ಸೋಮವಾರ, ಸೆಪ್ಟೆಂಬರ್ 18, 2017

ವಂದೇ ಮಾತರಂ

ವಂದೇ ಮಾತರಂ ದಿನಾಚರಣೆ

ಸೆಪ್ಟೆಂಬರ್ 7 ಭಾರತ ಮಾತೆಯ ಮಹಾನ್ ಪುತ್ರರಾದ ಬಂಕಿಮ ಚಂದ್ರರು 'ವಂದೇ ಮಾತರಂ' ಗೀತೆಯನ್ನು ಸೃಜಿಸಿದ ದಿನ.

ಬಂಕಿಮ ಚಂದ್ರ ಚಟರ್ಜಿಯವರು ಒಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ತಾಯಿ ಭಾರತಿಯೊಡಲಿನ ನಿಸರ್ಗ ಸೌಂದರ್ಯಕ್ಕೆ ಮಾರುಹೋದರು. ಜೊತೆಜೊತೆಗೆ ಆಕೆಗೊದಗಿದ ದುರ್ಗತಿಯನ್ನೂ, ಅದಕ್ಕೆ ಪ್ರತಿಯಾಗಿ ಧೀರಭಾರತೀಯರ ಹೋರಾಟವನ್ನೂನೆನೆಯುತ್ತ ಸಾಗಿದರು. ಅದರ ಪರಿಣಾಮ, ರಾತ್ರಿಯ ನಿದ್ರೆಯಲ್ಲೂ ಅವೆ ಅವೇ ಚಿತ್ರಣಗಳು. ಕನವರಿಕೆಯಲ್ಲಿ ಮೂಡಿಬಂದಿದ್ದು ‘ವಂದೇ ಮಾತರಂ’ ದಿವ್ಯಗೀತೆ!

ಬಂಕಿಮ ಚಂದ್ರರ ಸಂಬಂಧಿ ತರುಣನೊಬ್ಬ ಅವರು ಕನವರಿಸಿದ ಸಾಲುಗಳನ್ನು ಬರೆದುಕೊಂಡ. ಬಂಕಿಮ ಚಂದ್ರರು ಎಚ್ಚರವಾದ ಬಳಿಕ ಅವರಿಗೆ ಅವನ್ನು ತೋರಿಸಿದ. ಸಂಭ್ರಾಂತರಾದ ಬಂಕಿಮಚಂದ್ರರು ಅದಕ್ಕೆ ಅಂತಿಮ ಸ್ಪರ್ಷ ನೀಡಿದರು. ಮುಂದೆ ಅವರ ಜನಪ್ರಿಯ ಕೃತಿ ‘ಆನಂದಮಠ’ದಲ್ಲಿ ಈ ಗೀತೆ ರಣಮಂತ್ರವಾಗಿ ಹರಿಯಿತು.

ವ೦ದೇಮಾತರ೦ 
ಸುಜಲಾ೦ ಸುಫಲಾ೦ ಮಲಯಜ ಶೀತಲಾ೦ 
ಸಸ್ಯ ಶಾಮಲಾ೦ ಮಾತರಂ
ವ೦ದೇಮಾತರ೦ 

ಶುಭ್ರಜ್ಯೋತ್ಸ್ನಾ ಪುಲಕಿತ ಯಾಮೀನೀ೦ 
ಪುಲ್ಲಕುಸುಮಿತ ದ್ರುಮದಲ ಶೋಭಿನೀ೦
ಸುಹಾಸಿನೀ೦ ಸುಮಧುರ ಭಾಷಿಣೀ೦
ಸುಖದಾ೦ ವರದಾ೦ ಮಾತರ೦

ಕೋಟಿ ಕೋಟಿ ಕ೦ಠ ಕಲಕಲನಿನಾದ ಕರಾಲೇ
ಕೋಟಿ ಕೋಟಿ ಭಜೈಧರ್ತಖರ ಕರವಾಲೇ
ಅಬಲಾ ಕೆನೊ ಮಾ ಎತೊ ಬಲೇ ಬಹುಬಲಧಾರೀಣಿ೦
ನಮಾಮಿ ತಾರಿಣೀ೦ ಮಾತರ೦

ತುಮಿ ವಿದ್ಯ ತುಮಿ ಧರ್ಮ
ತುಮಿ ಹ್ರದಿ ತುಮಿ ಮರ್ಮ ತ್ವ೦ ಹಿ ಪ್ರಾಣಾ: 
ಶರೀರೇ, ಬಾಹುತೇ ತುಮಿ ಮಾ ಭಕ್ತಿ
ತೋಮಾರ ಇ ಪ್ರತಿಮಾ ಗಡಿ ಮ೦ದಿರೇ ಮ೦ದಿರೇ

ತ್ವ೦ ಹಿ ದುರ್ಗಾ ದಶಪ್ರಹರಣ ಧಾರೀಣೀ೦
ಕಮಲಾ ಕಮಮಲದಲ ವಿಹಾರಿಣೀ ವಾಣೀವಿದ್ಯಾಯಿನಿ
ನಮಾಮಿ ತ್ಯಾ೦ ನಮಾಮಿ ಕಮಲಾ೦ ಅಮಲಾ೦
ಆತುಲಾ೦ ಸುಜಲಾ೦ ಸುಫಲಾ೦ ಮಾತರ೦

ಶ್ಯಾಮಲಾ೦ ಸರಲಾ೦ ಸುಸ್ಮಿತಾ೦ ಭೂಷಿತಾ೦ ಧರಣೀ೦ ಮಾತರ೦

ವ೦ದೇಮಾತರ೦ ಸುಜಲಾ೦ ಸುಫಲಾ೦ ಮಲಯಜ ಶೀತಲಾ೦ ಸಸ್ಯ ಶಾಮಲಾ೦ ಮಾತರಾ೦

ಈ ಮಹಾನ್ ಭಾರತ ಪುತ್ರ ಬಂಕಿಮ ಚಂದ್ರರಿಗೆ ನಮನ.  ಆ ಮಾತೃ ಭಕ್ತಿ ದೇಶ ಭಕ್ತಿಗಳಿಗೆ ನಮನ.  ಅಂತಹ ಭಕ್ತಿ ನಮ್ಮಲ್ಲೂ ಸ್ಪುರಿಸುವ ಹಾಗೆ ಮಾಡು ತಾಯಿ ಎಂಬ ಪ್ರಾರ್ಥನೆಯೊಂದಿಗೆ ತಾಯಿ ಭಾರತಿದೇವಿಯ ಪಾದಕ್ಕೆ ನಮ್ಮ ಸಾಷ್ಟಾಂಗ ನಮನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ