ಸೋಮವಾರ, ಸೆಪ್ಟೆಂಬರ್ 18, 2017

ಸಮುದ್ರಮಥನ

*ಸಮುದ್ರಮಥನ ---ಹಿಂದೂ* *ಪೌರಾಣಿಕ ಪ್ರಸಂಗ* 

*ಪೌರಾಣಿಕ ಕಥೆಯಂತೆ  ದೇವತೆಗಳಿಗೂ - ದಾನವರಿಗೂ ನಡೆಯುತ್ತಿದ್ದ ನಿರಂತರ ಸಂಘರ್ಷ ಒಂದು ಜನಪ್ರಿಯ ಸಂಗತಿ . ಹೀಗೊಮ್ಮೆ ಅಮೃತಕ್ಕಾಗಿ ದೇವತೆಗಳು - ದಾನವರು(ರಾಕ್ಷಸರು) ಕ್ಷೀರಸಾಗರವನ್ನು ಕಡೆದರು. ಈ ರೋಚಕ ಕಥೆಯೇ ಸಮುದ್ರಮಥನ*. 

*ಸಮುದ್ರಮಥನದ ಇತರ ಹೆಸರುಗಳು —* 

*✿ ಸಮುದ್ರಮಂಥನಂ — ಮಂಥನಂ ಎಂದರೆ ಸಂಸ್ಕೃತದಲ್ಲಿ ಮಥನ ಅಥವಾ 'ಕಡೆಯುವುದು' ಎಂದರ್ಥ.*
*✿ ಸಾಗರ ಮಂಥನ — ಸಾಗರ ಸಮುದ್ರಕ್ಕೆ ಇನ್ನೊಂದು ಹೆಸರು.*
*✿ ಕ್ಷೀರಸಾಗರ ಮಂಥನ — ಕ್ಷೀರಸಾಗರ ಎಂದರೆ ಹಾಲಿನ ಸಮುದ್ರವೆಂದು.* 
*✿ ಕ್ಷೀರಸಾಗರ —  ಕ್ಷೀರ (ಹಾಲು) + ಸಾಗರ (ಸಮುದ್ರ).*

*ಹೀಗೆ ಸಮುದ್ರಮಥನ ಮಾಡುವಾಗ ಐರಾವತ , ಕಲ್ಪವೃಕ್ಷ ,* *ಕಾಮಧೇನು(ಬೇಡಿದನ್ನು ಕೊಡುವ ಹಸು) ,* *ಉಚ್ಚೈಶ್ರವಸ್ಸು(ಕುದುರೆ) ,* *ಶ್ರೀಲಕ್ಷ್ಮಿ , ಪಾಂಚಜನ್ಯ(ಶಂಖ)* , *ಕೌಸ್ತುಭ(ಮಹಾವಿಷ್ಣುವಿನ ಆಭರಣ) , ಅಪ್ಸರೆಯರು  ಹೀಗೆ* *ಮುಂತಾದ ಉಚ್ಚವಸ್ತುಗಳು ಸಮುದ್ರದಿಂದ ಸೃಷ್ಟಿಯಾಯಿತು. ಹೀಗೆ ಸಮುದ್ರದಿಂದ ಸೃಷ್ಟಿಯಾದ ಅವರವರ* *ಯೋಗ್ಯಾನುಸಾರವಾಗಿ ವಿತರಿಸಿಕೊಂಡರು. ಈ ಮಥನದಲ್ಲಿ ವಿಷವೂ ಸೃಷ್ಟಿಯಾಯಿತು , ಯಾರಿಗೂ ಬೇಡವಾದ ಈ ವಿಷವನ್ನು ಶಿವನು ಕುಡಿದುದ್ದು , ವಿಷವೂ ಶಿವನ ದೇಹ ಸೇರದಂತೆ ಪಾರ್ವತೀಯು ಗಂಟಲನ್ನು ಬಿಗಿಯಾಗಿ ಹಿಡಿದುದ್ದುರ ಕಥೆಯೇ ಬೇರೆ*

*ಸಮುದ್ರಮಥನಕ್ಕೆ ಕಾರಣ :*

*ಈ ಸಮುದ್ರಮಥನವೇ ಒಂದು ರೋಚಕ ಕಥೆ.* 
*ದೇವತೆಗಳ ರಾಜ ಇಂದ್ರ, ತನ್ನ ಆನೆಯ ಮೇಲೆ ಸವಾರಿ ಮಾಡುವಾಗ , ದೂರ್ವಾಸ ಋಷಿ ಸಿಕ್ಕಿ ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು ಪ್ರಸಾದವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು. ನಂತರ ದೇವರುಗಳು ಅಸುರರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರರಾಜ ಬಲಿ ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು ವಿಷ್ಣುವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು ಅಮೃತಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ.*

*ಕ್ಕ್ಷೀರಸಾಗರದ ಮಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. ವಿಷ್ಣು ಒಂದು ಆಮೆಯಾಗಿ ತನ್ನ ಎರಡನೇ ಕೂರ್ಮಆವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು.*

*ಗಮನಿಸಿ, ಮಹಾಭಾರತದಲ್ಲಿನ ಕಥೆ* *ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ.*

*ಹಾಲಾಹಲ ('ಕಾಳಕೂಟ') ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , ಹಾಲಾಹಲ, ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. ವಿಷ್ಣುವಿನ ಸಲಹೆಮೇಲೆ, ದೇವತೆಗಳು ಶಿವನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,ನೀಲ = "ನೀಲಿ", ಕಂಠ = "ಗಂಟಲು") ಎನ್ನುತ್ತಾರೆ. (ಹಾಲಾಹಲ - ಶಿವನು ನುಂಗಿದ ವಿಷ)*

*ರತ್ನಗಳು*
*ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು* *ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತದೆ.*

*✿ ವರುನಿ ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ.*
*✿ ಉಚ್ಹೈಶ್ರವಸ್ಸು - ಅತಿಶ್ರೇಷ್ಠವಾದ  7-ತಲೆಯುಳ್ಳ ಕುದರೆ.*
*✿ ಕೌಸ್ತುಭ - ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ.*
*✿ ಕಾಮಧೇನು ಅಥವಾ ಸುರಭಿ - ಕೋರಿದುದನ್ನು ನೀಡುವ ಹಸು.*
*✿ ಪಾರಿಜಾತ - ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು ಕಲ್ಪವೃಕ್ಷದೊಂದಿಗೆ ಗುರುತಿಸಲಾಗುತ್ತದೆ.*
*✿ ಲಕ್ಷ್ಮಿ - ಭಾಗ್ಯ ಹಾಗೂ ಸಂಪತ್ತಿನ ದೇವತೆ - ವಿಷ್ಣುವಿನ ಪತ್ನಿ.*
*✿ ಐರಾವತ - ಇಂದ್ರನ ಆನೆ.*
*ಅಪ್ಸರೆಯರು,ರಂಭಾ, ಮೇನಕ, ಪುನ್ಜಿಕಸ್ಥಳ ಇತರರು ,*
*ಧನ್ವಂತರಿ - ದೇವತೆಗಳ ವೈದ್ಯ ಅಮೃತದೊಂದಿಗೆ. (ಕೆಲವೊಮ್ಮೆ, ಎರಡು ಬೇರೆ ಬೇರೆ ರತ್ನಗಳಾಗಿ ಪರಿಗಣಿಸಲಾಗುತ್ತವೆ.)*
*ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ, ಹಾಗೂ ರಾಮಾಯಣ ಮತ್ತು ಮಹಾಭಾರತಗಳಲ್ಲಿಯೂ ಭಿನ್ನವಾಗಿವೆ.*
*✿ ಶಾರಂಗ - ವಿಷ್ಣುವಿನ ಬಿಲ್ಲು.*
*✿ ಜ್ಯೆಸ್ಥ - ದೌರ್ಭಾಗ್ಯದ ದೇವತೆ.*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ