ಒಡೆದ ತುಟಿ:*
ಕೆಲವರಿಗೆ ತುಟಿ ತುಂಬಾ ಒಡೆಯುತ್ತದೆ, ತುಂಬಾ ಡ್ರೈ ಆಗಿರುತ್ತದೆ. ಎ.ಸಿ ರೂಮಿನಲ್ಲಿ ಕೆಲಸ ಮಾಡುವವರಿಗೆ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಅಂತಹವರು ಬಾದಾಮಿ ಎಣ್ಣೆ ಉಪಯೋಗಿಸಿದರೆ ತುಂಬಾ ಒಳ್ಳೆಯ ಪ್ರಯೋಜನ ಪಡೆಯಬಹುದು. ಬಾದಾಮಿ ಎಣ್ಣೆಯನ್ನು ಪ್ರತಿದಿನ ಹಚ್ಚುತ್ತಾ ಬಂದರೆ ಮೃದುವಾದ ತುಟಿ ನಿಮ್ಮದಾಗುವುದು
*2. ನೆರಿಗೆ:*
ಆದಷ್ಟು ವಿಟಮಿನ್ ಎ ಮತ್ತು ಬಿ ಇರುವ ಆಹಾರಗಳು ತ್ವಚೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಬಾದಾಮಿ ಎಣ್ಣೆಯಲ್ಲಿ ಈ ಎರಡು ಅಂಶಗಳು ಇರುವುದರಿಂದ ಇದನ್ನು ಮುಖಕ್ಕೆ ಹಚ್ಚಿದರೆ ಮುಖದಲ್ಲಿ ಅಕಾಲಿಕ ನೆರಿಗೆ ಉಂಟಾಗುವ ಸಮಸ್ಯೆಯನ್ನು ತಪ್ಪಿಸಬಹುದಾಗಿದೆ.
*3. ಕಣ್ಣಿನ ಸುತ್ತ ಕಪ್ಪು ಕಲೆ:*
ಇದು ಹೆಚ್ಚಿನವರಿಗೆ ಕಂಡುಬರುವ ಸಮಸ್ಯೆಯಾಗಿದೆ. ಈ ಸಮಸ್ಯೆ ಇರುವವರು ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ಕಣ್ಣಿನ ಸುತ್ತ ಹಚ್ಚಿ ಮಲಗಿ. ಈ ರೀತಿ ಮಾಡುತ್ತಾ ಬಂದರೆ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ಮಾಯವಾಗುವುದು.
*4. ಸ್ಕ್ರಬ್:*
ನಿರ್ಜೀವ ತ್ವಚೆಯನ್ನು ಹೋಗಲಾಡಿಸಲು ಇದರಿಂದ ಕೂಡ ಸ್ಕ್ರಬ್ ಮಾಬಹುದು. ಒಂದು ಚಮಚ ಬಾದಾಮಿ ಎಣ್ಣೆಗೆ ಒಂದು ಚಮಚ ಸಕ್ಕರೆ ಹಾಕಿ ಅದರಿಂದ ಮುಖವನ್ನು ಸ್ಕ್ರಬ್ ಮಾಡಿದರೆ ನಿರ್ಜೀವ ತ್ವಚೆ ಹೋಗಿ ಮುಖದ ಕಾಂತಿ ಹೆಚ್ಚುವುದು.
*5. ಮಾಯಿಶ್ಚರೈಸರ್:*
Lದೇಹಕ್ಕೆ ಮಾಯಿಶ್ಚರೈಸ್ ಮಾಡುತ್ತಿದ್ದರೆ ಮಾತ್ರ ತ್ವಚೆ ಆಕರ್ಷಕವಾಗಿ ಕಾಣಲು ಸಾಧ್ಯ. ಈ ರೀತಿ ಮಾಯಿಶ್ಚರೈಸರ್ ಮಾಡಲು ಬಾದಾಮಿ ಎಣ್ಣೆಯನ್ನು ಬಳಸಬಹುದು.
*6. ಕೂದಲು:*
ಕೂದಲಿನ ಆರೈಕೆಗೆ ಕೂಡ ಬಾದಾಮಿ ಎಣ್ಣೆ ತುಂಬಾ ಪರಿಣಾಮಕಾರಿಯಾಗಿದೆ. ಇದರಿಂದ ಕೂದಲಿಗೆ ಮಸಾಜ್ ಮಾಡಿದರೆ ಕೂದಲಿನ ಆರೋಗ್ಯ ಹೆಚ್ಚುವುದು
[25/09 7:41 PM] +91 94498 28225: ಔಷಧೀಯ ಗುಣ ಹೇರಳವಾಗಿರುವ ಇದರ ತೊಗಟೆ, ಹೂ ಮತ್ತು ಬೇರುಗಳನ್ನು ಮುಖ್ಯವಾಗಿ ಆಯುರ್ವೇದದಲ್ಲಿ ಮದ್ದಿನ ತಯಾರಿಕೆಗೆ ಬಳಸುತ್ತಾರೆ.
ಕೆಲವು ಮನೆಮದ್ದುಗಳು :
- ಇದರ ಬೇರಿನ ರಸ ಹಿಂಡಿ ಎಣ್ಣೆಯೊಂದಿಗೆ ಕುದಿಸಿ ನೋವು ನಿವಾರಕವಾಗಿ ಸುಟ್ಟಗಾಯಗಳಿಗೆ ಲೇಪಿಸುತ್ತಾರೆ.
- ಕಾಂಡದ ತೊಗಟೆ ಹಾವು ಕಚ್ಚಿದವರ ಪ್ರತಿವಿಷಮದ್ದಿನ ತಯಾರಿಕೆಯಲ್ಲಿ ಬಳಸಲ್ಪಡುವ ಪ್ರಮುಖ ವಸ್ತುವಂತೆ.
- ಕಾಂಡದ ರಸ ಹಾಗೂ ಎಲೆ ರಸಗಳು ಅಸ್ತಮಾ, ಮೂತ್ರಕಲ್ಲು, ವಾಯುಪ್ರಕೋಪ, ಕುಷ್ಠ ಹಾಗೂ ರಕ್ತಸಂಬಂಧೀ ಕಾಯಿಲೆಗಳ ಶಮನೌಷಧ ತಯಾರಿಕೆಯಲ್ಲಿ -ಬಳಸಲ್ಪಡುತ್ತದೆ.
- ಬೇರಿನಿಂದ ತಯಾರಾದ ಔಷಧಿಗಳು ವಿವಿಧ ಚರ್ಮರೋಗಗಳಿಗೆ ರಾಮಬಾಣವಾಗಿವೆ.
- ಮುಳ್ಳು ಕುರುಮ ಜನಾಂಗೀಯರು ಬೆಳೆದ ಹಸುರೆಲೆಗಳನ್ನು ಅರೆದು ಗಂಟಲ ಸಂಬಂಧೀ ರೋಗಗಳಿಗೆ ಕೊರಳಿಡಿ ಲೇಪ ಹಚ್ಚುತ್ತಾರೆ
- ತೊಗಟೆ ಕಷಾಯವನ್ನು ಮೂತ್ರ ಸಂಬಂಧೀ ಕಾಯಿಲೆಗಳಿಗೆ ಬಳಸುತ್ತಾರಂತೆ.
- ತೊಗಟೆಯು ಕಾನ್ಸರ್ ಕಾಯಿಲೆಯ ನಾಟಿ ಔಷಧಿ ತಯಾರಿಯಲ್ಲಿ ಬಳಸಲ್ಪಡುತ್ತದೆಯ೦ತೆ.
- ಮಲೇಶಿಯಾ ಹಾಗೂ ಇಂಡೋನೇಶಿಯಾಗಳಲ್ಲಿ ಈ ಸಸ್ಯ ಸಾಮಾನ್ಯ ಶೀತ ಹಾಗೂ ಕೆಮ್ಮು ನಿವಾರಣೆಗಳ ಸಿದ್ಧೌಷಧಿಯ ತಯಾರಿಕೆಯಲ್ಲೇ ಬಳಸಲ್ಪಡುವುದಂತೆ.
ಫಿಲಾಂಥsಸ್ ಎಂಬ್ಲಿಕಾ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ನೆಲ್ಲಿ ಯುಫೋರ್ಬಿಯೇಸೀ ಕುಟುಂಬ ವರ್ಗಕ್ಕೆ ಸೇರಿದೆ. ಸಂಸ್ಕೃತದಲ್ಲಿ ಇದನ್ನು ಆಮ್ಲುಕಿ ಅಥವಾ ಧಾತ್ರಿ ಎನ್ನುವರು. ಹಣ್ಣುಗಳು ಅತಿಹೆಚ್ಚು ವಿಟಮಿನ್ ಸಿ ಅಂಶ ಹೊಂದಿದ್ದು, ಯಕೃತ್ತಿಗೆ ಶಕ್ತಿ ಕೊಡುವ ಟಾನಿಕ್ನಂತೆ ಕೆಲಸ ಮಾಡುತ್ತದೆ. ಹಣ್ಣಿನಲ್ಲಿರುವ ಫಿಲೆಂಬ್ಲಿನ್ ಎಂಬ ರಾಸಾಯನಿಕ ಅಂಶವು ಕೇಂದ್ರೀಯ ನರಮಂಡಲಕ್ಕೆ ಶಕ್ತಿ ಕೊಡುವುದಲ್ಲದೇ ಮನಸ್ಸಿನ ಉದ್ವಿಗ್ನತೆ ಶಾಂತಗೊಳಿಸುತ್ತದೆ. ನೆಲ್ಲಿಕಾಯಿಯನ್ನು ಹಲವಾರು ಆಯುರ್ವೇದಿಕ್ ಔಷಧಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಇದನ್ನು ರಕ್ತಹೀನತೆ ಮತ್ತು ರಕ್ತಸ್ರಾವ ತಡೆಗಟ್ಟಲು, ಮಲಬದ್ಧತೆ ನಿವಾರಿಸಲು, ಹಲ್ಲು ನೋವು, ಆಮಶಂಕೆ ತಡೆಗಟ್ಟಲು ಹಾಗೂ ಚರ್ಮದ ಕಾಂತಿವರ್ಧನೆಗಾಗಿ ಪರಿಣಾಮಕಾರಿಯಾಗಿ ಉಪಯೋಗಿಸಲಾಗುತ್ತದೆ.
ಮಾರುಕಟ್ಟೆಯಲ್ಲಿ ದೊರೆಯುವ ನೆಲ್ಲಿಕಾಯಿಯ ಉತ್ಪನ್ನಗಳೆಂದರೆ
ತ್ರಿಫಲಾ ಚೂರ್ಣ (ನೆಲ್ಲಿ, ಅಣಲೆ ಹಾಗೂ ತಾರೆಕಾಯಿ ಪುಡಿ ಮಿಶ್ರಣ): ಮಲಬದ್ಧತೆ ನಿವಾರಣೆಗೆ
ಆಮ್ಲಾರಿಷ್ಟ, ಬ್ರಹ್ಮರಸಾಯನ ಹಾಗೂ ಚ್ಯವನಪ್ರಾಶ: ರಕ್ತ ಹೀನತೆ ನಿವಾರಣೆಗೆ ಹಾಗೂ ಮಾನಸಿಕ ವಿಕಾಸಕ್ಕಾಗಿ
ಮಧುಮೇಹ ಚೂರ್ಣ: ಡಯಾಬಿಟಿಸ್ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.
*ದಿನನಿತ್ಯ ಲಿಂಬೆ ಚಹಾ ಕುಡಿದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ*
ಚಹಾ ಕುಡಿಯುವ ಅಭ್ಯಾಸವು ಪ್ರತಿಯೊಬ್ಬರಿಗೂ ಇರುತ್ತದೆ. ಒಬ್ಬೊಬ್ಬರು ಒಂದೊಂದು ಬಗೆಯ ಚಹಾ ಸೇವನೆ ಮಾಡುವರು. ಇಂದಿನ ದಿನಗಳಲ್ಲಿ ಚಹಾದ ಬಗ್ಗೆ ತಾತ್ಸಾರ ಭಾವನೆ ಬಂದಿರುವ ಕಾರಣದಿಂದಾಗಿ ವಿವಿಧ ರೀತಿಯ ವಿಶೇಷ ಚಹಾಗಳು ಮಾರುಕಟ್ಟೆಗೆ ಬರುತ್ತಾ ಇದೆ. ಗ್ರೀನ್ ಟೀ ಇಂದು ಹೆಚ್ಚು ಜನಪ್ರಿಯವಾಗಿದೆ. ಆದರೆ ನಿಯಮಿತವಾಗಿ ಲಿಂಬೆ ಚಹಾ ಕುಡಿಯುವವರು ಹಲವಾರು ರೀತಿಯ ಆರೋಗ್ಯ ಲಾಭ ಪಡೆದುಕೊಳ್ಳುವರು.
ಲಿಂಬೆ ಚಹಾವು ದೇಹವನ್ನು ಒಳಗಿಂದಲೇ ಶುದ್ಧೀಕರಿಸಿ ದೇಹಕ್ಕೆ ಶಕ್ತಿ ಒದಗಿಸುವುದು.
ಲಿಂಬೆ ಚಹಾವು ಬ್ಲ್ಯಾಕ್ ಟೀಯಂತೆ ಸರಳವಾಗಿರುವುದು. ಆದರೆ ಇದಕ್ಕೆ ಲಿಂಬೆ ಸೇರಿಸಲಾಗುವುದು. ಇದರಿಂದ ಹೊಸ ಸ್ವಾದ ಸಿಗುವುದು. ಲಿಂಬೆ ಚಹಾವೆಂದರೆ ಸಾಮಾನ್ಯ ಚಹಾಗೆ ಲಿಂಬೆರಸ ಹಾಗೂ ಸಕ್ಕರೆ ಹಾಕುವುದು. ಹಾಲು ಹಾಕುವುದಿಲ್ಲ. ಇದಕ್ಕೆ ಹೆಚ್ಚು ಸ್ವಾದ ಬರಲು ಸರಿಯಾದ ಪ್ರಮಾಣದಲ್ಲಿ ಲಿಂಬೆ ಸೇರಿಸಿಕೊಳ್ಳಬೇಕು. ಇದು ತುಂಬಾ ಆರೋಗ್ಯಕಾರಿ ಮತ್ತು ಮಾರುಕಟ್ಟೆಯಲ್ಲಿರುವ ತಂಪು ಪಾನೀಯಕ್ಕಿಂತ ಇದು ತುಂಬಾ ಒಳ್ಳೆಯದು. ಲಿಂಬೆ ಚಹಾದಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಇದರಿಂದ ಆಗುವ ಕೆಲವೊಂದು ಲಾಭಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ಇದನ್ನು ಓದಿದ ಬಳಿಕ ನೀವು ಸಾಮಾನ್ಯ ಚಹಾ ಬಿಟ್ಟು ಲಿಂಬೆ ಚಹಾ ಕುಡಿಯುವುದು ಗ್ಯಾರಂಟಿ..
*ದೇಹದ ವಿಷಕಾರಿಯನ್ನು ಹೊರಹಾಕುತ್ತದೆ.*
ವಿಷವನ್ನು ಹೊರಹಾಕುವ ಲಿಂಬೆಯು ದೇಹವನ್ನು ಶುದ್ಧೀಕರಿಸುವುದು. ವಿಷದಿಂದಾಗಿ ವಿವಿಧ ರೀತಿಯ ಕಾಯಿಲೆಗಳು ಹಾಗೂ ಸೋಂಕು ಬರಬಹುದು. ಲಿಂಬೆಯು ಅದ್ಭುತವಾಗಿ ಶುದ್ಧೀಕರಿಸಿ ಕಾಯಿಲೆ ಹಾಗೂ ಸೋಂಕನ್ನು ತಡೆಗಟ್ಟುವುದು.
*ಶೀತ ಹಾಗೂ ಜ್ವರಕ್ಕೆ ಚಿಕಿತ್ಸೆ*
ಲೆಮನ್ ಟೀಯಿಂದ ಶೀತ ಹಾಗೂ ಜ್ವರದ ಲಕ್ಷಣಗಳು ದೂರವಾಗುವುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಚಳಿಗಾಲದಲ್ಲಿ ದೇಹವು ಬಿಸಿಯಾಗಿರುವಂತೆ ಮಾಡುವುದು.
*ಮಾನಸಿಕ ಪ್ರಯೋಜನಗಳು*
ಲಿಂಬೆ ಚಹಾವು ದೇಹದಲ್ಲಿರುವ ವಿಷ ತೆಗೆದುಹಾಕುವ ಕಾರಣದಿಂದ ದೇಹಕ್ಕೆ ಶಕ್ತಿ ಬರುವುದು, ಮನಸ್ಸು ಪ್ರಫುಲ್ಲಿತವಾಗುವುದು ಮತ್ತು ಮಾನಸಿಕ ಸ್ಪಷ್ಟತೆಯು ಸುಧಾರಣೆಯಾಗುವುದು. ಇದು ಲಿಂಬೆ ಚಹಾ ಕುಡಿಯುವ ಅದ್ಭುತ ಲಾಭಗಳು
*ಹೃದಯಕ್ಕೆ ಬಹಳ ಒಳ್ಳೆಯದು.*
ಲಿಂಬೆ ಚಹಾದಲ್ಲಿ ಫ್ಲಾವನಾಯ್ಡ್ ಗಳು ಸಮೃದ್ಧವಾಗಿದೆ. ಇದು ಉರಿಯುತ ಕಡಿಮೆ ಮಾಡಿ ಅಪಧಮನಿಗಳಲ್ಲಿ ರಕ್ತವು ಹೆಪ್ಪುಗಟ್ಟದಂತೆ ತಡೆಯುವುದು. ಹೃದಯಾಘಾತ ತಡೆಯಲು ಲಿಂಬೆ ಚಹಾವು ಅತ್ಯುತ್ತಮ ವಿಧಾನವಾಗಿದೆ.
*ನೈಸರ್ಗಿಕ ನಂಜುನಿರೋಧಕ*
ಲಿಂಬೆಯನ್ನು ನೈಸರ್ಗಿಕ ನಂಜುನಿರೋಧಕವೆಂದು ಕರೆಯಲಾಗುವುದುಉ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳು ಇವೆ. ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಸೋಂಕು ಮತ್ತು ಕಾಯಿಲೆ ಕಡಿಮೆಯಾಗುವುದು. ಲಿಂಬೆ ಚಹಾ ಕುಡಿಯುವುದರ ಮತ್ತೊಂದು ಅತ್ಯುತ್ತಮ ಲಾಭ ಇದಾಗಿದೆ.
*ಜೀರ್ಣಕ್ರಿಯೆ ಆರೋಗ್ಯಕ್ಕೆ*
ಲಿಂಬೆ ಚಹಾವು ಜೀರ್ಣಕ್ರಿಯೆ ವ್ಯವಸ್ಥೆಯು ಸರಿಯಾಗಿರುವಂತೆ ನೋಡಿಕೊಳ್ಳುವುದು. ಇದರಲ್ಲಿ ಶಮನಕಾರಿ ಗುಣಗಳು ಇವೆ. ದೇಹದಲ್ಲಿರುವ ವಿಷ ಹಾಗೂ ಕಲ್ಮಶವನ್ನು ಇದು ಹೊರಹಾಕುವುದು. ಇದರಲ್ಲಿ ಇರುವಂತಹ ಸಿಟ್ರಿಕ್ ಆಮ್ಲವು ಜೀರ್ಣಕ್ರಿಯೆಗೆ ನೆರವಾಗಿ ಕಿಡ್ನಿ ಕಲ್ಲು ತೆಗೆದುಹಾಕುವುದು.
*ಇನ್ಸುಲಿನ್ ಚಟುವಟಿಕೆ ಸುಧಾರಣೆ*
ಗ್ಲೂಕೋಸ್ನ್ನು ಸಕ್ಕರೆಯಾಗಿಸಿ ಬಳಿಕ ಶಕ್ತಿಯನ್ನಾಗಿ ಮಾಡಲು ದೇಹದಲ್ಲಿ ಇನ್ಸುಲಿನ್ ಅಗತ್ಯವಿದೆ. ಲಿಂಬೆ ಚಹಾವು ದೇಹದಲ್ಲಿನ ಇನ್ಸುಲಿನ್ ಚಟುವಟಿಕೆ ಹೆಚ್ಚು ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಯನಗಳು ಹೇಳಿವೆ.
*ಕ್ಯಾನ್ಸರ್ ವಿರೋಧಿ ಗುಣಗಳು*
ಲಿಂಬೆ ಚಹಾದಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳು ಸಮೃದ್ಧವಾಗಿದೆ. ಈ ಚಹಾದಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಫಾಲಿಫಿನಾಲ್ ಗಳು ಮತ್ತು ವಿಟಮಿನ್ ಸಿ ಲಭ್ಯವಿದೆ. ಇದು ಆರೋಗ್ಯಕಾರಿ ಕೋಶಗಳು ಹಾನಿಗೊಳಗಾಗುವುದನ್ನು ತಡೆದು ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗದಂತೆ ತಡೆಯುವುದು
*ಮನೆಯಲ್ಲಿಯೇ ತಯಾರಿಸಬಹುದಾದ ಕೆಮ್ಮಿನ ಸಿರಪ್:*
ಅಗತ್ಯವಿರುವ ಸಾಮಾಗ್ರಿಗಳು:
*4 ದೊಡ್ಡಚಮಚ ಜೇನು
*6 ಲವಂಗ
*1 ಇಂಚಿನಷ್ಟು ಚೆಕ್ಕೆ, ಚಿಕ್ಕದಾಗಿ ತುಂಡರಿಸಿದ್ದು.
* ಮೊದಲು ಬಾಣಲೆಯೊಂದರಲ್ಲಿ ಚಿಕ್ಕ ಉರಿಯಲ್ಲಿ ಲವಂಗ ಮತ್ತು ಚೆಕ್ಕೆಗಳನ್ನು ಸುಮಾರು ಎರಡರಿಂದ ಮೂರು ನಿಮಿಷ ಹುರಿಯಿರಿ. ಅಂದರೆ ಇದರಿಂದ ಕೊಂಚ ವಾಸನೆ ಸೂಸಲು ಪ್ರಾರಂಭವಾಗುವಷ್ಟು ಮಾತ್ರ. ಬಳಿಕ ತಕ್ಷಣವೇ ಗ್ರೈಂಡರಿನ ಚಿಕ್ಕ ಜಾರ್ನಲ್ಲಿ ಒಣದಾಗಿಯೇ ನುಣ್ಣನೆಯ ಪುಡಿಮಾಡಿ.
* ಈ ಪುಡಿಯನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಜೇನಿನೊಂದಿಗೆ ಬೆರೆಸಿ ಚಿಕ್ಕ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ.
* ಒಣ ಕೆಮ್ಮಿದ್ದಾಗ ರಾತ್ರಿ ಮಲಗುವ ಮುನ್ನ ಮೂರು ಚಿಕ್ಕ ಚಮಚದಷ್ಟು ಸೇವಿಸಿ ಮಲಗಿ. ಕೆಮ್ಮು ಹೆಚ್ಚಿದ್ದರೆ ಬೆಳಗ್ಗಿನ ಉಪಾಹಾರದ ಬಳಿಕವೂ ಇಷ್ಟೇ ಪ್ರಮಾಣದಲ್ಲಿ ಸೇವಿಸಿ.
*ಕೆಮ್ಮು ಗುಣವಾಗಲು ಸುಮಾರು ಎರಡರಿಂದ ಮೂರು ದಿನ ಬೇಕಾಗಬಹುದು. ಆದರೂ ಇದರ ಬಳಿಕವೂ ಒಂದೆರಡು ದಿನ ಸೇವಿಸಿ.
* ಈ ಸಿರಪ್ ಒಣಕೆಮ್ಮಿಗೆ ಮಾತ್ರವಲ್ಲ, ಕಫದ ಕೆಮ್ಮಿಗೂ ಸೂಕ್ತವಾಗಿದೆ.
* ಸಾಧ್ಯವಾದರೆ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ ಬಾಟಲಿಯಲ್ಲಿ ಸಂಗ್ರಹಿಸಿ ಕೆಮ್ಮು ಆಗುವ ಅನುಮಾನ ಬಂದ ತಕ್ಷಣ ಕೊಂಚ ಸೇವಿಸಿದರೆ ಇದು ಉಲ್ಬಣಿಸುವುದರಿಂದ ತಡೆಗಟ್ಟಬಹುದು.
೪ ಚಮಚ ಜೀರಿಗೆ, ತಲಾ ೧ ಚಮಚ ಕಾಳುಮೆಣಸು,ಹಿಪ್ಪಲಿ ಲವಂಗ ಜೇಷ್ಠ ಮಧು,ಎಲ್ಲವನ್ನು ಸ್ವಲ್ಪ ಬೆಚ್ಚಗಾಗುವಷ್ಟು ಹುರಿದು ಪುಡಿಮಾಡಿಕೊಳ್ಳಿ.ಇದಕ್ಕೆ ಪುಡಿಯಷ್ಟು ಬೆಲ್ಲದ ಪುಡಿ,೪ ಚಮಚ ದೇಶೀ ಹಸುವಿನ ತುಪ್ಪ ಹಾಕಿ ಕಲಸಿ ಕಡಲೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ.ಆಗಾಗ ೧ ಉಂಡೆಯನ್ನು ಬಾಯಿಗೆ ಹಾಕಿ ಚಾಕೊಲೇಟ್ ನಂತೆ ಚೀಪಿ ನುಂಗಬೇಕು,ಆಗಾಗ ಬಿಸಿ ನೀರು ಕುಡಿಯಬೇಕು
ತಲೆ ನೋವಿಗೆ ಲವಂಗ ಅಥವಾ ಉಣಶುಂಠಿಯನ್ನು ತೇಯ್ದು ಹಣೆಗೆ ಹಚ್ಚಿ ಕಣ್ಣು ಮುಚ್ಚಿ ಮಲಗಿ
ಔಷಧೀಯ ಗುಣಗಳು ಸಂಪಾದಿಸಿ
ಜ್ವರ:ಮಲೇರಿಯಾ,ಟೈಫಾಯ್ಡ್ ಮತ್ತು ಯವುದೇ ದೀರ್ಘಕಾಲೀನ ಜ್ವರದಲ್ಲಿಯೂ ನೆಲಬೇವು ತುಂಬಾ ಉಪಯುಕ್ತವಾದುದು.
ಕಾಲರಾ: ನೆಲಬೇವಿನ ಎಲೆಗಳರಸದೊಂದಿಗೆ ಬೇವು ಮತ್ತು ಅಮೃತಬಳ್ಳಿ ಎಲೆಗಳ ರಸವನ್ನು ಸಮಭಾಗ ತೆಗೆದುಕೊಂಡು ಅದಕ್ಕೆ ಜೇನು ಬೆರಸಿ ಕುಡಿಯುವುದರಿಂದ ಕಾಲರಾ ನಿಯಂತ್ರಣಕ್ಕೆ ಬರುತ್ತದೆ.
ಜಂತುಹುಳುವಿನ ತೊಂದರೆಯಿದ್ದಲ್ಲಿ ಪ್ರತಿದಿನ ರಾತ್ರಿಮಲಗುವ ಮುಂಚೆ ಏಳುದಿನಗಳ ಕಾಲ ನೆಲಬೇವಿನ ಕಷಾಯ ಕುಡಿಯಬೇಕು.
ಬಾಣಂತಿಯರಲ್ಲಿ ಎದೆಹಾಲಿನ ಉತ್ಪತ್ತಿ ಹೆಚ್ಚಿಸಲು ನೆಲಬೇವಿನ ಕಷಾಯ ಕುಡಿಸಬೇಕು. ನೆಲಬೇವಿನ ಕಷಾಯಕ್ಕೆ ಜೇನು ಬೆರೆಸಿ ಕುಡಿಸಬಹುದು.[೪]
ಬಾಯಿಹುಣ್ಣಿನ ತೊಂದರೆಯಿಂದ ಬಳಲುವವರು ನೆಲಬೇವಿನ ಕಾಂಡವನ್ನು ಒಂದು ರಾತ್ರಿ ಮಜ್ಜಿಗೆಯಲ್ಲಿ ನೆನೆಯಿಟ್ಟು ನಂತರ ಒಣಗಿಸಿ ಪುಡಿಮಾಡಿಟ್ಟುಕೊಳ್ಳಬೇಕು. ಈ ಪುಡಿಯನ್ನು ಒಂದು ಚಮಚೆಯಷ್ಟುತೆಗೆದುಕೊಂಡು ತುಪ್ಪದಲ್ಲಿ ಹುರಿದು ಊಟ ಮಾಡುವಾಗ ಅನ್ನದೊಂದಿಗೆ ಬೆರೆಸಿ ತಿನ್ನಬೇಕು.
ಕಾಮಾಲೆ ಮತ್ತು ಇತರ ಯಕೃತ್ತಿನತೊಂದರೆಗಳಿಂದ ಬಳಲುವವರಿಗೆ ನೆಲಬೇವಿನ ಇಡೀ ಗಿಡದ ಕಷಾಯ ತುಂಬ ಉಪಯುಕ್ತ.
ಹಾವುಕಡಿತದಲ್ಲಿಯೂನೆಲಬೇವಿನ ಕಷಾಯ ತುಂಬ ಉಪಯುಕ್ತ.ಇದು ವಿಷಹರವಾಗಿ ಕೆಲಸ ಮಾಡುತ್ತದೆ.
ಅತಿರಕ್ತಸ್ರಾವ: ಸ್ತ್ರೀಯರಲ್ಲಿ ಮಾಸಿಕ ಸ್ರಾವವು ಅಧಿಕವಾಗುತ್ತಿದ್ದಲ್ಲಿ ನೆಲಬೇವಿನ ಕಷಾಯ ಮತ್ತು ಶ್ರೀಗಂಧದ ಕಷಾಯವನ್ನು ದಿನಕ್ಕೆ ೩ಬಾರಿ ಕುಡಿಯಬೇಕು.
ಸಕ್ಕರೆ ಕಾಯಿಲೆಂದ ಬಳಲುವವರು:ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ನೆಲಬೇವಿನ ಎಲೆಗಳನ್ನು ಹಾಗೆಯೇ ತಿನ್ನಬಹುದು ಇಲ್ಲವೇ ನೆಲಬೇವಿನ ರಸ ಅಥವಾ ಕಷಾಯ ಸೇವನೆ ಮಾಡಿದಲ್ಲಿ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ.
ಅರ್ಧ ತಲೆನೋವು:ನೆಲಬೇವು,ಅಮೃತಬಳ್ಳಿ,ಬೇವಿ ನ ತೊಗಟೆ,ಅರಶಿನ ಸಮವಾಗಿ ಬೆರಸಿ ಕುಟ್ಟಿಪುಡಿ ಮಾಡಿ ನೀರಿನಲ್ಲಿ ಹಾಕಿ ಕುದಿಸಿ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಕುಡಿಯಬೇಕು.
ಎದೆಯುರಿ,ತಲೆಸುತ್ತುಇದ್ದಲ್ಲಿ ಕಾಲು ಚಮಚೆ ಒಣಗಿದ ನೆಲಬೇವಿನ ನಯವಾದ ಪುಡಿಗೆ ಸಕ್ಕರೆ ಇಲ್ಲವೇ ಜೇನುತುಪ್ಪ ಬೆರೆಸಿ ಸೇವಿಸಬೇಕು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ