#ಸುಮ್ಮನೆ_ಬರಲಿಲ್ಲ_ಸ್ವಾತಂತ್ರ್ಯ -13
ಭಾರತ ಹೇಗಿತ್ತೇಂದರೆ ಅತ್ಯಂತ ಸಂಪದ್ಭರಿತ ಹಾಗೂ ಸಮೃದ್ಧ ನಾಡಾಗಿತ್ತು, ಯುರೋಪಿಯನ್ನರು ವ್ಯಾಪಾರಕ್ಕೆಂದು ಭಾರತಕ್ಕೆ ಬಂದರೆ ಗುಜರಾತಿನ ಒಬ್ಬ ಸಣ್ಣ ವ್ಯಾಪಾರಿ ಇದೇ ಹಡಗನ್ನೆ ಕೊಂಡುಕೊಂಡು ಅವರು ಕೇಳಿದಷ್ಟು ಹಣಕೊಟ್ಟು ಕಳುಹಿಸುತ್ತಿದ್ದರು.
ಇದನ್ನು ಕಂಡು ಪಾಶ್ಚಿಮಾತ್ಯರು ಭಾರತವನ್ನು ಅಧ್ಯಯನ ಮಾಡಲೆಂದು ಮೆಕಾಲೆಯನ್ನು ಭಾರತಕ್ಕೆ ಕಳುಹಿಸಿ ಕೊಡುತ್ತಾರೆ. ಆತ ಭಾರತದಾದ್ಯಂತ ಸಂಚರಿಸಿ ಒಂದು ವರದಿ ಸಲ್ಲಿಸುತ್ತಾನೆ. ಆ ವರದಿಯಲ್ಲಿ ಮೆಕಾಲೆ ಹೀಗೆ ದಾಖಲಿಸಿರುತ್ತಾನೆ. 'ಭಾರತೀಯರಿಗೆ ತಮ್ಮ ಪೂರ್ವಜರ ನೆನಪಿದೆ, ತಮ್ಮ ಪರಂಪರೆಯ ಇತಿಹಾಸವನ್ನು ಮರೆಸಿದರೆ ಭಾರತವನ್ನು ಆಳಬಹುದು ಎಂದು ವರದಿಯಲ್ಲಿ ದಾಖಲಿಸಿರುತ್ತಾನೆ. ಅದರಂತೆಯೇ ಆತನನ್ನು ಮತ್ತೆ ಭಾರತಕ್ಕೆ ಕಳುಹಿಸುತ್ತಾರೆ. ಮೆಕಾಲೆ, ತಮ್ಮ ಶಿಕ್ಷಣ ಪದ್ದತಿಯನ್ನು ಭಾರತದಲ್ಲಿ ತಳವುರಿಸುತ್ತಾನೆ. ಇದರಿಂದ ಭಾರತದಲ್ಲಿ ನಿಧಾನವಾಗಿ ಗುರುಕುಲ ಶಿಕ್ಷಣ ಪದ್ಧತಿ ನಶಿಸಲಾರಂಭಿಸಿ, ಇಂಗ್ಲಿಷ್ ಶಿಕ್ಷಣ ಪದ್ಧತಿ ಭಾರತದಲ್ಲಿ ತಳವುರುತ್ತದೆ. ಇದರಿಂದಾಗಬಹುದಾದ ಅನಾಹುತವನ್ನೆಲ್ಲಾ ಅರಿಯುತಿದ್ದ ಅಂದಿನ ಸಂನ್ಯಾಸಿ-ಸಾದುಗಳು ಭಾರತವನ್ನು ಮತ್ತೆ ಹಳೆಯ ವೈಭೋಗಕ್ಕೆ ಕೊಂಡೊಯ್ಯಲು ಸದಾ ಶ್ರಮಿಸುತ್ತಿದ್ದರು. ಅವರಲ್ಲಿ ಮುಖ್ಯವಾಗಿ,
ಸ್ಪೂರ್ತಿ ತುಂಬಿದ ಸಂನ್ಯಾಸಿಗಳು:
ಸ್ವಾಮಿ ವಿವೇಕಾನಂದರು:
ಹತ್ತೊಂಭತ್ತನೆಯ ಶತಮಾನದ ಅಂತ್ಯದ ವೇಳೆಗೆ ಭಾರತದಲ್ಲಿನ ಸ್ವಾತಂತ್ರ್ಯದ ಕಿಚ್ಚು ಕೂಡ ಹೇಳುವಂತಿರಲಿಲ್ಲ. ೧೮೫೭ರ ಸಂಗ್ರಾಮದ ನಂತರ ಭಾರತ ಸಂಪೂರ್ಣವಾಗಿ ಬ್ರಿಟಿಷ್ ರ ಗುಲಾಮರಾಗಿದ್ದರೆಂದರೆ ತಪ್ಪಾಗಲಾರದು.
ಈ ದುಷ್ಟ್ರಭಾವದಿಂದ ಅಮೇರಿಕ ಮತ್ತು ಯುರೋಪಿನ ಬುದ್ಧಿವಂತರನ್ನು ಹೊರಗೆಳೆಯುವ ಮೊದಲ ಯಶಸ್ವೀ ಸಾಹಸ ಮಾಡಿದ್ದು ಸ್ವಾಮಿ ವಿವೇಕಾನಂದರೇ.
ಸಿಡಿಲು ಬಡಿದಿದ್ದ ಭಾರತಕ್ಕೆ ಮತ್ತೆ ಸ್ವಾತಂತ್ರ್ಯ ಕಿಡಿ ಎಂಬ ಸ್ಪೂರ್ತಿಯ ಚೇತನ ತುಂಬಿದವರಲ್ಲಿ ಮೊದಲಿಗರು ಸ್ವಾಮಿ ವಿವೇಕಾನಂದರು. ಸ್ವಾಮಿಜಿಯವರ ಮನೋಗತಿ ಸಂಸ್ಥೆಯನ್ನು ಕಟ್ಟಿ ಸುಮ್ಮನಿರುವುದಾಗಿರಲಿಲ್ಲ. ಅವರ ಇಚ್ಛೆ ಶತ್ರುವಿನ ನಾಡಿನಲ್ಲಿ ಭವಿಷ್ಯದ ಹೊರಾಟಕ್ಕೆ ಪೀಠಿಕೆ ಬರೆಯ ಹೊರಟಿದ್ದರು. ಸ್ವಾಮೀಜಿ ಯಾವ ಯೂರೋಪು ನಮ್ಮನ್ನು ಗುಲಾಮರನ್ನಾಗಿಸಿತ್ತೋ, ಅದೇ ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಕ್ತಿ ತುಂಬಬಲ್ಲವರನ್ನು ಅರಸುತ್ತಿತ್ತು ಸ್ವಾಮೀಜಿಯವರ ಹೃದಯ. ಮೊದಲು ಸ್ವಾಮೀಜಿಯವರು ಮಾನಸಿಕವಾಗಿ ಜನರನ್ನು ಕ್ರಾಂತಿಗೆ ಸಜ್ಜುಗೊಳಿಸುತ್ತಿದ್ದರು.
ಸ್ವಾಮಿ ರಾಮ ತೀರ್ಥರು:
ಸ್ವಾಮಿಜಿಯವರ ಸಾಲಲ್ಲೇ ಬರುವ ಮತ್ತೊರ್ವ ಕ್ರಾಂತಿ ತುಂಬಿದ ಸ್ಪೂರ್ತಿದಾಯಿತ್ವದ ವ್ಯಕ್ತಿತ್ವ ಹೊಂದಿದ್ದವರಾಗಿದ್ದ ಸಂತ ರಾಮತೀರ್ಥರು "ಭಾರತ ಎಂದರೆ ನಾನೇ,ನಾನೇ ಭಾರತ,ನನ್ನ ದೇಹವೇ ಈ ನೆಲ, ನನ್ನ ಕುತ್ತಿಗೆಯೇ ದಕ್ಷಿಣದ ಮಲಬಾರ್ ಚೋಳ ಮಂಡಲಗಳು. ಪಾದಗಳು ಕನ್ಯಾಕುಮಾರಿ. ನನ್ನ ಶಿರಸ್ಸೆ ಹಿಮಾಲಯ, ನನ್ನ ಕೂದಲುಗಳಲ್ಲಿ ಪ್ರತ್ಯಕ್ಷ ಗಂಗೆ ಬ್ರಹ್ಮಪುತ್ರೆಯರು ಹರಿಯುತ್ತಾರೆ. ನನ್ನ ವಕ್ಷಸ್ಥಳವೇ 'ವೀರ ನಾಡು ರಜಪೂತನ ಗುಜರಾತ, ನನ್ನ ಬಾಹುಗಳೇ ಪೂರ್ವ ಪಶ್ಚಿಮ ಭಾರತ' ಹೀಗೆ ಭಾರತದೊಂದಿಗೆ ತಮ್ಮನ್ನು ತಾವು ಒಂದುಗೂಡಿಸಿಕೊಂಡು ಘೋಷಿಸಿದವರು ಸ್ವಾಮಿ ರಾಮತೀರ್ಥರು. ಈ ಹೋಲಿಕೆಯನ್ನು ಪ್ರತಿಯೊಬ್ಬ ಭಾರತೀಯನು ತನ್ನಲ್ಲಿ ತಾನು ಎಂದುಕೊಂಡರೆ ಭಾರತ ಎಷ್ಟು ಭವ್ಯವಾದೀತು? ಊಹಿಸಿಕೊಳ್ಳಿ.
ಭಾರತೀಯರೆ... ಏಳಿ,ಎದ್ದೇಳಿ ಎಂದು ಎಚ್ಚರಿಸಿದ ವಿವೇಕಾನಂದರಂತೆಯೇ ಸ್ವಾಮಿ ರಾಮತೀರ್ಥರ ವಾಣಿಯೂ ಮೊಳಗಿತು. ಅದೇ ರೀತಿಯ ಚೈತನ್ಯ ಸ್ಪೂರ್ತಿಗಳ ಆಹ್ವಾನ, ಕಥೆಗಳ ನಿರೂಪಣೆ ತದನುರೂಪ ಸಂನ್ಯಸ್ತ ಜೀವನ ರಾಮತೀರ್ಥರದು.
ಸ್ವಾಮಿ ಶ್ರದ್ದಾನಂದರು:
ಶ್ರದ್ದಾನಂದರಿಗೆ ಭಾರತವನ್ನು ಸ್ವಾತಂತ್ರ್ಯಗೊಳಿಸಬೇಕೆಂಬ ಕನಸು ಅದೇಷ್ಟಿತ್ತೆಂದರೆ ತಮ್ಮ ಪೂರ್ವಾಶ್ರಮದಲ್ಲಿ ಮುನ್ ಶೀ ರಾಮನಾಗಿದ್ದ ಶ್ರದ್ದಾನಂದರು ಬರೇಲಿಯ ನಾಯಬ್ ತಹಸೀಲ್ದಾರನೇನೊ ಆದರು. ಆದರೆ ಸ್ವಾತಂತ್ರ್ಯದ ಪ್ರವೃತ್ತಿಯವರಿಗೆ ಬ್ರಿಟಿಷ್ ರ ಸರ್ಕಾರಿ ನೌಕರಿ ಇಷ್ಟವಾಗಿರಲಿಲ್ಲ. ಒಮ್ಮೆಯಂತು ಸೈನಿಕ ಅಧಿಕಾರಿಯ ವಿರುದ್ಧವೇ ಸಿಡಿದು ನಿಂತು ಕೆಲಸಕ್ಕೆ ರಾಜಿನಾಮೆ ನೀಡಿದರು. ತದ ನಂತರ ಸಂನ್ಯಾಸತ್ವ ಸ್ವೀಕಾರ ಮಾಡಿ ನಶಿಸಿಹೋಗುತ್ತಿದ್ದ ಗುರುಕುಲವನ್ನು ಪ್ರಾರಂಭಿಸಲು ಸಿದ್ದರಾದರು.೧೫ ವರ್ಷಗಳ ಕಾಲ ಗುರುಕುಲವನ್ನು ನಡೆಸಿ, ಅಲ್ಲಿಗೆ ಕಲಿಯಲು ಬರುವ ಶಿಷ್ಯರಿಗೆ ಕುದುರೆ ಸವಾರಿ,ಕತ್ತಿವರಸೆಗಳನ್ನು ಕಲಿಸಿದರು. ಭಾರತೀಯ ಅಧ್ಯಾತ್ಮವನ್ನು ಭಾರತೀಯರಿಗೆ ತುಂಬಿದರು. ಮತಾಂತರದ ವಿರುದ್ಧ ಸಿಡಿದು ನಿಂತರು. ಹೀಗೆ ತಮ್ಮ ಕಾಲಮಾನದಲ್ಲಿ ಸ್ವಾಮಿ ಶ್ರದ್ಧಾನಂದರು ಬಗೆಬಗೆಯಾಗಿ ಭಾರತೀಯರನ್ನು ಬಡಿದೆಬ್ಬಿಸಿದರು.
ಹಾಗೆ ನೋಡುತ್ತಾ ಹೋದರೆ ಮಲಗಿದ್ದ ಭಾರತವನ್ನು ಬಡಿದೆಬ್ಬಿಸಿದವರೆಲ್ಲಾ ಭಾರತೀಯ ಸಂನ್ಯಾಸಿ ವೃಂದವೇ. ಭಾರತೀಯರಲ್ಲಿ ಮಲಗಿದ್ದ ಕ್ಷಾತ್ರತೇಜವನ್ನು ಬಡಿದೆಬ್ಬಿಸಿ ಮತ್ತೆ ಕ್ರಾಂತಿಯ ಕಿಡಿಯನ್ನು ಹಚ್ಚಿಸಿದವರು. ಇವರುಗಳ ಸ್ಪೂರ್ತಿ ಇಲ್ಲದಿದ್ದಿದ್ದರೆ ಭಾರತ ಮತ್ತೆ ಗುಲಾಮಗಿರಿಯಲ್ಲಿಯೇ ಉಳಿದು ಬಿಡುತ್ತಿತ್ತು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ