ಮನೆಯ ಸುತ್ತಲಿನ ಪರಿಸರದಲ್ಲಿ ನಮಗೇ ಅರಿವಿಲ್ಲದ೦ತೆ ಕಳೆಯೆ೦ದು ಅವಗಣನೆಗೆ ಸಿಲುಕಿ ಕಾಲಡಿಯಲ್ಲಿ ನಲುಗುವ ಅನೇಕ ಗಿಡಗಳಲ್ಲೂ ಅದ್ಭುತವಾದ ಔಷಧೀಯ ಗುಣಗಳಿರುತ್ತವೆ ಎಂಬುದನ್ನು ಹಿ೦ದೆಯೆ ನಾಟಿ ಔಷಧಿ ಪದ್ಧತಿಯರಿತ ವೈದ್ಯರು ಕ೦ಡುಕೊ೦ಡಿದ್ದರು. ಶಾಸ್ತ್ರೀಯ ಹೆಸರು ಹೇಳಲು ಅರಿಯದಿದ್ದರೂ ಉಪಯೋಗಗಳನ್ನು ಪರ೦ಪರಾಗತವಾಗಿ ಅರಿತು ತಿಳಿಸುವ ಇವರ ಕಲೆ ನಿಜಕ್ಕೂ ಪ್ರಶ೦ಸನೀಯ. ಅ೦ತಹ ಸಸ್ಯಗಳಲ್ಲಿ ಒ೦ದು ನಾವು ದಿನಾ ನೋಡುವ ಹಾಡೆ ಬಳ್ಳಿ. ಕಳೆಯ ರೂಪದಲ್ಲಿ ಕಾಣುವ ಅದ್ಭುತ ಔಷಧೀಯ ಗುಣಗಳನ್ನು ಹೊಂದಿರುವ ಪುರಾತನ ಆಯುರ್ವೇದದಲ್ಲಿ ಬಹೂಪಯೋಗಿಯೆಂದು ನಮೂದಿಸಲ್ಪಟ್ಟ ಹಾಡೆ ಬಳ್ಳಿಯನ್ನು ಸಂಸ್ಕೃತದಲ್ಲಿ 'ಪಾಠಾ' ಎನ್ನುವರು. ಚರಕ ಮುನಿ ತನ್ನ ಸಂಹಿತೆಯಲ್ಲಿ ಇದನ್ನು ಸಂಧಾನೀಯ (healing herb), ಸ್ತನ್ಯಶೋಧನ (Lactodepurant), ಜ್ವರಹರ (Curing the fever) ಎಂದಾಗಿ ಉಲ್ಲೇಖಿಸಿದರೆ ಮಹರ್ಷಿ ಸುಶ್ರುತ ತನ್ನ ಸಂಹಿತೆಯ ಸೂತ್ರ A-38ಲ್ಲಿ ಇದನ್ನು ವಿಷಘ್ನ (Anti toxin)ವಾಗಿ ಗುರುತಿಸಿದ್ದಾರೆ. ಇದರಲ್ಲಿ ಎರಡು ವಿಧದ ಸಸ್ಯಗಳನ್ನು ಕಾಣಬಹುದು. ದೊಡ್ಡ ಎಲೆಗಳ ಬಳ್ಳಿಯು ಬೃಹತ್ ಪಾಠಾ ಅಥವಾ ರಾಜ ಪಾಠಾ ವಾಗಿದ್ದು ವೈಜ್ಞಾನಿಕ ಹೆಸರು 'ಸೈಕ್ಲಿಯಾ ಪೆಲ್ಟಟಾ (Cyclea peltata). ಸಣ್ಣ ಸಣ್ಣ ಎಲೆಗಳ ಮತ್ತೊಂದು ಲಘು ಪಾಠಾ, ವೈಜ್ಞಾನಿಕ ಹೆಸರು 'ಸಿಸಂಪೆಲಸ್ ಪೆರೇರಾ' (Cisampelos pareira). ಹೆಚ್ಚು ಕಡಿಮೆ ಒಂದೇ ಗುಣ, ರಚನೆ ಹಾಗೂ ಉಪಯೋಗಗಳನ್ನು ಹೊಂದಿರುವ ಇದು ಅಗಳ ಶುಂಠಿ ಎ೦ದು ಕರೆಯಲ್ಪಡುತ್ತದೆ. ಗುರುತಿಸುತ್ತಾರೆ. ಸಂಸ್ಕೃತದಲ್ಲಿ 'ಪಾಠಾ' ಎಂದೂ, ಹಿಂದಿಯಲ್ಲಿ 'ಪಾಡ', ಮಲಯಾಳದಲ್ಲಿ 'ಕಟ್ಟುವಲ್ಲಿ' , ಕನ್ನಡದಲ್ಲಿ 'ಹಾಡೆಬಳ್ಳಿ' ಎಂದೂ ಗುರುತಿಸಲ್ಪಡುತ್ತದೆ.
ಭಾರತ ಮತ್ತು ಶ್ರೀಲಂಕಾಗಳಲ್ಲಿ ಗೋಚರಿಸುವ ಹಾಡೆ ಬೇಲಿಬದಿಯಲ್ಲಿ, ಕುರುಚಲು ಸಸ್ಯಾವರಣದಲ್ಲಿ ಹುಟ್ಟಿ ಬಳ್ಳಿಯಾಗಿ 800-900ಮೀಟರುಗಳವರೆಗೆ ಹಬ್ಬುತ್ತದೆ. ಇದೊಂದು ಉದ್ದವಾಗಿ ಬೆಳೆಯುವ ಬಳ್ಳಿಯಾಗಿದ್ದು ನೀಳ ಕಾಂಡದ ಸಹಾಯದಿಂದ ದೊಡ್ಡ ಮರಗಿಡಗಳ ಮೇಲೆ, ನೆಲದಲ್ಲಿ ಹರಡಿಕೊಂಡಿರುತ್ತದೆ.ಎಲೆಗಳು ಹೃದಯಾಕಾರದಲ್ಲಿದ್ದು, ಕಾಂಡದಲ್ಲಿ ವಿರುದ್ಧ ದಿಕ್ಕಿನಲ್ಲಿ ಇರುವುವು. ಇದರ ಹೂಗಳು ಏಕಲಿಂಗಿಯಾಗಿದ್ದು, ನಸು ಹಳದಿ ಬಣ್ಣವನ್ನು ಹೊಂದಿರುವುವು.ಹಣ್ಣುಗಳು ದುಂಡಗೆ ಹಾಗೂ ಬೆಳ್ಳಗಿದ್ದು ಡಿಸೆಂಬರ್ ವೇಳೆಗೆ ಬಳ್ಳಿಯಲ್ಲಿ ಬಿಳಿಬಣ್ಣದ ಕಾಳುಮೆಣಸಿನ ಗಾತ್ರದ ಕಾಯಿಗಳು ದ್ರಾಕ್ಷಿಗೊಂಚಲಿನಂತೆ ಜೋತುಬಿದ್ದಿರುತ್ತವೆ. ಇದು ಹಲವು ಔಷಧೀಯ ಗುಣಗಳನ್ನು ಹೊಂದಿರುವ ಬಳ್ಳಿಯಾಗಿದ್ದು ಸೆಖೆಗಾಲದ ಹಲವು ರೋಗಗಳಿಗೆ ಈ ಸಸ್ಯದ ಎಲೆ ಮತ್ತು ಬೇರುಗಳು ಉಪಯೋಗಿಯಾಗಿವೆ. ಈ ಬಳ್ಳಿಯ ಕುಡಿಯನ್ನು ಹುರಿದು ತಂಬುಳಿ ಮಾಡಬಹುದು.
ಕೆಲವು ಔಷಧೀಯ ಉಪಯೋಗಗಳು :
ಹುಳುಕಡ್ಡಿ, ತುರುಕಜ್ಜಿ ಇತ್ಯಾದಿಯಾದಾಗ ಇದರ ಕುಡಿಯಲೆಯನ್ನು ದೋಸೆ ಮಾಡಿ ತಿಂದರೆ ರಕ್ತಶುದ್ಧಿಯಾಗಿ ಗುಣವಾಗುವುದು. ಆಸಿಡಿಟಿ ಹೆಚ್ಚಾದಾಗ ಇದರ 4-5 ಎಲೆಗಳನ್ನು ನೀರಿಗೆ ಬೆರೆಸಿ ಕಿವುಚಿ ಸಕ್ಕರೆ ಬೆರೆಸಿ ಕುಡಿಯಬೇಕು. ಎಲೆಗಳನ್ನು ಕಿವುಚಿದಾಗ ಬರುವ ಲೋಳೆಯನ್ನು ತಲೆಗೆ ಮೆತ್ತಿಕೊಂಡು ಮಲಗಿದರೆ'ಉಷ್ಣದ ತಲೆನೋವು ಕಡಿಮೆಯಾಗುವುದು. ಹಾಡೆ ಎಲೆಯನ್ನು ನೀರಲ್ಲಿ ನೆನೆಸಿ ಹಿಂಡಿ ತಯಾರಿಸಿದ ಅಂಟಾದ ಲೋಳೆ ಕಣ್ಣಿಗೆ ತಂಪು. ಇದರ ಗೊಂಪು ಕೂಡಾ ತಲೆಗೆ ತುಂಬಾ ತಂಪನ್ನು ನೀಡುತ್ತದೆ. ಹಾಡೆ ಬೇರು ಮುಖ್ಯ ಉಪಯೋಗವನ್ನು ಹೊಂದಿದೆ. ಬೇರನ್ನು ಅರೆದು ಲೇಪಿಸುವುದರಿಂದ ಹುಣ್ಣುಗಳು ಗುಣವಾಗುತ್ತವೆ. ಇದರ ಬೇರಿನ ಕಷಾಯವನ್ನು 15-30 ಮಿಲಿಯಂತೆ ದಿನದ 3 ಹೊತ್ತು ಒಂದು ವಾರ ಸೇವಿಸಿದರೆ ಮೂತ್ರಕಟ್ಟು, ಮಲಬದ್ಧತೆ ನಿವಾರಣೆ. ಸೊಂಟನೋವು, ಅಜೀರ್ಣದ ಹೊಟ್ಟೆನೋವಿಗೆ ಇದೇ ಕಷಾಯವನ್ನು 30 ಮಿಲಿಯಷ್ಟು 3 ದಿನ ಸೇವಿಸಬೇಕು. ಗರ್ಭಿಣಿಯರಿಗೆ ಬೇರಿನ ಕಷಾಯ ಗರ್ಭಕೋಶದ ಟಾನಿಕ್ ಆಗಿದ್ದು ಹೊಟ್ಟೆನೋವು,ವಾಯು ಶಮನ ಮಾಡುತ್ತದೆ. ಶಿಶುಗಳಿಗೆ ಭೇದಿ ಶುರುವಾದಾಗ ಇದರ ಬೇರು ತೇಯ್ದು ಗಂಧ ಮಾಡಿ ಎದೆಹಾಲಿನಲ್ಲಿ ನೆಕ್ಕಿಸಬೇಕು. ಬೇರಿನಿಂದ ಮಾಡಿದ ಎಣ್ಣೆ ಕಾಲು ಬೆರಳುಗಳೆಡೆಯ ಹುಳ ತಿನ್ನುವುದನ್ನು ಇಲ್ಲವಾಗಿಸುತ್ತದೆ.
ಆಕರ : ವಿವಿಧ ಮೂಲಗಳಿ೦ದ ಸ೦ಗ್ರಹ
[25/09 6:47 PM] +91 94498 28225: ನೆಗಡಿ- ಜ್ವರಕ್ಕೆ ಮನೆ ಮದ್ದು
ಹವಾಮಾನ ಬದಲಾದಾಗ ನೆಗಡಿ, ಜ್ವರ ಸಾಮಾನ್ಯ. ಚಳಿಗಾಲ ಶುರುವಾಗಿದ್ದು ಅನೇಕರಿಗೆ ನೆಗಡಿ ಸಮಸ್ಯೆ ಕಾಡ್ತಾ ಇದೆ. ಮಾರುಕಟ್ಟೆಯಲ್ಲಿ ಇದರ ನಿಯಂತ್ರಣಕ್ಕೆ ಸಾಕಷ್ಟು ಎಂಟಿಬಯೋಟಿಕ್ ಮಾತ್ರೆಗಳು ಸಿಗುತ್ವೆ. ಆದ್ರೆ ಅದರ ಸೇವನೆಯಿಂದ ಅಡ್ಡ ಪರಿಣಾಮಗಳಾಗುತ್ತವೆ. ಚಿಕ್ಕ ನೆಗಡಿಗೆ ವೈದ್ಯರ ಬಳಿ ಹೋಗೋದು ಕಷ್ಟ. ಮನೆ ಮದ್ದಿನ ಮೂಲಕ ಎರಡೇ ದಿನದಲ್ಲಿ ನೆಗಡಿ- ಜ್ವರವನ್ನು ಕಡಿಮೆ ಮಾಡಿಕೊಳ್ಳಬಹುದು.
ಈ ಮನೆ ಮದ್ದು ಮಾಡೋದು ಸುಲಭ. ಮೊದಲು ಕತ್ತರಿಸಿದ ಅರ್ಧ ಈರುಳ್ಳಿ, 4-5 ಬೆಳ್ಳುಳ್ಳಿ ಹಾಗೂ ಎರಡು ಚಮಚ ನಿಂಬೆ ರಸವನ್ನು ಮಿಕ್ಸಿ ಮಾಡಿಕೊಳ್ಳಿ. ನಂತ್ರ ಎರಡು ಗ್ಲಾಸ್ ನೀರನ್ನು ಕುದಿಸಿಕೊಳ್ಳಿ. ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಮಿಶ್ರಣವನ್ನು ಸೇರಿಸಿ ಸ್ವಲ್ಪ ಹೊತ್ತು ಬಿಸಿ ಮಾಡಿ.
ಬೆಳಗ್ಗೆ ಹಾಗೂ ರಾತ್ರಿ ಊಟದ ನಂತ್ರ ಇದನ್ನು ಸೇವನೆ ಮಾಡುವುದರಿಂದ ನಿಮಗೆ ಹಿತವೆನಿಸುತ್ತದೆ. ಈ ಔಷಧಿ, ಜ್ವರ ಹಾಗೂ ನೆಗಡಿಯನ್ನು ಕಡಿಮೆ ಮಾಡುತ್ತದೆ. ಶೀತದ ವಿರುದ್ಧ ಹೋರಾಡುವ ನೈಸರ್ಗಿಕ ಔಷಧಿ ಇದು. ಇದರ ಸೇವನೆಯಿಂದ ಕೆಮ್ಮು- ಕಫ ಕಡಿಮೆಯಾಗಿ ಉಸಿರಾಟದ ಸಮಸ್ಯೆಯಿಂದಲೂ ಮುಕ್ತಿ ಸಿಗುತ್ತದೆ.
------------------------------------------------------------
ಸಾಮಾನ್ಯವಾಗಿ ನಮ್ಮನ್ನು ಕಾಡುವ ಅನೇಕ ಸಮಸ್ಯೆಗಳಿವೆ. ಇಲ್ಲಿ ಅದರ ನಿವಾರಣೆಗೆ ಕೆಲವು ಸರಳ ಮನೆಮದ್ದು ನೀಡಲಾಗಿದೆ. ಅವುಗಳನ್ನು ಅನುಸರಿಸಿ, ಸಮಸ್ಯೆಯಿಂದ ದೂರವಾಗಿ . ಒಂದು ವಿಷ್ಯ ನೆನಪಲ್ಲಿ ಇಡಿ.. ಯಾವುದೇ ಸಮಸ್ಯೆಯ ತೀವ್ರತೆಗೆ ತಜ್ಞ ವೈದ್ಯರ ಬಳಿ ಹೋಗಿ ಚಿಕಿತ್ಸೆ ತೆಗೆದು ಕೊಳ್ಳುವುದು ಅತ್ಯಗತ್ಯ.* ಎರಡು ತುಳಸಿ ಎಲೆ, ಚಿಟುಕೆ ಉಪ್ಪು , ಕರಿಕಾಳು ಮೆಣಸಿನ ಪುಡಿ ಈ ಮೂರನ್ನು ಸೇರಿಸಿ ನೋವಿರುವ ಕಡೆ ಅದನ್ನು ಒತ್ತಿ ಹಿಡಿಯಿರಿ . ಎರಡು ನಿಮಿಷಗಳ ನಂತರ ನೋವು ಕಡಿಮೆ ಆಗುತ್ತದೆ.* ಮುಂಜಾನೆ ಐದು ಲೋಟ ನೀರು ಕುಡಿದರೆ ಬಾಯಿ ದುರ್ವಾಸನೆ ದೂರವಾಗುತ್ತದೆ.*ಖಾಲಿ ಹೊಟ್ಟೆಯಲ್ಲಿ ತುಳಸಿ ರಸ ದಲ್ಲಿ ಜೇನು ಮಿಶ್ರಮಾಡಿ ಕುಡಿದರೆ ಕೆಮ್ಮು-ನೆಗಡಿ ದೂರವಾಗುತ್ತದೆ.*ಶುಂಠಿ ಜೊತೆಗೆ ಸಕ್ಕರೆ ಬೆರಸಿ ತಿಂದರೆ ಕೆಮ್ಮು ದೂರವಾಗುತ್ತದೆ.
[25/09 6:47 PM] +91 94498 28225: ಜ್ವರ ಬಂದಾಗ ಅದರಲ್ಲೂ ಜ್ವರ ಮಕ್ಕಳಿಗೆ ಬಂದಾಗ ಯಾರಾದರೂ ಆತಂಕಗೊಳ್ಳುವುದು ಸಹಜ. ಆದರೆ ಅದೆಷ್ಟೋ ಸಲ ತಕ್ಷಣಕ್ಕೆ ವೈದ್ಯರನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಇನ್ನಷ್ಟು ಗಾಬರಿಗೊಳ್ಳುತ್ತೇವೆ. ಆದರೆ ಹೀಗೆ ಭಯಗೊಳ್ಳುವುದರ ಬದಲು ಮನೆಯಲ್ಲಿಯೇ ಕೆಲವು ಮನೆಮದ್ದುಗಳ ಮೂಲಕ, ಕೆಲವು ಪ್ರಕ್ರಿಯೆಗಳ ಮೂಲಕವೂ ಜ್ವರವನ್ನು ಕಡಿಮೆಗೊಳಿಸಬಹುದು.
ಒಂದು ಮಗು ಜ್ವರ ಹೊಂದಿರುವಾಗ, ಹೆಚ್ಚಿನ ಜನರು ಅಸೆಟಾಮಿನೋಫೆನ್ ಗಾಗಿ ಔಷಧಾಲಯಕ್ಕೆ ಮುನ್ನುಗ್ಗುತ್ತಾರೆ. ನಿಮ್ಮ ಮಕ್ಕಳು ಎಲ್ಲಾ ರಾಸಾಯನಿಕಗಳ ಬಳಕೆಯಿಂದ ಜ್ವರ ಕಡಿಮೆ ಮಾಡಲು ಕೇವಲ ಪ್ರಯತ್ನ ಪಡಬಹುದು ಅಷ್ಟೇ. ಜ್ವರದ ಲಕ್ಷಣಗಳು ಕಾಣಿಸಿಕೊಂಡಾಗ ಜ್ವರದಿಂದ ಬಳಲುತ್ತಿರುವ ಸಂದರ್ಭದಲ್ಲಿ ಬೆಚ್ಚಗೆ ಮತ್ತು ಸ್ವಚ್ಛವಾಗಿ ಇರಲು ನೆನಪಿಡಿ. ಜ್ವರ ಒಂದು ದಿನ ಅಥವಾ ಎರಡು ದಿನಗಳ ಒಳಗೆ ಕಡಿಮೆಯಾಗುತ್ತದೆ.
ಸಾಮಾನ್ಯ ಸಲಹೆಗಳು
1. ಆರ್ದ್ರಯುಕ್ತ ಸಾಕ್ಸ್ ಗಳನ್ನು ಕಾಲುಗಳಿಗೆ ಧರಿಸಿ. ಇದು ವಿಲಕ್ಷಣ ಎನಿಸಿದರು ನಿಮ್ಮ ಮಕ್ಕಳ ಜ್ವರ ನಿವಾರಣೆಯಾಗುವಲ್ಲಿ ಸಹಾಯವಾಗುತ್ತದೆ. ಒಂದು ಜೊತೆ ಕಾಟನ್/ ಹತ್ತಿ ಸಾಕ್ಸ್ (ಕಾಲುಚೀಲ) ಗಳನ್ನು ಬಳಸಿ ಮತ್ತು ಅವು ನಿಮ್ಮ ಮಗುವಿನ ಮೊಣಕಾಲುಗಳವರೆಗೆ ಮುಚ್ಚುವ ಹಾಗಿರಲಿ. ಅತ್ಯಂತ ತಂಪಾದ ನೀರಿನಲ್ಲಿ ಸಾಕ್ಸ್ ಗಳನ್ನು ಸಂಪೂರ್ಣವಾಗಿ ಒದ್ದೆ ಮಾಡಿ. ಹೆಚ್ಚುವರಿ ನೀರನ್ನು ಹಿಂಡಿ ತೆಗೆಯಿರಿ. ನಿಮ್ಮ ಮಗುವಿಗೆ ಈ ಸಾಕ್ಸ್ ನ್ನು ಹಾಕಿ. ಹಾಗೂ ಸಾಕ್ಸ್ ಒಣಗಿದರೆ ಮತ್ತೆ ಹಿಂದಿನ ಪ್ರಕ್ರಿಯೆಯನ್ನೇ ಮಾಡಿ.
2. ಬೆಚ್ಚಗಿನ ಅಥವಾ ಕುದುಷ್ಣ ಸ್ನಾನವನ್ನು ಮಾಡಿ. ಬೆಚ್ಚಗಿನ ಸ್ನಾನ ಉತ್ತಮವಾದುದು. ಜ್ವರದಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಜ್ವರವು ಹೆಚ್ಚುತ್ತಿದ್ದರೆ ಬೆಚ್ಚಗಿನ ತಾಪಮಾನದಲ್ಲಿ ನಿಧಾನವಾಗಿ ಜ್ವರ ಇಳಿಯುತ್ತದೆ. ಆದ್ದರಿಂದ ಬೆಚ್ಚಗಿನ ಸ್ನಾನ ಒಳ್ಳೆಯದು. ವ್ಯಕ್ತಿ ದೇಹದ ತಾಪಮಾನದಲ್ಲಾದ ಬದಲಾವಣೆಗಳನ್ನು ಗಮನಿಸಬಹುದು. ಸ್ವಲ್ಪ ತಾಪಮಾನ ಉಳಿಸಿಕೊಳ್ಳಲು (ತುಲನಾತ್ಮಕವಾಗಿ) ತಂಪಾದ, ತೇವ ನೀರನ್ನು ಬಳಸಬಹುದು.
3. ತಲೆ ಮತ್ತು ಕುತ್ತಿಗೆಯ ಭಾಗಗಳನ್ನು ತಂಪಾಗಿಡಿ. ಅತಿ ಹೆಚ್ಚು ಜ್ವರ ಬಂದಾಗ ದೊಡ್ಡ ಹತ್ತಿಯ/ ಕಾಟನ್ ಸ್ಕಾರ್ಫ್ ತೆಗೆದುಕೊಂಡು ಹೆಚ್ಚುವರಿ ನೀರನ್ನು ಹಿಂಡಿ ಮಗುವಿನ ತಲೆ ಮತ್ತು ಕುತ್ತಿಗೆಯ ಸುತ್ತ ಸ್ಕಾರ್ಫ್ ನ್ನು ಅತ್ಯಂತ ಸಡಿಲವಾಗಿ ಸುತ್ತಿ. ಯಾವಾಗ ಸ್ಕಾರ್ಫ್ ಒಣಗುತ್ತದೆಯೋ ಇದೇ ಕ್ರಿಯೆಯನ್ನು ಪುನರಾವರ್ತಿಸಿ.
4. ತೈಲ ರಬ್ ನ್ನು ಬಳಸಿ. ಎರಡು ವರ್ಷಗಳ ಒಳಗಿನ ಮಗುವಿಗೆ ಮಲಗಿಸುವುದಕ್ಕಿಂತ ಮೊದಲು ಶುದ್ಧ ಆಲಿವ್ ಎಣ್ಣೆಯಿಂದ ಇಡೀ ದೇಹವನ್ನು ರಬ್ ಮಾಡಿ ಮತ್ತು ಹತ್ತಿ ಉಡುಪುಗಳ ಅಥವಾ ಹೊದಿಕೆಯನ್ನು ಉತ್ತಮ ಮಗುವನ್ನು ಕಟ್ಟಿ ಮಲಗಿಸಿ. ನಂತರ ತೈಲ ತೆಗೆದುಹಾಕಲು ಬೆಳಗ್ಗೆ ಸ್ನಾನ ಮಾಡಿಸಿ ಈ ಹಂತವೂ ತೇವ ಸಾಕ್ಸ್ ಜೊತೆಗೆ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.
5. ಸಾಕಷ್ಟು ನೀರನ್ನು ಕುಡಿಯಿರಿ. ಜ್ವರವು ದೇಹದಲ್ಲಿನ ಜೀವಿಗಳೊಂದಿಗೆ ಹೋರಾಟ ಮಾಡುವ ದೇಹದ ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ಆದರೆ ಅತೀ ಶಾಖ ಎಂದರೆ ಕಡಿಮೆ ಹೈಡ್ರೇಶನ್ ಎಂದರ್ಥ. ಅದರಲ್ಲೂ ಅತಿಸಾರ ಅಥವಾ ವಾಂತಿ ಸಂದರ್ಭದಲ್ಲಿ, ನಿಮ್ಮ ದೇಹದಲ್ಲಿ ಅಗತ್ಯದಷ್ಟು ನೀರಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸದಾ ನೀರನ್ನು ಕುಡಿಯುತ್ತಿರಿ.
6. ಒಂದು ಲಘು ಬಟ್ಟೆಯನ್ನು ಧರಿಸಿ ಮತ್ತು ದಪ್ಪ ಬಟ್ಟೆಗಳನ್ನು ಧರಿಸಬೇಡಿ. ದಪ್ಪ ಬಟ್ಟೆ ನಿಮ್ಮ ದೇಹದ ಉಷ್ಣತೆ ಹೆಚ್ಚಾಗುವಂತೆ ಮಾಡುತ್ತದೆ. ನಿಮಗೆ ಚಳಿಯ ಅನುಭವವಾರದೂ ಸಹ ನಿಮ್ಮ ಸಂಪೂರ್ಣ ದೇಹವನ್ನು ಹೊದಿಕೆಗಳಿಂದ ಮುಚ್ಚಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ನಿಮ್ಮ ದೇಹದ ತಾಪಮಾನ ಅಧಿಕವಾಗುತ್ತದೆ.
7. ತ್ವರಿತ ರೀತಿಯಲ್ಲಿ ನಿಮ್ಮ ದೇಹದ ತಾಪಮಾನ ತಗ್ಗಿಸಲು ಹುಣಿಸೆಹಣ್ಣಿನ ರಸ ಅಥವಾ ಅಲೋ ವೆರಾ ಜೆಲ್ ಅಥವಾ ಪೇರಲ ಎಲೆಯ ರಸವನ್ನು ಬಳಸಿ. ಹಣೆಗೆ ರಸವನ್ನು ಹಚ್ಚಿ. ಇದು ನಿಮ್ಮ ದೇಹದ ತಾಪಮಾನ ಇಳಿಕೆಯಾಗುವವರೆಗೆ ಮತ್ತೆ ಹಚ್ಚಿ. ನಿಮ್ಮ ಮನೆಯಲ್ಲಿ ಗಾಳಿಯು ಎಲ್ಲಾ ಕಡೆ ಚಲಾವಣೆಯಾಗುವಂತೆ ನೋಡಿಕೊಳ್ಳಿ. ಚೆನ್ನಾಗಿ ಮಲಗಿ ಮತ್ತು ಉತ್ತಮವಾಗಿ ವಿಶ್ರಾಂತಿ ಪಡೆಯಿರಿ.
[25/09 6:47 PM] +91 94498 28225: ಮಕ್ಕಳಿಗೆ ಜ್ವರ ಬರದಂತೆ ತಡೆಯಲು ಈ ಸರಳ ವಿಧಾನವನ್ನು ಅನುಸರಿಸಿ...
ವಯಸ್ಕರಿಗಿಂತ ಮಕ್ಕಳು ಬೇಗ ಜ್ವರಕ್ಕೆ ತುತ್ತಾಗುತ್ತಾರೆ. ಹೀಗಾಗಿ ಮಕ್ಕಳನ್ನು ನೆಗಡಿ ಮತ್ತು ಜ್ವರ ಬಾಧೆಯಿಂದ ದೂರವಿಡುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಕೆಲವೊಂದು ಸರಳ ಸಲಹೆಗಳು.
ನಿರಂತರವಾಗಿ ಕೈ ತೊಳೆಯುವುದು :
ಮಕ್ಕಳು ನಿರಂತರವಾಗಿ ಸೋಪ್ನಿಂದ ಕೈ ತೊಳೆದುಕೊಳ್ಳುವಂತೆ ಮಾಡಿ. ಇದರಿಂದ ಬಹುತೇಕ ಪ್ರಕರಣಗಳಲ್ಲಿ ಜ್ವರಕ್ಕೆ ಪ್ರಮುಖವಾಗಿ ಕಾರಣವಾಗುವ ಕೈಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಕೀಟಗಳು ನಾಶವಾಗುತ್ತದೆ. ಆದ್ದರಿಂದ ಕೈಗಳ ಶುಚಿತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಆ ಮೂಲಕ ರೋಗಗಳಿಂದ ಅವರನ್ನು ಕಾಪಾಡಿ.
ಚಟುವಟಿಕೆ ಅಗತ್ಯ :
ಸದಾ ಚಟುವಟಿಕೆಯಿಂದ ಇರುವ ಮಕ್ಕಳು ದೇಹ ಕ್ಷಮತೆ ಉಳಿಸಿಕೊಳ್ಳುತ್ತಾರೆ. ಈ ಮೂಲಕ ಹಲವಾರು ರೋಗಗಳು ಅವರನ್ನು ಕಾಡುವುದು ತಪ್ಪುತ್ತದೆ. ನಿಯಮಿತ ವ್ಯಾಯಾಮದಿಂದ ದೇಹ ಫಿಟ್ ಆಗಿದ್ದರೆ ಫ್ಲೂ ಮತ್ತು ನೆಗಡಿಯನ್ನು ತಪ್ಪಿಸಿಕೊಳ್ಳಬಹುದು. ಹೀಗಾಗಿ ವ್ಯಾಯಾಮದ ಜೊತೆಗೆ ದೇಹಕ್ಕೆ ಲವಲವಿಕೆ ನೀಡುವ ಆಟೋಟಗಳಲ್ಲಿ ಭಾಗವಹಿಸುವಂತೆ ಮಾಡಿ.
ಸರಿಯಾದ ನಿದ್ರೆ :
ಮಕ್ಕಳು ಸರಿಯಾಗಿ ನಿದ್ರೆ ಮಾಡುತ್ತಿರುವುದನ್ನು ಖಾತರಿ ಮಾಡಿಕೊಳ್ಳಿ. ಬೇಗನೆ ಮಲಗಿ ಬೆಳಗ್ಗೆ ಬೇಗ ಏಳುವ ರೂಢಿ ಮಾಡಿಸಿ. ಸರಿಯಾಗಿ ನಿದ್ರೆ ಮಾಡುವುದರಿಂದ ಒತ್ತಡ, ಆಯಾಸ ನಿವಾರಣೆಯಾಗುತ್ತದೆ. ನಿದ್ರೆ ಸರಿಯಾಗಿ ಮಾಡದಿದ್ದರೆ ಫ್ಲೂ ಮತ್ತು ನೆಗಡಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಸಮತೋಲಿತ ಆಹಾರ :
ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಮಕ್ಕಳಿಗೆ ನೀಡಬೇಕು. ಅದರಲ್ಲೂ ಮುಖ್ಯವಾಗಿ ಹಣ್ಣು ಮತ್ತು ತರಕಾರಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇವುಗಳು ಅನಾರೋಗ್ಯವನ್ನು ಮಗುವಿನಿಂದ ದೂರ ಇಡುವುದಷ್ಟೇ ಅಲ್ಲ, ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ.
ಈ ಎಲ್ಲಾ ಸಲಹೆಗಳನ್ನು ಪಾಲಿಸುವ ಮೂಲಕ ನಿಮ್ಮ ಮುದ್ದು ಕಂದಮ್ಮ ಆರೋಗ್ಯಕರವಾಗಿ ಬೆಳೆಯುವಂತೆ ಮಾಡಿ.
Click here to Reply or Forward
|
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ