ಭಾದ್ರಪದ ಶುದ್ಧ ಚತುರ್ದಶಿ ಮಂಗಳವಾರದಂದು" ಶ್ರೀ ಅನಂತಪದ್ಮನಾಭ ವ್ರತ " :-- ಈ ವ್ರತದ ಅಧಿದೇವತೆ ಶ್ರೀ ಮಹಾವಿಷ್ಣು , ಇಂದು ಮಹಾವಿಷ್ಣುವು ತನ್ನ ಸಕಲ ಪರಿವಾರದೊಡನೆ ಈದಿನ ಪೂಜಿಸಲ್ಪಡಿತ್ತಾನೆ , ಅನಂತನೆಂಬ ದೇವನು ಈದಿನ ಭಕ್ಯಿಯಿಂದ ಪೂಜಿಸುವವರಿಗೆ ಅನಂತ ಕೀರ್ತಿ ಸಂಪತ್ತು ಸುಖ ಶಾಂತಿ ಸೌಭಾಗ್ಯವನ್ನು ಅನಂತಕಾಲದವರೆಗೂ ಕೊಡುತ್ತಾನೆಂದೇ ಪ್ರತೀತಿ ಇದೆ !!!!! ಈ ಪೂಜೆಗೆ ಎಲ್ಲವೂ ಹದಿನಾಲ್ಕರ ಸಂಖ್ಯೆಯಲ್ಲಿರಬೇಕು ! ವ್ರತವನ್ನು ಹದಿ ನಾಲ್ಕು ವರ್ಷಗಳಕಾಲ ಮಾಡಿ ಉದ್ಯಾಪನೆ ಮಾಡಬೇಕು , ವ್ರತದ ದಾರವೂ ಹದಿನಾಲ್ಕು ಗಂಟಿನಿಂದ ಕಟ್ಟಿರುತ್ತಾರೆ ಮತ್ತು ಕೆಂಪುಬಣ್ಣವೂ ವಿಶೇಷವೇ !! ಅನಂತನ ದಾರವೆಂದೇ ಮಾರ್ಕೆಟ್ ನಲ್ಲಿ ಸಿಗುತ್ತದೆ , ಹೋದ ವರ್ಷದ ದಾರವನ್ನು ಮೊದಲು ಕಟ್ಟಿಕೊಂಡು ಪೂಜೆ ಆರಂಭ ಮಾಡಿ , ನಂತರ ಹೊಸದಾರ ಕಟ್ಟಿ ಕೊಳ್ಳಬೇಕು , ಇದು ತುಂಬಾ ಮಡಿಯಿಂದ ಶುದ್ಧ ವಾಗಿ ,ಭಕ್ತಿಯಿಂದ ಮಾಡುವುದಾಗಿದೆ , ಮತ್ತು ದಂಪತಿಗಳಿಬ್ಬರೂ ಕೂತು ಒಟ್ಟಿಗೇ ಮಾಡುವ ವ್ರತವಿದು , ಈ ವ್ರತದ ಆಚರಣೆ ಎಲ್ಲರ ಮನೆಯಲ್ಲಿ ಇರುವುದು ತುಂಬಾ ಕಡಿಮೆ ಸಂಖ್ಯೆಗೆ ಕಾರಣ ಆಚರಣೆಯಲ್ಲಿರುವ ಪದ್ಧತಿಯೂ ಆಗಿದೆ , ಮನೆಯಲ್ಲಿ ಹಿರಿಯರಿರುವವರು ಈವ್ರತವನ್ನು ಬಹಳ ಮಡಿಯಿಂದ ಶ್ರದ್ಧಾಭಕ್ತರಾಗಿ ಆಚರಿಸುಯವರು.ಪದ್ಧತಿ ಇಲ್ಲದವರು ಅನಂತನ ದರ್ಶನವನ್ನಾದರೂ ಮಾಡಿದರೆ ಅನಂತಫಲ ಸಿಗುವುದಂತೆ !!!
ಈವ್ರತದಲ್ಲಿ ಎರಡು ಕಲಶಗಳಿರುತ್ತದೆ , ಯಮುನಾದೇವಿಗಾಗಿ ಒಂದು ಕಲಶ ಮತ್ತು ಅನಂತ ದೇವರಿಗಾಗೊಂದು ಕಲಶ , ಅನಂತದೇವರ ಕಲಶದ ಮೇಲೆ ದರ್ಬೆಯಿಂದ ಏಳುಹೆಡೆಸರ್ಪಾಕಾರ ಮಾಡಿ ಇಟ್ಟು ಅದರಮೇಲೆ ತೆಂಗಿನಕಾಯಿ ಇಡುತ್ತಾರೆ , ಮೊದಲು ಯಮುನಾ ದೇವಿಯ ಕಲಶಕ್ಕೆ ಪೂಜೆಯನ್ನು ಗಂಗೆಯನ್ನು ತಂದು ಕಲಶಕ್ಕೆ ಹಾಕಿ ಯಮುನಾದೇವಿಯನ್ನು ಆಹ್ವಾನಿಸಿ ಪೂಜಿಸುತ್ತಾರೆ , ಯಮುನಾದೇವಿಗೆ ಪೂಜೆ ಅಲಂಕಾರ ಅರ್ಚನೆ ಮಾಡಿ ನಂತರ ಅನಂತದೇವರ ಪೂಜೆ ಮಾಡಿಸುತ್ತಾರೆ , ಕಲಶ ಸ್ಥಾಪನೆ ,ಅಭಿಷೇಕ , ಗಂಧ ,ಅರಿಶಿನಕುಂಕುಮ ಅನೇಕ ಬಗೆಬಗೆಯ ಮುಖ್ಯವಾಗಿ ಕಮಲಪುಷ್ಪ ದಿಂದ ಅಲಂಕರಿಸಿ ಪೂಜಿಸಿ ಅರ್ಚಿಸಬೇಕು --- ಅನಂತದಾರವನ್ನೂ ತಟ್ಟೆಯಲ್ಲಿ ಕಲಕಶದ ಪಕ್ಕದಲ್ಲಿ ಟ್ಟು ಪೂಜಿಸಬೇಕು .
ಇಲ್ಲಿ ಅನಂತದೇವರ ಅರ್ಚನೆಯ ವಿಶೇಷ ತೆಯನ್ನು ತಿಳಿಯಲೇ ಬೇಕು -- " ಅಷ್ಟೋತ್ತರದ ಪ್ರತಿಯೊಂದು ಪದವೂ" ಅ "ಎಂಬ ಅಕ್ಷರದಿಂದಲೇ ಆರಂಭ ವಾಗುತ್ತದೆ !!! ಈ ನೂರಾ ಎಂಟು ಅನಂತನ ಹೆಸರುಗಳನ್ನು ಉಚ್ಛರಿಸುವುದೇ ತುಂಬಾ ಚೆಂದ !!!
ಅನಂತ ದೇವರು ವ್ರತ ಕತೆಯಲ್ಲಿ -- ವೃದ್ಧ ಬ್ರಾಹ್ಮಣ ರೂಪದಲ್ಲಿ ದರ್ಶನ ನೀಡಿದ್ದರಿಂದ -- ಇಂದು ಎಲ್ಲಾ ಅಡಿಗೆಯನ್ನೂ ಮುಖ್ಯವಾಗಿ ನೈವೇದ್ಯ ಮಾಡುವ ಭಕ್ಷವನ್ನು ಮೆತ್ತಗೆ ಮೃದುವಾಗಿರುವುದನ್ನೇ ಮಾಡಬೇಕೆಂಬ ನಿಯಮವಿದೆ ,ಅದಕ್ಕೇ ಸಿಹಿದೋಸೆ , ಮೆತ್ತನೇ ಹಾಲುಬಾಯಿ , ಹಿಟ್ಟಿನಕಡುಬು ,ಖಾರದ ಕಡುಬು , ತಟ್ಟೆಇಡ್ಲಿ ಚಟ್ನಿ , ಮುಖ್ಯವಾಗಿ ಗೋಧಿ ಪಾಯಸ ಮಾಡುತ್ತಾರೆ .
(ಕಲಶಗಳನ್ನೂ ತಟ್ಟೆಯಲ್ಲಿ ಹರಡಿದ ಗೋದಿಯಮೇಲೆ ಇಡಬೇಕು ಮತ್ತು ಉಪಾಯನ ದಾನಕ್ಕೂ ಗೋದಿಯನ್ನೇ ಕೊಡಬೇಕು .)
ಮಹಾ ಮಂಗಳಾರತಿ ಮಾಡಿ ,ಭಕ್ತಿಯಿಂದ ಹದಿನಾಲ್ಕು ಪ್ರದಕ್ಷಿಣೆ ನಮಸ್ಕಾರ ಮಾಡಿ ಅನಂತ ಅಪರಾಧಗಳನ್ನು ಕ್ಷಮಿಸಿ ಅನಂತವಾದ ಸುಖ ಶಾಂತಿ ನೆಮ್ಮದಿಯನ್ನು ಇಷ್ಟಾರ್ಥ ಗಳನ್ನು ಬೇಡಿಕೊಂಡು ಹಳೆ ದಾರ ತೆಗೆದು ಪೂಜಿಸಿದ ಹೊಸದಾರವನ್ನು ಹಿರಿಯರಿಂದ ಪಡೆದು ಧರಿಸಬೇಕು . ಬ್ರಾಹ್ಮಣ ಸುವಾಸಿನಿಯರನ್ನು ಪೂಜಿಸಿ ಮರದ ಬಾಗಿನ ಮಂಗಲದ್ರವ್ಯ ,ಉಪಾಯ ದಾನ ಕೊಟ್ಟು , ಅನಂತದಾರವನ್ನೂ ಕೊಟ್ಟು ನಮಸ್ಕರಿಸಿ ಆಶೀರ್ವಾದ ಪಡೆಯಬೇಕು , ಬ್ರಾಹ್ಮಣ ಸುವಾಸಿಯರಿಗೆ ನೆಂಟರಿಷ್ಟರಿಗೆ ಭೋಜನ ಮಾಡಿಸಿ ನಂತರ ಭೋಜನ ಮಾಡಬೇಕು .
ಈ ವ್ರತವನ್ನು ನಮ್ಮ ಅತ್ತೆಮಾವ ನಾವು ಮೂರುಮಕ್ಕಳು ಸೊಸೆಯರಿಗೆ ಹಿಡಿಸಿದ್ದರು , ಅಂದಿನಿಂದ ಇದರ ಪದ್ಧತಿ ಬಂದಿದೆ , ಇತ್ತೀಚೆಗೆ ಮನೆಯಲ್ಲಿ ಮಾಡಲು ಅನುಕೂಲ ವಿಲ್ಲದಿದ್ದರೆ ಮಠಗಳಲ್ಲಿ ದಂಪತಿಗಳು ಹೋಗಿ ಪೂಜೆ ಮಾಡಿಕೊಂಡು ಪ್ರಸಾದ ಪಡೆದು ಬರಬಹುದಾಗಿದೆ , ಸ್ನೇಹಿತರೇ ಅನಂತದೇವರು ಎಲ್ಲರಿಗೂ ಅನಂತ ಸೌಭಾಗ್ಯಗಳನ್ನು ಕೊಡಲಿ ಎಂದು ಹಾರೈಸುತ್ತೇನೆ --ಈವ್ರತವನ್ನು ಈಗ ಮಾಡುವಲ್ಲಿ ಅನಾನುಕೂಲವಾದಲ್ಲಿ ನವರಾತ್ರಿಯಲ್ಲೂ ಮಾಡುವ ಪದ್ಧತಿ ರೂಢಿಯಲ್ಲಿದೆ .
ಈವ್ರತದಲ್ಲಿ ಎರಡು ಕಲಶಗಳಿರುತ್ತದೆ , ಯಮುನಾದೇವಿಗಾಗಿ ಒಂದು ಕಲಶ ಮತ್ತು ಅನಂತ ದೇವರಿಗಾಗೊಂದು ಕಲಶ , ಅನಂತದೇವರ ಕಲಶದ ಮೇಲೆ ದರ್ಬೆಯಿಂದ ಏಳುಹೆಡೆಸರ್ಪಾಕಾರ ಮಾಡಿ ಇಟ್ಟು ಅದರಮೇಲೆ ತೆಂಗಿನಕಾಯಿ ಇಡುತ್ತಾರೆ , ಮೊದಲು ಯಮುನಾ ದೇವಿಯ ಕಲಶಕ್ಕೆ ಪೂಜೆಯನ್ನು ಗಂಗೆಯನ್ನು ತಂದು ಕಲಶಕ್ಕೆ ಹಾಕಿ ಯಮುನಾದೇವಿಯನ್ನು ಆಹ್ವಾನಿಸಿ ಪೂಜಿಸುತ್ತಾರೆ , ಯಮುನಾದೇವಿಗೆ ಪೂಜೆ ಅಲಂಕಾರ ಅರ್ಚನೆ ಮಾಡಿ ನಂತರ ಅನಂತದೇವರ ಪೂಜೆ ಮಾಡಿಸುತ್ತಾರೆ , ಕಲಶ ಸ್ಥಾಪನೆ ,ಅಭಿಷೇಕ , ಗಂಧ ,ಅರಿಶಿನಕುಂಕುಮ ಅನೇಕ ಬಗೆಬಗೆಯ ಮುಖ್ಯವಾಗಿ ಕಮಲಪುಷ್ಪ ದಿಂದ ಅಲಂಕರಿಸಿ ಪೂಜಿಸಿ ಅರ್ಚಿಸಬೇಕು --- ಅನಂತದಾರವನ್ನೂ ತಟ್ಟೆಯಲ್ಲಿ ಕಲಕಶದ ಪಕ್ಕದಲ್ಲಿ ಟ್ಟು ಪೂಜಿಸಬೇಕು .
ಇಲ್ಲಿ ಅನಂತದೇವರ ಅರ್ಚನೆಯ ವಿಶೇಷ ತೆಯನ್ನು ತಿಳಿಯಲೇ ಬೇಕು -- " ಅಷ್ಟೋತ್ತರದ ಪ್ರತಿಯೊಂದು ಪದವೂ" ಅ "ಎಂಬ ಅಕ್ಷರದಿಂದಲೇ ಆರಂಭ ವಾಗುತ್ತದೆ !!! ಈ ನೂರಾ ಎಂಟು ಅನಂತನ ಹೆಸರುಗಳನ್ನು ಉಚ್ಛರಿಸುವುದೇ ತುಂಬಾ ಚೆಂದ !!!
ಅನಂತ ದೇವರು ವ್ರತ ಕತೆಯಲ್ಲಿ -- ವೃದ್ಧ ಬ್ರಾಹ್ಮಣ ರೂಪದಲ್ಲಿ ದರ್ಶನ ನೀಡಿದ್ದರಿಂದ -- ಇಂದು ಎಲ್ಲಾ ಅಡಿಗೆಯನ್ನೂ ಮುಖ್ಯವಾಗಿ ನೈವೇದ್ಯ ಮಾಡುವ ಭಕ್ಷವನ್ನು ಮೆತ್ತಗೆ ಮೃದುವಾಗಿರುವುದನ್ನೇ ಮಾಡಬೇಕೆಂಬ ನಿಯಮವಿದೆ ,ಅದಕ್ಕೇ ಸಿಹಿದೋಸೆ , ಮೆತ್ತನೇ ಹಾಲುಬಾಯಿ , ಹಿಟ್ಟಿನಕಡುಬು ,ಖಾರದ ಕಡುಬು , ತಟ್ಟೆಇಡ್ಲಿ ಚಟ್ನಿ , ಮುಖ್ಯವಾಗಿ ಗೋಧಿ ಪಾಯಸ ಮಾಡುತ್ತಾರೆ .
(ಕಲಶಗಳನ್ನೂ ತಟ್ಟೆಯಲ್ಲಿ ಹರಡಿದ ಗೋದಿಯಮೇಲೆ ಇಡಬೇಕು ಮತ್ತು ಉಪಾಯನ ದಾನಕ್ಕೂ ಗೋದಿಯನ್ನೇ ಕೊಡಬೇಕು .)
ಮಹಾ ಮಂಗಳಾರತಿ ಮಾಡಿ ,ಭಕ್ತಿಯಿಂದ ಹದಿನಾಲ್ಕು ಪ್ರದಕ್ಷಿಣೆ ನಮಸ್ಕಾರ ಮಾಡಿ ಅನಂತ ಅಪರಾಧಗಳನ್ನು ಕ್ಷಮಿಸಿ ಅನಂತವಾದ ಸುಖ ಶಾಂತಿ ನೆಮ್ಮದಿಯನ್ನು ಇಷ್ಟಾರ್ಥ ಗಳನ್ನು ಬೇಡಿಕೊಂಡು ಹಳೆ ದಾರ ತೆಗೆದು ಪೂಜಿಸಿದ ಹೊಸದಾರವನ್ನು ಹಿರಿಯರಿಂದ ಪಡೆದು ಧರಿಸಬೇಕು . ಬ್ರಾಹ್ಮಣ ಸುವಾಸಿನಿಯರನ್ನು ಪೂಜಿಸಿ ಮರದ ಬಾಗಿನ ಮಂಗಲದ್ರವ್ಯ ,ಉಪಾಯ ದಾನ ಕೊಟ್ಟು , ಅನಂತದಾರವನ್ನೂ ಕೊಟ್ಟು ನಮಸ್ಕರಿಸಿ ಆಶೀರ್ವಾದ ಪಡೆಯಬೇಕು , ಬ್ರಾಹ್ಮಣ ಸುವಾಸಿಯರಿಗೆ ನೆಂಟರಿಷ್ಟರಿಗೆ ಭೋಜನ ಮಾಡಿಸಿ ನಂತರ ಭೋಜನ ಮಾಡಬೇಕು .
ಈ ವ್ರತವನ್ನು ನಮ್ಮ ಅತ್ತೆಮಾವ ನಾವು ಮೂರುಮಕ್ಕಳು ಸೊಸೆಯರಿಗೆ ಹಿಡಿಸಿದ್ದರು , ಅಂದಿನಿಂದ ಇದರ ಪದ್ಧತಿ ಬಂದಿದೆ , ಇತ್ತೀಚೆಗೆ ಮನೆಯಲ್ಲಿ ಮಾಡಲು ಅನುಕೂಲ ವಿಲ್ಲದಿದ್ದರೆ ಮಠಗಳಲ್ಲಿ ದಂಪತಿಗಳು ಹೋಗಿ ಪೂಜೆ ಮಾಡಿಕೊಂಡು ಪ್ರಸಾದ ಪಡೆದು ಬರಬಹುದಾಗಿದೆ , ಸ್ನೇಹಿತರೇ ಅನಂತದೇವರು ಎಲ್ಲರಿಗೂ ಅನಂತ ಸೌಭಾಗ್ಯಗಳನ್ನು ಕೊಡಲಿ ಎಂದು ಹಾರೈಸುತ್ತೇನೆ --ಈವ್ರತವನ್ನು ಈಗ ಮಾಡುವಲ್ಲಿ ಅನಾನುಕೂಲವಾದಲ್ಲಿ ನವರಾತ್ರಿಯಲ್ಲೂ ಮಾಡುವ ಪದ್ಧತಿ ರೂಢಿಯಲ್ಲಿದೆ .
ಯಮುನೆ ಕಲಷಕ್ಕೆ ಉಪಯೋಗಿಸುವ ತೆಂಗಿನ ಕಾಯಿಗೆ ಯಾವ ರೀತಿ ಅರಿಷಿಣ/ಕುಂಕುಮ ಹಾಗು ಅನಂತಪದ್ಮನಾಭಸ್ವಾಮೀ ಕಲಷದ ತೆಂಗಿನಕಾಯಿಗೆ ಯಾವ ರೀತಿ ಅರಿಷಿಣ ಕುಂಕುಮ ಅಲಂಕಾರ ಮಾಡುತ್ತಾರೆ
ಪ್ರತ್ಯುತ್ತರಅಳಿಸಿ