ್ಯಕ್ತಿ (ಅಂತ್ಯದಲ್ಲಿ) ರೋಧನ - ವಿಲಾಪದಲ್ಲಿ ತೊಡಗಿದ ಬಂಧು - ಬಳಗದವರ ಮಧ್ಯೆ ಉತ್ಕಟ ವೇದನೆಯಿಂದ ಸಂಜ್ಞಾಶೂನ್ಯನಾಗಿ ಮರಣ ಹೊಂದುತ್ತಾನೆ ||೨೫||
ಹೇ ಗರುಡ ! ಆ ಅಂತಿಮ ಕ್ಷಣಗಳಲ್ಲಿ ಜೀವಿಗೆ ವ್ಯಾಪಕ (ದಿವ್ಯ) ದೃಷ್ಟಿ ಪ್ರಾಪ್ತಿಯಾಗಿ ಹೋಗುತ್ತದೆ; ಅದರ ಫಲವಾಗಿ, ಲೋಕ - ಪರಲೋಕ ಎರಡನ್ನೂ ಒಟ್ಟಿಗೇ ನೋಡತೊಡಗುತ್ತಾನೆ. ಅದರಿಂದ ಚಕಿತನಾಗಿ ಆತ ಏನನ್ನೂ ಹೇಳ ಬಯಸುವುದಿಲ್ಲ ||೨೬||
ಯಮದೂತರು ಸಮೀಪ ಬಂದಾಗ, ಸಮಸ್ತ ಇಂದ್ರಿಯಗಳು ಊನವಾಗಿ ಹೋಗುತ್ತವೆ, ಚೈತನ್ಯ ಜಡವಾಗುತ್ತದೆ ಮತ್ತು ಪ್ರಾಣ ಚಲಾಯಮಾನವಾಗುತ್ತದೆ ||೨೭||
ಆತುರ ಕಾಲದಲ್ಲಿ ಪ್ರಾಣವು (ಪ್ರಾಣವಾಯು) ತನ್ನ ಸ್ಥಾನವನ್ನು ತೊರೆಯುವುದರಿಂದ, ಒಂದು ಕ್ಷಣವೂ ಕೂಡ ಒಂದು ಯುಗದಂತೆ ಭಾಸವಾಗುತ್ತದೆ. ಆ ಸಮಯದಲ್ಲಿ ನೂರು ಚೇಳುಗಳು ಕಚ್ಚುವುದರಿಂದ ಉಂಟಾಗುವ ಯಾತನೆಯ ಅನುಭವ (ಜೀವಿಗೆ) ವಾಗುತ್ತದೆ ||೨೮||
ಆ ಮರಣಸನ್ನ ವ್ಯಕ್ತಿ ಬುರುಗನ್ನು ಉಗುಳತೊಡಗುತ್ತಾನೆ ಮತ್ತು ಆತನ ಬಾಯಿಯಲ್ಲಿ ಲಾಲಾಜಲ ತುಂಬಿಹೋಗುತ್ತದೆ. ಪಾಪಿ ಜನರ ಪ್ರಾಣವಾಯು ಅಧೋಮಾರ್ಗ (ಗುದದ್ವಾರ) ದಿಂದ ಹೊರಬರುತ್ತದೆ ||೨೯||
ಆ ಸಮಯದಲ್ಲಿ ಎರಡೂ ಕೈಗಳಲ್ಲಿ ಪಾಶ ಮತ್ತು ದಂಡ ಧಾರಣೆ ಮಾಡಿದ, ನಗ್ನ, ಹಲ್ಲುಗಳನ್ನು ಮಸೆಯುತ್ತಿರುವ, ಕ್ರೋಧಪೂರ್ಣ ನೇತ್ರವುಳ್ಳ ಯಮನ ಇಬ್ಬರು ಭಯಂಕರ ದೂತರು ಸಮೀಪ ಬರುತ್ತಾರೆ ||೩೦||
ಅವರ ಕೇಶಕ್ಕೆ ಮುಖಮಾಡಿ ಸೆಟೆದು ನಿಂತಿರುತ್ತವೆ. ಅವರು ಕಾಗೆಗೆ ಸಮಾನವಾಗಿ ಕಪ್ಪು ವರ್ಣದವರಾಗಿರುತ್ತಾರೆ, ಮುಖ ವಕ್ರವಾಗಿರುತ್ತದೆ. ಅವರ ಉಗುರುಗಳು ಆಯುಧಕ್ಕೆ ಸಮಾನವಾಗಿರುತ್ತವೆ. ಅವರನ್ನು ನೋಡಿ ಭಯಭೀತನಾದ ಮರಣಸನ್ನ ಜೀವಿ ಮಲ-ಮೂತ್ರದ ವಿಸರ್ಜನೆ ಮಾಡತೊಡಗುತ್ತಾನೆ. ||೩೧||
ತನ್ನ ಪಂಚಭೌತಿಕ ಶರೀರದಿಂದ 'ಹಾ...ಹಾ...' ಎಂದು ಆರ್ತನಾದ ಮಾಡುತ್ತ ಹೊರಬರುವ ಹಾಗೂ ಯಮದೂತರಿಂದ ಬಂಧಿಸಲ್ಪಟ್ಟ, ಆ ಅಂಗುಷ್ಠ (ಹೆಬ್ಬೆರಳು) ದ ಪ್ರಮಾಣದ ಪುರುಷ ತನ್ನ ಮನೆಯನ್ನು ನೋಡುತ್ತ, ಯಮದೂತರಿಂದ ಯಾತನಾ ದೇಹದ ಧಾರಣೆ ಮಾಡುತ್ತ, ಕೊರಳಲ್ಲಿ ಪಾಶ ಬಿಗಿಸಿಕೊಂಡು, ರಾಜ ಪುರುಷರು ದಂಡನೀಯ ಅಪರಾಧಿಯನ್ನು ಎಳೆದೊಯ್ಯುವಂತೆ, ಯಮ ದೂತರಿಂದ ದೂರದ ಯಮ ಮಾರ್ಗದತ್ತ ಯಾತನೆಗಾಗಿ ಎಳೆದೊಯ್ಯಲ್ಪಡುತ್ತಾನೆ ||೩೨-೩೩||
ಈ ಪ್ರಕಾರ ಎಳೆದೊಯ್ಯುತ್ತ, ಆ ಜೀವಿಗೆ ಯಮದೂತರು, ನರಕಗಳ ತೀವ್ರ ಭಯಂಕರವಾದ ಭಯವನ್ನು ಕುರಿತು ವರ್ಣನೆ ಮಾಡುತ್ತಿರುತ್ತಾರೆ. ||೩೪||
ಆಧಿ (ಮಾನಸಿಕ ರೋಗ) ಮತ್ತು ವ್ಯಾಧಿ (ದೈಹಿಕ ರೋಗ) ಯಿಂದ ಮುಕ್ತ ಮತ್ತು ಜೀವನ ಧಾರಣೆ ಮಾಡುವ ಆಸೆಯಿಂದ ಉತ್ಕಂಠಿತ ಆ ಜೀವಿಯ ತಿಳುವಳಿಕೆಗೆ ಬಾರದಂತೆಯೇ, ಸರ್ಪದಂತೆ ಬಲಿಷ್ಠನಾದ ಕಾಲನು ಜೀವಿಯ ಸಮೀಪ ಬರುತ್ತಾನೆ. ||೨೦||
ಆ ಮೃತ್ಯುವಿನ ಸಂಪ್ರಾಪ್ತಿಯ ಸ್ಥಿತಿಯಲ್ಲಿ ಕೂಡ, ಜೀವಿಯಲ್ಲಿ ವೈರಾಗ್ಯ ಉಂಟಾಗುವುದಿಲ್ಲ. ಜೀವಿಯು ಯಾರನ್ನು ಪಾಲನೆ - ಪೋಷಣೆ ಮಾಡಿರುತ್ತಾನೋ, ಅವರಿಂದಲೇ ಪಾಲನೆ - ಪೋಷಣೆಗೊಳಗಾಗುತ್ತಾನೆ; ವೃದ್ಧಾವಸ್ಥೆಯ ಕಾರಣ ವಿಕೃತರೂಪಧಾರಿಯಾದ ಮತ್ತು ಮರಣಾಭಿಮುಖನಾದ ಆ ಜೀವಿಯು ಮನೆಯಲ್ಲಿ ಅವಮಾನಪೂರ್ವಕ ನೀಡಲಾಗುವ ಪದಾರ್ಥಗಳನ್ನು ಶ್ವಾನದಂತೆ ಸೇವಿಸುತ್ತ ಜೀವನವನ್ನು ಕಳೆಯುತ್ತಾನೆ. ಆತ ರೋಗಿಯಾಗುತ್ತಾನೆ, ಅಜೀರ್ಣದಿಂದ ಪೀಡಿತನಾಗುತ್ತಾನೆ; ಆತನ ಆಹಾರ ಮತ್ತು ಸಮಸ್ತ ಚಟುವಟಿಕೆಗಳು ಕಡಿಮೆಯಾಗುತ್ತವೆ ||೨೧-೨೨||
ಪ್ರಾಣವಾಯು ಹೊರಗೆ ಹೋಗುವ ಸಮಯ ಕಣ್ಣುಗಳು ಕೆಳಮೇಲಾಗುತ್ತವೆ, ನಾಡಿಗಳು ಕಫದ ಕಾರಣದಿಂದ ಸ್ಥಗಿತವಾಗುತ್ತವೆ. ಕೆಮ್ಮು ಪೀಡಿಸುತ್ತದೆ ಮತ್ತು ಉಸಿರೆಳೆದುಕೊಳ್ಳಲು ವಿಶೇಷ ಪ್ರಯತ್ನ ಮಾಡಬೇಕಾಗುತ್ತದೆ ಮತ್ತು ಕಂಠದಿಂದ 'ಸುರ್-ಗುರ್' ಎಂಬ ಶಬ್ಧ ಹೊರಹೊಮ್ಮತೊಡಗುತ್ತದೆ. ||೨೩||
ಚಿಂತಾಗ್ರಸ್ಥ ಸ್ವಜನರಿಂದ ಸುತ್ತುವರೆದ ಮತ್ತು ಶಯನಸ್ಥನಾದ ಆ ಜೀವಿ (ವ್ಯಕ್ತಿ) ಕಾಲಪಾಶದ ವಶನಾಗುವ ಕಾರಣ, ಸಜ್ಜನರು ಕರೆದರೂ ಕೂಡ, ಓಗೊಡುವುದಿಲ್ಲ. ಈ ಪ್ರಕಾರ, ಕುಟುಂಬದ ಪಾಲನೆ-ಪೋಷಣೆಯಲ್ಲಿ ನಿರಂತರ ತೊಡಗಿರುವಂಥ, ಅಜಿತೇಂದ್ರಿಯ ವ್ಯಕ್ತಿ (ಅಂತ್ಯದಲ್ಲಿ) ರೋಧನ - ವಿಲಾಪದಲ್ಲಿ ತೊಡಗಿದ ಬಂಧು - ಬಳಗದವರ ಮಧ್ಯೆ ಉತ್ಕಟ ವೇದನೆಯಿಂದ ಸಂಜ್ಞಾಶೂನ್ಯನಾಗಿ ಮರಣ ಹೊಂದುತ್ತಾನೆ ||೨೫||
ಹೇ ಗರುಡ ! ಆ ಅಂತಿಮ ಕ್ಷಣಗಳಲ್ಲಿ ಜೀವಿಗೆ ವ್ಯಾಪಕ (ದಿವ್ಯ) ದೃಷ್ಟಿ ಪ್ರಾಪ್ತಿಯಾಗಿ ಹೋಗುತ್ತದೆ; ಅದರ ಫಲವಾಗಿ, ಲೋಕ - ಪರಲೋಕ ಎರಡನ್ನೂ ಒಟ್ಟಿಗೇ ನೋಡತೊಡಗುತ್ತಾನೆ. ಅದರಿಂದ ಚಕಿತನಾಗಿ ಆತ ಏನನ್ನೂ ಹೇಳ ಬಯಸುವುದಿಲ್ಲ ||೨೬||
ಯಮದೂತರು ಸಮೀಪ ಬಂದಾಗ, ಸಮಸ್ತ ಇಂದ್ರಿಯಗಳು ಊನವಾಗಿ ಹೋಗುತ್ತವೆ, ಚೈತನ್ಯ ಜಡವಾಗುತ್ತದೆ ಮತ್ತು ಪ್ರಾಣ ಚಲಾಯಮಾನವಾಗುತ್ತದೆ ||೨೭||
ಆತುರ ಕಾಲದಲ್ಲಿ ಪ್ರಾಣವು (ಪ್ರಾಣವಾಯು) ತನ್ನ ಸ್ಥಾನವನ್ನು ತೊರೆಯುವುದರಿಂದ, ಒಂದು ಕ್ಷಣವೂ ಕೂಡ ಒಂದು ಯುಗದಂತೆ ಭಾಸವಾಗುತ್ತದೆ. ಆ ಸಮಯದಲ್ಲಿ ನೂರು ಚೇಳುಗಳು ಕಚ್ಚುವುದರಿಂದ ಉಂಟಾಗುವ ಯಾತನೆಯ ಅನುಭವ (ಜೀವಿಗೆ) ವಾಗುತ್ತದೆ ||೨೮||
ಆ ಮರಣಸನ್ನ ವ್ಯಕ್ತಿ ಬುರುಗನ್ನು ಉಗುಳತೊಡಗುತ್ತಾನೆ ಮತ್ತು ಆತನ ಬಾಯಿಯಲ್ಲಿ ಲಾಲಾಜಲ ತುಂಬಿಹೋಗುತ್ತದೆ. ಪಾಪಿ ಜನರ ಪ್ರಾಣವಾಯು ಅಧೋಮಾರ್ಗ (ಗುದದ್ವಾರ) ದಿಂದ ಹೊರಬರುತ್ತದೆ ||೨೯||
ಆ ಸಮಯದಲ್ಲಿ ಎರಡೂ ಕೈಗಳಲ್ಲಿ ಪಾಶ ಮತ್ತು ದಂಡ ಧಾರಣೆ ಮಾಡಿದ, ನಗ್ನ, ಹಲ್ಲುಗಳನ್ನು ಮಸೆಯುತ್ತಿರುವ, ಕ್ರೋಧಪೂರ್ಣ ನೇತ್ರವುಳ್ಳ ಯಮನ ಇಬ್ಬರು ಭಯಂಕರ ದೂತರು ಸಮೀಪ ಬರುತ್ತಾರೆ ||೩೦||
ಅವರ ಕೇಶಕ್ಕೆ ಮುಖಮಾಡಿ ಸೆಟೆದು ನಿಂತಿರುತ್ತವೆ. ಅವರು ಕಾಗೆಗೆ ಸಮಾನವಾಗಿ ಕಪ್ಪು ವರ್ಣದವರಾಗಿರುತ್ತಾರೆ, ಮುಖ ವಕ್ರವಾಗಿರುತ್ತದೆ. ಅವರ ಉಗುರುಗಳು ಆಯುಧಕ್ಕೆ ಸಮಾನವಾಗಿರುತ್ತವೆ. ಅವರನ್ನು ನೋಡಿ ಭಯಭೀತನಾದ ಮರಣಸನ್ನ ಜೀವಿ ಮಲ-ಮೂತ್ರದ ವಿಸರ್ಜನೆ ಮಾಡತೊಡಗುತ್ತಾನೆ. ||೩೧||
ತನ್ನ ಪಂಚಭೌತಿಕ ಶರೀರದಿಂದ 'ಹಾ...ಹಾ...' ಎಂದು ಆರ್ತನಾದ ಮಾಡುತ್ತ ಹೊರಬರುವ ಹಾಗೂ ಯಮದೂತರಿಂದ ಬಂಧಿಸಲ್ಪಟ್ಟ, ಆ ಅಂಗುಷ್ಠ (ಹೆಬ್ಬೆರಳು) ದ ಪ್ರಮಾಣದ ಪುರುಷ ತನ್ನ ಮನೆಯನ್ನು ನೋಡುತ್ತ, ಯಮದೂತರಿಂದ ಯಾತನಾ ದೇಹದ ಧಾರಣೆ ಮಾಡುತ್ತ, ಕೊರಳಲ್ಲಿ ಪಾಶ ಬಿಗಿಸಿಕೊಂಡು, ರಾಜ ಪುರುಷರು ದಂಡನೀಯ ಅಪರಾಧಿಯನ್ನು ಎಳೆದೊಯ್ಯುವಂತೆ, ಯಮ ದೂತರಿಂದ ದೂರದ ಯಮ ಮಾರ್ಗದತ್ತ ಯಾತನೆಗಾಗಿ ಎಳೆದೊಯ್ಯಲ್ಪಡುತ್ತಾನೆ ||೩೨-೩೩||
ಈ ಪ್ರಕಾರ ಎಳೆದೊಯ್ಯುತ್ತ, ಆ ಜೀವಿಗೆ ಯಮದೂತರು, ನರಕಗಳ ತೀವ್ರ ಭಯಂಕರವಾದ ಭಯವನ್ನು ಕುರಿತು ವರ್ಣನೆ ಮಾಡುತ್ತಿರುತ್ತಾರೆ. ||೩೪||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ